Tag: salary

  • ಬಾಲಿವುಡ್ ಕಲಾವಿದರು ಎಷ್ಟು ಸಂಭಾವನೆ ಪಡೆಯುತ್ತಾರೆ: ಇಲ್ಲಿದೆ ಸಂಪೂರ್ಣ ಮಾಹಿತಿ

    ಬಾಲಿವುಡ್ ಕಲಾವಿದರು ಎಷ್ಟು ಸಂಭಾವನೆ ಪಡೆಯುತ್ತಾರೆ: ಇಲ್ಲಿದೆ ಸಂಪೂರ್ಣ ಮಾಹಿತಿ

    ಮುಂಬೈ: ಬಾಲಿವುಡ್ ತಾರೆಯರು ಇತ್ತೀಚೆಗೆ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಅಕ್ಷಯ್ ಕುಮಾರ್ ಹಾಗೂ ದೀಪಿಕಾ ಪಡುಕೋಣೆ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.

    ಸಾಮಾನ್ಯವಾಗಿ ದೀಪಿಕಾ ಪಡುಕೋಣೆ ಒಂದು ಚಿತ್ರಕ್ಕಾಗಿ 8 ರಿಂದ 10 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ. ಆದರೆ ಪದ್ಮಾವತ್ ಚಿತ್ರಕ್ಕಾಗಿ ದೀಪಿಕಾ 12 ಕೋಟಿ ರೂ. ಸಂಭಾವನೆಯನ್ನು ಪಡೆದುಕೊಂಡಿದ್ದರು. ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಇಬ್ಬರಿಗಿಂತಲೂ ದೀಪಿಕಾ ಹೆಚ್ಚು ಸಂಭಾವನೆ ಪಡೆದಿದ್ದರು.

    ಇನ್ನೂ ಬಾಲಿವುಡ್ ನಾಯಕಿಯರಾದ ಪ್ರಿಯಾಂಕಾ ಚೋಪ್ರಾ ಹಾಗೂ ಅನುಷ್ಕಾ ಶರ್ಮಾ 6.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಕಂಗನಾ ರಣೌತ್ ಹಾಗೂ ಕರೀನಾ ಕಪೂರ್ ತಲಾ 6 ಕೋಟಿ ರೂ., ಸೋನಂ ಕಪೂರ್ ಹಾಗೂ ಅಲಿಯಾ ಭಟ್ 5 ಕೋಟಿ ರೂ. ಪಡೆದರೆ, ಕತ್ರಿನಾ ಕೈಫ್ 4.5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ.

    ಪರಿಣೀತಿ ಚೋಪ್ರಾ ಹಾಗೂ ಸೋನಾಕ್ಷಿ ಸಿನ್ಹಾ ಒಂದು ಚಿತ್ರಕ್ಕೆ 1 ರಿಂದ 2 ಕೋಟಿ ರೂ. ಪಡೆದರೆ, ಜಾಕ್ವಲೀನ್ ಫರ್ನಾಂಡಿಸ್ ಹಾಗೂ ಶ್ರದ್ಧಾ ಕಪೂರ್ ಒಂದು ಚಿತ್ರಕ್ಕೆ 1.5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಭೂಮಿ ಪಾಡ್ನೇಕೇರ್, ತಾಪ್ಸಿ ಪನ್ನು ಹಾಗೂ ಕೃತಿ ಸನೂನ್ ಒಂದು ಚಿತ್ರಕ್ಕೆ 50 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ.

    ಭಾಯ್‍ಜಾನ್ ಸಲ್ಮಾನ್ ಖಾನ್ ಹಾಗೂ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಒಂದು ಚಿತ್ರಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಬಾಲಿವುಡ್ ನಟ ಕಿಲಾಡಿ ಅಕ್ಷಯ್ ಕುಮಾರ್ ಒಂದು ಚಿತ್ರಕ್ಕೆ 40 ರಿಂದ 50 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಇನ್ನು ಶಾರೂಕ್ ಖಾನ್ ಹಾಗೂ ಹೃತಿಕ್ ರೋಶನ್ ಚಿತ್ರ ಒಂದಕ್ಕೆ 40 ರಿಂದ 45 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

    ಅಜಯ್ ದೇವಗನ್ ಒಂದು ಚಿತ್ರಕ್ಕೆ 35 ಕೋಟಿ ರೂ. ಸಂಭಾವನೆ ಪಡೆದರೆ, ರಣ್‍ವೀರ್ ಸಿಂಗ್ ಹಾಗೂ ರಣ್‍ಬೀರ್ ಕಪೂರ್ ಒಂದು ಚಿತ್ರಕ್ಕೆ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನೂ ಹಿರಿಯ ನಟ ಅಮಿತಾಬ್ ಬಚ್ಚನ್ 18 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ‘ಪೀಕು’ ಚಿತ್ರಕ್ಕೆ ಅವರು 8 ಕೋಟಿ ರೂ. ಸಂಭಾವನೆ ಪಡೆದಿದ್ದು, ಇದೇ ಚಿತ್ರದಲ್ಲಿ ನಟಿಸಿದ ದೀಪಿಕಾ ಪಡುಕೋಣೆ 10 ಕೋಟಿ ರೂ. ಸಂಭಾವನೆ ಪಡೆದಿದ್ದರು.

    ಶಾಹಿದ್ ಕಪೂರ್ ಒಂದು ಚಿತ್ರಕ್ಕೆ 10 ರಿಂದ 15 ಕೋಟಿ ರೂ. ಸಂಭಾವನೆ ಪಡೆದರೆ, ಟೈಗರ್ ಶ್ರಾಫ್ 5 ರಿಂದ 6 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇನ್ನೂ ಬಾಹುಬಲಿ ಪ್ರಭಾಸ್ ಬಾಹುಬಲಿ-2 ಚಿತ್ರಕ್ಕೆ 25 ಕೋಟಿ ರೂ. ಸಂಭಾವನೆ ಪಡೆದಿದ್ದರು. ಬಾಹುಬಲಿ-2 ಚಿತ್ರದ ಬಿಡುಗಡೆ ಆದ ನಂತರ ಪ್ರಭಾಸ್ ತಮ್ಮ ಸಂಭಾವನೆಯನ್ನು 30 ಕೋಟಿ ರೂ. ಹೆಚ್ಚಿಸಿಕೊಂಡಿದ್ದಾರೆ.

  • ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಹೆಚ್ಚಿನ ಸಂಬಳ ಕೇಳಿದ ಶಿಕ್ಷಕನಿಗೆ ಬೂಟು ಹಾರ ಹಾಕಿ ಅವಮಾನ ಮಾಡಿದ್ರು!

    ಭುವನೇಶ್ವರ್: ಖಾಸಗಿ ಕೋಚಿಂಗ್ ಕ್ಲಾಸಿನ ಇಂಗ್ಲಿಷ್ ಶಿಕ್ಷಕರೊಬ್ಬರು ಸಂಬಳಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಅವರಿಗೆ ಬೂಟ್ ಹಾರ ಹಾಕಿ ಅವಮಾನ ಮಾಡಿದ ಘಟನೆ ಓಡಿಶಾದ ನಯಾಗರ್ ಜಿಲ್ಲೆಯಲ್ಲಿ ನಡೆದಿದೆ.

    ಮಾಯಾಧರ್ ಮೋಹಪಾತ್ರ ಎಂಬವರು ಖಾಸಗಿ ಕೋಚಿಂಗ್ ಸಂಸ್ಥೆ ಸತ್ಯಸಾಯಿ ಟ್ಯುಟೋರಿಯಲ್ ನಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕೋಚಿಂಗ್ ಕ್ಲಾಸಿನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ಹಾಗಾಗಿ ತಮ್ಮ ತಿಂಗಳ ಸಂಬಳ ಕೊಡಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಮಾಲೀಕ ತಪನ್ ಪಾತ್ರ ಶಿಕ್ಷಕ ಮಾಯಾಧರ್ ರವರಿಗೆ ಬೂಟಿನ ಹಾರ ಹಾಕಿ ಅವಮಾನ ಮಾಡಿದ್ದಾರೆ.

    ಮಹಾಪಾತ್ರ ರವರು ಹೇಳುವಂತೆ ಕೋಚಿಂಗ್ ಕ್ಲಾಸ್ ನ ಮಾಲೀಕ ತಿಂಗಳ ಸಂಬಳವನ್ನು ನೀಡಿರಲಿಲ್ಲ. ತಮ್ಮ ಸಂಬಳವನ್ನು ನೀಡುವಂತೆ ಪದೇ ಪದೇ ಮಾಲೀಕನಿಗೆ ಕೇಳಿಕೊಂಡಿದ್ದರೂ, ಇದಕ್ಕೆ ತಪನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮಾಲೀಕ ತಪನ್ ಶಿಕ್ಷಕ ಮಾಯಾಧರ್ ರವರಿಗೆ ನೌಕರಿಯನ್ನೇ ಬಿಟ್ಟು ಹೋಗುವಂತೆ ಕೇಳಿದ್ದಾರೆ. ಅಲ್ಲದೇ ಕೋಪಗೊಂಡ ತಪನ್ ತಮ್ಮ ಇಬ್ಬರು ಸಹಾಯಕರೊಂದಿಗೆ ಶಿಕ್ಷಕ ಮಾಯಾಧರ್ ರವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿಹಾಕಿದ್ದಾರೆ. ನಿಷ್ಕಾರುಣವಾಗಿ ಶಿಕ್ಷಕ ಮಹಾಪಾತ್ರ ರನ್ನು ಥಳಿಸಿ, ಈ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈ ಘಟನೆ ಬೆಳಕಿಗೆ ಬಂದಿದೆ.

  • ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಪತಿಯ ಸಂಬಳವನ್ನು ತಿಳಿಯುವ ಹಕ್ಕು ಪತ್ನಿಗಿದೆ: ಹೈಕೋರ್ಟ್

    ಭೋಪಾಲ್: ಪತ್ನಿಗೆ ತನ್ನ ಗಂಡನಿಗೆ ಸಂಬಳ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.

    ಪತಿಯಿಂದ ದೂರವಾಗಿರುವ ಪತ್ನಿ ಗಂಡನ ಸಂಬಳದ ಮಾಹಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈಗ ಹೈಕೋರ್ಟ್ ದ್ವಿಸದಸ್ಯ ಪೀಠ ಈ ಆದೇಶವನ್ನು ರದ್ದುಗೊಳಿಸಿ ಪತ್ನಿ ಪರವಾಗಿ ತೀರ್ಪು ಪ್ರಕಟಿಸಿದೆ.

    ಏನಿದು ಪ್ರಕರಣ?
    ಬಿಎಸ್‍ಎನ್‍ಎಲ್ ಉದ್ಯೋಗಿ ಪವನ್ ಜೈನ್ ನಿಂದ ಬೇರೆಯಾದ ಸುನಿತಾ ಜೈನ್ ಕುಟುಂಬ ನಿರ್ವಹಣೆಗೆ 7 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ಪಡೆಯುತ್ತಿದ್ದರು. ಪತಿಯ ಸಂಬಳ ತಿಂಗಳಿಗೆ 2 ಲಕ್ಷ ರೂ. ಇರುವ ಕಾರಣ ತನಗೆ ಇನ್ನು ಹೆಚ್ಚು ನಿರ್ವಹಣಾ ಭತ್ಯೆ ಸಿಗಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಪತಿಯ ಸಂಬಳದ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು.

    ಈ ಅರ್ಜಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಗೆ ಮಾಹಿತಿ ಕೋರಿ ಅರ್ಜಿ ಕೇಳಿದ್ದರು. ಮಾಹಿತಿ ಕೊಡಲು ಬಿಎಸ್‍ಎನ್‍ಎಲ್ ಸಂಸ್ಥೆ ನಿರಾಕರಿಸಿತು. ನಂತರ ಪತ್ನಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದರು. ಸುನಿತಾ ಜೈನ್ ಅರ್ಜಿಯನ್ನು ಪುರಸ್ಕರಿಸಿದ ಕೇಂದ್ರ ಮಾಹಿತಿ ಆಯೋಗ ಸಂಬಳದ ಮಾಹಿತಿಯನ್ನು ನೀಡುವಂತೆ ಬಿಎಸ್‍ಎನ್‍ಎಲ್ ಗೆ ಆದೇಶವನ್ನು ನೀಡಿತ್ತು. ಆಯೋಗದ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಆಯೋಗದ ಆದೇಶವನ್ನು ರದ್ದು ಮಾಡಿತ್ತು.

    ಏಕಸದಸ್ಯ ಪೀಠದ ಆದೇಶವನ್ನು ಪತ್ನಿ ದ್ವಿಸದ್ಯ ಪೀಠದಲ್ಲಿ ಪ್ರಶ್ನಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಕೆ ಸೇಥ್ ಹಾಗೂ ನಂದಿತಾ ದುಬೆ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠ ಪತಿ ಸಂಬಳದ ಮಾಹಿತಿಯನ್ನು ಪತ್ನಿಗೆ ತಿಳಿಯುವ ಹಕ್ಕಿದೆ ಎಂದು ಹೇಳಿ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದರು.

  • ಮೇ 30, 31ಕ್ಕೆ ದೇಶಾದ್ಯಂತ ಬ್ಯಾಂಕ್ ಬಂದ್

    ಮೇ 30, 31ಕ್ಕೆ ದೇಶಾದ್ಯಂತ ಬ್ಯಾಂಕ್ ಬಂದ್

    ಬೆಂಗಳೂರು: ಈ ತಿಂಗಳ ಅಂತ್ಯ ಅಂದ್ರೆ ಮೇ 30 ಮತ್ತು 31ರಂದು ಬ್ಯಾಂಕ್‍ಗಳ ಒಕ್ಕೂಟ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಎರಡು ದಿನ ಬ್ಯಾಂಕ್‍ಗಳು ಬಂದ್ ಆಗಲಿವೆ.

    ಪ್ರತಿ 5 ವರ್ಷಕ್ಕೊಮ್ಮೆ ವೇತನ ಹೆಚ್ಚಳ ಮಾಡಬೇಕೆಂಬ ನಿಯಮವಿದ್ರು, ಸಹ ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ಮಾತುಕತೆಗೆ ಸರ್ಕಾರ ಕರೆದಿಲ್ಲ. ಈಗಾಗಲೇ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿರೋ ಸಿಬ್ಬಂದಿ ಈ ತಿಂಗಳಾಂತ್ಯಕ್ಕೆ ಎರಡು ದಿನಗಳ ಕಾಲ ಬ್ಯಾಂಕ್ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಿದ್ದೇವೆ ಅಂತಾರೆ ಬ್ಯಾಂಕ್ ಒಕ್ಕೂಟದ ಸದಸ್ಯರು ತಿಳಿಸಿದ್ದಾರೆ.

    ಒಂದು ವೇಳೆ ಸರ್ಕಾರ ಮತ್ತು ಐಬಿಎ (ಭಾರತೀಯ ಬ್ಯಾಂಕ್‍ಗಳ ಒಕ್ಕೂಟ) ನಮ್ಮ ಪ್ರತಿಭಟನೆಗೆ ಸ್ಪಂದಿಸದೇ ಹೋದ್ರೆ ಮುಷ್ಕರವನ್ನ ಅನಿರ್ಧಿಷ್ಟಾವದಿಗೆ ನಡೆಸಲು ಈಗಾಗಲೇ ತೀರ್ಮಾನ ಮಾಡಲಾಗಿದೆ. ಇಡೀ ದೇಶದಲ್ಲಿ ನಡೆಯೋ ಈ ಪ್ರತಿಭಟನೆಯಲ್ಲಿ ಲಕ್ಷಾಂತರ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಬ್ಯಾಂಕ್ ಅಸೋಸಿಯೇಷನ್‍ನ ಪದಾಧಿಕಾರಿ ಪಿ.ಜಿ.ಆರ್. ಬನ್ನಿಂದ್ಯಾಯ ಎಚ್ಚರಿಕೆ ನೀಡಿದ್ದಾರೆ.

  • ಸಂಬಳ ಹೆಚ್ಚಿಸಿ ಅಂದಿದ್ದಕ್ಕೆ ನೌಕರರಿಗೆ ಥಳಿಸಿದ ಮಾಲೀಕರು

    ಸಂಬಳ ಹೆಚ್ಚಿಸಿ ಅಂದಿದ್ದಕ್ಕೆ ನೌಕರರಿಗೆ ಥಳಿಸಿದ ಮಾಲೀಕರು

    ಬೆಂಗಳೂರು: ಸಂಬಳ ಹೆಚ್ಚಳ ಮಾಡಿ ಎಂದಿದ್ದ ನೌಕರರಿಗೆ ಮಾಲೀಕರೇ ಥಳಿಸಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯಲ್ಲಿರುವ ಶಾಯಿ ಎಕ್ಸ್ ಪೋರ್ಟ್ ಗಾರ್ಮೆಂಟ್ಸ್ ನಲಿ ನಡೆದಿದೆ.

    ಗಾರ್ಮೆಂಟ್ಸ್ ನ 8 ಜನ ಮಾಲೀಕರು ಮಹಿಳೆಯರು ಸೇರಿದಂತೆ 15ಕ್ಕೂ ಹೆಚ್ಚು ಮಂದಿ ನೌಕರರಿಗೆ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಏಪ್ರಿಲ್ 2ರಂದು ಸಂಬಳ ಹೆಚ್ಚಿಸುವಂತೆ ನೌಕರರು ಮನವಿ ಮಾಡಿದ್ದರು. ಬುಧವಾರ ಮತ್ತೆ ಕೇಳಿದಾಗ ನೌಕರರು ಮತ್ತು ಮಾಲೀಕರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಮಾಲೀಕರು ನೌಕರರ ಮೇಲೆ ಹಲ್ಲೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಮ್ಮ ಎಂಬವರನ್ನು ಮಾದನಾಯಕನಹಳ್ಳಿಯ ಶಿವಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್

    6 ವರ್ಷಗಳ ಸಂಸದ ವೇತನವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ರು ಸಚಿನ್

    ನವದೆಹಲಿ: ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅವಧಿ ಮುಗಿಸಿದ ಸಚಿನ್ ತೆಂಡೂಲ್ಕರ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

    ಸಚಿನ್ ತಮ್ಮ ಅವಧಿಯಲ್ಲಿ ಸುಮಾರು 90 ಲಕ್ಷ ರೂ. ಹಣವನ್ನು ವೇತನ ಹಾಗೂ ಭತ್ಯೆ ರೂಪದಲ್ಲಿ ಪಡೆದಿದ್ದರು. ಸಚಿನ್ ಅವರ ನಿರ್ಧಾರದ ಕುರಿತು ಪ್ರಧಾನಿಗಳ ಕಾರ್ಯಾಲಯ ಸಚಿನ್ ಅವರಿಗೆ ಪತ್ರವನ್ನು ಬರೆಯುವ ಮೂಲಕ ಗೌರವ ಸೂಚಿಸಿದೆ. ತಾವು ನೀಡಿದ ಹಣವನ್ನು ಕಷ್ಟದಲ್ಲಿ ಇರುವವ ಪ್ರಜೆಗಳಿಗೆ ವಿನಿಯೋಗಿಸುವುದಾಗಿ ತಿಳಿಸಿದೆ.

    ಸಚಿನ್ ತಮ್ಮ ಸಂಸದರ ಅವಧಿಯಲ್ಲಿ ಹೆಚ್ಚು ಅಭಿವೃದ್ಧಿಯನ್ನು ಬಳಕೆ ಮಾಡಿಕೊಂಡು ದೇಶದ್ಯಾಂತ 185 ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ಪ್ರಮುಖವಾಗಿ ತಮ್ಮ ಸಂಸದ ನಿಧಿಯಲ್ಲಿ ನೀಡಲಾಗಿದ್ದ 30 ಕೋಟಿ ರೂ.ಗಳಲ್ಲಿ 7.5 ಕೋಟಿ ರೂ. ಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಮೂಲ ಸೌಲಭ್ಯಗಳನ್ನು ನೀಡಲು ಹೆಚ್ಚು ಹಣವನ್ನು ಬಳಕೆ ಮಾಡಿದ್ದಾರೆ.

    ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ 2 ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಆಂಧ್ರ ಪ್ರದೇಶದ ಪುಟ್ಟಮ್ ರಾಜು ಕಂಡ್ರಿಗ ಹಾಗೂ ಮಹಾರಾಷ್ಟ್ರದ ಡೊಂಜ ಗ್ರಾಮಗಳನ್ನು ಸಚಿನ್ ದತ್ತು ಪಡೆದು ಅಭಿವೃದ್ಧಿ ಪಡಿಸಿದ್ದಾರೆ. ಕಳೆದ 6 ವರ್ಷಗಳ ಅವಧಿಯಲ್ಲಿ ಸಂಸತ್ತಿನ ಹಾಜರಾತಿ ಕುರಿತು ಸಚಿನ್ ಹಾಗೂ ನಟಿ ರೇಖಾ ಹೆಚ್ಚು ಟೀಕೆಗೆ ಗುರಿಯಾಗಿದ್ದರು.

  • ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಉಡುಪಿ: ರಾಜ್ಯಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ತಮ್ಮ ಆಪ್ತ ಸಹಾಯಕನಿಗೆ ಲಕ್ಷಗಟ್ಟಲೆ ಸಂಬಳ ಬಾಕಿಯಿಟ್ಟಿದ್ದಾರಂತೆ. ವರ್ಷಗಟ್ಟಲೆ ಕಾದರೂ ಸಂಬಳ ಕೊಟ್ಟಿಲ್ವಂತೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ರೂ ಆಸ್ಕರ್ ಪರ್ಸ್ ಬಿಚ್ಚಿಲ್ವಂತೆ.

    ಆಸ್ಕರ್ ಆಪ್ತ ಸಹಾಯಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಲಿದ್ದಾರೆ. ಆಸ್ಕರ್ ಅವರ ಮಣಿಪಾಲ ವರ್ಕ್ ಶಾಪ್ ನಲ್ಲಿ ನಂತರ ಮನೆಯಲ್ಲಿ 1972ರಿಂದ 1987ರವರಗೆ ಉಡುಪಿಯ ಅಂಬಲ್ಪಾಡಿಯ ಗೋಪಾಲ ಪೂಜಾರಿ ಕೆಲಸಕ್ಕಿದ್ದರು. ಮೊದಲು ಸೂಪರ್ ವೈಸರ್ ಆಗಿದ್ದ ಗೋಪಾಲ್ ಪೂಜಾರಿ ನಂತರ ಆಪ್ತ ಸಹಾಯಕರಾದರು. ಈ ಸಂದರ್ಭದಲ್ಲಿ ಸಂಬಳ ನೀಡಿಲ್ಲ. ಆ ಮೇಲೆ ಸಂಬಳ ಕೊಡುವುದಾಗಿ ಹೇಳುತ್ತಾ ದಿನ ದೂಡಿದರು.

    ಈವರೆಗೆ ನನಗೆ 6 ಲಕ್ಷ 10 ಸಾವಿರ ರೂಪಾಯಿ ಸಂಬಳದ ಹಣ ಕೊಡೋದು ಬಾಕಿಯಿದೆ ಅಂತ ಗೋಪಾಲ ಪೂಜಾರಿ ಆರೋಪಿಸಿದ್ದಾರೆ. 1995ರಲ್ಲಿ ಸೋನಿಯಾಗಾಂಧಿಗೆ ದೂರು ನೀಡಿದ್ದೆ. ಸೋನಿಯಾಗಾಂಧಿ ಆಸ್ಕರ್ ಅವರನ್ನು ಕರೆದು ಸಂಬಳ ಕೊಡಿ ಎಂದು ತಾಕೀತು ಮಾಡಿದ್ದರು. ಆದ್ರೂ ಅವರು ಹಣ ಕೊಡಲಿಲ್ಲ. ಮಗಳ ಮದುವೆ ಸಂದರ್ಭದಲ್ಲಾದ್ರೂ ಕೊಡಬಹುದು ಎಂದು ಕಾದು ಈಗ ಮೋಸ ಹೋಗಿದ್ದೇನೆ ಎಂದು ಅವರು ಹೇಳಿದರು.

    ಕಾರ್ಮಿಕ ಇಲಾಖೆ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ಗೋಪಾಲ್ ಪೂಜಾರಿ ದೂರಿದ್ದಾರೆ. ಏಪ್ರಿಲ್ 1 ರವರೆಗೆ ಗಡುವು ನೀಡಿರುವ ಅವರು, ಏಪ್ರಿಲ್ 2ರಂದು ಉಪವಾಸ ಕೂರುವುದಾಗಿ ಹೇಳಿದ್ದಾರೆ. ಗೋಪಾಲ್ ಪೂಜಾರಿ ಪತ್ನಿ ಚಂಚಲ ಅನಾರೋಗ್ಯದಿಂದ ಬಳಲುತ್ತಿದ್ದು ಸಂಬಂಧಿಕರಿಂದ ಸಹಾಯ ಯಾಚಿಸುವಂತಾಗಿದೆ ಎಂದು ಹೇಳಿದರು.

    15 ದಿನದ ಹಿಂದೆ ಆಸ್ಕರ್ ಗೆ ಪತ್ರ ಬರೆದಿದ್ದೆ. ಅದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಕೊಟ್ಟ ಹಿಂಬರವನ್ನೂ ಲಗತ್ತಿಸಿದ್ದೆ. ಇದಕ್ಕೂ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ನಿಗಮ ಮಂಡಳಿಗೆ ನೇಮಕ ಮಾಡುತ್ತೇನೆ ಎಂದು ಒಂದು ಬಾರಿ ಆಸ್ಕರ್ ಭರವಸೆ ಕೊಟ್ಟಿದ್ದರು ಎಂಬುದನ್ನು ಗೋಪಾಲ್ ಪೂಜಾರಿ ನೆನಪಿಸಿಕೊಂಡರು.

  • ಧೋನಿಯನ್ನು `ಎ ಪ್ಲಸ್’ ಒಪ್ಪಂದದಿಂದ ಬಿಸಿಸಿಐ ಕೆಳಗಿಳಿಸಿದ್ದು ಯಾಕೆ ಅನ್ನೋದಕ್ಕೆ ಉತ್ತರ ಸಿಕ್ತು

    ಧೋನಿಯನ್ನು `ಎ ಪ್ಲಸ್’ ಒಪ್ಪಂದದಿಂದ ಬಿಸಿಸಿಐ ಕೆಳಗಿಳಿಸಿದ್ದು ಯಾಕೆ ಅನ್ನೋದಕ್ಕೆ ಉತ್ತರ ಸಿಕ್ತು

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಬಿಸಿಸಿಐ ಉನ್ನತ ಶ್ರೇಣಿಯಿಂದ ಕೆಳಗಿಳಿಸಿರುವ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಧೋನಿ ಅವರನ್ನು ಉನ್ನತ ಶೇಣಿಯಿಂದ ಕೆಳಗಿಳಿಸಿರುವುದರ ಹಿಂದೆ ಸರಳ ಲಾಜಿಕ್ ಇದ್ದು, ಬಿಸಿಸಿಐ ಒಪ್ಪಂದ ನಿರ್ಣಯದ ವೇಳೆ ಹೆಚ್ಚು ಆಟವಾಡಿ, ಹೆಚ್ಚು ಗಳಿಸಿ ಎಂಬ ನಿಯಮವನ್ನು ಅನುಸರಿಸಿದೆ. ಈ ಕುರಿತು ಬಿಸಿಸಿಐ ಧೋನಿ, ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

    ಧೋನಿ ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಅಲ್ಲದೇ ಅಶ್ವಿನ್ ಹಾಗೂ ಜಡೇಜಾ ಸೀಮಿತ ಓವರ್ ಪಂದ್ಯದ ಸರಣಿಗೆ ಆಯ್ಕೆಯಾಗಲು ವಿಫಲರಾಗಿದ್ದಾರೆ. ಅದ್ದರಿಂದ ಅವರನ್ನು ಎರಡನೇ ಶ್ರೇಣಿ ಆಟಗಾರರ ಸ್ಥಾನ ನೀಡಲಾಗಿದೆ ಎಂದರು.

    ಬಿಸಿಸಿಐ ನ ಬಿ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ಕ್ರಿಕೆಟ್ ನ ಯಾವುದೇ ಮಾದರಿಯಲ್ಲಿ ಆಡಲು ಆರ್ಹರಾಗಿರುತ್ತಾರೆ. ಅವರನ್ನು ಯಾವ ಮಾದರಿಗೆ ಬೇಕಾದರೂ ಆಯ್ಕೆ ಮಾಡಬಹುದು. ಇನ್ನು ಕಳೆದ ವರ್ಷದಲ್ಲಿ ಟೀಂ ಇಂಡಿಯಾ ಪರ ಕನಿಷ್ಟ ಒಂದು ಪಂದ್ಯದಲ್ಲಿ ಸ್ಥಾನ ಪಡೆದವರನ್ನು ಸಿ ಶ್ರೇಣಿಗೆ ಆಯ್ಕೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಧೋನಿಗಿಂತಲೂ ಹೆಚ್ಚು ಸಂಬಳ ಪಡೆಯಲಿದ್ದಾರೆ ಭುವಿ! ಯಾರಿಗೆ ಎಷ್ಟು ಸಂಬಳ? ಇಲ್ಲಿದೆ ಪೂರ್ಣ ಪಟ್ಟಿ

    ಕಳೆದ ಬಾರಿ ಉನ್ನತ ಎ ಶ್ರೇಣಿ ಹೊಂದಿದ್ದ ಆಟಗಾರರಿಗೆ ಬಿಸಿಸಿಐ ನೀಡುತ್ತಿದ್ದ ವಾರ್ಷಿಕ 2 ಕೋಟಿ ರೂ. ವೇತನವನ್ನು ಶೇ. 350ರಷ್ಟು ಹೆಚ್ಚಿಸಿ ಎ ಪ್ಲಸ್ ಶ್ರೇಣಿಯಲ್ಲಿ 7 ಕೋಟಿ ರೂ. ನೀಡುತ್ತಿದೆ. ಎರಡನೇ ಶ್ರೇಣಿಗೆ ಶೇ. 500 ರಷ್ಟು ಹೆಚ್ಚಿಸಿ 5 ಕೋಟಿ ರೂ. ವೇತನ ನೀಡುತ್ತಿದೆ.

    ಬಿಸಿಸಿಐ ಸಮಿತಿ ಬುಧವಾರ ಬಿಡುಗಡೆಗೊಳಿಸಿದ ಅಕ್ಟೋಬರ್ 20017 ರಿಂದ ಸೆಪ್ಟೆಂಬರ್ 2018 ರ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಎ ಪ್ಲಸ್ ಶ್ರೇಣಿಯನ್ನು ಸೇರ್ಪಡೆಗೊಳಿಸಿದೆ. ಆದರೆ ಧೋನಿ ಸೇರಿದಂತೆ ಹಿರಿಯ ಸ್ಪಿನ್ ಬೌಲರ್ ಆರ್ ಅಶ್ವಿನ್, ರವೀಂದ್ರ ಜಡೇಜಾ, ಮುರಳಿ ವಿಜಯ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ ಅವರಿಗೆ ಎ ಶ್ರೇಣಿಯಲ್ಲಿ ಸ್ಥಾನ ಕಲ್ಪಿಸಿದೆ.

     

  • ಧೋನಿಗಿಂತಲೂ ಹೆಚ್ಚು ಸಂಬಳ ಪಡೆಯಲಿದ್ದಾರೆ ಭುವಿ! ಯಾರಿಗೆ ಎಷ್ಟು ಸಂಬಳ? ಇಲ್ಲಿದೆ ಪೂರ್ಣ ಪಟ್ಟಿ

    ಧೋನಿಗಿಂತಲೂ ಹೆಚ್ಚು ಸಂಬಳ ಪಡೆಯಲಿದ್ದಾರೆ ಭುವಿ! ಯಾರಿಗೆ ಎಷ್ಟು ಸಂಬಳ? ಇಲ್ಲಿದೆ ಪೂರ್ಣ ಪಟ್ಟಿ

    ಮುಂಬೈ: ಬಿಸಿಸಿಐ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಆಡಳಿತ ಸಮಿತಿ(ಸಿಒಎ)ಯು ಬುಧವಾರ ಆಟಗಾರರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಗುತ್ತಿಗೆಯ ವಾರ್ಷಿಕ ಒಪ್ಪಂದದ ಅನ್ವಯ ಬಿಸಿಸಿಐ ನೀಡುತ್ತಿರುವ ವೇತನದಲ್ಲಿ ಭಾರೀ ಏರಿಕೆಯಾಗಿದ್ದು ಧೋನಿಗಿಂತಲೂ ಭುವಿ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ.

    ಸಿಒಎ ಸಮಿತಿ ನೀಡಿರುವ ಪಟ್ಟಿಯ ಅನ್ವಯ ಹೊಸದಾಗಿ `ಎ ಪ್ಲಸ್’ ಶ್ರೇಣಿ ಯನ್ನು ಹೊಸದಾಗಿ ಪಟ್ಟಿಯಲ್ಲಿ ನೀಡಲಾಗಿದೆ. ಒಪ್ಪಂದವು 2017 ಅಕ್ಟೋಬರ್ ನಿಂದ 2018 ಸೆಪ್ಟೆಂಬರ್ ವರೆಗೆ ಅನ್ವಯವಾಗಲಿದೆ. ವಿಶೇಷವಾಗಿ ಹಿರಿಯ ಮಹಿಳೆಯರ ವಿಭಾಗ ತಂಡದಲ್ಲಿ ‘ಸಿ ಗ್ರೇಡ್’ ಪರಿಚಯ ಮಾಡಲಾಗಿದೆ.

    `ಎ’ ಪ್ಲಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ವಾರ್ಷಿಕವಾಗಿ 7 ಕೋಟಿ ರೂ. ಪಡೆಯಲಿದ್ದಾರೆ. ನಂತರದ ಸ್ಥಾನ ಎ, ಬಿ, ಸಿ, ಪಟ್ಟಿಯಲ್ಲಿ ಆಟಗಾರರಿಗೆ ಕ್ರಮವಾಗಿ 5, 3, 1 ಕೋಟಿ ಯನ್ನು ಪಡೆಯಲಿದ್ದಾರೆ.

    ಪರಿಷ್ಕೃತ ಮೊತ್ತ ಪಟ್ಟಿ:
    ಹಿರಿಯ ಪುರುಷರ ತಂಡ
    ‘ಎ ಪ್ಲಸ್’ ಶ್ರೇಣಿ: 7 ಕೋಟಿ ರೂ.
    ‘ಎ’ ಶ್ರೇಣಿ: 5 ಕೋಟಿ ರೂ.
    ‘ಬಿ’ ಶ್ರೇಣಿ: 3 ಕೋಟಿ ರೂ.
    ‘ಸಿ’ ಶ್ರೇಣಿ: 1 ಕೋಟಿ ರೂ.

    ಹಿರಿಯ ಮಹಿಳಾ ತಂಡ
    ‘ಎ’ ಶ್ರೇಣಿ: 50 ಲಕ್ಷ ರೂ.
    ‘ಬಿ’ ಶ್ರೇಣಿ: 30 ಲಕ್ಷ ರೂ.
    ‘ಸಿ’ ಶ್ರೇಣಿ: 10 ಲಕ್ಷ ರೂ.

    ಯಾವ ಆಟಗಾರರು ಯಾವ ಪಟ್ಟಿಯಲ್ಲಿದ್ದಾರೆ?
    ಎ ಪ್ಲಸ್ ಶ್ರೇಣಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಜಸ್‍ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್.

    `ಎ’ ಶ್ರೇಣಿ: ಮಹೇಂದ್ರ ಸಿಂಗ್ ಧೋನಿ, ಆರ್.ಅಶ್ವಿನ್, ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ, ಮುರಳಿ ವಿಜಯ್, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ.

    `ಬಿ’ ಶ್ರೇಣಿ: ಉಮೇಶ್ ಯಾದವ್, ಕೆ.ಎಲ್.ರಾಹುಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್.

    `ಸಿ’ ಶ್ರೇಣಿ: ಸುರೇಶ್ ರೈನಾ, ಕೇದಾರ್ ಜಾಧವ್, ಮನೀಷ್ ಪಾಂಡೆ, ಅಕ್ಷರ್ ಪಟೇಲ್, ಕರುಣ್ ನಾಯರ್, ಪಾರ್ಥಿವ್ ಪಟೇಲ್ ಮತ್ತು ಜಯಂತ್ ಯಾದವ್.

    ಮಹಿಳಾ ಆಟಗಾರರ ಶ್ರೇಣಿ ಪಟ್ಟಿ:
    `ಎ’ ಶ್ರೇಣಿ: ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಹರ್ಮನ್‍ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಣ್ಣ

    `ಬಿ’ ಶ್ರೇಣಿ: ಪೂನಮ್ ಯಾದವ್, ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ್, ಏಕ್ತಾ ಬಿಷ್ಠ್, ಶಿಖಾ ಪಾಂಡೆ ಮತ್ತು ದೀಪ್ತಿ ಶರ್ಮಾ.

    `ಸಿ’ ಶ್ರೇಣಿ: ಮಾನಸಿ ಜೋಶಿ, ಅನುಜಾ ಪಾಟೀಲ್, ಮೋನಾ ಮೆಷ್ರಮ್, ನುಜಾತ್ ಪರ್ವೀನ್, ಸುಷ್ಮಾ ವರ್ಮಾ, ಪೂನಮ್ ರೌತ್, ಜೆಮಿಮಾ ರಾಡ್ರಿಗಸ್, ಪೂಜಾ ವಸ್ತ್ರಾಕರ್ ಮತ್ತು ತಾನಿಯಾ ಭಾಟಿಯಾ.

    ಸಮಿತಿಯ ನಿರ್ಣಾಯದ ಪಟ್ಟಿಯಲ್ಲಿ ದೇಶೀಯ ಆಟಗಾರ ವೇತನದಲ್ಲಿ ಶೇ. 200ರಷ್ಟು ಹೆಚ್ಚಳವಾಗಿದೆ. ಅಲ್ಲದೇ ವಯಸ್ಸಿನ ಆಧಾರದ ಮೇಲೆ ವಿಂಗಡಿಸಿರುವ ಸಮಿತಿ ಅಂಡರ್ 23 ತಂಡದ ಆಟಗಾರರು 17,500ರೂ. ಹಾಗೂ ಹೆಚ್ಚವರಿ ಆಟಗಾರರು 8,750 ರೂ. ವೇತನ ಪಡೆಯಲಿದ್ದಾರೆ.

    ಪುರುಷ ತಂಡದ ಆಟಗಾರರ ದೈನಂದಿನ ವೇತನ ಪಟ್ಟಿ:
    ಈ ಪಟ್ಟಿಯಲ್ಲಿ ಎರಡು ವಿಭಾಗವಿದ್ದು ತಂಡಕ್ಕೆ ಆಯ್ಕೆಯಾಗಿ ಅಂತಿಮ 11ರ ಪಟ್ಟಿಯಲ್ಲಿ ಆಡದ ಆಟಗಾರರನ್ನು ಮೀಸಲು ಆಟಗಾರರು ಎಂದು ಗುರುತಿಸಲಾಗಿದ್ದು, ಅವರಿಗೆ ಆಟಗಾರರ ಸಂಬಳದ ಅರ್ಧ ಹಣವನ್ನು ನೀಡಲಾಗುತ್ತದೆ.

    ಹಿರಿಯರು: 35,000 ರೂ. ಮೀಸಲು: 17,500 ರೂ.
    ಅಂಡರ್ 23: 17,500 ರೂ. ಮೀಸಲು: 8,750 ರೂ.
    ಅಂಡರ್ 19: 10,500 ರೂ. ಮೀಸಲು: 5,250 ರೂ.
    ಅಂಡರ್ 16: 3,500 ರೂ. ಮೀಸಲು: 1,750 ರೂ.

    ಗುತ್ತಿಗೆ ಪಟ್ಟಿಯಿಂದ ಮಹಮದ್ ಶಮಿ ಔಟ್:
    ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್ ಶಮಿ ಅವರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ. ಶಮಿ ತಮ್ಮ ಪತ್ನಿ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ಪತಿಯ ದೌರ್ಜನ್ಯದ ಕುರಿತು ದೂರು ನೀಡಿರುವ ಜಹಾನ್, ಸಾಮಾಜಿಕ ಜಾಲತಾಣಗಳಲ್ಲೂ ಈ ಮಾಹಿತಿಯನ್ನು ಹರಿಯಬಿಟ್ಟಿದ್ದರು. ಅದ್ದರಿಂದ ಗುತ್ತಿಗೆ ಪಟ್ಟಿ ಸೇರ್ಪಡೆಗೆ ಶಮಿ ಅವರ ಹೆಸರಿಗೆ ತಡೆ ನೀಡಲಾಗಿದೆ. ಆದರೆ ಶಮಿ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಬಿಸಿಸಿಐ ಉಳಿದಂತೆ 26 ಆಟಗಾರ ಪಟ್ಟಿ ಬಿಡುಗಡೆ ಮಾಡಿದೆ.

    ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾದ ಸರಣಿಯಲ್ಲಿ ಮಹಮಮ್ಮದ್ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಶಮಿ ಪತ್ನಿ ಹಸೀನ್ ಜಹಾನ್ ಕೌಟುಂಬಿಕ ದೌರ್ಜನ್ಯ ದೂರು ನೀಡಿದ ಕಾರಣ ಶಮಿ ಅವರ ಗುತ್ತಿಗೆ ನವೀಕರಿಸಲು ಮಂಡಳಿ ಮುಂದಾಗಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     

  • ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್- ವೇತನ ಪರಿಷ್ಕರಣೆ ಅಧಿಕೃತ ಆದೇಶಕ್ಕೆ ಸಿಎಂ ಸಹಿ

    ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್- ವೇತನ ಪರಿಷ್ಕರಣೆ ಅಧಿಕೃತ ಆದೇಶಕ್ಕೆ ಸಿಎಂ ಸಹಿ

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭರ್ಜರಿ ಗಿಫ್ಟ್ ಕೊಟ್ಟಿದೆ.

    ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಅಧಿಕೃತ ಆದೇಶಕ್ಕೆ ಸಿಎಂ ಸಿದ್ದರಾಮಯ್ಯ ಅಂಕಿತ ಹಾಕಿದ್ದಾರೆ. ಈ ಕುರಿತು ಇಂದೇ ಆದೇಶ ಹೊರಬೀಳಲಿದೆ. 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ನೌಕರರ ವೇತನ ಶೇಕಡಾ 30ರಷ್ಟು ಹೆಚ್ಚಳವಾಗಲಿದೆ. ಶನಿವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಇದಕ್ಕೆ ಘಟನೋತ್ತರ ಮಂಜೂರಾತಿ ಸಿಗಲಿದೆ.

    ವರದಿಯಲ್ಲಿ ಏನು ಇರಬಹುದು?
    1. 6 ನೇ ವೇತನ ಆಯೋಗದ ಸಂಭವನೀಯ ವರದಿಯಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು. ನೌಕರರಿಗೆ ವಾರಕ್ಕೆ ಎರಡು ರಜೆ, ಕೆಲ ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ.

    2. ಈ ಬಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯತೆ ಇದೆ. ಅಂದರೆ ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ ನಿಗದಿಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮೂಲ ವೇತನ 16,350 ರೂ. ಮತ್ತು ಗರಿಷ್ಠ ಮೂಲ ವೇತನ 1,32,925 ರೂ. ನಿಗದಿಯಾಗಬಹುದು.

    3. ಐಎಎಸ್ ಅಲ್ಲದ ಅಧಿಕಾರಿಗಳಿಗೆ 95,325 ರೂ., ಗ್ರೂಪ್ ಎ ನೌಕರರಿಗೆ 48,625 ರೂ., ಗ್ರೂಪ್ ಬಿ ನೌಕರರಿಗೆ 39,425 ರೂ., ಎಫ್‍ಡಿಎ ನೌಕರರಿಗೆ 28,125 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಮತ್ತು ಡಿ ಗ್ರೂಪ್ ನೌಕರರಿಗೆ 16,350 ರೂ. ಎಂದು ಮೂಲ ಸಂಬಳ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.