Tag: Santosh

  • ಮೈಸೂರು ಅಗ್ರಹಾರದಿಂದ ಲಂಡನ್‍ವರೆಗಿನ ಲಂಬೋದರನ ಪಯಣ!

    ಮೈಸೂರು ಅಗ್ರಹಾರದಿಂದ ಲಂಡನ್‍ವರೆಗಿನ ಲಂಬೋದರನ ಪಯಣ!

    ಲಂಡನ್ ಸ್ಕ್ರೀನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಲಂಡನ್‍ನಲ್ಲಿ ಲಂಬೋದರ ಚಿತ್ರ ಮಾರ್ಚ್ 29ರಂದು ಬಿಡುಗಡೆಯಾಗುತ್ತಿದೆ. ರಾಜ್ ಸೂರ್ಯ ನಿರ್ದೇಶನದ ಈ ಸಿನಿಮಾ ಮೂಲಕ ವಿಶಿಷ್ಟವಾದೊಂದು ಪಾತ್ರದ ಮೂಲಕ ಸಂತೋಷ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಮಾಯೆಯೆಂಬುದು ಎತ್ತೆತ್ತಲಿಂದಲೋ ಸೆಳೆದುಕೊಂಡು ಬರುತ್ತದಲ್ಲಾ? ಅಂಥಾದ್ದೇ ಸೆಳೆತಕ್ಕೆ ಸಿಕ್ಕು ಐಟಿ ವಲಯದ ಕೆಲಸವನ್ನು ತೊರೆದು ಬಣ್ಣದ ನಂಟಿಗೆ ಬಿದ್ದವರು ಸಂತೋಷ್!

    ಆರಂಭ ಕಾಲದಿಂದಲೂ ಸಿನಿಮಾಸಕ್ತಿ ಹೊಂದಿದ್ದ ಸಂತೋಷ್ ಪಾಲಿಗೆ ನಾಯಕ ನಟನಾಗಬೇಕೆಂಬುದು ಅದೆಷ್ಟೋ ವರ್ಷಗಳ ಕನಸು. ಕಾಲೇಜು ಅವಧಿಯಲ್ಲಿಯೇ ಚಿಗುರಿಕೊಂಡಿದ್ದ ಈ ಆಸಕ್ತಿಯನ್ನು ಎದೆಯಲ್ಲಿಯೇ ಕಾಪಿಟ್ಟುಕೊಂಡು, ಬೇರೆಯದ್ದೇ ಕ್ಷೇತ್ರಕ್ಕೆ ತೆರಳಿದರೂ ಅಲ್ಲಿಂದ ಮತ್ತೆ ಕಲೆಯ ತೆಕ್ಕೆಗೆ ಬಿದ್ದ ಅವರ ಸಿನಿಮಾ ಯಾನ ರಸವತ್ತಾಗಿದೆ.

    ಮೈಸೂರಿನ ಅಗ್ರಹಾರದ ಕೂಡು ಕುಟುಂಬದಲ್ಲಿ ಹುಟ್ಟಿ ಬೆಳೆದವರು ಸಂತೋಷ್. ಅವರು ಓದಿದ್ದೆಲ್ಲವೂ ಮೈಸೂರಿನಲ್ಲಿಯೇ. ಕಾಲೇಜು ಓದೋ ಹೊತ್ತಿಗೆಲ್ಲ ಅವರೊಳಗೆ ಸಿನಿಮಾ ವ್ಯಾಮೋಹದ ಕಿಡಿ ಹೊತ್ತಿಕೊಂಡಿತ್ತು. ಅನೂಪ್ ಭಂಡಾರಿಯವರ ಸಹಪಾಠಿಯೂ ಆಗಿರುವ ಸಂತೋಷ್ ಆ ಹೊತ್ತಿನಲ್ಲಿಯೇ ಮಾಡೆಲಿಂಗ್ ನಲ್ಲಿಯೂ ಮಿಂಚಿದ್ದರು. ಇದೇ ಹಾದಿಯಲ್ಲಿ ಮುಂದುವರಿದು ಫ್ಯಾಶನ್ ಶೋ ಒಂದರ ವಿನ್ನರ್ ಆಗಿಯೂ ಹೊರ ಹೊಮ್ಮಿದ್ದರು. ಆದರೆ ಕಾಲೇಜು ಓದು ಮುಗಿಯುವ ಹೊತ್ತಿಗೆಲ್ಲಾ ಬದುಕು ಬೇರೆಯದ್ದೇ ದಿಕ್ಕು ತೋರಿಸಿತ್ತು.

    ಮನಸೆಲ್ಲ ನಟನಾಗುವ ಕನಸಿನತ್ತಲೇ ತುಡಿಯುತ್ತಿದ್ದರೂ ಐಟಿ ಸೆಕ್ಟರಿನಲ್ಲಿ ಕೆಲಸ ಮಾಡುವ ಅನಿವಾರ್ಯತೆ ಬಂದೊದಗಿತ್ತು. ಹೀಗೆ ಆ ಕೆಲಸದಲ್ಲಿ ಕಳೆದು ಹೋಗಿದ್ದರೂ ಮುಂದೊಂದು ದಿನ ನಾಯಕ ನಟನಾಗೇ ತೀರುವ ಹಂಬಲ ಮಾತ್ರ ಅವರಿಗಿದ್ದೇ ಇತ್ತು. ಈ ಬಗ್ಗೆ ತಮ್ಮ ಬಾಲ್ಯ ಸ್ನೇಹಿತರಾದ ಪ್ರಣವ್ ಅವರೊಂದಿಗೆ ಚರ್ಚೆ ಸಾಗುತ್ತಲೇ ಇತ್ತು. ಈ ಹುಡುಕಾಟದಲ್ಲಿದ್ದಾಗಲೇ ರಾಜ್ ಸೂರ್ಯ ಲಂಡನ್‍ನಲ್ಲಿ ಲಂಬೋದರ ಕಥೆ ಹೇಳಿದ್ದರು. ಅದು ಯಾವ ಪರಿ ಇಷ್ಟವಾಗಿತ್ತೆಂದರೆ ಕೇಳಿದಾಕ್ಷಣವೇ ಈ ಚಿತ್ರ ತನ್ನ ಕನಸಿನ ಹಾದಿಯಲ್ಲಿ ಮೈಲಿಗಲ್ಲಾಗುತ್ತದೆಂಬ ಸ್ಪಷ್ಟ ಸೂಚನೆ ಸಿಕ್ಕಿಂತಂತೆ.

    ತಕ್ಷಣವೇ ತಮ್ಮ ಕೆಲಸ ಬಿಟ್ಟು ತಯಾರಿ ಆರಂಭಿಸಿದ್ದ ಸಂತೋಷ್ ಆರಂಭಿಕವಾಗಿ ಎರಡ್ಮೂರು ತಿಂಗಳ ಕಾಲ ನಟನಾ ತರಬೇತಿ ಪಡೆದುಕೊಂಡಿದ್ದರಂತೆ. ಯಾಕೆಂದರೆ ಈ ಚಿತ್ರದಲ್ಲಿ ಅವರ ಪಾತ್ರ ಸವಾಲಿನದ್ದು. ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಬೇಡುವಂಥಾದ್ದು. ಪ್ರತೀ ದಿನವೂ ದಿನಭವಿಷ್ಯ ಓದಿ ಅದರಂತೆಯೇ ಬದುಕುವ ವಿಶಿಷ್ಟವಾದ ಪಾತ್ರವನ್ನು ಸಂತೋಷ್ ಇಲ್ಲಿ ನಿರ್ವಹಿಸಿದ್ದಾರಂತೆ. ಈ ಚಿತ್ರದ ಶೇಕಡಾ ಐವತ್ತರಷ್ಟು ಭಾಗ ಲಂಡನ್ ನಲ್ಲಿಯೇ ನಡೆದಿದೆ. ಅದನ್ನೆಲ್ಲ ಎಂಜಾಯ್ ಮಾಡುತ್ತಲೇ ನಿರ್ವಹಿಸಿರುವ ಸಂತೋಷ್ ಚೆಂದದ ಕಥೆ ಹೊಂದಿರೋ ಅಚ್ಚುಕಟ್ಟಾದ ಓಪನಿಂಗ್ ಸಿಕ್ಕ ಖುಷಿಯಲ್ಲಿದ್ದಾರೆ. ಈ ಚಿತ್ರದಿಂದಲೇ ನಾಯಕ ನಟನಾಗಿ ಕಾಲೂರಿ ನಿಲ್ಲುವ ಭರವಸೆಯೂ ಅವರಲ್ಲಿದೆ.

  • ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿದ್ದ ಬಿಎಸ್‍ವೈಗೆ ಸಿಸಿಬಿಯಿಂದ ಶಾಕ್!

    ಆಪರೇಷನ್ ಕಮಲದಲ್ಲಿ ಬ್ಯುಸಿಯಾಗಿದ್ದ ಬಿಎಸ್‍ವೈಗೆ ಸಿಸಿಬಿಯಿಂದ ಶಾಕ್!

    ಬೆಂಗಳೂರು: ಆಪರೇಷನ್ ಕಮಲದಲ್ಲಿ ಫುಲ್ ಬ್ಯುಸಿಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್‍ಗೆ ಸಿಸಿಬಿ ಬಿಸಿ ಮುಟ್ಟಿಸಿದೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಪಿಎ ವಿನಯ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಸಂತೋಷ್. ಹೀಗಾಗಿ ಸಂತೋಷ್ ವಿಚಾರಣೆಗಾಗಿ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ತಲುಪಿದ ತಕ್ಷಣವೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರಂತೆ. ಸಿಸಿಬಿ ಕಳುಹಿಸಿರುವ ನೋಟಿಸ್ ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ತಲುಪಿದೆ. ಆದರೆ ಸಂತೋಷ್ ಸುಳ್ಳು ನೆಪಗಳನ್ನು ಹೇಳಿ ಸಿಸಿಬಿ ವಿಚಾರಣೆಗೆ ಹಾಜರಾಗದೇ ಕಾಲ ಕಳೆಯುತ್ತಿದ್ದಾರೆ ಎನ್ನಲಾಗಿದೆ.

    ಏನಿದು ಪ್ರಕರಣ?:
    ಇಸ್ಕಾನ್ ದೇವಾಲಯದ ಬಳಿ 8 ಜನರ ತಂಡವೊಂದು ವಿನಯ್‍ನನ್ನು 2017ರ ಮೇ 11 ರಂದು ಅಪಹರಣ ಮಾಡಲು ಪ್ರಯತ್ನಿಸಿತ್ತು. ಈ ಸಂಬಂಧ ವಿನಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣದ ಪ್ರಮುಖ ಆರೋಪಿ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

    ಈ ಹಿಂದೆ ಜಾಮೀನು ಪಡೆದು ಮಹಾಲಕ್ಷ್ಮಿ ಲೇಔಟ್ ಪೊಲೀಸರ ಮುಂದೆ ಸಂತೋಷ್ ವಿಚಾರಣೆಗೆ ಹಾಜಾರಾಗಿದ್ದ. ಆದರೆ ಇದೀಗ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಸಂತೋಷ್‍ಗೆ ಸಂಕಷ್ಟ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಈ ಏರಿಯಾದಲ್ಲಿ ವಾಸ ಮಾಡೋಕೆ ಆಗ್ತಿಲ್ಲ, ಮಕ್ಕಳು ಶಾಲೆ, ಟ್ಯೂಷನ್‍ಗೆ ಹೋಗೋಕೆ ಆಗ್ತಿಲ್ಲ’

    ‘ಈ ಏರಿಯಾದಲ್ಲಿ ವಾಸ ಮಾಡೋಕೆ ಆಗ್ತಿಲ್ಲ, ಮಕ್ಕಳು ಶಾಲೆ, ಟ್ಯೂಷನ್‍ಗೆ ಹೋಗೋಕೆ ಆಗ್ತಿಲ್ಲ’

    ಬೆಂಗಳೂರು: ಸಂಜೆ ಆರು ಗಂಟೆ ಆದ್ರೆ ಸಾಕು ಮಹಿಳೆಯರು, ಮಕ್ಕಳು ಏರಿಯಾದಲ್ಲಿ ಓಡಾಡೋಕೆ ಆಗುತ್ತಿಲ್ಲ ಎಂದು ಶಿವಾಜಿನಗರದ ಚಿನ್ನಪ್ಪ ಗಾರ್ಡನ್‍ನಲ್ಲಿರುವ ಮಹಿಳೆಯರು ಕೇಂದ್ರ ಸಚಿವ ಅನಂತ್‍ಕುಮಾರ್ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಇಂದು ಇತ್ತೀಚೆಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಮನೆಗೆ ಅನಂತ್ ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂತೋಷ್ ಮನೆಯಿಂದ ಹೊರ ಬಂದ ಸಚಿವರನ್ನು ಭೇಟಿ ಮಾಡಿದ ಸ್ಥಳೀಯ ಮಹಿಳೆಯರು, ಈ ಏರಿಯಾದಲ್ಲಿ ವಾಸ ಮಾಡೋಕೆ ಆಗ್ತಿಲ್ಲ, ಮಕ್ಕಳು ಶಾಲೆ, ಟ್ಯೂಷನ್‍ಗೆ ಹೋಗೋಕೆ ಆಗ್ತಿಲ್ಲ. ಸಂಜೆ ಆದ ಕೂಡಲೇ ರಸ್ತೆ ಬದಿ ಯುವಕ ಗುಂಪೊಂದು ಗಾಂಜಾ ಸೇದುತ್ತಾ ನಿಂತುಕೊಳ್ತಾರೆ. ನೀವು ಯಾಕೆ ಇಲ್ಲಿ ನಿಂತು ಕೊಳ್ಳುತ್ತೀರಾ ಎಂದು ಪ್ರಶ್ನೆ ಮಾಡಿದರೆ ನಾವು ಕಾಂಗ್ರೆಸ್ ನವರು, ಶಿವಾಜಿ ನಗರದಿಂದ ಬಂದಿದ್ದೇವೆ ಅಂತಾ ಅವಾಜ್ ಹಾಕುತ್ತಾರೆ. ಏನಾದ್ರೂ ಯುವಕರನ್ನು ಹೆಚ್ಚಿಗೆ ಪ್ರಶ್ನೆ ಮಾಡಿದರೆ ಏನು ಮಾಡುತ್ತಾರೆ ಎಂಬ ಭಯ ಆಗುತ್ತದೆ. ಚಿಕ್ಕ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಆಗುತ್ತದೆ ಅಂತಾ ಮಹಿಳೆಯರು ಸಚಿವರಿಗೆ ದೂರು ನೀಡಿದರು.

    ಸ್ಥಳೀಯ ಮಹಿಳೆಯರ ದೂರು ಕೇಳಿದ ನಂತರ ಅನಂತ್ ಕುಮಾರ್, ಕೂಡಲೇ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಏರಿಯಾದ ಚಿತ್ರಣವನ್ನು ತಿಳಿಸಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಸೂಚಿಸಿದರು.

    https://www.youtube.com/watch?v=3PataTx9Z2U

  • ಸತ್ತವರನ್ನೆಲ್ಲ ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನಾಗಿ ಮಾಡ್ಕೊಳ್ತಿದ್ದಾರೆ: ಸಿಎಂ

    ಸತ್ತವರನ್ನೆಲ್ಲ ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನಾಗಿ ಮಾಡ್ಕೊಳ್ತಿದ್ದಾರೆ: ಸಿಎಂ

    ಬೆಂಗಳೂರು: ಬಿಜೆಪಿಯವರು ಸತ್ತ ವ್ಯಕ್ತಿಗಳನ್ನೆಲ್ಲಾ ತಮ್ಮ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

    ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ನೂತನ ಕಟ್ಟಡ ಉದ್ಘಾಟನೆ ಬಳಿಕ ಸಂತೋಷ್ ಕೊಲೆ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಿಎಂ, ಸಂತೋಷ್ ಬಿಜೆಪಿ ಕಾರ್ಯಕರ್ತ ಅಲ್ಲವೇ ಅಲ್ಲ. ಸತ್ತವರನ್ನೆಲ್ಲ ಬಿಜೆಪಿಯವರು ತಮ್ಮ ಕಾರ್ಯಕರ್ತರನ್ನಾಗಿ ಮಾಡಿಕೊಳ್ತಿದ್ದಾರೆ. ಸಂತೋಷ್ ಹತ್ಯೆಗೆ ನಮ್ಮ ಖಂಡನೆ ಇದೆ. ಕೊಲೆಯನ್ನ ನಾವು ತೀವ್ರವಾಗಿ ಖಂಡಿಸ್ತೀವಿ. ಹತ್ಯೆ ಮಾಡಿರುವವರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಉದ್ದೇಶದಿಂದ ಪ್ರಕರಣವನ್ನ ಸಿಸಿಬಿಗೆ ವಹಿಸಿದ್ದೇವೆ. ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ತೀವಿ ಅಂತಾ ಹೇಳಿದರು.

    ಗಾಂಜಾ ಗಲಾಟೆಯಲ್ಲಿ ಸಂತೋಷ್ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗಾಂಜಾ ಮಾರಾಟ ಮಾಡುತ್ತಿರುವವರ ವಿರುದ್ಧವೂ ಕ್ರಮ ತೆಗೆದುಕೊಳ್ತೀವಿ ಎಂದು ಸಿಎಂ ಹೇಳಿದ್ರು. ಸಂತೋಷ್ ಮನೆಗೆ ಭೇಟಿ ನೀಡ್ತೀರಾ ಅನ್ನೋ ಪ್ರಶ್ನೆಗೆ ಉತ್ತರಿಸದೆ ಹೊರಟು ಹೋದರು.

  • ಬೂಟ್ ನೆಕ್ಕಿಸಿ, ಬಾಯಿಗೆ ಬಟ್ಟೆ ತುರುಕಿ ಟ್ರಾಫಿಕ್ ಪೊಲೀಸರಿಂದ ಸಿನಿಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ

    ಬೂಟ್ ನೆಕ್ಕಿಸಿ, ಬಾಯಿಗೆ ಬಟ್ಟೆ ತುರುಕಿ ಟ್ರಾಫಿಕ್ ಪೊಲೀಸರಿಂದ ಸಿನಿಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರ ದರ್ಪ ಮೀತಿ ಮೀರಿ ಹೋಗುತ್ತಿದೆ. ಇತ್ತೀಚೆಗಷ್ಟೆ ಹೋಟೆಲ್ ಮಾಲೀಕನ ಮೇಲೆ ಎಸಿಪಿ ದರ್ಪ ತೋರಿಸಿದ್ದರು. ಈಗ ಮತ್ತೆ ಟ್ರಾಫಿಕ್ ಪೊಲೀಸರು ಸಿನಿಮಾ ನಟ ಕಂ ಕ್ಯಾಬ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಪೊಲೀಸರಿಂದ ದೌರ್ಜನ್ಯ ಹಾಗೂ ಹಲ್ಲೆಗೊಳಗಾದ ನಟನೇ ಸಂತೋಷ್. ಇವರು ನಗರದ ಚಿಕ್ಕಬಾಣವಾರ ನಿವಾಸಿಯಾಗಿದ್ದು, ಪಾರ್ಟ್ ಟೈಂನಲ್ಲಿ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕನ್ನಡದ ಮುಗಿಲು, ದಿ ಲೋಕಲ್ ಹಾಗೂ ನಟ ಪ್ರಜ್ವಲ್ ದೇವರಾಜ್ ಅಭಿನಯದ ಮಾದ ಮತ್ತು ಮಾನಸಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಇವರು ನಟನೆಯ ಜೊತೆಗೆ ಉಬರ್ ಕ್ಯಾಬ್ ಕೂಡ ಓಡಿಸುತ್ತಿದ್ದರು. ಕಳೆದ ನವೆಂಬರ್ 3 ರಂದು ಐಟಿಪಿಎಲ್ ನ ಜಿ.ಆರ್.ಟೆಕ್ ಪಾರ್ಕ್ ಬಳಿ ಪ್ಯಾಸೇಂಜರ್ ಒಬ್ಬರು ಉಬರ್ ಬುಕ್ ಮಾಡಿದ್ದರು. ಅವರನ್ನು ಪಿಕ್ ಮಾಡಲು ಬಂದಾಗ ರೋಡಿನಲ್ಲಿ ನಿಲ್ಲಿಸಿದ್ದ ಎಂಬ ಒಂದೇ ಕಾರಣಕ್ಕೆ ವೈಟ್ ಫೀಲ್ಡ್ ಕಾನ್ಸ್ ಟೇಬಲ್ ಸಂತೋಷ್ ನಾಯಕ್ ಕಾರು ತೆಗೆಯುವಂತೆ ಗಲಾಟೆ ಮಾಡಿದ್ದು, ಕಾರ್ ಕೀ ಕಿತ್ತುಕೊಂಡು ನಂತರ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ವೈಟ್ ಫೀಲ್ಡ್ ಟ್ರಾಫಿಕ್ ಸ್ಟೇಷನ್ ಗೆ ಕರೆದುಕೊಂಡು ಹೋಗಿ ಕಾನ್ಸ್ ಟೇಬಲ್ ಸಂತೋಷ್ ನಾಯಕ್, ಕಿರಣ್ ಹಾಗೂ ಇತರೆ ಸಿಬ್ಬಂದಿಗಳು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಅಲ್ಲದೇ ಸಂತೋಷ್ ಗೆ ಬೂಟ್ ನೆಕ್ಕಿಸಿ, ಬಾಯಿಗೆ ಬಟ್ಟೆ ತುರುಕಿ, ಮೈಯೆಲ್ಲಾ ಬಾಸುಂಡೆ ಬರೋವರೆಗೂ ಲಾಠಿ ಏಟು ಕೊಟ್ಟಿದ್ದಾರೆ. ನಂತರ ಕಾಡುಗೋಡಿ ಪೊಲೀಸ್ ಸ್ಟೇಷನ್ ಗೆ ಸಂತೋಷ್‍ನನ್ನು ಕರೆದುಕೊಂಡು ಹೋಗಿ ಅಲ್ಲಿ ಕೂಡ ಹಲ್ಲೆ ನಡೆಸಿ ಸಂಜೆ 5 ರಿಂದ ರಾತ್ರಿ 11 ಗಂಟೆವರೆಗೂ ಹೊಡೆದಿದ್ದಾರೆ. ಸಂತೋಷ್ ಯಾರಿಗಾದರೂ ಹೇಳಿದ್ದರೆ ಕೊಲೆ ಕೇಸ್, ರೇಪ್ ಕೇಸ್ ಎಲ್ಲಾ ಬುಕ್ ಮಾಡುತ್ತೀವಿ ಎಂದು ಹೆದರಿಸಿ ಖಾಕಿಗಳು ಕಳಿಸಿದ್ದಾರೆ.

    ಸದ್ಯಕ್ಕೆ ನೊಂದ ನಟ ಸಂತೋಷ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕ್ಷುಲಕ ಕಾರಣಕ್ಕೆ ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

  • `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ

    `ರಾಜಕುಮಾರ’, `Mr & Mrs ರಾಮಾಚಾರಿ’ ಚಿತ್ರದ ನಿರ್ದೇಶಕರಿಗೆ ನಿಶ್ಚಿತಾರ್ಥ

    ಬಳ್ಳಾರಿ: ಸ್ಯಾಂಡಲ್ ವುಡ್ ನಲ್ಲಿ ತೆರೆಕಂಡ ಸೂಪರ್ ಹಿಟ್ ಚಲನಚಿತ್ರಗಳಾದ ರಾಜಕುಮಾರ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದ ನಿರ್ದೇಶಕ ಸಂತೋಷ ಆನಂದರಾಮ್ ಸಪ್ತಪದಿ ತುಳಿಯಲು ಸಿದ್ಧರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

    ಮೂಲತಃ ಉಡುಪಿ ಮೂಲದವರಾದ ಸಂತೋಷ್ ಆನಂದರಾಮ್, ಬಳ್ಳಾರಿಯ ಅಲ್ಲಭವನದಲ್ಲಿ ಉದ್ಯಮಿ ಶ್ರೀನಿವಾಸ್‍ರಾವ್ ಪುತ್ರಿ ಸುರಭಿ ಅವರ ಜೊತೆ ಭಾನುವಾರ ಸಂಪ್ರದಾಯಕವಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.

    ಸಂತೋಷ್ ಅವರು ಮದುವೆ ಸಮಾರಂಭವೊಂದರಲ್ಲಿ ಸುರಭಿಯನ್ನು ನೋಡಿ ಮನಸೋತಿದ್ದು, ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಈ ಅದ್ಧೂರಿ ಸಮಾರಂಭದಲ್ಲಿ ಸುರಭಿ-ಸಂತೋಷ್ ಕೈಗೆ ರಿಂಗ್ ತೊಡಿಸುವುದರ ಮೂಲಕ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

    ಸಂತೋಷ್ ನಿಶ್ಚಿತಾರ್ಥಕ್ಕೆ ನಟ ಯಶ್-ರಾಧಿಕಾ ದಂಪತಿ ಬಂದು ಶುಭಾಶಯ ಕೋರಿ ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ರಾಜಕುಮಾರ ಚಿತ್ರದ ನಂತರ ಸಂತೋಷ್ ಜೊತೆ ಆಪ್ತರಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಹ ಬಂದು ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡಲು ಅಭಿಮಾನಿಗಳು ಅಲ್ಲಭವನದಲ್ಲಿ ಮುಗಿಬಿದ್ದರು.

    ಸುರಭಿಗೆ ಕೈಗೆ ರಿಂಗ್ ತೊಡಿಸಿದ ಆನಂದವನ್ನು ಹಚ್ಚಿಕೊಂಡ ಸಂತೋಷ್, ಇದೀಗ ನಾನು ಬಳ್ಳಾರಿ ಅಳಿಯನಾಗಿದ್ದೇನೆ ಎಂದು ಹೇಳಿ ಹರ್ಷವನ್ನು ವ್ಯಕ್ತಪಡಿಸಿದರು. ಅದ್ಧೂರಿ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಿರುವ ಸಂತೋಷ್ ಆನಂದರಾಮ್ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಮದುವೆಗೆ ಸಿದ್ಧರಾಗಿದ್ದಾರೆ.

     

     

  • ನಾನು ಸಂತೋಷ್ ಅಣ್ಣತಮ್ಮಂದಿರಂತೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ: ಬಿಎಸ್‍ವೈ

    ನಾನು ಸಂತೋಷ್ ಅಣ್ಣತಮ್ಮಂದಿರಂತೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ: ಬಿಎಸ್‍ವೈ

    ಶಿವಮೊಗ್ಗ: ನಾನು ಮತ್ತು ಸಂತೋಷ್ ನಡುವೆ ಗುಲಗಂಜಿಯಷ್ಟು ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವಿಬ್ಬರು ಅಣ್ಣ ತಮ್ಮಂದಿರಂತೆ ಇದ್ದು, ಪಕ್ಷ ಬಲವರ್ಧನೆಗೆ ನಾವಿಬ್ಬರು ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿ ಮಾಡುತ್ತಿರುವುದು ಮಾಧ್ಯಮದವರು ಎಂದು ದೂರಿದರು.

    ಇದೇ ವೇಳೆ ಶಿಕಾರಿಪುರದ ಜನತೆ ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ನೀವು ನಾಮಪತ್ರ ಸಲ್ಲಿಸಿ ಹೋಗಿ ನಾವು ನೋಡಿಕೊಳ್ಳುತ್ತೆವೆ ಎಂದಿದ್ದಾರೆ. ಈ ಕುರಿತು ಕೇಂದ್ರದ ನಾಯಕರ ಮನವೊಲಿಸಿ ಶಿಕಾರಿಪುರದಿಂದಲೇ ಸ್ಪರ್ಧೆಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.

    ನಾನು ಟಿಕೆಟ್ ನೀಡುವುದಿಲ್ಲ. ಪಕ್ಷ ಟಿಕೆಟ್ ನೀಡುತ್ತದೆ. ಹೈಕಮಾಂಡ್ ಪ್ರತಿ ಕ್ಷೇತ್ರದಲ್ಲೂ ಸರ್ವೆ ನಡೆಸಿ ಟಿಕೆಟ್ ನೀಡಲಿದೆ ಎಂದರು.

    ಕ್ಷಮೆ ಕೇಳಬೇಕು: ಕಾಗೋಡು ತಿಮ್ಮಪ್ಪರಂತಹ ಹಿರಿಯರಿಂದ ಗೋವಿನ ಬಗ್ಗೆ ಈ ರೀತಿಯ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಗೋಮಾಂಸ ವಿಚಾರದಲ್ಲಿ ಒಂದು ಸಮುದಾಯದವರನ್ನು ಅವಮಾನ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ತಕ್ಷಣ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.