Tag: Sanju Samson

  • RR ಫ್ರಾಂಚೈಸಿ ಜೊತೆ ಮುನಿಸಿಕೊಂಡ ಸಂಜು ಸ್ಯಾಮ್ಸನ್?

    RR ಫ್ರಾಂಚೈಸಿ ಜೊತೆ ಮುನಿಸಿಕೊಂಡ ಸಂಜು ಸ್ಯಾಮ್ಸನ್?

    ಮುಂಬೈ: 2022ರ ಐಪಿಎಲ್ ಮಹಾ ಹರಾಜಿಗೂ ಮುನ್ನ ಕೆಲ ಆಟಗಾರರು ತಮ್ಮ ಹಳೆಯ ಫ್ರಾಂಚೈಸ್‍ಗಳನ್ನು ಬಿಟ್ಟು ಹೊರ ಬರಲು ನಿರ್ಧರಿಸಿದ್ದಾರೆ. ಈ ಸಾಲಿನಲ್ಲಿ ಇದೀಗ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ನಾಯಕರಾಗಿದ್ದ ಸಂಜು ಸ್ಯಾಮ್ಸನ್ ಕೂಡ ಸೇರಿದ್ದು, ಆರ್‌ಆರ್ ಫ್ರಾಂಚೈಸ್ ಜೊತೆ ಮುನಿಸಿಕೊಂಡು ತಂಡದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಸಂಜು ಸ್ಯಾಮ್ಸನ್ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಜಸ್ಥಾನ ಪರ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು. ಸ್ಯಾಮ್ಸನ್ ನಾಯನಾಗಿ ತಂಡದ ಪ್ರದರ್ಶನ ಗಮನಿಸಿದರೆ 14ನೇ ಆವೃತ್ತಿಯಲ್ಲಿ ತಂಡ 7 ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ ಒಬ್ಬ ಬ್ಯಾಟ್ಸ್‌ಮ್ಯಾನ್‌ ಆಗಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಸಂಜು 15ನೇ ಆವೃತ್ತಿಯ ಐಪಿಎಲ್‍ಗೆ ಆರ್‍ಆರ್ ಫ್ರಾಂಚೈಸಿ ಸಂಜು ಅವರನ್ನು ರಿಟೈನ್ ಮಾಡಿಕೊಳ್ಳುವ ಹಂಬಲದಲ್ಲಿತ್ತು. ಆದರೆ ಇದೀಗ ಸಂಜು ಆರ್‍ಆರ್ ಫ್ರಾಂಚೈಸ್ ಜೊತೆ ಮುನಿಸಿಕೊಂಡು ತಂಡದಿಂದ ಹೊರ ನಡೆಯಲು ಮುಂದಾಗಿದ್ದಾರೆ ಎಂದು ಪ್ರತಿಷ್ಠಿತ ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಜಡೇಜಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಬುಮ್ರಾ

    ಈ ಸುದ್ದಿಗೆ ಪುಷ್ಟಿ ನೀಡುವಂತೆ ಸಂಜು ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್‌ಆರ್ ಫ್ರಾಂಚೈಸ್‍ನ್ನು ಅನ್‍ಫಾಲೋ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಹಗಾಗಿ ಸಂಜು ಮುಂದಿನ ಆವೃತ್ತಿಯ ಐಪಿಎಲ್‍ಗು ಮುನ್ನ ಮಹಾ ಹರಾಜಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಊಹಾಪೋಹಗಳು ಕೇಳಿ ಬರುತ್ತಿದ್ದು, ಇದಕ್ಕೆಲ್ಲ ಮುಂದಿನ ವರ್ಷ ನಡೆಯಲಿರುವ ಐಪಿಎಲ್ ಹರಾಜಿನ ಮುನ್ನ ಸ್ಪಷ್ಟ ಉತ್ತರ ಸಿಗಲಿದೆ. ಇದನ್ನೂ ಓದಿ: ಆರ್‌ಸಿಬಿ ಮುಖ್ಯ ಕೋಚ್ ಆಗಿ ಸಂಜಯ್‌ ಬಂಗಾರ್‌ ಆಯ್ಕೆ

  • ರಾಜಸ್ತಾನ್ ರಾಯಲ್ಸ್‌ಗೆ, ರಾಯಲ್ ಚಾಲೆಂಜರ್ಸ್ ಸವಾಲು

    ರಾಜಸ್ತಾನ್ ರಾಯಲ್ಸ್‌ಗೆ, ರಾಯಲ್ ಚಾಲೆಂಜರ್ಸ್ ಸವಾಲು

    ದುಬೈ: ಐಪಿಎಲ್ ದ್ವಿತೀಯಾರ್ಧದ 43ನೇ ಪಂದ್ಯದಲ್ಲಿಂದು ರಾಜಸ್ತಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿವೆ.

    ಬೆಂಗಳೂರು ಪ್ಲೇ ಆಫ್ ಪ್ರವೇಶಿಸಬೇಕಾದರೆ ಉಳಿದಿರುವ ನಾಲ್ಕು ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ. ಆರ್​ಸಿಬಿ  ಆಡಿರುವ ಓಟ್ಟು 10 ಪಂದ್ಯಗಳಲ್ಲಿ 6 ರಲ್ಲಿ ಜಯ ಹಾಗೂ ನಾಲ್ಕರಲ್ಲಿ ಸೋಲು ಕಂಡಿದೆ. ಇನ್ನೊಂದೆಡೆ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ಟೂರ್ನಿಯಲ್ಲಿ ಉಳಿಯಬೇಕಾದರೆ ಗೆಲುವು ಅನಿವಾರ್ಯವಾಗಿದೆ. ಒಟ್ಟು 10 ಪಂದ್ಯಗಳನ್ನಾಡಿರುವ ರಾಜಸ್ತಾನ್ 4 ಗೆಲುವು ಹಾಗೂ 6 ಸೋಲುಗಳನ್ನು ಕಂಡಿದೆ. ಅಂಕಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದ್ದರೆ, ರಾಜಸ್ಥಾನ 7ನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10K ಕಿಂಗ್

    ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಆರ್​ಸಿಬಿ  11, ರಾಜಸ್ತಾನ್ 10ರಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲದ ಹೋರಾಟ ನಡೆಸಿವೆ. ಸದ್ಯ ಆರ್​ಸಿಬಿಯ ಆಟಗಾರರು ಉತ್ತಮ ಫಾರ್ಮ್‍ನಲ್ಲಿದ್ದು, ಪಂದ್ಯವನ್ನು ಗೆಲ್ಲುವ ಹುಮ್ಮಸಿನಲ್ಲಿದೆ.

    ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ಬಳಿಕ ಬೆಂಗಳೂರು ತಂಡಕ್ಕೆ ಹೊಸ ಹುರುಪು ಸಿಕ್ಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಕ್ಸ್‍ವೆಲ್ ಅಬ್ಬರ ಆರ್‍ಸಿಬಿ ತಂಡಕ್ಕೆ ಆನೆ ಬಲ ತಂದುಕೊಟ್ಟಿದೆ. ಬೌಲಿಂಗ್ ವಿಭಾಗದಲ್ಲೂ ಸಾಕಷ್ಟು ಸುಧಾರಿಸಿರುವ ಬೆಂಗಳೂರು ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಕನಸು ಕಾಣುತ್ತಿದೆ. ಇದನ್ನೂ ಓದಿ: ಪೊಲಾರ್ಡ್, ಹಾರ್ದಿಕ್ ಅಬ್ಬರಕ್ಕೆ ಪಂಜಾಬ್ ಪಂಚರ್ – ಮುಂಬೈಗೆ 6 ವಿಕೆಟ್ ಜಯ

    ರಾಜಸ್ಥಾನ್ ರಾಯಲ್ಸ್ ಕೂಡ ಬಲಿಷ್ಟ ತಂಡವಾಗಿದ್ದರೂ, ಆಟಗಾರರು ಹೇಳಿಕೊಳ್ಳುವಂತ ಪ್ರದರ್ಶನ ನೀಡುತ್ತಿಲ್ಲ. ಟೂರ್ನಿಯ ಆರಂಭದಲ್ಲಿ ಪಂಜಾಬ್ ವಿರುದ್ಧ ಮೊದಲ ಪಂದ್ಯ ಗೆದ್ದು ಉಳಿದ ಪಂದ್ಯಗಳನ್ನು ಗೆಲುವಿನ ಅಂತರದಲ್ಲಿ ಕೈಚೆಲ್ಲಿದೆ. ನಾಯಕ ಸಂಜು ಸಮ್ಸನ್, ಲಿವಿಸ್ ಬಿಟ್ಟರೆ ಉಳಿದ ಬ್ಯಾಟ್ಸ್‍ಮನ್‍ಗಳು ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗುತ್ತಿದ್ದಾರೆ. ಬೌಲಿಂಗ್ ವಿಭಾಗ ಕೂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ಸು ಕಾಣದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.

    ಉಭಯ ತಂಡಗಳು ಇಂದು ದುಬೈನಲ್ಲಿ ಸೆಣಸಾಟ ನಡೆಸಲಿದ್ದು, ಸೋಲಿನ ಸರಪಳಿ ಕಳಚಲು ರಾಜಸ್ತಾನ್ ರಾಯಲ್ಸ್ ಸಿದ್ದವಾಗಿದೆ. ಮತ್ತೊಂದೆಡೆ ಪ್ಲೇ ಆಫ್ ಗೆ ಲಗ್ಗೆ ಹಾಕಲು ಆರ್​ಸಿಬಿಗೆ ಇನ್ನೆರೆಡು ಗೆಲುವ ಅಗತ್ಯವಾಗಿದೆ.

  • ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ

    ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 7 ವಿಕೆಟ್‍ಗಳ ಭರ್ಜರಿ ಜಯಗಳಿಸುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ.

    ರಾಜಸ್ಥಾನ ನೀಡಿದ್ದ 165 ರನ್‍ಗಳ ಗುರಿಯನ್ನು ಬೆನ್ನತ್ತಿದ ಹೈದರಾಬಾದ್, 18.3 ಓವರ್‌ಗಳಲ್ಲಿ 167 ರನ್ ಗಳಿಸಿ ಜಯದ ನಗೆ ಬೀರಿತು. ಈ ಮೂಲಕ ಯುಎಇನಲ್ಲಿ ಮೊದಲ ಜಯವನ್ನು ತನ್ನದಾಗಿಸಿಕೊಂಡಿತು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, ದುಬೈ ಪಿಚ್‍ನಲ್ಲಿ ನಿಧಾನವಾಗಿ ಉತ್ತಮ ಮೊತ್ತ ಕಲೆ ಹಾಕಿತು. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 164ರನ್ ಪೇರಿಸಿತು. ರಾಜಸ್ಥಾನ್ ಪರ ಜೈಸ್ವಾಲ್ 36 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿದರು. ಮಹಿಪಾಲ್ ಲೊಮರ್ 29ರನ್ (28 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿದರೆ, ನಾಯಕ ಸಂಜು ಸ್ಯಾಮ್ಸನ್ 82 ರನ್ (57 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಹೈದರಾಬಾದ್ ಬೌಲರ್‍ಗಳನ್ನು ಬೆಂಡೆತ್ತಿದರು. ಸನ್ ರೈಸರ್ಸ್ ಹೈದರಾಬಾದ್ ಪರ ಸಿದ್ದಾರ್ಥ್ ಕೌಲ್ 2, ರಶೀದ್ ಖಾನ್ 1, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ 10ಏ ಕಿಂಗ್

    165 ರನ್‍ಗಳ ಗುರಿ ಬೆನ್ನತ್ತಿದ ಹೈದರಾಬಾದ್‍ಗೆ ಜೇಸನ್ ರಾಯ್ ಹಾಗೂ ವೃದ್ಧಿಮಾನ್ ಸಹಾ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‍ಗೆ ಈ ಜೋಡಿ, 5.1 ಓವರ್‌ಗಳಲ್ಲಿ 57 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ವೃದ್ಧಿಮಾನ್ ಸಹಾ 18 ರನ್ (11 ಎಸೆತ, 2 ಬೌಂಡರಿ, 1 ಸಿಕ್ಸರ್) ಮಹಿಪಾಲ್‍ಗೆ ವಿಕೆಟ್ ಒಪ್ಪಿಸಿದರು. ರಾಜಸ್ಥಾನ್ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ ಜೇಸನ್ ರಾಯ್ 60 ರನ್ (42 ಎಸೆತ, 8 ಬೌಂಡರಿ, 1 ಸಿಕ್ಸರ್) ಚಚ್ಚಿ ಚೇತನ್ ಸಕರಿಯಾಗೆ ವಿಕೆಟ್ ಕೊಟ್ಟು ಹೊರ ನಡೆದರು. ನಂತರ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆಟವಾಡಿ ಸನ್ ರೈಸರ್ಸ್ ಹೈದರಾಬಾದ್‍ಗೆ ಗೆಲುವು ದೊರಕಿಸಿಕೊಟ್ಟರು. ಇದನ್ನೂ ಓದಿ: 5 ಎಸೆತದಲ್ಲಿ 21 ರನ್ ಚಚ್ಚಿದ ಜಡೇಜಾ – ಕೊನೆಯ ಎಸೆತದಲ್ಲಿ ಚೆನ್ನೈಗೆ ರೋಚಕ ಜಯ

    ಭರ್ಜರಿ ಬ್ಯಾಟಿಂಗ್ ಮಾಡಿದ ನಾಯಕ ಕೇನ್ ವಿಲಿಯಮ್ಸನ್, 51 ರನ್ (41 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಇವರಿಗೆ ಉತ್ತಮ ಸಾಥ್ ನೀಡಿದ ಅಭಿಷೇಕ್ ಶರ್ಮಾ 21 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ ತಂಡದ ಗೆಲುವಿಗೆ ಸಹಕಾರಿಯಾದರು.

  • ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್

    ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್

    ದುಬೈ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್ ಮೇಲೆ ದಂಡ ಹೇರಲಾಗಿದೆ. 2ನೇ ಬಾರಿ ರಾಜಸ್ಥಾನ ತಂಡ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ 24 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

    ಸಂಜು ಸ್ಯಾಮ್ಸನ್ ಅಲ್ಲದೇ ಆಡಿದ 11 ಮಂದಿ ಆಟಗಾರರಿಗೂ ದಂಡ ವಿಧಿಸಲಾಗಿದೆ. ಪ್ರತಿಯೊಬ್ಬರಿಗೂ 6 ಲಕ್ಷ ಅಥವಾ ಪಂದ್ಯದ ವೈಯಕ್ತಿಕ ಶುಲ್ಕದ ಶೇ.25 ರಷ್ಟನ್ನು ದಂಡವಾಗಿ ಪಾವತಿಸಬೇಕು ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    24 ಲಕ್ಷ ಯಾಕೆ?
    ಐಪಿಎಲ್ ನಲ್ಲಿ ಮೊದಲ ಬಾರಿ ನಿಧಾನಗತಿ ಬೌಲಿಂಗ್ ಮಾಡಿದರೆ ನಾಯಕನಿಗೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಎರಡನೇ ಬಾರಿ ಈ ತಪ್ಪನ್ನು ಮಾಡಿದರೆ ನಾಯಕನಿಗೆ 24 ಲಕ್ಷ ರೂ. ದಂಡದ ಜೊತೆ ಆಟಗಾರರಿಗೂ ದಂಡ ವಿಧಿಸಲಾಗುತ್ತದೆ.

    ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡ 20 ಓವರ್‌ಗಳನ್ನು 90 ನಿಮಿಷದ ಒಳಗಡೆ ಮುಗಿಸಬೇಕು. ಈ ಅವಧಿಯಲ್ಲಿ ಓವರ್‌ಗಳನ್ನು ಪೂರ್ಣ ಮಾಡದೇ ಇದ್ದರೂ 20ನೇ ಓವರ್‌ ಅನ್ನು 90ನೇ ನಿಮಿಷದಲ್ಲೇ ಆರಂಭಿಸಬೇಕು. ಈ ನಿಯಮವನ್ನು ಮೊದಲ ಬಾರಿ ಉಲ್ಲಂಘಿಸಿದರೆ 12 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ.

    ಪ್ರತಿ ಪಂದ್ಯದಲ್ಲಿ 2 ನಿಮಿಷ 30 ಸೆಕೆಂಡಿನ 4 ಸ್ಟ್ರಟೆಜಿಕ್‌ ಟೈಮ್‌ ಔಟ್‌ ಬ್ರೇಕ್‌ಗಳು ಇರುತ್ತದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ತಂಡ 6-9 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು. ಎರಡನೇ ಸ್ಟ್ರಟೆಜಿಕ್‌ ಟೈಮ್‌ ಔಟ್‌ ಅನ್ನು ಬ್ಯಾಟಿಂಗ್ ತಂಡ 13-16 ಓವರ್‌ ಮಧ್ಯೆ ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು.

    ದಂಡ ಯಾಕೆ?
    ಐಪಿಎಲ್‌ ಅಂದ್ರೆ ಬಿಸಿನೆಸ್‌. ಇಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ.

    ಮಳೆಯಿಂದ ಅಥವಾ ಇನ್ಯಾವುದೋ ಕಾರಣದಿಂದ ಪಂದ್ಯಕ್ಕೆ ಅಡ್ಡಿಯಾದರೆ ಅದು ಬೇರೆ ವಿಷಯ. ಆದರೆ ಒಂದು ತಂಡ ನಿಧಾನಗತಿ ಬೌಲಿಂಗ್‌ ಮಾಡಿದರೆ ಅದು ಐಪಿಎಲ್‌ ದಿನದ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚಗಳು ಜಾಸ್ತಿಯಾಗುತ್ತದೆ. ಇದನ್ನೂ ಓದಿ: ಧೋನಿ ಗೂಗ್ಲಿಗೆ ಕ್ಲೀನ್ ಬೌಲ್ಡ್ ಆದ ಜಡೇಜಾ

    ಐಪಿಎಲ್‌ಗೆ ಹೆಚ್ಚಿನ ಆದಾಯ ಬರುತ್ತಿರುವುದು ಟಿವಿ ರೈಟ್ಸ್‌ನಿಂದ. ಟಿವಿಯಲ್ಲಿ ಪ್ರತಿ ಸೆಕೆಂಡ್‌ ಬಹಳ ಮುಖ್ಯ. ಅದರಲ್ಲೂ 2 ಪಂದ್ಯ ಒಂದೇ ದಿನ ನಿಗದಿಯಾದರೆ ಎರಡನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ. ಯಾಕೆಂದರೆ ಜಾಹೀರಾತುಗಳು ಮೊದಲೇ ಬುಕ್‌ ಆಗಿರುತ್ತದೆ.

    ಏನೇ ಮಾಡಿದರೂ ಶಿಸ್ತು ಇರಬೇಕು. ಹೀಗಾಗಿ ಯಾರಿಗೂ ಸಮಸ್ಯೆ ಆಗದೇ ಇರಲು ಮತ್ತು ಎಲ್ಲ ಸರಿಯಾದ ಸಮಯಕ್ಕೆ ಮುಕ್ತಾಯವಾಗಲು ಪಂದ್ಯ ಮುಗಿಯಲು ಸಮಯವನ್ನು ನಿಗದಿ ಮಾಡಲಾಗಿದೆ. ಹೆಚ್ಚು ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಶಿಸ್ತುಬದ್ಧವಾಗಿ ನಡೆದುಕೊಂಡ ತಂಡಕ್ಕೆ ಫೇರ್‌ ಪ್ಲೇ ಅಂಕಗಳನ್ನು ನೀಡಲಾಗುತ್ತದೆ. ಇಬ್ಬರು ಫೀಲ್ಡ್‌ ಅಂಪೈರ್‌ ಮತ್ತು ಮೂರನೇ ಅಂಪೈರ್‌ ಈ ಅಂಕವನ್ನು ತಂಡಗಳಿಗೆ ನೀಡುತ್ತಾರೆ.

  • ರಾಜಸ್ತಾನ್ ರಾಯಲ್ಸ್ ಬಗ್ಗು ಬಡಿದ ಡೆಲ್ಲಿ ಪ್ಲೇ ಆಫ್‍ಗೆ ಎಂಟ್ರಿ

    ರಾಜಸ್ತಾನ್ ರಾಯಲ್ಸ್ ಬಗ್ಗು ಬಡಿದ ಡೆಲ್ಲಿ ಪ್ಲೇ ಆಫ್‍ಗೆ ಎಂಟ್ರಿ

    – ಡೆಲ್ಲಿ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ತಾನ್
    – ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆರಿದ ಡೆಲ್ಲಿ ಕ್ಯಾಪಿಟಲ್ಸ್

    ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ತಾನ್ ರಾಯಲ್ಸ್ ತಂಡವನ್ನು 33 ರನ್‍ಗಳ ಅಂತರದಲ್ಲಿ ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದೊಂದಿಗೆ ಪ್ಲೇ ಆಫ್ ಪ್ರವೇಶಿಸಿದೆ.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. 155 ರನ್‍ಗಳ ಸವಾಲು ಪಡೆದ ರಾಜಸ್ಥಾನ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಇದನ್ನೂ ಓದಿ: ಸಿಎಸ್‍ಕೆ vs ಆರ್​ಸಿಬಿ ಅಭಿಮಾನಿಗಳ ವಾರ್- ಧೋನಿ, ಕೊಹ್ಲಿ ತುಂಟಾಟ

    ಡೆಲ್ಲಿ ತಂಡದ ಆರಂಭಿಕರಾದ ಪೃಥ್ವಿ ಶಾ ಹಾಗೂ ಧವನ್‍ರನ್ನು ಬೇಗ ಔಟ್ ಮಾಡುವ ಮೂಲಕ ಆರಂಭಿಕ ಅಘಾತ ನೀಡಿತು. ಶಾ 12 ಎಸೆತಗಳಲ್ಲಿ 10 ರನ್, ಧವನ್ 8 ಎಸೆತಗಳಲ್ಲಿ 8 ರನ್‍ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು. ನಂತರ ಜೊತೆಯಾದ ನಾಯಕ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್‍ಗೆ 62 ರನ್‍ಗಳ ಜೊತೆಯಾಟವಾಡಿದರು.

    ಡೆಲ್ಲಿ ಕ್ಯಾಪಿಡಲ್ಸ್ ಪರ ಪಂತ್ 24, ಹಾಗೂ ಅಯ್ಯರ್ 43, ಹೆಟ್ಮಿಯರ್ 16 ಎಸೆತಗಳಲ್ಲಿ 5 ಬೌಂಡರಿ ಸಹಿತ ಬಿರುಸಿನ 28 ರನ್‍ಗಳಿಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್‍ಗಳಿಸಿತು. ರಾಜಸ್ತಾನ್ ಪರ ಮುಸ್ತಫಜುರ್ ರೆಹಮಾನ್ ಹಾಗೂ ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಪಡೆದರು. ಇದನ್ನೂ ಓದಿ: ಆರ್​ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಭರ್ಜರಿ ಜಯ

    157 ರನ್ ಟಾರ್ಗೆಟ್ ಬೆನ್ನತ್ತಿದ ರಾಜಸ್ತಾನ್ ರಾಯಲ್ಸ್, ಆರಂಭದಲ್ಲೇ ಡೆಲ್ಲಿ ಬೌಲರ್‍ಗಳನ್ನು ಎದುರಿಸಲಾಗದೆ ವಿಕೆಟ್‍ಗಳನ್ನು ಕಳೆದುಕೊಂಡಿತು. ಡೆಲ್ಲಿ ಪರ ಲಿವಿಂಗ್‍ಸ್ಟೊನ್ 1 ರನ್, ಜೈಸ್ವಾಲ್ 4 ಎಸೆತಗಳಲ್ಲಿ 5 ರನ್, ಮಿಲ್ಲರ್ 10 ಎಸೆತಗಳಲ್ಲಿ 7 ರನ್‍ಗಳಿಸಿದರು. ಮಹಿಪಾಲ್ ಲೊಮರ್ 24 ಎಸೆತಗಳಲ್ಲಿ 19 ರನ್‍ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.

    ಆರಂಭದಿಂದಲೂ ಶಿಸ್ತಿನ ದಾಳಿ ನಡೆಸಿದ ಡೆಲ್ಲಿ ಬೌಲರ್ಸ್, ರಾಜಸ್ತಾನವನ್ನು ರನ್‍ಗಳಿಸಲು ಪರಾದಡುವಂತೆ ಮಾಡಿದರು. ರಾಜಸ್ತಾನ್ ಪರ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ಹೊರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಸಂಜು 53 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 70 ರನ್‍ಗಳಿಸಿದರು. ಡೆಲ್ಲಿ ಪರ ಅನ್ರಿಚ್ ನಾಟ್ರ್ಜೆ 2 ವಿಕೆಟ್ ಅಶ್ವಿನ್ 1, ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಕಬಳಿಸಿದರು.

  • 5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    5ನೇ ಎಸೆತದಲ್ಲಿ ಸ್ಯಾಮ್ಸನ್ 1 ರನ್ ಓಡಿದ್ದರೆ ರಾಜಸ್ಥಾನಕ್ಕೆ ಗೆಲುವು – ಬಿಸಿ ಬಿಸಿ ಚರ್ಚೆ

    – ಸ್ಯಾಮ್ಸನ್ ನಿರ್ಧಾರ ಸರಿಯೇ?
    – 16.25 ಕೋಟಿ ನೀಡಿ ಮೋರಿಸ್ ಅವರನ್ನು ಖರೀದಿಸಿದ್ದು ಯಾಕೆ?

    ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ 20ನೇ ಓವರಿನ 5ನೇ ಎಸೆತಕ್ಕೆ ನಾಯಕ ಸಂಜು ಸ್ಯಾಮ್ಸನ್ ರನ್ ಓಡಿದ್ದರೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವು ಸಿಗುತ್ತಿತ್ತಾ ಈ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿ ಚರ್ಚೆ ಆಗುತ್ತಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು. ಕೊನೆಯ ಓವರಿನಲ್ಲಿ ರಾಜಸ್ಥಾನ ತಂಡದ ಗೆಲುವಿಗೆ 13 ರನ್‍ಗಳ ಅಗತ್ಯವಿತ್ತು. ಅರ್ಷ್‍ದೀಪ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಎರಡನೇ ಎಸೆತದಲ್ಲಿ ಸ್ಯಾಮ್ಸನ್ ಒಂದು ರನ್ ಓಡಿದರೆ ಮೂರನೇ ಎಸೆತದಲ್ಲಿ ಕ್ರೀಸ್ ಮೊರಿಸ್ ಒಂದು ರನ್ ಓಡಿದರು. 4ನೇ ಎಸೆತದಲ್ಲಿ ಸ್ಯಾಮ್ಸನ್ ಸಿಕ್ಸರ್ ಸಿಡಿಸಿದರು. ಕೊನೆಯ ಎರಡು ಎಸೆತದಲ್ಲಿ 5 ರನ್ ಬೇಕಿತ್ತು. 5ನೇ ಎಸೆತದಲ್ಲಿ ಯಾವುದೇ ರನ್ ಬಾರದ ಕಾರಣ 6ನೇ ಎಸೆತದಲ್ಲಿ 6 ರನ್ ಅಗತ್ಯವಾಗಿತ್ತು. ಸ್ಯಾಮ್ಸನ್ ಬಲವಾಗಿ ಹೊಡೆದರೂ ಬಾಲ್ ದೀಪಕ್ ಹೂಡಾ ಕೈ ಸೇರಿತು. ಪಂಜಾಬ್ ಕಿಂಗ್ಸ್ 4 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

    5ನೇ ಎಸೆತದಲ್ಲಿ ಏನಾಯ್ತು?
    ಸ್ಯಾಮ್ಸನ್ ಬಲವಾಗಿ ಹೊಡೆದ ಬಾಲ್ ವೈಡ್ ಲಾಂಗ್ ಆಫ್ ಕಡೆ ಹೋಗಿತ್ತು. ಬಾಲ್ ಹೋಗುತ್ತಿರುವುದನ್ನು ನೋಡಿದ ಕ್ರೀಸ್ ಮೊರಿಸ್ ಸ್ಟ್ರೈಕ್‍ನತ್ತ ಓಡಿದರು. ಆದರೆ ಸ್ಯಾಮ್ಸನ್ ರನ್ ಗಳಿಸುವ ಯಾವುದೇ ಉತ್ಸಾಹ ತೋರಿಸಲಿಲ್ಲ. ಹೀಗಾಗಿ ಅರ್ಧ ದೂರ ಸಾಗಿದ್ದ ಕ್ರೀಸ್ ಮೋರಿಸ್ ಮತ್ತೆ ನಾನ್ ಸ್ಟ್ರೈಕ್‍ನತ್ತ ಬಂದರು.

    ಚರ್ಚೆ ಏನು?
    ಒಂದು ವೇಳೆ ಸಿಂಗಲ್ ರನ್ ಓಡಿದ್ದರೂ ಒತ್ತಡ ಕಡಿಮೆ ಆಗುತ್ತಿತ್ತು. ಸಿಕ್ಸ್ ಹೊಡೆಯುವ ಅಗತ್ಯ ಇರಲಿಲ್ಲ. ಒಂದು ಬೌಂಡರಿ ಹೊಡೆದರೂ ರಾಜಸ್ಥಾನ ವಿನ್ ಆಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಕ್ರೀಸ್ ಮೋರಿಸ್ ಅವರು 2021ರಲ್ಲಿ ನಡೆದ ಹರಾಜಿನಲ್ಲಿ ದುಬಾರಿ ಆಟಗಾರ. ಬರೋಬ್ಬರಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ಅವರನ್ನು ಖರೀಸಿದಿದೆ. ಮೋರಿಸ್ ಬೌಲರ್ ಮಾತ್ರ ಅಲ್ಲ. ಆಲ್‍ರೌಂಡರ್ ಆಟಗಾರ. ಹೀಗಿರುವಾಗ ಒಂದು ರನ್ ಓಡಿದ್ದರೂ ಗೆಲ್ಲುವ ಅವಕಾಶ ಹೆಚ್ಚಿತ್ತು. ಸ್ಯಾಮ್ಸನ್ ಅವರಿಗಿದ್ದ ಅತಿಯಾದ ವಿಶ್ವಾಸ ಅವರಿಗೆ ಮುಳುವಾಯಿತು ಎಂದು ಟೀಕಿಸುತ್ತಿದ್ದಾರೆ.

    ಕೊನೆಯ ಎಸೆತವನ್ನು ಎದುರಿಸಲು ಕ್ರೀಸ್ ಮೋರಿಸ್ ಅವರಿಗೆ ಸ್ಯಾಮ್ಸನ್ ಅವಕಾಶ ನೀಡಬೇಕಿತ್ತು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಸ್ಯಾಮ್ಸನ್ ಅವರ ನಿರ್ಧಾರ ಸರಿಯಿತ್ತು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

    ಶತಕ ಸಿಡಿಸಿದ್ದ ಸ್ಯಾಮ್ಸನ್ ಅವರು 4ನೇ ಎಸೆತದಲ್ಲಿ ಸಿಕ್ಸ್ ಹೊಡೆದಿದ್ದರು. ಹೀಗಾಗಿ ಈ ಪಂದ್ಯವನ್ನು ಗೆಲ್ಲಿಸಲೇಬೇಕೆಂದು ಹಠ ಹಿಡಿದಿದ್ದರು. ಆದರೆ ಕೊನೆ ಎಸೆತವನ್ನು ಸರಿಯಾಗಿ ಜಡ್ಜ್ ಮಾಡದ ಕಾರಣ ಔಟಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಕ್ರೀಸ್ ಮೋರಿಸ್ ಅವರಿಗೆ ಅವಕಾಶ ನೀಡಿದ ವಿಚಾರ ಟ್ರೆಂಡಿಂಗ್ ಟಾಪಿಕ್ ಆಗಿದೆ. ಸ್ಯಾಮ್ಸನ್ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ್ ಮಾಡಿ.

  • ಸ್ಮಿತ್‌ಗೆ ಗೇಟ್‌ಪಾಸ್‌ ಸ್ಯಾಮನ್ಸ್‌ ಕ್ಯಾಪ್ಟನ್‌ – ಯಾವ ತಂಡದಿಂದ ಯಾರು ಔಟ್‌?

    ಸ್ಮಿತ್‌ಗೆ ಗೇಟ್‌ಪಾಸ್‌ ಸ್ಯಾಮನ್ಸ್‌ ಕ್ಯಾಪ್ಟನ್‌ – ಯಾವ ತಂಡದಿಂದ ಯಾರು ಔಟ್‌?

    – ಚೆನ್ನೈನಿಂದ ಹರ್ಭಜನ್‌, ಮುಂಬೈನಿಂದ ಮಾಲಿಂಗ ಔಟ್‌
    – ಫಿಂಚ್‌, ಮೋರಿಸ್‌ರನ್ನು ಕೈ ಬಿಟ್ಟ ಆರ್‌ಸಿಬಿ

    ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಸಂಜು ಸ್ಯಾಮ್ಸನ್‌ ಮುನ್ನಡೆಸಲಿದ್ದಾರೆ.

    ಭಾರತದ ವಿರುದ್ಧದ ಟೆಸ್ಟ್‌ ವೇಳೆ ಕಳ್ಳಾಟವಾಡಿ ಟೀಕೆಗೆ ಗುರಿಯಾಗಿದ್ದ ಸ್ವೀವ್‌ ಸ್ಮಿತ್‌ ಅವರನ್ನು ತಂಡದಿಂದಲೇ ಕೈಬಿಟ್ಟು ಸಂಜು ಸಾಮ್ಸನ್‌ಗೆ ರಾಜಸ್ಥಾನ ತಂಡ ಹೊಣೆಗಾರಿಕೆ ನೀಡಿದೆ. ತಂಡದ ನಿರ್ದೇಶಕರಾಗಿ ಶ್ರೀಲಂಕಾದ ಮಾಜಿ ನಾಯಕ ಸಂಗಕ್ಕಾರ ಅವರನ್ನು ನೇಮಿಸಲಾಗಿದೆ.

    ಐಪಿಎಲ್‌ನಲ್ಲಿ ಉಳಿಸಿಕೊಳ್ಳಲಿರುವ ಆಟಗಾರರ ವಿವರವನ್ನು ಇಂದು ತಂಡಗಳು ಪ್ರಕಟಿಸಿವೆ. ಈ ಪೈಕಿ ಮುಂಬೈ ತಂಡ ಲಸಿತ್‌ ಮಾಲಿಂಗ, ಚೆನ್ನೈ ತಂಡ ಹರ್ಭಜನ್‌ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ.

    ಎಲ್ಲ 8 ತಂಡಗಳು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಬೇಕಿದ್ದು, ತಂಡದಿಂದ ಕೈ ಬಿಟ್ಟ ಆಟಗಾರರ ಹರಾಜು ಪ್ರಕ್ರಿಯೆ ಫೆ.11 ರಂದು ನಡೆಯಲಿದೆ.

    ಯಾವ ತಂಡದಿಂದ ಯಾರು ಔಟ್‌?
    ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು: ಕ್ರಿಸ್ ಮೋರಿಸ್, ಆರನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್

    ಡೆಲ್ಲಿ ಕ್ಯಾಪಿಟಲ್ಸ್‌: ಕೀಮೋ ಪಾಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕ್ಯಾರಿ, ಜೇಸನ್ ರಾಯ್, ಮೋಹಿತ್ ಶರ್ಮಾ, ತುಷಾರ್ ದೇಶ್‌ಪಾಂಡೆ

    ಕಿಂಗ್ಸ್‌ ಇಲೆವನ್‌ ಪಂಜಾಬ್‌: ಗ್ಲೆನ್ ಮ್ಯಾಕ್ಸ್‌ವೆಲ್, ಕರುಣ್ ನಾಯರ್, ಹರ್ದಸ್ ವಿಲ್ಜೋಯೆನ್, ಜಗದೀಶ್‌ ಸುಚಿತ್, ಮುಜೀಬ್ ಉರ್ ರಹಮಾನ್, ಶೆಲ್ಡನ್ ಕಾಟ್ರೆಲ್, ಜಿಮ್ಮಿ ನೀಶಮ್, ಕೆ. ಗೌತಮ್, ತಜಿಂದರ್ ಸಿಂಗ್.

    ಸನ್‌ ರೈಸರ್ಸ್‌ ಹೈದರಾಬಾದ್‌: ಸಂಜಯ್ ಯಾದವ್, ಬಿ ಸಂದೀಪ್, ಬಿಲ್ಲಿ ಸ್ಟ್ಯಾನ್ಲೇಕ್, ಫ್ಯಾಬಿಯನ್ ಅಲೆನ್, ಯರ್ರಾ ಪೃಥ್ವಿರಾಜ್

    ಚೆನ್ನೈ ಸೂಪರ್‌ ಕಿಂಗ್ಸ್‌: ಹರ್ಭಜನ್‌ ಸಿಂಗ್‌, ಮುರಳಿ ವಿಜಯ್‌, ಕೇದಾರ್‌ ಜಾಧವ್‌, ಪಿಯೂಶ್‌ ಚಾವ್ಲಾ, ಶೇನ್‌ ವಾಟ್ಸನ್‌, ಮೋನು ಸಿಂಗ್‌

    ರಾಜಸ್ಥಾನ ರಾಯಲ್ಸ್‌: ಸ್ವೀವ್‌ ಸ್ಮಿತ್‌, ಅಂಕಿತ್‌ ರಜಪೂತ್‌, ಒಶಾನೆ ಥಾಮಸ್‌, ಆಕಾಶ್‌ ಸಿಂಗ್‌, ವರುಣ್‌ ಅರುಣ್‌, ಟಾಮ್‌ ಕರ್ರನ್‌, ಅನಿರುದ್ಧ ಜೋಶಿ, ಶಶಾಂಕ್‌ ಸಿಂಗ್‌

    ಕೋಲ್ಕತ್ತಾ ನೈಟ್‌ ರೈಡರ್ಸ್‌: ಎಂ ಸಿದ್ಧಿಕಿ, ನಿಖಿಲ್‌ ನಾಯ್ಕ್‌, ಸಿದ್ದೇಶ್‌ ಲಾಡ್‌, ಕ್ರೀಸ್‌ ಗ್ರೀನ್‌, ಟಾಮ್‌ ಬಾಂಟನ್‌

    ಮುಂಬೈ ಇಂಡಿಯನ್ಸ್‌: ಲಸಿತ್ ಮಾಲಿಂಗ, ಮಿಚ್ ಮೆಕ್‌ಕ್ಲೆನಾಘನ್, ಜೇಮ್ಸ್ ಪ್ಯಾಟಿನ್ಸನ್, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ಪ್ರಿನ್ಸ್ ಬಲ್ವಂತ್ ರೇ, ದಿಗ್ವಿಜಯ್‌ ದೇಶ್‌ಮುಖ್‌.

  • 82 ಬಾಲಿಗೆ 152 ರನ್ ಸ್ಟೋಕ್ಸ್, ಸ್ಯಾಮ್ಸನ್ ಜೊತೆಯಾಟಕ್ಕೆ ತಲೆಬಾಗಿದ ಮುಂಬೈ

    82 ಬಾಲಿಗೆ 152 ರನ್ ಸ್ಟೋಕ್ಸ್, ಸ್ಯಾಮ್ಸನ್ ಜೊತೆಯಾಟಕ್ಕೆ ತಲೆಬಾಗಿದ ಮುಂಬೈ

    – ಐಪಿಎಲ್‍ನಲ್ಲಿ ಸ್ಟೋಕ್ಸ್ ಎರಡನೇ ಶತಕ

    ಅಬುಧಾಬಿ: ಇಂದು ನಡೆದ ಸಂಡೇ ಧಮಾಕದ ಎರಡನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಆಡಿದ ರಾಜಸ್ಥಾನ್ ರಾಯಲ್ಸ್ ತಂಡ ಎಂಟು ವಿಕೆಟ್‍ಗಳ ಅಂತರದಲ್ಲಿ ಗೆದ್ದು ಬೀಗಿದೆ.

    ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಮೊದಲು ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಉತ್ತಮ ಜೊತೆಯಾಟ ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್‍ನಿಂದ ನಿಗದಿತ 20 ಓವರಿನಲ್ಲಿ ರಾಜಸ್ಥಾನ್ ರಾಯಲ್ಸ್ ಗೆ 195 ರನ್‍ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿ ರಾಜಸ್ಥಾನ್ ತಂಡ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಅವರ ಶತಕ ಜೊತೆಯಾಟದಿಂದ ಇನ್ನೂ 10 ಬಾಲ್ ಉಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

    ಸ್ಟೋಕ್ಸ್ ಸ್ಯಾಮ್ಸನ್ ಸ್ಫೋಟಕ ಆಟ
    ಐದು ಓವರಿಗೆ 45 ರನ್‍ಗಳಿಸಿ ಎರಡು ವಿಕೆಟ್ ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ರಾಜಸ್ಥಾನವನ್ನು ಗೆಲುವಿನ ದಡ ಸೇರಿಸಿದರು. ಈ ವೇಳೆ ಉತ್ತಮ ಜೊತೆಯಾಟವಾಡಿದ ಅವರು, 82 ಬಾಲಿಗೆ 152 ರನ್‍ಗಳ ಜೊತೆಯಾಟವಾಡಿದರು. ಇದರಲ್ಲಿ ಉತ್ತಮವಾಗಿ ಆಡಿದ ಸ್ಟೋಕ್ಸ್ ಅವರು 60 ಬಾಲಿಗೆ 107 ರನ್ ಸಿಡಿಸಿ ಐಪಿಎಲ್‍ನಲ್ಲಿ ಎರಡನೇ ಶತಕ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಂಜು 31 ಬಾಲಿಗೆ 54 ರನ್ ಸಿಡಿಸಿದರು.

    ಮುಂಬೈ ಇಂಡಿಯನ್ಸ್ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮುಂಬೈ ವೇಗಿ ಜೇಮ್ಸ್ ಪ್ಯಾಟಿನ್ಸನ್ ಆರಂಭಿಕ ಆಘಾತ ನೀಡಿದರು. ಎರಡನೇ ಓವರಿನಲ್ಲೇ ಆರಂಭಿಕ ರಾಬಿನ್ ಉತ್ತಪ್ಪ ಅವರನ್ನು ಔಟ್ ಮಾಡಿದರು. ನಂತರ ನಾಯಕ ಸ್ಟೀವನ್ ಸ್ಮಿತ್ ಮತ್ತು ಬೆನ್ ಸ್ಟೋಕ್ಸ್ ಉತ್ತಮ ಆಟಕ್ಕೆ ಮುಂದಾದರು. ಆದರೆ ಮತ್ತೆ ದಾಳಿಗಿಳಿದ ಜೇಮ್ಸ್ ಪ್ಯಾಟಿನ್ಸನ್ ಅವರು 11 ರನ್ ಗಳಿಸಿದ್ದ ಸ್ಮಿತ್ ಅವರನ್ನು ಬೌಲ್ಡ್ ಮಾಡಿದರು.

    ನಂತರ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ 33 ಬಾಲಿಗೆ ಅರ್ಧಶತಕ ಜೊತೆಯಾಟವಾಡಿದರು. ಇದರ ಬೆನ್ನಲ್ಲೆ ಬೆನ್ ಸ್ಟೋಕ್ಸ್ 28 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರವೂ ಕೂಡ ಔಟ್ ಆಗದೆ ಬ್ಯಾಟ್ ಬೀಸಿದ ಈ ಜೋಡಿ 57 ಬಾಲಿಗೆ ಶತಕ ಜೊತೆಯಾಟವಾಡಿತು. ಈ ನಡುವೆ ಕೇವಲ 27 ಬಾಲಿಗೆ ಸಂಜು ಸ್ಯಾಮ್ಸನ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು.

  • ಓರ್ವನಿಗಾಗಿ ರಾಜಸ್ಥಾನ ತಂಡವನ್ನು ಬೆಂಬಲಿಸ್ತಿದ್ದೇನೆ: ಸ್ಮೃತಿ ಮಂದಾನ

    ಓರ್ವನಿಗಾಗಿ ರಾಜಸ್ಥಾನ ತಂಡವನ್ನು ಬೆಂಬಲಿಸ್ತಿದ್ದೇನೆ: ಸ್ಮೃತಿ ಮಂದಾನ

    ನವದೆಹಲಿ: ಭಾರತದ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನಅವರು ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಹೆಸರಿಸಿದ್ದು, ಓರ್ವ ಬ್ಯಾಟ್ಸ್ ಮ್ಯಾನಿಗಾಗಿ ಆ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ರಾಷ್ಟ್ರೀಯ ಮಾಧ್ಯಮದ ಜೊತೆಗೆ ಮಾತನಾಡಿರುವ ಸ್ಮೃತಿ ಮಂದಾನ, ರಾಜಸ್ಥಾನ್ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಸಂಜು ಸಮ್ಸನ್ ಅವರಿಗಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಸಂಜು ಸಮ್ಸನ್ ಅವರು ಉತ್ತಮವಾಗಿ ಆಡುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

    ಸಂಜು ಸಮ್ಸನ್ ವಿಚಾರವಾಗಿ ಮಾತನಾಡಿರುವ ಸ್ಮೃತಿ ಮಂದಾನ, ಓರ್ವ ಯುವ ಆಟಗಾರ ಸ್ಫೋಟಕವಾಗಿ ಬ್ಯಾಟ್ ಬೀಸುವುದನ್ನು ನೋಡಲು ಬಹಳ ಸ್ಫೂರ್ತಿದಾಯಕವಾಗಿದೆ. ಸಂಜು ಸಮ್ಸನ್ ಅವರು ಬ್ಯಾಟ್ ಬೀಸುವ ಶೈಲಿ ನೋಡಿ ನಾನು ಅವರಿಗೆ ದೊಡ್ಡ ಅಭಿಮಾನಿಯಾಗಿದ್ದೇನೆ. ಆತನಿಗಾಗಿಯೇ ನಾನು ರಾಜಸ್ಥಾನ್ ರಾಯಲ್ಸ್ ತಂಡವನ್ನು ಬೆಂಬಲಿಸಲು ಆರಂಭಿಸಿದ್ದೇನೆ. ಅವರ ಬ್ಯಾಟಿಂಗ್ ನೆಕ್ಟ್ ಲೆವೆಲಿನಲ್ಲಿದೆ ಆತನಿಂದ ನಾನು ಕಲಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

    ನಾನು ಐಪಿಎಲ್‍ನಲ್ಲಿ ಎಲ್ಲ ಪಂದ್ಯಗಳನ್ನು ನೋಡುತ್ತೇನೆ. ಯಾವುದೋ ಒಂದೇ ಒಂದು ನಿರ್ದಿಷ್ಟ ತಂಡವನ್ನು ನಾನು ಬೆಂಬಲಿಸುವುದಿಲ್ಲ. ನಾನು ಎಲ್ಲ ತಂಡವನ್ನು ಬೆಂಬಲಿಸುತ್ತೇನೆ. ಎಲ್ಲ ತಂಡದ ಆಟಗಾರರನ್ನು ಇಷ್ಟಪಡುತ್ತೇನೆ. ನನಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ ಮತ್ತು ಎಂಎಸ್ ಧೋನಿ ಎಂದರೆ ಇಷ್ಟ. ಹೀಗಾಗಿ ಎಲ್ಲರ ಪಂದ್ಯವನ್ನು ನೋಡುತ್ತೇನೆ. ಎಲ್ಲರನ್ನೂ ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

    ಸ್ಮೃತಿ ಮಂದಾನ ಅವರು ಮಹಿಳಾ ಐಪಿಎಲ್ ಆಡಲು ಸಿದ್ಧವಾಗಿದ್ದಾರೆ. ಪ್ರಪಂಚದ ಉನ್ನತ ಮಟ್ಟದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಜೊತೆ ಯುಎಇನಲ್ಲಿ ಟಿ-20 ಆಡಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಬಿಸಿಸಿಐ ಮಹಿಳಾ ಐಪಿಎಲ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ ಮಹಿಳಾ ಐಪಿಎಲ್, ನವೆಂಬರ್ 4ರಿಂದ 9ರವರೆಗೆ ನಡೆಯಲಿದೆ ಎನ್ನಲಾಗಿದೆ. ಮೂರು ಮಹಿಳಾ ತಂಡಗಳು ನಾಲ್ಕು ಪಂದ್ಯಗಳನ್ನು ಆಡಲಿವೆ ಎಂದು ಹೇಳಲಾಗಿದೆ.

    ಈ ಬಾರಿಯ ಐಪಿಎಲ್‍ನಲ್ಲಿ ಸಂಜು ಸಮ್ಸನ್ ಅವರು ಉತ್ತಮವಾಗಿ ಆಡಿದ್ದಾರೆ. ತಾವು ರಾಜಸ್ಥಾನ್ ರಾಯಲ್ಸ್ ಪರವಾಗಿ ಆಡಿರುವ ಮೂರು ಪಂದ್ಯಗಲ್ಲಿ ಎರಡು ಭರ್ಜರಿ ಅರ್ಧಶತಕದ ಸಮೇತ 167 ರನ್ ಗಳಿಸಿದ್ದಾರೆ. ಜೊತೆಗೆ 16 ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 42 ಬಾಲಿಗೆ 85 ರನ್ ಸಿಡಿಸಿರುವುದು ಈ ಬಾರಿಯ ಐಪಿಎಲ್‍ನ ಗರಿಷ್ಠ ಮೊತ್ತವಾಗಿದೆ.

  • ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಬೆಂಗಳೂರು: ಪ್ರತಿ ವರ್ಷ ಐಪಿಎಲ್ ಎಂದರೆ ಅಲ್ಲಿ ಹೆಚ್ಚು ಮಿಂಚುತ್ತಿದ್ದವರು ವಿದೇಶಿ ಆಟಗಾರರು. ಆದರೆ ಈ ಬಾರಿಯ ಐಪಿಎಲ್‍ನಲ್ಲಿ ಬದಲಾವಣೆ ಎಂಬಂತೆ ನಮ್ಮ ಭಾರತದ ಯುವ ಆಟಗಾರರ ಆರಂಭದಲ್ಲೇ ಅಬ್ಬರಿಸುತ್ತಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ವಿದೇಶಿ ಆಟಗಾರರು ಮಂಕಾಗಿದ್ದಾರೆ. ಆದರೆ ನಮ್ಮ ಭಾರತದ ಯುವ ಆಟಗಾರರು ಐಪಿಎಲ್ ಆರಂಭದಲ್ಲೇ ರೊಚ್ಚಿಗೆಂದು ಆಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲ. ಇಂಡಿಯನ್ಸ್ ಪ್ಲೇಯರ್ ಲೀಗ್ ಎಂದು ಸಾಮಾಜಿಕ ಜಾಲತಾಣದಲ್ಲಿ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಬದಲಾವಣೆಗೆ ಕಾರಣ ದ್ರಾವಿಡ್ ಎಂಬ ಅಭಿಪ್ರಾಯ ಕೇಳಿಬಂದಿದೆ.

    ಗುರು ದ್ರಾವಿಡ್ ಗರಡಿಯಲ್ಲಿ ಪಳಗಿದ ಹುಡುಗರು
    ಇಂದು ಐಪಿಎಲ್‍ನಲ್ಲಿ ಭಾರತದ ಹೊಸ ಪ್ರತಿಭೆಗಳು ಮಿಂಚುತ್ತಿವೆ. ಈ ಮೂಲಕ ಭಾರತದ ಮುಂದಿನ ಕ್ರಿಕೆಟ್ ಭವಿಷ್ಯ ಉತ್ತಮ ಆಟಗಾರರ ಕೈಲಿದೆ ಎಂಬ ಸಂದೇಶ ಜಗತ್ತಿಗೆ ರವಾನೆಯಾಗುತ್ತಿದೆ. ಇದಕ್ಕೆ ಒಂದು ಕಡೆಯಿಂದ ಭಾರತ ಮಾಜಿ ಆಟಗಾರ ಮತ್ತು ಇಂಡಿಯನ್ ಅಂಡರ್-19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರೇ ಕಾರಣ ಎಂಬುದು ಹಲವರ ವಾದ. ಅವರ ಗರಡಿಯಲ್ಲಿ ಪಳಗಿದ ಹಲವಾರು ಯುವ ಆಟಗಾರರು ಇಂದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಿದ್ದಾರೆ.

    ಈ ಬಾರಿಯ ಐಪಿಎಲ್‍ನಲ್ಲಿ ಆರಂಭದಲ್ಲೇ ಯುವ ಬ್ಯಾಟ್ಸ್ ಮ್ಯಾನ್‍ಗಳಾದ ಆರ್‍ಸಿಬಿ ತಂಡ ದೇವದತ್ ಪಡಿಕಲ್, ರಾಜಸ್ಥಾನ್ ತಂಡದ ಸಂಜು ಸಮ್ಸನ್, ಕೋಲ್ಕತ್ತಾ ತಂಡದ ಶುಭಮನ್ ಗಿನ್, ಡೆಲ್ಲಿ ತಂಡದ ಪೃಥ್ವಿ ಶಾ ಮತ್ತು ಮುಂಬೈ ತಂಡದ ಇಶಾನ್ ಕಿಶಾನ್ ಮಿಂಚುತ್ತಿದ್ದಾರೆ. ಅಂತೆಯೇ ಬೌಲಿಂಗ್‍ನಲ್ಲಿ ಕೋಲ್ಕತ್ತಾ ತಂಡದ ಶಿವಮ್ ಮಾವಿ, ಕಮಲೇಶ್ ನಾಗರಕೋಟಿ ಮತ್ತು ಹೈದರಾಬಾದ್ ತಂಡದ ಟಿ ನಟರಾಜನ್ ಅವರು ಐಪಿಎಲ್‍ನಲ್ಲಿ ಮಿಂಚಿ ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಿದ್ದಾರೆ. ಈ ಎಲ್ಲ ಆಟಗಾರರು ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿದ ಹುಡುಗರು.

    ದೇವದತ್ ಪಡಿಕಲ್, ಶುಭಮನ್ ಗಿನ್, ಪೃಥ್ವಿ ಶಾ ಮತ್ತು ಇಶಾನ್ ಕಿಶಾನ್ ಅವರು ಭಾರತದ ಅಂಡರ್-19 ತಂಡದಲ್ಲಿ ಮಿಂಚಿದ್ದವರು. ಅಂದು ಅವರಿಗೆ ತರಬೇತಿ ನೀಡಿದ್ದು, ಇದೇ ಲೆಜೆಂಡ್ ದ್ರಾವಿಡ್ ಅವರು. ಜೊತೆಗೆ ಬೌಲರ್ ಆಗಿ ಮಿಂಚುತ್ತಿರುವ ಮಾವಿ, ನಾಗರಕೋಟಿ ಮತ್ತು ಟಿ ನಟರಾಜನ್ ಅವರು ಕೂಡ 2018ರ ಅಂಡರ್-19 ತಂಡದಲ್ಲಿ ಇದ್ದವರು. ಈ ಯುವ ಬೌಲರ್ ಗಳಿಗೂ ಕೂಡ ರಾಹುಲ್ ಅವರ ಸಲಹೆ ನೀಡಿ ಉತ್ತಮ ಆಟಗಾರರನ್ನಾಗಿ ಮಾಡಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ಬುಧವಾರ ನಡೆದ ಕೋಲ್ಕತ್ತಾ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದ ಕಮಲೇಶ್ ನಾಗರಕೋಟಿ ಪಂದ್ಯ ಮುಗಿದ ನಂತರ ಮಾತನಾಡಿ, ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಹೇಳಿದ್ದರು. ಜೊತೆಗೆ ಅವರ ತರಬೇತಿಯಲ್ಲಿ ಬಹಳ ಕಲಿತ್ತಿದ್ದೇವೆ ಎಂದು ತಿಳಿಸಿದ್ದರು. ಈ ಹಿಂದೆಯೇ ಕಮಲೇಶ್ ನಾಗರಕೋಟಿ ಬಗ್ಗೆ ಮಾತನಾಡಿದ್ದ ದ್ರಾವಿಡ್ ಅವರು, ಕಮಲೇಶ್ ಓರ್ವ ಉತ್ತಮ ಬೌಲರ್ ಮತ್ತು ಫೀಲ್ಡರ್. ಭಾರತಕ್ಕೆ ಈತ ಉತ್ತಮ ಆಟಗಾರನಾಗುತ್ತಾರೆ ಎಂದು ಹೇಳಿದ್ದರು.

    ಅಂತಯೇ ಈ ಹಿಂದೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ಟಿ ನಟರಾಜನ್ ಅವರು, ಭಾರತ-ಎ ತಂಡ ಸೌತ್ ಆಫ್ರಿಕಾಗೆ ಟೂರ್ ಹೋದಾಗ ದ್ರಾವಿಡ್ ಅವರು ನನಗೆ ಉತ್ತಮ ಸಲಹೆ ನೀಡಿದ್ದನ್ನು ನೆನಪಿಸಕೊಂಡಿದ್ದರು. ಇಂದು ಐಪಿಎಲ್‍ನಲ್ಲಿ ಸಿಕ್ಸರ್ ಸಿಡಿಸಿ ಮಿಂಚುತ್ತಿರುವ ಸಂಜು ಸಮ್ಸನ್ ಕೂಡ ಡ್ರಾವಿಡ್ ನನ್ನ ಗುರುಗಳಾದ ದ್ರಾವಿಡ್ ಅವರು ರಾಜಸ್ಥಾನಕ್ಕೆ ಮೆಂಟರ್ ಆಗಿದ್ದ ಸಮಯದಲ್ಲಿ ನನಗೆ ಉತ್ತಮವಾಗಿ ತರಬೇತಿ ನೀಡಿದ್ದರು ಎಂದು ಹೇಳಿಕೊಂಡಿದ್ದರು.

    ಈ ಹಿಂದೆ ಒಂದು ಬಾರಿ ಭಾರತದ ಮುಖ್ಯ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ತೀರ್ಮಾನ ಮಾಡಿತ್ತು. ಆದರೆ ಈ ಹುದ್ದೆಯನ್ನು ತಿರಸ್ಕರಿಸಿದ್ದ ದ್ರಾವಿಡ್ ಅವರು, ಅಂದು ಭಾರತದ-ಎ ತಂಡಕ್ಕೆ ಕೋಚ್ ಆಗಿದ್ದರು. ಇಂದು ಅವರ ಪರಿಶ್ರಮದ ಫಲ ಎಂಬಂತೆ ಅವರ ಗರಡಿಯಲ್ಲಿ ಪಳಗಿದ ಹುಡುಗರು ಐಪಿಎಲ್‍ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಜೊತೆಗೆ ಬೌಲಿಂಗ್‍ನಲ್ಲೂ ಎಲ್ಲರ ಗಮನ ಸೆಳೆಯುತ್ತಿದ್ದಾರೆ.