Tag: sand mafia

  • ಮರಳು ಅಕ್ರಮ ಸಾಗಾಣೆ ತಡೆಯಲು ಬಂದಿದ್ದ ಅಧಿಕಾರಿಯ ಪ್ರಾಣವನ್ನೇ ತೆಗೆದ ಚಾಲಕ!

    ಮರಳು ಅಕ್ರಮ ಸಾಗಾಣೆ ತಡೆಯಲು ಬಂದಿದ್ದ ಅಧಿಕಾರಿಯ ಪ್ರಾಣವನ್ನೇ ತೆಗೆದ ಚಾಲಕ!

    ರಾಯಚೂರು: ಅಕ್ರಮವಾಗಿ ಮರಳು ಸಾಗಿಸುತ್ತ ಲಾರಿಯನ್ನು ತಡೆಯಲು ಬಂದಿದ್ದ ಅಧಿಕಾರಿಯ ಮೇಲೆ ಚಾಲಕನೊಬ್ಬ ಲಾರಿ ಹರಿಸಿ ಪ್ರಾಣವನ್ನೇ ಕಿತ್ತುಕೊಂಡ ಘಟನೆ ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಾನ್ವಿ ತಾಲೂಕಿನ ಚೀಕಪರ್ವಿ ಗ್ರಾಮದ ಮಾನ್ವಿಯ ಸಾಹೇಬ್ ಪಟೇಲ್ ಮೃತ ಅಧಿಕಾರಿ. ಘಟನಾ ಸ್ಥಳದಲ್ಲಿಯೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾನ್ವಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆ ವಿವರ:
    ಸಾಹೇಬ್ ಪಟೇಲ್ ಅವರು ಚೀಕಪರ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾನ್ವಿಯ ಬುದ್ದಿನ್ನಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆಡಿದ್ದ ಅವರು ಇಂದು ಪರಿಶೀಲನೆ ನಡೆಸಲು ಹೋಗಿದ್ದರು. ಈ ವೇಳೆ ಚಾಲಕ ತಪ್ಪಿಸಿಕೊಳ್ಳಲು ಸಾಹೇಬ್ ಪಟೇಲ್ ಅವರ ಕಾಲುಗಳ ಮೇಲೆ ಲಾರಿ ಹರಿಸಿದ್ದಾನೆ. ಪರಿಣಾಮ ಎರಡೂ ಕಾಲು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಹೇಬ್ ಮೃತಪಟ್ಟಿದ್ದಾರೆ.

    ಸಾಹೇಬ್ ಪಟೇಲ್ ಅವರ ಮೃತ ದೇಹವನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಮೃತರ ಕಟುಂಬಸ್ಥರು ಚಾಲಕನನ್ನು ಹಾಗೂ ಅಕ್ರಮವಾಗಿ ಮರಳು ಸಾಗುವವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಕುರಿತು ತನಿಖೆ ಆರಂಭಿಸಿದ್ದು, ಲಾರಿ ಮಾಲೀಕ ಹಾಗೂ ಚಾಲಕನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾನ್ವಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ತಲೆ ಎತ್ತಿದೆ ಹೊಸ ಮರಳು ಮಾಫಿಯಾ!

    ಬೆಂಗ್ಳೂರಲ್ಲಿ ತಲೆ ಎತ್ತಿದೆ ಹೊಸ ಮರಳು ಮಾಫಿಯಾ!

    ಬೆಂಗಳೂರು: ರಾಜ್ಯದಲ್ಲಿ ಎಷ್ಟೇ ಮರಳು ದಂಧೆ ತಡೆಗಟ್ಟಿದರೂ ಒಂದಲ್ಲ ಒಂದು ರೀತಿ ಮರಳು ಮಾಫಿಯಾ ನಡೀತಾನೆ ಇದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ ಮರಳು ಮಾಫಿಯಾವೊಂದು ತಲೆ ಎತ್ತಿದೆ.

    ಮರಳಿಗೆ ಕಬ್ಬಿಣ ಕಾರ್ಖಾನೆಯಿಂದ ಬರುವ ತ್ಯಾಜ್ಯವನ್ನು ಮಿಕ್ಸ್ ಮಾಡಿ ಅಪಾರ್ಟ್ ಮೆಂಟ್‍ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಜರಗನಹಳ್ಳಿ ಮರಳು ಅಡ್ಡೆಯಲ್ಲಿ ಈ ಮಿಕ್ಸಿಂಗ್ ಮಾಫಿಯಾ ನಡೆಯುತ್ತದೆ. ಈ ದಂಧೆಯ ಜಾಲದೊಳಗೆ ಪಬ್ಲಿಕ್ ಟಿವಿ ಎಂಟ್ರಿಯಾಗುತ್ತಿದ್ದಂತೆ ಏನೇನಾಯ್ತು?

    ಕ್ಲೀನರ್: ಬನ್ನಿ ಪರಿಚಯ ಮಾಡಿಕೊಡುತ್ತೀನಿ, ಇಲ್ಲಿ ಬರುತ್ತಿದ್ದಾರೆ ನೋಡಿ ಕೇಳಿ ಇವರಿಗೆ.
    ಪಬ್ಲಿಕ್ ಟಿವಿ: ಇವರಾ?
    ಕ್ಲೀನರ್: ರೋಬೋ ಸ್ಯಾಂಡ್ ಬೇಕಂತೆ ಎರಡು ಲೋಡ್ ನೋಡಿ.
    ಕಿಂಗ್‍ಪಿನ್ ಮಂಜು: ಕ್ರಾಸಿಂಗಾ? ಕ್ರಾಸಿಂಗ್ ಸ್ಯಾಂಡಾ?
    ಪಬ್ಲಿಕ್ ಟಿವಿ: ಹಾ ಎಷ್ಟು? ಎಷ್ಟಾಗತ್ತೆ ಒಂದು ಲೋಡ್.
    ಕಿಂಗ್‍ಪಿನ್ ಮಂಜು: ಟನ್ನೇಜ್ ಲೆಕ್ಕ ಸಾರ್ ಅದು.
    ಪಬ್ಲಿಕ್ ಟಿವಿ: ಟನ್ನೇಜಾ? ಎಷ್ಟು?
    ಕಿಂಗ್‍ಪಿನ್ ಮಂಜು: 2,600 ರೂ.
    ಪಬ್ಲಿಕ್ ಟಿವಿ: ಟನ್ ಗಾ? ಟ್ರಾನ್ಸ್ ಪೋರ್ಟ್ ಎಲ್ಲಾ ನಿಮ್ಮದೇನಾ?
    ಕಿಂಗ್‍ಪಿನ್ ಮಂಜು: ಹೂಂ ಎಲ್ಲಿಗೆ?
    ಪಬ್ಲಿಕ್ ಟಿವಿ: ನಮ್ಮದು ನಾಯಂಡಳ್ಳಿ ಇರುವುದು. ಲಾರಿ ಎಲ್ಲಾ ಅಲ್ಲೇ ಇರೋದು.
    ಕಿಂಗ್‍ಪಿನ್ ಮಂಜು: ನೀವು ನಾಯಂಡಳ್ಳಿ ಇರೋದಾ? ಲಾರಿಗೆ ಬೇಕಾ? ಯಾವ ಗಾಡಿ ನಿಮ್ಮದು 709 ಆ?
    ಪಬ್ಲಿಕ್ ಟಿವಿ: 709 ಒಂದು ಇದೆ. ಇನ್ನೊಂದು ಸಾಕ್ ನಮಗೆ ಅದೇ. ಇದು ಎಷ್ಟು ಬರುತ್ತೆ ಟನ್ನೇಜ್ ಆದರೆ?
    ಕಿಂಗ್‍ಪಿನ್ ಮಂಜು: ಮರಳಾ?
    ಪಬ್ಲಿಕ್ ಟಿವಿ: ಇದು ಒಂದು ಲೋಡ್ ಸಿಗುತ್ತದಾ?
    ಕಿಂಗ್‍ಪಿನ್ ಮಂಜು: ಮರಳಾ?
    ಪಬ್ಲಿಕ್ ಟಿವಿ: ಮರಳಲ್ಲ ಇದು.
    ಕಿಂಗ್‍ಪಿನ್ ಮಂಜು: ಈ ತರದ್ದಾ?
    ಪಬ್ಲಿಕ್ ಟಿವಿ: ಹಾ.
    ಕಿಂಗ್‍ಪಿನ್ ಮಂಜು: ಈ ಗಾಡಿಯಲ್ಲಿ ಬಂದಿರುವುದಾ? ಅದು ಬೇಕಾ? ಯಾವಾಗ ಬೇಕು?
    ಪಬ್ಲಿಕ್ ಟಿವಿ: ಒಂದು ಎರಡು ದಿನ
    ಕಿಂಗ್‍ಪಿನ್ ಮಂಜು: ಫೋನ್ ಮಾಡಿ ಕಳಿಸಿಕೊಡುತ್ತೀನಿ.
    ಪಬ್ಲಿಕ್ ಟಿವಿ: ನಂಬರ್ ಕೊಡಿ ನಿಮ್ಮದು.
    ಕಿಂಗ್‍ಪಿನ್ ಮಂಜು: 40 ಟನ್ ಬರುತ್ತೆ ಇದರಲ್ಲಿ
    ಪಬ್ಲಿಕ್ ಟಿವಿ: 40 ಟನ್ ಹಿಡಿಯುತ್ತದಾ ಇದು?
    ಕಿಂಗ್‍ಪಿನ್ ಮಂಜು: ಬರುತ್ತದೆ ಸಾರ್ 12 ವೀಲ್ ಗಾಡಿ.
    ಪಬ್ಲಿಕ್ ಟಿವಿ: ಎಲ್ಲಿ ಸಿಗುತ್ತದೆ ಇದು?
    ಕಿಂಗ್‍ಪಿನ್ ಮಂಜು: ಬಳ್ಳಾರಿ
    ಪಬ್ಲಿಕ್ ಟಿವಿ: ಓ ಅಲ್ಲಿಂದ ಬರುತ್ತಾ ಇದು.
    ಪಬ್ಲಿಕ್ ಟಿವಿ: ನಿರಂತರವಾಗಿ ನಮಗೆ ಡಿಮ್ಯಾಂಡ್ ಇದ್ದ ಹಾಗೆ ಸಪ್ಲೇ ಮಾಡುತ್ತೀರಾ?
    ಕಿಂಗ್‍ಪಿನ್ ಮಂಜು: ನಿಮಗೆ ಯಾವಾಗ ಬೇಕಾದರು ಹೇಳಿ..

    ಇಷ್ಟು ಆದಮೇಲೆ ಮಿಕ್ಸಿಂಗ್ ಮಾಡುವ ಜಾಗಕ್ಕೆ ಪಬ್ಲಿಕ್ ಟಿವಿ ತಂಡ ಎಂಟ್ರಿ ಕೊಡುತ್ತದೆ. ಅಲ್ಲಿ ಮಿಕ್ಸಿಂಗ್ ಮಾಡುತ್ತಿದ್ದವರನ್ನು ಮಾತನಾಡಿಸಿದಾಗ ಅವರು ಹೇಳಿದ್ದೇನು ನೋಡಿ..
    ಪಬ್ಲಿಕ್ ಟಿವಿ: ಇದು ಅದೇನಾ ಅಣ್ಣಾ? ಮಿಕ್ಸ್ ಆಗಿರುವುದಾ ಇದು?
    ಲಾರಿ ಸಿಬ್ಬಂದಿ: ಹು ಮಿಕ್ಸ್ ಆಗಿರುವುದು.
    ಪಬ್ಲಿಕ್ ಟಿವಿ: ಎಲ್ಲಿ ಬಳ್ಳಾರಿ ಇಂದ ತರುವುದು ನೀವು..?
    ಲಾರಿ ಸಿಬ್ಬಂದಿ: ಬೋರಾಪುರದ್ದು.
    ಪಬ್ಲಿಕ್ ಟಿವಿ: ಬೋರಾಪುರ..? ಎಲ್ಲಿ ಐತಣ್ಣ ಇದು.
    ಲಾರಿ ಸಿಬ್ಬಂದಿ: ಹೊಸಪೇಟೆ
    ಪಬ್ಲಿಕ್ ಟಿವಿ: ಹೊಸಪೇಟೆ ಬೋರಾಪುರ?
    ಲಾರಿ ಸಿಬ್ಬಂದಿ: ಹಾ
    ಪಬ್ಲಿಕ್ ಟಿವಿ: ಎಲ್ಲಿ ಸಿಗುತ್ತದೆ ಅದು ಅಲ್ಲಿ
    ಲಾರಿ ಸಿಬ್ಬಂದಿ: ಗೊತ್ತಿಲ್ಲ ಅಣ್ಣ ಡ್ರೈವರ್  ಕೇಳಬೇಕು.
    ಪಬ್ಲಿಕ್ ಟಿವಿ: ಯಾವುದರ ಇದು ಪುಡಿ
    ಲಾರಿ ಸಿಬ್ಬಂದಿ: ಅದೇನೋ ಪೌಡರು ಗೊತ್ತಿಲ್ಲ. ವೈಟ್ ಸಿಮೆಂಟ್‍ದಂತೆ

    ಪಬ್ಲಿಕ್ ಟಿವಿ: ಅಣ್ಣಾ ಇದು ಗೊತ್ತಾಗಲ್ವಾ?
    ಕಿಂಗ್‍ಪಿನ್ ಜಗದೀಶ್: ಯಾರು ನೀವು?
    ಪಬ್ಲಿಕ್ ಟಿವಿ: ನಮ್ಮದು ನಾಯಂಡಳ್ಳಿಯಲ್ಲಿ ಇದೆ
    ಕಿಂಗ್‍ಪಿನ್ ಜಗದೀಶ್: ಏನು?
    ಪಬ್ಲಿಕ್ ಟಿವಿ: ಲಾರಿ ಸ್ಟ್ಯಾಂಡು, ಇದನ್ನ ನೋಡಿಕೊಂಡು ಬನ್ನಿ ಮೊದಲು ಅಂದರು.
    ಕಿಂಗ್‍ಪಿನ್ ಜಗದೀಶ್: ಯಾರು ಹೇಳಿದ್ದು ನಿಮಗೆ.
    ಪಬ್ಲಿಕ್ ಟಿವಿ: ಇಲ್ಲಿಯವರೆ ಲಾರಿಯವರು ಒಬ್ಬರು. ಹಿಂಗಿದೆ ಲಾಭ ಮಾಡಿಕೊಳ್ಳಂಗಿದ್ದರೆ ಮಾಡಿ ಅಂತ. ನಮಗೇನು ಗೊತ್ತಾ? ದೊಡ್ಡ ದೊಡ್ಡ ಅಪಾರ್ಟ್ ಮೆಂಟ್‍ ಗಳಿಗೆಲ್ಲಾ ಹೊಡಿತೀವಿ.
    ಕಿಂಗ್‍ಪಿನ್ ಜಗದೀಶ್: ನಾವು ಅಪಾರ್ಟ್ ಮೆಂಟ್‍ ಗೆ ಹಾಕುವುದು. ಅದು ಬಂದುಬಿಟ್ಟು ವೇಸ್ಟೇಜ್ ಅಲ್ಲ, ಮಣ್ಣಲ್ಲ ಅದು. ಅದು ಸಿಮೆಂಟ್‍ಗೆ ಹೋಗುವ ಐಟಮ್.
    ಪಬ್ಲಿಕ್ ಟಿವಿ: ಏನ್ ವೇಸ್ಟೇಜ್ ಅಣ್ಣಾ ಅದು.
    ಕಿಂಗ್‍ಪಿನ್ ಜಗದೀಶ್: ವೇಸ್ಟೇಜ್ ಅಲ್ಲ ಅದು. ಸಿಮೆಂಟ್‍ಗೆ ಹೋಗೋದು ಅದು.
    ಪಬ್ಲಿಕ್ ಟಿವಿ: ಸಿಮೆಂಟ್ ಮಾಡುವುದಕ್ಕೆ ಹೋಗುವುದಾ..?
    ಕಿಂಗ್‍ಪಿನ್ ಜಗದೀಶ್: ಸಿಮೆಂಟ್ ಇದರಲ್ಲೇ ಮಾಡೋದು. ಎರಡು-ಮೂರು ಐಟಮ್ ಹಾಕುತ್ತಾರೆ. ಮುಖ್ಯವಾಗಿ ಇದನ್ನೇ ಹಾಕುವುದು.
    ಪಬ್ಲಿಕ್ ಟಿವಿ: ಯಾವುದರ ವೇಸ್ಟೇಜ್ ಇದು
    ಕಿಂಗ್‍ಪಿನ್ ಜಗದೀಶ್: ವೇಸ್ಟೇಜ್ ಅಲ್ಲ ಅದು. ಯಾರು ಹೇಳಿದ್ದು ನಿಮಗೆ.
    ಪಬ್ಲಿಕ್ ಟಿವಿ: ಇಲ್ಲಿಯವರೇ ಲಾರಿಯವರು ಒಬ್ಬರು ಅಣ್ಣಾ.
    ಕಿಂಗ್‍ಪಿನ್ ಜಗದೀಶ್: ಯಾರು..?
    ಪಬ್ಲಿಕ್ ಟಿವಿ: ಅವರ ಹೆಸರು ಏನೋ ಮರೆತೆ. ಇಲ್ಲಿ ಮರಳು ಹಾಕಿಸುವುದಕ್ಕೆ ಬಂದಿದ್ವಿ.

    ಎಲ್ಲಾ ಮರಳಿನಲ್ಲೂ ಮಿಕ್ಸಿಂಗ್ ಇದ್ದೇ ಇರತ್ತದೆ. ಆದರೆ ಮಿಕ್ಸಿಂಗ್ ಪ್ರಮಾಣ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳತ್ತದೆ. ಒಂದು ಲಾರಿ ಮರಳಿಗೆ ಒಂದು ಲಾರಿ ಸ್ಲಾಗ್ ಹಾಕಿ ಮಿಕ್ಸ್ ಮಾಡಿದ ಮರಳನ್ನ ಬಳಕೆ ಮಾಡೋದು ಡೇಂಜರಸ್ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಪೊಲೀಸ್ ಇಲಾಖೆಯಾಗಲೀ ಅಥವಾ ಕಂದಾಯ ಇಲಾಖೆಯಾಗಲೀ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.youtube.com/watch?v=vuyy816MtK4

  • ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

    ಮರಳಿಗೆ ಸರ್ಕಾರಿ ಬೆಲೆ 4 ಸಾವಿರದ 800- ದಂಧೆಕೋರರು ಪಡೆಯೋದು 14 ಸಾವಿರ

    – ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಕೋರರು ಆಡಿದ್ದೇ ಆಟ, ಅಧಿಕಾರಿಗಳು ಮಾಡಿದ್ದೇ ಕಾರುಬಾರು ಎನ್ನುವ ಪರಿಸ್ಥಿತಿ ಎದುರಾಗಿದೆ.

    ಬಾದಾಮಿ ಜನರು ಸಿದ್ದರಾಮಯ್ಯ ಮೇಲೆ ಇಟ್ಟುಕೊಂಡಿದ್ದ ನಿರೀಕ್ಷೆ ಈಗ ಹುಸಿಯಾಗುತ್ತಿದೆ. ಯಾಕೆಂದರೆ ಓರ್ವ ಮಾಜಿ ಸಿಎಂ ಈ ಕ್ಷೇತ್ರದ ಶಾಸಕರಾದರೂ ಕ್ಷೇತ್ರದಲ್ಲಿನ ಅಕ್ರಮ ಮರಳುಗಾರಿಕೆ ನಿಂತಿಲ್ಲ. ಬಾದಾಮಿ ತಾಲೂಕಿನ ಜಾಲಿಹಾಳ, ಚೊಳಚಗುಡ್ಡ, ನಾಗರಾಳ, ಸುಳ್ಳ, ಹೆಬ್ಬಳ್ಳಿ, ಕಿತ್ತಳಿ ಸೇರಿದಂತೆ 11 ಖಾಸಗಿ ಜಾಗದಲ್ಲಿ ಲೀಸ್ ಮೇಲೆ ಸರ್ಕಾರಿ ಬೆಲೆ ಮೂಲಕ ಮರಳು ಮಾರಾಟ ನಡೆಯುತ್ತಿದೆ. 10 ಟನ್ ಮರಳಿಗೆ 4 ಸಾವಿರ 800 ರೂಪಾಯಿ ಸರ್ಕಾರಿ ಬೆಲೆ ಇದೆ. ಆದರೆ ಲೀಸ್‍ದಾರರು 14 ಸಾವಿರ ಹಣ ಪಡೆಯುತ್ತಿದ್ದಾರೆ. ಲೀಸ್‍ದಾರರ ಜೊತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

    ಬಾದಾಮಿ ಕ್ಷೇತ್ರದ ಹನ್ನೊಂದು ಮರಳು ಬ್ಲಾಕ್‍ನಲ್ಲಿ ಅಲ್ಲಿನ ಲೀಸ್‍ದಾರರೆ ಯಜಮಾನರಾಗಿದ್ದಾರೆ. ಟಿಪ್ಪರ್ ಮಾಲೀಕರಿಗೆ ನೀಡಿದ ಮರಳಿಗೆ ಇಲ್ಲಿ ಯಾವುದೇ ಬಿಲ್‍ನ್ನು ನೀಡಲ್ಲ. ಟಿಪ್ಪರ್ ಮಾಲೀಕರು ವಾಹನ ಬಾಡಿಗೆ ಡ್ರೈವರ್ ಖರ್ಚು ಸೇರಿ ಜನರಿಗೆ 17 ಸಾವಿರಕ್ಕೆ ಮರಳನ್ನು ತಲುಪಿಸುತ್ತಿದ್ದಾರೆ. ಜೊತೆಗೆ ಮರಳಿಗಾಗಿ ಮಲಪ್ರಭಾ ನದಿಯನ್ನು ಕೂಡ ಬಗೆಯುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಬೇರೆನೇ ಕಾರಣಗಳನ್ನು ಹೇಳುತ್ತಿದ್ದಾರೆ.

    ಮಾಜಿ ಸಿಎಂ ಕ್ಷೇತ್ರದಲ್ಲಿ ಸಕ್ರಮವಾಗಿ ನಡೆಯಬೇಕಿದ್ದ ಮರಳುಗಾರಿಕೆ ಅಕ್ರಮವಾಗಿ ನಡೆಯುತ್ತಿದೆ. ಸಿದ್ದರಾಮಯ್ಯನವರು ಇತ್ತ ಗಮನಹರಿಸಿ ಈ ಮರಳು ದಂಧೆಗೆ ಕಡಿವಾಣ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಾವಣಗೆರೆಯಲ್ಲಿ ಅಕ್ರಮ ಮರಳು ಅಡ್ಡೆಗಳ ಅಬ್ಬರ – ತಡೆಯಲು ಬಂದ ಅರಣ್ಯಾಧಿಕಾರಿ ಟೀಂ ಮೇಲೆ ಹಲ್ಲೆ

    ದಾವಣಗೆರೆಯಲ್ಲಿ ಅಕ್ರಮ ಮರಳು ಅಡ್ಡೆಗಳ ಅಬ್ಬರ – ತಡೆಯಲು ಬಂದ ಅರಣ್ಯಾಧಿಕಾರಿ ಟೀಂ ಮೇಲೆ ಹಲ್ಲೆ

    ದಾವಣಗೆರೆ: ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಅಕ್ರಮ ಮರಳು ದಂಧೆಕೋರರು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕ್ಯಾಸೇನಹಳ್ಳಿ ಬೀಟ್‍ನ ದೇವಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ದೇವಿಪುರ ಅರಣ್ಯ ಪ್ರದೇಶದಲ್ಲಿ ದಂಧೆಕೋರರು ಅಕ್ರಮವಾಗಿ ಟ್ರ್ಯಾಕ್ಟರ್‍ಗೆ ಮರಳು ತುಂಬುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮರಳು ದಂಧೆಕೋರರನ್ನು ತಡೆಯಲು ಮುಂದಾದ್ರು. ಆಗ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ದಂಧೆಕೋರರು ಏಕಾಏಕಿ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.

    ಘಟನೆಯಲ್ಲಿ ಅರಣ್ಯ ರಕ್ಷಕ ಶಿವರೆಡ್ಡಿ, ವಾಹನ ಚಾಲಕ ಚಂದ್ರುಗೆ ಗಂಭೀರ ಗಾಯಗಳಾಗಿದ್ದು, ಅರಣ್ಯ ವೀಕ್ಷಕ ಬೋರಯ್ಯ ಹಾಗೂ ಹನುಮಂತಪ್ಪಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಲ್ಲೆ ನಡೆಸಿದ ಓಬಳೇಶ್, ಪಾಪಣ್ಣ, ಬೆಳ್ಳಿ ನಾಗರಾಜ, ದಾದ, ಮಹಾಂತೇಶ್, ಗುರುಸ್ವಾಮಿ, ಹನುಮಂತ ಹಾಗೂ ರಂಗಪ್ಪ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಸ್ಮಶಾನವನ್ನೂ ಬಿಡದ ಮರಳುದಂಧೆಕೋರರು- ಅರೆಬರೆ ಕೊಳೆತ ಶವ, ಅಸ್ಥಿಪಂಜರ ಬೇರ್ಪಡಿಸಿ ಮರಳು ಲೂಟಿ

    ಸ್ಮಶಾನವನ್ನೂ ಬಿಡದ ಮರಳುದಂಧೆಕೋರರು- ಅರೆಬರೆ ಕೊಳೆತ ಶವ, ಅಸ್ಥಿಪಂಜರ ಬೇರ್ಪಡಿಸಿ ಮರಳು ಲೂಟಿ

    ಚಿತ್ರದುರ್ಗ: ಮರಳು ದಂಧೆಕೋರರಿಗೆ ಮರಳು ಯಾವ ಜಾಗದಾದ್ರೂ ಬರವಾಗಿಲ್ಲಾ. ಕೈ ತುಂಬಾ ಗರಿ ಗರಿ ನೋಟು ಸಿಕ್ಕರೆ ಸಾಕು. ಸ್ಮಶಾನದಲ್ಲಿ ಸಿಗೋ ಉತ್ಕೃಷ್ಠ ಮರಳಿಗಾಗಿ ಅರೆಬರೆ ಕೊಳೆತ ಶವ, ಅಸ್ಥಿಪಂಜರಗಳನ್ನೂ ಬೇರ್ಪಡಿಸಿ ರಾಜಾರೋಷವಾಗಿ ಮರಳು ಲೂಟಿ ಮಾಡ್ತಾರೆ.

    ಚಿತ್ರದುರ್ಗದ ಪರಶುರಾಂಪುರ ಗ್ರಾಮದ ಹೊರವಲಯದಲ್ಲಿರುವ ಸ್ಮಶಾನದಲ್ಲಿ ಮರಳು ಕುಳಗಳು ಸಮಾಧಿ ಅಂತಾನೂ ನೋಡದೇ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸ್ತಿದ್ದಾರೆ. ಪರಿಣಾಮ ಹೂತು ಹಾಕಿದ ಹೆಣಗಳ ಕೈ ಕಾಲು ಮೂಳೆ, ತಲೆಬುರುಡೆ ಮೇಲೆದ್ದು ಬರ್ತಿದೆ. ಶವಸಂಸ್ಕಾರ ಮಾಡಿ ಕೆಲವೇ ದಿನವೇ ಆದ ಶವದ ಕೆಲ ಭಾಗಗಳು ಕಾಗೆ, ತೋಳಗಳಿಗೆ ಆಹಾರವಾಗ್ತಿದೆ.

    ಸ್ಮಶಾನದ ಬಳಿ ರಸ್ತೆ ಇರುವುದಿಂದ ಜನ ನಿತ್ಯ ಓಡಾಡ್ತಾರೆ. ಈ ವೇಳೆ ಅಲ್ಲಲ್ಲಿ ಬಿದ್ದಿರೋ ಮೂಳೆ, ಅಸ್ಥಿಪಂಜರ ನೋಡಿ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಅನ್ನದ ಮರಳು ಧಂದೆಕೋರರು ಎಗ್ಗಿಲ್ಲದೇ ಅಕ್ರಮ ಮರಳುಗಾರಿಗೆ ನಡೆಸ್ತಿದ್ದಾರೆ. ಗ್ರಾಮದ ಬೇರೆ ಕಡೆ ಪ್ರತ್ಯೇಕ ರುದ್ರಭೂಮಿ ನಿರ್ಮಿಸಲಾಗಿದೆ. ಆದ್ರೆ ಅಲ್ಲಿನ ನೆಲ ಗಟ್ಟಿ ಅನ್ನೋ ಕಾರಣಕ್ಕೆ ನದಿ ಮರಳಲ್ಲೇ ಶವ ಹೂಳ್ತಿದ್ದಾರೆ. ಇದಕ್ಕೆ ಸ್ಥಳೀಯ ಪಂಚಾಯತ್ ಕಡಿವಾಣ ಹಾಕಬೇಕಿದೆ.

    ಒಟ್ಟಿನಲ್ಲಿ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು. ಇಲ್ಲವೆಂದಲ್ಲಿ ಬೇರೆಡೆ ಶವ ಹೂಳುವ ವ್ಯವಸ್ಥೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

  • ಡಿಸಿ ಕೊಲೆ ಯತ್ನ ಪ್ರಕರಣ: ದೈಹಿಕವಾಗಿ ಉಡುಪಿಯಲ್ಲಿರಲಿಲ್ಲ, ಮಾನಸಿಕವಾಗಿದ್ದು ಮಾಹಿತಿ ಪಡ್ದಿದ್ದೀನಿ- ಪ್ರಮೋದ್ ಮಧ್ವರಾಜ್

    ಡಿಸಿ ಕೊಲೆ ಯತ್ನ ಪ್ರಕರಣ: ದೈಹಿಕವಾಗಿ ಉಡುಪಿಯಲ್ಲಿರಲಿಲ್ಲ, ಮಾನಸಿಕವಾಗಿದ್ದು ಮಾಹಿತಿ ಪಡ್ದಿದ್ದೀನಿ- ಪ್ರಮೋದ್ ಮಧ್ವರಾಜ್

    ಉಡುಪಿ: ಮರಳು ಮಾಫಿಯಾದಿಂದ ಉಡುಪಿ ಜಿಲ್ಲಾಧಿಕಾರಿ, ಎಸಿ ಸೇರಿದಂತೆ 7 ಮಂದಿಯ ಕೊಲೆಯತ್ನ ಪ್ರಕರಣ ನಡೆದು ಆರು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉಡುಪಿ ಜಿಲ್ಲೆಗೆ ಆಗಮಿಸಿದ್ರು.

    ರಾಷ್ಟ್ರಮಟ್ಟದಲ್ಲಿ ಪ್ರಕರಣ ಸದ್ದು ಮಾಡಿದ್ದರೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಸಚಿವರು ಉಡುಪಿ ಜಿಲ್ಲೆಯ ಕಡೆ ತಲೆಯೇ ಹಾಕಿರಲಿಲ್ಲ. ಇಂದು ಉಡುಪಿಗೆ ಬಂದು ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದರು.

    ನಾನು ದೈಹಿಕವಾಗಿ ಉಡುಪಿಯಲ್ಲಿ ಇರಲಿಲ್ಲ. ಮಾನಸಿಕವಾಗಿ ಇಲ್ಲೇ ಇದ್ದು ಎಲ್ಲಾ ಮಾಹಿತಿಗಳನ್ನು ಪಡೆದುಕೊಂಡಿದ್ದೇನೆ. ನಾನಿಲ್ಲಿ ಬಂದು ಮಾಡುವಂತದ್ದೇನೂ ಇಲ್ಲ. ಮುಂದೆಯೂ ಈ ಬಗ್ಗೆ ಅಧಿಕಾರಿಗಳ ಸಭೆ ಕರೆಯೋದಿಲ್ಲ. ಸಭೆ ಕರೆದು ಚರ್ಚೆ ಮಾಡಿದ್ರೆ ಅದಕ್ಕೆ ರಾಜಕೀಯ ಬಣ್ಣ ಬರುತ್ತದೆ. ನಾನು ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂಬ ಆರೋಪ ಬರುತ್ತದೆ. ಹೀಗಾಗಿ ಸಭೆ ಕರೆಯುವುದಿಲ್ಲ ಎಂದು ಘಟನೆ ಸಂಬಂಧ ಸಭೆ ನಡೆಸದ ಬಗ್ಗೆ ಸ್ಪಷ್ಟನೆ ನೀಡಿದರು.

    ಮರಳು ಮಾಫಿಯಾ ವಿರುದ್ಧ ಜಿಲ್ಲಾಧಿಕಾರಿ, ಎಸಿ ಮತ್ತು ಎಸ್‍ಪಿ ಅವರಿಗೆ ಸಂಪೂರ್ಣ ಜವಾಬ್ದಾರಿ ಕೊಡಲಾಗಿದೆ. ಅಕ್ರಮ ಮತ್ತು ಕಾನೂನು ಚಟುವಟಿಕೆಗಳಿಗೆ ನನ್ನ ಬೆಂಬಲವಿಲ್ಲ. ವಿರೋಧ ಪಕ್ಷಗಳಿಗೆ ಎರಡು ನಾಲಗೆ ಬಾಯಿಗೆ ಬಂದಂತೆ ಟೀಕೆ ಮಾಡುತ್ತದೆ ಎಂದು ಹರಿಹಾಯ್ದರು. ಈ ಹಿಂದೆ ಅಕ್ರಮ ಮರಳುಗಾರಿಕೆ ನಡೆದಾಗ ನಾನೇ ಎಸಿಯವರಿಗೆ ಮತ್ತು ಗ್ರಾಮ ಪಂಚಾಯತ್‍ನ ವಿಎ ಗೆ ಫೋನ್ ಮಾಡಿ ದೂರು ನೀಡಿದ್ದೆ. ಅನಧಿಕೃತ ಮರಳುಗಾರಿಕೆ ನಡೆಯುತ್ತಿದ್ದಾಗ ಡಿಸಿಗೂ ದೂರು ನೀಡಿದ್ದೆ. ನನ್ನ ಆಪ್ತರು ಮರಳುಗಾರಿಕೆ ಮಾಡಿದ್ದಾಗಲೂ ಎಸಿಯವರಿಗೆ ದೂರು ನೀಡಿದ್ದೇನೆ. ಮಾಧ್ಯಮದವರು ಇದನ್ನು ಕ್ರಾಸ್ ಚೆಕ್ ಮಾಡ್ಬಹುದು ಎಂದು ಹೇಳಿದರು.

    ಜಿಲ್ಲಾಧಿಕಾರಿಗಳ ಕಾರ್ಯ ತತ್ಪರತೆ, ಪ್ರಾಮಾಣಿಕತೆ, ಧೈರ್ಯ ಮತ್ತು ದಂಡಾಧಿಕಾರಿಯಾಗಿ ಜಿಲ್ಲೆಯ ಬಗೆಗಿನ ಬದ್ಧತೆಯ ಬಗ್ಗೆ ಇರುವ ಕಾಳಜಿ ಬಗ್ಗೆ ನನಗೆ ಸಂತಸವಾಗಿದೆ. ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ಅಕ್ರಮ ವಿರುದ್ಧದ ಕಾರ್ಯಾಚರಣೆ ಮುಂದುವರೆಸಲು ಹೇಳಿದ್ದೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

     

  • ಶಿವಮೊಗ್ಗದ ಹೆಗ್ಗೋಡಿನಲ್ಲಿ ಭಾರೀ ಮರಳು ದಂಧೆ- ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಕಾರ್ಮಿಕರು ದಿಕ್ಕಾಪಾಲು

    ಶಿವಮೊಗ್ಗದ ಹೆಗ್ಗೋಡಿನಲ್ಲಿ ಭಾರೀ ಮರಳು ದಂಧೆ- ಪಬ್ಲಿಕ್ ಟಿವಿ ಕ್ಯಾಮೆರಾ ಕಂಡು ಕಾರ್ಮಿಕರು ದಿಕ್ಕಾಪಾಲು

    ಶಿವಮೊಗ್ಗ: ಖಡಕ್ ಸಚಿವ ಎಂದೇ ಹೆಸರಾಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಕ್ಷೇತ್ರದಲ್ಲೇ ಅಕ್ರಮ ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ.

    ರಂಗಭೂಮಿ, ಕಲೆ ಸಂಸ್ಕೃತಿಗೆ ಹೆಸರಾದ ಹೆಗ್ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೇ ಈ ಅಕ್ರಮ ನಡೆಯುತ್ತಿದೆ. ಅಕ್ರಮವನ್ನು ಕಣ್ಣಾರೆ ಕಾಣಲು ಸ್ಥಳಕ್ಕೆ ಪಬ್ಲಿಕ್ ಟಿವಿ ಹೋಗಿತ್ತು. ಆದ್ರೆ ಕ್ಯಾಮೆರಾ ಕಂಡೊಡನೇ ಅಕ್ರಮ ಕಾರ್ಯಚರಣೆ ಮಾಡುತ್ತಿದ್ದವರು ಎದ್ದು ಬಿದ್ದು ಓಡಿದ್ರು.

    ಹೆಗ್ಗೋಡು ಗ್ರಾ.ಪಂ. ಗೆ ಸೇರಿದ ಹೆಗ್ಗಟ್ಟು, ಗೀಜಗ, ಸೊಪ್ಪಿನಮಲ್ಲಿ, ಇಂಡುವಳ್ಳಿ, ಹೆಬ್ಬರಿಗೆ ಮುಂತಾದ ಪ್ರದೇಶಗಳಲ್ಲಿ ಶರಾವತಿ ಹಿನ್ನೀರಿನಿಂದ ನಿರ್ಮಾಣವಾದ ದೊಡ್ಡ ದೊಡ್ಡ ಮರಳು ದಿಬ್ಬಗಳಿವೆ. ಈ ಪ್ರದೇಶದ ಸುಮಾರು 12 ಕಿ.ಮೀ. ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮರಳು ದಿಬ್ಬಗಳಿವೆ.

    ಕಾನೂನು ಪ್ರಕಾರ ಇಲ್ಲಿಂದ ಮರಳು ತೆಗೆಯುವಂತಿಲ್ಲ. ಆದರೂ ಇಲ್ಲಿಂದ ಪ್ರತಿ ರಾತ್ರಿಯೂ ಕನಿಷ್ಠ ನೂರು ಲೋಡ್ ಲಾರಿ ಮರಳು ರವಾನೆ ಆಗುತ್ತದೆ. ಹಗಲು ವೇಳೆ ಇಲ್ಲಿ ಮರಳು ರಾಶಿ ಮಾಡಲಾಗುತ್ತದೆ. ರಾತ್ರಿ 8 ರಿಂದ ಮುಂಜಾನೆಯವರೆಗೂ ಲಾರಿಗಳಿಗೆ ತುಂಬಿ ಕಳಿಸಲಾಗುತ್ತದೆ.ಈ ದೃಶ್ಯಾವಳಿಯನ್ನು ಸೆರೆ ಹಿಡಿಯಲು ಪಬ್ಲಿಕ್ ಟಿವಿ ಹೋದಾಗ ಮರಳು ರಾಶಿ ಮಾಡಲಾಗುತ್ತಿತ್ತು. ಕ್ಯಾಮೆರಾ ಕಂಡೊಡನೆಯೇ ಆ ಕೆಲಸಗಾರರು ಎದ್ವೋ-ಬಿದ್ವೋ ಅಂತ ದಿಕ್ಕಾಪಾಲಾಗಿ ಓಡಿ  ಪೊದೆಗಳಲ್ಲಿ ಕಣ್ಮರೆಯಾದರು.

  • ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣ- 5 ಮರಳು ದಂಧೆಕೋರರ ಗಡಿಪಾರು

    ಉಡುಪಿ: ಜಿಲ್ಲಾಧಿಕಾರಿ ಮತ್ತು 6 ಮಂದಿಯ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಐದು ಮಂದಿಯನ್ನು ಗಡಿಪಾರು ಮಾಡಿದ್ದಾರೆ.

    ಉಡುಪಿ ಎಸ್‍ಪಿ ಕೆಟಿ ಬಾಲಕೃಷ್ಣ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಘಟನೆ ನಡೆದ ನಂತರ ಈವರೆಗೆ 150 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. 8 ಮರಳುಗಾರಿಕಾ ಬೋಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಡ್ಲೂರು ಮರಳು ಧಕ್ಕೆ ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ತನಿಖೆಯಾಗುತ್ತಿದೆ ಎಂದರು.

    ಪ್ರಕರಣ ಸಂಬಂಧ 60 ಮಂದಿಯ ಮೇಲೆ ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 4 ಮಂದಿಯ ಮೇಲೆ ಐಪಿಸಿ ಸೆಕ್ಷನ್ 110ರ ಅನ್ವಯ ಕೇಸು ದಾಖಲು ಮಾಡಲಾಗಿದೆ. ಈ ಹಿಂದಿನ ಎಲ್ಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ 5 ಮಂದಿ ಅಕ್ರಮ ಮರಳು ದಂಧೆಕೋರರನ್ನು ಗಡಿಪಾರು ಮಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿಗಳಿಗೆ ಹಲ್ಲೆ ಮತ್ತು ಕೊಲೆಯತ್ನ ನಡೆಸಿದ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಅಂದು ಸ್ಥಳದಲ್ಲಿದ್ದವರು ತಲೆಮರೆಸಿಕೊಂಡಿದ್ದಾರೆ ಎಂದು ಎಸ್‍ಪಿ ಕೆಟಿ ಬಾಲಕೃಷ್ಣ ಮಾಹಿತಿ ನೀಡಿದರು.

  • ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್

    ಉಡುಪಿ ಡಿಸಿ ಮೇಲೆ ಕೊಲೆ ಯತ್ನ ನಡೆದ ಮರಳು ಅಡ್ಡೆ ಕಾಂಗ್ರೆಸಿಗರದ್ದು: ರಘುಪತಿ ಭಟ್

    ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ, ಎಸಿ ಶಿಲ್ಪಾನಾಗ್ ಸೇರಿದಂತೆ ಏಳು ಮಂದಿಯ ಕೊಲೆ ಯತ್ನ ನಡೆದ ಕುಂದಾಪುರದ ಕಂಡ್ಲೂರು ಮರಳು ಅಡ್ಡೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸೇರಿದ್ದು ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಗಂಭೀರ ಆರೋಪ ಮಾಡಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಘುಪತಿ ಭಟ್, ಜಿಲ್ಲಾಪಂಚಾಯತ್‍ನ ಮಾಜಿ ಸದಸ್ಯರೊಬ್ಬರಿಗೆ ಸೇರಿದ ಅಡ್ಡೆಯಿದು. ಸ್ವಜನಪಕ್ಷಪಾತ ಮಾಡುವ ಕಾಂಗ್ರೆಸ್ ಸರ್ಕಾರ, ಅವರ ಹೆಸರು ಬಹಿರಂಗಪಡಿಸುತ್ತಿಲ್ಲ. ಜಿಲ್ಲಾಧಿಕಾರಿಗಳ ಮೇಲೆ 50ಕ್ಕೂ ಹೆಚ್ಚು ಮಂದಿ ಕೊಲೆಗೆ ಯತ್ನ ಮಾಡಿದ್ರೂ, ಕೇವಲ 7 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಕಾರ್ಮಿಕರು, ಮರಳು ಅಡ್ಡೆಯ ಮಾಲೀಕರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೃಪಾಕಟಾಕ್ಷ ಇದೆ ಎಂದು ಹೇಳಿದರು.

    ಸಚಿವರೂ ಅಕ್ರಮ ಮರಳುಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಗುಮಾನಿಯಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ವೈಫಲ್ಯವಿದೆ. ಜಿಲ್ಲಾಧಿಕಾರಿಗಳ ಕೊಲೆ ಯತ್ನ ನಡೆದರೂ ಉಸ್ತುವಾರಿ ಸಚಿವರು ಘಟನೆ ನಡೆದು ನಾಲ್ಕು ದಿನಗಳಾದರೂ ಜಿಲ್ಲೆಗೆ ಬಂದಿಲ್ಲ. ಅವರಿಗೆ ಉಪಚುನಾವಣೆಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.

    ಕಳೆದ ನಾಲ್ಕು ವರ್ಷದಿಂದ ಮರಳುಗಾರಿಕೆ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದೇವೆ. ಕಾನೂನು ರೀತಿಯ ಮರಳು ತೆಗೆಯುತ್ತಿದ್ದದ್ದಕ್ಕೆ ಸಚಿವರ ಕಡೆಯ ಜನರಿಂದಲೇ ಕಾನೂನು ಹೋರಾಟ ಮಾಡಿಸಿ ಹಸಿರು ಪೀಠದಿಂದ ತಡೆ ತರಿಸಿದ್ದಾರೆ. ಇನ್ನೊಂದು ಕಡೆಯಿಂದ ಕಾಂಗ್ರೆಸ್ ಪಕ್ಷದವರೇ ಮರಳುಗಾರಿಕೆ ಮಾಡುತ್ತಿದ್ದಾರೆ. ಅದಕ್ಕೆ ಸಚಿವರ ಬೆಂಬಲವಿದೆ. ಇಂತಹ ಗೊಂದಲದಿಂದಲೇ ಜಿಲ್ಲಾಧಿಕಾರಿಗಳ ಮೇಲೆ ಕೊಲೆಯತ್ನ ಮಾಡಲಾಗಿದೆ. ಗ್ರಾಮಲೆಕ್ಕಾಧಿಕಾರಿ ಅವರನ್ನು ಮನಬಂದಂತೆ ಹೊಡೆದು ನೀರಿಗೆ ಬಿಸಾಕಿದ್ದಾರೆ. ಇಷ್ಟೆಲ್ಲಾ ಆದ್ರೂ ಸರಿಯಾದ ಕ್ರಮ ಆಗ್ತಾಯಿಲ್ಲ ಎಂದು ರಘುಪತಿ ಭಟ್ ಆರೋಪಿಸಿದರು.

  • ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

    ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

    ಕಲಬುರಗಿ: ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ, `ಜನರ ಎಸಿ’ ಅಂತಾನೇ ಖ್ಯಾತಿಯಾಗಿದ್ದ ಸೇಡಂ ಎಸಿ ಭೀಮಾಶಂಕರ್ ತೆಗಳ್ಳಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.

    ಭೀಮಾಶಂಕರ್ ತೆಗಳ್ಳಿ ಅವರು ಕಳೆದ ಎರಡು ತಿಂಗಳಲ್ಲಿ 48 ಪ್ರಕರಣ ಪತ್ತೆ ಮಾಡಿದ್ದರು. ಮಾತ್ರವಲ್ಲದೇ 2016ರಲ್ಲಿ 276 ಅಕ್ರಮ ಮರಳು ದಂಧೆ ಪ್ರಕರಣ ದಾಖಲಿಸಿದ್ದರು. ರಾತ್ರಿ ವೇಳೆ ನಡೆಯೋ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರು.

    ಏಕ ಕಾಲದಲ್ಲಿ ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ಎಸಿಯಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದ ಇವರು `ಜನರ ಎಸಿ’ ಅಂತಾನೆ ಖ್ಯಾತಿ ಪಡೆದಿದ್ದರು. ಕಳೆದ ವಾರ ತೆಗಳ್ಳಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಭೀಮಾಶಂಕರ್ ಅವರ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಅಧಿಕಾರಿಯಾಗಿ ಭೀಮಾಶಂಕರ್ ತೆಗಳ್ಳಿ ವರ್ಗಾವಣೆಗೊಂಡಿದ್ದಾರೆ.