Tag: sanya iyer

  • ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

    ಸಾನ್ಯ-ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಉದಯ್ ಸೂರ್ಯ

    ದೊಡ್ಮನೆ ಬಿಗ್ ಬಾಸ್‌ನಲ್ಲಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡುತ್ತಿದೆ. ಸ್ಪರ್ಧಿಗಳು ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಉದಯ್ ಸೂರ್ಯ, ಸಾನ್ಯ ಮತ್ತು ಜಶ್ವಂತ್ ಆಡಿರುವ ಮಾತು ಮನಸ್ತಾಪಕ್ಕೆ ಕಾರಣವಾಗಿದೆ. ಉದಯ್ ಆಡಿರುವ ಮಾತಿನಿಂದ ಮನೆಯ ಕಲಹಕ್ಕೆ ಕಾರಣವಾಗಿದೆ.‌

    ಬಿಗ್ ಬಾಸ್ ಶೋ ಆರಂಭವಾದ ದಿನದಿಂದಲೂ ಸಾನ್ಯ ಮತ್ತು ರೂಪೇಶ್, ಸಾನ್ಯ ಮತ್ತು ಜಶ್ವಂತ್ ಬೋಪಣ್ಣ ಒಳ್ಳೆಯ ಸ್ನೇಹಿತರು ಆದರೆ ಇವರ ಸ್ನೇಹ, ಸಂಬಂಧದ ಬಗ್ಗೆ ಕೆಟ್ಟಾಗಿ ಉದಯ್ ಮಾತನಾಡಿದ್ದರು. ಈ ಎಲ್ಲಾ ವಿಚಾರಗಳು ಉದಯ್ ಸೂರ್ಯಗೆ ಮುಳುವಾಗಿದೆ. ಮನೆ ಮಂದಿ ಉದಯ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಉದಯ್‌ಗೆ ಕ್ಲಾಸ್ ತರಟೆಗೆ ತೆಗೆದುಕೊಂಡಿದ್ದಾರೆ.

    ಒಳ ಉಡುಪಿನ ವಿಚಾರಕ್ಕೆ ಸಂಬಂಧಿಸಿ ಸಾನ್ಯಾ ಹಾಗೂ ಉದಯ್ ನಡುವೆ ಒಂದು ಹಾಸ್ಯಮಯ ಸಂಭಾಷಣೆ ನಡೆದಿತ್ತು. ಆ ಸಂದರ್ಭದಲ್ಲಿ ಉದಯ್‌ಗೆ ಚೈತ್ರಾ ಕ್ಲೋಸ್ ಇದ್ದರು. ಹಾಸ್ಯದ ರೀತಿಯಲ್ಲಿ ನಡೆದ ಒಳ ಉಡುಪಿನ ವಿಚಾರವನ್ನು ಅಶ್ಲೀಲ ಅರ್ಥ ಬರುವ ರೀತಿಯಲ್ಲಿ ಚೈತ್ರಾ ಎದುರು ಬಣ್ಣಿಸಿದ್ದರು ಉದಯ್. ಇದು ಚೈತ್ರಾಗೆ ಇಷ್ಟವಾಗಿರಲಿಲ್ಲ.

    ಗರ್ಲ್‌ಫ್ರೆಂಡ್ ನಂದು ಇದ್ದಾಗ ಜಶ್ವಂತ್ ಒಂದು ರೀತಿಯಲ್ಲಿ ಇರುತ್ತಾನೆ. ಅವಳು ಇಲ್ಲದ್ದಾಗ ಸಾನ್ಯ ಅಯ್ಯರ್ ಬಳಿ ಬೇರೆ ರೀತಿಯಲ್ಲಿ ಇರುತ್ತಾನೆ. ಕ್ಯಾಮೆರಾ ಇಲ್ಲದಿದ್ದರೆ ಇಲ್ಲಿ ಬೇರೆಯದೇ ಆಗುತ್ತಿತ್ತು. ಸಾನ್ಯಾಳನ್ನು ಬೀಳಿಸಿಕೊಳ್ಳಬೇಕು ಎಂಬುದು ರೂಪೇಶ್‌ಗೆ ಇದೆ ಎಂಬುದನ್ನೂ ಚೈತ್ರಾ ಎದುರು ಉದಯ್ ಹೇಳಿದ್ದರು. ಇದೀಗ ಉದಯ್‌ ಮಾತು ಸಾನ್ಯ ಕೋಪಕ್ಕೆ ಕಾರಣವಾಗಿದೆ. ಇದನ್ನೂ ಓದಿ:ಆರ್ಯವರ್ಧನ್ ಪಾತ್ರವನ್ನು ಮತ್ತೆ ಅನಿರುದ್ಧ ಮಾಡ್ತಾರಾ? ಕುತೂಹಲ ಮೂಡಿಸಿದೆ ‘ಜೊತೆ ಜೊತೆಯಲಿ’ ಟೀಮ್ ನಡೆ

    ಇದೀಗ ಚೈತ್ರಾ, ಜಶ್ವಂತ್, ಸಾನ್ಯ, ಜಶ್ವಂತ್, ರೂಪೇಶ್, ನಂದು ಚರ್ಚಿಸಿದ ಬಳಿಕ ಎಲ್ಲರ ಎದುರಲ್ಲೇ ರೆಡ್ ಹ್ಯಾಂಡ್ ಆಗಿ ಉದಯ್ ಸಿಕ್ಕಿಹಾಕಿಕೊಂಡಿದ್ದಾರೆ. ಉದಯ್ ನಡೆಗೆ ಎಲ್ಲರೂ ಛೀಮಾರಿ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಅಲ್ಲ ಎನ್ನುವ ಮಾತಿಗೆ ಗಳಗಳನೆ ಅತ್ತ ಸಾನ್ಯ

    ಬಿಗ್ ಬಾಸ್ ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗೆಯೇ ಸ್ಪರ್ಧಿಗಳ ನಡುವೆ ಮನಸ್ತಾಪ ಉಂಟಾಗಿದೆ. ಇದೀಗ ಉದಯ್ ಸೂರ್ಯ ಆಡಿರುವ ಮಾತಿಗೆ ಇದೀಗ ಸಾನ್ಯ ಅಯ್ಯರ್ ಫುಲ್ ರಾಂಗ್ ಆಗಿದ್ದಾರೆ. ಉದಯ್‌ಗೆ ಸಾನ್ಯ ಕ್ಲಾಸ್ ತೆಗೆದುಕೊಂಡಿದ್ದಾರೆ.

    ದೊಡ್ಮನೆಯಲ್ಲಿ ಸಾನ್ಯ ಅಯ್ಯರ್ ಕೂಡ ಗಟ್ಟಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ವಿಚಾರಗಳಿಂದ ಸಾನ್ಯ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಇನ್ನು ಉದಯ್, ಸಾನ್ಯ ಬಗ್ಗೆ ಮಾತನಾಡಿರುವ ಮಾತು ಇದೀಗ ಮನೆಯ ಕಲಹಕ್ಕೆ ಕಾರಣವಾಗಿದೆ. ಸಾನ್ಯ ಕೂಡ ಉದಯ್‌ಗೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮನೆಯಲ್ಲಿ ಒಬ್ಬಬ್ಬರ ಬಳಿ ಉದಯ್, ಸಾನ್ಯ ವ್ಯಕ್ತಿತ್ವದ ಬಗ್ಗೆ ಒಂದೊಂದು ರೀತಿಯಲ್ಲಿ ಮಾತನಾಡಿದ್ದಾರೆ. ಈ ವಿಚಾರ ಸಾನ್ಯ ಗಮನಕ್ಕೂ ಬಂದಿದೆ. ನಂದು ಮುಂದೆ ಒಂದು ತರಹ, ನಂದು ಇಲ್ಲದೇ ಇದ್ದಾಗ ಇನ್ನೊಂದ್ ತರಹ ಎನ್ ನೋಡಿದ್ಯಾ ಹೇಳೋ ಎಂದು ಸಾನ್ಯ, ಉದಯ್ ಮೇಲೆ ಫುಲ್ ರಾಂಗ್ ಪ್ರತಿಕ್ರಿಯಿಸಿದ್ದಾರೆ. ದೇವರಾಣೆ ನಿನ್ನ ಬಗ್ಗೆ ನಾನು ತಪ್ಪಾಗಿ ಮಾತನಾಡಿಲ್ಲ ಎಂದು ಉದಯ್ ಹೇಳಿದ್ದಾರೆ.

    ಈ ವೇಳೆ ನಂದು ಕೂಡ ಧ್ವನಿ ಎತ್ತಿದ್ದಾರೆ. ನಿನಗೆಗಿದೂ ಕೇವಲ ಗೇಮ್ ಇರಬಹುದು. ಆದರೆ ನಮ್ಮಬ್ಬರಿಗೆ ಇದು ಲೈಫ್ ಎಂದಿದ್ದಾರೆ. ನೀನು ಒಬ್ಬ ಹುಡುಗಿಯ ಬಗ್ಗೆ ಒಪಿನಿಯನ್ ಕ್ರಿಯೇಟ್ ಮಾಡೋಕೆ ಟ್ರೈ ಮಾಡಿದ್ಯಾ ಅಂತಾ ಚೈತ್ರಾ ಉದಯ್‌ ವಿರುದ್ಧ ಕಿಡಿಕಾರಿದ್ದಾರೆ. ನೀವು ವಾಯ್ಸ್ ರೈಸ್ ಮಾಡಿದ ತಕ್ಷಣ ನೀವೇನು ದೊಡ್ಡವರಾಗಲ್ಲ ಎಂದು ಉದಯ್ ಮತ್ತೆ ಚೈತ್ರಾ ಟಾಂಗ್ ಕೋಟ್ಟಿದ್ದಾರೆ. ನಾನು ಬಿದ್ದಿದ್ದಿನಿ, ಅವಳು ನನ್ನನ್ನ ಯೂಸ್ ಮಾಡೋಕೆ ಟಿಶ್ಯೂ ಪೇಪರ್ ಆ ಅಂತಾ ಉದಯ್‌ಗೆ ರೂಪೇಶ್ ಶೆಟ್ಟಿ ಪ್ರಶ್ನಿಸಿದ್ದಾರೆ. ನಿನ್ನನ್ನು ಜೆನ್ಯೂನ್ ಫ್ರೆಂಡ್ ಅಂದುಕೊಂಡಿದ್ದೆ, ತುಂಬಾ ಬೇಜಾರು ಮಾಡಿದ್ರಿ ಎಂದು ಸಾನ್ಯ ಉದಯ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ನನಗೂ ಬಾಡಿ ಶೇಮಿಂಗ್‌ ಅನುಭವ ಆಗಿದೆ: ಸಾನ್ಯ ಅಯ್ಯರ್

    ಸಾನ್ಯ, ಉದಯ್ ಸೂರ್ಯ ಮತ್ತು ಮನೆಯವರ ನಡುವೆ ನಡೆದಿರುವುದಾದ್ದರೂ ಎನು ಎಂಬುದನ್ನ ತಿಳಿಯಲು ಇಂದಿನ ಬಿಗ್ ಬಾಸ್ ಓಟಿಟಿ ನೋಡಬೇಕಾಗಿದೆ. ಸಾನ್ಯ ಮತ್ತು ಉದಯ್ ಸ್ನೇಹ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ನನಗೂ ಬಾಡಿ ಶೇಮಿಂಗ್‌ ಅನುಭವ ಆಗಿದೆ: ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆಯಲ್ಲಿ ನನಗೂ ಬಾಡಿ ಶೇಮಿಂಗ್‌ ಅನುಭವ ಆಗಿದೆ: ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆ ಸಾಕಷ್ಟು ವಿಚಾರಗಳಿಂದ ನೋಡುಗರ ಗಮನ ಸೆಳೆದಿದೆ. ಇದೀಗ 12 ಸ್ಪರ್ಧಿಗಳ ನಡುವೆ ಜಟಾಪಟಿ ಜೋರಾಗಿದೆ. ಈ ಶೋನಲ್ಲಿ ಸಾನ್ಯ ಅಯ್ಯರ್ ಕೂಡ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿರುವುದರ ಕುರಿತು ಸಾನ್ಯ ಅಯ್ಯರ್ ಮಾತನಾಡಿದ್ದಾರೆ. ಬಾಡಿ ಶೇಮಿಂಗ್ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

    ದೊಡ್ಮನೆಯಲ್ಲಿ ಭಿನ್ನ ಮನಸ್ಥಿತಿಯ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದೇ ರೀತಿ ದೇಹದ ಆಕಾರ, ರೂಪ ಎಲ್ಲವೂ ಬೇರೇ ಬೇರೇ ರೀತಿಯಲ್ಲಿ ಭಿನ್ನವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಎದುರಿಸುತ್ತಿದ್ದಾರೆ. ಆರ್ಯವರ್ಧನ್ ಗುರೂಜಿ ಹೊಟ್ಟೆ ನೋಡಿ ಕೆಲವರು ಟೀಕಿಸಿದ್ದರು. ಹಾಗೆಯೇ ಈ ವಿಚಾರವಾಗಿ ಗೂರೂಜಿ ಬೇಸರ ಹೊರ ಹಾಕಿದ್ದಾರೆ.‌ ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?

    ಗುರೂಜಿ ಅವರ ಹೊಟ್ಟೆ ನೋಡಿ ಕೆಲವರು ನಕ್ಕಿದ್ದರು. ಅವರು ನೋಡಲು ಸುಂದರವಾಗಿಲ್ಲ ಎಂಬ ಕಾರಣಕ್ಕೆ ಅನೇಕರು ಅವರನ್ನು ಟೀಕೆ ಮಾಡಿದ್ದರು. ಹೀಗಾಗಿ, ತಾವು ಹೊಟ್ಟೆ ಕರಗಿಸಿಕೊಳ್ಳುತ್ತೇವೆ ಎಂಬುದನ್ನು ಆರ್ಯವರ್ಧನ್ ಒತ್ತಿ ಹೇಳಿದ್ದರು. ನನ್ನನ್ನು ನನಗೆ ನೋಡಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ತುಂಬಾ ದೊಡ್ದಾಗಿದೆ. ನನಗೆ ನನ್ನ ಮೇಲೆ ಅಸಹ್ಯ ಹುಟ್ಟುತ್ತಿದೆ. ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಹೊಟ್ಟೆ ಕರಗಿಸುತ್ತೇನೆ ಎಂದು ಆರ್ಯವರ್ಧನ್ ಹೇಳಿದ್ದರು.

    ತಮ್ಮ ಬಗ್ಗೆಯೇ ಕೆಟ್ಟಾದಾಗಿ ಮಾತನಾಡಿಕೊಂಡ ಗುರೂಜಿಗೆ ಸಾನ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಬಗ್ಗೆ ಮೊದಲು ಕೆಟ್ಟದಾಗಿ ಮಾತನಾಡಬೇಡಿ. ಮೊದಲೇ ಬಿಗ್ ಬಾಸ್ ಮನೆಯಲ್ಲಿ ಬಾಡಿ ಶೇಮಿಂಗ್ ಜಾಸ್ತಿ ಆಗಿದೆ. ನನಗೂ ಈ ಬಗ್ಗೆ ಅನುಭವ ಆಗಿದೆ. ನಮ್ಮನ್ನು ನಾವು ಮೊದಲು ಕೀಳಾಗಿ ನೋಡುವುದನ್ನ ಬಿಡಬೇಕು ಎಂದು ಸಾನ್ಯ ಅಯ್ಯರ್ ಗುರೂಜಿ ಬಳಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್: ಎಲ್ಲರೆದುರೇ ನಂದುನ ಪ್ರೇಯಸಿ ಎಂದು ಕರೆದ ಜಶ್ವಂತ್ ಬೋಪಣ್ಣ

    ಬಿಗ್‌ ಬಾಸ್: ಎಲ್ಲರೆದುರೇ ನಂದುನ ಪ್ರೇಯಸಿ ಎಂದು ಕರೆದ ಜಶ್ವಂತ್ ಬೋಪಣ್ಣ

    ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಲವ್ವಿ ಡವ್ವಿ ಸ್ಟೋರಿ ಇದ್ದೇ ಇರುತ್ತೆ. ಶೋಗೆ ಬಂದು ಪ್ರೇಮಿಗಳಾಗಿರುವ ಸ್ಟೋರಿ ಸಾಕಷ್ಟೀದೆ. ಆದರೆ ಮೊದಲ ಬಾರಿಗೆ ಪ್ರೇಮಿಗಳಾಗಿರುವ ಜೋಡಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಓಟಿಟಿಯಲ್ಲಿ ಜಶ್ವಂತ್ ಮತ್ತು ನಂದು ಜೋಡಿ ಮೋಡಿ ಮಾಡುತ್ತಿದೆ. ಹೀಗಿರುವಾಗ ಎಲ್ಲರೆದುರೇ ನಂದುನ ಪ್ರೇಯಸಿ ಎಂದು ಜಶ್ವಂತ್ ಬೋಪಣ್ಣ ಕರೆದಿದ್ದಾರೆ.

    ದಿನದಿಂದ ದಿನಕ್ಕೆ ಪ್ರೇಕ್ಷಕರಿಗೆ ಬಿಗ್ ಬಾಸ್ ಓಟಿಟಿ ಮತ್ತಷ್ಟು ಹತ್ತಿರವಾಗುತ್ತಿದೆ. ಇದೀಗ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳ ಮಧ್ಯೆ ಕಾಂಪಿಟೇಶನ್ ಕೂಡ ಜೋರಾಗಿದೆ. ಇನ್ನು ಕ್ಯಾಪ್ಟನ್ ಆಗಿ ಜಶ್ವಂತ್ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಈ ವೇಳೆ ಎಲ್ಲರೆದುರೇ ನಂದುನ ಪ್ರೇಯಸಿ ಎಂದು ಜಶ್ವಂತ್ ಬೋಪಣ್ಣ ಕೆರೆದಿರುವುದು ಇದೀಗ ನೆಟ್ಟಿಗರ ಗಮನ ಸೆಳೆದಿದೆ.

    ಜಶ್ವಂತ್ ಇದೀಗ ಕನ್ನಡ ಕಲಿಯುತ್ತಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಒಲವಿರುವ ಜಶ್ವಂತ್‌ಗೆ ಸಾನ್ಯ ಕನ್ನಡ ಕಲಿಸಿಕೊಡುತ್ತಿದ್ದಾರೆ. ಇನ್ನು ಜಶ್ವಂತ್ ಜಿಮ್ ಮಾಡುವ ವೇಳೆಯಲ್ಲಿ ಐಸ್‌ಗೆ, ಲಿಪ್‌ಗೆ ಕನ್ನಡದಲ್ಲಿ ಎನೆಂದು ಕರೆಯುತ್ತಾರೆ ಎಂದು ಸಾನ್ಯ ಪ್ರಶ್ನಿಸಿದ್ದಾರೆ. ಕಣ್ಣು ಮತ್ತು ತುಟಿ ಎಂದು ಉತ್ತರಿಸಿದ್ದಾರೆ. ಈ ವೇಳೆ ಇನ್‌ಟಸ್ಟೆöÊನ್ ಎಂದೆರೇನು ಎಂದು ಚೈತ್ರಾ ಪ್ರಶ್ನಿಸಿದಾಗ, ಪಾಪ ಅವರಿಗೆ ಇದನ್ನ ಹೇಳಿಕೊಟ್ಟಿಲ್ಲ ಎಂದು ಸಾನ್ಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಈ ವೇಳೆ ನಂದು ಲವರ್‌ಗೆ ಕನ್ನಡದಲ್ಲಿ ಎನೆಂದು ಕರೆಯುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಪ್ರೀತಿ ಎಂದರೆ ಲವ್ ಎಂದಿದ್ದಾರೆ. ಜಶ್ವಂತ್ ಮಾತಿಗೆ ಧ್ವನಿಗೂಡಿಸಿ ನಂದು, ಪ್ರೇಯಸಿ ಎಂದರೆ ಲವರ್ ಎಂದು ಹೇಳಿದ್ದರು. ನಾನು ಯಾರು ಎಂದು ನಂದು ಕೇಳಿದಾಗ, ನನ್ನ ಪ್ರೇಯಸಿ ಎಂದು ಎಲ್ಲರ ಮುಂದೆ ಜಶ್ವಂತ್ ಹೇಳಿದ್ದಾರೆ. ಇದೀಗ ಈ ಸಂಭಾಷಣೆ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್‌ನಲ್ಲಿ ಲೈಟ್ ಆಫ್ ಆದ್ಮೇಲೆ ನಡೆಯೋದೆ ಬೇರೆ!

    ಬಿಗ್ ಬಾಸ್‌ನಲ್ಲಿ ಲೈಟ್ ಆಫ್ ಆದ್ಮೇಲೆ ನಡೆಯೋದೆ ಬೇರೆ!

    ಬಿಗ್ ಬಾಸ್ ಮನೆ ಇದೀಗ ಸಖತ್ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಮನೆಯ ರಂಗು ಹೆಚ್ಚುತ್ತಿದೆ. ಇನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಸೋಮಣ್ಣ, ಕ್ಯಾಪ್ಟನ್ಸಿ ಟಾಸ್ಕ್ ವಿಚಾರಕ್ಕೆ ಸಾನ್ಯಾ ಯಾಕೆ ಅರ್ಹರಲ್ಲ ಎಂಬ ವಿಚಾರ ಚರ್ಚೆಗೆ ಬಂದಾಗ ಸಾನ್ಯಾ ಹಾಗೂ ರೂಪೇಶ್ ಸದಾ ಕಚ್ಚಿಕೊಂಡೇ ಇರುತ್ತಾರೆ ಎಂಬ ಮಾತನ್ನು ಸೋಮಣ್ಣ ಹೇಳಿದ್ದರು. ಈಗ ವೀಕೆಂಡ್‌ ಶೋನಲ್ಲೂ ಕಿಚ್ಚನ ಎದುರಲ್ಲೂ ಇವರಿಬ್ಬರ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗಿದೆ.

    ಇತ್ತಿಚೆಗೆ ರೂಪೇಶ್ ಶೆಟ್ಟಿ ಮತ್ತು ಸೋಮಣ್ಣ ನಡುವೆ ಮಾತೆತ್ತಿದರೆ ಮನಸ್ತಾಪ ಸೃಷ್ಟಿಯಾಗುತ್ತಿದೆ. ರೂಪೇಶ್ ಯಾವಾಗಲೂ ಸಾನ್ಯಾ ಜೊತೆ ಇರುವುದಕ್ಕೆ ಸೋಮಣ್ಣ ಆ ವಿಚಾರ ಹೇಳುತ್ತಾ ಇರುತ್ತಾರೆ. ಇದು ಇಬ್ಬರಿಗೂ ಆಗುತ್ತಿಲ್ಲ. ಇದೀಗ ಮತ್ತೊಮ್ಮೆ ಮನದ ಕೋಪ ಬ್ಲಾಸ್ಟ್ ಆಗಿದೆ. ನನ್ನ ಪ್ರಕಾರ ಸೋಮಣ್ಣ ತಮ್ಮದೇ ಆದ ಜೋನ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅದನ್ನಷ್ಟೇ ಅವರು ನೋಡುತ್ತಾರೆ. ರಾತ್ರಿ ಹೊತ್ತು ಗುಂಪು ಅಂತ ಹೇಳಿ ಕೆಲವರನ್ನಷ್ಟೇ ಹೆಸರಿಸುತ್ತಾರೆ.

    ಇಲ್ಲಿ ಬೇರೆಯವರು ಮಾತಾಡಿದರೆ ಅವರಿಗೆ ಸಮಸ್ಯೆ ಇಲ್ಲ. ನಾನು ಅಯ್ಯರ್ ಮಾತಾಡಿದರೆ ಏನೇನೋ ಅರ್ಥ ಕಲ್ಪಿಸುತ್ತಾರೆ. ನಂಗೆ ಒಂದು ಅರ್ಥ ಆಗಿಲ್ಲ. ರಾತ್ರಿ ಹೊತ್ತು ಲೈಟ್ ಆಫ್ ಆದರೆ ಮಲಗಬಹುದುನಾ, ಮಲಗಬೇಕುನಾ ಎಂಬುದು ನನಗೆ ಗೊತ್ತಿಲ್ಲ ಎಂದಾಗ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. ಮಲಗಬಹುದು ಎಂದಿದ್ದಾರೆ. ಆದರೆ ರೂಪೇಶ್ ಸೋಮಣ್ಣ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್ ರವಿಚಂದ್ರನ್

    ಪಾತ್ರೆಯೆಲ್ಲಾ ತೊಳೆದು ಕೊನೆಯಲ್ಲಿ ಮಲಗಬೇಕು ಸರ್. ನಮಗೂ ಸ್ವಲ್ಪ ಹೆಲ್ತ್ ಸಮಸ್ಯೆ ಇದೆ. ಬೆಳಗ್ಗೆ ಟ್ಯಾಲೆಟ್‌ಗೆ ಹೋಗೋದಕ್ಕೆಲ್ಲ ಕಷ್ಟ ಆಗುತ್ತೆ. ಜೀರಿಗೆ ನೀರೆಲ್ಲಾ ಕುಡಿಯಬೇಕಾಗುತ್ತದೆ. ಹಾಗೇ ಸ್ವಲ್ಪ ಮಾತಾಡ್ತಾ ಇರುತ್ತೇವೆ. ಎಲ್ಲರ ಹೆಸರನ್ನು ಅವರು ಹೇಳಲ್ಲ. ಕೆಲವರ ಹೆಸರನ್ನಷ್ಟೇ ತೆಗೆಯುತ್ತಾರೆ. ಆಗಿರಬಹುದು, ಅನ್ನಿಸುತ್ತೆ ಎಂಬ ಊಹೆಯಿಂದ ಅದೇ ಸತ್ಯ ಅಂತ ಅಂದುಕೊಳ್ಳುತ್ತಾರೆ. ಅವರ ಮೇಲಿನ ಗೌರವಕ್ಕಾಗಿ ನಾನು ಹೋಗಿ ಕ್ಲಿಯರ್ ಮಾಡಿದರು ಅಹ ಕೇಳಿಸಿಕೊಳ್ಳುವುದಿಲ್ಲ.

    ಸೋಮಣ್ಣ ಅವರಿಂದಾಗಿ ಸಾನ್ಯಾ ಜೊತೆ ಮಾತಾಡುವುದಕ್ಕೆ ಭಯ ಆಗುತ್ತಾ ಇದೆ. ಅವರು ನೋಡುತ್ತಾರಾ ಅಂತ ಭಯ ಆಗುತ್ತೆ. ರಾಕಿ ಮತ್ತು ಸೋನು ಮಾತಾಡ್ತಾರೆ ಅವರ ಬಗ್ಗೆ ಏನು ಹೇಳಲ್ಲ ಎಂದು ಕಿಚ್ಚನ ಮುಂದೆ ರೂಪೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ದಿನದಿಂದ ದಿನಕ್ಕೆ ಸ್ಪರ್ಧಿಗಳ ಜಟಾಪಟಿ ಇದೀಗ ಜೋರಾಗಿದೆ. ಬಿಗ್‌ ಬಾಸ್‌ ಮನೆಯಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತೇ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಕಿಚ್ಚನ ಪಂಚಾಯಿತಿಯಲ್ಲಿ ಸಾನ್ಯಾ-ರೂಪೇಶ್ ಮಿಡ್ ನೈಟ್ ವಿಚಾರ ಬಿಸಿ ಬಿಸಿ ಚರ್ಚೆ

    ‘ಬಿಗ್ ಬಾಸ್’ ಕಿಚ್ಚನ ಪಂಚಾಯಿತಿಯಲ್ಲಿ ಸಾನ್ಯಾ-ರೂಪೇಶ್ ಮಿಡ್ ನೈಟ್ ವಿಚಾರ ಬಿಸಿ ಬಿಸಿ ಚರ್ಚೆ

    ನಿವಾರ ಮತ್ತು ಭಾನುವಾರ ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ಒಂದು ರೀತಿಯಲ್ಲಿ ಸಂಭ್ರಮದ ದಿನಗಳು. ಕಿಚ್ಚ ಸುದೀಪ್ ಜೊತೆ ಮಾತನಾಡುವಂತಹ ಅವಕಾಶ ಸಿಗುವುದರಿಂದ, ಪ್ರತಿಯೊಬ್ಬರೂ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಕಿಚ್ಚನ ಮಾತು ಕೇಳಿಸಿಕೊಳ್ಳಲು ಮತ್ತು ತಮ್ಮ ನೋವುಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಅವಕಾಶ ಸಿಗುವ ದಿನ ಇದಾಗಿದ್ದರಿಂದ, ಪ್ರತಿಯೊಬ್ಬ ಸ್ಪರ್ಧಿಯೂ ಸಂಭ್ರಮದಿಂದಲೇ ಪಾಲ್ಗೊಳ್ಳುತ್ತಾರೆ.

    ಎಂದಿನಂತೆ ಇವತ್ತೂ ಕಿಚ್ಚನ ಪಂಚಾಯಿತಿ ನಡೆದಿದೆ. ವಿಶೇಷ ಅಂದರೆ, ಸಾನ್ಯ ಐಯ್ಯರ್ ಮತ್ತು ರೂಪೇಶ್ ನಡುವಿನ ಮಿಡ್ ನೈಟ್ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರನ್ನು ಕಂಡರೆ ನನಗೆ ಭಯವಾಗುತ್ತದೆ ಎಂದು ಸಾನ್ಯ ಐಯ್ಯರ್ ನೇರವಾಗಿಯೇ ಮಾತನಾಡಿದ್ದಾರೆ. ಪತ್ರಕರ್ತ ಸೋಮಣ್ಣನತ್ತ ಬೆಟ್ಟು ಮಾಡಿ, ಸುಖಾಸುಮ್ಮನೆ ಭಯ ಹುಟ್ಟಿಸುತ್ತಾರೆ ಎಂದು ಆರೋಪಿಸುತ್ತಾರೆ.

    ಸಾನ್ಯ ಐಯ್ಯರ್ ಮತ್ತು ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದ ಮೇಲೆ, ಅದೂ ಮಿಡ್ ನೈಟ್ ನಲ್ಲಿ ಆಚೆ ಹೋಗಿ ಮಾತನಾಡುವಂಥದ್ದು ಏನಿದೆ ಎನ್ನುವ ಪ್ರಶ್ನೆಯನ್ನು ಸೋಮಣ್ಣ ಮಾಡಿದರೆ, ರೂಪೇಶ್ ಕೂಡ ಈ ಮಾತಿಗೆ ಕೌಂಟರ್ ಕೊಟ್ಟಿದ್ದಾರೆ. ಒಂದು ರೀತಿಯಲ್ಲಿ ಸಾನ್ಯ ಐಯ್ಯರ್ ಮತ್ತು ರೂಪೇಶ್ ವಿಚಾರ ಕಿಚ್ಚನ ಪಂಚಾಯಿತಿಯಲ್ಲಿ ಚಕಮಕಿಗೂ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೈ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ ಸ್ಪರ್ಧಿಗಳು: ದೊಡ್ಮನೆ ವಾಸ್ತು ಬಗ್ಗೆ ನೆಟ್ಟಿಗರು ಪ್ರಶ್ನೆ

    ಕೈ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯಿಂದ ಆಚೆ ಬರುತ್ತಿದ್ದಾರೆ ಸ್ಪರ್ಧಿಗಳು: ದೊಡ್ಮನೆ ವಾಸ್ತು ಬಗ್ಗೆ ನೆಟ್ಟಿಗರು ಪ್ರಶ್ನೆ

    ಬಿಗ್ ಬಾಸ್ ಮನೆಯ ವಾಸ್ತು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಜನರ ಭವಿಷ್ಯ ಹೇಳುತ್ತಿದ್ದ ಆರ್ಯವರ್ಧನ್ ಗುರೂಜಿಯೇ ಮನೆ ಒಳಗೆ ಇದ್ದರೂ, ಮನೆಯ ವಾಸ್ತು ಯಾಕೋ ಸರಿ ಇಲ್ಲ ಅನಿಸುತ್ತಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಕಾಮೆಂಟ್ ಬರುವುದಕ್ಕೆ ಕಾರಣ, ಸ್ಪರ್ಧಿಗಳು ಕೈ ಕಾಲು ಮುರಿದುಕೊಂಡು ಹೊರ ಬರುತ್ತಿದ್ದಾರೆ.

    ಕಳೆದ ವಾರ ಕಾಮಿಡಿ ನಟ ಲೋಕೇಶ್ ಅವರು ಏಟು ಮಾಡಿಕೊಂಡ ಕಾರಣಕ್ಕಾಗಿ ಮನೆಯಿಂದ ಆಚೆ ಬಂದಿದ್ದರು. ಆಟ ಆಡುವ ಸಂದರ್ಭದಲ್ಲಿ ಅವರಿಗೆ ಬಲವಾದ ಏಟಾಗಿತ್ತು. ಹಾಗಾಗಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಮತ್ತೆ ಅವರು ವಾಪಸ್ಸು ಬಿಗ್ ಬಾಸ್ ಮನೆಗೆ ಹೋಗಿಲ್ಲ. ಆರೋಗ್ಯದ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಬಲ್ಲ ಮೂಲಗಳ ಪ್ರಕಾರ ಸದ್ಯ ಅವರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ ಕಾನಿಷ್ಕಾ ಸೋನಿ

    ಎರಡನೇ ವಾರದಲ್ಲಿ ಮತ್ತೆ ಏಟು ಮಾಡಿಕೊಂಡಿದ್ದಾರೆ ಅರ್ಜುನ್ ರಮೇಶ್. ಈ ಹಿಂದೆ ಲೋಕೇಶ್ ಅವರಿಗೆ ಕಾಲಿಗೆ ಪೆಟ್ಟಾಗಿದ್ದರೆ, ಇವರಿಗೆ ಕೈ ಪೆಟ್ಟಾಗಿದೆ. ಅದೇ ನೋವಿನಲ್ಲೇ ಒಂದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲೇ ಉಳಿದುಕೊಂಡಿದ್ದ ಅರ್ಜುನ್ ರಮೇಶ್ ಕೈ ನೋವು ವಾಸಿ ಆಗದೇ ಇರುವ ಕಾರಣಕ್ಕಾಗಿ ಈ ವಾರ ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.

    ಅಷ್ಟೇ ಅಲ್ಲದೇ ಮನೆಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ, ಸಾನ್ಯ ಐಯ್ಯರ್ ಕೂಡ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡು, ಆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬಿಗ್ ಬಾಸ್ ಮನೆಯ ವಾಸ್ತುವನ್ನು ಒಂದು ಸಲ ಚೆಕ್ ಮಾಡಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಎಲಿಮಿನೇಟ್ ಆಗಿ ಮನೆಯಿಂದ ಆಚೆ ಬರುವುದು ವಾಡಿಕೆ. ಆದರೆ, ಈ ಬಾರಿ ವಾರಕ್ಕೊಬ್ಬರು ಏಟು ಮಾಡಿಕೊಂಡು ಮನೆಯಿಂದ ಔಟ್ ಆಗುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉದಯ್‌ ಹಿಂಬದಿಯಿಂದ ತಬ್ಬಿ ಕಿಸ್‌ ಮಾಡ್ತಾರೆ: ಬಿಗ್‌ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ

    ಉದಯ್‌ ಹಿಂಬದಿಯಿಂದ ತಬ್ಬಿ ಕಿಸ್‌ ಮಾಡ್ತಾರೆ: ಬಿಗ್‌ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ

    ಬಿಗ್ ಬಾಸ್ ಓಟಿಟಿ ಪ್ರೇಕ್ಷಕರ ವಲಯದಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಗ್ ಬಾಸ್ ಸೀಸನ್ 9ಗೆ ದಿನಗಣನೆ ಕೂಡ ಶುರುವಾಗಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಹೆಚ್ಚುತ್ತಿದೆ. ಈ ನಡುವೆ ಸ್ಪರ್ಧಿ ಉದಯ್ ಸೂರ್ಯ ಮೇಲೆ ಮಹಿಳಾ ಸ್ಪರ್ಧಿಗಳಿಂದ  ಆರೋಪ ಕೇಳಿ ಬರುತ್ತಿದೆ. ಸದ್ಯ ಮನೆಯಲ್ಲಿ ಈ ಕುರಿತು ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

    ದೊಡ್ಮನೆ ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಟಾಸ್ಕ್ ಇದ್ದೇ ಇರುತ್ತದೆ. ಎಂದಿನಂತೆ ಅಕ್ಷತಾ ಅವರು ಒಂದು ಫಿಸಿಕಲ್ ಟಾಸ್ಕ್ ಮುಗಿಸಿ ಆಗತಾನೇ ಬಂದಿದ್ದರು. ಈ ವೇಳೆ ಅವರನ್ನು ಉದಯ್ ಸೂರ್ಯ ಹಿಂಬದಿಯಿಂದ ಹಗ್ ಮಾಡಿದ್ದಾರೆ. ಬಳಿಕ ಕಿವಿಯ ಬಳಿ ಕಿಸ್ ಮಾಡಿದರು. ಈ ಘಟನೆ ಬಗ್ಗೆ ಅಕ್ಷತಾ ಕೊಂಚ ಸಮಯ ಬಿಟ್ಟು ಉದಯ್ ಬಳಿ ಮಾತನಾಡಿದ್ದಾರೆ. ನೀವು ಆ ರೀತಿ ಹಗ್ ಮಾಡಬೇಡಿ. ನೋಡುವವರಿಗೆ ಅದು ಬೇರೆಯ ರೀತಿ ಕಾಣುತ್ತದೆ. ಇನ್ಮುಂದೆ ಆ ರೀತಿ ಮಾಡಬೇಡಿ ಎಂದು ಹೇಳಿದ್ದರು. ಈ ವೇಳೆ ಉದಯ್ ಕೊಂಚ ಸೈಲೆಂಟ್ ಆದರು. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?

    ಇನ್ನು ಸಾನ್ಯಾ ಅಯ್ಯರ್ ಮತ್ತು ನಂದು ಮಧ್ಯೆಯೂ ಇದೇ ವಿಚಾರ ಚರ್ಚೆ ಮಾಡಿದ್ದಾರೆ. ಉದಯ್ ಹಿಂದಿನಿಂದ ಬಂದು ಹಗ್ ಮಾಡಿ, ಕಿವಿಗೆ ಕಿಸ್ ಮಾಡುತ್ತಾರೆ. ಹಾಗೆ ಮಾಡಿದಾಗ ಎಷ್ಟು ಅನ್ ಕಂಪರ್ಟೆಬಲ್ ಫೀಲ್ ಆಗುತ್ತದೆ. ನನಗೆ ಮೊನ್ನೆ ಕೋಪವೇ ಬಂತು. ಎಲ್ಲರೂ ಇದ್ದಾರೆ ಎಂದು ನಾನು ರಿಯಾಕ್ಟ್ ಮಾಡಲಿಲ್ಲ ಎಂದು ಸಾನ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಂದು ಕೂಡ ಸಾಥ್ ನೀಡಿದರು ಅವನು ನನಗೂ ಮೊನ್ನೆ ಅದೇ ರೀತಿ ಮಾಡಿದ್ದ. ಜಶ್ವಂತ್ ಎದುರೇ ಆ ರೀತಿ ಮಾಡಿದ ಎಂದರು ನಂದು ಕೂಡ ದೂರಿದರು. ಉದಯ್ ಸೂರ್ಯ ಅವರು ಮನೆಯ ಮಹಿಳಾ ಸ್ಪರ್ಧಿಗಳ ಜತೆ ನಡೆದುಕೊಳ್ಳುವ ರೀತಿಗೆ ವಿರೋಧ ವ್ಯಕ್ತವಾಗಿದೆ. ಇನ್ನು ಈ ಸಂಚಿಕೆ ಶನಿವಾರದಂದು ಪ್ರಸಾರವಾಗಲಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯಲ್ಲಿ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ಶೆಟ್ಟಿ – ಸಾನ್ಯ ಲವ್ವಿ ಡವ್ವಿ ಮನೆಯ ಜಗಳಕ್ಕೆ ಕಾರಣವಾಯ್ತಾ?

    ರೂಪೇಶ್ ಶೆಟ್ಟಿ – ಸಾನ್ಯ ಲವ್ವಿ ಡವ್ವಿ ಮನೆಯ ಜಗಳಕ್ಕೆ ಕಾರಣವಾಯ್ತಾ?

    ಬಿಗ್ ಬಾಸ್ ಮನೆಯ ಪ್ರತಿ ಸೀಸನ್‌ನಲ್ಲೂ ಒಮದಿಷ್ಟು ಸ್ಪರ್ಧಿಗಳು ಜೋಡಿಗಳಾಗಿ ಹೈಲೈಟ್ ಆಗುತ್ತಿರುತ್ತಾರೆ. ಈ ಬಾರಿ ಬಿಗ್ ಬಾಸ್ ಓಟಿಟಿನಲ್ಲಿ ರಾಕೇಶ್ ಮತ್ತು ಸಾನ್ಯ ಮನೆಯ ಹೈಲೈಟ್ ಆಗಿದ್ದಾರೆ. ಇವರಿಬ್ಬರ ಆತ್ಮಿಯತೆ ಮನೆಯವರ ಕಲಹಕ್ಕೆ ಕಾರಣವಾಗಿದೆ. ಅಷ್ಟಕ್ಕೂ ರೂಪೇಶ್, ಸಾನ್ಯ ಲವ್ವಿ ಡವ್ವಿ ಮನೆಯ ಜಗಳಕ್ಕೆ ಕಾರಣವಾಗಿದೆ.

    ಓಟಿಟಿನಲ್ಲಿ ಈ ಬಾರಿ ಬಿಗ್ ಬಾಸ್ ಶೋ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು, ಸೌಂಡ್ ಮಾಡುತ್ತಿದೆ. ಇನ್ನು ಪ್ರತಿ ಸೀಸನ್‌ನಂತೆ ಈ ಸೀಸನ್‌ನಲ್ಲಿಯೂ ಸ್ಪರ್ಧಿಗಳು ಜೋಡಿಗಳಾಗಿ ಸದ್ದು ಮಾಡುತ್ತಿದ್ದಾರೆ. ಈ ಸಲ ರೂಪೇಶ್, ಸಾನ್ಯ ಸ್ನೇಹ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರಿಬ್ಬರು ನಮ್ಮದು ಸ್ನೇಹ ಅಷ್ಟೇ, ಪ್ರೀತಿಯಲ್ಲ ಎಂದು ಸಾರಿ ಸಾರಿ ತಿಳಿಸಿದ್ದರು. ಈ ಇವರ ಸ್ನೇಹ ಪತ್ರಕರ್ತ ಸೋಮಣ್ಣ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮನೆಯ ಕಲಹಕ್ಕೆ ಕಾರಣವಾಗಿದೆ.

    ಮನೆಯವರ ಎದುರು, ಇಡೀ ಮನೆಯಲ್ಲಿ ಹೈಯೇಷ್ಟ್ ಕಚ್ಚಿಕೊಂಡಿರೋದು ರೂಪೇಶ್ ಮತ್ತು ಸಾನ್ಯ ಎಂದು ಪತ್ರಕರ್ತ ಸೋಮಣ್ಣ ಮಾತನಾಡಿದ್ದಾರೆ. ನಿವಿಬ್ಬರು ಜಾಸ್ತಿ ಟೈಮ್ ಸ್ಪೆಂಡ್ ಮಾಡಿದ್ದು ಸತ್ಯ, ನಾನು ನೋಡಿದ್ದು ಸತ್ಯ ಎಂದು ಸೋಮಣ್ಣ ಮಾತನಾಡಿದರು. ನಿಮ್ಮ ಪ್ರಕಾರ ಯಾರ ಆದರೂ ಒಟ್ಟಿಗೆ ಇದ್ದರೆ, ಅವರ ಮಧ್ಯೆ ಫ್ರೆಂಡ್‌ಶಿಪ್ ಇರಲ್ವಾ ಎಂದು ಸಾನ್ಯ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆರ್ಯವರ್ಧನ್ ಗುರೂಜಿ

    ಯಾರೋ ಸಂಬಂಧವನ್ನ ನಾನು ಡಾಮೇಜ್ ಮಾಡೋಕೆ ಬಂದಿಲ್ಲ. ನಿಮ್ಮ ವಿಚಾರ ನನಗೆ ಬೇಕಾಗುಯಿಲ್ಲ. ಆದರೆ ಮನೆಯ 80% ಜನರಿಗೆ ಇದೇ ಅಭಿಪ್ರಾಯವಿದೆ ಎಂದು ಸೋಮಣ್ಣ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ಒಬ್ಬರ ಆಸಕ್ತಿಯಿಲ್ಲ ಅಂದ ಮೇಲೆ ಈ ವಿಚಾರವನ್ನಿಟ್ಟು ಚರ್ಚೆ ಮಾಡೋದೇನಿದೆ, ನಿಜವಾಗಲೂ ನಿಮ್ಮ ಮಾತಿಂದ ಬೇಜರಾಗಿದೆ ಎಂದು ಸಾನ್ಯ, ಸೋಮಣ್ಣ ಅವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈಗ ರೂಪೇಶ್‌ ಮತ್ತು ಸಾನ್ಯ ಬಗ್ಗೆ ಫುಲ್‌ ಮಾತು ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸೋನು-ಸಾನ್ಯ ಕಿರಿಕ್: ಸೋನು ಗೌಡಗೆ ಲೂಸಾ ನೀನು ಎಂದು ಕಣ್ಣೀರಿಟ್ಟ ಪುಟ್ಟಗೌರಿ

    ಸೋನು-ಸಾನ್ಯ ಕಿರಿಕ್: ಸೋನು ಗೌಡಗೆ ಲೂಸಾ ನೀನು ಎಂದು ಕಣ್ಣೀರಿಟ್ಟ ಪುಟ್ಟಗೌರಿ

    ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುವ ಸೋನು ಗೌಡ ಇದೀಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಟಾಸ್ಕ್ ಆಡುವಾಗ ಸಾನ್ಯ ಜತೆ ಸೋನು ಕಿರಿಕ್ ಮಾಡಿದ್ದಾರೆ. ಸೋನು ಅವತಾರಕ್ಕೆ ಸಾನ್ಯ ಉರಿದು ಬಿದ್ದಿದ್ದಾರೆ.

    ದೊಡ್ಮನೆ ಬಿಗ್ ಬಾಸ್‌ನಲ್ಲಿ ಎರಡನೇ ವಾರದ ಆಟ ಭರದಿಂದ ಸಾಗುತ್ತಿದೆ. ಪ್ರತಿದಿನ ಟಾಸ್ಕ್‌ಗಳಿಂದ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. (ಆಗಸ್ಟ್ 17)ರ ಎಪಿಸೋಡ್‌ನಲ್ಲಿ ಲಿಪ್ ರೀಡಿಂಗ್ ಟಾಸ್ಕ್ ನೋಡುಗರಿಗೆ ಮನರಂಜನೆ ಕೊಟ್ಟಿದೆ. ಆದರೆ ಈ ಟಾಸ್ಕ್‌ನಲ್ಲಿ ಸೋನು ನಡೆ ಸಾನ್ಯ ಅವರನ್ನ ಅಳುವಂತೆ ಮಾಡಿದೆ. ಎರಡು ಟೀಂ ಮಾಡಿ ಒಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ನ ಪ್ರಕಾರ ಒಂದು ಟೀಂನಿಂದ ಇಬ್ಬರು ಆಟಕ್ಕೆ ಇಳಿಯಬೇಕು. ಒಬ್ಬರ ಕಿವಿಗೆ ಹೆಡ್‌ಫೋನ್ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್‌ನ ಜೋರಾಗಿ ಹೇಳಬೇಕು. ಹೆಡ್‌ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು. ಈ ಆಟಕ್ಕೆ ಸೋನು ಹಾಗೂ ಸಾನ್ಯಾ ಇಳಿದಿದ್ದಾರೆ. ಇದನ್ನೂ ಓದಿ:ಏನು ಶ್ರೀಳು ವರ್ಷ ಮದುವೆ ಆಗಲ್ಲ ಎಂದು ಶಾಕಿಂಗ್‌ ಸುದ್ದಿ ಕೊಟ್ಟ ಸೋನಿವಾಸ್ ಗೌಡ

    ಸೋನು ಕಿವಿಗೆ ಹೆಡ್‌ಫೋನ್ ಹಾಕಿಕೊಂಡರೆ, ಸಾನ್ಯಾ ಸಾಲುಗಳನ್ನ ಹೇಳಿದರು. ಆದರೆ, ಒಂದೇ ಒಂದು ವಾಕ್ಯವನ್ನು ಸರಿಯಾಗಿ ಹೇಳಿಲ್ಲ ಸೋನು. ಹೆಡ್‌ಫೋನ್‌ನಲ್ಲಿ ಸಾಂಗ್ ದೊಡ್ಡದಾಗಿ ಬರುತ್ತಿದೆ ಎಂದು ಕೂಗುವುದೊಂದೇ ಮಾಡುತ್ತಿದ್ದರು. ಇದರಿಂದ ಸಾನ್ಯಾ ಅಸಮಾಧಾನಗೊಂಡರು. ಇಬ್ಬರ ನಡುವೆ ಕಿರಿಕ್ ಆಯಿತು. ಸೋನು ತನ್ನ ತಪ್ಪಿಲ್ಲ ಎಂದು ವಾದಿಸೋಕೆ ಶುರು ಮಾಡಿದರು. ಅಷ್ಟೇ ಅಲ್ಲ ಸಾನ್ಯಾ ಮೇಲೆ ತಪ್ಪನ್ನು ಎತ್ತಿ ಹಾಕಿದರು. ಈ ವಿಚಾರದಿಂದ ಸಾನ್ಯಾ ಸಿಕ್ಕಾಪಟ್ಟೆ ಡಲ್ ಆದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ನೀನು ಲೂಸಾ ಎಂದು ಹೇಳುತ್ತಾ ತಾಳ್ಮೆ ಕಳೆದುಕೊಂಡರ. ನಂತರ ಸಾನ್ಯಾ ಅಳೋಕೆ ಆರಂಭಿಸಿದರು. ಸಾನ್ಯ ಅಳೋದನ್ನ ನೋಡಿ, ಇಡೀ ತಂಡ ಸಾನ್ಯಗೆ ಸಾಥ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]