Tag: salad

  • ಬ್ರೊಕೊಲಿ ಸಲಾಡ್‌ – ನಿಮ್ಮ ಡಯಟ್‌ಗೊಂದು ಬೊಂಬಾಟ್‌ ರೆಸಿಪಿ!

    ಬ್ರೊಕೊಲಿ ಸಲಾಡ್‌ – ನಿಮ್ಮ ಡಯಟ್‌ಗೊಂದು ಬೊಂಬಾಟ್‌ ರೆಸಿಪಿ!

    ಬ್ರೊಕೊಲಿಯಲ್ಲಿ ಯತೇಚ್ಛವಾದ ಪೋಷಕಾಂಶಗಳು ಇರುತ್ತವೆ. ಫೈಬರ್‌, ವಿಟಮಿನ್‌ಗಳು ಇರುವುದರಿಂದ ದೇಹಕ್ಕೆ ಅಗತ್ಯವಾದ ಪೌಷ್ಠಿಕ ಆಹಾರ ದೊರೆತಂತಾಗುತ್ತದೆ. ಇದರಲ್ಲಿ ನಾನಾ ಬಗೆಯ ಖಾದ್ಯಗಳನ್ನು ಮಾಡಬಹುದು. ಅದೇ ರೀತಿ ಸಲಾಡ್‌ ಸಹ ಮಾಡಬಹುದು. ಬ್ರೊಕೋಲಿಯಲ್ಲಿ ಸಲಾಡ್‌ ಮಾಡಿ ನೋಡಿ..!

    ಬೇಕಾಗುವ ಪದಾರ್ಥಗಳು
    ಬ್ರೊಕೊಲಿ- ½ ಬಟ್ಟಲು
    ಆಲೂಗಡ್ಡೆ- ಬೇಯಿಸಿದ್ದು ಸ್ವಲ್ಪ
    ಹುರಿದ ಕಡಲೆಕಾಯಿ ಬೀಜ ಅಥವಾ ಬಾದಾಮಿ- 2 ಚಮಚ
    ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1
    ಚೀಸ್- 2 ಚಮಚ
    ಕಾಳು ಮೆಣಸಿನ ಪುಡಿ- ¼ ಚಮಚ
    ಪುದೀನಾ- ಸ್ವಲ್ಪ
    ಕೊತ್ತಂಬರಿ ಸೊಪ್ಪು- ಸ್ವಲ್ಪ
    ನಿಂಬೆ ರಸ- 1 ಚಮಚ
    ಮೇಯನೇಸ್- 1 ಚಮಚ
    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ
    ಮೊದಲಿಗೆ ಬ್ರೊಕೋಲಿಯನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಒಂದು ಪಾತ್ರೆಗೆ ಕತ್ತರಿಸಿ ಬ್ರೊಕೋಲಿಯನ್ನು ಹಾಕಿ 5 ನಿಮಿಷ ಬೇಯಿಸಿಕೊಳ್ಳಿ. ಬಳಿಕ ನೀರನ್ನು ಬಸಿದುಕೊಳ್ಳಿ. ನಂತರ ಬೇಯಿಸಿದ ಬ್ರೊಕೋಲಿಗೆ ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಕರವಾದ ಆರೋಗ್ಯಕರ ಬ್ರೊಕೋಲಿ ಸಲಾಡ್ ಸವಿಯಲು ಸಿದ್ಧ.

  • ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ

    ಮೊಳಕೆಯೊಡೆದ ಹೆಸರುಕಾಳಿನಿಂದ ಮಾಡಿ ಆರೋಗ್ಯಕರ ಕೋಸಂಬರಿ

    ನಾವು ಯಾವುದೇ ಸಾಂಪ್ರದಾಯಿಕ ಮದುವೆಗಳಂತಹ ಕಾರ್ಯಕ್ರಮಕ್ಕೆ ಹೋದಾಗ ಊಟದಲ್ಲಿ ಹೆಸರು ಕಾಳು ಇಲ್ಲವೇ ಹೆಸರು ಬೇಳೆಯ ಕೋಸಂಬರಿಯನ್ನು ಮಿಸ್ ಮಾಡದೇ ನೋಡುತ್ತೇವೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಈ ಸಲಾಡ್ ತುಂಬಾ ಫೇಮಸ್. ನಾವಿಂದು ಮೊಳಕೆ ಬರಿಸಿದ ಹೆಸರು ಕಾಳಿನಿಂದ ಅತ್ಯಂತ ಆರೋಗ್ಯಕರ, ಪೌಷ್ಟಿಕ ಮಾತ್ರವಲ್ಲದೇ ರುಚಿಕರ ಕೋಸಂಬರಿಯನ್ನು (Sprouted Moong Salad) ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ. ಈ ಸಿಂಪಲ್ ರೆಸಿಪಿಯನ್ನು ಕೇವಲ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಯಾಕೆ? ಮನೆಯಲ್ಲೂ ಬೇಕೆಂದಾಗ ಮಾಡಿ ಸವಿಯಿರಿ.

    ಬೇಕಾಗುವ ಪಾರ್ಥಗಳು:
    ಮೊಳಕೆಯೊಡೆದ ಹೆಸರುಕಾಳು – 1 ಕಪ್
    ತುರಿದ ಕ್ಯಾರೆಟ್ – ಅರ್ಧ ಕಪ್
    ದಾಳಿಂಬೆ – ಅರ್ಧ ಕಪ್
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
    ತೆಂಗಿನ ತುರಿ – 2 ಟೀಸ್ಪೂನ್

    ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
    ನಿಂಬೆ ರಸ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಸಾಸಿವೆ – 1 ಟೀಸ್ಪೂನ್
    ಹಿಂಗ್ – ಚಿಟಿಕೆ
    ಕರಿಬೇವಿನ ಎಲೆ – ಕೆಲವು ಇದನ್ನೂ ಓದಿ: ಗರಿಗರಿಯಾದ ಗೋಬಿ 65 ಮಾಡಿ ನೋಡಿ

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ಮೊಳಕೆಯೊಡೆದ ಹೆಸರು ಕಾಳು, ತುರಿದ ಕ್ಯಾರೆಟ್, ದಾಳಿಂಬೆ, ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ರಸವನ್ನು ಹಾಕಿ ಮಿಶ್ರಣ ಮಾಡಿ.
    * ಒಂದು ಚಿಕ್ಕ ಬಾಣಲೆ ತೆಗೆದುಕೊಂಡು, ಅದರಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಬಳಿಕ ಅದಕ್ಕೆ ಸಾಸಿವೆ ಹಾಕಿ ಸಿಡಿಸಿ.
    * ಬಳಿಕ ಚಿಟಿಕೆ ಹಿಂಗ್ ಹಾಗೂ ಕರಿಬೇವಿನ ಎಲೆ ಹಾಕಿ, ಸ್ವಲ್ಪ ಹುರಿದು, ಬಳಿಕ ಹೆಸರು ಕಾಳಿನ ಮಿಶ್ರಣಕ್ಕೆ ಸುರಿಯಿರಿ.
    * ಇದೀಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿದರೆ, ಆರೋಗ್ಯಕರ ಮೊಳಕೆಯೊಡೆದ ಹೆಸರುಕಾಳಿನ ಕೋಸಂಬರಿ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ವಾವ್, ಸಖತ್ ಟೇಸ್ಟಿ – ಬೇಬಿ ಕಾರ್ನ್ ರೋಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮನವಮಿ ಸ್ಪೆಷಲ್- ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

    ರಾಮನವಮಿ ಸ್ಪೆಷಲ್- ಹೆಸರುಬೇಳೆ ಕೋಸಂಬರಿ ಮಾಡೋದು ಹೇಗೆ?

    ರ್ನಾಟಕ ಶೈಲಿಯ ಪ್ರಮುಖ ಪಾಕವಿಧಾನಗಳಲ್ಲಿ ಹೆಸರು ಬೇಳೆ ಕೋಸಂಬರಿಯೂ ಒಂದಾಗಿದೆ. ಇದನ್ನು ಉತ್ಸವ ಹಾಗೂ ಹಬ್ಬಗಳಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೆಸರು ಬೇಳೆ ಕೋಸಂಬರಿ ಮಾಡೋ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಹೆಸರು ಬೇಳೆ – 50 ಗ್ರಾಂ
    * ಬಿಡಿಸಿದ ದಾಳಿಂಬೆ ಕಾಳು – 1/4 ಕಪ್
    * ಸೌತೆಕಾಯಿ- 1
    * ಕೊತ್ತಂಬರಿ – ಸ್ವಲ್ಪ
    * ಕಾಯಿ ತುರಿ – ಸ್ವಲ್ಪ
    * ಕ್ಯಾರೆಟ್ ತುರಿ – ಸ್ವಲ್ಪ
    * ಈರುಳ್ಳಿ – ಚಿಕ್ಕದು, ಸಣ್ಣಗೆ ಹೆಚ್ಚಿದ್ದು
    * ನಿಂಬೆಹಣ್ಣು – ಮೀಡಿಯಂ ಸೈಜ್

    ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
    * ಕಡ್ಲೆಬೇಳೆ – 1 ಟಿಎಸ್‍ಪಿ
    * ಉದ್ದಿನ ಬೇಳೆ – 1 ಟಿಎಸ್‍ಪಿ
    * ಎಣ್ಣೆ – 2 ಟಿಎಸ್‍ಪಿ
    * ಕೆಂಪು ಮೆಣಸಿನಕಾಯಿ – 3-4
    * ಸಾಸಿವೆ – ಚಿಟಿಕೆ
    * ಇಂಗು – ಚಿಟಿಕೆ
    * ಜೀರಿಗೆ – ಚಿಟಿಕೆ
    * ಕರಿಬೇವು – ಸ್ವಲ್ಪ ಇದನ್ನೂ ಓದಿ: ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

    ಮಾಡುವ ವಿಧಾನ
    * ಮೊದಲು ಹೆಸರುಬೇಳೆಯನ್ನು ಅರ್ಧಗಂಟೆ ನೆನೆಸಿ, ಸೋಸಿಡಿ.
    * ಒಂದು ಮಿಕ್ಸಿಂಗ್ ಬೌಲ್‍ಗೆ ಸಣ್ಣಗೆ ಹೆಚ್ಚಿ ನೀರು ಹಿಂಡಿದ ಸೌತೆಕಾಯಿ, ನೆನೆಸಿ ಸೋಸಿದ ಹೆಸರುಬೇಳೆ, ಬಿಡಿಸಿದ ದಾಳಿಂಬೆ, ಕ್ಯಾರೆಟ್ ತುರಿ, ಕಾಯಿ ತುರಿ, ಸಣ್ಣಗೆ ಕಟ್ ಮಾಡಿದ ಕೊತ್ತಂಬರಿಸೊಪ್ಪು, ಈರುಳ್ಳಿ, ನಿಂಬೆ ಹಣ್ಣಿನ ರಸ ಹಿಂಡಿ ಮಿಕ್ಸ್ ಮಾಡಿ.
    * ಒಂದು ಪ್ಯಾನ್‍ಗೆ ಎಣ್ಣೆ ಹಾಕಿ, ಎಣ್ಣೆ ಕಾದ ಮೇಲೆ ಸಾಸಿವೆ, ಜೀರಿಗೆ, ಇಂಗು, ಹಾಕಿ ಸಿಡಿದ ಮೇಲೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಫ್ರೈ ಮಾಡಿ. ಆಮೇಲೆ ಕರಿಬೇವು, ಕೆಂಪು ಮೆಣಸಿನಕಾಯಿ ಹಾಕಿ ಫ್ರೈ ಮಾಡಿಡಿ.
    * ಬಳಿಕ ಫ್ರೈ ಮಾಡಿಟ್ಟ ಒಗ್ಗರಣೆಯನ್ನು ಮಿಕ್ಸಿಂಗ್ ಬೌಲ್‍ನಲ್ಲಿರುವ ಹೆಸರುಬೇಳೆ ಮಿಕ್ಸ್‍ಗೆ ಸೇರಿಸಿ ಕಲಸಿ ಸವಿಯಿರಿ.

  • ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ

    ಜೈಪುರ: ಹಳೆಯ ಸಲಾಡ್‍ನನ್ನು ಸರ್ವ್ ಮಾಡಿದ್ದೀರಾ ಎಂದು ಆರೋಪಿಸಿದ ಗ್ರಾಹಕನಿಗೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೋಧ್ ಪುರ್‍ನಲ್ಲಿ ನಡೆದಿದೆ.

    ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಈತ ತಡರಾತ್ರಿ ಹೋಟೆಲ್ ವೊಂದರಲ್ಲಿ ಸಲಾಡ್ ಆರ್ಡರ್ ಮಾಡಿದ್ದಾನೆ. ಅಂತೆಯೇ ಸರ್ವರ್ ಸಲಾಡ್ ತಂದುಕೊಟ್ಟಿದ್ದಾನೆ. ಆದರೆ ಅದು ವಾಸನೆ ಬಂದಿದೆ. ಹೀಗಾಗಿ ಸಿಂಗ್, ಸಿಬ್ಬಂದಿ ಹಳೆಯ ಸಲಾಡ್ ನೀಡಿದ್ದಾನೆ ಎಂದು ಹೋಟೆಲ್ ಮಾಲೀಕನಿಗೆ ಕಂಪ್ಲೇಟ್ ಮಾಡಿದ್ದಾರೆ. ಬಳಿಕ ಹೋಟೆಲ್‍ನಲ್ಲಿ ಕೆಲಸ ಮಾಡುವವರಿಗೆ ನಿಂದಿಸಲು ಆರಂಭಿಸಿದ್ದಾರೆ. ಈ ವಿಚಾರವಾಗಿ ಆತ ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾದ-ವಿವಾದ ಆರಂಭವಾಗಿದೆ. ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಹೋಟೆಲ್ ನೌಕರರು ಮಹೇಂದ್ರ ಸಿಂಗ್ ತಲೆಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.

    ಕೂಡಲೇ ಮಹೆಂದ್ರ ಸಿಂಗ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಹಾಮಂದಿರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹೇಂದ್ರ ಸಿಂಗ್ ಊಟ ಮಾಡಲು ಹೋಟೆಲ್ ಗೆ ತೆರಳಿದ್ದಾಗ ಹಳೆಯ ಸಲಾಡ್ ನೀಡಿದ್ದಕ್ಕೆ ದೂರು ನೀಡಿದ್ದಾರೆ. ಇದರಿಂದ ಕೋಪಗೊಂಡ ಹೋಟೆಲ್ ಸಿಬ್ಬಂದಿ ಶ್ರವಣ್ ಸಿಂಗ್ ಎಂಬಾತ ಕೆಟ್ಟ ರೀತಿಯಲ್ಲಿ ಮಹೇಂದ್ರ ಸಿಂಗ್‍ರನ್ನು ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.