Tag: sale

  • ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

    ಯುವತಿಯರು ಮಾರಾಟಕ್ಕಿದ್ದಾರೆ- ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋ ವೈರಲ್

    ಬೆಳಗಾವಿ: ಜಿಲ್ಲೆಯಲ್ಲಿ ಒಂದು ಕಡೆ ಅಧಿವೇಶನ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ ಪಡ್ಡೆ ಹುಡುಗರ ಕೈಯಲ್ಲಿರುವ ಮೊಬೈಲ್‍ಗಳಲ್ಲಿ ಯುವತಿಯರ ಫೋಟೋಗಳು ಸದ್ದು ಮಾಡುತ್ತಿವೆ.

    ರಂಭೆ, ಊರ್ವಶಿ ಹಾಗೂ ಮೇನಕೆಯರನ್ನು ನಾಚಿಸುವಂತಹ ಬೆಡಗಿಯರು ಬೆಳಗಾವಿಗೆ ಬಂದಿಳಿದಿದ್ದಾರೆ ಎಂದು ವಾಟ್ಸಾಪ್ ಮೆಸೇಜ್ ಹರಿದಾಡುತ್ತಿದೆ. ಇದಕ್ಕೆ ಸಂಬಂಧಿಸಿಂದತೆ ಕೆಲ ಯುವತಿಯರ ಮೊಬೈಲ್ ನಂಬರ್, ಅಡ್ರೆಸ್ ಸಮೇತ ಫೋಟೋಗಳು ಫುಲ್ ವೈರಲ್ ಮಾಡಿದ್ದಾರೆ. ಇದು ಕುಂದಾನಗರ ಜನರ ಗಂಡಸರು ಹಾಗೂ ಅಧಿವೇಶನದ ಭದ್ರತೆಯಲ್ಲಿರುವ ಪೊಲೀಸರಿಗೆ ತಲೆಕಡೆಸಿದೆ.

    ಈ ಯುವತಿಯರ ಮಾರಾಟಕ್ಕಿದ್ದಾರೆಂದು ಅವರ ದರ ಪಟ್ಟಿಯನ್ನ ವಾಟ್ಸಾಪ್‍ನಲ್ಲಿ ಹರಿಬಿಟ್ಟಿದ್ದಾರೆ
    * ಒಂದರಿಂದ ಒಂದೂವರೆ ಗಂಟೆಗೆ – 10ಸಾವಿರ ರೂ
    * ಮೂರರಿಂದ ಮೂರೂವರೆ ಗಂಟೆಗೆ – 20 ಸಾವಿರ ರೂ
    * 6 ರಿಂದ 7 ಗಂಟೆಗಳ ಕಾಲ – 30 ಸಾವಿರ ರೂ
    * 7 ರಿಂದ 8 ಗಂಟೆಗಳ ಕಾಲ – 40 ಸಾವಿರ ರೂ
    * ಯುವತಿ 24 ಗಂಟೆಗಳ ಕಾಲ ನಿಮ್ಮ ಜೊತೆಯಲ್ಲೇ ಇರಬೇಕಂದರೆ 60 ಸಾವಿರ ರೂಪಾಯಿ ಕೊಡಬೇಕಂತೆ ಅಂತ ಹರಿದಾಡುತ್ತಿದೆ.

    ಇದರಲ್ಲಿರುವ ಫೋನ್ ನಂಬರ್ ಗೆ ಕಾಲ್ ಮಾಡಿದರೆ ಅವರು ರಿಸೀವ್ ಮಾಡುತ್ತಿಲ್ಲ. ಇದರಲ್ಲಿರುವ ಯುವತಿಯರ ಫೋಟೋ ಅಸಲಿಯೋ, ನಕಲಿಯೋ ಎಂದು ಪೊಲೀಸರು ತಲೆಕೆಡಿಸಿಕೊಂಡಿದ್ದು, ಒಳ್ಳೆ ಕುಟುಂಬದ ಯುವತಿಯರು ಯಾವುದಾದರೂ ಇದ್ದು, ಬೇಕಂತಲೇ ಕೆಲವರು ಇವುಗಳನ್ನು ಹರಿಬಿಟ್ಟಿದ್ದಾರೇನೋ ಎಂಬ ಅನುಮಾನ ಮೂಡುತ್ತದೆ. ಆದರೆ ಈ ರೀತಿ ನೂರಾರು ಫೋಟೋಗಳು ಹರಿಬಿಟ್ಟಿರುವುದು ಪೊಲೀಸರ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖರೀದಿಸಿದ್ದು 6 ಸಾವಿರಕ್ಕೆ ಮಾರಿದ್ದು 25 ಲಕ್ಷಕ್ಕೆ!

    ಖರೀದಿಸಿದ್ದು 6 ಸಾವಿರಕ್ಕೆ ಮಾರಿದ್ದು 25 ಲಕ್ಷಕ್ಕೆ!

    ಆಂಸ್ಟರ್ಡ್ಯಾಮ್: ನೆದರ್ಲ್ಯಾಂಡ್ ವ್ಯಕ್ತಿಯೊಬ್ಬ ಕೇವಲ 75 ಯೂರೋ (6 ಸಾವಿರ ಸಾವಿರ)ಕ್ಕೆ ಚಿತ್ರಕಲೆಯನ್ನು ಖರೀದಿಸಿ ಅದನ್ನೂ ಬರೋಬ್ಬರಿ 30,000 ಯೂರೋ(24 ಲಕ್ಷ ರೂ.) ಮಾರಾಟ ಮಾಡಿದ್ದಾರೆ.

    ಹೆಂಕ್ ಲಾರ್ಮನ್ಸ್ ಎಂಬವರು ಥ್ರಿಫ್ಟ್ ಅಂಗಡಿಯಲ್ಲಿ 75 ಯೂರೋಗಳನ್ನು ಕೊಟ್ಟು ಒಂದು ಪೇಂಟಿಂಗ್ ಖರೀದಿಸಿದ್ದರು. ಬಳಿಕ ಅದನ್ನು ಲಾರ್ಮನ್ಸ್ ತಜ್ಞರ ಬಳಿ ತೆಗೆದುಕೊಂಡು ಹೋಗಿದ್ದಾರೆ. ಆಗ ತಜ್ಞರು ಆ ಪೇಂಟಿಂಗ್ ಪರಿಶೀಲನೆ ಮಾಡಿ ಅದನ್ನು ಡಚ್ ಕಲಾವಿದ ಜೋಹಾನ್ ಆರ್ಟ್ಸ್ ರಚಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಪೇಂಟಿಂಗ್ ತುಂಬಾ ಮೌಲ್ಯವಾದುದ್ದು ಎಂದು ತಿಳಿಸಿದ್ದಾರೆ.

    ಪೇಂಟಿಂಗ್ ಮೌಲ್ಯವನ್ನು ತಿಳಿದ ಲಾರ್ಮನ್ಸ್ ಮತ್ತೆ ಅದೇ ಅಂಗಡಿಗೆ ಹೋಗಿದ್ದು, ಹರಾಜಿನ ಮೂಲಕ ಮಾರಾಟ ಮಾಡಿದ್ದಾರೆ. ಆಗ ಹರಾಜಿನಲ್ಲಿ ಈ ಪೇಂಟಿಂಗ್ 30,000 ಯುರೋಗೆ (25 ಲಕ್ಷ) ಮಾರಾಟವಾಗಿದೆ. ಈ ಪೇಂಟಿಂಗ್ ನಲ್ಲಿ ಮರ ಗಿಡಗಳಿದ್ದು, ಬಣ್ಣ ಬಣ್ಣದ ಚುಕ್ಕೆಗಳು, ಹೂವುಗಳು ಕಾಣಿಸುತ್ತದೆ.

    ನೆದರ್ಲ್ಯಾಂಡ್ ನಲ್ಲಿ ವ್ಯಾನ್ ಗಾಗ್, ಟೂರೋಪ್, ವಿಲ್ಲ್ ಬ್ರೀಫ್ ಮತ್ತು ಆರ್ಟ್ಸ್ ಸೇರಿದಂತೆ ಕೆಲವರು ಈ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಈ ಪೇಂಟಿಂಗ್ ಗೆ 25 ಲಕ್ಷ ರೂ ಕೊಟ್ಟು ಡಚ್ ಸಂಗ್ರಾಹಕರೊಬ್ಬರು ಖರೀದಿಸಿದ್ದಾರೆ. ಈ ಪೇಂಟಿಂಗ್ ಮಾರಾಟ ಮಾಡಿದ ಲಾರ್ಮನ್ಸ್ ಗೆ ಊಹಿಸಲಾಗದಷ್ಟು ಲಾಭ ಬಂದಿದ್ದು, ಸಂತೋಷ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನ್ ವೆಜ್ ಮಾರಾಟಕ್ಕಿಟ್ಟು ವಿವಾದಕ್ಕೀಡಾಯ್ತು ಶಿವಮೊಗ್ಗದ ಪ್ರತಿಷ್ಠಿತ ಶಾಲೆ

    ನಾನ್ ವೆಜ್ ಮಾರಾಟಕ್ಕಿಟ್ಟು ವಿವಾದಕ್ಕೀಡಾಯ್ತು ಶಿವಮೊಗ್ಗದ ಪ್ರತಿಷ್ಠಿತ ಶಾಲೆ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಪ್ರತಿಷ್ಠಿತ ಸೈಂಟ್ ಚಾರ್ಲ್ಸ್ ಶಾಲೆಯಲ್ಲಿ ನಾನ್ ವೆಜ್ ಮಾರಾಟಕ್ಕಿಟ್ಟಿದ್ದು, ಇದೀಗ ವಿವಾದಕ್ಕೀಡಾಗಿದೆ.

    ಶಾಲೆಯಲ್ಲಿ ಫನ್ ಫೇರ್ ಹೆಸರಿನಲ್ಲಿ ಮಕ್ಕಳಿಗೆ ನಾನ್ ವೆಜ್ ತಿನ್ನಿಸಲಾಗಿದೆ ಎಂದು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಫನ್ ಫೇರ್ ನಲ್ಲಿ ಮಕ್ಕಳಿಗೆ ನಾನಾ ಬಗೆಯ ಖಾದ್ಯಗಳ ಮಾರಾಟ ಇಟ್ಟುಕೊಳ್ಳಲಾಗಿತ್ತು. ಮಕ್ಕಳು ಮನೆಯಿಂದ ಊಟ ತರುವಂತಿಲ್ಲ. ಈ ಫೆಸ್ಟ್ ನಲ್ಲೇ ಕೊಂಡು ತಿನ್ನಬೇಕು ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿತ್ತು.

    ಈ ಫನ್ ಫೇರ್ ನಲ್ಲಿ ಚಿಕನ್ ಕಬಾಬ್ ಸೇರಿದಂತೆ ಇನ್ನಿತರ ನಾನ್ ವೆಜ್ ಆಹಾರವನ್ನು ಮಾರಾಟಕ್ಕೆ ಇಡಲಾಗಿತ್ತು. ಈ ಬಗ್ಗೆ ಕೆಲ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ನಾನ್ ವೆಜ್ ಆಹಾರವನ್ನು ಶಾಲಾ ಆವರಣದಿಂದ ದೂರ ಸಾಗಿಸಲಾಯಿತು.

    ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರ ಜೊತೆ ಮಾತುಕತೆ ವೇಳೆ ಅವರ ಕೊಠಡಿಯಲ್ಲಿ ಗಾಂಧಿ, ಅಂಬೇಡ್ಕರ್ ಭಾವಚಿತ್ರಗಳು ಇಲ್ಲದ ಬಗ್ಗೆಯೂ ಪೋಷಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಬಿಇಓ ಅವರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2 ಲಕ್ಷಕ್ಕೆ ಕೊಂಡು, 24 ದಿನ ನಿರಂತರ ಅತ್ಯಾಚಾರ ಮಾಡ್ದ!

    2 ಲಕ್ಷಕ್ಕೆ ಕೊಂಡು, 24 ದಿನ ನಿರಂತರ ಅತ್ಯಾಚಾರ ಮಾಡ್ದ!

    ಭೋಪಾಲ್: ಮಹಿಳೆಯನ್ನು ಅಪಹರಿಸಿ ಸತತ 24 ದಿನಗಳ ಕಾಲ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    30 ವರ್ಷದ ಮಹಿಳೆಯನ್ನ ಭೋಪಾಲ್ ನಿಂದ ಕಿಡ್ನಾಪ್ ಮಾಡಿ, ಅಲ್ಲಿಂದ ಇಂದೋರ್ ಮತ್ತು ರಾಜಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಆಕೆಯನ್ನ 2 ಲಕ್ಷ ರೂ. ಮಾರಾಟ ಮಾಡಿದ್ದು, ನಂತರ ಸತತ 24 ದಿನಗಳ ಕಾಲ ನಿರಂತರ ಅತ್ಯಾಚಾರ ಎಸಗಿದ್ದಾರೆ. ಸದ್ಯಕ್ಕೆ ಪೊಲೀಸರು ತನಿಖೆ ಮಾಡಿ ಮಹಿಳೆಯನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸಂತ್ರಸ್ತೆ ಪತಿಯಿಂದ ವಿಚ್ಛೇದನ ಪಡೆದಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಸಂತ್ರಸ್ತೆಗೆ ಅಕ್ಟೋಬರ್ 28 ರಂದು ಅಪರಿಚಿತರೊಬ್ಬರು ಕರೆ ಮಾಡಿ ಸುಭಾಷ್ ಯಾದವ್ ಎಂದು ಹೇಳಿದ್ದಾರೆ. ಬಳಿಕ ತಿಂಗಳಿಗೆ 15 ಸಾವಿರ ವೇತನ ಸಿಗುವ ಕೆಲಸ ಕೊಡಿಸುವುದಾಗಿ ಹೇಳಿ ಭೇಟಿಯಾಗುವಂತೆ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಯುವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.

    ಸಂತ್ರಸ್ತೆ ಕೆಲಸ ಸಿಗುತ್ತದೆಂದು ಭೋಪಾಲ್ ನ ಡಿಐಜಿ ಬಂಗಲೆ ಪ್ರದೇಶದಲ್ಲಿ ಅವರನ್ನು ಭೇಟಿಯಾಗಲು ಹೋಗಿದ್ದಾರೆ. ಅಲ್ಲಿ ವ್ಯಕ್ತಿಯೊಬ್ಬ ಆಕೆಯನ್ನ ಅಪಹರಿಸಿ ಇಂದೋರ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಎರಡು ದಿನಗಳ ಕಾಲ ಉಳಿಸಿಕೊಂಡು ಅಲ್ಲಿಂದ ಅಕ್ಟೋಬರ್ 31ರಂದು ಆಕೆಯನ್ನು ಅಲ್ವಾರ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ 2 ಲಕ್ಷ ರೂ.ಗೆ ರೋಹಿತಾಶ್ ಮತ್ತು ಭೋಲರಾಂ ಎಂಬವರಿಗೆ ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ರೋಹಿತ್ ಮತ್ತು ಸುಭಾಷ್ ಹಣ ಹಂಚಿಕೊಂಡಿದ್ದಾರೆ. ಬಳಿಕ ನನ್ನನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಭೋಲಾರಂ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ದಿನಕ್ಕೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ಹೇಳಿದ್ದಾರೆ.

    ಇತ್ತ ಮಹಿಳೆ ನಾಪತ್ತೆಯಾಗಿದ್ದಾಳೆ ಎಂದು ನವೆಂಬರ್ 11 ರಂದು ಕುಟುಂಬವರು ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಶುರು ಮಾಡಿದ್ದಾರೆ. ಆದರೆ ಸಂತ್ರಸ್ತೆ ಫೋನ್ ಸ್ವಿಚ್ ಆಫ್ ಆಗಿದೆ. ಬಳಿಕ 2-3 ನಿಮಿಷ ಫೋನ್ ಆನ್  ಆಗಿದೆ. ಈ ವೇಳೆ ಪೋಲಿಸರು ನಂಬರ್ ಟ್ರ್ಯಾಕ್ ಮಾಡಿದ್ದು, ಬಳಿಕ ಸಂತ್ರಸ್ತೆ ಇದ್ದ ಸ್ಥಳ ಗೊತ್ತಾಗಿದೆ.

    ಕೂಡಲೇ ಪೊಲೀಸರು ಹೋಗಿ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಅಲ್ವಾರ್ ನಿವಾಸಿಗಳಾದ ರೋಹಿತ್ ಮತ್ತು ಭೋಲರಾಂ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಅವರಿಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

    ನಕಲಿ ನಾಗಮಣಿ ಮಾರಾಟ ಯತ್ನ- ಮೂವರು ಆರೋಪಿಗಳ ಬಂಧನ!

    ದಾವಣಗೆರೆ: ಜಿಲ್ಲೆಯ ಆನಗೋಡು ಗ್ರಾಮದ ಬಳಿ ನಕಲಿ ನಾಗಮಣಿಯನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ.

    ಕರಿಬಸಪ್ಪ, ಕುಮಾರ್ ಹಾಗೂ ಸುರೇಶ್ ಬಂಧಿತ ಆರೋಪಿಗಳು. ಕುಮಾರ್ ಹಾಗೂ ಸುರೇಶ್ ಎಂಬವರು ಆನಗೋಡು ಗ್ರಾಮದ ಕರಿಬಸಪ್ಪ ಎನ್ನುವರಿಗೆ ನಕಲಿ ನಾಗಮಣಿಯನ್ನು ತೋರಿಸಿ, ಇದು ನೂರಾರು ಕೋಟಿ ರೂ. ಬೆಲೆಬಾಳುತ್ತದೆ ಎಂದು ನಂಬಿಸಿ ವ್ಯಾಪಾರವನ್ನು ಕುದುರಿಸಿದ್ದರು. ಅಲ್ಲದೇ 10 ಲಕ್ಷಕ್ಕೆ ನಕಲಿ ನಾಗಮಣಿಯ ಡೀಲ್ ಮುಗಿಸಿಕೊಂಡಿದ್ದ ಇಬ್ಬರೂ, ಮುಂಗಡವಾಗಿ 50 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರು.

    ಇದರ ಖಚಿತ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ಕಿರಣ್ ಕುಮಾರ್ ಹಾಗೂ ಡಿಸಿಬಿ ಇನ್ಸ್ ಪೆಕ್ಟರ್ ದೇವರಾಜ್ ನೇತೃತ್ವದ ತಂಡ ದಾಳಿ ನಡೆಸಿತ್ತು. ದಾಳಿ ವೇಳೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿಯಿದ್ದ ನಕಲಿ ನಾಗಮಣಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲೆಯಾದ್ಯಂತ ಇಲ್ಲಿಯವರೆಗೆ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದ್ದು, ಇದೀಗ ನಕಲಿ ನಾಗಮಣಿ ಮಾರಾಟದ ಜಾಲ ತಲೆ ಎತ್ತಿದೆ. ಹೀಗಾಗಿ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣದಾಸೆಗೆ 20 ದಿನದ ಗಂಡು ಮಗುವನ್ನೇ ಮಾರಾಟ ಮಾಡಿದ್ಳು..!

    ಹಣದಾಸೆಗೆ 20 ದಿನದ ಗಂಡು ಮಗುವನ್ನೇ ಮಾರಾಟ ಮಾಡಿದ್ಳು..!

    ಕಲಬುರಗಿ: ತಾಯಿಯೊಬ್ಬಳು ಹಣದಾಸೆಗೆ ತನ್ನ ಕರುಳ ಕುಡಿಯನ್ನು ಮಾರಾಟ ಮಾಡಿದ ಪ್ರಕರಣವೊಂದು ಕಲಬುರಗಿಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.

    ರಜಿಯಾ ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ತಾಯಿ. ರಜಿಯಾ ಕಳೆದ 20 ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗುವುದರ ಜೊತೆಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿ ನಂತರ ಆಸ್ಪತ್ರೆಯಿಂದ ಡಿಸ್ಚಾಜ್9 ಕೂಡ ಆಗಿದ್ದಳು. ಆದರೆ ಮಗುವಿನ ತೂಕ ಕಡಿಮೆ ಇದ್ದ ಕಾರಣ ಪುನಃ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಈ ವೇಳೆ ಸಂಬಂಧಿ ನಗರದ ಟಿಪ್ಪು ಚೌಕ್ ಬಡಾವಣೆ ನಿವಾಸಿ ರೆಹಮತ್ ಉನ್ನಿಸಾ ಎಂಬಾಕೆ ಯೋಗಕ್ಷೇಮ ವಿಚಾರಿಸಲು ಬಂದಾಗ ಮಗುವಿನ ತಾಯಿ ರಜಿಯಾ ತನ್ನ ಕಡು ಬಡತನದ ಕಥೆ ಆಕೆಯ ಮುಂದೆ ಬಿಚ್ಚಿಟ್ಟು ನನಗೆ ಮಗುವನ್ನು ಸಾಕೋಕೆ ಆಗ್ತಿಲ್ಲ. ಕಂಡವರ ಮನೆ ಕಸ ಮುಸುರೆ ಕೆಲಸ ಮಾಡಿದರೆ ಹೊಟ್ಟೆ ತುಂಬುವುದು ಅಂತಾ ತನ್ನ ಅಳಲನ್ನ ತೋಡಿಕೊಂಡಳು.

    ನಾನು ಮಗು ಮಾರಾಟ ಮಾಡುತ್ತೇನೆ ನೀನೇ ತಗೋ ಅಂತಾ ಹೇಳಿದ್ದಾಳೆ. ಅದಕ್ಕೆ ಸಂಬಂಧಿ ರೆಹಮತ್ ಉನ್ನಿಸಾ, ನಿನಗೆ 10 ಸಾವಿರ ರೂ. ಹಣ ಕೊಡುತ್ತೇನೆ. ಮಗು ನನಗೆ ಕೊಡು ಅಂತಾ ಹೇಳಿ ಐದು ಸಾವಿರ ರೂ. ಅಡ್ವಾನ್ಸ್ ಕೊಟ್ಟು ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ. ಈ ವಿಷಯ ರಜಿಯಾ ಗಂಡನಿಗೆ ಗೊತ್ತಿಲ್ಲದೆ ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಾಳೆ.

    ರಜಿಯಾಗೆ ಎರಡು ಹೆಣ್ಣು ಮಕ್ಕಳಿದ್ದು ಇದೀಗ ಮೂರನೇಯದಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕಡು ಬಡತನವಿದ್ದ ಕಾರಣ ಪತಿ ಕೂಲಿ ಕೆಲಸಕ್ಕೆ ಹೋದರೆ ಈಕೆ ಮನೆ ಮನೆಗೆ ಹೋಗಿ ಮುಸುರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಳು. ಆದರೆ ಇತ್ತೀಚಿಗಷ್ಟೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ತುತ್ತು ಅನ್ನಕ್ಕೂ ಪರದಾಡುವ ಗಂಭೀರ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹೇಗೆ ಸಾಕಲಿ ಎನ್ನುವ ಚಿಂತೆಗೆ ರಜಿಯಾ ಜಾರಿದ್ದಳು.

    ಮಾರಾಟ ಮಾಡುವ ನಿರ್ಧಾರಕ್ಕೆ ಬಂದ ರಜಿಯಾ ಕೇವಲ 10 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ. ಇದೇ ವೇಳೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದ ನರಿಬೋಳ ಗ್ರಾಮದ ಮಹಿಳೆಯೊಬ್ಬಳು ನಿನ್ನ ಮಗು ಹೇಗಿದೆ ಅಂತಾ ಪ್ರಶ್ನಿಸಿದ್ದಾಳೆ. ಈ ವೇಳೆ ತಾನು ಮಗು ಮಾರಾಟ ಮಾಡಿದ್ದಾಗಿ ಹೇಳಿದ್ದಾಳೆ. ತಕ್ಷಣವೇ ಈ ವಿಷಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಗೊತ್ತಾಗಿದೆ. ಇದರಿಂದ ಕಾರ್ಯಪ್ರವೃತ್ತರಾದ ಮಕ್ಕಳ ರಕ್ಷಣಾ ಘಟಕದ ಸದಸ್ಯರು ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಮಾಹಿತಿ ಬಹಿರಂಗಗೊಂಡಿದೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ತಾಯಿ ರಜಿಯಾ ಮತ್ತು ಮಗು ಪಡೆದ ರೆಹಮತ್ ಉನ್ನಿಸಾರನ್ನು ಒಪ್ಪಿಸಿದ್ದಾರೆ. ಸದ್ಯ ಮಗು ಅಪೌಷ್ಟಿಕಯಿಂದ ಬಳಲುತ್ತಿರುವ ಕಾರಣ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು

    ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು

    ನವದೆಹಲಿ: 2020ರ ಏಪ್ರಿಲ್ 1 ರಿಂದ ಬಿಎಸ್ (ಭಾರತ್ ಸ್ಟೇಜ್)4 ಮಾದರಿಯ ಯಾವುದೇ ವಾಹನಗಳ ಮಾರಾಟ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದೆ.

    ಬಿಎಸ್4 ಮಾದರಿಯ ವಾಹನಗಳ ಮಾರಾಟಕ್ಕೆ ಹೆಚ್ಚುವರಿ ಅವಕಾಶ ನೀಡುವಂತೆ ವಾಹನ ತಯಾರಿಕಾ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಸುಪ್ರೀಂ ಕೋರ್ಟಿನ ತ್ರಿ-ಸದನ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ತ್ರಿಸದಸ್ಯ ಪೀಠ ವಾಹನ ತಯಾರಿಕಾ ಕಂಪೆನಿಗಳಿಗೆ ಕಟ್ಟು-ನಿಟ್ಟಿನ ಆದೇಶ ನೀಡಿದ್ದು, ಯಾವುದೇ ಕಾರಣಕ್ಕೂ 2020 ಏಪ್ರಿಲ್ 1ರ ನಂತರ ಬಿಎಸ್4 ಮಾದರಿಯ ವಾಹನಗಳನ್ನು ಮಾರಾಟ ಮಾಡದಂತೆ ಆದೇಶ ನೀಡಿದೆ.

    ಏನಿದು ಬಿಎಸ್4?
    ಭಾರತ್ ಸ್ಟೇಜ್(ಬಿಎಸ್) ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿತ್ತು. ಹೀಗಾಗಿ 2017ರ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ಬಿಎಸ್4 ಮಾದರಿಯ ವಾಹನಗಳ ಮಾರಾಟಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.

    ಬಿಎಸ್4 ನಂತರ 2020 ಏಪ್ರಿಲ್ 1ರಲ್ಲಿ ಇದರ ಮುಂದಿನ ಅವತರಣೆ ಬಿಎಸ್5 ಬದಲಾಗಿ ಬಿಎಸ್6 ವಾಹನಗಳನ್ನು ಮಾರಾಟ ಮಾಡುವಂತೆ ಕೇಂದ್ರ ಸರ್ಕಾರ ವಾಹನ ತಯಾರಿಕಾ ಕಂಪೆನಿಗಳಿಗೆ ಸೂಚನೆ ನೀಡಿತ್ತು. ಹೀಗಾಗಿ ಕಂಪೆನಿಗಳು ಬಿಎಸ್4 ಗುಣಮಟ್ಟದ ವಾಹನಗಳ ಮಾರಾಟಕ್ಕೆ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೇಳಿದ್ದವು. ಸರ್ಕಾರ ಹಾಗೂ ವಾಹನ ತಯಾರಿಕಾ ಸಂಸ್ಥೆಗಳ ಕಿತ್ತಾಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಟ್ಟುನಿಟ್ಟಿನ ಆದೇಶ ಮಾಡಿದೆ.

    ಏನಿದು ಬಿಎಸ್6?
    ಬಿಎಸ್4 ವಾಹನಗಳಿಗಿಂತ ಅತಿ ಕಡಿಮೆ ಪ್ರಮಾಣದ ಹೊಗೆ ಉಗುಳುವ ವಾಹನಗಳೇ ಬಿಎಸ್6 ಮಾದರಿಯ ವಾಹನಗಳು. ಸದ್ಯ ಭಾರತದಲ್ಲಿ ಬಿಎಸ್4 ಮಾದರಿಯ ವಾಹನಗಳು ಜಾರಿಯಲ್ಲಿದ್ದು, ಈ ಬಿಎಸ್6 ವಾಹನಗಳ ಜಾರಿಯಿಂದ ಭಾರತ ಅಮೆರಿಕ, ಐರೋಪ್ಯ ದೇಶಗಳು ಹಾಗೂ ವಿಶ್ವದ ಹಲವೆಡೆ ಜಾರಿಯಲ್ಲಿರುವ ಅತ್ಯಾಧುನಿಕ ವಾಹನ ಮಾರುಕಟ್ಟೆಯ ಗುಣಮಟ್ಟಕ್ಕೆ ಸರಿಸಮಾನಾದ ವಾಹನಗಳು ನಮ್ಮ ದೇಶದಲ್ಲಿಯೂ ಸಂಚರಿಸುತ್ತವೆ. ಬಿಎಸ್6 ವಾಹನಗಳ ಪೆಟ್ರೋಲ್ ಮಾದರಿಯಲ್ಲಿ ಶೇ.25 ರಷ್ಟು ಇಳಿಕೆಯಾದರೆ, ಡೀಸೆಲ್ ಮಾದರಿಯಲ್ಲಿ ಶೇ.68 ರಷ್ಟು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗುತ್ತದೆ.

    2019ರಲ್ಲಿ ಲಭ್ಯ:
    ಗುರ್ಗಾಂವ್, ನೊಯ್ಡಾ, ಘಜಿಯಾಬಾದ್ ಹಾಗೂ ಫರೀದಾಬಾದ್ ಸೇರಿದಂತೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ 2019ರ ಏಪ್ರಿಲ್ 1ರ ವೇಳೆಗೆ ಬಿಎಸ್6 ಇಂಧನ ಲಭ್ಯವಿರಲಿದೆ. 2020ರ ಏಪ್ರಿಲ್ 1ರಿಂದ ದೇಶದಾದ್ಯಂತ ಬಿಎಸ್6 ವಾಹನಗಳ ಜಾರಿಗೂ ಮುನ್ನವೇ ಬಿಎಸ್6 ಇಂಧನ ಬರಲಿದೆ.

    ಭಾರತದಲ್ಲಿ ಯಾವಾಗ ಜಾರಿಗೊಳಿಸಲಾಯ್ತು?
    ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್ 2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್ 3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್ 4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್ 4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

    ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
    ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

    2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್ ದೇಶಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು. 2020ರ ವೇಳೆಗೆ ಭಾರತದಲ್ಲಿ ಬಿಎಸ್-6 ಮಾನದಂಡ ಜಾರಿಗೊಳಿಸಲು ಮುಂದಾಗಿದೆ.

    ಬಿಎಸ್4 ಇಂಧನವನ್ನ ಬಿಎಸ್6 ವಾಹನಗಳಿಗೆ ಹಾಕಿದ್ರೆ ಏನಾಗುತ್ತದೆ?
    ಬಿಎಸ್6 ಕಾರ್ ಗಳಲ್ಲಿ ಬಿಎಸ್6 ಇಂಧನದಿಂದ ಕಾರ್ಯನಿರ್ವಹಿಸಬಲ್ಲ ಅಪ್‍ಡೇಟೆಡ್ ಹಾರ್ಡ್‍ವೇರ್(ಇಂಜೆಕ್ಟರ್) ಹಾಗೂ ಎಕ್ಸ್ಹಾಸ್ಟ್ ಸ್ಟ್ರೀಮ್‍ನಲ್ಲಿ ಹೆಚ್ಚುವರಿ ಘಟಕಗಳು ಇರುತ್ತವೆ. ಉದಾಹರಣೆಗೆ ಎಕ್ಸಾಸ್ಟ್ ಸಿಸ್ಟಂ ನಲ್ಲಿ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ ಹಾಗೂ ಕೆಲವದರಲ್ಲಿ ಯೂರಿಯಾ ಇಂಜೆಕ್ಷನ್ ಕೂಡ ಇರುತ್ತದೆ. ಹೆಚ್ಚಿನ ಪ್ರಮಾಣದ ಸಲ್ಫರ್ಯುಕ್ತ ಹಳೆಯ ಇಂಧನವನ್ನ ಹೊಸ ಎಂಜಿನ್‍ನಲ್ಲಿ ಬಳಸಿದ್ರೆ ಡೀಸೆಲ್ ಪಾರ್ಟಿಕುಲೇಟ್ ಫಿಲ್ಟರ್ ಗಳು ಬ್ಲಾಕ್ ಆಗಿ ಬೇಗನೆ ಬದಲಾವಣೆ ಮಾಡಬೇಕಾಗುತ್ತದೆ. ಜೊತೆಗೆ ಎಂಜಿನ್ ತನ್ನ ಸಾಮಥ್ರ್ಯಕ್ಕಿಂತ ಕಡಿಮೆ ಕಾರ್ಯ ನಿರ್ವಹಣೆ ಮಾಡುತ್ತದೆ. ವಾಹನದ ಮೈಲೇಜ್ ಮತ್ತು ಒಟ್ಟಾರೆ ಹೊಗೆ ಹೊರಸೂಸುವಿಕೆಯ ಮೇಲೂ ಪರಿಣಾಮ ಬೀರುತ್ತದೆ. ಬಿಎಸ್6 ಕಾರಿನಲ್ಲಿ ಬಿಎಸ್4 ಇಂಧನ ಬಳಸಿದಾಗ ಆಗುವ ತೊಂದರೆ ಬೇಗನೆ ಗೊತ್ತಾಗುತ್ತದೆ.

    ಬಿಎಸ್4 ವಾಹನಗಳಿಗೆ ಬಿಎಸ್6 ಇಂಧನ ಹಾಕಿದ್ರೆ ಏನಾಗುತ್ತೆ?
    ಬಿಎಸ್4 ನಿಂದ ಬಿಎಸ್6ಗೆ ಏರುವ ಪೆಟ್ರೋಲ್‍ನ ರಾಸಾಯನಿಕ ಅಂಶಗಳಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದ್ರೆ ಡೀಸೆಲ್‍ನಲ್ಲಿ ನಿಜವಾದ ವ್ಯತ್ಯಾಸವಿರುತ್ತದೆ. ಈಗಿರುವ ಡೀಸೆಲ್‍ಗೆ ಹೋಲಿಸಿದ್ರೆ ಹೊಸ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆ ಇರುತ್ತದೆ. ಈ ಹಿಂದೆ ಲಭ್ಯವಿದ್ದ ಡೀಸೆಲ್‍ನಲ್ಲಿ 500 ಪಿಪಿಎಂ(ಪಾಟ್ರ್ಸ್ ಪರ್ ಮಿಲಿಯನ್) ಸಲ್ಫರ್ ಇರುತ್ತಿತ್ತು. ಆದ್ರೆ ಈಗಿರುವ ಡೀಸೆಲ್‍ನಲ್ಲಿ 50 ಪಿಪಿಎಂ ಸಲ್ಫರ್ ಇದ್ದು ಲೋ ಸಲ್ಫರ್ ಡೀಸೆಲ್ ಎಂದೇ ಕರೆಯಲಾಗುತ್ತದೆ. ಇನ್ನು ಬಿಎಸ್6 ಇಂಧನದಲ್ಲಿ ಕೇವಲ 10 ಪಿಪಿಎಂ ಸಲ್ಫರ್ ಮಾತ್ರ ಇರುತ್ತದೆ. ಇದು ಪರಿಸರಕ್ಕಾಗಿ ಮತ್ತಷ್ಟು ಸ್ವಚ್ಛ ಹಾಗೂ ಉತ್ತಮವಾಗಿರುತ್ತದೆ. ಎಂಜಿನ್ ಕೂಡ ಸ್ವಚ್ಛವಾಗಿ ಕಾರ್ಯ ನಿರ್ವಹಿಸುತ್ತದೆ. ಬಿಎಸ್4 ಎಂಜಿನ್‍ನಲ್ಲಿ ಬಿಎಸ್6 ಇಂಧನದ ಬಳಕೆಯಿಂದ ದೀರ್ಘಾವಧಿ ಪರಿಣಾಮಗಳು ಇವೆ.

    ಇಂಧನದಲ್ಲಿನ ಸಲ್ಫರ್ ಡೀಸೆಲ್ ಎಂಜಿನ್‍ಗಳಲ್ಲಿನ ಇಂಜೆಕ್ಟರ್ ಗಳ ರಾಸಾಯನಿಕ ತೈಲಲೇಪನಕ್ಕೆ ಸಹಾಯ ಮಾಡುತ್ತದೆ. ಡೀಸೆಲ್ ಎಂಜಿನ್‍ಗಳು ದ್ರವವನ್ನು ತುಂತುರು ಹನಿಗಳಾಗಿ ಪರಿವರ್ತಿಸಲು ಇಂಜೆಕ್ಟರ್ ಗಳನ್ನು ಅವಲಂಬಿಸುತ್ತವೆ. ಒಂದು ವೇಳೆ ಡೀಸೆಲ್‍ನಲ್ಲಿ ಸಲ್ಫರ್ ಪ್ರಮಾಣ ಕಡಿಮೆಯಿದ್ದರೆ ಇಂಜೆಕ್ಟರ್ ನಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹೊಗೆ ಹೊರಸೂಸುವಿಕೆಯೂ ಹೆಚ್ಚಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

    `ನನ್ನ ಕಿಡ್ನಿ ಮಾರಾಟಕ್ಕಿದೆ, ಹಣ ನೀಡಿ ಖರೀದಿಸಿ’ – ಟೀ ಅಂಗಡಿ ಮುಂದೆ ಯುವಕನ ಫಲಕ

    ಮಂಡ್ಯ: ಸಾಲದಿಂದ ಬೇಸತ್ತಿರುವ ಮಂಡ್ಯ ನಗರದ ವ್ಯಕ್ತಿಯೊಬ್ಬರು ನನ್ನ ಕಿಡ್ನಿ ಸೇಲ್‍ಗಿದೆ ಎಂದು ಟೀ ಅಂಗಡಿ ಮುಂದೆ ಫಲಕ ಹಾಕಿದ್ದಾರೆ.

    ವಿನೋದ್ ಕುಮಾರ್(26) ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ಮಧುರ ಟೀ ಸ್ಟಾಲ್ ಅಂಗಡಿ ಇಟ್ಟುಕೊಂಡಿದ್ದಾರೆ. ಮಂಡ್ಯ ಸಮೀಪದ ತಗ್ಗಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ವಿನೋದ್ ಕುಮಾರ್ ಮನೆ ಕಟ್ಟಿಸುವುದು ಸೇರಿದಂತೆ ಹಲವಾರು ಕಾರಣಗಳಿಗೆ ಸಾಲ ಮಾಡಿಕೊಂಡಿದ್ದಾನೆ.

    ತಾನು ಮಾಡಿಕೊಂಡಿರುವ ಸಾಲಕ್ಕೆ ಬಡ್ಡಿ ಕಟ್ಟಲೂ ಕಷ್ಟವಾಗಿದೆ. ಹಣ ಕೊಟ್ಟವರಿಗೆ ಹಣ ವಾಪಸ್ ಕೊಡುವುದು ನ್ಯಾಯ. ಹೀಗಾಗಿ ನಮ್ಮ ಜಮೀನನ್ನು ಅಡವಿಟ್ಟು ಸಾಲ ತೀರಿಸೋಣ ಅಂತಿದ್ದೇನೆ. ಆದರೆ ನಾಡ ಕಚೇರಿಯಲ್ಲಿ ಜಮೀನಿನ ಸ್ಕೆಚ್ ಕೊಡಲು ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ನನ್ನ ಕಿಡ್ನಿ ಸೇಲ್ ಮಾಡುತ್ತೇನೆ. ಯಾರಾದ್ರು ಕಿಡ್ನಿ ಬೇಕಾದವರು ನನಗೆ ಹಣ ನೀಡಿ ಕಿಡ್ನಿ ಕೊಂಡುಕೊಳ್ಳಿ ಎಂದು ವಿನೋದ್ ಕುಮಾರ್ ತನ್ನ ಟೀ ಅಂಗಡಿ ಮುಂದೆ ಬರೆದು ಅಂಟಿಸಿದ್ದಾರೆ.

    ವಿನೋದ್ ಕುಮಾರ್ ಕಿಡ್ನಿ ಮಾರಾಟಕ್ಕಿದೆ ಎಂದು ಬರೆದು ಅಂಟಿಸಿರುವುದನ್ನು ನೋಡಿದ ಸ್ಥಳೀಯರು, ಈ ರೀತಿ ಮಾಡುವುದು ತಪ್ಪು ಎಂದು ಬುದ್ದಿ ಹೇಳಿದ್ದಾರೆ. ಆದರೆ ಯಾರ ಬುದ್ಧಿ ಮಾತಿಗೂ ಕಿವಿಗೊಡದ ವಿನೋದ್ ಕುಮಾರ್, ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಹೀಗಾಗಿ ಕಿಡ್ನಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಆಸ್ಪತ್ರೆ ಸಿಬ್ಬಂದಿಯಿಂದಲೇ ಶಿಶು ಮಾರಾಟಕ್ಕೆ ಯತ್ನ!

    ಆಸ್ಪತ್ರೆ ಸಿಬ್ಬಂದಿಯಿಂದಲೇ ಶಿಶು ಮಾರಾಟಕ್ಕೆ ಯತ್ನ!

    ಕೊಪ್ಪಳ: ತಾಯಿ ಹಾಗೂ ಆಸ್ಪತ್ರೆ ಸಿಬ್ಬಂದಿ ಸೇರಿಕೊಂಡು ನವಜಾತ ಹೆಣ್ಣು ಶಿಶುವನ್ನು ಮಾರಾಟ ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ಗಂಗಾವತಿ ಪಟ್ಟಣದ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.

    ಕಳೆದ ಸೋಮವಾರ ಗಂಗಾವತಿ ನಿವಾಸಿ ಬಾನು ಬೇಗಂ ಎಂಬವರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಇದಾದ ನಂತರ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಸೇರಿ ಬಾನು ಬೇಗಂ ತನ್ನ ಒಂದು ಹೆಣ್ಣು ಮಗುವನ್ನು ಮಾರಾಟ ಮಾಡಿದ್ದರು. ಆಸ್ಪತ್ರೆಯಲ್ಲಿನ ಮಗು ಮಾರಾಟದ ವಿಚಾರವನ್ನು ಅನಾಮಧೇಯ ವ್ಯಕ್ತಿಯೊಬ್ಬ ಶಿಶು ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿದ್ದರು.

    ವಿಷಯ ತಿಳಿಯುತ್ತಿದ್ದ ಕೂಡಲೇ ಆಸ್ಪತ್ರೆಗೆ ಸಿಡಿಪಿಓ ಜಯಶ್ರೀ ಹಾಗೂ ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸಿದ್ದರು. ಈ ವೇಳೆ ತಾಯಿಯ ಬಳಿ ಒಂದೇ ಮಗು ಇರುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಆಸ್ಪತ್ರೆ ಸಿಬ್ಬಂದಿ ಬಾನು ಬೇಗಂಗೆ ಒಂದೇ ಮಗು ಜನಿಸಿದೆ ಎಂದು ಹೇಳಿ, ಜರೀನಾ ಎಂಬ ಮಹಿಳೆಗೆ ಮತ್ತೊಂದು ಮಗು ಜನಿಸಿದೆ ಎನ್ನುವ ಸುಳ್ಳು ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿತ್ತು.

    ಪೊಲೀಸರು ಹಾಗೂ ಅಧಿಕಾರಿಗಳು ಭೇಟಿಯ ಬಳಿಕ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಪುನಃ ಬಾನು ಬೇಗಂ ಬಳಿ ತಂದು ಕೊಟಿದ್ದಾರೆ. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ನಗರ ಠಾಣಾ ಪಿಎಸ್‍ಐ ಹೆಬ್ಬಾಳ್ಕರ್ ತೀವ್ರ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಸಿಗುತ್ತೆ ಅಗ್ಗದ ಟೀ, ತಿಂಡಿಗಳು

    ಇನ್ಮುಂದೆ ಏರ್‌ಪೋರ್ಟ್‌ಗಳಲ್ಲಿ ಸಿಗುತ್ತೆ ಅಗ್ಗದ ಟೀ, ತಿಂಡಿಗಳು

    ನವದೆಹಲಿ: ದೇಶದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಕಡಿಮೆ ದರದಲ್ಲಿ ಟೀ ಹಾಗೂ ತಿಂಡಿಗಳನ್ನು ಮಾರಾಟ ಮಾಡುವ ಕೌಂಟರ್‌ಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.

    ಹೌದು, ಎಎಐಯು ತನ್ನ ಅಧೀನಕ್ಕೆ ಒಳಪಡುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಟೀ ಹಾಗೂ ಸ್ನ್ಯಾಕ್ಸ್ ಗಳನ್ನು ಮಾರಾಟ ಮಾಡುವ ಕೌಂಟರ್‌ಗಳನ್ನು ಸ್ಥಾಪಿಸಲಿದೆ. ವಿಮಾನ ನಿಲ್ದಾಣಗಳಲ್ಲಿ ಟೀ, ಕಾಫಿ ಹಾಗೂ ಇನ್ನಿತರೆ ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದಿಂದ ಪ್ರಯಾಣಿಕರು ದಿನೇ ದಿನೇ ದೂರು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಎಯು ತನ್ನದೇ ಆದ ಕೌಂಟರ್‌ಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದೆ.

    ಈಗಾಗಲೇ ದೇಶದ ಕೆಲವು ಆಯ್ದ ವಿಮಾನ ನಿಲ್ದಾಣಗಳಲ್ಲಿ ಪ್ರಾಯೋಗಿಕ ಕೌಂಟರ್‌ಗಳನ್ನು ತೆರೆದಿದ್ದು, ಅಲ್ಲಿ ಎಂಆರ್‌ಪಿ ಬೆಲೆಗೆ ಆಯ್ದ ತಂಪು ಪಾನೀಯ ಹಾಗೂ ನೀರಿನ ಬಾಟಲಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಲದೇ ಇಂಥಹ ಸಣ್ಣ ಸಣ್ಣ ಕೌಂಟರ್‌ಗಳನ್ನು ಎಲ್ಲೆಡೆ ತೆರೆಯಲಾಗುತ್ತದೆ ಎಂದು ಎಎಐ ಮಾಹಿತಿ ನೀಡಿದೆ.

    ವಿಮಾನ ನಿಲ್ದಾಣಗಳಲ್ಲಿ ಆಹಾರ ಪದಾರ್ಥಗಳನ್ನು ದುಪ್ಪಟ್ಟು ಮಾರಾಟ ಮಾಡುವ ವಿಚಾರ ಕಳೆದ ಮಾರ್ಚ್ ತಿಂಗಳಲ್ಲಿ ಸಂಸತ್ತಿನಲ್ಲಿಯೂ ಭಾರೀ ಚರ್ಚೆ ಮಾಡಿತ್ತು. ಅಲ್ಲದೇ ಕಾಂಗ್ರೆಸ್ಸಿನ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv