Tag: Sarfaraz Ahmed

  • ಅವಮಾನ ಸಹಿಸಿಕೊಂಡು ಪಾಕ್‌ನ ಮಾನ ಉಳಿಸಿದ ಸರ್ಫರಾಜ್‌

    ಅವಮಾನ ಸಹಿಸಿಕೊಂಡು ಪಾಕ್‌ನ ಮಾನ ಉಳಿಸಿದ ಸರ್ಫರಾಜ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧೋನಿ ನಿವೃತ್ತಿಯಾಗಿದ್ದಾರಾ? ಪತಿಯನ್ನು ಟೀಕಿಸಿದವರಿಗೆ ಸರ್ಫರಾಜ್ ಅಹ್ಮದ್ ಪತ್ನಿ ತಿರುಗೇಟು

    ಧೋನಿ ನಿವೃತ್ತಿಯಾಗಿದ್ದಾರಾ? ಪತಿಯನ್ನು ಟೀಕಿಸಿದವರಿಗೆ ಸರ್ಫರಾಜ್ ಅಹ್ಮದ್ ಪತ್ನಿ ತಿರುಗೇಟು

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್‍ರನ್ನು ಕೆಳಗಿಳಿಸಿದ ಬಳಿಕ ಸರ್ಫರಾಜ್ ಪತ್ನಿ ಖುಷ್ ಬಹ್ತ್ ಪತಿ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಆದರೆ ಖುಷ್ ಬಹ್ತ್ ಪತಿಯ ಬೆಂಬಲಕ್ಕೆ ನಿಲ್ಲಲು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಉದಾಹರಣೆಯಾಗಿ ನೀಡಿ ಪತಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ಟೀ ಇಂಡಿಯಾ ಆಟಗಾರ 38 ವರ್ಷದ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ತನ್ನ ಪತಿ ಏಕೆ ಕ್ರಿಕೆಟ್ ಆಡಬಾರದು ಎಂಬುವುದು ಖುಷ್ ಬಹ್ತ್ ಅವರ ವಾದವಾಗಿದೆ. ಅಲ್ಲದೇ ತಮ್ಮ ಪತಿ ಮತ್ತಷ್ಟು ಸಮರ್ಥರಾಗಿ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎಂದು ಖುಷ್ ಬಹ್ತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಖುಷ್ ಬಹ್ತ್, ನನ್ನ ಪತಿ ಏಕೆ ನಿವೃತ್ತಿಯಾಗಬೇಕು? ಅವರಿಗೆ ಇನ್ನು 32 ವರ್ಷವಷ್ಟೇ. ಧೋನಿ ಅವರ ವಯಸ್ಸೆಷ್ಟು? ಅವರು ಈ ವಯಸ್ಸಿಗೆ ನಿವೃತ್ತಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.

    2019ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಹೊರಬಿದ್ದ ಬಳಿಕ ತಂಡದ ನಾಯಕತ್ವ ಕುರಿತು ಭಾರೀ ಟೀಕೆ ವ್ಯಕ್ತವಾಗಿತ್ತು. ಅಲ್ಲದೇ ಆ ಬಳಿಕ ನಡೆದ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಟೂರ್ನಿಯಲ್ಲೂ ಪಾಕ್ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಪಾಕ್ ಕ್ರಿಕೆಟ್ ಬೋರ್ಡ್, ಸರ್ಫರಾಜ್ ಅಹ್ಮದ್‍ರನ್ನು ಟೆಸ್ಟ್, ಟಿ20 ತಂಡದ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ರನ್ನು ಕೆಳಗಿಳಿಸಿ ಅಝರ್ ಅಲಿರನ್ನು ನಾಯಕರನ್ನಾಗಿ ಮಾಡಿತ್ತು. ನಾಯಕತ್ವದಿಂದ ಕೆಳಗಿಳಿಸಿದ್ದು ಮಾತ್ರವಲ್ಲದೇ ಟೆಸ್ಟ್ ಹಾಗೂ ಟಿ20 ತಂಡದಿಂದಲೂ ಸರ್ಫರಾಜ್‍ರನ್ನು ಕೈ ಬಿಟ್ಟಿತ್ತು.

  • ಪಾಕ್ ಕ್ಯಾಪ್ಟನ್‍ಗೆ ‘ಹಂದಿ’ ಎಂದ ಅಭಿಮಾನಿ – ವಿಡಿಯೋ ವೈರಲ್

    ಪಾಕ್ ಕ್ಯಾಪ್ಟನ್‍ಗೆ ‘ಹಂದಿ’ ಎಂದ ಅಭಿಮಾನಿ – ವಿಡಿಯೋ ವೈರಲ್

    ಲಂಡನ್: ವಿಶ್ವಕಪ್ ಟೂರ್ನಿಯ ಆರಂಭದಿಂದಲೂ ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಸಾಬೀತಾಗುತಿದ್ದು, ಭಾರತ ವಿರುದ್ಧದ ಸೋಲುಂಡ ಬಳಿಕ ಪಾಕ್ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿತ್ತು. ಸದ್ಯ ಅಭಿಮಾನಿಗಳ ಆಕ್ರೋಶದ ಬಿಸಿ ನೇರ ತಂಡದ ನಾಯಕ ಸರ್ಫರಾಜ್ ಅಹಮದ್‍ಗೆ ತಟ್ಟಿದೆ.

    ಪಂದ್ಯ ನಡೆದ ದಿನದಿಂದಲೂ ಪಾಕ್ ತಂಡದ ವಿರುದ್ಧ ಅಭಿಮಾನಿಗಳು ಕಿಡಿಕಾರುತ್ತಿದ್ದರು. ಆದರೆ ಈ ಬಾರಿ ಅಭಿಮಾನಿಯೊಬ್ಬ ಒಂದು ಹೆಜ್ಜೆ ಮುಂದೆ ಹೋಗಿದ್ದು, ನಾಯಕ ಸರ್ಫರಾಜ್ ಖಾನ್ ರನ್ನು ನೇರ ಟೀಕೆ ಮಾಡಿ ವಿಡಿಯೋ ಹರಿಬಿಟ್ಟಿದ್ದಾನೆ. ಸರ್ಫರಾಜ್ ಅಹಮದ್ ಶಾಪಿಂಗ್‍ಗೆ ತೆರಳಿದ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಅವರನ್ನು ಕಿಚಾಯಿಸಿದ್ದು, ಏಕೆ ನೀವು ಹಂದಿಯ ರೀತಿ ದಪ್ಪಗಿದ್ದೀರಿ. ಡಯಟ್ ಏನಾದರು ಮಾಡಿ ಎಂದು ಕಿಡಿಕಾರಿದ್ದಾನೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸರ್ಫರಾಜ್ ಅಹಮದ್ ಪುತ್ರನೊಂದಿಗೆ ಶಾಪಿಂಗ್ ಬಂದ ವೇಳೆ ಘಟನೆ ನಡೆದಿದ್ದು, ಇದರಿಂದ ಸರ್ಫರಾಜ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಅಭಿಮಾನಿಯೊಂದಿಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ ಎಂದು ಹತ್ತಿರ ಬಂದ ಸರ್ಫರಾಜ್ ಆತನ ಮಾತು ಕೇಳಿ ಏಕಾಏಕಿ ದಂಗಾಗಿದ್ದು, ಬಳಿಕ ಅಲ್ಲಿಂದ ತೆರಳಿದ್ದಾರೆ. ಇತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಅಭಿಮಾನಿ ಯೂಟ್ಯೂಬ್ ನಲ್ಲಿ ಮತ್ತೊಂದು ವಿಡಿಯೋ ಅಪ್ಲೋಡ್ ಮಾಡಿ ಕ್ಷಮೆ ಕೋರಿದ್ದಾನೆ.

    https://www.youtube.com/watch?time_continue=80&v=GVs7uaDGf6M

    ಇದಕ್ಕೂ ಮುನ್ನ ಪಾಕಿಸ್ತಾನ ಮಾಜಿ ಕ್ರಿಕೆಟರ್ ಶೊಯಿಬ್ ಅಖ್ತರ್ ಕೂಡ ಸರ್ಫರಾಜ್ ಖಾನ್ ದಪ್ಪವಾಗಿರುವ ಬಗ್ಗೆ ಟೀಕೆ ಮಾಡಿದ್ದರು. ಇಷ್ಟು ದಪ್ಪ ಆಗಿರುವ ನಾಯಕನನ್ನು ನಾನು ನೋಡಿಲ್ಲ, ಈತ ತಂಡದ ನಾಯಕನಾಗಲು ಅರ್ಹರಲ್ಲ ಎಂದಿದ್ದರು.

    ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಫಿಟ್ನೆಸ್ ಸಮಸ್ಯೆ ಕಾಡುತ್ತಿದ್ದು, ಹಲವು ಆಟಗಾರರು ಫಿಲ್ಡಿಂಗ್ ನಡೆಸಲು ಸಮಸ್ಯೆ ಎದುರಿಸಿದ್ದರು. ಸದ್ಯ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಪಾಕ್ ಆಡಿರುವ 5 ಪಂದ್ಯಗಳಲ್ಲಿ 3 ಅಂಕಗಳನ್ನು ಪಡೆದು 9ನೇ ಸ್ಥಾನ ಪಡೆದಿದೆ. ಸದ್ಯ ಸೆಮಿ ಫೈನಲ್ ಪ್ರವೇಶದ ಆಸೆ ಜೀವಂತವಾಗಿಡಲು ಪಾಕಿಸ್ತಾನ ಉಳಿದ ಎಲ್ಲ 4 ಪಂದ್ಯಗಳನ್ನು ಗೆಲ್ಲಬೇಕಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪ್ರಧಾನಿ ಮಾತೇ ಕೇಳಲ್ವಾ ನೀನು? – ಪಾಕ್ ಕ್ಯಾಪ್ಟನ್ ಟ್ರೋಲ್

    ಪ್ರಧಾನಿ ಮಾತೇ ಕೇಳಲ್ವಾ ನೀನು? – ಪಾಕ್ ಕ್ಯಾಪ್ಟನ್ ಟ್ರೋಲ್

    ನವದೆಹಲಿ: ಮ್ಯಾಂಚೆಸ್ಟರ್ ವಿಶ್ವಕಪ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರ ಸಲಹೆಯನ್ನು ನಿರ್ಲಕ್ಷ್ಯ ಮಾಡಿದಕ್ಕೆ ಪಾಕ್ ತಂಡದ ನಾಯಕ ಸರ್ಫರಾಜ್ ಅಹಮದ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

    ‘ಸರ್ಫರಾಜ್.. ನಮ್ಮ ಪ್ರಧಾನಿಗಳ ಮಾತನ್ನೇ ನೀವು ಕೇಳುವುದಿಲ್ಲವಾ? ಎಷ್ಟು ಪೊಗರು? ಎಂದು ಪಾಕ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸರ್ಫರಾಜ್ ಅಹಮದ್ ರನ್ನ ತರಾಟೆ ತೆಗೆದುಕೊಂಡಿದ್ದಾರೆ.

    ಪಂದ್ಯ ಆರಂಭಕ್ಕೂ ಮುನ್ನವೇ ಟ್ವೀಟ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ, ಮಾಜಿ ಪಾಕ್ ಕ್ರಿಕೆಟ್ ತಂಡದ ನಾಯಕ, ವಿಶ್ವಕಪ್ ವಿಜೇತ ತಂಡದ ನಾಯಕರೂ ಆಗಿದ್ದ ಇಮ್ರಾನ್ ಖಾನ್, ಪಂದ್ಯದಲ್ಲಿ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಿ. ಸೋಲಿನ ಭಯ ಬಿಟ್ಟು ಧೈರ್ಯದಿಂದ ಆಡಿ ಎಂದು ಸಲಹೆ ನೀಡಿದ್ದರು. ಆದರೆ ಇತ್ತ ಪಂದ್ಯದಲ್ಲಿ ಟಾಸ್ ಗೆಲುವು ಪಡೆಯುತ್ತಿದಂತೆ ಅಚ್ಚರಿ ಎಂಬಂತೆ ಬೌಲಿಂಗ್ ಆಯ್ಕೆ ಮಾಡಿಕೊಂಡ ಸರ್ಫರಾಜ್ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆ ವೇಳೆಗಾಗಲೇ ಪಂದ್ಯದಲ್ಲಿ ಪಾಕ್ ಸೋಲುವುದು ಖಚಿತ ಎಂದು ಹಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದರು. ಇತ್ತ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಮೈದಾನದಲ್ಲೇ ಆಕಳಿಸಿದ್ದ ಸರ್ಫರಾಜ್ ಅಹಮದ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು.

    ಸದ್ಯ ಇಮ್ರಾನ್ ಹೇಳಿದಂತೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರೆ ಭಾರತ ವಿರುದ್ಧ ಗೆಲ್ಲುವ ಅವಕಾಶ ಇತ್ತು. ಪಂದ್ಯದಲ್ಲಿ ಸೋಲಲು ಸರ್ಫರಾಜ್ ಅಹಮದ್ ಕಾರಣ ಎಂದು ಪಾಕ್ ಅಭಿಮಾನಿಗಳು ಗರಂ ಆಗಿದ್ದಾರೆ. ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ ಟಾಸ್ ಗೆಲುವು ಪಡೆದ್ದರೆ ತಾನು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆಯೂ ಕೊಹ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು.

    https://twitter.com/_Madhu__/status/1140192647476236288

  • ಕ್ರೀಡಾಂಗಣದಲ್ಲಿ ಆಕಳಿಸಿದ ಪಾಕ್ ನಾಯಕನ ಕಾಲೆಳೆದ ನೆಟ್ಟಿಗರು

    ಕ್ರೀಡಾಂಗಣದಲ್ಲಿ ಆಕಳಿಸಿದ ಪಾಕ್ ನಾಯಕನ ಕಾಲೆಳೆದ ನೆಟ್ಟಿಗರು

    ಮ್ಯಾಂಚೆಸ್ಟರ್: ಫೀಲ್ಡಿಂಗ್ ವೇಳೆ ಆಕಳಿಸಿದ ಪಾಕಿಸ್ತಾನ ತಂಡದ ನಾಯಕ, ಕೀಪರ್ ಸರ್ಫರಾಜ್ ಅಹಮದ್ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಲೆಳೆದಿದ್ದಾರೆ.

    2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಂದು ನಡೆಯುತ್ತಿದ್ದು, ಟಾಸ್ ಗೆದ್ದ ಪಾಕ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಈ ವೇಳೆ ಸರ್ಫರಾಜ್ ಅಹಮದ್ ಆಕಳಿಸಿದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    https://twitter.com/simplyirfan/status/1140267367814946817

    ಪಾಕಿಸ್ತಾನದ ಬೌಲರ್‍ಗಳನ್ನು ಎದುರಿಸಿದ ಟೀಂ ಇಂಡಿಯಾ ಬ್ಯಾಟ್ಸಮನ್‍ಗಳು ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ 337 ರನ್ ಗಳ ಗುರಿ ನೀಡಿದೆ. ಮೊದಲ ಇನಿಂಗ್ಸ್ ಮುಗಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಕ್ಕೆ ಲಗ್ಗೆ ಇಟ್ಟ ಟೀಂ ಇಂಡಿಯಾ ಅಭಿಮಾನಿಗಳು, ಸರ್ಫರಾಜ್ ಅಹಮದ್ ಆಕಳಿಸುತ್ತಿರುವ ವಿಡಿಯೋ, ಫೋಟೋ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

    ಇವರು ಈ ಗ್ರಹಕ್ಕೆ ಇಳಿದ ಅತ್ಯಂತ ಉತ್ಸಾಹಿ ಕ್ರಿಕೆಟಿಗ. ತೀವ್ರವಾದ ಸಂದರ್ಭಗಳಲ್ಲಿಯೂ ಆಕಳಿಸುವ ಸಾಮಥ್ರ್ಯವಿದೆ. ಈ ಸಣ್ಣ ಆಕಳಿಯ ಮೂಲಕ ಅವರು ಭಾರತದ ವಿರುದ್ಧ ಗೆಲ್ಲುವ ಕನಸು ಕಂಡರು. ದಂತಕಥೆ ಎಂದು ಇಫ್ರಾನ್ ಎಂಬವರು ಲೇವಡಿ ಮಾಡಿದ್ದಾರೆ.

    ವಿಕೆಟ್‍ಗಳು ಬೀಳುತ್ತಿಲ್ಲ. ಸುಮ್ಮನೆ ನಿದ್ದೆ ಮಾಡಿ ಎಂದು ಸರ್ ಜಡೇಜಾ ಫ್ಯಾನ್ ಹೇಳಿದ್ದಾರೆ. ಭಾರತದ ವಿರುದ್ಧ ಗೆಲುವು ಸಾಧಿಸುವುದು ಹೇಗೆ ಅಂತ ರಾತ್ರಿಯಲ್ಲ ಕುಳಿತು ಪ್ಲಾನ್ ಮಾಡಿದ್ದಾರೆ ಎಂದು ಅಹ್ಮದ್ ಟ್ವೀಟ್ ಮಾಡಿದ್ದಾರೆ.

    ಮ್ಯಾಂಚೆಸ್ಟರ್ ನಲ್ಲಿ ವಾತಾವರಣ ಹಿತಕರವಾಗಿದೆ. ನನಗೆ ವಿಶ್ರಾಂತಿ ಬೇಕಿದೆ. ಎರಡು ಪ್ಲೇಟ್ ಬಿರಿಯಾನಿ ತಿಂದ ನಂತರ ನನ್ನ ಪ್ರತಿಕ್ರಿಯೆ…. ಎಂದು ನೆಟ್ಟಿಗರು ಸರ್ಫರಾಜ್ ಅಹಮದ್ ಕಾಲೆಳೆದಿದ್ದಾರೆ.

  • ಬೊಜ್ಜು ತುಂಬಿಕೊಂಡ, ನಾಯಕ ಆಡಲು ಅನರ್ಹ – ಶೋಯೆಬ್ ಅಖ್ತರ್ ಕಿಡಿ

    ಬೊಜ್ಜು ತುಂಬಿಕೊಂಡ, ನಾಯಕ ಆಡಲು ಅನರ್ಹ – ಶೋಯೆಬ್ ಅಖ್ತರ್ ಕಿಡಿ

    ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲುಂಡಿದ್ದ ಪಾಕಿಸ್ತಾನದ ತಂಡದ ವಿರುದ್ಧ ದೇಶದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ನಾಯಕ ಸರ್ಫರಾಜ್ ಖಾನ್ ವಿರುದ್ಧ ಕಿಡಿಕಾರಿದ್ದಾರೆ.

    ತಂಡದ ನಾಯಕ ಸರ್ಫರಾಜ್ ಅಹ್ಮದ್ ಟಾಸ್‍ಗೆ ಆಗಮಿಸುತ್ತಿದ್ದ ವೇಳೆ ಆತನ ಹೊಟ್ಟೆ ಬೊಜ್ಜಿನಿಂದ ಕೂಡಿರುವುದನ್ನು ನೋಡಿ ನನಗೆ ಅಸಹ್ಯವಾಗಿತ್ತು. ಇದುವರೆಗೂ ನಾನು ನೋಡಿದ ಆನ್ ಫಿಟ್ ಕ್ಯಾಪ್ಟನ್ ಎಂದರೆ ಈತನೆ. ಆತನ ದೇಹದಲ್ಲಿ ತುಂಬಿಕೊಂಡಿದ್ದ ಬೊಜ್ಜಿನಿಂದ ಆತ ನಡೆದಾಡುವುದಕ್ಕೂ ಕಷ್ಟ ಪಡುತ್ತಿದ್ದ. ಅಲ್ಲದೇ ವಿಕೆಟ್ ಕೀಪಿಂಗ್ ಸಮಯದಲ್ಲಿ ಭಾರೀ ಅವಸ್ಥೆ ಪಡುತ್ತಿದ್ದನ್ನು ಗಮನಿಸಿದ್ದೇನೆ ಎಂದು ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಪಂದ್ಯದ ವೇಳೆ ಅಖ್ತರ್ ಈ ಮೇಲಿನ ಮಾತುಗಳನ್ನು ಆಡಿದ್ದು, ಆ ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ‘ಆಗಿದ್ದು.. ಆಗಿದೆ.. ನನ್ನ ಆಲೋಚನೆಗಳ ಭಾವೋದ್ವೇಗದಲ್ಲಿ ಆಡಿದ ಮಾತುಗಳನ್ನು ಮತ್ತೊಮ್ಮೆ ಚಿಂತಿಸುತ್ತಿದ್ದೇನೆ. ದೇಶದ ಪರ ಆಡುತ್ತಿರುವ ಆಟಗಾರರಿಗೆ ನಾವು ಬೆಂಬಲವಾಗಿರುವುದು ಅಗತ್ಯ. ಟೂರ್ನಿ ಅಂತ್ಯವಾಗುವವರೆಗೂ ನಮ್ಮ ಬೆಂಬಲ ಆಟಗಾರರಿಗೆ ಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

    ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಸರ್ಫರಾಜ್ ಅಹ್ಮದ್, 2017 ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಕೂಡ ಭಾರತ ತಂಡ ಕೂಡ ಮೊದಲ ಪಂದ್ಯಗಳಲ್ಲಿ ಸೋಲುಂಡಿತ್ತು. ಆದರೆ ಫೈನಲ್ ವೇಳೆಗೆ ಟೈಟಲ್ ಗೆದ್ದು ಸಂಭ್ರಮಿಸಿತ್ತು ಎಂದು ನೆನಪು ಮಾಡಿದ್ದಾರೆ. ಅಲ್ಲದೇ ಸೋಲಿನಿಂದ ಆಟಗಾರರು ಪಾಠ ಕಲಿತು ಟೈಟಲ್ ಗೆಲುವಿನ ರೇಸ್ ನಲ್ಲಿ ಇರುತ್ತೇವೆ. ಟೂರ್ನಿಯ ಉಳಿದ 8 ಪಂದ್ಯಗಳಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನು ಓದಿ: ಬಿರಿಯಾನಿ ಸವಿಯುತ್ತಾ ಕುಳಿತ ಪಾಕ್ ಕ್ರಿಕೆಟಿಗರ ವಿರುದ್ಧ ವಾಸೀಂ ಅಕ್ರಂ ಗರಂ