Tag: Sanjana Galrani

  • ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ

    ನನ್ಗೆ ಮಾತ್ರ ಅಲ್ಲ, ರಾಹುಲ್ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ: ಸಂಜನಾ ಸ್ಫೋಟಕ ಹೇಳಿಕೆ

    ಬೆಂಗಳೂರು: ಸಿಸಿಬಿ ವಶದಲ್ಲಿರುವ ರಾಹುಲ್ ನನಗೆ ಮಾತ್ರವಲ್ಲ ಸಾಕಷ್ಟು ಸಿನಿಮಾ ಸ್ಟಾರ್ ಗಳಿಗೆ ಪರಿಚಯ ಇದ್ದಾರೆ ಎಂದು ನಟಿ ಸಂಜನಾ ಗಲ್ರಾನಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಟಿ ಸಂಜನಾಳ ಅಪ್ತ ರಾಹುಲ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಜನಾ, ಮೂರು-ನಾಲ್ಕು ವರ್ಷಗಳಿಂದ ರಾಹುಲ್ ನನಗೆ ಪರಿಚಯ. ನನಗೆ ಮಾತ್ರ ಅಲ್ಲ ಸಾಕಷ್ಟು ಸಿನಿಮಾ ಸ್ಟಾರ್‌ಗಳಿಗೆ ಪರಿಚಯ ಇದ್ದಾರೆ. ಆಲ್ ಮೋಸ್ಟ್ ಇಡೀ ಬೆಂಗಳೂರಿಗೆ ರಾಹುಲ್ ಪರಿಚಯ ಎಂದರು.

    ರಾಹುಲ್ ತುಂಬಾ ಒಳ್ಳೆಯ ಹುಡುಗ, ಅವನು ರಿಯಲ್ ಎಸ್ಟೇಟ್ ಮಾಡುತ್ತಾನೆ. ಜೇಕರ್ಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ರಾಹುಲ್ ಸಣ್ಣ ಪಾತ್ರ ಮಾಡಿದ್ದಾನೆ. ರಾಹುಲ್‍ನನ್ನು ನಾನು ರಾಖೀ ಭಾಯ್ ಅಂತಾನೇ ಕರೆಯುತ್ತೇನೆ. ನಾವು ತುಂಬಾ ಕ್ಲೋಸ್ ಫ್ರೆಂಡ್ ಅವನು ನನ್ನ ರಾಖೀ ಅಣ್ಣ. ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಂದ ಹೊರಗಡೆ ಬರುತ್ತಾನೆ ಎಂದು ಸಂಜನಾ ತಿಳಿಸಿದ್ದಾರೆ. ಇದನ್ನು ಓದಿ: ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    ಪೊಲೀಸರ ಮೇಲೆ ನನಗೆ ನಂಬಿಕೆ ಇದೆ, ನಾನು ತನಿಖೆಗೆ ಸಹಕರಿಸುತ್ತೇನೆ. ನಾನು ಬೆಂಗಳೂರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಕಳೆದ ಡಿಸೆಂಬರ್ ಆದಮೇಲೆ ನಾನು ಪಾರ್ಟಿಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ನಾನು ಅಟೆಂಡ್ ಆಗಿರೊ ಯಾವುದೇ ಪಾರ್ಟಿಗಳಲ್ಲೂ ಡ್ರಗ್ಸ್ ಇರಲಿಲ್ಲ. ಕ್ರಿಸ್ ಮಸ್ ಪಾರ್ಟಿ ಮಾಡಿದ್ದೆ ಲಾಸ್ಟ್ ನಾನು ಯಾವುದೇ ಪಾರ್ಟಿ ಮಾಡಿಲ್ಲ. ನನ್ನ ಗ್ರಹಚಾರ ನಾನು ಅಂದು ಆ ಜಾಗಕ್ಕೆ ಹೋಗಬೇಕಾಗಿ ಬಂತು ಎಂದು ಡ್ರಗ್ಸ್ ಆರೋಪವನ್ನು ಸಂಜನಾ ತಳ್ಳಿ ಹಾಕಿದ್ದಾರೆ.

  • ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ: ಸಂಜನಾ

    – ಪ್ರಶಾಂತ್ ಸಂಬರಗಿ ವಿರುದ್ಧ ಕಿಡಿ

    ಬೆಂಗಳೂರು: ಹೀರೋಗಳ ಬಳಿ 50 ಕಾರು ಇದ್ದರೂ ಯಾರೂ ಪ್ರಶ್ನೆ ಮಾಡಲ್ಲ. ಆದರೆ ನಾಯಕಿಯರ ಬಳಿ ಎರಡು ಕಾರು ಇದ್ರೆ ಪ್ರಶ್ನೆ ಮಾಡುತ್ತಾರೆ ಎಂದು ನಟಿ ಸಂಜನಾ ಗಲ್ರಾನಿ ಅವರು ಹೇಳಿದ್ದಾರೆ.

    ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಕೇಸಿನಲ್ಲಿ ಸಂಜನಾ ಅವರ ಹೆಸರು ಕೇಳಿ ಬರುತ್ತಿದೆ. ಈ ವಿಚಾರವಾಗಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು 16 ವರ್ಷದಿಂದ ದುಡಿದ ದುಡಿಮೆಯಲ್ಲಿ ಇಷ್ಟೆಲ್ಲಾ ಸಂಪಾದನೆ ಮಾಡಿದ್ದೇನೆ. ನನಗೆ ಕಣ್ಣು ದೃಷ್ಟಿ ಆಗಿರಬೇಕು. ಅದಕ್ಕೆ ಎಲ್ಲ ವಿದಾದ ನನ್ನನ್ನು ಸುತ್ತಿಕೊಳ್ಳುತ್ತಿದೆ. ಆ ದೃಷ್ಟಿ ನಿವಾರಣೆಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ ಎಂದು ಹೇಳಿದರು.

    ಇದೇ ವೇಳೆ ಪ್ರಶಾಂತ್ ಸಂಬರಗಿ ಬಗ್ಗೆ ಗರಂ ಆದ ಸಂಜನಾ, ನನ್ನ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಪ್ರಸಾಂತ್ ಸಂಬರಗಿ ಯಾರು? ನಾನು ಬೀದಿ ನಾಯಿಗೆ ಕೊಡುವಷ್ಟು ಬೆಲೆಯನ್ನು ಅವನಿಗೆ ಕೊಡುವುದಿಲ್ಲ. ನಾನು ಐವತ್ತಕ್ಕೂ ಹೆಚ್ಚು ಸಿನಿಮಾ ಮಾಡಿದ್ದೇನೆ. ಅದೆಲ್ಲಾ ಅವನ ಕಣ್ಣಿಗೆ ಕಾಣಿಸುವುದಿಲ್ವಾ? ಪ್ರಶಾಂತ್ ಸಂಬರಗಿ ಓರ್ವ ಹಂದಿ ಹಂದಿ. ಗಂಧದ ಗುಡಿ ಹೆಸರನ್ನು ಹಾಳು ಮಾಡುತ್ತಿದ್ದಾನೆ ಎಂದು ಕಿಡಿಕಾಡಿದರು.

    ನಾನು 50ಕ್ಕೂ ಸಿನಿಮಾಗಳನ್ನು ಮಾಡಿದ್ದೇನೆ. ಜೊತೆಗೆ ನಾನು ಪಂಚ ಭಾಷಾ ತಾರೆ. 16 ವರ್ಷಗಳ ನನ್ನ ಸಿನಿಮಾ ಜರ್ನಿಯಲ್ಲಿ ಇದನ್ನೆಲ್ಲಾ ಸಂಪಾದನೆ ಮಾಡಿದ್ದೇನೆ. ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್, ಪವನ್ ಕಲ್ಯಾಣ್, ದರ್ಶನ್, ಸುದೀಪ್, ಶಿವಣ್ಣ ಜೊತೆಗೆ ಸಿನಿಮಾ ಮಾಡಿದ್ದೇನೆ. ನೀವು ಹೀರೋಗಳ ಬಳಿ 50 ಕಾರು ಇದ್ದರೂ ಪ್ರಶ್ನೆ ಮಾಡಲ್ಲ. ಆದರೆ ನಾಯಕಿಯರ ಬಳಿ ಎರಡು ಕಾರು ಇದ್ರೆ ಪ್ರಶ್ನೆ ಮಾಡುತ್ತಾರೆ ಎಂದು ಸಂಜನಾ ಹೇಳಿದ್ದಾರೆ.

  • ವಿಚಾರಣೆ, ನೋಟಿಸ್ ನಾಟಕವಾಡ್ಬೇಡಿ, ದಾಖಲೆಗಳಿದ್ದರೆ ನಟಿಯರನ್ನು ಬಂಧಿಸಿ- ಮುತಾಲಿಕ್ ಕಿಡಿ

    ವಿಚಾರಣೆ, ನೋಟಿಸ್ ನಾಟಕವಾಡ್ಬೇಡಿ, ದಾಖಲೆಗಳಿದ್ದರೆ ನಟಿಯರನ್ನು ಬಂಧಿಸಿ- ಮುತಾಲಿಕ್ ಕಿಡಿ

    – ರಾಜಕಾರಣಿಗಳು ಪೊಲೀಸರ ಕೈ ಕಟ್ಟಿ ಹಾಕಿದ್ದಾರೆ

    ತುಮಕೂರು: ವಿಚಾರಣೆ, ನೋಟಿಸ್ ಎಂದು ಕಾಲಹರಣ ಮಾಡುವ ನಾಟಕ ಮಾಡಬೇಡಿ. ದಾಖಲೆಗಳಿದ್ದರೆ ಮುಲಾಜಿಲ್ಲದೆ ನಟಿಯರನ್ನು ಬಂಧಿಸಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ವಿಚಾರಣೆ, ನೋಟಿಸ್ ನೀಡುತ್ತೇವೆಂದು ನಾಟಕ ಆಡುತ್ತೀರಾ, ಬೆಂಕಿ ಇದ್ದಾಗಲೇ ಹೊಗೆ ಬರೋದು. ನಿಮ್ಮ ಬಳಿ ದಾಖಲೆಗಳಿರುವುದರಿಂದಲೇ ದಾಳಿ ಮಾಡಿದ್ದೀರಿ. ವಶಕ್ಕೆ ಪಡೆದರೂ ನಟಿಗೆ ಭಯ ಇಲ್ಲ, ಅವರನ್ನು ಅರೆಸ್ಟ್ ಮಾಡಿ. ರಾಜಕಾರಣಿಗಳಿಗೆ ದುಡ್ಡು ಕೊಟ್ಟರೆ ಎಲ್ಲಾ ಸರಿ ಹೋಗುತ್ತೆ ಎಂಬ ಭಾವನೆ ಇದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು ಮುಲಾಜಿಲ್ಲದೆ ಬಂಧಿಸಬೇಕು ಎಂದು ಮುತಾಲಿಕ್ ಒತ್ತಾಯಿಸಿದ್ದಾರೆ.

    ಸಂಜನಾ, ರಾಗಿಣಿ ಇವರು ನಟಿಯರಾ, ಇವರ ಬಳಿ ನಟನೆ ಇದೆಯೇ? ಇವರೆಲ್ಲಾ ಮಜಾ ಮಾಡೋಕೆ, ಚಿತ್ರ ರಂಗವನ್ನು ಹಾಳು ಮಾಡೋಕೆ ಬಂದಿರೋದು. ಇವರನ್ನು ಒಳಗೆ ಹಾಕಬೇಕು. ಆಗಲೇ ಇವರಿಗೆ ಭಯ ಬರೋದು. ಇಂತಹವರಿಂದಾಗಿ ಮಕ್ಕಳಿಗೂ ಈ ಚಟ ಹಬ್ಬಿದೆ. ಇದು ಡ್ರಗ್ ಜಿಹಾದ್, ಮುಸ್ಲಿಮರೇ ನಡೆಸುತ್ತಿರುವ ದಂಧೆ ಇದು. ಪೊಲೀಸರಿಗೆ ಡ್ರಗ್ ದಂಧೆ ಬಗ್ಗೆ ಇಂಚಿಂಚೂ ಮಾಹಿತಿ ಇರುತ್ತದೆ. ಆದರೆ ಪೊಲೀಸರ ಕೈಯನ್ನು ರಾಜಕಾರಣಿಗಳು ಕಟ್ಟಿಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

    ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಅತಿ ಹೆಚ್ಚಿನ ಡ್ರಗ್ಸ್ ಮಾಫಿಯ ನಡೆಯುತ್ತಿದೆ. ಹ್ಯಾರಿಸ್ ಕ್ಷೇತ್ರದ ಎಲ್ಲ ಕ್ರಿಶ್ಚಿಯನ್ ಕಾಲೇಜು, ಹೈಸ್ಕೂಲುಗಳ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಗಾಂಜಾ ಸಿಗುತ್ತೆ, ಕೋಕೈನ್ ಸಿಗುತ್ತೆ, ಡ್ರಗ್ಸ್ ಚಾಕ್ಲೆಟ್ ಸಿಗುತ್ವೆ. ಅನಿಕಾ ಕಿಂಗ್ ಪಿನ್ ಅಲ್ವೇ ಅಲ್ಲ. ಅವಳ ಹಿಂದೆ ದೊಡ್ಡ ಕಿಂಗ್ ಪಿನ್ ಗಳಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

  • ನಟಿ ಸಂಜನಾ ಆಪ್ತನ ಜೊತೆ ಖ್ಯಾತ ರಾಜಕಾರಣಿಯ ಪುತ್ರನಿಗೂ ಲಿಂಕ್‌

    ನಟಿ ಸಂಜನಾ ಆಪ್ತನ ಜೊತೆ ಖ್ಯಾತ ರಾಜಕಾರಣಿಯ ಪುತ್ರನಿಗೂ ಲಿಂಕ್‌

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಮಾಜಿ ಸಂಸದರೊಬ್ಬರ ಮಗನ ಹೆಸರು ಕೇಳಿಬಂದಿದೆ.

    ಹೌದು. ನಟಿ ಸಂಜನಾ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈತನ ಮೊಬೈಲ್‌ನಲ್ಲಿರುವ ವಿಡಿಯೋದಲ್ಲಿರುವ ಪಾರ್ಟಿಯಲ್ಲಿ ಮಾಜಿ ಸಂಸದನ ಪುತ್ರ ಭಾಗಿಯಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ವಿಡಿಯೋವನ್ನು ಇಟ್ಟುಕೊಂಡು ಮತ್ತಷ್ಟು ಪ್ರಶ್ನೆಗಳನ್ನು ರಾಹುಲ್‌ಗೆ ಕೇಳಿದಾಗ ವಾರಕ್ಕೊಮ್ಮೆ ನಾನು ಆತನ ಜೊತೆ ಮಾತನಾಡುತ್ತಿದ್ದೆಎಂದಿದ್ದಾನೆ. ಈಗ ಸಿಸಿಬಿ ಪೊಲೀಸರು ರಾಜಕಾರಣಿಯ ಪುತ್ರನ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸತೊಡಗಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿರುವ ರಾಹುಲ್ ಸಂಜನಾಗೆ ಪರಿಚಯವಾಗಿದ್ದು ಹೇಗೆ?

    ರಾಹುಲ್‌ಗೆ ಈತ ಅಲ್ಲದೇ ಇನ್ನೂ ಹಲವು ರಾಜಕಾರಣಿಗಳ ಪುತ್ರರು ಸಂಪರ್ಕದಲ್ಲಿದ್ದಾರೆ. ರಾಹುಲ್‌ಗೆ ಶ್ರೀಲಂಕಾದ ಕ್ಯಾಸಿನೋಗಳ ಹಿಡಿತವಿದೆ. ಹೀಗಾಗಿಯೇ ರಾಜಕಾರಣಿಗಳ ಮಕ್ಕಳನ್ನು ಕ್ಯಾಸಿನೋಗೆ ಕಳುಹಿಸುತ್ತಿದ್ದ. ಕ್ಯಾಸಿನೋಗೆ ಕಳುಹಿಸಿಕೊಡುವ ಮೂಲಕ ರಾಜಕಾರಣಿಗಳ ಮಕ್ಕಳ ಸ್ನೇಹವನ್ನು ಸಂಪಾದಿಸುತ್ತಿದ್ದ. ಕ್ಯಾಸಿನೋಗಳಲ್ಲಿ ಪಾರ್ಟಿ ಆಯೋಜನೆ ಮಾಡಿ ಎಲ್ಲವನ್ನು ರಾಹುಲ್ ಒದಗಿಸಿಕೊಡುತ್ತಿದ್ದ.

  • ನಟಿಯರು ಆಯ್ತು ಈಗ ಖ್ಯಾತ ನಟನ ಬಗ್ಗೆ ಸಿಕ್ತು ಸ್ಫೋಟಕ ಮಾಹಿತಿ

    ನಟಿಯರು ಆಯ್ತು ಈಗ ಖ್ಯಾತ ನಟನ ಬಗ್ಗೆ ಸಿಕ್ತು ಸ್ಫೋಟಕ ಮಾಹಿತಿ

    ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾದ ತನಿಖೆಯನ್ನು ಪೊಲೀಸರು ಚುರುಕುಗೊಳಿಸುತ್ತಿದ್ದಂತೆ ನಟಿಯರು ಮಾತ್ರವಲ್ಲ ನಟರೂ ದಂಧೆಯಲ್ಲಿರುವ ವಿಚಾರ ಬೆಳಕಿಗೆ ಬರುತ್ತಿದೆ. ಅದರಲ್ಲೂ ಓರ್ವ ಖ್ಯಾತ ನಟ ಈ ವ್ಯವಹಾರದಲ್ಲಿ ಭಾಗಿಯಾಗಿರುವ ಬಗ್ಗೆ ಕೆಲ ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿದೆ.

    ನಟಿ ರಾಗಿಣಿ ಆಪ್ತ ರವಿಶಂಕರ್‌ನನ್ನು ಬಂಧಿಸಿದ ಬಳಿಕ ಸಿಸಿಬಿ ಪೊಲೀಸರು ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರ ವಿಚಾರಣೆಯ ಸಂದರ್ಭದಲ್ಲಿ ಕಾರ್ತಿಕ್‌ ರಾಜು ಹೆಸರು ಕೇಳಿ ಬಂದಿದೆ.

    ಈಗ ಕಾರ್ತಿಕ್‌ ರಾಜುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಒಬ್ಬೊಬ್ಬರ ವಿಚಾರಣೆಯ ವೇಳೆ ಹಲವು ಮಾಹಿತಿಗಳು ಲಭ್ಯವಾಗುತ್ತಿದೆ.

    ಮೂವರ ವಿಚಾರಣೆಯ ಸಂದರ್ಭದಲ್ಲಿ ಓರ್ವ ಖ್ಯಾತ ನಟನ ಬಗ್ಗೆ ಮಾಹಿತಿ ಸಿಕ್ಕಿರುವ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಕೆಲ ಚಿತ್ರಗಳಲ್ಲಿ ನಟಿಸಿದ್ದ ನಟ ಸೈ ಎನಿಸಿಕೊಂಡಿದ್ದು ಈಗ ನಟನಿಗೆ ಅವಕಾಶಗಳು ಸಿಗುತ್ತಿಲ್ಲ.

    ಈ ನಟನ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದರು. ಇಂದು ರಾಗಿಣಿ ವಿಚಾರಣೆಗೆ ಹಾಜರಾಗಿದ್ದರೆ ಈ ನಟನ ಪಾತ್ರದ ಕುರಿತು ಪಶ್ನಿಸಲು ಸಿದ್ಧತೆ ನಡೆಸಿದ್ದರು.

    ಇಂದಿನ ವಿಚಾರಣೆಗೆ ರಾಗಿಣಿ ಹಾಜರಾಗದೇ ವಕೀಲರನ್ನು ಕಳುಹಿಸಿಕೊಟ್ಟಿದ್ದರು. ಅಲ್ಲದೇ ಸೋಮವಾರದವರೆಗೆ ಸಮಯ ಕೇಳಿದ್ದರು. ಆದರೆ ಸಿಸಿಬಿ ಪೊಲೀಸರು ಸಮಯ ನೀಡದೇ ಶುಕ್ರವಾರವೇ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಹೀಗಾಗಿ ನಾಳೆ ರಾಗಿಣಿ ವಿಚಾರಣೆಗೆ ಹಾಜರಾಗಬೇಕಿದೆ.
    ಇದನ್ನೂ ಓದಿ: ನಟಿ ಶರ್ಮಿಳಾ ಮಾಂಡ್ರೆಗೆ ಕೊರೊನಾ ಪಾಸಿಟಿವ್

    ಪಬ್ಲಿಕ್‌ ಟಿವಿ ಜೊತೆ ಬೆಳಗ್ಗೆ ಮಾತನಾಡಿದ್ದ ಸಂಜನಾ, ಯಾಕೆ ನಟಿಯರನ್ನು ಮಾತ್ರ ಪ್ರಶ್ನಿಸಲಾಗುತ್ತಿದೆ. ನಟರನ್ನು ಪ್ರಶ್ನೆ ಮಾಡುವುದಿಲ್ಲ ಯಾಕೆ? ನಾವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಅಭಿನಯಿಸಿ ಹಣವನ್ನು ಸಂಪಾದಿಸಿ ಕಾರುಗಳನ್ನು ಖರೀದಿಸಿದ್ದೇವೆ. ನಮ್ಮ ಆದಾಯದ ಮೇಲೆ ಯಾಕೆ ಅನುಮಾನ ಎಂದು ಕೇಳಿದ್ದರು.

  • ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಡ್ರಗ್ಸ್ ನಶೆ- ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್ ಸಿಸಿಬಿ ವಶಕ್ಕೆ

    ಬೆಂಗಳೂರು: ನಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿ ಶಂಕರ್ ಬಳಿಕ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯ ಆಪ್ತ ರಾಹುಲ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಿಡಿಯೋ ಸಾಕ್ಷ್ಯ ಸೇರಿ ಹಲವು ಪ್ರಮುಖ ಮಾಹಿತಿ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಮೂಲಕ ಸಿಸಿಬಿ ಪೊಲೀಸರು ನಟಿ ರಾಗಿಣಿ ಆಪ್ತ ರವಿಶಂಕರ್ ಹಾಗೂ ಸಂಜನಾ ಗಲ್ರಾನಿ ಆಪ್ತ ರಾಹುಲ್‍ನನ್ನು ವಶಕ್ಕೆ ಪಡೆದಂತಾಗಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಮಧ್ಯಾಹ್ನದ ವೇಳೆಗೆ ಹೆಚ್ಚಿನ ಬೆಳವಣಿಗೆಯಾಗುವ ಸಾಧ್ಯತೆ ಇದೆ. ಕಾರಿನ ಸಮೇತ ರಾತ್ರಿ ರಾಹುಲ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೂಲಕ ಸೆಲೆಬ್ರಿಟಿಗಳ ಪಾರ್ಟಿಗೆ ಡ್ರಗ್ ಸಪ್ಲೈ ಮಾಡುತಿದ್ದನಾ ರಾಹುಲ್ ಎಂಬ ಪ್ರಶ್ನೆ ಇದೀಗ ಮೂಡಿದೆ. ರಾಹುಲ್ ಡ್ರಗ್ ಪೆಡ್ಲರ್ ಆಗಿರುವ ಶಂಕೆ ಹಿನ್ನೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿಯೇ ರಾಹುಲ್ ನನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ರವಿ ಶಂಕರ್‍ನನ್ನು ವಶಕ್ಕೆ ಪಡೆಯುತ್ತಿದ್ದಂತೆ ನಟಿ ರಾಗಿಣಿ ವಕೀಲರ ಮೊರೆ ಹೋಗಿದ್ದು, ವಿಚಾರಣೆ ಎದುರಿಸುವ ಕುರಿತು ಸಲಹೆಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇತ್ತ ರಾಹುಲ್ ಪೊಲೀಸರ ಬಲೆಗೆ ಬೀಳುತ್ತಿದ್ದಂತೆ ಸಂಜನಾ ಗಲ್ರಾನಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈವರೆಗೆ ಅವರು ಎಲ್ಲಿದ್ದಾರೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಕರೆಯಬಹುದು ಎಂಬ ಉದ್ದೇಶದಿಂದ ಸಂಜನಾ ಅಜ್ಞಾತ ಸ್ಥಳದಲ್ಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

  • ಮಾಡಿದ ತಪ್ಪಿಗೆ ದಂಡ ಕಟ್ಟಿದ ಸಂಜನಾ ಗಲ್ರಾನಿ

    ಮಾಡಿದ ತಪ್ಪಿಗೆ ದಂಡ ಕಟ್ಟಿದ ಸಂಜನಾ ಗಲ್ರಾನಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಮಾಡಿದ್ದ ತಪ್ಪಿಗೆ 2 ಸಾವಿರ ರೂ. ದಂಡ ಕಟ್ಟಿ, ಕ್ಷಮೆ ಕೇಳಿದ್ದಾರೆ.

    ನಟಿ ಸಂಜನಾ ಗಲ್ರಾನಿ ದುಬಾರಿ ಬೆಲೆಯ ಆಡಿ ಕಾರ್ ಖರೀದಿ ಮಾಡಿದ್ದ ಜೋಶ್‍ನಲ್ಲಿ ಡ್ರೈವಿಂಗ್ ಮಾಡುತ್ತಾ ಸೆಲ್ಫಿ ವಿಡಿಯೋ ಮಾಡಿ ವೈರಲ್ ಮಾಡಿದ್ದರು. ಮೈಲೇಜ್ ತಗೆದುಕೊಳ್ಳೊದಕ್ಕೆ ವಿಡಿಯೋ ಮಾಡಿದ ಸಂಜನಾಗೆ ಇದು ಕಂಟಕವಾಗಿ ಪರಿಣಮಿಸಿತ್ತು. ಕಾರು ಚಲಿಸುತ್ತಲೇ ಸೆಲ್ಫಿ ವಿಡಿಯೋ ಮಾಡಿದ್ದು ವೈರಲ್ ಆಗುತ್ತಿದ್ದಂತೆ ಟ್ರಾಫಿಕ್ ಪೊಲೀಸರು ಸಂಜನಾಗೆ ನೋಟಿಸ್ ನೀಡಿದ್ದರು.

    ಸಂಚಾರಿ ನಿಯಮ ಉಲ್ಲಂಘನೆ ಆರೋಪದಡಿ ಸಂಜನಾಗೆ ಇಂದಿರಾನಗರ ಸಂಚಾರಿ ಪೊಲೀಸರು ನೋಟಿಸ್ ನೀಡಿದ್ದರು. ಸಂಚಾರಿ ನಿಯಮ ಉಲ್ಲಂಘನೆಯ ನೋಟಿಸ್ ಪಡೆದಿದ್ದ ಸಂಜನಾ ಇಂದು ದಂಡ ಕಟ್ಟಿದ್ದಾರೆ. ಕ್ವೀನ್ಸ್ ರಸ್ತೆಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಿ 2000 ರೂ. ದಂಡ ಕಟ್ಟಿ ಹೋಗಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮುಂದೆ ಸಂಜನಾ ದಂಡ ಪಾವತಿಸಿದ್ದಾರೆ.

    ಅಲ್ಲದೇ ಸಂಚಾರಿ ಪೊಲೀಸರಿಗೆ ಪತ್ರ ಬರೆದು ಘಟನೆ ನಡೆದ ವಿಚಾರದ ಬಗ್ಗೆ ವಿಷಾದಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಬೇಕು ಎನ್ನುವ ಕಾರಣಕ್ಕೆ ನಾನು ವಿಡಿಯೋ ಮಾಡಿಲ್ಲ. ಕಾಮನ್ ಆಗಿ ಹೊಸ ಕಾರು ಖರೀದಿಸಿದ್ದರಿಂದ ಸಂತೋಷಕಷ್ಟೇ ವಿಡಿಯೋ ಮಾಡಿದ್ದೆ. ನನಗೆ ಪೊಲೀಸರ ಬಗ್ಗೆ ಸಾಕಷ್ಟು ಗೌರವವಿದೆ. ಆದ್ದರಿಂದ ನಾನು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡುವ ಕೆಲಸ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿ, ಸಂಜನಾ ಕ್ಷಮೆ ಯಾಚಿಸಿದ್ದಾರೆ.

  • ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್

    ಅವಳು ಮಾಡಿದ್ದು ಮಾಡಲಿ, ನಾನು ಅವಳಷ್ಟು ಚೀಪ್ ಅಲ್ಲ: ವಂದನಾ ಜೈನ್

    ಬೆಂಗಳೂರು: ಸಂಜನಾ ಮತ್ತು ವಂದನಾ ಕಿರಿಕ್ ಪಾರ್ಟಿ ಕೇಸ್ ದಿನಕ್ಕೊಂದು ರೂಪ ಪಡೆದುಕೊಳ್ಳುತ್ತಿದೆ. ಇಂದು ಪೊಲೀಸ್ ಠಾಣೆಗೆ ಸಂಜನಾ ಗಲ್ರಾನಿ ದೂರಿಗೆ ಪ್ರತಿಕ್ರಿಯೆ ನೀಡಿದ ವಂದನಾ ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

    ಸಂಜನಾ ದೂರನ್ನು ಕೊಟ್ಟರೆ ಕೊಡಲಿ. ನಿಜವಾಗಿ ಹೇಳಬೇಕು ಅಂದರೆ ಅವಳಿಗೆ ದೂರು ನೀಡಲು ಯಾವುದೇ ವಿಚಾರ ಇಲ್ಲ. ದೂರು ಕೊಡಬೇಕು ಅಂದಿದ್ರೆ ಅವತ್ತೇ ದೂರನ್ನು ಕೊಡಬೇಕಿತ್ತು. ಈಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದೂರು ನೀಡುವುದಕ್ಕೆ ಓಡಾಡುತ್ತಿದ್ದಾಳೆ ಎಂದು ವಂದನಾ ಕಿಡಿಕಾರಿದರು. ಇದನ್ನು ಓದಿ: ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಹಲ್ಲೆ ಮಾಡಿದ್ದು ಅವಳು ಕಿತ್ತಾಡಿದ್ದು ಅವಳು, ನಾನು ದೂರು ಕೊಟ್ಟೆ ಎನ್ನುವ ಕಾರಣಕ್ಕೆ ಸಂಜನಾ ಕೂಡ ದೂರನ್ನು ನೀಡುತ್ತಿದ್ದಾಳೆ. ಈ ವೇಳೆ ನಾನು ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಂದನಾ, ನಾನು ಮಾಡದ ತಪ್ಪಿಗೆ ಸಂಜನಾ ತುಂಬಾ ಚೀಪ್ ಆಗಿ ಮಾತನಾಡುತ್ತಿದ್ದಾಳೆ. ನಾನು ಅವಳ ರೀತಿಯಲ್ಲ ಎಂದು ತಿಳಿಸಿದ್ದಾರೆ.

  • ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ರಾಜಿಗೆ ಒಂದೆಜ್ಜೆ ಮುಂದೆ ಇಟ್ಟ ಸಂಜನಾ ಗಲ್ರಾನಿ?

    ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ವಂದನಾ ಜೈನ್ ನಡುವಿನ ಗಲಾಟೆ ಪ್ರಕರಣ ಠಾಣೆಯ ಮೆಟ್ಟಿಲು ಹತ್ತಿದ್ದಾಗಿದೆ. ಹೋಟೆಲ್ ನಲ್ಲಿ ನಡೆದ ಗಲಾಟೆಗೆ ವಂದನಾ ಜೈನ್ ನೀಡಿದ್ದ ದೂರಿಗೆ, ಸಂಜನಾ ಪ್ರತಿದೂರು ನೀಡಿದ್ದು ಈಗ ರಾಜಿಯಾಗಲು ಮುಂದಾಗಿದ್ದಾರೆ.

    ಡಿಸಿಪಿಯವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಂಜನಾ, ನನಗೆ ಇದನ್ನೆಲ್ಲಾ ಮುಂದುವರಿಸಬೇಕು ಎಂಬ ಆಸೆಯಿಲ್ಲ. ಆಕೆ ಕೊಟ್ಟಿರುವ ದೂರನ್ನು ವಾಪಸ್ ತೆಗೆದುಕೊಂಡರೆ ನಾನು ವಾಪಸ್ ತೆಗೆದುಕೊಳ್ಳುತ್ತೇನೆ. ನಾನು ವಿಸ್ಕಿ ಬಾಟಲ್ ನಲ್ಲಿ ಹೊಡೆದೆ ಎಂದರೆ ನಮ್ಮ ನಿರ್ಮಾಪಕರು, ನಿರ್ದೇಶಕರು ನನ್ನ ಬಗ್ಗೆ ಏನೆಂದುಕೊಳ್ಳಬೇಕು ಎಂದು ಹೇಳುವ ಮೂಲಕ ನಾನು ರಾಜಿಗೆ ರೆಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.

    ಆಕೆಯೇ ಗಲಾಟೆ ಶುರು ಮಾಡಿ ಬಾಯಿಗೆ ಬಂದಂತೆ ಬೈದಿರೋದು. ನನ್ನ ರಕ್ಷಣೆಗೆ ಇರಲಿ ಎಂದು ಏಳು ನಿಮಿಷದ ವಿಡಿಯೋ ಮಾಡಿಟ್ಟುಕೊಂಡಿದ್ದೇನೆ. ಫೋಟೋ ತೆಗೆಯಬೇಕು ಎಂದು ಬಂದು ಗಲಾಟೆ ಮಾಡಿದ್ದಾಳೆ. ಅವಳ ಜೊತೆ ನಾನು ಯಾವತ್ತೂ ಹೋಟೆಲ್‍ಗೂ ಹೋಗಿಲ್ಲ. ನನಗೆ ಇದೆಲ್ಲವನ್ನೂ ಮುಂದುವರಿಸಿ ಪ್ರಚಾರ ತೆಗೆದುಕೊಳ್ಳಬೇಕು ಎಂದು ಇಷ್ಟವಿಲ್ಲ. ಒಂದು ಪಕ್ಷ ವಂದನಾ ದೂರು ವಾಪಸ್ ಪಡೆದರೆ ನಾನು ದೂರು ವಾಪಸ್ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ಪತ್ರ ಬರೆದು ಮನವಿ
    ಹೋಟೆಲ್ ನಲ್ಲಿ ನಡೆದಿರುವ ಘಟನೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ನನಗೆ ಇಷ್ಟ ಇಲ್ಲ. ದಯವಿಟ್ಟು ಮಾಧ್ಯಮ ಮಿತ್ರರು ಪ್ರಕರಣವನ್ನು ದೊಡ್ಡದು ಮಾಡುವ ಆಗತ್ಯ ಇಲ್ಲ. ಪ್ರಕರಣವನ್ನ ಇಲ್ಲೇ ಬಿಟ್ಟು ಬಿಡುವಂತೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಸಂಜನಾ ಗರ್ಲಾನಿ ನನ್ನನ್ನ ದೂಷಿಸುತ್ತಿರುವ ಮಹಿಳೆಯ ಬಳಿ ಯಾವುದೇ ಪುರಾವೆಗಳಿಲ್ಲ. ಪತ್ರದಲ್ಲಿ ವಿವರಿಸಲು ಆಗದೇ ಇರುವಂತಹ ಪದಗಳನ್ನು ಬಳಸಿ ನನ್ನ ತಾಯಿ ಹಾಗೂ ಕುಟುಂಬಕ್ಕೆ ನಿಂದನೆ ಮಾಡಿದ್ದಾಳೆ. ನನ್ನ ಜೀವನ ಹಾಳು ಮಾಡುವುದಕ್ಕೆ ಅವಳು ಹವಣಿಸುತ್ತಿದ್ದಾಳೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

    ಭಾರತದ ಪ್ರಮುಖ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ಮದುವೆ ಆಗುವುದಾಗಿ ಬ್ಲಾಕ್ ಮೇಲ್ ಮಾಡಿ ಪ್ರಚಾರ ಗಿಟ್ಟಿಸಿಕೊಂಡ ಹಾಗೇ ನನ್ನ ಗುರಿಯಾಗಿ ಪ್ರಚಾರ ಮಾಡುತ್ತಿದ್ದಾಳೆ ಎಂದು ವಂದನಾ ಹೆಸರು ಹೇಳದೆ ಕಿಡಿಕಾರಿದರು. ಇದನ್ನು ಓದಿ: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಘಟನೆಯಿಂದ ನನ್ನ ತಾಯಿ ನೊಂದು ಹೋಗಿದ್ದಾರೆ. ನನಗೆ ಮುಂದಿನ ವರ್ಷ ಸ್ಯಾಂಡಲ್‍ವುಡ್ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಿವೆ. ಅವುಗಳನ್ನು ನೋಡಿಕೊಂಡರೆ ಸಾಕು ಈ ರೀತಿ ಅಗ್ಗದ ಕೊಳಕು ಪ್ರಚಾರ ಬೇಡ. ನಾನು ಈ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದೇನೆ. ದಯವಿಟ್ಟು ನನ್ನನ್ನ ಬೆಂಬಲಿಸಿ ಎಂದು ಪತ್ರದ ಮೂಲಕ ಸಂಜನಾ ಗಲ್ರಾನಿ ಮನವಿ ಮಾಡಿಕೊಂಡಿದ್ದಾರೆ.

  • ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ: ಸಂಜನಾ ಗಲ್ರಾನಿ

    ಬೆಂಗಳೂರು: ಗಲಾಟೆಯಾದಾಗ ಕುಡಿದಿರಲಿಲ್ಲ, ಕೆಪಿಎಲ್ ಅಂದ್ರೇನು ಗೊತ್ತಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಎಲ್ ಹನಿಟ್ರ್ಯಾಪ್ ಪ್ರಕರಣದಲ್ಲಿ ನಿಮ್ಮ ಮತ್ತು ವಂದನಾ ಜೈನ್ ಹೆಸರು ಕೇಳಿ ಬರುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಕೆಪಿಎಲ್ ಅಂದ್ರೇನು ಗೊತ್ತಿಲ್ಲ. ಕೆಪಿಎಲ್ ಕರ್ನಾಟಕ ಪ್ರೀಮಿಯರ್ ಲೀಗ್ ಅಂತಾ ಗೊತ್ತಾಗಿದ್ದೇ ಇವತ್ತು ಎಂದು ಹೇಳಿದ್ದಾರೆ.

    ನನಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೊತ್ತು. ಕೆಪಿಎಲ್ ಮೂಲಕ ವಂದನಾ ನನಗೆ ಪರಿಚಯವಿಲ್ಲ. ಆಕೆಯ ಜೊತೆ ಯಾವ ಗೆಳೆತನವೂ ನನಗೆ ಇಲ್ಲ. ಆಕೆ ನಿನ್ನ ಬಿಡೋದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ನನಗೆ ಜೀವ ಭಯವಿದೆ ಎಂದು ಸಂಜನಾ ತಿಳಿಸಿದ್ದಾರೆ.

    ಇದೇ ವೇಳೆ ವಿಸ್ಕಿ ಬಾಟೆಲ್ ನಲ್ಲಿ ನಾನು ಹೊಡೆದ ಎಂದು ಹೇಳಿದವರು ಯಾರು? ಯಾವ ಆಧಾರ ಇದೆ ನಿಮ್ಮ ಬಳಿ? ನಾನು ಎಲ್ಲಿ ವಿಸ್ಕಿ ಬಾಟಲ್‍ನಿಂದ ಹೊಡೆದೆ. ನಿಮ್ಮ ಬಳಿ ಏನಾದರೂ ಸಿಸಿಟಿವಿ ಇದ್ಯಾ ಎಂದರು. ಇದಕ್ಕೆ ಸಂಜನಾ ಗಲ್ರಾಣಿ ವಿಸ್ಕಿ ಬಾಟೆಲ್ ನಲ್ಲಿ ಹೊಡೆದರು ಅಂತಾ ವಂದನಾರೇ ಹೇಳಿದ್ದು ಎಂದು ಮಾಧ್ಯಮದವರು ಹೇಳಿದಾಗ, ನಾನೇನು ಕುಡಿದು ತೂರಾಡುತ್ತಿದ್ನಾ ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ. ಇದನ್ನು ಓದಿ: ವಂದನಾ ಪ್ರಚಾರಕ್ಕಾಗಿ ಗಲಾಟೆ ಮಾಡ್ತಿದ್ದಾಳೆ: ನಟಿ ಸಂಜನಾ ಆರೋಪ

    ನಾನು ಗಲಾಟೆಯಾದಾಗ ಕುಡಿದಿರಲಿಲ್ಲ. ಇನ್ನು ವಿಸ್ಕಿ ಬಾಟೆಲ್ ನಿಂದ ಹೊಡೆಯೋದು ಎಲ್ಲಿಂದ ಬಂತು? ನಾನು ನನ್ನ ಕಾರ್ ಬಳಿ ಹೋಗುವಾಗ ತೂರಾಡ್ಕೊಂಡು ಹೋಗುವ ವೀಡಿಯೊವನ್ನು ಅವರೇ ಬಿಟ್ಟಿದ್ದಾರಲ್ಲ. ಸ್ಟಿಫ್ ಆಗಿ ನನ್ನ ಕಾರಿಗೆ ಹೋಗಿದ್ದೇನೆ. ಆಕೆಗೆ ಪ್ರಚಾರದ ಹುಚ್ಚಿಂದ ನನ್ನ ಮೇಲೆ ಇಲ್ಲಸಲ್ಲದ ದೂರು ಹೊರಿಸಿದ್ದಾಳೆ ಎಂದು ವಂದನಾ ಜೈನ್ ವಿರುದ್ಧ ಗಲ್ರಾನಿ ಗರಂ ಆಗಿದ್ದಾರೆ.