Tag: Samantha Akkineni

  • ಚೊಚ್ಚಲ ಸಿನಿಮಾಕ್ಕಾಗಿ ಬಣ್ಣ ಹಚ್ಚುತ್ತಿರುವ ಅಲ್ಲು ಅರ್ಹಾ – ಫೋಟೋ ವೈರಲ್

    ಚೊಚ್ಚಲ ಸಿನಿಮಾಕ್ಕಾಗಿ ಬಣ್ಣ ಹಚ್ಚುತ್ತಿರುವ ಅಲ್ಲು ಅರ್ಹಾ – ಫೋಟೋ ವೈರಲ್

    ಹೈದರಾಬಾದ್: ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅರ್ಹಾ, ಸಮಂತಾ ಅಕ್ಕಿನೇನಿ ಜೊತೆ ಶಾಕುಂತಲಂ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಸದ್ಯ ಅಲ್ಲು ಅರ್ಹಾ ತಮ್ಮ ಚೊಚ್ಚಲ ಸಿನಿಮಾಕ್ಕಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿಕೊಳ್ಳುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಅಲ್ಲು ಅರ್ಹಾ, ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನವರಾಗಿದ್ದಾರೆ. ಸದ್ಯ ಶೂಟಿಂಗ್ ಸೆಟ್‍ನಲ್ಲಿ ರಾಜಕುಮಾರಿಯಂತೆ ಅತಿಥ್ಯ ಪಡೆಯುತ್ತಿರುವ ಅರ್ಹಾ ಚಿತ್ರೀಕರಣಕ್ಕಾಗಿ ಕಾರವಾನ್‍ನಲ್ಲಿ ಕುಳಿತು ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅಲ್ಲು ಅರ್ಜುನ್ ಪತ್ನಿ ಸ್ನೇಹ, ಅರ್ಹಾ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅರ್ಹಾ ಮುದ್ದಾಗಿ ಕಾಣಿಸುತ್ತಿದ್ದು, ಅವಳಿಗಾಗಿಯೇ ಕಾರವಾನ್ ನೀಡಲಾಗಿದೆ. ಅರ್ಹಾ ಜೊತೆ ಅವರ ತಾಯಿ ಸ್ನೇಹ ಕೂಡ ಇದ್ದು, ಆಕೆಯ ಸುರಕ್ಷತೆಯನ್ನು ನೋಡಿಕೊಳ್ಳುತ್ತಿದ್ದಾರೆ.

    ಕೆಲವು ದಿನಗಳ ಹಿಂದೆಯಷ್ಟೇ ಅಲ್ಲು ಅರ್ಜುನ್, ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು ಎಂದು ಅಲ್ಲು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ:ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಸ್ಟಾರ್ ನಟನ ಮಗಳು

     

    View this post on Instagram

     

    A post shared by Allu Arjun (@alluarjunonline)

  • ಅಲ್ಲು ಅರ್ಜುನ್ ಸಿನಿಮಾಗೆ ರಶ್ಮಿಕಾ ಎರಡನೇ ಆಯ್ಕೆ, ಮೊದಲ ಆಫರ್ ಹೋಗಿದ್ದು ಯಾವ ನಟಿಗೆ?

    ಅಲ್ಲು ಅರ್ಜುನ್ ಸಿನಿಮಾಗೆ ರಶ್ಮಿಕಾ ಎರಡನೇ ಆಯ್ಕೆ, ಮೊದಲ ಆಫರ್ ಹೋಗಿದ್ದು ಯಾವ ನಟಿಗೆ?

    ಹೈದರಾಬಾದ್: ರಶ್ಮಿಕಾ ಮಂದಣ್ಣ ಹಲವು ಹಿಟ್ ಸಿನಿಮಾಗಳ ಮೂಲಕ ಟಾಲಿವುಡ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀಗಾಗಿ ಹಲವು ಸಿನಿಮಾಗಳ ಆಫರ್ ಬರುತ್ತಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಎರಡನೇ ಆಯ್ಕೆಯಂತೆ.

    ನಟಿ ರಶ್ಮಿಕಾ ಮಂದಣ್ಣ ಸರಿಲೇರು ನೀಕೆವ್ವರು ಹಾಗೂ ಭೀಷ್ಮ ಸಿನಿಮಾಗಳ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಬಿಗ್ ಬ್ರೇಕ್ ಪಡೆದಿದ್ದಾರೆ. ಇದೀಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಆದರೆ ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಮೊದಲ ಆಯ್ಕೆ ಅಲ್ಲವಂತೆ. ಎರಡನೇ ಆಯ್ಕೆಯಂತೆ. ಮೊದಲ ಆಯ್ಕೆ ನಟಿ ಸಮಂತಾ ಆಗಿದ್ದರಂತೆ. ನಿರ್ದೇಶಕ ಸುಕುಮಾರ್ ಸಮಂತಾ ಅವರೇ ಈ ಸಿನಿಮಾದಲ್ಲಿ ನಟಿಸಬೇಕು ಅಂದುಕೊಂಡಿದ್ದರಂತೆ. ನಟ ಅಲ್ಲು ಅರ್ಜುನ್ ಸಹ ಸಮಂತಾ ಪರ ಒಲವು ತೋರಿದ್ದರಂತೆ.

    ಈ ಹಿಂದೆ ಸುಕುಮಾರ್ ನಿರ್ದೇಶನದ ರಂಗಸ್ಥಲಂ ಸಿನಿಮಾದಲ್ಲಿ ಸಮಂತಾ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ರಂಗಸ್ಥಲಂ ರೀತಿಯಲ್ಲಿಯೇ ಪುಷ್ಪ ಸಿನಿಮಾ ಸಹ ರಿಯಲಿಸ್ಟಿಕ್ ಆಗಿ ಮೂಡಿ ಬರುತ್ತಿರುವುದರಿಂದ ಮತ್ತೆ ಸಮಂತಾ ಅವರಿಗೆ ಕಳೆದ ವರ್ಷವೇ ಆಫರ್ ನೀಡಲಾಗಿತ್ತಂತೆ. ಆದರೆ ಸಮಂತಾ ರಿಜೆಕ್ಟ್ ಮಾಡಿದ್ದರಂತೆ.

    ವಿವಾಹದ ಮುಂಚೆ ಹೆಚ್ಚು ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದಾರೆ. ನಾಗಚೈತನ್ಯ ಜೊತೆ ವಿವಾಹವಾದ ನಂತರವೂ ಸಿನಿಮಾ ಮಾಡುವುದನ್ನು ಸಮಂತಾ ಬಿಟ್ಟಿರಲಿಲ್ಲ. ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಅವರಿಗೆ ಬ್ರೇಕ್ ಬೇಕು ಅನ್ನಿಸಿದೆಯಂತೆ. ಹೀಗಾಗಿ ಪುಷ್ಪ ಸಿನಿಮಾದ ಆಫರ್ ರಿಜೆಕ್ಟ್ ಮಾಡಿದ್ದಾರೆ. ಸದ್ಯ ಅವರ ಕೈಯ್ಯಲ್ಲಿರುವುದು ‘ಕಾಧುವಾಕುಲ ರೆಂಡು ಕಾಧಲ್’ ಸಿನಿಮಾ ಮಾತ್ರ. ಇದೀಗ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯ ಟೆರಸ್ ಮೇಲೆ ತರಕಾರಿ ಹಾಗೂ ಸೊಪ್ಪು ಬೆಳೆಯುತ್ತಿದ್ದಾರೆ. ಅಲ್ಲದೆ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

    ಸಮಂತಾ ನಟಿಸಲು ಒಪ್ಪದಿದ್ದಾಗ ಚಿತ್ರ ತಂಡ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ನೀಡಿತಂತೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಕ್ತ ಚಂದನದ ಕಳ್ಳಸಾಗಣಿಕೆ ಕುರಿತ ಕಥಾ ಹಂದರವನ್ನು ಚಿತ್ರ ಹೊಂದಿದೆ. ಅಂದಹಾಗೆ ಈ ಸಿನಿಮಾ ಕನ್ನಡ ಸೇರಿ ಒಟ್ಟು ಐದು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

  • ಅರ್ಬನ್ ಕಿಸಾನ್ ಮೂಲಕ ತರಕಾರಿ ಬೆಳೆಯಲು ಮುಂದಾದ ಸಮಂತಾ

    ಅರ್ಬನ್ ಕಿಸಾನ್ ಮೂಲಕ ತರಕಾರಿ ಬೆಳೆಯಲು ಮುಂದಾದ ಸಮಂತಾ

    ಹೈದರಾಬಾದ್: ಲಾಕ್‍ಡೌನ್ ಹೊತ್ತಲ್ಲಿ ಬಹುತೇಕ ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ವಿಭಿನ್ನ ರೀತಿಯ ಆಲೋಚನೆಗಳನ್ನು ಮಾಡುತ್ತಿದ್ದಾರೆ. ಹಲವರು ತಮ್ಮದೆಯಾದ ಚಟುವಟಿಕೆಗಳಲ್ಲಿ ತೊಡಗಿದ್ದು, ಇನ್ನೂ ಹಲವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಮಹತ್ವದ ಕೆಲಸವೊಂದನ್ನು ಆರಂಭಿಸಿದ್ದಾರೆ.

    ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಇಷ್ಟು ದಿನ ಕುಟುಂಬದ ಕೆಲಸಗಳು, ಸಮಾರಂಭಗಳಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದರ ನಡುವೆಯೇ ತಮ್ಮಿಷ್ಟದ ಕೆಲಸ ಪ್ರಾರಂಭಿಸುವ ಕುರಿತು ಪ್ರಯತ್ನ ನಡೆಸಿದ್ದರು. ಇದೀಗ ಅದು ಅಂತಿಮ ಹಂತ ತಲುಪಿದ್ದು, ಅದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅಷ್ಟಕ್ಕೂ ಆ ಕೆಲಸ ಯಾವುದು ಅಂತೀರಾ ಅದೇ ಅರ್ಬನ್ ಕಿಸಾನ್. ಹೌದು ಅರ್ಬನ್ ಕಿಸಾನ್ ಎನ್ನುವ ಹೊಸ ಪರಿಕಲ್ಪನೆ ಮೂಲಕ ಕೃಷಿ ಮಾಡಲು ಮುಂದಾಗಿದ್ದಾರೆ.

    ಸಮಂತಾ ರೈತ ಮಹಿಳೆಯಾಗುವ ಕನಸು ಕಂಡಿದ್ದರಂತೆ, ಇದನ್ನು ನನಸಾಗಿಸಿಕೊಳ್ಳಲು ಇದೀಗ ಮುಂದಾಗಿದ್ದಾರಾ ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಎಲ್ಲ ತಯಾರಿ ನಡೆಸಿದ್ದು, ಅವರ ಟೆರಸ್ ಮೇಲೆಯೇ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ವಿವಿಧ ಬಗೆಯ ತರಕಾರಿ ಗಿಡಗಳನ್ನು ಸಹ ತಂದಿದ್ದಾರೆ.

    ಇದು ಸಮಂತಾ ಅವರ ತುಂಬಾ ದಿನಗಳ ಯೋಜನೆ. ಆದರೆ ಇದಕ್ಕೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವುದರಿಂದ ಕೃಷಿ ಮಾಡಲು ಮುಂದಾಗಿದ್ದಾರೆ. ಇದರ ಭಾಗವಾಗಿ ಟೆರಸ್ ಗಾರ್ಡನಿಂಗ್ ಬಗ್ಗೆ ತರಬೇತಿ ಸಹ ಪಡೆದಿದ್ದು, ಅದರ ಪ್ರಕಾರ ಇದೀಗ ಗಿಡಗಳನ್ನೂ ತರಿಸಿದ್ದಾರೆ. ಮನೆಯ ಟೆರಸ್ ಮೇಲೆ ಕೃಷಿ ಮಾಡಲು ಸಿದ್ಧರಾಗಿದ್ದು, ಈ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಈಗಾಗಲೇ ಹಲವು ಸೆಲೆಬ್ರೆಟಿಗಳು ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿ ಬೆಳೆಯುತ್ತಿದ್ದು, ನಟಿಯರಾದ ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ ಸೇರಿದಂತೆ ಹಲವರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಇದೀಗ ಸಮಂತಾ ಸಹ ತರಕಾರಿ ಬೆಳೆಯಲು ಮುಂದಾಗಿದ್ದಾರೆ. ಈ ಸಂತಸದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

  • ದಿಯಾ ಸಿನಿಮಾ ಮೆಚ್ಚಿದ ಸಮಂತಾ, ತೆಲುಗಿಗೆ ರಿಮೇಕ್ ಮಾಡಲು ಚಿಂತನೆ

    ದಿಯಾ ಸಿನಿಮಾ ಮೆಚ್ಚಿದ ಸಮಂತಾ, ತೆಲುಗಿಗೆ ರಿಮೇಕ್ ಮಾಡಲು ಚಿಂತನೆ

    ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ರಿಮೇಕ್ ಸಿನಿಮಾಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಕೆಲ ರಿಮೇಕ್ ಸಿನಿಮಾಗಳೂ ಅವರಿಗೆ ಯಶಸ್ಸು ಹಾಗೂ ಹೆಸರನ್ನು ತಂದುಕೊಟ್ಟಿವೆ. ಅದೇ ರೀತಿ ಇದೀಗ ಕನ್ನಡದ ಸಿನಿಮಾವೊಂದರ ಮೇಲೆ ಸಮಂತಾ ಕಣ್ಣು ಹಾಕಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ, ಅವರೇ ನಿರ್ಮಿಸುವುದಕ್ಕೂ ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

    ಇತ್ತೀಚೆಗೆ ಸಮಂತಾ ಕನ್ನಡದ ಈ ಸಿನಿಮಾ ನೋಡಿದ್ದು, ತುಂಬಾ ಇಷ್ಟವಾಗಿದೆಯಂತೆ. ಹೀಗಾಗಿ ಈ ಸಿನಿಮಾವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದಾರಂತೆ. ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡಿದ್ದ ‘ದಿಯಾ’. ಆರಂಭದಲ್ಲಿ ಹೆಚ್ಚು ಜನರನ್ನು ತಲುಪದಿದ್ದರೂ ಆನ್‍ಲೈನ್ ಪ್ಲಾಟ್‍ಫಾರ್ಮ್‍ನಲ್ಲಿ ಈ ಸಿನಿಮಾ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಮಂತಾ ಅಕ್ಕಿನೇನಿಯವರು ಸಹ ಈ ಸಿನಿಮಾ ನೋಡಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ. ಅಲ್ಲದೆ ರಿಮೇಕ್ ಮಾಡಲು ಸಹ ನಿರ್ಧರಿಸಿದ್ದಾರಂತೆ.

    ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವುದು ಮಾತ್ರವಲ್ಲ, ಸ್ವತಃ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರಂತೆ. ಅಷ್ಟರಮಟ್ಟಿಗೆ ಸಮಂತಾ ಅಕ್ಕಿನೇನಿಯವರ ಮೇಲೆ ದಿಯಾ ಸಿನಿಮಾ ಪರಿಣಾಮ ಬೀರಿದೆಯಂತೆ.

    ಈ ಹಿಂದೆ ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ ಯೂ ಟರ್ನ್ ಸಿನಿಮಾವನ್ನು ನಿರ್ದೇಶಕ ಪವನ್ ಕುಮಾರ್ ತೆಲುಗು ಹಾಗೂ ತಮಿಳಿಗೆ ರಿಮೇಕ್ ಮಾಡಿದ್ದರು. ಈ ಚಿತ್ರದಲ್ಲಿ ಸಹ ಸಮಂತಾ ನಟಿಸಿದ್ದರು. ಅಲ್ಲದೆ ಇತ್ತೀಚೆಗೆ ತೆರೆ ಕಂಡ ಜಾನು ಸಹ ತಮಿಳಿನ 99 ಸಿನಿಮಾದ ರಿಮೇಕ್. ಆದರೆ ಈ ಸಿನಿಮಾ ಯಶಸ್ವಿಯಾಗಲಿಲ್ಲ.

    ಸ್ಯಾಂಡಲ್‍ವುಡ್‍ನ ದಿಯಾ ಸಿನಿಮಾವನ್ನು ಅಶೋಕ ನಿರ್ದೇಶಿಸಿದ್ದರು. ಇದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ಥ್ರಿಲ್ಲರ್ ಪ್ರೇಮ ಕಥಾ ಹಂದರ ಹೊಂದಿತ್ತು. ನಟಿ ಖುಷಿ ರವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದೀಕ್ಷಿತ್ ಮತ್ತು ಪೃಥ್ವಿ ಅಂಬರ್ ನಾಯಕರಾಗಿ ಕಾಣಿಸಿಕೊಂಡಿದ್ದರು. ಕೃಷ್ಣ ಚೈತನ್ಯ ಚಿತ್ರವನ್ನು ನಿರ್ಮಿಸಿದ್ದರು.

  • ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಹಾಟ್ ಬಟ್ಟೆತೊಟ್ಟಾಗ ಟ್ರೋಲ್ ಮಾಡುವವರಿಗೆ ಸವಾಲ್ ಹಾಕಿದ ಸಮಂತಾ

    ಬೆಂಗಳೂರು: ನಟಿಯರು ಹಾಟ್ ಬಟ್ಟೆ ಧರಿಸಿದಾಗ ಟ್ರೋಲ್ ಮಾಡುವವರಿಗೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಸವಾಲ್ ಹಾಕಿದ್ದಾರೆ.

    ತಾವು ತೊಡುವ ಬಟ್ಟೆಯಿಂದಾಗಿ ಸಮಂತಾ ಅವರು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ವಿದೇಶಕ್ಕೆ ತೆರಳಿದ್ದ ಅವರು ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಜೊತೆಗೆ ಕೆಲ ಟ್ರೋಲ್ ಪೇಜ್‍ಗಳು ಹಾಗೂ ಅಭಿಮಾನಿಗಳು ಕೂಡ ಅಕ್ಕಿನೇನಿ ಕುಟುಂಬದ ಸೊಸೆಯಾಗಿ ನೀವು ರೀತಿ ಬಟ್ಟೆ ಧರಿಸಬಾರದು ಎಂದು ಟ್ರೋಲ್ ಮಾಡಿದ್ದರು.

    ಅಂದು ಬಿಕಿನಿ ಹಾಕಿಕೊಂಡಿದ್ದಕ್ಕೆ ಟ್ರೋಲ್ ಮಾಡಿದವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದ ಸಮಂತಾ, ಮಧ್ಯದ ಬೆರಳಿನ ಫೋಟೋ ಹಾಕಿ ಟ್ರೋಲ್‍ಗಳಿಗೆ ಚಮಕ್ ನೀಡಿದ್ದರು. ಈಗ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿರುವ ಸಮಂತಾ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ನಾನು ಟ್ರೋಲ್‍ಗಳಿಗೆ ಭಯಪಡುವುದಿಲ್ಲ ಎಂದು ಸವಾಲ್ ಹಾಕಿದ್ದಾರೆ.

    https://www.instagram.com/p/Be7eVsgnUl-/

    ಈಗ ಸಂದರ್ಶನವೊಂದರಲ್ಲಿ ಟ್ರೋಲ್ ವಿಚಾರವಾಗಿ ಮಾತನಾಡಿರುವ ಸಮಂತಾ, ನನಗೆ ಇನ್ನೂ ನೆನಪಿದೆ ನಾನು ಮದುವೆಯಾದ ಮೇಲೆ ಧರಿಸಿದ್ದ ಒಂದು ಡ್ರೆಸ್ ಸಖತ್ ಟ್ರೋಲ್ ಆಗಿತ್ತು. ಈ ಡ್ರೆಸ್‍ನ ಫೋಟೋ ಇಟ್ಟುಕೊಂಡು ಭಯಾಂಕರವಾಗಿ ಟ್ರೋಲ್ ಮಾಡಿದ್ದರು. ಆಗ ನನಗೆ ಬಹಳ ಬೇಜಾರಾಗಿತ್ತು. ಆದರೆ ನಾನು ಮತ್ತೆ ಎರಡನೇ ಬಾರಿ ಅದೇ ಉಡುಪಿನಲ್ಲಿ ಕಾಣಿಸಿಕೊಂಡಾಗ ಅವರು ನನ್ನನ್ನು ಟ್ರೋಲ್ ಮಾಡಲಿಲ್ಲ ಎಂದು ಹೇಳಿದ್ದಾರೆ.

    https://www.instagram.com/p/B7OGZc_BHvd/

    ಮೊದಲು ನನಗೆ ಟ್ರೋಲ್‍ಗಳು ಎಂದರೆ ಭಯವಾಗುತ್ತಿತ್ತು. ಆ ಭಯ ನಾವು ಒಂದು ಹೆಜ್ಜೆ ಇಡುವವರಿಗೆ ಅಮೇಲೆ ಅದು ನಮಗೆ ಅಭ್ಯಾಸವಾಗಿ ಹೋಗುತ್ತದೆ. ಹೀಗೆ ಹೇಳುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ಅಷ್ಟೊಂದು ಧೈರ್ಯಶಾಲಿಯಲ್ಲ. ಕೆಲವು ಬದಲಾಗಬೇಕು. ಆ ಬದಲಾವಣೆ ಸಮಾಜದಲ್ಲಿ ಬರಲು ಏನೂ ಮಾಡಬೇಕು ಅದನ್ನು ನಾನು ಮಾಡುತ್ತೇನೆ ಎಂದು ಸಮಂತಾ ಟ್ರೋಲ್‍ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    https://www.instagram.com/p/B7OHwP3hh1i/

    ಇತ್ತೀಚಿಗೆ ಫ್ಲಾಪ್ ನಟಿ ಎಂದು ಕರೆದವರ ವಿರುದ್ಧ ಕಿಡಿಕಾರಿದ್ದ ಸಮಂತಾ, ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲು ಫ್ಲಾಪ್ ಆದರೂ ಅವರನ್ನು ಒಪ್ಪುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಅವರನ್ನು ಹೊಗಳುವುದಿಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ಹೇಳುತ್ತಾರೆ. ನಟಿಯರ ಒಂದು ಸಿನಿಮಾ ಸೋತರು ಫ್ಲಾಪ್ ಎಂದು ಕರೆಯುತ್ತಾರೆ ಎಂದು ಗರಂ ಆಗಿದ್ದರು.

  • ಫ್ಲಾಪ್ ನಟಿ ಅಂದವ್ರಿಗೆ ಸಮಂತಾ ಖಡಕ್ ಉತ್ತರ

    ಫ್ಲಾಪ್ ನಟಿ ಅಂದವ್ರಿಗೆ ಸಮಂತಾ ಖಡಕ್ ಉತ್ತರ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ತಮ್ಮನ್ನು ಫ್ಲಾಪ್ ನಟಿ ಎಂದು ಕಮೆಂಟ್ ಮಾಡಿದವರಿಗೆ ಖಾರವಾಗಿ ಉತ್ತರಿಸಿದ್ದಾರೆ.

    ಫೆಬ್ರವರಿ 7ರಂದು ಬಿಡುಗಡೆಯಾಗಿದ್ದ ‘ಜಾನು’ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ವಿಯಾಗಿಲ್ಲ. ಈ ಹಿನ್ನೆಲೆ ಸಮಂತಾ ಅವರನ್ನು ಫ್ಲಾಪ್ ನಟಿ ಎಂದು ಹಲವರು ಟೀಕಿಸಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಸಮಂತಾ ಸಖತ್ ತಿರುಗೇಟು ನೀಡಿದ್ದಾರೆ. ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆದರೂ ಅವರನ್ನು ಸಿನಿಪ್ರಿಯರು ಒಪ್ಪುತ್ತಾರೆ. ಸಿನಿಮಾದಲ್ಲಿ ಸ್ಟಾರ್ ನಟರು ನಡೆದುಕೊಂಡು ಬಂದರೆ ಸಾಕು ಪ್ರೇಕ್ಷಕರು ಸೂಪರ್ ಎನ್ನುತ್ತಾರೆ. ಆದರೆ ನಟಿಯರು ಕಷ್ಟಪಟ್ಟು ಸಿನಿಮಾ ಮಾಡಿದರೂ ಯಾರೂ ಪ್ರಶಂಸೆ ಮಾಡಲ್ಲ. ಸಿನಿಮಾ ಫ್ಲಾಪ್ ಆದರೆ ಆ ಚಿತ್ರದ ನಟಿಯರೇ ಕಾರಣ ಎಂದು ದೋಷಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಒಂದು ವೇಳೆ ತಮ್ಮ ನೆಚ್ಚಿನ ಸ್ಟಾರ್ ನಟರ ಮೂರು ಸಿನಿಮಾಗಳು ಫ್ಲಾಪ್ ಆದರೂ ಅವರ ನಾಲ್ಕನೇ ಸಿನಿಮಾವನ್ನು ನೋಡಲು ಅಭಿಮಾನಿಗಳು ಹೋಗುತ್ತಾರೆ. ಅದೇ ಒಂದು ಸಿನಿಮಾ ಫ್ಲಾಪ್ ಆದರೂ ನಟಿಯನ್ನು ಫ್ಲಾಪ್ ನಟಿ ಎನ್ನುತ್ತಾರೆ ಎಂದು ಸಮಂತಾ ಕಿಡಿಕಾರಿದ್ದಾರೆ.

    ಟಾಲಿವುಡ್‍ನ ಟಾಪ್ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಟಾಲಿವುಡ್‍ನಲ್ಲಿ ಹಲವು ಬ್ಲಾಕ್‍ಬಾಸ್ಟರ್ ಸಿನಿಮಾಗಳಿಗೆ ಅವರ ಕೊಡುಗೆ ಇದ್ದರೂ ಕೆಲ ಸಿನಿಮಾ ಫ್ಲಾಪ್ ಆಗಿದಕ್ಕೆ ಸಮಂತಾರನ್ನು ಫ್ಲಾಪ್ ನಟಿ ಎಂದಿದ್ದು ಸರಿಯಲ್ಲ ಎಂದು ಟಾಲಿವುಡ್ ನಟ, ನಟಿಯರು ಸಮಂತಾ ಪರ ನಿಂತಿದ್ದಾರೆ.

    ತಮಿಳಿನ ಸೂಪರ್ ಹಿಟ್ ’96’ ಸಿನಿಮಾವನ್ನು ತೆಲುಗಿನಲ್ಲಿ ‘ಜಾನು’ ಎಂದು ರಿಮೇಕ್ ಮಾಡಲಾಗಿದೆ. ಈ ಚಿತ್ರದಲ್ಲಿ ಸಮಂತಾಗೆ ನಾಯಕನಾಗಿ ಶರ್ವಾನಂದ್ ನಟಿಸಿದ್ದಾರೆ. ಈ ಚಿತ್ರವನ್ನು ಸಿ. ಪ್ರೇಮ್ ಕುಮಾರ್ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಿಸಿದ್ದಾರೆ. ಈ ಚಿತ್ರದ ಮೇಲೆ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸಿನಿಮಾ ಟಾಲಿವುಡ್ ಅಂಗಳದಲ್ಲಿ ನಿರೀಕ್ಷಿಸ ಮಟ್ಟಿಗೆ ಯಶಸ್ಸು ಕಾಣಲಿಲ್ಲ. ಆದರಿಂದ ಕೆಲವರು ಸಮಂತಾರಿಂದಲೇ ಸಿನಿಮಾ ಫ್ಲಾಪ್ ಆಯ್ತು, ಅವರು ಫ್ಲಾಪ್ ನಟಿ ಎಂದು ಟೀಕಿಸಿದ್ದರು. ಸದ್ಯ ಸಮಂತಾ ಅವರು `ದಿ ಫ್ಯಾಮಿಲಿ ಮ್ಯಾನ್’ ಸೀಸನ್ 2 ವೆಬ್ ಸೀರಿಸ್‍ನಲ್ಲಿ ಟೆರರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

    ತಾಯಿಯಾಗ್ತಿದ್ದಾರಾ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ?

    ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಇದೀಗ ಎಲ್ಲ ಚಿತ್ರಗಳಿಂದಲೂ ದೂರ ಉಳಿಯುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಶೂಟಿಂಗ್ ಪ್ರಾರಂಭವಾಗಿದ್ದ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರದಿಂದಲೂ ಸಮಂತ ಹೊರಗೆ ಬಂದಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಕುತೂಹಲ ಉಂಟಾಗಿದೆ. ಚಿತ್ರಗಳಿಂದ ಯಾಕೆ ದೂರ ಉಳಿಯುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

    ಇದಕ್ಕೆ ಕಾರಣವೂ ಇದ್ದು, ಸಮಂತಾ ಅವರು ಖುಷಿ ವಿಚಾರವನ್ನು ಹೇಳುತ್ತಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಅದೇನಪ್ಪಾ ಖುಷಿ ವಿಚಾರ ಅಂತೀರಾ, ಅದೇ ಅವರು ತಾಯಿಯಾಗುವುದು. ಹೌದು ತಮಿಳಿನ ವಿಘ್ನೇಶ್ ಶಿವನ್ ನಿರ್ದೇಶನದ ಹೊಸ ಚಿತ್ರ `ಕಾತುವಾಕುಲ ರೆಂಡು ಕಾದಲ್’ ಚಿತ್ರದ ಶೂಟಿಂಗ್‍ನಲ್ಲಿ ಸಮಂತಾ ತೊಡಗಿದ್ದರು. ಆದರೆ ಇದ್ದಕ್ಕಿದ್ದಂತೆ ಚಿತ್ರದಿಂದ ಹೊರ ಬಂದಿದ್ದಾರೆ.

    ಈ ಬೆಳವಣಿಗೆ ಬಳಿಕ ಯಾಕೆ ಸಿನಿಮಾದಿಂದ ಹೊರ ಬಂದರು ಎಂಬುದು ಅಧೀಕೃತವಾಗಿರಲಿಲ್ಲ. ಆದರೆ ಮೂಲಗಳ ಪ್ರಕಾರ ಸಮಂತಾ ಅವರೇ ಚಿತ್ರದಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಮಾತ್ರಲ್ಲದೆ ಈ ವರ್ಷ ಅವರು ಯಾವುದೇ ಸಿನಿಮಾಗೆ ಸಹಿ ಹಾಕಿಲ್ಲ. ಸಮಂತಾ ಗರ್ಭಿಣಿಯಾಗಿದ್ದಾರೆ, ಹೀಗಾಗಿಯೇ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಚೆನ್ನೈನಲ್ಲಿ ವಿಘ್ನೇಶ್ ಅವರ ಕಚೇರಿಗೆ ಭೇಟಿ ನೀಡಿದ್ದ ಅವರು, ಹೊಸ ಚಿತ್ರದಿಂದ ಹೊರ ನಡೆಯುತ್ತಿರುವುದಕ್ಕೆ ನಿರ್ದೇಶಕರ ಬಳಿ ಕ್ಷಮೆ ಕೋರಿದ್ದಾರೆ. ಜೊತೆಗೆ ತಾವು ನಿರ್ವಹಿಸಬೇಕಿದ್ದ ಪಾತ್ರಕ್ಕೆ ಕೆಲವು ನಟಿಯರ ಹೆಸರನ್ನೂ ಸಮಂತಾ ಸೂಚಿಸಿದ್ದಾರಂತೆ.

    ನಟ ವಿಜಯ್ ಸೇತುಪತಿ ನಾಯಕರಾಗಿರುವ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ ಮತ್ತು ಸಮಂತಾ ನಟಿಸಲಿದ್ದಾರೆ ಎಂದು ಪ್ರೇಮಿಗಳ ದಿನ ನಿರ್ದೇಶಕರೇ ಘೋಷಿಸಿದ್ದರು. ಒಂದೇ ಸಿನಿಮಾದಲ್ಲಿ ಇಬ್ಬರು ಖ್ಯಾತ ನಟಿಯರು ಕಾಣಿಸಿಕೊಳ್ಳುತ್ತಿರುವುದಕ್ಕೆ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿದ್ದರು. ಆದರೆ ಸಮಂತಾ ದಿಢೀರನೇ ಈ ಚಿತ್ರದಿಂದ ಹೊರಬಂದಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

    ಕೌಟುಂಬಿಕ ಜೀವನದತ್ತ ಹೆಚ್ಚು ಒತ್ತು ನೀಡಲು ಸಮಂತಾ ಈ ನಿರ್ಧಾರ ತಳೆದಿರಬಹುದು ಎನ್ನಲಾಗಿದೆ. ಸಮಂತಾ 2017ರ ಅಕ್ಟೋಬರ್‍ನಲ್ಲಿ ನಟ ನಾಗಚೈತನ್ಯ ಜೊತೆಗೆ ಗೋವಾದಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ಎರಡು ವರ್ಷ ಕಳೆದರೂ ತಾಯಿಯಾಗುವ ಕುರಿತು ಸುಳಿವು ನೀಡಿಲ್ಲ. `ಸಮಂತಾ ತಾಯ್ತನದ ಸುಖ ಅನುಭವಿಸುವುದು ಯಾವಾಗ?’ ಎಂದು ಕಳೆದ ವರ್ಷ ಅವರ ಅಭಿಮಾನಿಗಳು ಪ್ರಶ್ನಿಸಿದ್ದರು. ನಂತರ ಈ ಕುರಿತು ಉತ್ತರಿಸಿದ್ದ ಸಮಂತಾ, `2022ರ ಆಗಸ್ಟ್ 7ರಂದು ಬೆಳಿಗ್ಗೆ 7ಗಂಟೆಗೆ ನನ್ನ ಮಗುವಿಗೆ ತಾಯಿಯಾಗುತ್ತೇನೆ’ ಎಂದು ದಿನಾಂಕವನ್ನೇ ಘೋಷಿಸಿದ್ದರು. ಈ ಮೂಲಕ ಎಲ್ಲರೂ ಬೆರಗಾಗುವಂತೆ ಮಾಡಿದ್ದರು.

  • ಟಾಲಿವುಡ್ ಸ್ಟಾರ್‌ಗೆ ಜೊತೆಯಾಗ್ತಾರಾ ಸಮಂತಾ, ರಶ್ಮಿಕಾ?

    ಟಾಲಿವುಡ್ ಸ್ಟಾರ್‌ಗೆ ಜೊತೆಯಾಗ್ತಾರಾ ಸಮಂತಾ, ರಶ್ಮಿಕಾ?

    ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‍ಟಿಆರ್ ಸದ್ಯ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸಮಂತಾ ಜಾನು ಸಿನಿಮಾ ನಂತರ ಫ್ರೀಯಾಗಿದ್ದಾರೆ. ಇದರ ನಡುವೆಯೇ ಜೂ.ಎನ್‍ಟಿಆರ್ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದ್ದು, ಇದಕ್ಕೆ ಹಿರೋಯಿನ್ ಯಾರೆಂಬ ಮಾತುಗಳು ಸಹ ಹರಿದಾಡುತ್ತಿವೆ. ಇದೆಲ್ಲದರ ಮಧ್ಯೆ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ಜೂನಿಯರ್ ಎನ್‍ಟಿಆರ್ ಜೊತೆ ರೊಮ್ಯಾನ್ಸ್ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.

    ಜೂ.ಎನ್‍ಟಿಆರ್ ಮುಂದಿನ ಸಿನಿಮಾಗೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇನ್ನೂ ಟೈಟಲ್ ಫಿಕ್ಸ್ ಆಗದ ಚಿತ್ರಕ್ಕೆ ಸದ್ಯ ‘ಎನ್‍ಟಿಆರ್ 30’ ಎಂದು ಹೆಸರಿಡಲಾಗಿದೆ. ಮೇ ತಿಂಗಳಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, 2021ರ ಬೇಸಿಗೆ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಇಬ್ಬರು ನಾಯಕಿರು ಇರಲಿದ್ದು, ರಶ್ಮಿಕಾ ಮಂದಣ್ಣ ಈಗಾಗಲೇ ಫಿಕ್ಸ್ ಆಗಿದ್ದಾರೆ.

    ಇನ್ನೊಬ್ಬ ನಾಯಕಿಯ ಪಾತ್ರದಲ್ಲಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಸಮಂತಾ ಹೆಸರು ಕೇಳಿ ಬರುತ್ತಿದೆ. ಹಾಗಾಗಿ ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಇಬ್ಬರೂ ಎನ್‍ಟಿಆರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ನಿಜವೇ ಆದಲ್ಲಿ ಎನ್‍ಟಿಆರ್ ಹಾಗೂ ಸಮಂತಾ ತೆರೆ ಹಂಚಿಕೊಳ್ಳುತ್ತಿರುವ ಐದನೇ ಚಿತ್ರ ಇದಾಗಲಿದೆ. ಈಗಾಗಲೇ ಬೃಂದಾವನ, ರಾಮಯ್ಯ ವಸ್ತಾವಯ್ಯ, ರಾಭಸ, ಹಾಗೂ ಜನತಾ ಗ್ಯಾರೇಜ್‍ನಲ್ಲಿ ಈ ಜೋಡಿ ನಟಿಸಿದೆ.

    ಇತ್ತೀಚೆಗೆ ತಮಿಳಿನ 96 ಸಿನಿಮಾದ ರೀಮೇಕ್ ಜಾನು ಚಿತ್ರದ ಮೂಲಕ ಸಮಂತಾ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದೀಗ ಜೂ.ಎನ್‍ಟಿಆರ್ ಜೊತೆ ಮೋಡಿ ಮಾಡಲು ಮತ್ತೆ ಸಿದ್ಧವಾಗಿದ್ದಾರೆ ಎಂದು ವರದಿಯಾಗಿದೆ.

  • ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಸಮಂತಾ ನಿರ್ಧಾರ

    ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಸಮಂತಾ ನಿರ್ಧಾರ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಎರಡು ವರ್ಷಗಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಈಗಲೇ ನಿರ್ಧಾರ ತೆಗೆದುಕೊಂಡಿದ್ದಾರೆ.

    ಇತ್ತೀಚೆಗೆ ಸಮಂತಾ ತಮ್ಮ ‘ಜಾನು’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ಚಿತ್ರದಲ್ಲಿ ನಟಿಸುತ್ತೇನೆ. ಅದಾದ ಬಳಿಕ ಚಿತ್ರರಂಗಕ್ಕೆ ಗುಡ್‍ಬೈ ಹೇಳುತ್ತೇನೆ ಎಂದು ಹೇಳಿದ್ದಾರೆ.

    ನಟರಿಗೆ ಹೋಲಿಸಿದರೆ ನಟಿಯರ ವೃತ್ತಿಜೀವನದ ಅವಧಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ನನಗೆ ಮದುವೆಯಾಗಿದ್ದು, ನಾನು ಈಗ ನನ್ನ ಕುಟುಂಬದ ಕಡೆ ಗಮನ ಕೊಡಬೇಕಿದೆ. ಹಾಗಾಗಿ ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ಚಿತ್ರಗಳಲ್ಲಿ ನಟಿಸುತ್ತೇನೆ. ಈ ಎರಡು ವರ್ಷದಲ್ಲಿ ನನ್ನ ಜೀವನದಲ್ಲಿ ಯಾವಾಗಲೂ ನೆನಪಾಗುವ ಸಿನಿಮಾವೊಂದನ್ನು ಮಾಡಬೇಕಿದೆ ಎಂದು ತಿಳಿಸಿದ್ದರು.

    ಫೆಬ್ರವರಿ 7ರಂದು ಅಂದರೆ ಇಂದು ಜಾನು ಚಿತ್ರ ಬಿಡುಗಡೆ ಆಗಿದ್ದು, ಸಮಂತಾಗೆ ನಾಯಕನಾಗಿ ಶರ್ವಾನಂದ್ ನಟಿಸಿದ್ದಾರೆ. ತಮಿಳಿನ ’96’ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಗಿದೆ. ಈ ಚಿತ್ರವನ್ನು ಸಿ. ಪ್ರೇಮ್ ಕುಮಾರ್ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಿಸಿದ್ದಾರೆ. ಜಾನು ಚಿತ್ರ ಹೊರತುಪಡಿಸಿದರೆ ಸಮಂತಾ ‘ದಿ ಫ್ಯಾಮಿಲಿ ಮ್ಯಾನ್’ ಎಂಬ ವೆಬ್ ಸೀರಿಸ್‍ನಲ್ಲಿ ನಟಿಸುತ್ತಿದ್ದಾರೆ.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಮಗುವಿನ ಬಗ್ಗೆ ಅಭಿಮಾನಿ ಪ್ರಶ್ನೆ- ಡೇಟ್ ಹೇಳಿ ಬಾಯಿ ಮುಚ್ಚಿಸಿದ ಸಮಂತಾ

    ಮಗುವಿನ ಬಗ್ಗೆ ಅಭಿಮಾನಿ ಪ್ರಶ್ನೆ- ಡೇಟ್ ಹೇಳಿ ಬಾಯಿ ಮುಚ್ಚಿಸಿದ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಜಾಣತನದ ಉತ್ತರ ನೀಡಿದ್ದಾರೆ.

    ಮಂಗಳವಾರ ಸಮಂತಾ ತಮ್ಮ ಇನ್‍ಸ್ಟಾ ಸ್ಟೋರಿಯಲ್ಲಿ ನನಗೆ ಪ್ರಶ್ನೆ ಕೇಳಿ ಎಂದು ಪೋಸ್ಟ್ ಮಾಡಿಕೊಂಡರು. ಇದನ್ನು ನೋಡಿದ ಅಭಿಮಾನಿಗಳು ಸಮಂತಾ ಅವರನ್ನು ಪ್ರಶ್ನಿಸಲು ಶುರು ಮಾಡಿದರು. ಈ ವೇಳೆ ಹಲವರು ಸಮಂತಾ ಅವರಿಗೆ ಪ್ರೆಗ್ನೆನ್ಸಿ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಸಮಂತಾ ಒಬ್ಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುವ ಮೂಲಕ ಉಳಿದ ಅಭಿಮಾನಿಗಳ ಬಾಯಿ ಮುಚ್ಚಿಸಿದ್ದಾರೆ.

    ಇನ್‍ಸ್ಟಾದಲ್ಲಿ ಅಭಿಮಾನಿಯೊಬ್ಬರು, “ನಿಮಗೆ ಮಗು ಯಾವಾಗ ಜನಿಸುತ್ತದೆ” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸಮಂತಾ, “ನನ್ನ ದೇಹದ ಕಾರ್ಯವೈಖರಿಯಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ನಾನು 2020ರ ಆಗಸ್ಟ್ 7ರಂದು ಬೆಳಗ್ಗೆ 7 ಗಂಟೆಗೆ ಮಗುವನ್ನು ಪಡೆಯುತ್ತಿದ್ದೇನೆ ಎಂದು ಜಾಣತನದ ಉತ್ತರ ನೀಡಿದ್ದಾರೆ. ಸಮಂತಾ ಅವರ ಈ ಉತ್ತರ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಈ ಹಿಂದೆ ಸಮಂತಾ ಗರ್ಭಿಣಿಯಾ ಎಂದು ಪ್ರಶ್ನಿಸಿ ತೆಲುಗು ವೈಬ್‍ಸೈಟ್ ನಲ್ಲಿ ನಟಿಯ ಟ್ವಿಟ್ಟರಿಗೆ ಟ್ಯಾಗ್ ಮಾಡಿತ್ತು. ಈ ಪ್ರಶ್ನೆಗೆ ನಟಿ ಸಮಂತಾ ಅಕ್ಕಿನೇನಿ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದರು. ತೆಲುಗು ವೆಬ್‍ಸೈಟ್, “ಸಮಂತಾ ಗರ್ಭಿಣಿಯಾ” ಎಂದು ಪ್ರಶ್ನಿಸಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಸಮಂತಾ, “ನಿಜವಾಗಿಯೂ ಹೌದಾ? ನಿಮಗೆ ಗೊತ್ತಾದರೆ ದಯವಿಟ್ಟು ನನಗೆ ತಿಳಿಸಿ” ಎಂದು ಹಾಸ್ಯವಾಗಿ ರೀ-ಟ್ವೀಟ್ ಮಾಡಿದ್ದರು.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.