Tag: Sandal

  • ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ ಶ್ರೀಗಂಧ ಜಪ್ತಿ – ಓರ್ವ ಬಂಧನ

    ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ ಶ್ರೀಗಂಧ ಜಪ್ತಿ – ಓರ್ವ ಬಂಧನ

    ಬೀದರ್: ಜಿಲ್ಲೆಯ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಸಾಗಿಸುತ್ತಿದ್ದ 16 ಲಕ್ಷ ಮೌಲ್ಯದ ಶ್ರೀಗಂಧವನ್ನು ವಶಕ್ಕೆ ಪಡೆದಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.

    ಆರೋಪಿಯನ್ನು ತೆಲಂಗಾಣ ಮೂಲದ ಪಿ.ಕೆ ಭದ್ರುಧಿನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಾಲಿಗೆ ಕೋಳ, ಪ್ರತಿನಿತ್ಯ ಚಿತ್ರಹಿಂಸೆ – ಜೀತ ಪದ್ಧತಿಯ ಪ್ರತ್ಯಕ್ಷ ವರದಿ; ʻಪಬ್ಲಿಕ್‌ʼ ವರದಿ ಬೆನ್ನಲ್ಲೇ ಕಾರ್ಮಿಕರ ರಕ್ಷಣೆ!

    ಗೂಡ್ಸ್ ವಾಹನದಲ್ಲಿ ಶ್ರೀಗಂಧವನ್ನು ಅಕ್ರಮವಾಗಿ ನೆರೆಯ ತೆಲಂಗಾಣದಿಂದ ಮಹಾರಾಷ್ಟ್ರದ ಮುಂಬೈ ನಗರಕ್ಕೆ ಸಾಗಾಟ ಮಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿದ್ದು, ಬರೋಬ್ಬರಿ 16 ಲಕ್ಷ ಮೌಲ್ಯದ ಒಂದು ಕ್ವಿಂಟಾಲ್ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಬಸವಕಲ್ಯಾಣ ನಗರ ಠಾಣೆಯ ಪಿಎಸ್‌ಐ ಅಂಬರೀಶ್ ಹಾಗೂ ಅರಣ್ಯಾಧಿಕಾರಿ ಮಹೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ರಕ್ತ ಚಂದನದ ಜೊತೆಗೆ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ಈ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್

  • ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!

    ಅರಣ್ಯ ಇಲಾಖೆ ಕಚೇರಿಯಲ್ಲಿದ್ದ 8 ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ!

    – ಇಬ್ಬರು ಅರಣ್ಯಾಧಿಕಾರಿಗಳು ಅಮಾನತು

    ಯಾದಗಿರಿ: ಅರಣ್ಯ ಇಲಾಖೆ ಅಧಿಕಾರಿಗಳು (Forest Department) ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಕಾಡನ್ನು ಕಾಯೋದು ಬಿಡಿ, ತಮ್ಮ ಕಚೇರಿಯನ್ನೇ ಕಾಯದ ಪರಿಸ್ಥಿತಿ ಯಾದಗಿರಿಯಲ್ಲಿ ಕಂಡುಬಂದಿದೆ.

    ಹೌದು. ಯಾದಗಿರಿಯ (Yadagiri) ಅರಣ್ಯ ಇಲಾಖೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಅರಣ್ಯ ಪ್ರದೇಶದಲ್ಲಿ ಖದೀಮರು ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಜಪ್ತಿ ಮಾಡಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಅದೇ ಕಚೇರಿಯಿಂದಲೇ ಶ್ರೀಗಂಧ ಕಟ್ಟಿಗೆ ಕಳ್ಳತನವಾಗಿರೋದು ಇದೀಗ ಭಾರೀ ಅನುಮಾನ ಉಂಟು ಮಾಡಿದೆ.

    ಕಳೆದ ನಾಲ್ಕು ದಿನದ ಹಿಂದೆ ಯಾದಗಿರಿ ಜಿಲ್ಲಾ ಕೆಂದ್ರದ ಅರಣ್ಯ ಇಲಾಖೆಯ ಕಚೇರಿಯಲ್ಲಿ 8 ಲಕ್ಷದ 58 ಸಾವಿರ ರೂ. ಮೌಲ್ಯದ 85 ಕೆ.ಜಿ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿವೆ. ಉಪ ವಲಯ ಅರಣ್ಯಾಧಿಕಾರಿ ಕಾಜೋಲ್ ಪಾಟೀಲ್ ಅವರ ಕಚೇರಿ ಪಕ್ಕದಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿರುವ ಶೌಚಾಲಯದಲ್ಲಿ ಈ ಶ್ರೀಗಂಧ ಕಟ್ಟಿಗೆಗಳನ್ನು ಭದ್ರವಾಗಿ ಶೇಖರಿಸಿದ್ದನ್ನು ಕಳ್ಳರು ಯಾರಿಗೆ ಗೊತ್ತಾಗದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.

    ಒಂದು ಸರ್ಕಾರಿ ಕಚೇರಿಯಲ್ಲಿ ಇಟ್ಟ ಶ್ರೀಗಂಧದ ಕಟ್ಟಿಗೆಗಳನ್ನು ಕದಿಯುವುದು ಅಷ್ಟು ಸುಲಭದ ಮಾತಲ್ಲ. ಇದರ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು ಶಾಮೀಲು ಆಗಿರುವ ಶಂಕೆಯೂ ಸಹ ವ್ಯಕ್ತಪಡಿಸಲಾಗಿದೆ. ಜೊತೆಗೆ ಜಿಲ್ಲಾ ಕೆಂದ್ರದಲ್ಲಿರುವ ಈ ಅರಣ್ಯ ಕಚೇರಿಗೆ ಯಾವುದೇ ಸಿಸಿಟಿವಿ ಕ್ಯಾಮರಾ ಇಲ್ಲ. ರಾತ್ರಿ ಹೊತ್ತು ಕಚೇರಿ ಕಾಯಲು ಯಾವುದೇ ವಾಚ್ ಮನ್ ನೇಮಿಸಿಲ್ಲ. ಇದರಿಂದ ಕಳ್ಳರು ಬಹಳ ಸಲೀಸಾಗಿ, ಯಾವುದೇ ಭಯ-ಭೀತಿಯಿಲ್ಲದೇ ಯಾವುದೋ ವಾಹನದಲ್ಲಿ ಕಚೇರಿಯೊಳಗೆ ಬಂದು ಕಳ್ಳತನ ಮಾಡಿದ್ದಾರೆ ಎಂಬ ಸಂಶಯವಾಗ್ತಿದೆ.

    ಕಳ್ಳತನದ ಮಾಹಿತಿ ತಿಳಿಯುತ್ತಿದ್ದಂತೆ ಕಳ್ಳತನ ಆಗಿಯೇ ಇಲ್ಲ ಎಂದು ಅರಣ್ಯ ಅಧಿಕಾರಿಗಳು ಮುಚ್ವಿ ಹಾಕಲು ಪ್ಲಾನ್ ಮಾಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಯಬಾರದು, ಹೇಗಾದ್ರು ಮಾಡಿ ಇದರಿಂದ ಪಾರಾಗಲು ಗುರಮಠಕಲ್ ಕಡೆಯ ಅರಣ್ಯ ಪ್ರದೇಶದಲ್ಲಿ ಎರಡು ಶ್ರೀಗಂಧ ಗೀಡಗಳನ್ನು ಕಡಿದು ಅದರ ಕಟ್ಟಿಗೆಗಳನ್ನು ತಂದು ಕಳ್ಳತನವಾಗಿರುವ ಜಾಗದಲ್ಲಿ ಸೇಫ್ ಆಗಿ ಇಟ್ಟಿದ್ದಾರೆ. ಇನ್ನು ಈ ಶ್ರೀಗಂಧದ ಕಟ್ಟಿಗೆಗಳನ್ನು ಕಳ್ಳತನ ಮಾಡಿರುವುದು 2-3 ದಿನಗಳ ಬಳಿಕ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಫನ್ವಾರ್ ಇಂದು ಯಾದಗಿರಿ ಅರಣ್ಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಈ ವೇಳೆ ಮೆಲ್ನೊಟಕ್ಕೆ ಉಪ ವಲಯ ಅರಣ್ಯಾಧಿಕಾರಿ ಚಂದ್ರ ಶಾ ನೀರಕಟ್ಟಿ ಹಾಗೂ ಗಸ್ತು ವನಪಾಲಕ ರಿಜ್ವಾನ್ ಇಬ್ಬರನ್ನು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ. ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು. ಜೊತೆಗೆ ಇದರ ಬಗ್ಗೆ ಯಾದಗಿರಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಪೋಲಿಸರು ಬಲೆ ಬೀಸಿದ್ದಾರೆ.

    ಯಾದಗಿರಿ ಜಿಲ್ಲೆಯಲ್ಲಿ ಹತ್ತಿಕುಣಿ ಅರಣ್ಯ ಪ್ರದೇಶವೂ ಅತೀ ಹೆಚ್ಚು ಅರಣ್ಯವನ್ನು ಹೊಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಇದೇ ಸೆ. 13 ರಂದು ಹತ್ತಿಕುಣಿ ಬಳಿಯ ಬಗ್ಗಲಮಡು-ಹಂದರಕಿ ಅರಣ್ಯ ಪ್ರದೇಶದಲ್ಲಿ ಹಲವು ವರ್ಷಗಳಿಂದ ಶ್ರೀಗಂಧ ಮರಗಳನದ್ನು ಕಡಿದು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಸಚಿನ್ ಎಂಬಾತ ಶ್ರೀಗಂಧದ ಗೀಡಗಳನ್ನು ಕಟ್ ಮಾಡಿ ಅದರ ಕಟ್ಟಿಗೆಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದನು. ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡಿ 8.5. ಲಕ್ಷ ರೂ.ಮೌಲ್ಯದ ಶ್ರೀಗಂಧ ಕಟ್ಟಿಗೆಗಳನ್ನು ಜಪ್ತಿ ಹಾಗೂ ಆರೋಪಿ ಸಚಿನ್ ನನ್ನು ವಶಕ್ಕೆ ಪಡೆದು, ಜೈಲಿಗಟ್ಟಿದ್ದರು. ಆಗ ಸಚಿನ್ ಕಳ್ಳತನ ಮಾಡಿದ್ದ ಶ್ರೀಗಂಧದ ಕಟ್ಟಿಗೆಗಳನ್ನು ಹಿರಿಯ ಅಧಿಕಾರಿಗಳ ಸಮ್ಮಖದಲ್ಲಿ ಕಚೇರಿಯಲ್ಲಿ ಶೇಖರಿಸಲಾಗಿತ್ತು. ಇನ್ನೊಂದು ಇದೇ ರೀತಿಯ ಶ್ರೀಗಂಧ ಕಟ್ಟಿಗೆ ಕಳ್ಳತನ ಪ್ರಕರಣವೂ ಇದಾದ 15 ದಿನದ ಬಳಿಕ ಯಾದಗಿರಿ ತಾಲೂಕಿನ ಬಾಚವಾರ ಬಳಿ ದಾಳಿ ಮಾಡಿದರು. ಆಗ ಕಲಬುರಗಿ ಮೂಲದ ದೇವಪ್ಪ ಕದಿದ್ದ ಶ್ರೀಗಂಧ ಕಟ್ಟಿಗೆ ವಶಕ್ಕೆ ಪಡೆದುಕೊಂಡು ಜೈಲಿಗಟ್ಟಿದ್ರು. ನಂತರ ಶ್ರೀಗಂಧ ಕಟ್ಟಿಗೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕಚೇರಿಯಲ್ಲಿ ಶೇಖರಿಸಲಾಗಿತ್ತು.

    ಇವೆರಡೂ ಪ್ರಕರಣ ಸೇರಿದಂತೆ ಹಲವು ವೇಳೆ ದಾಳಿ ಮಾಡಿ ಕಚೇರಿಯಲ್ಲಿ ಇಟ್ಟಿದ್ದ ಅರಣ್ಯ ಇಲಾಖೆಯ ಆಸ್ತಿಯನ್ನು ಕಳ್ಳತನ ಆಗಿರುವುದು ದೊಡ್ಡ ವಿಫಲ. ಇದೆಲ್ಲವೂ ಹಿರಿಯ ಅಧಿಕಾರಿಗಳಿಂದ ಹಿಡಿದು ಸಣ್ಣ ಅಧಿಕಾರಿಗಳಿಗೂ ತಮ್ಮ ಇಲಾಖೆಯ ಶ್ರಿಗಂಧ ಸೇರಿದಂತೆ ಹಲವು ವಸ್ತುಗಳು ಜಪ್ತಿಯ ಇಂಚಿಂಚೂ ಮಾಹಿತಿ ಗೊತ್ತಿರುತ್ತದೆ. ಆದ್ರೆ ಇವರೆಲ್ಲರ ಕಣ್ತಪ್ಪಿಸಿ ಈ ಕಳ್ಳತನ ನಡೆದಿರುವುದು ನಂಬಲು ಅಸಾಧ್ಯದ ಮಾತು. ಕೇವಲ ಇಬ್ಬರನ್ನು ಅಮಾನತು ಮಾಡಿ ಕೈ ತೊಳೆದುಕೊಳ್ಳುವ ಬದಲು ಸೂಕ್ತ ತನಿಖೆ ಮಾಡಿ ಸಾರ್ವಜನಿಕರ ಆಸ್ತಿ ಪತ್ತೆ ಹಚ್ಚಿ ಖದೀಮರ ಎಡೆಮುರಿ ಕಟ್ಟಬೇಕಾಗಿದೆ.

    ತಮ್ಮ ಮನೆಯನ್ನು ಕಾಯಲಾಗದೇ ಇರುವವರು. ನಾಡಿನ ಅರಣ್ಯವನ್ನು ಕಾಯಲು ಹೇಗೆ ಸಾಧ್ಯ. ಲಕ್ಷಾಂತರ ರೂ. ಮೌಲ್ಯದ ಶ್ರೀಗಂಧ ಕಟ್ಟಿಗೆ ಕಳ್ಳತನ ಪ್ರಕರಣ ಅರಣ್ಯ ಇಲಾಖೆಯ ಮೇಲೆ ಸಾಕಷ್ಟು ಸಂಶಯ ಮೂಡಿಸಿದೆ. ಇಂತಹ ದುಷ್ಕೃತ್ಯದಲ್ಲಿ ಯಾವುದೇ ಅಧಿಕಾರಿಗಳು ಹಾಗೂ ಬೇರೆಯವರಿದ್ರು ಅವ್ರನ್ನು ಪತ್ತೆ ಹಚ್ಚಿ ಸತ್ಯಾಸತ್ಯತೆ ಬಯಲಿಗೆಳೆಯಬೇಕಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ನಿರ್ಮಾಪಕಿ: ಗಣೇಶ ಹಬ್ಬಕ್ಕೆ ಅಭಿಮಾನಿಗಳಿಗೆ ಆಪಲ್ ಬಾಕ್ಸ್ ಗಿಫ್ಟ್

    ಗಣೇಶ ಹಬ್ಬದಂದು ಬುಧವಾರ ಬೆಳಗ್ಗೆ 11.15ಕ್ಕೆ ಸ್ವೀಟ್ ನ್ಯೂಸ್ ಕೊಡುವುದಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕುತೂಹಲ ಮೂಡಿಸಿದ್ದರು. ಸಿಹಿ ಸುದ್ದಿ ಯಾವುದಿರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಕೊನೆಗೂ ರಮ್ಯಾ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ. ಈವರೆಗೂ ಬೇರೆಯವರ ಬ್ಯಾನರ್ ನಲ್ಲಿ ನಟಿಸುತ್ತಿದ್ದ ರಮ್ಯಾ, ಸ್ವತಃ ತಮ್ಮದೇ ಬ್ಯಾನರ್ ಶುರು ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ರಮ್ಯಾ ಕೊಡುವ ಸ್ವೀಟ್ ನ್ಯೂಸ್ ಯಾವುದು ಎನ್ನುವುದರ ಸುತ್ತ ಹಲವು ವಿಶ್ಲೇಷಣೆಗಳು ನಡೆದಿದ್ದವು. ನಟಿಯಾಗಿ ಅವರು ವಾಪಸ್ಸಾಗುತ್ತಿದ್ದಾರಾ? ಅಥವಾ ನಿರ್ಮಾಪಕಿಯಾಗಿ ನಿರ್ಮಾಣ ಸಂಸ್ಥೆಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರಾ ಎನ್ನುವ ಕುತೂಹಲ ಮೂಡಿಸಿತ್ತು. ಕೊನೆಗೂ ರಮ್ಯಾ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ತಮ್ಮದೇ ಆಪಲ್ ಬಾಕ್ಸ್ ಸ್ಟುಡಿಯೋಸ್ ಸಂಸ್ಥೆಯನ್ನು ಶುರು ಮಾಡಿದ್ದು, ಈ ಸಂಸ್ಥೆಯ ಮೂಲಕ ಸಿನಿಮಾ ಮಾಡಲಿದ್ದಾರೆ. ಈ ಸಂಸ್ಥೆಯ ಮೂಲಕ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಈ ಹಿಂದೆ ರಾಜ್ ಬಿ ಶೆಟ್ಟಿ ಅವರ ಸಿನಿಮಾದ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಇಂಥದ್ದೊಂದು ಮಾತುಕತೆ ನಡೆದೇ ಇಲ್ಲ ಎಂದೂ ಹೇಳಲಾಗುತ್ತಿದೆ. ರಾಜ್ ಬಿ ಶೆಟ್ಟಿ ಅವರು ರಮ್ಯಾಗಾಗಿ ಯಾವುದೇ ಸಿನಿಮಾ ಮಾಡುತ್ತಿಲ್ಲ ಎನ್ನುವ ಮಾಹಿತಿಯೂ ಇದೆ. ಹಾಗಾಗಿ ರಮ್ಯಾ ಬ್ಯಾನರ್ ನಲ್ಲಿ ಬರುವ ಮೊದಲ ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಡೆತ್ ನೋಟ್ ಬರೆದಿಟ್ಟು, ವೀಡಿಯೋ ಮಾಡಿ ಶ್ರೀಗಂಧ ಬೆಳೆಗಾರ ನಾಪತ್ತೆ!

    ಡೆತ್ ನೋಟ್ ಬರೆದಿಟ್ಟು, ವೀಡಿಯೋ ಮಾಡಿ ಶ್ರೀಗಂಧ ಬೆಳೆಗಾರ ನಾಪತ್ತೆ!

    ಚಿಕ್ಕಮಗಳೂರು: ಡೆತ್ ನೋಟ್ ಬರೆದಿಟ್ಟು, ವೀಡಿಯೋ ಮಾಡಿ ಶ್ರೀಗಂಧದ ಬೆಳೆಗಾರ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಕಣ್ಮರೆಯಾದವರನ್ನು ವಿಶುಕುಮಾರ್ ಎಂದು ಗುರುತಿಸಲಾಗಿದ್ದು, ಇವರು ತರೀಕೆರೆ ಪಟ್ಟಣದ ನಿವಾಸಿ. ಕುಟುಂಬದವರನ್ನ ಉದ್ದೇಶಿಸಿ ವೀಡಿಯೋ ಮಾಡಿದ್ದಾರೆ. ನಿಮಗೆಲ್ಲಾ ಮೋಸ ಮಾಡಿ ಹೋಗುತ್ತಿದ್ದೇನೆ ಎಂದು ಕಣ್ಣೀರು ಹಾಕಿ ವಿಶುಕುಮಾರ್ ನಾಪತ್ತೆಯಾಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಬೆಳೆದ ಶ್ರೀಗಂಧದ ಮರಗಳನ್ನು ಕಡಿಯಲಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಕೋರ್ಟ್ ಸೂಚಿಸಿದ್ರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ. 22 ಮಂದಿ ರೈತರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ಪರಿಹಾರದ ಹಣಕ್ಕಾಗಿ ಅಲೆದು ಅಲೆದು ಸಂತ್ರಸ್ತರು ಸುಸ್ತಾಗಿದ್ದಾರೆ. 3 ದಿನದ ಹಿಂದೆ ತುಮಕೂರಿನ ಪ್ರಾಧಿಕಾರ ಕಚೇರಿಯೆದುರು ಪ್ರತಿಭಟನೆ ನಡೆಸಿದ್ರು.

    ಸದ್ಯ ಮರಣ ಪತ್ರ ಬರೆದಿಟ್ಟಿದ್ದಾರೆ. ಅಲ್ಲದೆ ವೀಡಿಯೋ ಮಾಡಿ ಶ್ರೀಗಂಧ ಬೆಳೆಗಾರ ವಿಶುಕುಮಾರ್ ನಾಪತ್ತೆಯಾಗಿದ್ದಾರೆ.

  • ಬರದ ನಾಡಲ್ಲಿ ಬಂಗಾರದ ಬೆಳೆ- 100 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿದ್ರು ಕುಷ್ಟಗಿಯ ರಮೇಶ್ ಬಳೂಟಗಿ

    ಬರದ ನಾಡಲ್ಲಿ ಬಂಗಾರದ ಬೆಳೆ- 100 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿದ್ರು ಕುಷ್ಟಗಿಯ ರಮೇಶ್ ಬಳೂಟಗಿ

    ಕೊಪ್ಪಳ: ಕರ್ನಾಟಕ ಶ್ರೀಗಂಧದ ನಾಡು ಅಂತಾರೆ. ಆದ್ರೆ ಇತ್ತೀಚೆಗೆ ಶ್ರೀಗಂಧ ಕಡಿಮೆ ಆಗ್ತಿದೆ. ಆದ್ರೆ, ಬರದ ನಾಡು ಕೊಪ್ಪಳದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ರಮೇಶ್ ಬಳೂಟಗಿ. ಬರೋಬ್ಬರಿ 100 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ, ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

    ಹೌದು. ಕೊಪ್ಪಳದ ಕುಷ್ಟಗಿ ತಾಲೂಕಿನ ಮಂಡಲಮರಿ ಗ್ರಾಮದ ರಮೇಶ್ ಅವರು 2008ರಲ್ಲಿ 30 ಎಕರೆಯಲ್ಲಿ ಶ್ರೀಗಂಧ ಬೆಳೀತಿದ್ರು. ಆದ್ರೀಗ, ಬರೋಬ್ಬರಿ 100 ಎಕರೆಯಲ್ಲಿ ಶ್ರೀಗಂಧ ಬೆಳೆಯುತ್ತಿದ್ದಾರೆ. 3 ಸಾವಿರ ಶ್ರೀಗಂಧದ ಮರಗಳ ಜೊತೆಗೆ ರಕ್ತಚಂದನ, ಹೆಬ್ಬೇವು, ಸೀತಾಫಲ, ಸಪೋಟಾ, ಮಾವು ಸೇರಿದಂತೆ 6 ಸಾವಿರ ಇತರೆ ಜಾತಿ ಗಿಡಗಳನ್ನ ಬೆಳೆಸಿದ್ದಾರೆ.

    ಬಿಬಿಎ ಓದಿರುವ ರಮೇಶ್ ಅವರು ಮೊದಲಿಗೆ ದಾಳಿಂಬೆ ಬೆಳೆದಿದ್ರು. ಆದ್ರೆ, ದುಂಡಾಣು ಅಂಗಮಾರಿ ರೋಗದಿಂದ ಹೈರಾಣಾಗಿ ಹೋದ್ರು. ಬಳಿಕ ನೆನಪಿಗೆ ಬಂದಿದ್ದೇ ಶ್ರೀಗಂಧದ ಕೃಷಿ. ರಮೇಶ್ ಅವರ ಈ ಉಪಾಯ ಕೇಳಿದ ಜನ ನಮ್ಮಲ್ಲಿ ಶ್ರೀಗಂಧ ಬೆಳೆಯೋದಕ್ಕಾಗುತ್ತಾ ಅಂತ ಹೀಯಾಳಿಸಿದ್ದುಂಟು. ಅದನ್ನೇ ಸವಾಲಾಗಿ ಸ್ವೀಕರಿಸಿದ ರಮೇಶ್ ಇದೀಗ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

    ರಮೇಶ್ ಅವರ ಈ ಗಂಧದ ಕೃಷಿ ನೋಡೋಕೆ ದೇಶ ವಿದೇಶದಿಂದ್ಲೂ ರೈತರು ಬಂದು ಹೋಗ್ತಿದ್ದಾರೆ. ಇವರ ಶ್ರೀಗಂಧ ಕೃಷಿ ಪ್ರೇರಣೆಯಿಂದ ನೂರಾರು ರೈತರು ಸಹ ಶ್ರೀಗಂಧ ಕೃಷಿಗೆ ಮುಂದಾಗಿದ್ದಾರೆ.

    ಅಂದಹಾಗೆ, ರಮೇಶ್ ಅವರ ತೋಟದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಕೃಷಿ ಹೊಂಡವಿದೆ. ಹಚ್ಚಹಸಿರಿನ ಕಾನನದಂತೆ ಕಾಣ್ತಿರೋ ತೋಟದಲ್ಲಿ ಹಣ್ಣು ತಿನ್ನೋಕೆ ಪಕ್ಷಿಗಳು ಬರ್ತಿದ್ದು, ಸದಾ ಕಲರವವೂ ಇರುತ್ತೆ.

    https://www.youtube.com/watch?v=mpe5YrTDdRc

  • ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

    ಮಧ್ಯಪ್ರದೇಶದಿಂದ ಬಂದಿದ್ದ ಶ್ರೀಗಂಧ ಚೋರರು ಧಾರವಾಡದಲ್ಲಿ ಅರೆಸ್ಟ್

    ಧಾರವಾಡ: ಜಿಲ್ಲೆಯ ಅರಣ್ಯ ಇಲಾಖೆ ಅಂತರಾಜ್ಯ ಶ್ರೀಗಂಧ ಕಳ್ಳರ ತಂಡವನ್ನು ಬೇಧಿಸಿ 4 ಮಂದಿಯನ್ನು ಬಂಧಿಸಿದೆ.

    ಧಾರವಾಡ ಜಿಲ್ಲೆಯಲ್ಲಿ ಶ್ರೀಗಂಧ ಹಾಗೂ ವನ್ಯ ಜೀವಿ ಸಂಪತ್ತಿಗೆ ಕನ್ನ ಹಾಕುತ್ತಿದ್ದ 20 ಜನರ ಈ ಕಳ್ಳರ ತಂಡ, ಮಧ್ಯಪ್ರದೇಶದಿಂದ ರಾಜ್ಯಕ್ಕೆ ಗುಡಿ ಕೈಗಾರಿಕಾ ವಸ್ತುಗಳ ಮಾರಾಟ ವೇಶದಲ್ಲಿ ಬಂದಿದ್ದರು. ಸದ್ಯ ಧಾರವಾಡ ಅರಣ್ಯ ಇಲಾಖೆ 4 ಮಹಿಳೆಯರನ್ನು ಬಂಧಿಸಿದ್ದು, ಉಳಿದ 16 ಜನರ ಬಂಧನಕ್ಕೆ ಜಾಲ ಬಿಸಿದೆ.

    ಧಾರವಾಡ ಜಿಲ್ಲೆಯ ತೋಟದ ಮನೆಯ ಸಿಸಿಟಿವಿಯಲ್ಲಿ ಈ ಕಳ್ಳರ ಓಡಾಟ ಎಲ್ಲಾ ಸೆರೆಯಾಗಿದೆ. ಬಂಧನಕ್ಕೆ ಒಳಗಾದವರಲ್ಲಿ ಅಧೂರಿ ಠಾಕೂರ್, ಪುಂಜಿ ಆದಿವಾಸಿ, ಗರ್ಮಾಬಾಯಿ ಹಾಗೂ ಜಾಮುಂಡಿ ಆದಿವಾಸಿ ಎಂಬ ಮಹಿಳೆಯರಿದ್ದು, ಅವರಿಂದ ಒಟ್ಟು 9 ಕೆಜಿ ಶ್ರೀಗಂಧ ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ.

    ಸದ್ಯ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.