Tag: Sangeeta Bhat

  • EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    EXCLUSIVE: ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಮೀಟೂ ಪರ ಧ್ವನಿ ಎತ್ತಿದ್ದ ನಟಿ ಸಂಗೀತಾ

    ಮೀಟೂ ಆರೋಪದ ನಂತರ ದೇಶವನ್ನೇ ತೊರೆದಿದ್ದ ನಟ ಸಂಗೀತಾ ಭಟ್ ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ವಾಪಸ್ಸಾಗಿದ್ದಾರೆ. ಸದ್ಯ ಅವರು ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಸಿನಿಮಾದ ಚಿತ್ರೀಕರಣ ಕುಕ್ಕೆಯ ಸುತ್ತಮುತ್ತ ನಡೆದಿದೆ. ಇದನ್ನೂ ಓದಿ : ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    2018ರಲ್ಲಿ ಮೀಟೂ ಆರೋಪ ಮಾಡಿದ್ದ ಸಂಗೀತಾ, ನೇರವಾಗಿ ಯಾರ ಹೆಸರನ್ನೂ ಪ್ರಸ್ತಾಪಿಸದೇ ವಿಡಿಯೋವೊಂದನ್ನು ಮಾಡಿದ್ದರು. ಅದರಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದರು. ಅವರ ವಿಡಿಯೋ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿತ್ತು. ಮೀಟೂ ಅಭಿಯಾನಕ್ಕೆ ಮತ್ತಷ್ಟು ಬಲ ತಂದಿತ್ತು. ಮೀಟೂ ಆರೋಪದ ನಂತರ ಅವರ ಮೇಲೆ ಸಲ್ಲದ ಆರೋಪಗಳನ್ನೂ ಕೆಲವರು ಮಾಡಿದರು. ಇದರಿಂದಾಗಿ ಬೇಸತ್ತಿದ್ದ ಸಂಗೀತಾ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೊರಟು ನಿಂತರು. ಇದನ್ನೂ ಓದಿ : ಮಾಜಿ ಪತಿಯ ಬಗ್ಗೆ ಬೆಂಕಿಯುಗುಳಿದ ಪೂನಂ ಪಾಂಡೆ : ಟಾಪ್ ನಟಿಯ ದಾಂಪತ್ಯ ಹೀಗೂ ಇತ್ತಾ?

    ಮೀಟೂ ಆರೋಪದ ನಂತರ ಅವರು ಎಲ್ಲಿದ್ದರು? ಏನು ಮಾಡುತ್ತಿದ್ದಾರೆ ಎನ್ನುವ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ ಸಂಗೀತಾ. ವರ್ಷದ ನಂತರ ಪತಿಯೊಂದಿಗೆ ಜರ್ಮನ್ ನಲ್ಲಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅಲ್ಲಿ ವಿದ್ಯಾಭ್ಯಾಸ ಮುಂದುವರೆಸುವ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ : ನಟ ಚೇತನ್ ಅಮೆರಿಕಾಗೆ ಗಡಿಪಾರು? : ಆತಂಕದಲ್ಲಿ ಚಿತ್ರ ನಿರ್ಮಾಪಕರು

    ಸಂಗೀತಾ ನಟನೆಯ ‘ಕಪಟ ನಾಟಕ ಪಾತ್ರಧಾರಿ’ ಸಿನಿಮಾ ರಿಲೀಸ್ ಆಗುವ ಹೊತ್ತಿನಲ್ಲಿ ಸಂಗೀತಾ ಭಟ್ ಪ್ರಚಾರಕ್ಕಾಗಿ ಬರುತ್ತಾರೆ ಎನ್ನಲಾಗಿತ್ತು. ಆದರೆ, ಆ ವೇಳೆಯಲ್ಲೂ ಅವರು ಬರಲಿಲ್ಲ. ವಿದೇಶದಲ್ಲಿಯೇ ಕೂತುಕೊಂಡು ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದರು. ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ : ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ

    ಸಂಗೀತಾ ಪ್ರತಿಭಾನ್ವಿತ ನಟಿ. ಪವನ್ ಒಡೆಯರ್ ನಟನೆಯ ‘ಪ್ರೀತಿ ಗೀತಿ ಇತ್ಯಾದಿ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ಪರಿಚಯವಾದ ಇವರು, ಫೇಮಸ್ ಆಗಿದ್ದು ಡಾಲಿ ಧನಂಜಯ್ ನಟನೆಯ ‘ಎರಡನೇ ಸಲ’ ಚಿತ್ರದ ಮೂಲಕ. ಈವರೆಗೂ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಮತ್ತೆ ಸಿನಿಮಾ ರಂಗಕ್ಕೆ ಬಂದಿದ್ದು, ಅವರ ಅಭಿಮಾನಿಗಳಿಗೆ ಖುಷಿ ತಂದಿದೆ.

  • ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟ ನಾಟಕ ಪಾತ್ರಧಾರಿ ಚಿತ್ರ ತೆರೆಕಂಡಿದೆ. ಶೀರ್ಷಿಕೆಯೊಂದಿಗೇ ಗಮನ ಸೆಳೆದು, ಆ ನಂತರದಲ್ಲಿ ಹಾಡುಗಳು ಮತ್ತು ಟ್ರೇಲರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ್ದ ಈ ಚಿತ್ರ ನೋಡುಗರನ್ನೆಲ್ಲ ಕಾಡುವಂತೆ, ಎಲ್ಲ ವರ್ಗದ ಪ್ರೇಕ್ಷಕರೂ ಸಂಪೂರ್ಣವಾಗಿ ತೃಪ್ತರಾಗುವಂತೆ ಅಚ್ಚುಕಟ್ಟಾಗಿಯೇ ಮೂಡಿ ಬಂದಿದೆ.

    ಯಾವ ಥರದ ನಿರೀಕ್ಷೆಗಳೆದ್ದಿದ್ದವೋ ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಮೂಡಿ ಬಂದಿರೋ ಈ ಚಿತ್ರ ಮಧ್ಯಮ ವರ್ಗದ ಹುಡುಗನೊಬ್ಬನ ಭೂಮಿಕೆಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್ ಕಥೆಯೊಂದಿಗೆ ಥ್ರಿಲ್ಲಿಂಗ್ ಜರ್ನಿ ಮಾಡಿಸುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಇಲ್ಲಿರೋದು ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ. ಅದು ಈ ವರ್ಗದ ಬಹುತೇಕ ಯುವಕರ ಪ್ರಾತಿನಿಧಿಕ ಕಥೆಯಂತೆಯೇ ಕಾಣಿಸುತ್ತದೆ. ಅದಕ್ಕೆ ಮತ್ತೂ ಒಂದಷ್ಟು ರೋಚಕ ಅಂಶಗಳನ್ನು ಸೇರಿಸಿ ಸಿನಿಮಾ ಸ್ಪರ್ಶ ನೀಡಿರುವಲ್ಲಿಯೇ ನಿರ್ದೇಶಕ ಕ್ರಿಶ್ ಅವರ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕಾಗಿ ಪ್ರತಿ ಪಾತ್ರಗಳನ್ನು ದುಡಿಸಿಕೊಂಡಿರೋದರಲ್ಲಿಯೇ ಇಡೀ ಸಿನಿಮಾದ ನಿಜವಾದ ಶಕ್ತಿಯೂ ಅಡಗಿದೆ. ಬಾಲು ನಾಗೇಂದ್ರ ಪ್ರತಿಭಾವಂತ ನಟ ಅನ್ನೋದು ಇಲ್ಲಿನ ಕೃಷ್ಣ ಎಂಬ ಪಾತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

    ಬಾಲು ನಾಗೇಂದ್ರ ಕೃಷ್ಣ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದೆ ಸದಾ ಅಪ್ಪನಿಂದ ಉಗಿಸಿಕೊಳ್ಳುವ ಪಾತ್ರ. ಹೀಗಿರುವ ಯುವ ಕೃಷ್ಣನ ಮುಂದೆ ಅನಿವಾರ್ಯತೆಯೊಂದು ಸೃಷ್ಟಿಯಾಗುತ್ತೆ. ಅದರ ಭಾಗವಾಗಿ ಆಟೋ ಓಡಿಸಿ ಬದುಕೋ ನಿರ್ಧಾರ ತಳೆಯುತ್ತಾನೆ. ಈ ಹಾದಿ ಪ್ರೀತಿ ಪ್ರೇಮಗಳೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿಸುತ್ತಲೇ ಅಲ್ಲೊಂದು ಹಾರರ್ ಸಸ್ಪೆನ್ಸ್ ಕಥನ ತೆರೆದುಕೊಳ್ಳುತ್ತೆ. ಆತನ ಆಟೋ ಹತ್ತಲೇ ಹಿಂದೆ ಮುಂದೆ ನೋಡುವಂಥಾ ನಿರ್ಮಾಣವಾಗುತ್ತೆ. ಹಾಗಾದರೆ ಆಟೋದೊಳಗಾಗೋ ಚಿತ್ರವಿಚಿತ್ರ ಅನುಭವದ ಸೂತ್ರಧಾರರ್ಯಾರು? ಅದರಲ್ಲಿ ಪಾತ್ರಧಾರಿಗಳ್ಯಾರೆಂಬುದಕ್ಕಿಲ್ಲಿ ರೋಚಕ ಉತ್ತರವೇ ಕಾದಿದೆ.

    ನಿರ್ದೇಶಕ ಕ್ರಿಶ್ ಹಲವಾರು ಟ್ವಿಸ್ಟ್ ಗಳನ್ನು ಒಳಗೊಂಡಿರುವ ಈ ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರ್ವಹಿಸಿದ್ದಾರೆ. ಬಾಲು ನಾಗೇಂದ್ರ, ಸಂಗೀತಾ ಭಟ್ ಸೇರಿದಂತೆ ಇಡೀ ಪಾತ್ರವರ್ಗ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಅದು ಈ ಸಿನಿಮಾದೊಂದು ಶಕ್ತಿಯಾದರೆ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳೂ ಇದರಲ್ಲಿ ಭಾಗಿಯಾಗುವಂತಿವೆ. ಒಟ್ಟಾರೆಯಾಗಿ ಇದೊಂದು ಅಚ್ಚುಕಟ್ಟಾದ ವಿಭಿನ್ನ ಚಿತ್ರ. ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.

    ರೇಟಿಂಗ್ 3.5 / 5

  • ಕಪಟ ನಾಟಕ ಪಾತ್ರಧಾರಿಣಿ ಸಂಗೀತಾ ಭಟ್!

    ಕಪಟ ನಾಟಕ ಪಾತ್ರಧಾರಿಣಿ ಸಂಗೀತಾ ಭಟ್!

    ಬೆಂಗಳೂರು: ಗರುಡ ಕ್ರಿಯೇಷನ್ಸ್ ಸ್ಕ್ರೀನ್ಸ್  ಪ್ರೈವೇಟ್ ಲಿಮಿಟೆಡ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರ ಕಪಟ ನಾಟಕ ಪಾತ್ರಧಾರಿ. ಹತ್ತು ಮಂದಿ ಸ್ನೇಹಿತರು ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಒಂದು ಯಶಸ್ವಿ ಸಿನಿಮಾ ಬಗ್ಗೆ ಬಿಡುಗಡೆಯ ಹಂತದಲ್ಲಿ ಕೆನೆಗಟ್ಟಿಕೊಳ್ಳುವ ಸದಾಭಿಪ್ರಾಯವಿದೆಯಲ್ಲಾ? ಅಂಥಾ ಗಾಢ ವಾತಾವರಣದೊಂದಿಗೆ ಈ ಚಿತ್ರ ಇದೇ ನವೆಂಬರ್ ಎಂಟನೇ ತಾರೀಕಿನಂದು ಬಿಡುಗಡೆಗೆ ರೆಡಿಯಾಗಿದೆ. ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಸಂಗೀತಾ ಭಟ್ ಭಿನ್ನ ಪಾತ್ರದ ಮೂಲಕ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

    ಸಂಗೀತಾ ಭಟ್ ಎರಡನೇ ಸಲ ಮುಂತಾದ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು. ಈ ಪ್ರತಿಭೆಯ ಕಾರಣದಿಂದಲೇ ಅವರು ಕಪಟ ನಾಟಕ ಪಾತ್ರಧಾರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ನಿರ್ದೇಶಕ ಕ್ರಿಶ್ ನಾಯಕನ ಪಾತ್ರಕ್ಕೆ ಬಾಲು ನಾಗೇಂದ್ರ ಅವರನ್ನು ಪಕ್ಕಾ ಮಾಡಿಕೊಂಡ ನಂತರದಲ್ಲಿ ನಾಯಕಿಯ ಪಾತ್ರವನ್ನು ಯಾರು ನಿಭಾಯಿಸುತ್ತಾರೆಂಬ ಬಗ್ಗೆ ಹಲವಾರು ದಿನಗಳ ಕಾಲ ಆಲೋಚಿಸಿದ್ದರಂತೆ. ಕಡೆಗೂ ಅವರ ಕಣ್ಣಿಗೆ ಬಿದ್ದಿದ್ದು ಎರಡನೇ ಸಲ ಚಿತ್ರದ ಚೆಲುವೆ ಸಂಗೀತಾ ಭಟ್.

    ಆರಂಭದಲ್ಲಿ ಈ ಕಥೆ ಕೇಳಿದಾಕ್ಷಣವೇ ಒಂದೇ ಸಲಕ್ಕೆ ಸಂಗೀತಾ ಭಟ್ ನಟಿಸೋ ನಿರ್ಧಾರ ಪ್ರಕಟಿಸಿದ್ದರಂತೆ. ಆ ನಂತರದಲ್ಲಿ ಈವರೆಗೂ ಕೂಡಾ ಸಂಗೀತಾ ಚಿತ್ರತಂಡಕ್ಕೆ ಸಂಪೂರ್ಣ ಸಾಥ್ ಕೊಡುತ್ತಾ ಬಂದಿದ್ದಾರೆ. ಇದೀಗ ವಿದೇಶದಲ್ಲಿ ನೆಲೆಸಿದ್ದರೂ ಸಹ ಸಾಮಾಜಿಕ ಜಾಲತಾಣಗಳ ಮೂಲಕವೇ ಈ ಚಿತ್ರದ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸಿರೋ ಪಾತ್ರ ಕೂಡಾ ವಿಶೇಷವಾದದ್ದೇ. ಅವರಿಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಹುಡುಗಿಯಾಗಿ ಆ ಪಾತ್ರವನ್ನು ಜೀವಿಸಿದಷ್ಟೇ ತೀವ್ರವಾಗಿ ನಟಿಸಿದ್ದಾರಂತೆ. ಹೀಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾ ಆಟೋ ಡ್ರೈವರ್ ಜೊತೆ ಪ್ರೀತಿಗೆ ಬೀಳೋ ಆ ಪಾತ್ರ ಇಡೀ ಚಿತ್ರದ ಕೇಂದ್ರ ಬಿಂದುವೂ ಹೌದು. ಅದರ ಚಹರೆಗಳೆಲ್ಲ ಇದೇ ನವೆಂಬರ್ 8ರಂದು ಸ್ಪಷ್ಟವಾಗಿಯೇ ಜಾಹೀರಾಗಲಿವೆ.

  • ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಬೆಂಗಳೂರು: ಹೊಸ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಅಲ್ಲಿ ಹೊಸತನದ ಜಾತ್ರೆಯೇ ನೆರೆಯುತ್ತದೆಂಬಂಥಾ ನಂಬಿಕೆ ಕನ್ನಡ ಪ್ರೆಕ್ಷಕರಲ್ಲಿದೆ. ಇತ್ತೀಚೆಗೆ ಬಂದ ಬಹುತೇಕ ಹೊಸ ತಂಡಗಳು ಇಂಥಾ ವಿಶಿಷ್ಟ ಕಂಟೆಂಟಿನ ಸಿನಿಮಾಗಳ ಮೂಲಕ ಈ ನಂಬಿಕೆಯನ್ನು ಗಟ್ಟಿಗೊಳಿಸಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಮೂಲಕವೇ ಮತ್ತೊಂದು ಹೊಸಾ ತಂಡದಿಂದ ರೂಪಿಸಲ್ಪಟ್ಟಿರೋ ‘ಕಪಟನಾಟಕ ಪಾತ್ರಧಾರಿ’ ಎಂಬ ಚಿತ್ರ ಸೌಂಡು ಮಾಡಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಮತ್ತೆ ಪ್ರೇಕ್ಷಕರನ್ನಾವರಿಸಿಕೊಂಡಿದೆ.

    ಈ ಹಾಡನ್ನು ಸಂಗೀತ ನಿರ್ದೇಶಕ ಆದಿಲ್ ನದಾಫ್ ರೂಪಿಸಿರೋ ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಹಸಿದಾ ಶಿಕನು ಬೇಟೆಯಾಡಿದೆ ಒಡಲಾ ಕಸಿದು ಸೂರೆ ಮಾಡಿದೆ ಎಂಬ ಈ ಹಾಡನ್ನು ಚಾಣಕ್ಯ ಬರೆದಿದ್ದಾರೆ. ಇಶಾ ಸುಚಿ ಅಷ್ಟೇ ಆಪ್ತವಾಗಿ ಇದಕ್ಕೆ ಧ್ವನಿಯಾಗಿದ್ದಾರೆ. ಸಾಹಿತ್ಯದಲ್ಲಿಯೇ ವಿಶೇಷವಾದ ಅಂಶಗಳನ್ನೊಳಗೊಂಡಿರೋ ಈ ಹಾಡನ್ನು ಆದಿಲ್ ನದಾಫ್ ಅದಕ್ಕೆ ತಕ್ಕುದಾದ ಸಂಗೀತ ಸ್ಪರ್ಶದೊಂದಿಗೆ ಸಮ್ಮೋಹಕವಾಗಿ ರೂಪಿಸಿದ್ದಾರೆ. ಒಂದೇ ಸಲಕ್ಕೆ ಇಷ್ಟವಾಗುವಂತಿರೋ ಈ ಲಿರಿಕಲ್ ಸಾಂಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿಯೇ ಹರಿದಾಡುತ್ತಿದೆ. ಇದನ್ನೂ ಓದಿ:  ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ವಿಶೇಷವೆಂದರೆ, ಕಪಟನಾಟಕ ಪಾತ್ರಧಾರಿ ತಂಡ ಈ ಹಾಡುಗಳ ಮೂಲಕವೇ ಕಥೆಯ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂಥಾ ಪಟ್ಟುಗಳನ್ನು ಪ್ರದರ್ಶಿಸುತ್ತಿದೆ. ಕಳೆದ ಬಾರಿ ಬಂದಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಸಾಂಗ್ ಮತ್ತು ಈಗ ಬಿಡುಗಡೆಯಾಗಿರೋ ಈ ಹಾಡು ಕೂಡಾ ಕಥೆಯ ಬಗ್ಗೆಯೇ ಪ್ರೇಕ್ಷಕರ ದೃಷ್ಟಿ ಹೊರಳುವಂತೆ ಮಾಡುವಲ್ಲಿ ಗೆದ್ದಿವೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿರೋ ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಸಂಗೀತ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ.

  • ಅನುಕ್ತ: ಕೊಲೆ ರಹಸ್ಯದ ಸುತ್ತ ಥ್ರಿಲ್ಲರ್ ಪಯಣ!

    ಅನುಕ್ತ: ಕೊಲೆ ರಹಸ್ಯದ ಸುತ್ತ ಥ್ರಿಲ್ಲರ್ ಪಯಣ!

    ಪಬ್ಲಿಕ್ ರೇಟಿಂಗ್: 3.5/5

    ಬೆಂಗಳೂರು: ಕಾರ್ತಿಕ್ ಅತ್ತಾವರ್ ನಾಯಕನಾಗಿ ನಟಿಸಿರೋ ಅನುಕ್ತ ಚಿತ್ರ ತೆರೆ ಕಂಡಿದೆ. ಕರಾವಳಿ ಪ್ರದೇಶದ ಅವ್ಯಕ್ತ ವಿಚಾರಗಳನ್ನೊಳಗೊಂಡ ಕಥೆ, ಪತ್ತೇದಾರಿಕೆ, ಭೂತ ಕೋಲ ಮುಂತಾದ ವಿಚಾರಗಳಿಂದ ಅನುಕ್ತ ನಿರೀಕ್ಷೆಗೆ ಕಾರಣವಾಗಿತ್ತು. ಅದೆಲ್ಲವನ್ನು ತಣಿಸುವಂತೆ, ಕರಾವಳಿ ತೀರದೊಳಗಿನ ಥ್ರಿಲ್ಲಿಂಗ್ ಜರ್ನಿಯಂಥಾ ಅನುಭವವನ್ನು ಅನುಕ್ತ ನೀಡುವಂತಿದೆ.

    ಕಾರ್ತಿಕ್ ಅತ್ತಾವರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದರೆ, ಸಂಗೀತಾ ಭಟ್ ಅವರ ಮಡದಿಯ ಪಾತ್ರವನ್ನ ನಿರ್ವಹಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾದ ನಾಯಕ ತನ್ನ ಮಡದಿಯ ಮನೋವ್ಯಾಕುಲ ನೀಗುವ ಸಲುವಾಗಿ ಒಂದು ಹಳೇ ಮನೆಯನ್ನ ಸೇರಿಕೊಳ್ಳುತ್ತಾನೆ. ಅದು ಆಸುಪಾಸಿನ ಜನರ ಪಾಲಿಗೆ ದೆವ್ವಗಳ ಓಡಾಟವಿರೋ ಮನೆ. ಅದರ ಸುತ್ತಾ ನಾನಾ ಹಾರರ್ ಕಥೆಗಳು ಊರು ತುಂಬಾ ಹಬ್ಬಿಕೊಂಡಿರುತ್ತದೆ. ಈ ಮನೆಯಿಂದಲೇ ಅಸಲಿ ಥ್ರಿಲ್ಲರ್ ಕಥೆ ಬಿಚ್ಚಿಕೊಳ್ಳುತ್ತೆ.

    ಇಪ್ಪತೈದು ವರ್ಷಗಳ ಹಿಂದೆ ಆ ಮನೆಯಲ್ಲಿ ಓರ್ವ ಹೆಂಗಸಿನ ಕೊಲೆ ನಡೆದಿರುತ್ತೆ. ಇನ್ನೇನು ಮುಚ್ಚಿಯೇ ಹೋಗಲಿದ್ದ ಆ ಕೊಲೆಯ ರಹಸ್ಯ ಬೇಧಿಸಲು ನಾಯಕ ಮುಂದಾಗುತ್ತಾನೆ. ಹಾಗೆ ಆ ತನಿಖೆಯ ಗರ್ಭಕ್ಕಿಳಿಯುತ್ತಲೇ ಆ ವಿದ್ಯಮಾನಕ್ಕೂ ತನ್ನ ಬದುಕಿಗೂ ನಂಟಿದೆಯೆಂಬ ಸತ್ಯದ ಅನಾವರಣವಾಗುತ್ತೆ. ಹಾಗೆ ಕೊಲೆಯಾದ ಹೆಂಗಸು ಯಾರು? ಆಕೆಗೂ ನಾಯಕನ ಬದುಕಿಗೂ ಏನು ಸಂಬಂಧ? ಕೊಲೆ ಮಾಡಿದವರ್ಯಾರು ಎಂಬೆಲ್ಲ ಪ್ರಶ್ನೆಗಳಿಗೆ ತೀವ್ರವಾದ ಕುತೂಹಲ ಕಾಯ್ದಿಟ್ಟುಕೊಂಡೇ ಉತ್ತರಗಳು ಅನಾವರಣಗೊಳ್ಳುತ್ತಾ ಸಾಗುತ್ತವೆ.

    ಅನುಕ್ತಕ್ಕೆ ಕಥೆ ಬರೆದು ನಾಯಕನಾಗಿಯೂ ನಟಿಸಿರುವವರು ಕಾರ್ತಿಕ್ ಅತ್ತಾವರ್. ಈಗಾಗಲೇ ನಾಯಕನಾಗಿ ಪ್ರಸಿದ್ಧರಾಗಿದ್ದಾರೆ. ಈ ಚಿತ್ರದ ಮೂಲಕ ಚಿತ್ರರಂಗದಲ್ಲಿಯೂ ನಾಯಕನಾಗಿ ನೆಲೆ ನಿಲ್ಲೋ ಸ್ಪಷ್ಟ ಸೂಚನೆಯನ್ನೇ ರವಾನಿಸಿದ್ದಾರೆ. ಡೈಲಾಗ್ ಡೆಲಿವರಿ, ಮಾತೇ ಇಲ್ಲದೆ ಬರೀ ಎಕ್ಸ್‍ಪ್ರೆಷನ್ನಿನಲ್ಲಿಯೇ ಒಂದು ಸನ್ನಿವೇಶಗಳನ್ನ ಪರಿಣಾಮಕಾರಿಯಾಗಿಸೋ ಗುಣಗಳಿಂದ ಕಾರ್ತಿಕ್ ಇಷ್ಟವಾಗುತ್ತಾರೆ. ನಾಯಕಿ ಸಂಗೀತಾ ಭಟ್ ಕೂಡಾ ಅಂಥಾದ್ದೇ ತನ್ಮಯತೆ ಹೊಂದಿರೋ ನಟನೆ ನೀಡಿದ್ದಾರೆ. ಇನ್ನು ಕೊಲೆಯಾದ ಹೆಂಗಸಿನ ಪಾತ್ರದಲ್ಲಿ ನಟಿಸಿರೋ ಅನು ಪ್ರಭಾಕರ್, ಮೇರಿ ಪಾತ್ರದ ಉಷಾ ಭಂಡಾರಿ, ಸಂಪತ್ ರಾಜ್ ಸೇರಿದಂತೆ ಎಲ್ಲರದ್ದೂ ನೆನಪಲ್ಲುಳಿಯುವಂಥಾ ನಟನೆ.

    ಅಶ್ವತ್ಥ್ ಸ್ಯಾಮುಯಲ್ ನಿರ್ದೇಶಕನಾಗಿಯೂ ಭರವಸೆ ಮೂಡಿಸುತ್ತಾರೆ. ಎಚ್ಚರ ತಪ್ಪಿದರೆ ಸಿಕ್ಕು ಸಿಕ್ಕಾಗುವ ಅಪಾಯವನ್ನವರು ಜಾಣ್ಮೆಯಿಂದಲೇ ದಾಟಿಕೊಂಡು ಒಂದೊಳ್ಳೆ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆ. ಭೂತ ಕೋಲವೂ ಸೇರಿದಂತೆ ಎಲ್ಲವನ್ನೂ ಸಹಜವಾಗಿ, ಸನ್ನಿವೇಶಕ್ಕೆ ತಕ್ಕಷ್ಟೇ ಬಳಸಿಕೊಂಡು ಪ್ರೇಕ್ಷಕರಿಗೆ ಥ್ರಿಲ್ಲರ್ ಅನುಭವ ಕಟ್ಟಿಕೊಟ್ಟಿದ್ದಾರೆ. ಇನ್ನುಳಿದಂತೆ ನುಬಿನ್ ಪೌಲ್ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ ಕೂಡಾ ಈ ಸಿನಿಮಾದ ದೊಡ್ಡ ಶಕ್ತಿಯಂತೆ ಮೂಡಿ ಬಂದಿದೆ.

    ಹರೀಶ್ ಬಂಗೇರ ನಿರ್ಮಾಣದ ಅನುಕ್ತ ಬೇರೆಯದ್ದೇ ಅನುಭವ ನೀಡುವ ಚಿತ್ರ. ಮೊದಲಾರ್ಧ ಕೊಂಚ ಮಂದಗತಿ ಅನ್ನಿಸಿದರೂ ದ್ವಿತೀಯಾರ್ಧ ಅದನ್ನು ಮರೆಸುತ್ತದೆ. ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ವಿಭಿನ್ನ ಶೈಲಿಯ ಥ್ರಿಲ್ಲರ್ ಚಿತ್ರ ನೋಡಿದ ಖುಷಿಯನ್ನು ಅನುಕ್ತ ಮನಸಲ್ಲುಳಿಸುತ್ತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನುಕ್ತ: ಥ್ರಿಲ್ಲರ್ ಜಾಡಿನಲ್ಲೂ ಇದೆ ಕ್ಯೂಟ್ ಲವ್ ಸ್ಟೋರಿ!

    ಅನುಕ್ತ: ಥ್ರಿಲ್ಲರ್ ಜಾಡಿನಲ್ಲೂ ಇದೆ ಕ್ಯೂಟ್ ಲವ್ ಸ್ಟೋರಿ!

    ಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿರೋ ಅನುಕ್ತ ಚಿತ್ರದ ಸುತ್ತ ಹರಡಿಕೊಂಡಿರೋ ಸುದ್ದಿಗಳು, ಆ ಕಾರಣದಿಂದಲೇ ಹುಟ್ಟಿಕೊಂಡಿರೋ ನಿರೀಕ್ಷೆಗಳೇನೂ ಕಡಿಮೆಯಿಲ್ಲ. ಇದೊಂದು ಕರಾವಳಿ ಪ್ರದೇಶದಲ್ಲಿ ಜರುಗೋ ಕ್ರೈಂ ಥ್ರಿಲ್ಲರ್ ಎಂಬುದೂ ಸೇರಿದಂತೆ ಒಂದಷ್ಟು ವಿಚಾರಗಳು ಈಗಾಗಲೇ ಹೊರ ಬಿದ್ದಿವೆ.

    ಆದರೆ ಅನುಕ್ತದ ಒಡಲಲ್ಲಿ ಹೇಳದೇ ಉಳಿದ, ಹೇಳಲಾಗದ ಅದೆಷ್ಟೋ ವಿಚಾರಗಳಿದ್ದಾವೆ. ಅನುಕ್ತ ಚಿತ್ರದಲ್ಲಿ ಕರಾವಳಿಯ ಪ್ರದೇಶದಷ್ಟೇ ಫ್ರೆಶ್ ಆದೊಂದು ಕ್ಯೂಟ್ ಲವ್ ಸ್ಟೋರಿಯೂ ಇದೆ. ಇಡೀ ಸಿನಿಮಾದ ಕಥೆ ಎಷ್ಟು ಭಿನ್ನವಾಗಿದೆಯೋ ಈ ಪ್ರೇಮ ಕಥೆಯನ್ನೂ ಅಷ್ಟೇ ವಿಶಿಷ್ಟವಾಗಿ ರೂಪಿಸಲಾಗಿದೆಯಂತೆ. ನಾಯಕ ಕಾರ್ತಿಕ್ ಅತ್ತಾವರ್ ಮತ್ತು ನಾಯಕಿ ಸಂಗೀತಾ ಭಟ್ ಕ್ಯೂಟ್ ಜೋಡಿಗಳಾಗಿ ಎಲ್ಲರೂ ಮುದಗೊಳ್ಳುವಂತೆ ನಟಿಸಿದ್ದಾರೆ.

    ಹರೀಶ್ ಬಂಗೇರಾ ನಿರ್ಮಾಣ ಮಾಡಿರೋ ಈ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಈ ಕ್ಯೂಟ್ ಲವ್ ಸ್ಟೋರಿಯೂ ಪ್ರಧಾನ ಪಾತ್ರ ವಹಿಸುತ್ತದೆ. ಒಟ್ಟಾರೆಯಾಗಿ ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ, ಮಾಸ್ ಮತ್ತು ಪ್ರೀತಿ ಸೇರಿದಂತೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ತೃಪ್ತಿ ಪಡಿಸುವಂತೆ ಅನುಕ್ತ ಮೂಡಿ ಬಂದಿದೆ. ಬಿಡುಗಡೆಯ ಹೊಸ್ತಿಲಲ್ಲಿರೋ ಅನುಕ್ತದಲ್ಲಿ ಹೆಸರಿಗೆ ತಕ್ಕಂತೆ ಹೇಳಿಕೊಳ್ಳಲಾಗದ ಅನೇಕ ವಿಚಾರಗಳಿವೆ. ಅದೇನೆಂಬುದು ಬಯಲಾಗಲು ದಿನಗಳಷ್ಟೇ ಬಾಕಿ ಉಳಿದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹಳೇ ಮನೆಯಲ್ಲಿರುತ್ತಾ ಅನುಕ್ತ ರಹಸ್ಯ?

    ಹಳೇ ಮನೆಯಲ್ಲಿರುತ್ತಾ ಅನುಕ್ತ ರಹಸ್ಯ?

    ಬೆಂಗಳೂರು: ಹರೀಶ್ ಬಂಗೇರಾ ನಿರ್ಮಾಣದಲ್ಲಿ ಮೂಡಿ ಬಂದಿರುವ ಅನುಕ್ತ ಚಿತ್ರ ಫೆಬ್ರವರಿ ಒಂದರಂದು ಅದ್ಧೂರಿಯಾಗಿ ತೆರೆ ಕಾಣಲಿದೆ. ಬಿಡುಗಡೆಗೆ ಕಡೇ ಕ್ಷಣಗಳು ಶುರುವಾಗಿರುವಾಗಲೇ ಈ ಸಿನಿಮಾ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಲೇ ಸಾಗುತ್ತಿದೆ. ಇದಕ್ಕೆ ಕಾರಣವಾಗಿರೋದು ಅನುಕ್ತಾ ಬಗ್ಗೆ ಹರಡಿಕೊಳ್ಳುತ್ತಿರೋ ಕೆಲ ಇಂಟರೆಸ್ಟಿಂಗ್ ವಿಚಾರಗಳು!

    ಇದು ವರ್ತಮಾನದಲ್ಲಿ ಭೂತಕಾಲದ ರಹಸ್ಯ ಅನಾವರಣಗೊಳ್ಳೋ ವಿಚಾರವನ್ನೂ ಒಳಗೊಂಡಿದೆ. ಇದರ ಒಂದಷ್ಟು ಭಾಗಗಳ ಚಿತ್ರೀಕರಣ ಅಖಂಡ ಐನೂರು ವರ್ಷಗಳಷ್ಟು ಪುರಾತನ ಬಂಗಲೆಯಲ್ಲಿ ನಡೆದಿದೆಯಂತೆ. ಆ ಮನೆ ಇಡೀ ಚಿತ್ರದ ಕೇಂದ್ರಬಿಂದು. ಹೇಳಲಾಗದ ಸತ್ಯಗಳೆಲ್ಲವೂ ಅಲ್ಲಿಯೇ ಅನಾವರಣವಾಗುತ್ತಾ? ಅಷ್ಟಕ್ಕೂ ಅಂಥಾ ಭೀಕರ ಸತ್ಯವೇನೆಂಬುದಕ್ಕೆ ದಿನದೊಪ್ಪತ್ತಿನಲ್ಲಿ ಉತ್ತರ ಸಿಗಲಿದೆ.

    ಅನುಕ್ತ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ ಅನ್ನೋದಷ್ಟೇ ಗೊತ್ತಿದೆ. ಆದರೆ ಅದು ಯಾವ ಬಗೆಯದ್ದೆಂಬ ಬಗ್ಗೆ ಚಿತ್ರತಂಡ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಆದರೆ, ಈವರೆಗೆ ಕನ್ನಡದಲ್ಲಿ ನೋಡಿರದಂಥಾ ರೀತಿಯಲ್ಲಿ ಅನುಕ್ತದ ದೃಶ್ಯಾವಳಿಗಳು ತೆರೆದು ಕೊಳ್ಳೋದಂತೂ ಗ್ಯಾರಂಟಿ. ನಾಯಕನಾಗಿಯೂ ನಟಿಸಿರುವ ಕಾರ್ತಿಕ್ ಅತ್ತಾವರ್ ಆ ರೀತಿಯಲ್ಲಿ ಕಥೆ ಬರೆದಿದ್ದಾರೆ. ನಿರ್ದೇಶಕ ಅಶ್ವತ್ಥ್ ಸ್ಯಾಮುಯಲ್ ಅದಕ್ಕೆ ಸರಿಯಾಗಿ ದೃಶ್ಯ ಕಟ್ಟಿದ್ದಾರೆ.

    ಈಗ ದೊಡ್ಡ ಮಟ್ಟದಲ್ಲಿ ಎಲ್ಲರನ್ನೂ ಮುಟ್ಟಿರೋ ಈ ಚಿತ್ರ ಅದಕ್ಕೆ ಮಿಗಿಲಾದ ನಿಗೂಢಗಳನ್ನ ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ಈಗೆದ್ದಿರೋ ಅಲೆಯೇ ಮಹಾ ಗೆಲುವೊಂದರ ಸೂಚನೆ ನೀಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನುಕ್ತ ಟ್ರೈಲರ್ ನೋಡಿ ದರ್ಶನ್ ಹೇಳಿದ್ದೇನು?

    ಅನುಕ್ತ ಟ್ರೈಲರ್ ನೋಡಿ ದರ್ಶನ್ ಹೇಳಿದ್ದೇನು?

    ಬೆಂಗಳೂರು: ಅನುಕ್ತ ಚಿತ್ರ ಇದೇ ಫೆಬ್ರವರಿ ಒಂದರಂದು ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಚಿತ್ರೀಕರಣ ಆರಂಭವಾದಾಗಿನಿಂದ ಈವರೆಗೂ ಈ ಸಿನಿಮಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿ ಕೇಂದ್ರದಲ್ಲಿದೆ. ಇದರ ಪ್ರೋಮೋ, ಟೀಸರ್, ಟ್ರೈಲರ್ ಮತ್ತು ಹಾಡುಗಳು ಚಿತ್ರರಂಗದ ಮಂದಿಯನ್ನೂ ಕೂಡಾ ಸೆಳೆದುಕೊಂಡಿದೆ. ಅನೇಕ ನಟ ನಟಿಯರು ಈ ಬಗ್ಗೆ ಸಕಾರಾತ್ಮಕವಾಗಿಯೇ ಮಾತಾಡಿದ್ದಾರೆ. ಇದೀಗ ಅನುಕ್ತದ ಟ್ರೈಲರ್ ನೋಡಿ ಖುಷಿಗೊಂಡಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

    ತಾವು ಅದೆಷ್ಟೇ ಬ್ಯುಸಿಯಾಗಿದ್ದರೂ ಹೊಸಬರ, ಹೊಸತನದ ಪ್ರಯೋಗಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲೋದು ದರ್ಶನ್ ಅವರ ಸ್ಪೆಷಾಲಿಟಿ. ಅವರು ಸದಾ ಈ ಬಗ್ಗೆ ಒಂದು ಕಣ್ಣಿಟ್ಟೇ ಇರುತ್ತಾರೆ. ಅದೇ ರೀತಿ ಅವರು ಅನುಕ್ತ ಚಿತ್ರದ ಪ್ರೋಮೋದಿಂದ ಹಿಡಿದು ಹಾಡುಗಳ ವರೆಗೆ ಎಲ್ಲವನ್ನೂ ಗಮನಿಸಿಕೊಂಡೇ ಬಂದಿದ್ದರಂತೆ.

    ಕನ್ನಡ ಚಿತ್ರರಂಗದಲ್ಲಿ ಕಮರ್ಶಿಯಲ್ ಚಿತ್ರಗಳ ಜೊತೆಗೇ ಕಮರ್ಶಿಯಲ್ ಮೆಥಡ್ಡಿನಲ್ಲಿಯೇ ಇಂಥಾ ಹೊಸಾ ಪ್ರಯತ್ನಗಳೂ ಆಗುತ್ತಿರಬೇಕು ಅಂದಿರೋ ದರ್ಶನ್ ಅವರಿಗೆ ಆರಂಭದಲ್ಲಿ ಅನುಕ್ತದ ಅರ್ಥವೇ ಸಿಕ್ಕಿರಲಿಲ್ಲವಂತೆ. ಅದೊಂದು ಸಂಸ್ಕೃತ ಪದ ಅಂದುಕೊಂಡಿದ್ದ ಅವರಿಗೆ ಅದರ ಅರ್ಥವನ್ನು ಚಿತ್ರತಂಡವೇ ಹೇಳಿದೆ. ಒಟ್ಟಾರೆಯಾಗಿ ಇದೊಂದು ಒಳ್ಳೆ ಪ್ರಯತ್ನ, ಯಶ ಸಿಗಲಿ ಅಂತ ದರ್ಶನ್ ಹಾರೈಸಿದ್ದಾರೆ.

    ದರ್ಶನ್ ಅವರ ಈ ಮಾತುಗಳೇ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಚಿತ್ರದ ತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ. ಮತ್ತಷ್ಟು ಪ್ರೇಕ್ಷಕರು ಅನುಕ್ತದತ್ತ ಆಕರ್ಷಿತರಾಗುವಂತೆಯೂ ಮಾಡಿರೋದು ಸುಳ್ಳಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಣ್ಣಾರೆ ಕಂಡರೂ ಮಾತಲ್ಲಿ ಹೇಳಲಾಗದ ಸತ್ಯವೇ ಅನುಕ್ತ!

    ಕಣ್ಣಾರೆ ಕಂಡರೂ ಮಾತಲ್ಲಿ ಹೇಳಲಾಗದ ಸತ್ಯವೇ ಅನುಕ್ತ!

    ಗಂತೂ ಟೈಟಲ್ಲುಗಳಿಂದಲೇ ಕ್ರೇಜ್ ಹುಟ್ಟು ಹಾಕೋ ಜಮಾನ ಶುರುವಾಗಿದೆ. ಒಂದು ಹಂತದಲ್ಲಿ ಚಿತ್ರ ವಿಚಿತ್ರ ಶೀರ್ಷಿಕೆಗಳ ಟ್ರೆಂಡ್ ಒಂದು ಹುಟ್ಟಿಕೊಂಡಿತ್ತು. ಆದರೀಗ ಅರ್ಥಪೂರ್ಣ ಟೈಟಲ್ ಗಳ ಪರ್ವ ಹುಟ್ಟಿಕೊಂಡಿದೆ. ಹೊಸಾ ವರ್ಷಾರಂಭದಲ್ಲಿಯೇ ಹೊಸಾ ಆವೇಗಕ್ಕೆ ಕಾರಣವಾಗಿರೋ ಅನುಕ್ತ ಕೂಡಾ ಅದೇ ಸಾಲಿನಲ್ಲಿ ಬಿಡುಗಡೆಗೆ ತಯಾರಾಗಿರುವ ಚಿತ್ರ.

    ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಕರಾವಳಿಯವರೇ ಆದ ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್ ಅತ್ತಾವರ್, ಸಂತೋಷ್ ಕುಮಾರ್ ಕೊಂಚಾಡಿ ಜೊತೆ ಸೇರಿ ಕಥೆ ಬರೆದಿದ್ದಾರೆ. ಯಶೋಧೆ ಧಾರಾವಾಹಿ ಖ್ಯಾತಿಯ ಕಾರ್ತಿಕ್ ಅವರೇ ಈ ಸಿನಿಮಾ ನಾಯಕನಾಗಿಯೂ ನಟಿಸಿದ್ದಾರೆ. ಸಂಗೀತಾ ಭಟ್ ನಾಯಕಿಯಾಗಿ ನಟನೆಗೆ ಅವಕಾಶವಿರೋ ಸವಾಲಿನಂಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹಾಗಾದರೆ ಅನುಕ್ತ ಅಂದರೇನು ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಹೇಳಲಾಗದ್ದು ಎಂಬಂಥಾ ಉತ್ತರವೂ ಸಿಗುತ್ತದೆ. ಈ ಬಗ್ಗೆ ಚಿತ್ರದ ನಿರ್ದೇಶಕರಾದ ಅಶ್ವತ್ಥ್ ಸ್ಯಾಮುಯಲ್ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ಅವರು ಹೇಳೋ ಪ್ರಕಾರವಾಗಿ ನೋಡಿದರೆ, ಅನುಕ್ತ ಅಂದರೆ ಕಣ್ಣಿಗೆ ಕಾಣಿಸಿದರೂ ಮಾತಲ್ಲಿ ಹೇಳಲಾರದ ಸತ್ಯವೇ ಅನುಕ್ತ.

    ಹಾಗೆ ಕಣ್ಣಿಗೆ ಕಂಡೂ ಮಾತಲ್ಲಿ ಹೇಳಲಾಗದ, ನೋಡಿಯಷ್ಟೇ ಅನುಭವಿಸಬೇಕಾದ ಅದೆಷ್ಟೋ ವಿಚಾರಗಳು ಈ ಚಿತ್ರದಲ್ಲಿವೆಯಂತೆ. ಕರಾವಳಿಯ ಸಮೃದ್ಧ ಬದುಕಿನ ಅನಾವರಣದ ಜೊತೆಗೇ ಹೊಸಾ ಥರದ ಕ್ರೈಂ ಥ್ರಿಲ್ಲರ್ ಕಥೆ ಹೇಳ ಹೊರಟಿರೋ ಈ ಸಿನಿಮಾ ಇಷ್ಟರಲ್ಲಿಯೇ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಾವನ ಬಳಿಕ ಅಳಿಯ ಚಿರಂಜೀವಿ ಮೇಲೂ ಮೀಟೂ ಆರೋಪ

    ಮಾವನ ಬಳಿಕ ಅಳಿಯ ಚಿರಂಜೀವಿ ಮೇಲೂ ಮೀಟೂ ಆರೋಪ

    ಬೆಂಗಳೂರು: ಕೆಲವು ದಿನಗಳಿಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶೃತಿ ಹರಿಹರನ್ ಮೀಟೂ ಆರೋಪ ಮಾಡುತ್ತಿದ್ದು, ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಅವರ ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಕೇಳಿ ಬರುತ್ತಿದೆ.

    ನಟಿ ಸಂಗೀತಾ ಭಟ್ ಅಭಿಮಾನಿಗಳು ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಮಾಡುತ್ತಿದ್ದಾರೆ. 2017 ರಲ್ಲಿ ತೆಲುಗು ಚಿತ್ರ ‘ಕ್ಷಣಂ’ ರಿಮೇಕ್ ವೇಳೆ ಈ ಘಟನೆ ನಡೆದಿದ್ದು, ಕೆ.ಎಂ.ಚೈತನ್ಯ ನಿರ್ದೇಶನದ ಹೆಸರಿಡದ ಚಿತ್ರಕ್ಕಾಗಿ ಶೃತಿ ಹರಿಹರನ್ ಮತ್ತು ಸಂಗೀತಾ ಭಟ್ ಇಬ್ಬರನ್ನು ನಾಯಕಿರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ತಮ್ಮ ಅನುಭವವನ್ನು ಸಂಗೀತಾ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದಕ್ಕೆ ಕಮೆಂಟ್ ಮಾಡಿದ ನಟಿಯ ಅಭಿಮಾನಿಗಳು ಚಿರಂಜೀವಿ ವಿರುದ್ಧ ಆರೋಪ ಮಾಡಿದ್ದಾರೆ.

    ಆರೋಪವೇನು?:
    ನಟಿ ಸಂಗೀತಾ ಭಟ್ ಇತ್ತೀಚೆಗೆ ಒಂದು ಪೋಸ್ಟ್ ಮಾಡಿದ್ದರು ಅದರಲ್ಲಿ, 2017ರಲ್ಲಿ ರೀಮೇಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದೆ. ಆದರೆ ಆ ಸಿನಿಮಾದ ನಟ ಕನ್ಯತ್ವವನ್ನು ಪ್ರಶ್ನೆ ಮಾಡಿದ್ದರು. ಆದ್ದರಿಂದ ನಾನು ಸಿನಿಮಾದಿಂದ ಹೊರಬಂದೆ ಎಂದು ಹೇಳಿದ್ದರು. ಆದರೆ ಈಗ ಅವರ ಅಭಿಮಾನಿಗಳು ಆ ಸಿನಿಮಾದ ನಟ ಚಿರಂಜೀವಿ ಆಗಿದ್ದರು. ಆದ್ದರಿಂದ ಅವರು ಈ ರೀತಿ ಪ್ರಶ್ನೆ ಮಾಡಿದ್ದಾರಾ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

    ಸಂಗೀತಾ ಸ್ಪಷ್ಟನೆ:
    ಈ ಆರೋಪದ ಬಗ್ಗೆ ಸಂಗೀತಾ ಭಟ್ ಫೇಸ್ ಬುಕ್ ನಲ್ಲಿ ಲೈವ್ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ. “ನಾನು ಇತ್ತೀಚೆಗೆ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ನನ್ನನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳಿಗೆ ನಾನು ಪಟ್ಟಿರುವ ಕಷ್ಟ ಗೊತ್ತಾಗಲಿ ಎಂದು ಆ ಪೋಸ್ಟ್ ಹಾಕಿದ್ದೆ. ನಾನು 1 ವರ್ಷದಿಂದ ಇಂಡಸ್ಟ್ರಿಯಲ್ಲಿ ಇಲ್ಲ. ಹೀಗಾಗಿ ನಾನು ಪಬ್ಲಿಸಿಟಿಗೋಸ್ಕರ್ ಪೋಸ್ಟ್ ಮಾಡಿಲ್ಲ. ನಾನು ನನ್ನ ಜೀವನದಲ್ಲಿ ನಡೆದ ಘಟನೆಯನ್ನು ಹೇಳಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

    ಇನ್ನೊಂದು ನಾನು ಹಾಕಿರುವ ಪೋಸ್ಟ್ ನಲ್ಲಿ ಯಾವ ನಟ, ನಿರ್ದೇಶಕ, ನಿರ್ಮಾಪಕರ ಮೇಲೂ ಮೀಟೂ ಆರೋಪ ಮಾಡಿಲ್ಲ. ನನ್ನ ಅನುಭವನ್ನು ಹಂಚಿಕೊಂಡಿದ್ದೇನೆ ಅಷ್ಟೆ. ನಾನು ಮಾಡಿರುವ ಪೋಸ್ಟ್ ಇಟ್ಟುಕೊಂಡು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿ ಮಾಡಬೇಡಿ. ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv