Tag: salt water

  • ಬಿಸಿಲು, ಗಾಳಿ ಇಲ್ಲದೆ ಉಪ್ಪುನೀರಿಂದ ವಿದ್ಯುತ್ ಉತ್ಪಾದಿಸಿದ ಜಪಾನ್!

    ಬಿಸಿಲು, ಗಾಳಿ ಇಲ್ಲದೆ ಉಪ್ಪುನೀರಿಂದ ವಿದ್ಯುತ್ ಉತ್ಪಾದಿಸಿದ ಜಪಾನ್!

    ಷ್ಟೋ ವರ್ಷಗಳಿಂದ ಜಾಗತಿಕ ಪಾರಂಪರಿಕ ಶುದ್ಧ ಶಕ್ತಿಗಳಾದ ಹೊಂದಿರುವ ಸೂರ್ಯಶಕ್ತಿ, ಗಾಳಿಶಕ್ತಿಯ ಮೇಲೆ ಅವಲಂಬಿತವಾಗಿದ್ದೇವೆ. ಜಪಾನ್‌ನಲ್ಲಿ ಇತ್ತೀಚೆಗೆ ಉದ್ಭವಿಸಿರುವ ಉಪ್ಪು ನೀರು ಬಳಸಿ ಆಸ್ಮೋಟಿಕ್ ಶಕ್ತಿ (Osmotic Power) ಎಂಬ ಹೊಸ ಅಲೆಯನ್ನೇ ಸೃಷ್ಟಿಸುತ್ತದೆ.

    ಈ ಹೊಸ ವಿಧಾನವು ಗಾಳಿಯಿಲ್ಲದೆ, ಬೆಳಕಿಲ್ಲದೆ, ನೀರಿನ ರೂಪಾಂತರದಿಂದ ಮಾತ್ರ ಶಕ್ತಿ ಉತ್ಪಾದನೆಯನ್ನು ಮಾಡುತ್ತದೆ. ಇತ್ತೀಚೆಗೆ ಭಾರತದಲ್ಲಿ ಸೌರ ಶಕ್ತಿಯ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆದರೆ ಜಪಾನ್ (Japan) ದೇಶವು ಇವೆಲ್ಲವನ್ನು ಬಿಟ್ಟು ಉಪ್ಪು ನೀರಿನಿಂದ ವಿದ್ಯುತ್ ಅನ್ನ ಉತ್ಪಾದಿಸುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಇದನ್ನು ಸಾಗರ ಶಕ್ತಿ ಎಂದೂ ಸಹ ಕರೆಯಲಾಗುತ್ತದೆ.

    ಈ ಆಸ್ಮೋಟಿಕ್ ಶಕ್ತಿ ಅನ್ನು ಜಪಾನ್‌ನ ಫುಕೋಓಕಾ ನಗರದಲ್ಲಿ 2025ರಲ್ಲೇ ಪ್ರಾರಂಭ ಮಾಡಲಾಗಿದೆ. ಇದು ಏಷ್ಯಾದಲ್ಲಿ ಮೊದಲ ಜಗತ್ತಿನಲ್ಲಿ ಎರಡನೇ ಆಸ್ಮೋಟಿಕ್ ಶಕ್ತಿ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶವಾಗಿದೆ.

    ಸಾಗರ ಶಕ್ತಿಯ ಉತ್ಪಾದನೆ ಹೇಗೆ?
    ಫಿಲ್ಟರ್ ಮಾಡಿದ ಸಿಹಿ ನೀರು ಮತ್ತು ಸಮುದ್ರದ ನೀರನ್ನು ಬಿಡಲಾಗುತ್ತದೆ. ಮೆಂಬರೇನ್ ಮಾಡ್ಯೂಲ್‌ಗಳನ್ನು ಪ್ರವೇಶಿಸುವ ಮೊದಲು ಸಮುದ್ರದ ನೀರನ್ನು ಸರಿಸುಮಾರು ಅರ್ಧದಷ್ಟು ಆಸ್ಮೋಟಿಕ್ ಒತ್ತಡಕ್ಕೆ ಒಳಪಡಿಸಲಾಗುತ್ತದೆ.

    ಸಿಹಿ ನೀರನ್ನು ಮತ್ತು ಉಪ್ಪು ನೀರನ್ನು ಬೇರೆ ಬೇರೆಯಾಗಿ ಹಾಕಲಾಗುತ್ತದೆ. ಈ ಮೂರನೇ ಒಂದು ಭಾಗವನ್ನು ಜಲವಿದ್ಯುತ್ ಟರ್ಬೈನ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಉಳಿದ ಭಾಗವು ಒಳಬರುವ ಸಮುದ್ರದ ನೀರನ್ನು ಒತ್ತಡಕ್ಕೆ ಒಳಪಡಿಸಲು ಒತ್ತಡ ವಿನಿಮಯಕಾರಕದ ಮೂಲಕ ಹಾದುಹೋಗುತ್ತದೆ.

    ಶಕ್ತಿ ಉತ್ಪಾದನಾ ಸಾಮರ್ಥ್ಯ
    ವರ್ಷಕ್ಕೆ ಸುಮಾರು 8,80,000 ಕಿಲೋವಾಟ್‌-ಗಂಟೆ (kWh) ಶಕ್ತಿ ಉತ್ಪನೆಯಾಗುತ್ತದೆ. ಇದು ಸುಮಾರು 220ರಿಂದ 290 ಮನೆಗಳಿಗೆ ಸಮನಾದ ಶಕ್ತಿಯನ್ನು ಒದಗಿಸಲು ಯೋಗ್ಯವಾಗಿದೆ.

    ಇದರ ಪ್ರಯೋಜನಗಳೇನು?
    ನವೀಕರಿಸಬಹುದಾದ ಶಕ್ತಿ:
    ತರಂಗ ಶಕ್ತಿ ಮತ್ತು ಉಬ್ಬರವಿಳಿತದ ಶಕ್ತಿ ಎರಡೂ ಹೇರಳವಾದ ಸಾಗರದ ನೈಸರ್ಗಿಕ ಚಲನಶೀಲತೆಯನ್ನು ಬಳಸುತ್ತವೆ. ಅಲ್ಲದೆ ಇದು ವಿದ್ಯುತ್ ಉತ್ಪಾದಿಸಲು ಯಾವುದೇ ನವೀಕರಿಸಲಾಗದ ಇಂಧನಗಳನ್ನು ಬಳಸುವುದಿಲ್ಲ.

    ತ್ಯಾಜ್ಯಗಳನ್ನು ಉತ್ಪಾದಿಸಲ್ಲ:
    ಅವು ಕಾರ್ಯನಿರ್ವಹಿಸುವಾಗ ಹಸಿರುಮನೆ ಅನಿಲಗಳು ಅಥವಾ ಇತರ ಮಾಲಿನ್ಯವನ್ನು ಉತ್ಪಾದಿಸುವುದಿಲ್ಲ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಸಾಗರ ವಿದ್ಯುತ್ ಉತ್ಪಾದನೆಯಿಂದ ಯಾವುದೇ ತ್ಯಾಜ್ಯ ಉತ್ಪನ್ನಗಳು ಸೃಷ್ಟಿಯಾಗುವುದಿಲ್ಲ.

    ಕಡಲತೀರದ ದೇಶಗಳಿಗೆ ಹೆಚ್ಚು ಉಪಯುಕ್ತ:
    ಕರಾವಳಿ ತೀರಗಳಲ್ಲಿ ಅಲೆ ಮತ್ತು ಉಬ್ಬರವಿಳಿತದ ವಿದ್ಯುತ್ ಉತ್ಪಾದಕಗಳನ್ನು ನಿರ್ಮಿಸಲಾಗಿರುವುದರಿಂದ, ವಿಶೇಷವಾಗಿ ಉದ್ದವಾದ ಕರಾವಳಿಗಳನ್ನು ಹೊಂದಿರುವ ದೇಶಗಳಲ್ಲಿ ಅಪಾರ ಸಾಮರ್ಥ್ಯವಿದೆ.

    ಕಡಿಮೆ ವೆಚ್ಚಗಳು:
    ಸಾಗರ ಇಂಧನ ಸ್ಥಾವರವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ಅದರ ಚಾಲನಾ ವೆಚ್ಚವು ಸಾಕಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ತೈಲ ಮತ್ತು ಕಲ್ಲಿದ್ದಲು ಸ್ಥಾವರಗಳು ಹಾಗೂ ಪರಮಾಣು ವಿದ್ಯುತ್‌ನಂತಹ ಹೆಚ್ಚು ಪ್ರಬಲವಾದ ವಿದ್ಯುತ್ ಉತ್ಪಾದನೆಗೆ ಹೋಲಿಸಿದರೆ ಇದರ ವೆಚ್ಚ ಕಡಿಮೆ ಎನ್ನಲಾಗುತ್ತಿದೆ.

  • ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

    ದೇಶದಲ್ಲೇ ಮೊದಲ ಪ್ರಯತ್ನ- ಸಮುದ್ರದ ಉಪ್ಪು ನೀರಿನಿಂದ ಸಿಗಲಿದೆ ಶುದ್ಧವಾದ ಸಿಹಿ ನೀರು

    -ಮಂಗಳೂರು ಕಡಲಿನಲ್ಲಿ ಹೊಸ ಆವಿಷ್ಕಾರ

    ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರು 10ಕ್ಕೂ ಹೆಚ್ಚು ದಿನಗಳ ಕಾಲ ಸಮುದ್ರದಲ್ಲೇ ಇರುತ್ತಾರೆ. ಈ ಸಂದರ್ಭ ಸಮುದ್ರದ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಒಂದು ವಾರದ ಬಳಕೆಗೆ ಬೇಕಾದ ಸಿಹಿ ನೀರನ್ನು ಹೋಗುವಾಗಲೇ ಬೋಟ್‍ನಲ್ಲಿ ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಆದರೆ ಇನ್ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನೇ ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದು. ಆಸ್ಟ್ರೇಲಿಯಾದ ಈ ತಂತ್ರಜ್ಞಾನವನ್ನು ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೊಳಿಸಲಾಗಿದೆ. ಈ ರೀತಿ ಬೋಟ್‍ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಸಚಿವ ಎಸ್.ಅಂಗಾರ ಸಮ್ಮುಖದಲ್ಲೇ ನಡೆಸಲಾಯಿತು.

    ಈ ತಂತ್ರಜ್ಞಾನ ಅಮೇರಿಕಾ, ಯುರೂಪ್‍ನಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‍ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತೆ. ಪೈಪ್‍ನಿಂದ ಬಂದ ಉಪ್ಪು ನೀರು ಶುದ್ದೀಕರಿಸುವ ಯಂತ್ರದ ಒಳಗೆ ಪಂಪ್ ಆಗಿ ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತೆ. ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀ. ನೀರು ಫಿಲ್ಟರ್ ಆಗುತ್ತೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‍ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತೆ ಎಂಬ ಆತಂಕವು ಇರೋದಿಲ್ಲ.

    ಈ ಯಂತ್ರಕ್ಕೆ 4 ಲಕ್ಷದ 60 ಸಾವಿರ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು ಸಿಹಿ ನೀರಿನ ಆಭಾವ ತಪ್ಪಲಿದೆ. ಇದನ್ನೂ ಓದಿ: ಪೂಜೆ ಮಾಡಿಕೊಂಡು ಹೋಗು ಅಂದ್ರೆ ದೇವಾಲಯವೇ ತನ್ನದೆಂದ ಪೂಜಾರಿ – ಗ್ರಾಮಸ್ಥರಿಂದ ಪ್ರತಿಭಟನೆ

  • ಬೆಂಗ್ಳೂರಿಗೆ ಮಂಗ್ಳೂರು ಸಮುದ್ರದ ನೀರು- ಸರ್ಕಾರದಿಂದ ಸಿಹಿನೀರಿನ ಪ್ಲಾನ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕುಡಿಯುವ ನೀರಿಗೆ ಬರ ಬಂದಿದೆ. ಬೆಂಗಳೂರಿಗರ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಈ ನಡುವೆ ಕರಾವಳಿಯ ಸಮುದ್ರದ ನೀರನ್ನೇ ಬೆಂಗಳೂರಿಗರಿಗೆ ಕುಡಿಯಲು ಸರಬರಾಜು ಮಾಡುವ ಪ್ಲಾನ್ ಫಿಕ್ಸ್ ಆಗಿದೆ. ಇದಕ್ಕಾಗಿ ಈಗಾಗಲೇ ಬಂದರು ನಗರಿ ಮಂಗಳೂರಿನಲ್ಲಿ ಪ್ಲಾನ್ ರೆಡಿಯಾಗ್ತಿದೆ.

    ಎತ್ತಿನಹೊಳೆ ಯೋಜನೆಗೆ ಕೈ ಹಾಕಿದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು ಸರ್ಕಾರದ ಸುತ್ತಾ ಗಿರಕಿ ಹೊಡೆಯುತ್ತಿವೆ. ಕರಾವಳಿಯವರು ಕೊಡಲ್ಲ, ಕೋಲಾರ ಭಾಗದವರು ಬಿಡಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಅದೇ ಸಮುದ್ರದ ನೀರನ್ನ ಸಿಹಿ ಮಾಡಿ ಹರಿಸುವ ಯೋಜನೆ.

    ಹೌದು. ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಸಮುದ್ರದ ಉಪ್ಪು ನೀರನ್ನ ಸಿಹಿ ನೀರಾಗಿಸಿ ಬಳಕೆ ಮಾಡುತ್ತಿವೆ. ಮುಂಬೈ, ವಿಶಾಖಪಟ್ಟಣದಲ್ಲಿ ಯೋಜನೆ ರೆಡಿಯಾಗಿದೆ. ಚೆನ್ನೈನಲ್ಲಿ ಈಗಾಗಲೇ ಪ್ಲಾಂಟ್ ಶುರುವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರಿನ ತಣ್ಣೀರುಬಾವಿ ಭಾಗದಲ್ಲಿ ಪ್ಲಾಂಟ್ ನಿರ್ಮಿಸಿ ಬೆಂಗಳೂರು, ಕೋಲಾರ ಭಾಗಕ್ಕೆ ನೀರು ಹರಿಸಲು ಸರ್ಕಾರ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದ್ರಾಬಾದ್‍ನ ಅಧಿಕಾರಿಗಳ ತಂಡವೂ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ.

    ಈ ಅಧ್ಯಯನ ತಂಡದ ತಜ್ಞರ ಪ್ರಕಾರ, ಈ ಯೋಜನೆಯಡಿ 100 ಎಂಎಲ್‍ಡಿ ನೀರು ಉತ್ಪಾದಿಸಲು 600 ಕೋಟಿ ರೂ. ಖರ್ಚಾಗುತ್ತೆ. 18 ರಿಂದ 20 ಎಕರೆ ಭೂಮಿ ಬೇಕಾಗುತ್ತೆ. ಖುಷಿ ವಿಷಯ ಅಂದ್ರೆ ಮಂಗಳೂರಿನ ಎಂಆರ್‍ಪಿಎಲ್ ಮತ್ತು ಎಂಸಿಎಫ್ ಕೈಗಾರಿಕೆಗಳು ಈ ಯೋಜನೆಗೆ ಕೈ ಜೋಡಿಸಲಿವೆ.