Tag: Samyukta Hornad

  • ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ಲೈಫು ಇಷ್ಟೇನೆ, ಟೋಬಿ ಸಿನಿಮಾ ಖ್ಯಾತಿಯ ಸಂಯುಕ್ತಾ ಹೊರನಾಡ್ ‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಜೊತೆ ನಟಿಸಿದ್ದು, ಚಿತ್ರೀಕರಣ ಅನುಭವದ ಬಗ್ಗೆ ಹಂಚಿಕೊಂಡಿದ್ದಾರೆ. ನಾನು ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ಎಂದು ಸಂಯುಕ್ತಾ ಮಾತನಾಡಿದ್ದಾರೆ. ಇದನ್ನೂ ಓದಿ:‘ಕ್ಯಾ ಲಫ್ಡಾ’ ಅಂತಾ ಹೆಜ್ಜೆ ಹಾಕಿದ ರಾಮ್ ಪೋತಿನೇನಿ, ಕಾವ್ಯಾ ಥಾಪರ್

    ನಾನು ಸುದೀಪ್ ಸರ್ ಅವರ ದೊಡ್ಡ ಅಭಿಮಾನಿ. ನಾನು ಈ ಹಿಂದೆ ‘ಜಿಗರ್‌ಥಂಡ’ ಸಿನಿಮಾದಲ್ಲಿ ಅವರ ಜೊತೆ ಕೆಲಸ ಮಾಡಿದ್ದೇನೆ. ಸರ್ ಕೆಲಸ ಮಾಡುವಾಗ ಸಿನಿಮಾ ಮೇಕಿಂಗ್‌ನಲ್ಲೂ ಭಾಗಿಯಾಗುತ್ತಿದ್ದರು. ಅವರ ಎನರ್ಜಿ, ಸಿನಿಮಾ ಮೇಲೆ ಅವರಿಗಿರುವ ಪ್ರೀತಿ ಮಾತ್ರ ಅದ್ಭುತ. ಅವರ ಜೊತೆ ನಾನು ತೆರೆಹಂಚಿಕೊಂಡಿರೋದಕ್ಕೆ ಖುಷಿಯಿದೆ ಎಂದು ಸಂಯುಕ್ತಾ ಹೊರನಾಡ್ (Samyukta Hornad) ಸಂತಸ ವ್ಯಕ್ತಪಡಿಸಿದ್ದಾರೆ.

    ‘ಮ್ಯಾಕ್ಸ್’ ಸಿನಿಮಾ ಈಗೀನ ಕಾಲಕ್ಕೆ ತಕ್ಕಂತೆ ಇದೆ. ಚಿತ್ರದಲ್ಲಿ ದೊಡ್ಡ ಮಟ್ಟದ ಸ್ಟಂಟ್ಸ್ ಕೂಡ ಇದೆ. ಬಾಡಿ ಡಬಲ್ ಬಳಸದೆ ಸುದೀಪ್‌ ಸರ್ ತಾವೇ ಸ್ಟಂಟ್ಸ್ ಮಾಡಿದ್ದಾರೆ. ಈ ಚಿತ್ರ ಫ್ಯಾನ್ಸ್‌ಗೆ ಪೈಸಾ ವಸೂಲ್ ಸಿನಿಮಾ ಆಗಿದೆ. ‘ಮ್ಯಾಕ್ಸ್’ ಸಿನಿಮಾ ನಿಜಕ್ಕೂ ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಟಿ ಮಾತನಾಡಿದ್ದಾರೆ.

    ‘ಮ್ಯಾಕ್ಸ್’ (Max Film) ಸಿನಿಮಾದಲ್ಲಿ ಸುದೀಪ್ (Sudeep) ಜೊತೆ ಸಂಯುಕ್ತಾ ಹೊರನಾಡ್, ವರಲಕ್ಷ್ಮಿ ಶರತ್‌ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಚಿತ್ರದ ಮೊದಲ ಟೀಸರ್ ಇತ್ತೀಚೆಗೆ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸುದೀಪ್ ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಈಗ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    Kiccha 46: ಸುದೀಪ್‌ ಸಿನಿಮಾದಲ್ಲಿ ಸಂಯುಕ್ತಾ ಹೊರನಾಡ್

    ‘ಲೈಫು ಇಷ್ಟೇನೆ’ ಎಂದು ಹೇಳುತ್ತ ಸ್ಯಾಂಡಲ್‌ವುಡ್‌ಗೆ(Sandalwood) ಪಾದಾರ್ಪಣೆ ಮಾಡಿದ್ದ ಚೆಂದುಳ್ಳಿ ಚೆಲುವೆ ಸಂಯುಕ್ತಾ ಹೊರನಾಡ್ (Samyukta Hornad) ಈಗ ಕಿಚ್ಚನ ಬಳಗಕ್ಕೆ ಜಾಯಿನ್ ಆಗಿದ್ದಾರೆ. ಕಿಚ್ಚ 46ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:‘ಭಾಗ್ಯಲಕ್ಷ್ಮಿ’ ನಕಲಿ ಅಪ್ಪನಾಗಿ ಬಿಗ್ ಬಾಸ್ ಮಂಜು ಪಾವಗಡ ಎಂಟ್ರಿ

    ಕಿಚ್ಚ ಸುದೀಪ್ (Kiccha Sudeep) ನಟನೆಯ ‘K 46’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸಿನಿಮಾದ ಮೊದಲ ಟೀಸರ್‌ಗೆ ಕಿಚ್ಚನ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈಗ ಕಿಚ್ಚ 46ನಲ್ಲಿ ಸಂಯುಕ್ತಾ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ.

    ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಜನ್ಮದಿನವಾಗಿದ್ದು, ಅಂದು ಸುದೀಪ್ ನಟನೆಯ 46ನೇ ಸಿನಿಮಾದ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಚಿಸಿದೆ. ಸಿನಿಮಾ ಬಗೆಗಿನ ಇನ್ನಿತರ ಮಾಹಿತಿ ಹಂಚಿಕೊಳ್ಳುತ್ತಾರಾ ಕಾದುನೋಡಬೇಕಿದೆ.

    ಈ ವರ್ಷ ಹೊಂದಿಸಿ ಬರೆಯಿರಿ, ಕ್ರಾಂತಿ, ಲವ್ ಬರ್ಡ್ಸ್ (Love Birds) ಸಿನಿಮಾದಲ್ಲಿ ಸಂಯುಕ್ತಾ ನಟಿಸಿದ್ದಾರೆ. ಕಿಚ್ಚನ ಟೀಮ್‌ ಕಡೆಯಿಂದ ಸಂಯುಕ್ತಾ ರೋಲ್ ಕುರಿತು ಅಫಿಷಿಯಲ್ ಅಪ್‌ಡೇಟ್ ಸಿಗದೇ ಇದ್ದರೂ, ಸದ್ಯದ ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೇರ್ ಮೋರ್ ಫೌಂಡೇಶನ್‌ನಿಂದ ಸೌಲಭ್ಯ ವಂಚಿತ ಮಕ್ಕಳಿಗಾಗಿ ಅಭಿಯಾನ – ಸಿನಿ ಕಲಾವಿದರ ಸಾಥ್

    ಕೇರ್ ಮೋರ್ ಫೌಂಡೇಶನ್‌ನಿಂದ ಸೌಲಭ್ಯ ವಂಚಿತ ಮಕ್ಕಳಿಗಾಗಿ ಅಭಿಯಾನ – ಸಿನಿ ಕಲಾವಿದರ ಸಾಥ್

    ಬೆಂಗಳೂರು: ಕೋವಿಡ್ ಹೆಚ್ಚಳ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಕಳೆದೆರಡು ವರ್ಷಗಳಿಂದ ಅನಿವಾರ್ಯವಾಗಿ ಶಾಲೆಗಳನ್ನು ಮುಚ್ಚಲಾಗಿತ್ತು. ಇದೀಗ ರಾಜ್ಯಾದ್ಯಂತ ಮತ್ತೆ ಶಾಲೆಗಳು ಆರಂಭವಾಗಿದ್ದು, ಮಕ್ಕಳೆಲ್ಲಾ ಖುಷಿಯಾಗಿ ಶಾಲೆಗೆ ತೆರಳುತ್ತಿದ್ದಾರೆ.

    ಆದ್ರೆ ಇಂದಿಗೂ ಅದೆಷ್ಟೋ ಮಕ್ಕಳಿಗೆ ಮನೆಯಲ್ಲಿನ ಬಡತನದ ಕಾರಣದಿಂದಾಗಿ ಇಂಥಾ ಖುಷಿ ಸಂಪೂರ್ಣವಾಗಿ ಅನುಭವಿಸುವ ಅವಕಾಶ ಸಿಗೋದೇ ಇಲ್ಲ. ಇಂಥಹ ಸೌಲಭ್ಯ ವಂಚಿತ ಮಕ್ಕಳಿಗಾಗಿ ಕೇರ್ ಮೋರ್ ಫೌಂಡೇಶನ್ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರತಿ ಬಡ ಮಕ್ಕಳಿಗೂ ನೆರವಾಗುವ ಅವಕಾಶ ಕಲ್ಪಿಸಿದೆ.  ಇದನ್ನೂ ಓದಿ: ವಿಮಾನದೊಳಗೆ ಮಾಸ್ಕ್ ಧರಿಸಲು ನಿರಾಕರಿಸುವ ಪ್ರಯಾಣಿಕರನ್ನು ಹೊರಹಾಕಿ – DGCA

    ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಕೇರ್ ಮೋರ್ ಫೌಂಡೇಶನ್ ಸಂಸ್ಥೆ ಉತ್ತಮ ಮಾರ್ಗಗಳನ್ನೇ ತೆರೆದಿಟ್ಟಿದೆ. ಮನೆಯಲ್ಲಿ ಬಳಸದೇ ವ್ಯರ್ಥವಾಗಿ ಇಟ್ಟಿರುವ ಶಾಲಾ ಮಕ್ಕಳ ಬ್ಯಾಗ್‌ಗಳನ್ನು ಈ ಫೌಂಡೇಶನ್‌ಗೆ ದಾನ ಮಾಡುವಂತೆ ವಿನಂತಿಸಿದೆ. ಜೂನ್ 20ರ ವರೆಗೂ ಬ್ಯಾಗ್‌ಗಳನ್ನು ದಾನ ಮಾಡಲು ಅವಕಶವಿದೆ. ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು CareMoreFoundation@Caremorefdn ಟ್ವಿಟ್ಟರ್ ಲಿಂಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದು, ಪರಿಶೀಲಿಸಬಹುದಾಗಿದೆ.

    ಕೇರ್ ಮೋರ್ ಫೌಂಡೇಶನ್ ಈಗಾಗಲೇ ಪರಿಸರ ಪ್ರೇಮಿಗಳ ತಂಡದ ಮೂಲಕ ಪ್ರಕೃತಿಗೆ ಪೂರಕವಾಗುವಂತಹ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇದರಲ್ಲಿ ಬೆಂಗಳೂರಿನ ಸಿನಿ ಕಲಾವಿದರು, ಉದ್ಯಮಿಗಳು, ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ನಾನಾ ವರ್ಗಗಳ ಯುವಜನರು ಭಾಗಿಯಾಗಿದ್ದಾರೆ. ಇದೀಗ ಮರು ಬಳಕೆ ಅನ್ನುವ ವಸ್ತು ವಿಷಯದ ಅಡಿಯಲ್ಲಿ ಬಡ ಮಕ್ಕಳಿಗೆ ನೆರವಾಗುವ ಕಾರ್ಯಕ್ಕೆ ಮುಂದಾಗಿದೆ. ಇದನ್ನೂ ಓದಿ: ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

    ನಟಿ ಸಂಯುಕ್ತಾ ಹೊರನಾಡು ಅವರಂತಹ ಯುವ ನಟಿಯರು ಕೇರ್ ಮೋರ್ ಫೌಂಡೇಶನ್ ಆಯೋಜಿಸುವ ಕಾರ್ಯಕ್ರಮಗಳ ಮುಂಚೂಣಿಯಲ್ಲಿದ್ದುಕೊಂಡು ಪರಿಸರ ಪ್ರೇಮ ಮೆರೆಯುತ್ತಾ ಯುವಕರನ್ನೆಲ್ಲಾ ಅದರತ್ತ ಉತ್ತೇಜಿಸುತ್ತಿದ್ದಾರೆ.

  • ಪ್ರಾಣಿಗಳಂದ್ರೆ ಪಂಚಪ್ರಾಣ, ಮನುಷ್ಯರಂದ್ರೆ ಭಯ: ನಟಿ ಸಂಯುಕ್ತಾ ಹೊರನಾಡು

    ಪ್ರಾಣಿಗಳಂದ್ರೆ ಪಂಚಪ್ರಾಣ, ಮನುಷ್ಯರಂದ್ರೆ ಭಯ: ನಟಿ ಸಂಯುಕ್ತಾ ಹೊರನಾಡು

    ಟಿ ಹಾಗೂ ಪ್ರಾಣಿಪ್ರಿಯೆ ಸಂಯುಕ್ತಾ ಹೊರನಾಡು ಲಾಕ್‍ಡೌನ್ ಅವಧಿಯಲ್ಲಿ ಕಳೆದ ಸಮಯ ಹಾಗೂ ಸುನಾಮಿ ಹಾಡಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

    • ಹೇಗಿದ್ದೀರಾ? ಲಾಕ್‍ಡೌನ್ ಅವಧಿಯಲ್ಲಿ ತುಂಬಾ ಬ್ಯುಸಿಯಾಗಿದ್ರಿ ನೀವು?
    ನಾನು ಚೆನ್ನಾಗಿದ್ದೀನಿ. ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಜೊತೆಗೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದರಿಂದ ಆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ.

    • ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದೆ. ಎಲ್ಲರೂ ಇಷ್ಟಪಡುತ್ತಿದ್ದಾರೆ?
    ಹೌದು, ಈ ಹಾಡಿಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಇದನ್ನು ಮಾಡಿರೋ ಉದ್ದೇಶ ಬೀದಿನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು. ಬೀದಿನಾಯಿಗಳನ್ನ ಅಡಾಪ್ಟ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ. ಇದರ ಕ್ರೆಡಿಟ್ ರಘು ದೀಕ್ಷಿತ್ ಅವರಿಗೆ ಸೇರಬೇಕು. ಅವರೇ ಈ ಹಾಡನ್ನು ಬರೆದು, ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡ್ಯುಯೇಟ್ ಕಾನ್ಸೆಪ್ಟ್ ನಲ್ಲಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸೋ ಒಂದು ಹೊಸ ಪ್ರಯತ್ನ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಇದನ್ನು ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ನಾನು ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದೀನಿ ಅದೊಂದು ಖುಷಿ ಇದೆ ನನಗೆ.

    • ಲಾಕ್‍ಡೌನ್ ಸಮಯದಲ್ಲಿ ಬಿಡುವಿನ ವೇಳೆ ಹೊಸ ಹವ್ಯಾಸ ಏನಾದ್ರು ಬೆಳೆಸಿಕೊಂಡ್ರಾ?
    ಹೌದು, ನಂಗೆ ನಿಜಕ್ಕೂ ಖುಷಿ ಆಗುತ್ತೆ ಇದನ್ನ ಹೇಳೋದಕ್ಕೆ. ನನಗೆ ಸಂಗೀತ ಕಲಿಬೇಕು ಅಂತ ಆಸಕ್ತಿ ಇತ್ತು. ರಂಗಭೂಮಿ ಕಲಾವಿದರಿಗೆ ಹಾಡೋಕು ಬರಬೇಕು ತುಂಬಾ ಮುಖ್ಯ ಅದು. ನಾನು ರಂಗಭೂಮಿಯಲ್ಲಿ ನಾಟಕಕ್ಕೋಸ್ಕರ ಕಲಿತಿದ್ದೆ ಆದ್ರೆ ಅಷ್ಟಾಗಿ ಸಂಗೀತದ ಬಗ್ಗೆ ಗೊತ್ತಿರಲಿಲ್ಲ. ಚಿಕ್ಕಂದಿನಲ್ಲೂ ಅಭ್ಯಾಸ ಮಾಡಿರಲಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಆ ಆಸೆಯನ್ನು ಈಡೇರಿಸಿಕೊಂಡೆ. ಪೂರ್ಣ ಪ್ರಮಾಣದಲ್ಲಿ ಕಲಿತಿಲ್ಲವಾದ್ರು ಸಂಗೀತದ ಬಗ್ಗೆ ಒಂದಿಷ್ಟು ಅರಿತುಕೊಂಡಿದ್ದೇನೆ, ಪ್ರತಿನಿತ್ಯ ಪ್ರಾಕ್ಟೀಸ್ ಕೂಡ ಮಾಡ್ತಿದ್ದೀನಿ. ಅದನ್ನು ಹೊರತು ಪಡಿಸಿ ಒಂದು ಡಾಕ್ಯುಮೆಂಟರಿ ಮಾಡ್ದೆ. ಬಿಡುವು ಸಿಕ್ಕಾಗ ಪೇಟಿಂಗ್‌ ಮಾಡ್ತಿದ್ದೆ.

    • ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಎಲ್ಲಿ ನೋಡಿದ್ರು ನಿಮಗಿಂತ ಪ್ರಾಣಿಗಳ ಫೋಟೋನೇ ಇರುತ್ತೆ?
    ನಿಜ, ನಾನು ಪ್ರಾಣಿ ಪ್ರಿಯೆ. ಹಲವು ಸಂಸ್ಥೆಗಳ ಅಂಬಾಸಿಡರ್ ಕೂಡ ಹೌದು, ಹಲವಾರು ರೆಸ್ಕ್ಯೂ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದೇನೆ. ಸೋಶಿಯಲ್ ಮೀಡಿಯಾವನ್ನು ನಮಗೋಸ್ಕರ ಬಳಸಿಕೊಳ್ಳೋದ್ರ ಜೊತೆಗೆ ಜಾಗೃತಿ ಮೂಡಿಸಲು ಬಳಸೋದು ಒಳ್ಳೆಯದು ಅನ್ನೋದು ನನ್ನ ಅನಿಸಿಕೆ. ಅದಕ್ಕಾಗಿ ನಾನು ಹೆಚ್ಚಾಗಿ ಪ್ರಾಣಿಗಳ ಪೋಟೋ ಪೋಸ್ಟ್ ಮಾಡುತ್ತೇನೆ. ಅದನ್ನು ನೋಡಿದವ್ರಲ್ಲಿ ಒಬ್ಬರಾದ್ರು ಪ್ರಾಣಿಗಳನ್ನು ಅಡಾಪ್ಟ್ ಮಾಡಿಕೊಳ್ಳಲೋ ಅಥವಾ ಅವುಗಳ ಸಹಾಯಕ್ಕೆ ಕೈ ಚಾಚಿದ್ರೆ ಸಹಾಯವಾಗುತ್ತೆ ಅನ್ನೋದು ನನ್ನ ಉದ್ದೇಶ.

    • ನಿಮ್ಮ ಪ್ರಾಣಿ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೂ ಒಂದು ಕುತೂಹಲ ಇದೆ, ಪ್ರಾಣಿಗಳನ್ನು ಕಂಡರೆ ಯಾಕಿಷ್ಟು ಪ್ರೀತಿ?
    ಚಿಕ್ಕವಯಸ್ಸಿನಿಂದಲೂ ಪ್ರಾಣಿಗಳು ಅಂದ್ರೆ ಪಂಚಪ್ರಾಣ. ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಮುಂದೆ ಮೋರಿಲಿ ಒಂದು ನಾಯಿ ಇತ್ತು. ಅದರ ಜೊತೆ ನಾನು ಕಾಲ ಕಳೆಯುತ್ತಿದ್ದೆ, ಅದಕ್ಕೆ ತಿನ್ನೋಕೆ ಕೊಡ್ತಾ ಇದ್ದೆ. ಅಲ್ಲಿಂದ ಶುರುವಾದ ಪ್ರೀತಿ ಇವತ್ತು ಬೀದಿನಾಯಿಗಳ ಬಗ್ಗೆ ಕಾಳಜಿ ಹಾಗೂ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸೋವರೆಗೆ ಬಂದಿದೆ. ಪ್ರಾಣಿಗಳಿಗೆ ನೀವು ಪ್ರೀತಿ ತೋರಿಸಿದ್ರೆ ಅವು ನಿಮಗೆ ಪ್ರೀತಿ ತೋರಿಸುತ್ತೆ. ಅವುಗಳು ತೋರಿಸೋ ಪ್ರೀತಿಯಲ್ಲಿ ಸ್ವಾರ್ಥ ಇರೋದಿಲ್ಲ ನಿಷ್ಕಲ್ಮಶ ಪ್ರೀತಿ ಅವುಗಳದ್ದು. ನಾನು ಯಾವ ಪ್ರಾಣಿನಾದ್ರು ಮುಟ್ಟೋಕೆ ರೆಡಿಯಿದ್ದೀನಿ. ಆ ಪ್ರಾಣಿ ಕಂಡ್ರೆ ಭಯ ಈ ಪ್ರಾಣಿ ಕಂಡ್ರೆ ಭಯ ಆ ರೀತಿ ಏನು ಇಲ್ಲ. ನನ್ನ ಪ್ರಕಾರ ಎಲ್ಲ ಪ್ರಾಣಿಗಳು ಒಂದೇ. ನೀವು ಎಷ್ಟು ಪ್ರೀತಿ, ರಕ್ಷಣೆ ಕೊಡ್ತೀರೋ ಅವು ನಮ್ಮನ್ನು ಅಷ್ಟೇ ಪ್ರೀತಿ ಮಾಡುತ್ತವೆ.ನಾನು ಅವುಗಳಲ್ಲಿ ದೇವರನ್ನು ಕಾಣುತ್ತೇನೆ. ನಿಜವಾಗ್ಲೂ ಹೇಳಬೇಕು ಅಂದ್ರೆ ನನಗೆ ಭಯ ಆಗೋದೇ ಮನುಷ್ಯರನ್ನ ಕಂಡ್ರೆ.

    • ಲಾಕ್‍ಡೌನ್ ಅವಧಿಯಲ್ಲಿ ನಿಮ್ಮ ಕೆಲಸ ಶ್ಲಾಘನೀಯ. ಸಾವಿರಾರು ಬೀದಿನಾಯಿಗಳಿಗೆ ಆಹಾರ ನೀಡ್ತಿದ್ರಿ, ಜಾಗೃತಿ ಮೂಡಿಸಿದ್ರಿ. ನಿಮ್ಮ ಕೆಲಸ ಮೆಚ್ಚುಗೆ ಪಡೆದುಕೊಂಡಿತ್ತು.
    ಹೌದು, ಲಾಕ್‍ಡೌನ್ ನಿಂದ ಸಾವಿರಾರು ಜನರ ಬದುಕು ಬೀದಿಗೆ ಬಂತು. ಮನುಷ್ಯರಿಗೇ ಊಟ ಸಿಗ್ತಾ ಇರ್ಲಿಲ್ಲ ಇನ್ನು ಬೀದಿ ನಾಯಿಗಳ ಪಾಡೇನು ಅಲ್ವಾ!? ಅವುಗಳ ಕಷ್ಟ ನೋಡೋಕಾಗದೇ ಬೀದಿ ನಾಯಿಗಳಿಗೆ ಊಟ ನೀಡಲು ಶುರು ಮಾಡಿದೆ. ಇದೆಲ್ಲದರ ಜೊತೆಗೆ ನಾಯಿಗಳಿಂದ ಕೊರೊನಾ ಹರಡುತ್ತೆ ಎಂದು ಸುಳ್ಳು ಸುದ್ಧಿ ಹರಡಿ ಬೆಂಗಳೂರಲ್ಲಿ ಎಷ್ಟೋ ಜನ ತಮ್ಮ ನಾಯಿಗಳನ್ನ ಬೀದಿ ಪಾಲು ಮಾಡಿದ್ರು. ಇದು ನನಗೆ ತುಂಬಾ ನೋವು ಕೊಡ್ತು. ಇದಕ್ಕೆಲ್ಲ ಏನಾದ್ರು ಮಾಡಲೇಬೇಕು ಎಂದು ‘ಕೇರ್’ ಎಂಬ ಸಂಸ್ಥೆ ಜೊತೆ ಸೇರಿ ಜಾಗೃತಿ ಮೂಡಿಸಲು ಆರಂಭಿಸಿದೆ. ಸಾವಿರಾರು ನಾಯಿಗಳು ಇದ್ವು ನನ್ನೊಬ್ಬಳಿಂದ ಇವುಗಳಿಗೆ ಆಹಾರ ಪೂರೈಕೆ ಮಾಡೋಕೆ ಸಾದ್ಯವಿಲ್ಲ ಎಂದು ಗೊತ್ತಾದಾಗ ನಾನು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದೆ ಜೊತೆಗೆ ಫಂಡ್ ರೈಸ್‍ಗೆ ಮುಂದಾದೆ. ನನ್ನ ಈ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೇ ಸಿಕ್ತು. ಸುಮಾರು 150 ಜನರು ವಾಟ್ಸಾಪ್ ಗ್ರೂಪ್‍ನಲ್ಲಿ ಕೈ ಜೋಡಿಸಿದ್ರು. ಹಲವಾರು ಜನರು ಫಂಡ್ ನೀಡಲು ಮುಂದಾದ್ರು. ಇವರೆಲ್ಲರ ಸಹಕಾರದಿಂದ ಪ್ರತಿನಿತ್ಯ 4000 ಬೀದಿನಾಯಿಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಆಹಾರ ನೀಡಲು ಸಾಧ್ಯವಾಯ್ತು. ಅದನ್ನು ಅಲ್ಲಿಗೆ ಕೈ ಬಿಡಲಿಲ್ಲ, ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.

    • ನಿಮ್ಮ ಸೋಶೀಯಲ್ ಸರ್ವಿಸ್ ಹಾಗೂ ಪ್ರಾಣಿಗಳ ಮೇಲಿನ ಕಳಕಳಿಗೆ ತುಂಬಾ ಮೆಚ್ಚುಗೆ ಸಿಕ್ತಿದೆ ಎಷ್ಟೋ ಜನಕ್ಕೆ ನೀವು ಪ್ರೇರಣೆ ಕೂಡ ಆಗಿದ್ದೀರ?
    ನನ್ನಿಂದ ನಾಲ್ಕು ಜನ ಬದಲಾಗ್ತಾರೆ ಅಂದ್ರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಎಲ್ಲರೂ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸೋದ್ರಿಂದ ಇನ್ನೊಂದಿಷ್ಟು ಕೆಲಸ ಮಾಡಲು ಸಹಾಯ ಆಗುತ್ತೆ. ಇನ್ನು ಕೆಲವರು ಕೆಲವು ಕಾರ್ಯಕ್ರಮಗಳಿಗೆ ನನ್ನ ಜೊತೆ ಕೈ ಜೋಡಿಸುತ್ತಾರೆ. ನನ್ನ ಕೆಲಸ ನನಗೆ ತುಂಬಾ ತೃಪ್ತಿ ನೀಡಿದೆ. ನನ್ನ ಕೆಲಸ ನನಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡಿದೆ.

    • ಹಲವಾರು ಸಂಘ, ಸಂಸ್ಥೆಗಳ ರಾಯಭಾರಿ ಕೂಡ ಆಗಿ ಕಾರ್ಯ ನಿರ್ವಹಿಸುತ್ತಿದ್ದೀರ ಎಷ್ಟು ಖುಷಿ ಅನಿಸುತ್ತೆ?
    ನಾನು ಸಾಮಾಜಿಕ ಸೇವೆಯನ್ನ ನನ್ನ ಖುಷಿಗೆ ಮಾಡುತ್ತಿದ್ದೇನೆ. ನನ್ನ ಕೆಲಸವನ್ನು ಗುರುತಿಸಿ ದೊಡ್ಡ ಜವಾಬ್ದಾರಿಯನ್ನು ನನಗೆ ಹಲವು ಸಂಸ್ಥೆಗಳು ನೀಡಿರೋದು ಸಂತಸ ತಂದಿದೆ. ಪೀಪಲ್ ಫಾರ್ ಅನಿಮಲ್ ಫೌಡೇಷನ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಈ ಸಂಸ್ಥೆ ನಗರದಲ್ಲಿ ತೊಂದರೆಗೆ ಒಳಗಾಗೋ ಸಾವಿರಾರು ಪ್ರಾಣಿಗಳ ರಕ್ಷಣೆ ಮಾಡುತ್ತಾ ಬಂದಿದೆ. ಈ ಸಂಸ್ಥೆಯ ಬೆಂಗಳೂರು ರಾಯಭಾರಿಯಾಗಿ ನನನ್ನು ನೇಮಿಸಿದ್ದಾರೆ. ಇದಲ್ಲದೆ ಯುನೆಸೆಫ್‍ನವರ ಮೈನರ್ ಪ್ರಾಜೆಕ್ಟ್, ಚೈಲ್ಡ್ ವಯೋಲೆನ್ಸ್ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸೋ ಅವಕಾಶ ನನಗೆ ಸಿಕ್ಕಿದೆ. ಕೇರ್ ಎಂಬ ಸಂಸ್ಥೆ ಸಾವಿರಾರು ಬೀದಿನಾಯಿಗಳ ರಕ್ಷಣೆ ಮಾಡುತ್ತಿದೆ ಜೊತೆಗೆ ಅವುಗಳಿಗೆ ಆಹಾರ ಒದಗಿಸುತ್ತಿದೆ ಆ ಸಂಸ್ಥೆಯ ರಾಯಭಾರಿಯಾಗಿದ್ದೇನೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅರಿವು ಮೂಡಿಸಲು ವೇದಿಕೆ ಸಿಗುತ್ತಿರೋದು ತುಂಬಾ ಹೆಮ್ಮೆ ಇದೆ.

    • ಏಳು ವರ್ಷದ ಸಿನಿಮಾ ಜರ್ನಿ ಎಷ್ಟು ಖುಷಿ ಕೊಟ್ಟಿದೆ?
    ನಾನು ಚಿತ್ರರಂಗಕ್ಕೆ ಬಂದು ಏಳು ವರ್ಷ ಆಯ್ತು, ನಂಗೆ ಸಕ್ಸಸ್, ಸೋಲು ಇದ್ಯಾವುದರ ಯೋಚನೆ ಇಲ್ಲ. ಯಾವ ಪಾತ್ರ ಖುಷಿ ಕೊಡುತ್ತೋ, ಯಾವ ಸಬ್ಜೆಕ್ಟ್ ಖುಷಿ ಕೊಡುತ್ತೋ ಆ ಪಾತ್ರಗಳನ್ನ ಒಪ್ಪಿಕೊಳ್ತೀನಿ. ಚಿತ್ರರಂಗದಲ್ಲಿ ಎಲ್ಲರೂ ನನ್ನ ಪ್ರೀತಿಯಿಂದ ಕಾಣುತ್ತಾರೆ. ಬೇರೆ ಚಿತ್ರರಂಗದಲ್ಲೂ ಒಳ್ಳೆಯ ಸಿನಿಮಾಗಳು ಸಿಕ್ತಿವೆ. ಏಳು ವರ್ಷದ ಜರ್ನಿ ಖುಷಿ ಕೊಟ್ಟಿದೆ. ನಾನು ತುಂಬಾ ಖುಷಿಯಾಗಿದ್ದೇನೆ. ನನಗೆ ಯಾವುದೇ ರಿಗ್ರೇಟ್ ಇಲ್ಲ.

    • ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ರಾ?
    ಹೊಸ ಪ್ರಾಜೆಕ್ಟ್ ಗಳು ಬರ್ತಿವೆ. ಸದ್ಯಕ್ಕೆ ಕನ್ನಡದಲ್ಲಿ ಹೊಂದಿಸಿ ಬರೆಯಿರಿ, ಅರಿಷಡ್ವರ್ಗ, ಮೈಸೂರು ಮಸಾಲ ಚಿತ್ರಗಳಿವೆ. ತೆಲುಗಿನಲ್ಲಿ ಲಾಕ್ಡ್, ಗಾಡ್ ಸೀಕ್ವೆಲ್ 2 ವೆಬ್ ಸಿರೀಸ್ ಶೂಟಿಂಗ್ ಬಾಕಿ ಇದೆ. ತಮಿಳಿನಲ್ಲಿ ರೆಡ್ ರ್ಯಾಂಮ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೊಸ ಪ್ರಾಜೆಕ್ಟ್ ಬರ್ತಾ ಇವೆ ಇಲ್ಲಿವರೆಗೆ ಯಾವುದೂ ಒಪ್ಪಿಕೊಂಡಿಲ್ಲ.

    • ಟ್ರಾವೆಲ್ಲಿಂಗ್ ನಿಮಗೆ ತುಂಬಾ ಇಷ್ಟ ಅನ್ಸುತ್ತೆ?
    ಹೌದು, ನಂಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಫ್ರೆಂಡ್ಸ್ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡೋದು, ಹೊಸ ಊರು ನೋಡೋದು ತುಂಬಾ ಖುಷಿ ಕೊಡುತ್ತೆ ನನಗೆ. ಟ್ರಾವೆಲ್‍ನಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತೆ ಹೊಸದನ್ನು ಕಲಿಯೋಕೆ, ತಿಳಿದುಕೊಳ್ಳೋಕೆ ಸಾಧ್ಯವಾಗುತ್ತೆ. ಲಾಕ್‍ಡೌನ್ ಟೈಂನಲ್ಲಿ ಟ್ರಾವೆಲ್ ಮಾಡೋಕೆ ಆಗಲಿಲ್ಲ ಅದೊಂದು ಬೇಸರ ಇದೆ.

    • ನಿಮ್ಮ ಫೇವರೇಟ್ ಫುಡ್ ಯಾವುದು?
    ನಾನು ಪ್ಯೂರ್ ವೆಜಿಟೇರಿಯನ್, ವೆಜ್‍ನಲ್ಲಿ ಎಲ್ಲ ಬಗೆಯೂ ಇಷ್ಟವಾಗುತ್ತೆ. ಫೇವರೇಟ್ ಅಂದ್ರೆದಹಿ ಪೂರಿ, ಆಂಬೊಡೆ, ಸಾಬುದಾನ ಕಿಚಡಿ, ಮೊಸರು ಅಂದ್ರೆ ತುಂಬಾ ಇಷ್ಟ. ನಾನು ಕಾಫಿ ಪ್ರಿಯೆ, ಏನ್ ಬೇಕಾದ್ರು ಬಿಟ್ಟು ಇರ್ತೀನಿ ಆದ್ರೆ ಕಾಫಿ ಕುಡಿಯದೇ ಇರೋಕೆ ಆಗೋದೇ ಇಲ್ಲ. ಕಾಫಿ ಬೇಕೇ ಬೇಕು.

     

    View this post on Instagram

     

    Giving back ⁣ I got a call from the make up chief that 200odd makeup artists and daily wage workers are in need of ration kits. I immediately got in touch with @pranitha.insta @shwetharprasad and they responded quickly and generously 🙂 Sooo, within a day we arranged for their food kits. ⁣⁣ ⁣⁣ Also a big big thank you to Smt Roopamouli, Aravind Suchindran, Karthik Reddy, Nanda Girish, Sanjay, Manjunath who have been helping farmers, migrant workers and everyone in need by making these vegetable kits and ration kits. Thank you being proactive and generous 🙂 ⁣⁣ ⁣⁣ #Repost @pranitha.insta with @get_repost⁣⁣ ・・・⁣⁣ Gratitude to those who make us look good everyday⁣⁣ ????⁣⁣ ⁣⁣ 150 Ration kits distributed to the #Makeup and #Hairstyle #Association of #KannadaFilmIndustry ⁣⁣ @samyuktahornad thankyou for initiating this.. #GirlPower in its true sense ???????? in these times of #covid19 crisis and thankyou Nandu.⁣

    A post shared by Samyukta Hornad (@samyuktahornad) on

  • ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

    ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

    ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕ ನಟನನಾಗಿ ಅಭಿನಯಿಸಿರುವ ನಾನು ಮತ್ತು ಗುಂಡ ಚಿತ್ರ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಯಿ ಮತ್ತು ಮಾಲೀಕನ ನಡುವಿನ ಭಾವನಾತ್ಮಕ ಸಂಬಂಧವಿರುವ ಈ ಚಿತ್ರದ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿತ್ತು. ಇಂದು ಚಿತ್ರ ಬಿಡುಗಡೆಯಾಗಿ ಆ ನಿರೀಕ್ಷೆಯನ್ನು ಗೆದ್ದಿದೆ.

    ಆಟೋ ಡ್ರೈವರ್ ಶಂಕ್ರ, ಕವಿತ ಇಬ್ಬರು ಮಧ್ಯಮ ವರ್ಗದ ಸಾಮಾನ್ಯ ಗಂಡ ಹೆಂಡತಿ. ಮಕ್ಕಳಿಲ್ಲದ ಕೊರಗಿನಿಂದ ದಿನಾ ಕುಡಿಯುತ್ತಿದ್ದ ಶಂಕ್ರನಿಗೆ ಗುಂಡ ಎಂಬ ನಾಯಿ ಸಿಗುತ್ತೆ. ಪ್ರತಿನಿತ್ಯ ಸಿಗ್ತಿದ್ದ ಗುಂಡನ ಜೊತೆ ಶಂಕ್ರನಿಗೆ ಆತ್ಮೀಯತೆ ಬೆಳೆಯುತ್ತೆ. ಅದೇ ಪ್ರೀತಿಯಿಂದ ಮನೆಗೆ ಗುಂಡನನ್ನು ಕರೆದುಕೊಂಡು ಬಂದು ಮುದ್ದಾಗಿ ಸಾಕುತ್ತಿರುತ್ತಾನೆ. ಆದ್ರೆ ಹೆಂಡತಿ ಕವಿತಳಿಗೆ ಇದು ಇಷ್ವವಿರೋದಿಲ್ಲ. ಹೀಗೆ ಶಂಕ್ರು ಮತ್ತು ಗುಂಡನ ಆತ್ಮೀಯತೆ, ಗೆಳೆತನ ಗಟ್ಟಿಯಾಗಿರುವಾಗ ಗುಂಡ ಸೇಟು ಮನೆಯ ಕಳೆದೋದ ನಾಯಿ ಎನ್ನುವುದು ಗೊತ್ತಾಗುತ್ತೆ.

    ಕವಿತಾ ಗುಂಡನನ್ನು ಸೇಟುಗೆ ಕೊಡ್ತಾಳೆ ಇದು ಶಂಕ್ರು ಮನಸ್ಸಿಗೆ ನೋವನ್ನುಂಟು ಮಾಡುತ್ತೆ. ಗುಂಡನನ್ನು ಕೊಟ್ಟ ಮೇಲೆ ಮರುಗೋ ಶಂಕ್ರ ಪ್ರತಿನಿತ್ಯ ಸೇಟು ಮನೆಗೆ ಗುಂಡನನ್ನು ನೋಡಲು ಹೋಗ್ತಿರುತ್ತಾನೆ. ಹೀಗೆ ಭಾವನಾತ್ಮಕವಾಗಿ ಸಾಗೋ ಸಿನಿಮಾ ಕಣ್ಣಂಚಲ್ಲಿ ನೀರು ತರಿಸುತ್ತೆ. ಹೀಗೆ ಸಾಗುತ್ತಾ ಹೋಗೋ ಕಥೆ ದ್ವಿತಿಯಾರ್ಧದಲ್ಲಿ ಹೊಸ ತಿರುವನ್ನೆ ಪಡೆದುಕೊಳ್ಳುತ್ತೆ. ಗುಂಡ ಮತ್ತೆ ಶಂಕ್ರು ಬಳಿ ಬರ್ತಾನಾ? ಕವಿತಾ ಗುಂಡನನ್ನು ಪ್ರೀತಿಸುತ್ತಾಳ ಅನ್ನೋದಕ್ಕೆ ನೀವು ಸಿನಿಮಾ ನೋಡಲೇ ಬೇಕು. ಆದ್ರೆ ಚಿತ್ರಮಂದಿರದಿಂದ ಬರ್ತಾ ನಿಮ್ಮ ಕಣ್ಣುಗಳು ಮಾತ್ರ ಒದ್ದೆಯಾಗದೇ ಇರದು. ಅಷ್ಟು ಭಾವನಾತ್ಮಕವಾಗಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ.

    ನಾಯಿ ಮತ್ತು ಮಾಲೀಕನ ಕಥೆ ಎಂದು ಚಿತ್ರಮಂದಿರದ ಒಳಗೆ ಹೊಕ್ಕ ಪ್ರೇಕ್ಷಕನಿಗೆ ಭಾವನಾತ್ಮಕ ಪ್ರಪಂಚ ಆವರಿಸಿಕೊಳ್ಳುತ್ತೆ. ಅಲ್ಲೇ ಇಡೀ ಚಿತ್ರತಂಡ ಗೆದ್ದು ಬಿಡುತ್ತೆ. ಇನ್ನು ಶಿವರಾಜ್ ಕೆ.ಆರ್.ಪೇಟೆ ಅಭಿನಯ ಮನಮುಟ್ಟುತ್ತದೆ. ತಮ್ಮ ಅಧ್ಬುತ ನಟನಾ ಶಕ್ತಿಯನ್ನು ತೆರೆ ಮೇಲೆ ತೋರಿಸಿದ್ದಾರೆ. ನಾಯಿ ಗುಂಡ ಕೂಡ ಅಧ್ಬುತವಾಗಿ ನಟಿಸಿದೆ. ಸಂಯುಕ್ತ ಹೊರನಾಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರೇಕ್ಷಕನ ಮನಸ್ಸಿಗೆ ಬಹಳ ಹತ್ತಿರವಾಗಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ. ಜಯಭೇರಿ ಬಾರಿಸಿದೆ.

    ಚಿತ್ರ: ನಾನು ಮತ್ತು ಗುಂಡ
    ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
    ನಿರ್ಮಾಪಕ: ರಘು ಹಾಸನ್
    ಸಂಗೀತ: ಕಾರ್ತಿಕ್ ಶರ್ಮ
    ಛಾಯಾಗ್ರಹಣ: ಚಿದಾನಂದ್ ಕೆ.ಕೆ
    ತಾರಾಬಳಗ: ಶಿವರಾಜ್ ಕೆ.ಆರ್.ಪೇಟೆ. ಸಂಯುಕ್ತ ಹೊರನಾಡ್,ಸಿಂಬಾ (ನಾಯಿ ಗುಂಡ), ಇತರರು

    ರೇಟಿಂಗ್: 3.5 / 5

  • ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

    ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

    ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ ‘ನಾನು ಮತ್ತು ಗುಂಡ’ ಚಿತ್ರದ ಪ್ರೀಮಿಯರ್ ಶೋ ನಾಳೆ ಬೆಂಗಳೂರಿನ ನಗರ್ತರ ಪೇಟೆಯ ಶಾರದ ಚಿತ್ರಮಂದಿರದಲ್ಲಿ ಸಂಜೆ 7.15ಕ್ಕೆ ಆಯೋಜನೆ ಮಾಡಲಾಗಿದೆ.

    ವಿಶೇಷ ಎಂದರೇ ಇದು ಡಾಗ್ ಪ್ರೀಮಿಯರ್ ಶೋ. ‘ಸೀ ಇಟ್ ಫಸ್ಟ್ ವಿತ್ ಯುವರ್ ಡಾಗ್ಸ್’ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ. ಭಾರತದ ಸಿನಿಮಾ ಇತಿಹಾಸದಲ್ಲಿ ಈ ರೀತಿಯ ವಿಭಿನ್ನ ಹೆಜ್ಜೆಯನ್ನ ‘ನಾನು ಮತ್ತು ಗುಂಡ’ ಚಿತ್ರತಂಡ ಇಟ್ಟಿದೆ.

    ಈ ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ. ಮುಗ್ಧನಾಯಿ ಗುಂಡ ಮತ್ತು ಅಟೋಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆಯುತ್ತದೆಯಂತೆ. ಈ ಭಾವನಾತ್ಮಕ ಸಿನಿಮಾವನ್ನು ನಿಮ್ಮ ನಾಯಿಗಳ ಜೊತೆಗೂಡಿ ನೋಡಿ ಎಂಬ ಸಂದೇಶ ನೀಡುತ್ತಾ ಈ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿದೆಯಂತೆ.

  • ‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

    ‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

    ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್.ಪೇಟೆ ನಟಿಸುತ್ತಿರುವ ಸಿನಿಮಾ ‘ನಾನು ಮತ್ತು ಗುಂಡ’. ಶಿವರಾಜ್ ಕೆ. ಆರ್ ಪೇಟೆ ಎಂದಾಕ್ಷಣಾ ಅಲ್ಲೊಂದು ಕಾಮಿಡಿ ನೆನಪಾಗುತ್ತದೆ. ಸಿನಿಮಾದಲ್ಲೂ ಕಾಮಿಡಿ ಇರಬಹುದು ಎಂಬ ಊಹೆ ಎಲ್ಲರಲ್ಲೂ ಮೂಡುತ್ತೆ. ಆದ್ರೆ ಈ ಸಿನಿಮಾ ಮನುಷ್ಯ ಹಾಗೂ ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧವನ್ನು ಅನಾವರಣಗೊಳಿಸಲು ಸಜ್ಜಾಗಿದೆ.

    ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗೆ ಹೊಗಳಿಕೆಯ ಸುರಿಮಳೆ ಸುರೀತಾ ಇದೆ. ಸಿನಿಮಾ ಸೆನ್ಸಾರ್ ಗೆ ಹೋಗಿದ್ದು, ಶಬ್ಬಾಶ್ ಗಿರಿಯನ್ನ ಪಡೆದಿದೆ. ಸೆನ್ಸಾರ್ ನಿಂದ ಹೊಗಳಿಕೆ ಸಿಕ್ಕಿರುವ ಕಾರಣ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಈಗಾಗಲೇ ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ, ಅಯ್ಯಯ್ಯೋ ರಾಮ ರಾಮ ಎಂಬ ಹಾಡನ್ನು ರಿಲೀಸ್ ಮಾಡಿದೆ. ಕ್ಯಾಚಿ ಲಿರಿಕ್ಸ್ ನಿಂದ ಹಾಡು ಎಲ್ಲರನ್ನು ಮನಸೂರೆಗೊಳಿಸಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಲಭ್ಯವಿದ್ದು, ಕೇಳಿ ಆನಂದಿಸಬಹುದು.

    ಹಾಡು ನೋಡಿದರೇ ಒಂದು ಹಂತಕ್ಕೆ ಸಿನಿಮಾ ಹೇಗಿರಬಹುದು ಎಂಬುದು ತಿಳಿಯುತ್ತದೆ. ಆಟೋ ಡ್ರೈವರ್ ಶಂಕರನ ಬೆನ್ನತ್ತೋ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್‍ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ ಕಟ್ಟಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ.

  • ‘ನಾನು ಮತ್ತು ಗುಂಡ’ನದ್ದು ಭಾವನಾತ್ಮಕ ಸಂಬಂಧ!

    ‘ನಾನು ಮತ್ತು ಗುಂಡ’ನದ್ದು ಭಾವನಾತ್ಮಕ ಸಂಬಂಧ!

    ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನ ಜೊತೆ ಬೆರೆಯುವುದಕ್ಕಿಂತ ಹೆಚ್ಚಾಗಿ ಪ್ರಾಣಿಗಳ ಜೊತೆಯಲ್ಲೇ ಬೆರೆಯುತ್ತಿದ್ದಾನೆ. ಅದರಲ್ಲೂ ನಾಯಿಗಳ ನಡುವೆ ಹೆಚ್ಚು ಬಾಂಧವ್ಯ ಹೊಂದುತ್ತಿದ್ದಾರೆ. ಇಷ್ಟವಾದ ನಾಯಿಗೆ ಲಕ್ಷ ಕೊಡುವುದಕ್ಕೂ ಹಿಂದೆ ಮುಂದೆ ನೋಡಲ್ಲ. ನಾಯಿಯೊಂದನ್ನು ತಂದು, ಮುದ್ದಾದ ಹೆಸರನ್ನಿಟ್ಟು ಸಿಕ್ಕ ಸಮಯವನ್ನು ಅದರೊಟ್ಟಿಗೆ ಕಳೆಯುತ್ತಾರೆ. ಇದೀಗ ಚಂದನವನದಲ್ಲಿ ಅದೇ ಪ್ರೀತಿಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ಬಹಳ ವರ್ಷಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಅನಾವರಣಗೊಳ್ಳುತ್ತಿದೆ. ಅದೇ ‘ನಾನು ಮತ್ತು ಗುಂಡ’.

    ಸಿನಿಮಾ ತನ್ನ ಫಸ್ಟ್ ಲುಕ್, ಟೀಸರ್ ನಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಶ್ವಾನವನ್ನೇ ಮುಖ್ಯ ಪಾತ್ರದಾರಿಯನ್ನಾಗಿಸಿಕೊಂಡು ಹೆಣೆದಿರುವ ಕಥೆಯಿದಾಗಿದೆ. ಹೀಗಾಗಿ ನಾಯಿಯೇ ಪ್ರಮುಖ ಪಾತ್ರ ಮಾಡಿರುವ ಕಾರಣ ಸಿನಿಮಾದ ಬಗ್ಗೆ ವಿಶೇಷ ಕುತೂಹಲ ಎಲ್ಲರಲ್ಲೂ ಕೆರಳಿದೆ.

    ಎಲ್ಲಾ ವರ್ಗದ ಜನರು ನೋಡುವಂತಹ ಮನುಷ್ಯ ಹಾಗು ಪ್ರಾಣಿಗಳ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಅದ್ಭುತ ಚಿತ್ರವೆಂದು ಅದು ಬಣ್ಣಿಸಿದೆ. ಅಪರೂಪದ ಪ್ರಯೋಗಗಳನ್ನು ಬೆಂಬಲಿಸುವ ಅಂತಹ ಚಿತ್ರಗಳನ್ನು ವಿತರಿಸಿ ಯಶಸ್ಸು ಕಂಡಿರುವ ಮೈಸೂರು ಟಾಕೀಸ್‍ನ ಜಾಕ್ ಮಂಜು ಅವರು ‘ನಾನು ಮತ್ತು ಗುಂಡ’ ಚಿತ್ರವನ್ನು ನೋಡಿ ಮೆಚ್ಚಿ ವಿತರಣೆಗೆ ಮುಂದಾಗಿದ್ದಾರೆ.

    ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ ಹಲವು ವಿಶಿಷ್ಠ ಬಗೆ ಸಿನಿಮಾಗಳನ್ನ ವಿತರಿಸಿ, ಯಶಸ್ಸು ಕಂಡಿರುವ ಜಾಕ್ ಮಂಜು, ಈ ವರ್ಷದ ಆರಂಭದಲ್ಲೇ ನಾನು ಮತ್ತು ಗುಂಡ ಚಿತ್ರವನ್ನು ವಿತರಣೆಗೆ ತೆಗೆದುಕೊಂಡು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಕುರಿತಂತೆ ಮತ್ತಷ್ಟು ವಿಶೇಷ ವಿಚಾರಗಳನ್ನು ಹಿಂಚಿಕೊಳ್ಳುವ ಧಾವಂತದಲ್ಲಿದೆ. ಇದೀಗ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಪ್ರಕಟಿಸುವ ಸನ್ನಾಹದಲ್ಲಿದೆ.

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು ಹಾಗು ಸಿಂಬಾ ಅನ್ನುವ ಶ್ವಾನ ಅಭಿಯನದ ಚಿತ್ರ ಇದಾಗಿದೆ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಪೊಯಂ ಪಿಕ್ಚರ್ಸ್ ಬ್ಯಾನರ್ಸ್ ನಡಿ ಗಾಂಧಿಗಿರಿ ಚಿತ್ರದ ನಿರ್ದೇಶಕ ರಘು ಹಾಸನ್ ಅವರು ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದರೆ, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

  • ‘ಆಮ್ಲೆಟ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

    ‘ಆಮ್ಲೆಟ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

    ಬೆಂಗಳೂರು: ಶೇಖರ್ ಜಯರಾಂ ಅರ್ಪಿಸುವ, ನೈಂತ್ ಎಲಿವೇಷನ್ ಲಾಂಛನದಲ್ಲಿ ಓಂಪ್ರಕಾಶ್ ಮತ್ತು ಪ್ರಸನ್ನ ಅವರು ನಿರ್ಮಿಸುತ್ತಿರುವ ‘ಆಮ್ಲೆಟ್’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

    ‘ಡೇ ಇನ್ ದಿ ಸಿಟಿ’, ‘ಕೆಂಪಿರ್ವೆ’, ‘ಬಬ್ಲೂಷ’ ಹಾಗೂ ತಮಿಳಿನ ‘ಉನರ್ವು’ ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕಾಮಿಡಿ ಕಥಾ ಹಂದರ ಹೊಂದಿದೆ. ವಿಶಾಖ್ ರಾಮಪ್ರಸಾದ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಅಡಿಗ, ವಿರಾಜ್ ಹಾಗೂ ಮಹೇಶ್ ಹಾಡುಗಳನ್ನು ಬರೆದಿದ್ದಾರೆ. ಸಿ.ಜಿ ಜೈದೇವನ್ ಛಾಯಾಗ್ರಹಣ ಹಾಗೂ ಚಂದನ್ ಅವರ ಸಂಕಲನ ಈ ಚಿತ್ರಕ್ಕಿದೆ. ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ಲಾರೆನ್ಸ್ ಪ್ರೀತಂ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

    ಸಂಯುಕ್ತ ಹೊರನಾಡು, ನವೀನ್, ನಿರಂಜನ್ ದೇಶಪಾಂಡೆ, ಬಿ.ಡಿ ಸತೀಶ್ ಚಂದ್ರ, ಶೋಭ್‍ರಾಜ್, ಶರ್ಮಿತ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಮೊದಲ ಗುರು ಕಳ್ಕೊಂಡ ನೋವಿನಲ್ಲಿ ಸಂಯುಕ್ತ

    ಮೊದಲ ಗುರು ಕಳ್ಕೊಂಡ ನೋವಿನಲ್ಲಿ ಸಂಯುಕ್ತ

    – ಕಾರ್ನಾಡ್ ಅವರೇ ನನಗೆ ಪ್ರೇರಣೆ – ಕಮಲ್ ಹಾಸನ್

    ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡದ ಸಾಹಿತಿ ಗಿರೀಶ್ ಕಾರ್ನಾಡ್ ನಿಧನದ ಹಿನ್ನೆಲೆಯಲ್ಲಿ ಸಿನಿಮಾರಂಗದವರು ಸಂತಾಪ ಸೂಚಿಸುತ್ತಿದ್ದಾರೆ.

    ಗಿರೀಶ್ ಕಾರ್ನಾಡ್ ಅಗಲಿಕೆಗೆ ಬಹುಭಾಷಾ ನಟ ಕಮಲ್ ಹಾಸನ್ ಮತ್ತು ಸಂಯುಕ್ತ ಹೊರನಾಡು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಸಂಯುಕ್ತ ಅವರು,” ನನ್ನ ಮೊದಲ ಸಿನಿಮಾ, ನಾಟಕ, ನಟನೆಯ ಕೋರ್ಸ್ ಮತ್ತು ಮೊದಲ ಗುರು ಗಿರೀಶ್ ಕಾರ್ನಾಡ್ ಅವರ ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿದ್ದಾರೆ.

    ಸಂಯುಕ್ತ ಅವರ ಸಿನಿಮಾ, ನಾಟಕ, ನಟನೆಯ ಕೋರ್ಸ್ ಎಲ್ಲದರನ್ನೂ ಗಿರೀಶ್ ಕಾರ್ನಾಡ್ ಜೊತೆಯಲ್ಲಿ ಇದ್ದರಂತೆ ಹೀಗಾಗಿ ಅವರೇ ಅವರ ಜೀವನದ ಮೊದಲ ಗುರು ಎಂದು ನೋವಿನಿಂದ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಇನ್ನೂ ನಟ ಕಮಲ್ ಹಾಸನ್ ಕೂಡ, “ಶ್ರೀ ಗಿರೀಶ್ ಕಾರ್ನಾಡ್ ಅವರ ಬರಹಗಳು ವಿಸ್ಮಯವಾಗಿದ್ದು, ನನಗೆ ಸ್ಫೂರ್ತಿ ನೀಡಿವೆ. ಅವರ ಬರಹಗಳಿಂದ ಪ್ರೇರಣೆ ಪಡೆದ ಅನೇಕ ಅಭಿಮಾನಿಗಳನ್ನು ಇಂದು ತೊರೆದಿದ್ದಾರೆ. ಅವರ ಅಗಲಿಕೆಯಿಂದ ಬರಹಗಾರಿಗೆ ಅಪಾರ ನಷ್ಟವುಂಟುಮಾಡಿದೆ” ಎಂದು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.

    ನಟ ಕಮಲ್ ಹಾಸನ್ ಮತ್ತು ಗಿರೀಶ್ ಕಾರ್ನಾಡ್ ‘ಹೇ ರಾಮ್’ ಮತ್ತು ‘ಗುಣ’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಗಿರೀಶ್ ಕಾರ್ನಾಡ್ ಅಗಲಿಕೆಗೆ ಸ್ಯಾಂಡಲ್‍ವುಡ್ ನಟ-ನಟಿಯರು ಮತ್ತು ರಾಜಕೀಯ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ.