Tag: Sambalpur

  • ಮತ್ತೆ ಯಾವ ಅಪರಾಧ ಮಾಡಲ್ಲ, ಪ್ಲೀಸ್ ನನ್ನನ್ನು ಶೂಟ್ ಮಾಡ್ಬೇಡಿ: ಸಿನಿ ಮಾದರಿಯಲ್ಲಿ ಪೊಲೀಸರಿಗೆ ಶರಣಾದ ಯುಪಿ ಪಾತಕಿ

    ಮತ್ತೆ ಯಾವ ಅಪರಾಧ ಮಾಡಲ್ಲ, ಪ್ಲೀಸ್ ನನ್ನನ್ನು ಶೂಟ್ ಮಾಡ್ಬೇಡಿ: ಸಿನಿ ಮಾದರಿಯಲ್ಲಿ ಪೊಲೀಸರಿಗೆ ಶರಣಾದ ಯುಪಿ ಪಾತಕಿ

    ಲಕ್ನೋ: ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಉತ್ತರ ಪ್ರದೇಶದ ಪಾತಕಿ ಖನ್ನಾ ಉತ್ತರಪ್ರದೇಶದ ಆಮ್‍ರೋಹಾ ಜಿಲ್ಲೆಯ ಪೊಲೀಸರಿಗೆ ಬುಧವಾರ ಶರಣಾಗಿದ್ದಾನೆ.

    ತನ್ನ ಕತ್ತಿಗೆ ಫಲಕವನ್ನು ನೇತು ಹಾಕಿಕೊಂಡು ಬಂದ ಆತ ಅದರಲ್ಲಿ ದಯವಿಟ್ಟು ನನ್ನನ್ನು ಕೊಲ್ಲಬೇಡಿ, ನಾನು ಇನ್ನು ಮುಂದೆ ಯಾವುದೇ ಅಪರಾಧ ಮಾಡಲ್ಲ ಎಂದು ಬರೆದುಕೊಂಡಿದ್ದಾನೆ. ಇದನ್ನೂ ಓದಿ:ಜಾಮೀನು ಸಿಕ್ಕರೂ 5,500 ಕ್ರಿಮಿನಲ್‍ಗಳು ಯುಪಿ ಜೈಲಿನಿಂದ ಹೊರಬರುತ್ತಿಲ್ಲ!

    ಫಲಕ ಹಾಕಿಕೊಂಡು ಶರಣಾದ ಆರೋಪಿಯು ಫೈಜಾನ್ ಅಹ್ಮದ್ ಅಲಿಯಾಸ್ ಖನ್ನಾ ಸಂಭಾಲ್ ಜಿಲ್ಲೆಯ ನಖಾನಾ ಪೊಲೀಸ್ ಠಾಣೆ ವ್ಯಾಪ್ತಿಯ ದೀಪ್ ಸರಾಯ್ ಗ್ರಾಮದ ನಿವಾಸಿ. ಇವನ ವಿರುದ್ಧ ಕೊಲೆ ಮತ್ತು ದರೋಡೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2014 ರಿಂದಲೂ ತಲೆಮರೆಸಿಕೊಂಡು ಪೊಲೀಸರಿಂದ ಬಜಾವ್ ಆಗಿದ್ದ ಇವನ ತಲೆಗೆ 12 ಸಾವಿರ ರೂ. ಬಹುಮಾನ ಘೋಷಣೆಯಾಗಿತ್ತು. ಇದನ್ನೂ ಓದಿ: ಯೋಗಿ ಸರ್ಕಾರದ ಎನ್‍ಕೌಂಟರ್ ಎಫೆಕ್ಟ್- ಸೈಕಲ್ ಶಾಪ್, ಹಣ್ಣಿನ ವ್ಯಾಪಾರ, ರಿಕ್ಷಾ ಚಾಲನೆ ಆರಂಭಿಸಿದ ರೌಡಿಶೀಟರ್ ಗಳು

    ಸದ್ಯ ಈತ ತನ್ನನ್ನು ಪೊಲೀಸರು ಎನ್‍ಕೌಂಟರ್ ಮಾಡುತ್ತಾರೆ ಎಂಬ ಭಯದಿಂದಾಗಿ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಶರಣಾಗುವ ಮುನ್ನ ಅವನು ಮಾಧ್ಯಮಗಳೊಂದಿಗೆ ಮಾತನಾಡಿ ನಾನು ಪೊಲೀಸರಿಗೆ ಶರಣಾಗುವುದಾಗಿ ತಿಳಿಸಿದ್ದ. ಪೊಲೀಸರು ಆತನನ್ನು ಬಂಧಿಸಿ ಈಗ ಜೈಲಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು

  • ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

    ಚಲಿಸುವ ರೈಲಿನ ಮುಂದೆ ಹಾರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

    ಭುವನೇಶ್ವರ: ಒಂದೇ ಕುಟುಂಬದ ಐವರು ಚಲಿಸುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

    ಧರಣಿಧರ್ ಪಾಂಡ, ಪತ್ನಿ ಸಂಗೀತಾ, ಮಕ್ಕಳಾದ ಅಪರಾಜಿತಾ, ಅನನ್ಯಾ ಮತ್ತು ಸಿದ್ಧಿ ಸಾವನ್ನಪ್ಪಿದ ದುರ್ದೈವಿಗಳು. ಅನನ್ಯ 12ನೇ ತರಗತಿಯಲ್ಲಿ ಮತ್ತು ಸಿದ್ಧಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

    ಮೂಲತಃ ಬರ್‍ಗಢ ಜಿಲ್ಲೆಯ ಬುರುಡಾದವರಾದ ಧರಣಿಧರ್, ಮದನಬತಿ ಪಬ್ಲಿಕ್ ಸ್ಕೂಲ್ ನಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿಕೊಂಡಿದ್ದರು. ಜಗನ್ನಾಥ್ ಕಾಲೋನಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು.

    ಬಾಡಿಗೆ ನೀಡಲು ಹಣವಿರಲಿಲ್ಲ: ಧರಣಿಧರ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಅವರು ವಾಸವಿದ್ದ ಮನೆ ಧರಣಿಧರ ಅವರ ಸ್ನೇಹಿತರದ್ದು. ಮನೆಯ ಬಾಡಿಗೆಯನ್ನು ನೀಡಲು ಅವರ ಬಳಿ ಹಣ ಇರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

    ಮಂಗಳವಾರ ರಾತ್ರಿ ಆಗಿದ್ದೇನು?: ಮಂಗಳವಾರ ರಾತ್ರಿ ಸುಮಾರು 8.30ಕ್ಕೆ ಐವರು ಸಂಬಲ್‍ಪುರ-ಝಾರ್‍ಸುಗುದಾ ಡಿಎಂಯು ರೈಲು ಬರುವಾಗ ಅದರ ಮುಂದೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ರೈಲ್ವೆ ಚಾಲಕ ಘಟನೆ ಬಗ್ಗೆ ಜಿಆರ್‍ಪಿ (ಸರ್ಕಾರಿ ರೈಲ್ವೆ ಪೊಲೀಸ್)ಗೆ ಮಾಹಿತಿ ನೀಡಿದ್ದರು. ಬಳಿಕ ಜಿಆರ್‍ಪಿ ಮತ್ತು ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಶವಗಳನ್ನ ಅಲ್ಲಿಂದ ತೆರವುಗೊಳಿಸಿದ್ದಾರೆ.

    ಮೃತ ದೇಹಗಳನ್ನು ಈಗಾಗಲೇ ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಸಾಮೂಹಿಕ ಆತ್ಮಹತ್ಯೆ ಎಂದು ಕಾಣಿಸುತ್ತಿದೆ ಎಂದು ಜಿಆರ್‍ಪಿ ಅಧಿಕಾರಿ ಜಿ.ಡುಂಗ್ ಡುಂಗ್ ತಿಳಿಸಿದ್ದಾರೆ.

    ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ಈ ಕುರಿತು ಸತ್ಯ ತಿಳಿಯಲು ಸರಿಯಾದ ತನಿಖೆ ನಡೆಯಬೇಕು ಎಂದು ಸಂಬಲ್‍ಪುರ ಶಾಸಕಿ ರಾಸೇಶ್ವರಿ ಪನಿಗ್ರಾಹಿ ಹೇಳಿದ್ದಾರೆ .