Tag: Saregamapa show

  • ತಂದೆ, ತಾಯಿ ಬೆಂಬಲಿಸಿದ್ದರಿಂದ ಈ ಸಾಧನೆ ನಿರ್ಮಾಣ – ಸೆಕೆಂಡ್ ರನ್ನರ್ ಸಾಧ್ವಿನಿ

    ತಂದೆ, ತಾಯಿ ಬೆಂಬಲಿಸಿದ್ದರಿಂದ ಈ ಸಾಧನೆ ನಿರ್ಮಾಣ – ಸೆಕೆಂಡ್ ರನ್ನರ್ ಸಾಧ್ವಿನಿ

    ಬೆಂಗಳೂರು: ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಸೆಕೆಂಡ್ ರನ್ನರ್ ಅಪ್ ಆಗಿ ಸಾಧ್ವಿನಿ ಹೊರಹೊಮ್ಮಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾಧ್ವಿನಿ ಅವರು, ಸರಿಗಮಪ ಶೋ ಕಾರ್ಯಕ್ರಮದ ಪಯಣ ತುಂಬಾ ಚೆನ್ನಾಗಿತ್ತು. ಸೆಕೆಂಡ್ ರನ್ನರ್ ಅಪ್ ಆಗಿರುವುದಕ್ಕೆ ಖುಷಿಯಾಗುತ್ತಿದೆ. ಎಲ್ಲರೂ ಒಂದೇ ಕುಟುಂಬದ ರೀತಿ ಇದ್ವಿ. ಎಲ್ಲರು ಸ್ನೇಹಿತರಾಗಿದ್ದೇವೆ. ಈ ವೇದಿಕೆಯಿಂದ ತುಂಬಾ ವಿಷಯ ಕಲಿತಿದ್ದೇನೆ ಎಂದು ಹೇಳಿದ್ದಾರೆ.

    ಸರಿಗಮಪ ಸೀಸನ್ ನನಗೆ ಜೀವನದ ಒಂದು ಪಾಠವನ್ನು ಹೇಳಿಕೊಟ್ಟಿದೆ ಎಂದು ಹೇಳೋಕೆ ನಾನು ಇಷ್ಟ ಪಡುತ್ತೇನೆ. ಟಾಪ್ 3, ಸೆಕೆಂಡ್ ರನ್ನರ್ ಅಪ್ ಆಗಿರುವುದಕ್ಕೆ ತುಂಬಾ ಖುಷಿಕೊಟ್ಟಿದೆ. ನಮ್ಮ ತಂದೆ, ಅವರ ಅಮ್ಮ ಹಾಡನ್ನು ಹಾಡುತ್ತಿದ್ದರು. ಹೀಗಾಗಿ ನನಗೆ ಸಂಗೀತ ಪರಂಪರೆಯಿಂದ ಬಂದಿದೆ ಎಂದರು.

    ನಮ್ಮ ಅಪ್ಪ-ಅಮ್ಮ ನೀನು ಸಿಂಗರ್ ಆಗಬೇಕೆಂದು ಬೆಂಬಲಿಸಿ ನನ್ನೊಳಗಿದ್ದ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದಾರೆ. ನಾನು ಏನೆ ಸಾಧನೆ ಮಾಡಬೇಕಾದರೂ, ಮಾಡಿದರು ಅವರೇ ಕಾರಣರಾಗಿದ್ದಾರೆ. ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ಸಾಧ್ವಿನಿ ಹೇಳಿದ್ದಾರೆ.

    ಯಾರೆ ಗೆದ್ದರು ಖುಷಿಯಾಗುತ್ತದೆ. ಇಂತಹ ವೇದಿಕೆಯಲ್ಲಿ ನಾವು ಭಾಗಿಯಾಗಿದ್ದೇವೆ ಎಂಬುದೇ ಸಂತಸದ ವಿಚಾರವಾಗಿದೆ. ಅದರಲ್ಲೂ ಸಂಗೀತ ದಿಗ್ಗಜರು ಹಂಸಲೇಖ ಅವರ ಮುಂದೆ ನಾನು ಹಾಡಿದ್ದೇವೆ. ಜೊತೆಗೆ ಒಳ್ಳೆಯ ಸಂಗೀತಗಾರರ ಮುಂದೆ ಹಾಡಲು ನಮಗೆ ಸಿಕ್ಕಿರುವ ದೊಡ್ಡ ಅವಕಾಶ ಇದಾಗಿತ್ತು. ಅದನ್ನು ನಾನು ಚೆನ್ನಾಗಿ ನಿರ್ವಹಿಸಿಕೊಂಡು ಟಾಪ್ 3ಗೆ ಬಂದಿದ್ದೇನೆ ಎಂಬ ಹೆಮ್ಮೆ ಇದೆ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ

    ಅಂದುಕೊಂಡಿದ್ದೆ ಆಯ್ತು, ಖುಷಿ ತಡೆಯಲು ಆಗ್ತಿಲ್ಲ: ರನ್ನರ್ ಅಪ್ ಹನುಮಂತ

    ಬೆಂಗಳೂರು: ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ರನ್ನರ್ ಅಪ್ ಆಗಿ ಜನಪದ ಹಕ್ಕಿ ಹನುಮಂತ ಹೊರಹೊಮ್ಮಿದ್ದಾರೆ. ಆದರೆ ಹಾವೇರಿಯ ಕುರಿಗಾಯಿ ಹನುಮಂತ ಎಂತಲೇ ಕರ್ನಾಟಕದಾದ್ಯಂತ ಖ್ಯಾತಿ ಪಡೆದು, ತಮ್ಮನ್ನು ಗುರುತಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರನ್ನರ್ ಅಪ್ ಹನುಮಂತ, ದೇವರ ದಯೆಯಿಂದ ಇಲ್ಲಿಗೆ ಬಂದು ಹಾಡಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ನಾನು ಸರಿಗಮಪ ವೇದಿಕೆ ಹತ್ತುತ್ತೀನಿ ಎಂಬ ವಿಶ್ವಾಸ ಕೂಡ ಇರಲಿಲ್ಲ. ಇನ್ನೂ ಫೈನಲ್‍ವರೆಗೂ ತಲುಪುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

    ಅಪ್ಪ-ಅಮ್ಮ ಕೂಡ ಇದೇ ಸಾಕು, ಸಂತೋಷವಾಗಿದೆ ಎಂದು ಹೇಳಿದ್ದಾರೆ. ನಾನು ಎಲ್ಲೇ ಇದ್ದರು ಸಂಗೀತ ಕಲಿಯಬೇಕು ಎಂದುಕೊಂಡಿದ್ದೇನೆ. ಅದನ್ನೇ ಮುಂದುವರಿಸುತ್ತೇನೆ. ಸಂಗೀತ ನಾದಬ್ರಹ್ಮ ಹಂಸಲೇಖ ಅವರು ಇಬ್ಬರ ಕೈಯನ್ನು ಹಿಡಿದುಕೊಂಡಿದ್ದಾಗ ಇಬ್ಬರಲ್ಲಿ ಯಾರು ಗೆದ್ದರು ಖುಷಿಯಾಗುತ್ತಿತ್ತು ಎಂದರು.

    ನಾನು ಕೂಡ ಕೀರ್ತನ್ ಹೊಳ್ಳ ಅವರೇ ಗೆಲ್ಲಬೇಕು ಅಂದುಕೊಂಡಿದ್ದೆ. ಅವರೆ ಗೆದ್ದರು, ತುಂಬಾ ತುಂಬಾ ಖುಷಿಯಾಗುತ್ತಿದೆ. ಸಂತೋಷವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹನುಮಂತ ಕುಣಿದು ಕುಪ್ಪಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಫೈನಲ್ ತಲುಪಿದ ಹನುಮಂತನಿಗೆ ಲತಾ ಹಂಸಲೇಖರಿಂದ ಗಿಫ್ಟ್

    ಬೆಂಗಳೂರು: ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಎಂತಲೇ ಖ್ಯಾತಿ ಪಡೆದಿರುವ ಹನುಮಂತ ಅವರು ಸರಿಗಮಪ ಸೀಸನ್ 15ರ ಫೈನಲ್ ಹಂತ ತಲುಪಿದ್ದಾರೆ. ಫೈನಲ್ ಹಂತ ತಲುಪಿದ ಹನುಮಂತ ಅವರಿಗೆ ವಿಶೇಷ ಉಡುಗೊರೆ ಸಿಕ್ಕಿದೆ.

    ಸರಿಗಮಪ ಕಾರ್ಯಕ್ರಮದಲ್ಲಿ ಫೈನಲ್ ಗೆ ಹೋದ ಹನುಮಂತ ಅವರಿಗೆ ಹಾರ್ಮೋನಿಯಂ ಉಡುಗೊರೆ ಸಿಕ್ಕಿದೆ. ಹನುಮಂತ ಅವರು ಸೆಮಿ ಫೈನಲ್ ನಲ್ಲಿ ‘ಜೋಗಿ’ ಸಿನಿಮಾದ ‘ಬೇಡುವೇನು ವರವನ್ನು..’ ಹಾಡನ್ನು ಹಾಡಿದ್ದರು.  ತಮ್ಮ ಗಾಯನ ಪ್ರತಿಭೆ ಮೂಲಕ ಹನುಮಂತ ಅವರು ಸೆಮಿ ಫೈನಲ್ ನಲ್ಲಿಯೇ ಪ್ಲಾಟಿನಮ್ ಟಿಕೆಟ್ ಪಡೆದು ಫೈನಲ್ ಗೆ ಹೋಗಿದ್ದರು.

    ಹನುಮಂತ ಅವರಿಗೆ ನಾದಬ್ರಹ್ಮ ಹಂಸಲೇಖ ಅವರ ಪತ್ನಿ ಲತಾ ಅವರ ಕಡೆಯಿಂದ ಉಡುಗೊರೆಯಾಗಿ ಹಾರ್ಮೋನಿಯಂ ಸಿಕ್ಕಿದೆ. ಕಳೆದ ವಾರದ ಸಂಚಿಕೆಗೆ ಬಂದಿದ್ದ ಲತಾ ಹಂಸಲೇಖ ಅವರು ತಮ್ಮ ಕೈಯಾರೇ ಹನುಮಂತ ಅವರಿಗೆ ಹಾರ್ಮೋನಿಯಂ ನೀಡಿ ಶುಭಾಶಯ ತಿಳಿಸಿದ್ದರು.

    ಲತಾ ಹಂಸಲೇಖ ಅವರು ಈ ಹಿಂದೆ ಅಂದರೆ ಸರಿಗಮಪ ಸೀಸನ್ 14ರ ಅತಿ ಕಿರಿಯ ಸ್ಪರ್ಧಿಯಾಗಿದ್ದ ನೇಹಾಗೆ ಚಿನ್ನದ ಉಂಗುರ ನೀಡಿದ್ದರು. ಈ ಹಿಂದೆ ಹನುಮಂತ ಅವರಿಗೆ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್ ಪ್ರಕಾಶ್ ಅವರು ಇಯರ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

    ಸರಿಗಮಪ ಕಾರ್ಯಕ್ರಮದ ಅಂತಿಮದಲ್ಲಿ ಕೀರ್ತನ್, ವಿಜೇತ್, ಸಾಸ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಒಟ್ಟು ಆರು ಸ್ಪರ್ಧಿಗಳು ಫೈನಲ್ ಹಂತ ತಲುಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ “ಸರಿಗಮಪ ಸೀಸನ್ 15′ ರಲ್ಲಿ ಕುರಿಗಾಹಿ ಅಂತಲೇ ಖ್ಯಾತಿ ಪಡೆದಿರುವ ಹನುಮಂತನಿಗೆ ವಾಹಿನಿ ಒಂದು ಸರ್ಪ್ರೈಸ್ ನೀಡಿದೆ. ಆದರೆ ಆ ಸರ್ಪ್ರೈಸ್ ನೋಡಿ ಹನುಮಂತ ವೇದಿಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

    ಇದೇ ಭಾನುವಾರ ಖಾಸಗಿ ವಾಹಿನಿಯಲ್ಲಿ ‘ಜೀ ಕುಟುಂಬ ಅವಾರ್ಡ್ಸ್ ‘ಕಾರ್ಯಕ್ರಮ ಪ್ರಸಾರವಾಗಿದೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕಿರುತೆರೆಯಲ್ಲಿ ನಟಿಸಿ ಜನರ ಮೆಚ್ಚುಗೆಯನ್ನು ಪಡೆದಿರುವ ನಟ-ನಟಿ ಸೇರಿದಂತೆ ಕಲಾವಿದರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗಿತ್ತು.

    ಇದೇ ಕಾರ್ಯಕ್ರಮದಲ್ಲಿ ಜನತೆ ಮೆಚ್ಚಿದೆ ಅಚ್ಚುಮೆಚ್ಚಿನ ಸ್ಪರ್ಧಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ 5 ಮಂದಿ ನಾಮಿನೇಟ್ ಆಗಿದ್ದರು. ಆದರೆ ಕೊನೆಯಲ್ಲಿ ಸರಿಗಮಪ ಸೀಸನ್ 5ರ ಸ್ಪರ್ಧಿ ಹನುಮಂತನಿಗೆ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಹನುಮಂತ ವೇದಿಕೆಯ ಮೇಲೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಹನುಮಂತ್ ತಮ್ಮ ತಂದೆ-ತಾಯಿ ಇಬ್ಬರನ್ನು ಬಿಟ್ಟು ಬೆಂಗಳೂರಿಗೆ ಬಂದು 20 ದಿನಗಳಾಗಿತ್ತು.

    ಈ ಹಿಂದೆ ಸರಿಗಮಪ ವೇದಿಕೆಯಲ್ಲಿ ತಾಯಿಯನ್ನು ನೆನೆದು ಭಾವುಕರಾಗಿದ್ದರು. ಆದ್ದರಿಂದ ಪ್ರಶಸ್ತಿಯ ಜೊತೆ ಅವರ ತಾಯಿ ಶೀಲವ್ವ ಅವರನ್ನು ಕರೆಸಲಾಗಿತ್ತು. ಆಗ ವೇದಿಕೆಯ ಮೇಲೆ ತಾಯಿಯನ್ನು ನೋಡಿ ಒಂದು ಕ್ಷಣ ಹನುಮಂತ ಮೂಕರಾಗಿ ನಿಂತು ಕಣ್ಣೀರು ಹಾಕಿದ್ದಾರೆ. ಬಳಿಕ ಹನುಮಂತನ ಆಸೆಯಂತೆ ತಮ್ಮ ಮನೆಯಿಂದ ಜೋಳದ ರೊಟ್ಟಿ ತಂದು ತಾಯಿ ಕೈಯಿಂದ ವೇದಿಕೆಯ ಮೇಲೆಯೇ ತಿನ್ನಿಸಿದ್ದಾರೆ.

    ಹನುಮಂತ ಜೊತೆಗೆ ವೇದಿಕೆ ಮೇಲಿದ್ದ ನಿರೂಪಕರು ಕೂಡ ಸೇರಿ ಕುಳಿತು ಅವರ ಕೈಯಿಂದ ಕೈತ್ತುತ್ತು ತಿಂದಿದ್ದಾರೆ. ಹನುಮಂತ ಯಾವುದೇ ಸಂಗೀತ ತರಬೇತಿಗೂ ಹೋಗದೆ, ಕುರಿ ಕಾಯುತ್ತಾ, ಫೋನಿನಲ್ಲಿ ಹಾಡು ಕೇಳುತ್ತಾ ಬೆಳೆದಿದ್ದರು. ಇಂದು ಸರಿಗಮಪ ಕಾರ್ಯಕ್ರಮದ ಮೂಲಕ ಜನತೆಯ ಮೆಚ್ಚುಗೆಯನ್ನು ಪಡೆದು ಕುರಿಗಾಯಿ ಹನುಮಂತ ಎಂದು ಖ್ಯಾತಿ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಆಯ್ಕೆಯಾಗಿದ್ದರು. ಹನುಮಂತ ಸುಮಧುರವಾಗಿ ಹಾಡು ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಹೊತ್ತು ಮಾತನಾಡದೆ ಭಾವುಕರಾಗಿದ್ದರು.

    ಶನಿವಾರ ಪ್ರಸಾರವಾದ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಹನುಮಂತ ‘ದುಡ್ಡು ಕೊಟ್ಟರೆ ಬೇಕಾದು ಸಿಗುತೈತೇ ಈ ಜಗದಲಿ ತಮ್ಮ’ ಎಂಬ ಹಾಡನ್ನು ಹಾಡಿದ್ದರು. ಈ ಹಾಡನ್ನು ಹಾಡಿದ ನಂತರ ಅನುಶ್ರೀ ಅವರು ವೇದಿಕೆಯ ಮೇಲೆ ಬಂದು ಈ ಹಾಡನ್ನು ಹಾಡುವ ಮೂಲಕ ನಮ್ಮ ತಾಯಿಯನ್ನು ನೆನಪಿಸಿದ್ದೀರಿ ಎಂದು ಹೇಳಿದರು. ಈ ವೇಳೆ ನಿಮಗೆ ನಿಮ್ಮ ತಾಯಿ ನೆನಪಾಗುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದಾರೆ.

    ಅನುಶ್ರೀ ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಸೆಕೆಂಡ್ ಮಾತನಾಡದೆ ಭಾವುಕರಾಗಿ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ನಾನು ನಮ್ಮ ಅಮ್ಮ, ಅಪ್ಪ ಮತ್ತು ಕುರಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಅಮ್ಮನಿಂದ ದೂರ ಇದ್ದೀನಿ. ತುಂಬಾ ನೆನಪಾಗುತ್ತಿದ್ದಾರೆ ಎಂದು ಅಮ್ಮನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

    ಈ ನಡುವೆ ಅನುಶ್ರೀ ಅವರು ಕ್ಯಾಮೆರಾ ಮುಂದೆ ನಿಮ್ಮ ತಾಯಿಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಆಗ ಹನುಮಂತ ತಮ್ಮ ಭಾಷೆಯಲ್ಲಿ ‘ಯವ್ವ ನಾನ್ ಆರಾಮಿದ್ದೀನಿ, ನೀನು ಆರಾಮಾಗಿ ಇರು’ ಎಂದು ಹೇಳಿದ್ದಾರೆ. ಹನುಮಂತ ಹಾಡನ್ನು ಕೇಳಿ ವೇದಿಕೆಯ ಮೇಲಿದ್ದ ಎಲ್ಲರು ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

    ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರು ಅವರವರ ತಾಯಿಯನ್ನು ನೆನಪಿಸಿಕೊಂಡು ಹನುಮಂತಗೆ ಚೆನ್ನಾಗಿ ಹಾಡಿದ್ದೀಯಾ ಎಂದು ಗೋಲ್ಡನ್ ಬಜಾರ್ ಒತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv