Tag: Salesman

  • ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ- ಉಗ್ರರ ಗುಂಡಿನ ದಾಳಿಗೆ ಸೇಲ್ಸ್ ಮ್ಯಾನ್ ಬಲಿ

    ಕಾಶ್ಮೀರದಲ್ಲಿ ಮುಂದುವರಿದ ನಾಗರಿಕರ ಹತ್ಯೆ- ಉಗ್ರರ ಗುಂಡಿನ ದಾಳಿಗೆ ಸೇಲ್ಸ್ ಮ್ಯಾನ್ ಬಲಿ

    ಶ್ರೀನಗರ: ಸೇಲ್ಸ್ ಮ್ಯಾನ್ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಮೊಹಮ್ಮದ್ ಇಬ್ರಾಹಿಂ ಖಾನ್ ಎಂದು ಗುರುತಿಸಲಾಗಿದ್ದು, ಇವರು ಬಂಡಿಪೋರಾದ ನಿವಾಸಿಯಾಗಿದ್ದಾರೆ. ಗುಂಡಿನ ದಾಳಿ ನಂತರ ಮೊಹಮ್ಮದ್ ಇಬ್ರಾಹಿಂ ಖಾನ್ ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಮೊಹಮ್ಮದ್ ಇಬ್ರಾಹಿಂ ಖಾನ್ ಅವರು ಫಾರ್ಮಸಿಯೊಂದರ ಸೇಲ್ಸ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 24 ಗಂಟೆಗಳಲ್ಲಿ ಶ್ರೀನಗರದಲ್ಲಿ ಉಗ್ರರು ನಡೆಸಿರುವ ಎರಡನೇ ದಾಳಿ ಇದಾಗಿದೆ. ಇದನ್ನೂ ಓದಿ: ರಾಜರತ್ನ ಅಪ್ಪು ಅಗಲಿ 12ನೇ ದಿನ – ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ

    ಈ ಮುನ್ನ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಟಮಾಲೂ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಒಳಗಾಗಿದ್ದ ಪೊಲೀಸ್ ಸಿಬ್ಬಂದಿ ಗಾಯಗೊಂಡು ಸಾವನ್ನಪ್ಪಿದ್ದರು. ಮೃತರನ್ನು ಎಸ್‍ಡಿ ಕಾಲೋನಿ ಪ್ರದೇಶದಲ್ಲಿ ಕಾನ್‍ಸ್ಟೆಬಲ್ ತೌಸೀಫ್ ಎಂದು ಗುರುತಿಸಲಾಗಿತ್ತು. ಇದನ್ನೂ ಓದಿ: ಕಮಲಾ ನೆಹರು ಆಸ್ಪತ್ರೆಯಲ್ಲಿ ಬೆಂಕಿ ಅವಘಡ – ನಾಲ್ವರು ಮಕ್ಕಳ ದಾರುಣಾ ಸಾವು

    ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ, ಭಯೋತ್ಪಾದಕರು ಜೆಕೆಪಿ ಕಾನ್‍ಸ್ಟೆಬಲ್ ತೌಸಿಫ್ ಅಹ್ಮದ್ ಅವರ ನಿವಾಸದ ಬಳಿ ಬಟಮಾಲೂ ಎಸ್‍ಡಿ ಕಾಲೋನಿಯಲ್ಲಿ ಗುಂಡು ಹಾರಿಸಿದ್ದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

  • ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

    ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

    ಮಂಗಳೂರು: ದೀಪಾವಳಿ ಬಂದರೆ ಪಟಾಕಿ ಪ್ರಿಯರಿಗೆ ಗಮ್ಮತ್ತೇ ಗಮ್ಮತ್ತು. ಎಲ್ಲೆಡೆ ಪಟಾಕಿ ಸದ್ದು, ಗಿರಗಿಟ್ಲೆ ತಿರುಗೋ ನೆಲಚಕ್ರ ಹೊತ್ತಿಸಿ ಆಡುವ ಮಕ್ಕಳು. ಆದರೆ ಮಂಗಳೂರಿನಲ್ಲಿ ಪಟಾಕಿ ಸಂಭ್ರಮ ಈ ಬಾರಿ ತುಂಬಾನೇ ಕಮ್ಮಿಯಾಗಿದೆ. ಹೀಗಾಗಿ ಪಟಾಕಿ ಮಾರಾಟದ ಅಂಗಡಿಗಳಿಗೆ ಬೇಜಾನ್ ಲಾಸ್ ಆಗಿದೆ.

    ಹೀಗೆ ಸಾಲು ಸಾಲಾಗಿರೋ ಪಟಾಕಿ ಅಂಗಡಿಗಳಲ್ಲಿ ಹೆಚ್ಚಿನವರು ಧೂಳು ಹೊಡೆಯುತ್ತಿದ್ದಾರೆ. ಈ ಸಾರಿ ಪಟಾಕಿ ಬಿಸಿನೆಸ್ ಲಗಾಡಿ ಹೋಯ್ತು ಎಂದು ತಲೆಗೆ ಕೈ ಹೊತ್ತುಕೊಂಡವರು ಇದ್ದಾರೆ. ಹೌದು. ಈ ಬಾರಿ ದೀಪಾವಳಿಗೆ ಪಟಾಕಿಯ ಮೆರುಗು ಮರೆಯಾಗಿದೆ. ಹಿಂದಿನಂತೆ ಪಟಾಕಿಯ ಚಿತ್ತಾರವಂತೂ ನೋಡೋಕೆ ಸಿಗುತ್ತಿಲ್ಲ. ಅತೀ ಹೆಚ್ಚು ಪಟಾಕಿ ಮಾರಾಟಕ್ಕೆ ಹೆಸರಾಗಿದ್ದ ಮಂಗಳೂರು ನಗರದಲ್ಲಿ ಅರ್ಧಕ್ಕರ್ಧ ಬಿಸಿನೆಸ್ ಡೌನ್ ಆಗಿದೆಯಂತೆ. ನೋಟ್ ಬ್ಯಾನ್ ಮತ್ತು ಜನರಲ್ಲಿ ಪಟಾಕಿಯಿಂದ ಪರಿಸರ ನಾಶವಾಗುತ್ತಿದೆಯೆಂಬ ಜಾಗೃತಿ ಬಂದಿದ್ದರಿಂದ ಹಿಂದಿಗಿಂತ ವ್ಯಾಪಾರ ತುಂಬಾನೇ ಕಮ್ಮಿಯಾಗಿದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.

    ಈ ಬಾರಿ ದೆಹಲಿ ನಗರ ವ್ಯಾಪ್ತಿಯಲ್ಲಿ ಪಟಾಕಿ ನಿಷೇಧ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನೊಂದೆಡೆ ಪರಿಸರ ಹೋರಾಟಗಾರರು ಕೂಡ ಜಾಲತಾಣದಲ್ಲಿ ಪಟಾಕಿ ವಿರುದ್ಧ ಅಭಿಯಾನ ನಡೆಸಿದ್ದರು. ಇವೆಲ್ಲದರ ಪರಿಣಾಮ ಪಟಾಕಿಯ ಮಾರಾಟದ ಮೇಲಾಗಿದ್ದು, ಸ್ವತಃ ಜನರೇ ಖರೀದಿಗೆ ಬರುತ್ತಿಲ್ಲ. ಇದರಿಂದಾಗಿ ದೀಪಾವಳಿಯ ಮೊದಲ ದಿನವೇ ಭರ್ಜರಿ ವ್ಯಾಪಾರ ನಿರೀಕ್ಷಿಸಿದ್ದ ವ್ಯಾಪಾರಸ್ಥರು ಬಿಸಿನೆಸ್ ಡಲ್ ಆಗಿದ್ದರಿಂದ ಸೊರಗಿದ್ದಾರೆ.

    ಇದರ ಜೊತೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಪೊಲೀಸರು ಪಟಾಕಿ ಮಾರಾಟಕ್ಕೆ ನಿಯಂತ್ರಣ ಹೇರಿದ್ದರಿಂದ ವ್ಯಾಪಾರ ಮತ್ತಷ್ಟು ಕಷ್ಟವಾಗಿದೆಯಂತೆ. ಕೆಲವರಂತೂ 20 ವರ್ಷಗಳಿಂದ ಪಟಾಕಿ ವ್ಯಾಪಾರ ನಡೆಸುತ್ತಿದ್ದವರಿಗೆ ಇದೇ ಮೊದಲ ಬಾರಿಗೆ ವ್ಯಾಪಾರದಲ್ಲಿ ಡಲ್ ಹೊಡೆದಿದೆ. ಹೊಸ ವರ್ಷ ಹಾಗೂ ಇತರೆ ಸಮಾರಂಭಗಳಿಗೆ ಸಿಕ್ಕಾಪಟ್ಟೆ ಪಟಾಕಿ ಹೊಡೆಯೋದನ್ನು ವಿರೋಧಿಸದವರು ಕೇವಲ ದೀಪಾವಳಿ ಹಬ್ಬದ ಪಟಾಕಿಗೆ ವಿರೋಧ ವ್ಯಕ್ತಪಡಿಸಿರೋದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ. ವರ್ಷಕ್ಕೊಮ್ಮೆ ಹಬ್ಬದ ಹೆಸರಲ್ಲಿ ಸಿಡಿಸೋ ಪಟಾಕಿಗೆ ಸರ್ಕಾರ ನಿಯಂತ್ರಣ ಹೇರಬಾರದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.