Tag: Sai Kumar

  • ಬಿಡುಗಡೆಗೆ ರೆಡಿಯಾದ ‘ಜಗ್ಗಿ ಜಗನ್ನಾಥ’ – ದುನಿಯಾ ರಶ್ಮಿಗೆ ಸಿಗುತ್ತಾ ಬ್ರೇಕ್!

    ಬಿಡುಗಡೆಗೆ ರೆಡಿಯಾದ ‘ಜಗ್ಗಿ ಜಗನ್ನಾಥ’ – ದುನಿಯಾ ರಶ್ಮಿಗೆ ಸಿಗುತ್ತಾ ಬ್ರೇಕ್!

    ಸೂರಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ದುನಿಯಾ ಮೂಲಕ ಚಿರಪರಿಚಿತವಾದ ಟ್ಯಾಲೆಂಟೆಡ್ ನಟಿ ರಶ್ಮಿ. ಚಿತ್ರದ ಯಶಸ್ಸಿನ ನಂತರ ದುನಿಯಾ ರಶ್ಮಿ ಎಂದೇ ಖ್ಯಾತಿಯಾಗಿರೋ ಈಕೆ ದುನಿಯಾ ನಂತರ ಮುರಾರಿ, ಮಂದಾಕಿನಿ, ಅಕ್ಕ-ತಂಗಿ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಯಾವ ಸಿನಿಮಾಗಳು ಕೈ ಹಿಡಿಯಲಿಲ್ಲ, ಹೆಸರೂ ತಂದು ಕೊಡಲಿಲ್ಲ. ಒಂದಷ್ಟು ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ದುನಿಯಾ ರಶ್ಮಿ ನಂತರ ಪ್ರತ್ಯಕ್ಷವಾಗಿದ್ದು ಬಿಗ್ ಬಾಸ್ ಸೀಸನ್-7ರ ವೇದಿಕೆಯಲ್ಲಿ. ಗೆದ್ದು ಸೋತು ಮತ್ತೆ ಗೆಲುವಿಗಾಗಿ ಹಂಬಲಿಸುತ್ತಿರುವ ಈ ಮುದ್ದು ಮುಖದ ಚೆಲುವೆ ಈಗ ಜಗ್ಗಿ ಜಗನ್ನಾಥ್ ಚಿತ್ರದ ಮೂಲಕ ಆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    ಹೌದು, ಓಂ ಸಾಯಿ ಪ್ರಕಾಶ್ ನಿರ್ದೇಶನದ ಆ್ಯಕ್ಷನ್ ಓರಿಯೆಂಟೆಡ್ ಜಗ್ಗಿ ಜಗನ್ನಾಥ ಸಿನಿಮಾದಲ್ಲಿ ದುನಿಯಾ ರಶ್ಮಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರಾಮಿಸಿಂಗ್ ಟ್ರೈಲರ್ ಸದ್ದು ಮಾಡ್ತಿದೆ. ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ದುನಿಯಾ ರಶ್ಮಿ ಚಿತ್ರದಲ್ಲಿ ನಟಿಸಿದ್ದು, ಈ ಪಾತ್ರವನ್ನು ಹಾಗೂ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದಾರೆ ದುನಿಯಾ ರಶ್ಮಿ.

    ನವ ನಟ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಆ್ಯಕ್ಷನ್ ಜೊತೆಗೆ ಮಾಫಿಯ ಕಥೆಯೂ ಚಿತ್ರದಲ್ಲಿದೆ. ಮೊಟ್ಟ ಮೊದಲ ಬಾರಿ ಆ್ಯಕ್ಷನ್ ಸಿನಿಮಾಗೆ ನಿರ್ದೇಶನ ಮಾಡಿರುವ ಓಂ ಸಾಯಿ ಪ್ರಕಾಶ್ ಕೂಡ ಈ ಚಿತ್ರದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಾಯಿ ಕುಮಾರ್ ಪೊಲೀಸ್ ಸೂಪರ್ ಕಾಪ್ ಆಗಿ ಜಗ್ಗಿ ಜಗನ್ನಾಥ್ ಚಿತ್ರದಲ್ಲಿ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ಪದ್ಮಜಾ ರಾವ್, ತಬಲ ನಾಣಿ, ಪವನ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಫೆಬ್ರವರಿ 28ಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ದುನಿಯಾ ರಶ್ಮಿ ಕರಿಯರ್ ಗೆ ಜಗ್ಗಿ ಜಗನ್ನಾಥ ಬ್ರೈಟ್ ಫ್ಯೂಚರ್ ನೀಡುತ್ತಾನಾ ಅನ್ನೋದನ್ನ ಕಾದು ನೋಡಬೇಕು.

  • ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಯಾರಿಗೆ ಗೊತ್ತಿಲ್ಲ ಹೇಳಿ. ಚಂದನವನಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ಇವ್ರು, ಭಕ್ತಿ ಪ್ರಧಾನ, ಪ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಹೆಸರುವಾಸಿ. ಇವ್ರು ಇತ್ತೀಚೆಗೆ ಆ್ಯಕ್ಷನ್ ಕಟ್ ಹೇಳಿರೋ ಜಗ್ಗಿ ಜಗನ್ನಾಥ ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆಯಾಗುತ್ತಿದೆ.

    ಚಿತ್ರದ ವಿಶೇಷ ಅಂದ್ರೆ ಇದು ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ. ಅದ್ರಲ್ಲೇನಿದೆ ವಿಶೇಷ ಅಂದ್ಕೋಬೇಡಿ ವಿಶೇಷ ಇದೆ. ಓಂ ಸಾಯಿ ಪ್ರಕಾಶ್ ಮೊದಲಿನಿಂದಲೂ ಭಕ್ತಿ ಪ್ರಧಾನ, ಸೆಂಟಿಮೆಂಟ್ ಕಂಟೆಂಟ್ ಇರೋ ಸಿನಿಮಾಗಳಿಗೆ ಹೆಸರುವಾಸಿ ಅನ್ನೋದು ಎಲ್ಲರಿಗು ಗೊತ್ತೆ ಇದೆ. ಆದ್ರೆ ಫರ್ ದಿ ಫಸ್ಟ್ ಟೈಂ ಓಂ ಸಾಯಿ ಪ್ರಕಾಶ್ ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ ಡೈರೆಕ್ಟ್ ಮಾಡಿರೋದು. ಇನ್ನೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆಯನ್ನು ನಾಯಕ ನಟನಾಗಿ ತಮ್ಮ ಚಿತ್ರದಲ್ಲಿ ಇಂಟ್ರಡ್ಯೂಸ್ ಮಾಡ್ತಿರೋದು. ಈ ಎಲ್ಲ ಅಂಶಗಳಿಂದ ಸಾಯಿ ಪ್ರಕಾಶ್ ಅವ್ರ ಜಗ್ಗಿ ಜಗನ್ನಾಥ್ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಟ್ರೈಲರ್ ಕೂಡ ಮಾಸ್ ಡೈಲಾಗ್, ಆಕ್ಷನ್ ದೃಶ್ಯಗಳಿಂದ ಸಖತ್ ಸೌಂಡ್ ಮಾಡ್ತಿದೆ.

    ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಜಗ್ಗಿ ಜಗನ್ನಾಥ್ ಚಿತ್ರ ಮಾಫಿಯಾ, ಲವ್ ಸ್ಟೋರಿ, ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡಿದ್ದು, ಸಾಯಿ ಪ್ರಕಾಶ್ ಸಿನಿಮಾ ಅಭಿಮಾನಿಗಳಿಗೆ ಹೊಸ ಫೀಲ್ ನೀಡೋದಂತೂ ಖಂಡಿತ. ಹೊಸ ಪ್ರತಿಭೆ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ದುನಿಯಾ ರಶ್ಮಿ ನಾಯಕ ನಟಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಖ್ಯಾತಿಯ ಸಾಯಿ ಕುಮಾರ್ ಪೊಲೀಸ್ ಆಗಿ ಮತ್ತದೇ ಹಳೆ ಖದರ್‍ನಲ್ಲಿ ಮಾಸ್ ಪಂಚ್ ಡೈಲಾಗ್ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ.

    ಎ.ಎಂ ನೀಲ್ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಹೆಚ್.ಜಯರಾಜು, ಜಿ.ಶಾರಾದ ಜಗ್ಗಿ ಜಗನ್ನಾಥ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಓಂ ಸಾಯಿ ಪ್ರಕಾಶ್ ಈ ಹಿಂದಿನ ಸಿನಿಮಾ ನೋಡಿದವರು ಈ ಹೊಸ ಪ್ರಯತ್ನವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದಕ್ಕೆ ಫೆಬ್ರವರಿ 28ಕ್ಕೆ ಥಿಯೇಟರ್ ಅಂಗಳದಲ್ಲಿ ಉತ್ತರ ಸಿಗಲಿದೆ.

  • ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಪೊಲೀಸ್ ಡೈರಿ, ಅಗ್ನಿ ಸಿನಿಮಾಗಳಲ್ಲಿ ಪೊಲೀಸ್ ಸೂಪರ್ ಕಾಪ್ ಆಗಿ ಪವರ್ ಫುಲ್ ಡೈಲಾಗ್ ಮೂಲಕ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವ್ರನ್ನ ಮರೆಯೋಕಾಗುತ್ತಾ..? ತಮ್ಮ ಚಿತ್ರಗಳಲ್ಲಿ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಸಾಯಿ ಕುಮಾರ್ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್‍ನಿಂದಲೇ ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈಗಲೂ ಆ ಡೈಲಾಗ್‍ಗಳು ಫೇಮಸ್ ಆಗಿವೆ.

    ಸಾಯಿ ಕುಮಾರ್ ರನ್ನು ಮತ್ತೆ ಖಾಕಿಯಲ್ಲಿ ನೋಡಲು, ಡೈಲಾಗ್ ಕಣ್ತುಂಬಿಕೊಳ್ಳಲು ಸಿನಿ ರಸಿಕರು ವರ್ಷಗಳಿಂದ ಕಾಯ್ತಾಯಿದ್ರು. ಈಗ ಆ ಸಮಯ ಬಂದಿದೆ. ಅದೇ ಖದರ್, ಅಷ್ಟೇ ಪವರ್ ಫುಲ್ ಡೈಲಾಗ್, ಅದೇ ಮ್ಯಾನರಿಸಂ ಮೂಲಕ ಮತ್ತೆ ಡೈಲಾಗ್ ಕಿಂಗ್ ಪೊಲೀಸ್ ಸೂಪರ್ ಕಾಪ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ ಜಗ್ಗಿ ಜಗನ್ನಾಥ್. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರ್ನೊಂದಿಗೆ ಗಮನ ಸೆಳೆಯುತ್ತಿದ್ದಾರೆ.

    ಎಸ್, ಡೈಲಾಗ್ ಕಿಂಗ್ ಸಾಯಿ ಕುಮಾರ್ ಬಿಡುಗಡೆಗೆ ಸಿದ್ಧವಾಗಿರೋ ಜಗ್ಗಿ ಜಗನ್ನಾಥ ಚಿತ್ರದಲ್ಲಿ ಪವರ್ ಫುಲ್ ಪೊಲೀಸ್ ಆಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಜನರ್ದಸ್ತ್ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಡೈಲಾಗ್ ಕಿಂಗ್ ಎನರ್ಜಿಟಿಕ್ ಅಂಡ್ ಖದರ್ ತುಂಬಿರೋ ಮಾಸ್ ಡೈಲಾಗ್‍ಗಳು ಈಗಾಗಲೇ ಟ್ರೈಲರ್ ನಲ್ಲಿ ಮಿಂಚು ಹರಿಸಿದೆ. ಬಹು ದಿನಗಳಿಂದ ಸಾಯಿ ಕುಮಾರ್ ಡೈಲಾಗ್ ಮಿಸ್ ಮಾಡಿಕೊಂಡಿದ್ದ ಸಿನಿರಸಿಕರಿಗೆ ಈ ಚಿತ್ರ ಭರಪೂರ ಮನರಂಜನೆ ನೀಡಲಿದೆ.

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿಕುಮಾರ್, ಲಿಖಿತ್, ದುನಿಯಾ ರಶ್ಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಾಫಿಯ, ರೌಡಿಸಂ ಕಥಾನಕವುಳ್ಳ ಮಾಸ್ ಸಬ್ಜೆಕ್ಟ್ ಜಗ್ಗಿ ಜಗನ್ನಾಥ ಚಿತ್ರದಲ್ಲಿದ್ದು, ಸಾಯಿ ಕುಮಾರ್ ದುಷ್ಟರನ್ನ ಬಗ್ಗು ಬಡಿಯೋ ಪವರ್ ಫುಲ್ ಪೊಲೀಸ್ ಆಫಿಸರ್ ಆಗಿ ಬಣ್ಣ ಹಚ್ಚಿದ್ದಾರೆ. ಹೆಚ್, ಜಯರಾಜ್, ಜಿ. ಶಾರದಾ ಜಗ್ಗಿ ಜಗನ್ನಾಥ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎ. ಎಂ ನೀಲ್ ಸಂಗೀತ ನಿರ್ದೇಶನ ಇರುವ ಈ ಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗುತ್ತಿದೆ.

  • ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ‘ಜಗ್ಗಿ ಜಗನ್ನಾಥ್’ ಸಿನಿಮಾದಲ್ಲಿ ಅಬ್ಬರಿಸಿದ ಸಾಯಿಕುಮಾರ್!

    ಸಾಯಿಕುಮಾರ್ ಅವರ ಖಡಕ್ ಡೈಲಾಗ್ ಕೇಳೋಕೆ ಅದೇನೋ ಒಂಥರ ಖುಷಿ. ತನ್ನ ಡೈಲಾಗ್ ನಿಂದಲೇ ಡೈಲಾಗ್ ಕಿಂಗ್ ಎನಿಸಿಕೊಂಡವರು. ಇದೀಗ ಅದೇ ಖಡಕ್ ಡೈಲಾಗ್ ಹೊಡೆಯಲು ರೆಡಿಯಾಗಿದ್ದಾರೆ. ಹೌದು ಸಾಯಿಕುಮಾರ್ ಅಭಿನಯದ ‘ಜಗ್ಗಿ ಜಗನ್ನಾಥ್’ ಸಿನಿಮಾ ಇದೇ ತಿಂಗಳ 28ಕ್ಕೆ ತೆರೆ ಕಾಣಲಿದೆ. ಅದಕ್ಕೂ ಮುನ್ನ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

    ಟ್ರೇಲರ್ ನೋಡಿದವರಿಗೆ ಸಿನಿಮಾ ಹೇಗಿರಲಿದೆ ಎಂಬುದು ಅರ್ಥವಾಗಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿ. ಸಾಯಿ ಕುಮಾರ್ ಇದ್ರೆ ಅಲ್ಲೊಂದು ರೌಡಿಸಂ ಡೈಲಾಗ್ ಗಳ ಸುರಿಮಳೆ ಅಲ್ವೆ. ಅದೇ ರೀತಿ ಸಿನಿಮಾದಲ್ಲಿ ಗನ್ನು, ಮಚ್ಚು-ಲಾಂಗು ಬೀಸುತ್ತೆ, ರಕ್ತ ಹರಿಯುತ್ತೆ, ಡೈಲಾಗ್ ಗಳ ಸುರಿಮಳೆ ಸುರಿಯುತ್ತೆ. ಹೆಚ್ಚು ರೌಡಿಸಂ ದೃಶ್ಯಗಳೆ ಟ್ರೇಲರ್ ನಲ್ಲಿ ಓಡಾಡುತ್ತಿವೆ. ಇದರ ನಡುವೆ ಕಾಮಿಡಿ ಜೊತೆಗೆ ನಾಯಕನಿಗೊಂದು ಲವ್ ಸ್ಟೋರಿ ಇರುವುದು ಟ್ರೇಲರ್ ನಲ್ಲಿ ವ್ಯಕ್ತವಾಗಿದೆ.

    ನಾಯಕ ಲಿಕಿತ್ ರಾಜ್ ಅಭಿನಯ ಕೂಡ ಮೆಚ್ಚುವಂತಿದೆ. ಪಕ್ಕಾ ಮಾಸ್ ಸ್ಟೋರಿಗೆ ಮ್ಯಾಚ್ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ತಾಯಿ-ಮಗನ ಸೆಂಟಿಮೆಂಟ್ ಅಂಶ ಕೂಡ ಇದೆ. ನಾಯಕ ಮತ್ತು ಖಡಕ್ ಪೊಲೀಸ್ ಆಫೀಸರ್ ಆಗಿರುವ ಸಾಯಿ ಪ್ರಕಾಶ್ ನಡುವೆ ಜುಗಲ್ ಬಂದಿ ಕ್ರಿಯೇಟ್ ಆಗುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿವೆ. ನಾಯಕ ರೌಡಿಸಂ, ಪ್ರೇಯಸಿಯ ಮುಗ್ಧತೆ, ತಾಯಿಯನ್ನ ಯಾರೋ ಕೊಲ್ಲುವುದು, ನಾಯಕ ಮುಂದೇನು ಮಾಡ್ತಾನೆ ಎಂಬೆಲ್ಲಾ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದ್ದಾರೆ ಓಂ ಸಾಯಿ ಪ್ರಕಾಶ್. ಇದೇ 28 ರಂದು ಸಿನಿಮಾ ತೆರೆಗೆ ಬರಲಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಥಿಯೇಟರ್ ನಲ್ಲೆ ಉತ್ತರ ಕಂಡುಕೊಳ್ಳಬೇಕಿದೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು ಹಾಗೂ ಜಿ.ಶಾರದ ನಿರ್ಮಾಣದ ಚಿತ್ರವಿದು. ಎ.ಎಂ.ನೀಲ್ ಸಂಗೀತ ನೀಡಿದ್ದಾರೆ. ರೇಣುಕುಮಾರ್ ಛಾಯಾಗ್ರಹಣವಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಸಾಯಿ ಸರ್ವೇಶ್ ಸಾಹಿತ್ಯ ನೀಡಿದ್ದಾರೆ. ಬಾಬು ಸಂಕಲನ ಮಾಡಿದ್ದಾರೆ. ಸಾಯಿ ಕುಮಾರ್ ಹಾಗೂ ಲಿಖಿತ್ ರಾಜ್ ಜತೆಗೆ ತಬಲಾ ನಾಣಿ, ಪದ್ಮಜಾ ರಾವ್, ಲಯ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

  • ನಾಳೆ ಬಿಡುಗಡೆಗೊಳ್ಳಲಿದೆ ನಟಭಯಂಕರನ ಮತ್ತೊಂದು ಹಾಡು!

    ನಾಳೆ ಬಿಡುಗಡೆಗೊಳ್ಳಲಿದೆ ನಟಭಯಂಕರನ ಮತ್ತೊಂದು ಹಾಡು!

    ಬೆಂಗಳೂರು: ಪ್ರಥಮ್ ನಿರ್ದೇಶನ ಮಾಡೋದರ ಜೊತೆಗೆ ನಾಯಕನಾಗಿಯೂ ನಟಿಸಿರುವ ಚಿತ್ರ ‘ನಟ ಭಯಂಕರ’. ನಿರ್ದೇಶನವನ್ನೇ ಪ್ರಧಾನ ಆಸಕ್ತಿಯಾಗಿಸಿಕೊಂಡಿದ್ದರೂ ನಟನೆಯನ್ನು ನೆಚ್ಚಿಕೊಂಡಿದ್ದ ಪ್ರಥಮ್ ಈ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿಯಲು ಮುಂದಾಗಿದ್ದಾರೆ. ಈ ಸಿನಿಮಾ ಆರಂಭವಾದಾಗಿಂದ ಚಿತ್ರಮಂದಿರದ ಹೊಸ್ತಿಲು ತಲುಪಿಕೊಳ್ಳೋವರೆಗೆ ಪ್ರತೀ ಹೆಜ್ಜೆಯೂ ಹೊಸತನದಿಂದ ಕೂಡಿರಬೇಕೆಂಬ ಇಂಗಿತ ಅವರಲ್ಲಿದೆ. ಆದ್ದರಿಂದಲೇ ಹಂತ ಹಂತವಾಗಿ ನಟ ಭಯಂಕರ ಸದ್ದು ಮಾಡುತ್ತಾ ಬಂದಿದ್ದಾನೆ.

    ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದ ಟೈಟಲ್ ಟ್ಯ್ರಾಕ್ ಲಾಂಚ್ ಆಗಿತ್ತು. ಅದು ಟ್ರೆಂಡ್ ಸೆಟ್ ಮಾಡಿರುವಾಗಲೇ ಪ್ರಥಮ್ ಮತ್ತೊಂದು ಹಾಡು ಬಿಡುಗಡೆಗೊಳಿಸಲು ತಯಾರಾಗಿದ್ದಾರೆ. ನಾಳೆ ನಟಭಯಂಕರ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ಮುಂದಡಿ ಇಡುತ್ತಿರೋ ಪ್ರಥಮ್ ಈ ಹಾಡನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂತೆಯೇ ರೂಪಿಸಿದ್ದಾರಂತೆ. ಆದರೆ ಅದರ ರೂಪುರೇಷೆಗಳನ್ನು ಮಾತ್ರ ಗೌಪ್ಯವಾಗಿಟ್ಟಿದ್ದಾರೆ. ಅದೆಲ್ಲವೂ ನಾಳೆ ಎಲ್ಲರೆದುರು ಅನಾವರಣಗೊಳ್ಳಲಿದೆ.

    ಪ್ರಥಮ್ ಪಾಲಿಗೆ ಇದು ನಾಯಕನಾಗಿ ಅನ್ನೋದಕ್ಕಿಂತಲೂ ನಿರ್ದೇಶಕನಾಗಿ ಅತ್ಯಂತ ಮಹತ್ವದ ಚಿತ್ರ. ಈ ಕಾರಣದಿಂದಲೇ ಎಲ್ಲ ನೀಲ ನಕ್ಷೆಯನ್ನು ರೆಡಿ ಮಾಡಿಕೊಂಡೇ ಅವರು ನಟಭಯಂಕರನ ಸಾರಥ್ಯ ವಹಿಸಿಕೊಂಡಿದ್ದರು. ಎಲ್.ಕೆ.ಅಡ್ವಾಣಿ ಅವರಿಂದ ಕ್ಲಾಪ್ ಮಾಡಿಸೋ ಮೂಲಕ ನಟಭಯಂಕರನಿಗೆ ಚಾಲನೆ ಕೊಟ್ಟಿದ್ದ ಪ್ರಥಮ್ ಈ ವರೆಗೂ ತಿರುಗಿ ನೋಡಿಯೇ ಇಲ್ಲ. ಅಷ್ಟಕ್ಕೂ ಈ ಸಿನಿಮಾ ಸುಖಾ ಸುಮ್ಮನೆ ಸದ್ದು ಮಾಡುತ್ತಿಲ್ಲ. ಇದರಲ್ಲಿ ಮಹತ್ವದ್ದೇನೋ ಕಂಟೆಂಟ್ ಇದೆ ಎಂಬ ಸುಳಿವು ಗಾಂಧಿನಗರದ ಗುಂಟ ಪಸರಿಸಿಕೊಂಡಿದೆ. ಆದ್ದರಿಂದಲೇ ಸ್ಟಾರ್ ನಟರೆಲ್ಲರೂ ಪ್ರಥಮ್‍ರನ್ನು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಟೈಟಲ್ ಟ್ರ್ಯಾಕ್ ಹಾಡಿ ಸಾಥ್ ಕೊಡುವ ಮೂಲಕ ನಟ ಭಯಂಕರನಿಗೆ ಮತ್ತಷ್ಟು ಮೈಲೇಜು ಸಿಕ್ಕಿತ್ತು. ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡಾ ಪ್ರಥಮ್ ಕಸುಬುದಾರಿಕೆ ಕಂಡು ಬೆರಗಾಗಿದ್ದಾರೆ. ಇನ್ನು ಹೆಚ್ಚಾಗಿ ಯಾವ ಸಿನಿಮಾ ಸೆಟ್‍ಗಳಿಗೂ ಭೇಟಿ ನೀಡದ ಗೋಲ್ಡನ್ ಸ್ಟಾರ್ ಗಣೇಶ್ ನಟ ಭಯಂಕರ ಸೆಟ್ಟಿಗಾಗಮಿಸಿ ಎಲ್ಲ ಕೆಲಸ ಕಾರ್ಯಗಳ ಮಾಹಿತಿ ಪಡೆದುಕೊಂಡಿದ್ದರು. ಪ್ರಥಮ್‍ಗೆ ಬೆನ್ತಟ್ಟಿ ಪ್ರೋತ್ಸಾಹಿಸುತ್ತಲೇ ಸಿನಿಮಾ ಮೂಡಿ ಬಂದಿರೋ ರೀತಿಯನ್ನು ಮೆಚ್ಚಿಕೊಂಡಿದ್ದರು. ಒಟ್ಟಾರೆಯಾಗಿ ಚಿತ್ರಂಗವೇ ನಟಭಯಂಕರನ ಬೆನ್ನಿಗೆ ನಿಂತಿದೆ. ನಾಳೆ ಬಿಡುಗಡೆಯಾಗಲಿರೋ ಹಾಡು ಈ ಸಿನಿಮಾದ ಕ್ರೇಜ್ ಅನ್ನು ಮತ್ತಷ್ಟು ಮಿರುಗಿಸಲಿದೆ.

  • ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋದು ಹದಿನೇಳು ಖಳರು!

    ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋದು ಹದಿನೇಳು ಖಳರು!

    ಬೆಂಗಳೂರು: ಈ ಹಿಂದೆ ಬಹದ್ದೂರ್ ಮತ್ತು ಭರ್ಜರಿ ಎಂಬೆರಡು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿರುವವರು ಚೇತನ್ ಕುಮಾರ್. ಈ ಎರಡೇ ಚಿತ್ರಗಳ ಮೂಲಕ ಯುವ ಮನಸುಗಳ ಡಾರ್ಲಿಂಗ್ ಅನ್ನಿಸಿಕೊಂಡಿರೋ ಚೇತನ್ ಪಾಲಿಗೆ ಪ್ರೇಕ್ಷಕರ ಆಕಾಂಕ್ಷೆಗಳೇನೆಂಬುದು ಸುಸ್ಪಷ್ಟ. ಈ ಬಾರಿ ಅವರದನ್ನು ಮತ್ತಷ್ಟು ಸ್ಪಷ್ಟವಾಗಿಸಿಕೊಂಡು ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಈಗಾಗಲೇ ಕೆಂಡದಂಥಾ ನಿರೀಕ್ಷೆ ಹುಟ್ಟು ಹಾಕಿರೋ ಭರಾಟೆಯನ್ನು ಫ್ಯಾಮಿಲಿ ಪ್ಯಾಕೇಜ್ ಆಗಿಯೂ ರೂಪಿಸುವ ನಿಟ್ಟಿನಲ್ಲಿ ಚೇತನ್ ಶ್ರಮ ವಹಿಸಿದ್ದಾರೆ. ಈ ಚಿತ್ರ ಆ ಕಾರಣದಿಂದಲೇ ಕುಟುಂಬ ಸಮೇತವಾಗಿ ನೋಡಿ ಎಂಜಾಯ್ ಮಾಡುವಂತೆ ಮೂಡಿ ಬಂದಿದೆಯಂತೆ.

    ಇದೊಂದು ಪಕ್ಕಾ ಮಾಸ್ ಕಥನ ಹೊಂದಿರೋ ಚಿತ್ರ. ಶ್ರೀಮುರಳಿ ಈ ಹಿಂದೆ ಎಂದೂ ನಟಿಸದ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಆ ಛಾಯೆಯೇ ಕುಟುಂಬ ಸಮೇತರಾಗಿ ಪ್ರೇಕ್ಷಕರನ್ನೆಲ್ಲ ಚಿತ್ರಮಂದಿರದತ್ತ ಕರೆತರುವಷ್ಟು ಶಕ್ತವಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಆದರೆ, ಇದರಲ್ಲಿರೋ ಮಾಸ್ ಸನ್ನಿವೇಶಗಳು ಮಾತ್ರ ಬೇರೆಯದ್ದೇ ದಿಕ್ಕಿನಲ್ಲಿವೆ. ಭರಾಟೆಯಲ್ಲಿ ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋ ಖಳರ ಸಂಖ್ಯೆಯೇ ಇದೊಂದು ಭರ್ಜರಿ ಫೋರ್ಸ್ ಹೊಂದಿರುವ ಮಾಸ್ ಚಿತ್ರವೆಂಬುದಕ್ಕೆ ಪುರಾವೆಯಂತಿದೆ.

    ಭರಾಟೆಯಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಬ್ರದರ್ಸ್ ಖಳರಾಗಿ ಅಬ್ಬರಿಸಿದರೆ, ಅವರೊಂದಿಗೆ ಮತ್ತೆ ಹದಿನಾಲಕ್ಕು ಮಂದಿ ಖಳ ನಟರು ಚಿತ್ರ ವಿಚಿತ್ರವಾದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಹದಿನೇಳೂ ಪಾತ್ರಗಳೂ ಕೂಡಾ ಒಂದಕ್ಕೊಂದು ಭಿನ್ನವಾಗಿದೆ ಎಂಬುದು ಈಗಾಗಲೇ ಟ್ರೇಲರ್‍ಗಳ ಮೂಲಕವೇ ಸಾಬೀತಾಗಿದೆ. ಮಾಮೂಲಿಯಂತಾದರೆ ಒಂದು ಚಿತ್ರದಲ್ಲಿ ಒಂದಿಬ್ಬರು ಖಳರಿರುತ್ತಾರೆ. ಆದರೆ ಈ ಪಾಟಿ ಖಳ ನಟರಿದ್ದಾರೆಂಬುದೇ ಭರಾಟೆಯತ್ತ ಮಾಸ್ ಅಭಿರುಚಿಯ ಪ್ರೇಕ್ಷಕರೆಲ್ಲ ವಾಲಿಕೊಳ್ಳುವಂತಾಗಿದೆ. ಅಂತೂ ಭರಾಟೆ ಈ ವಾರವೇ ಬಿಡುಗಡೆಯಾಗಲಿದೆ. ಒಂದೆರಡು ದಿನ ಕಳೆಯುತ್ತಲೇ ಭರಾಟೆ ನಿಮ್ಮೆದುರು ಆರ್ಭಟಿಸಲಿದೆ.

  • ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಬೆಂಗಳೂರು: ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂಸಾಯಿಪ್ರಕಾಶ್ ಪಕ್ಕಾ ಆ್ಯಕ್ಷನ್, ಲವ್ ಸ್ಟೋರಿ ಇಟ್ಟುಕೊಂಡು ಮಾಡಿರುವ ಚಿತ್ರ ಜಗ್ಗಿ ಜಗನ್ನಾಥ್. ಈ ಚಿತ್ರದ ಟ್ರೈಲರ್ ಹೊರಬಂದಿದ್ದು, ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ಯುವಪ್ರತಿಭೆ ಲಿಖಿತ್ ರಾಜ್ ಈ ಮೂವರ ಕಾಂಬಿನೇಶನ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಯುಟ್ಯೂಬ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಅಗ್ನಿ ಐಪಿಎಸ್, ಪೊಲೀಸ್ ಸ್ಟೋರಿಯಂಥ ಮಾಸ್ ಡೈಲಾಗ್‍ಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಲಿಖಿತ್ ರಾಜ್ ಹಾಗೂ ಸಾಯಿಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಡೈಲಾಗ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಅಂಡರ್‍ವಲ್ರ್ಡ್ ಕಥೆ ಇದಾಗಿದ್ದರೂ ಚಿತ್ರದಲ್ಲಿರುವ ಹೃದಯ ಕಲಕುವ ತಾಯಿ-ಮಗನ ಸೆಂಟಿಮೆಂಟ್ ಸೀನ್‍ಗಳು ಕೂಡ ಗಮನ ಸೆಳೆದಿವೆ. ಈಗಾಗಲೇ ಜಗ್ಗಿ ಜಗನ್ನಾಥ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡು ಇತ್ತೀಚೆಗಷ್ಟೇ ಚಿತ್ರ ಸೆನ್ಸಾರ್ ಕೂಡ ಆಗಿದೆ. ಒಬ್ಬ ಸಾಮಾನ್ಯ ಯುವಕ ಹೇಗೆ ಅಘೋರಿಯಾದ ಎನ್ನುವ ಕುತೂಹಲಕರವಾದ ಕಥಾಹಂದರ ಚಿತ್ರದಲ್ಲಿದ್ದು, ಇದೇ ಥರದ ಹಲವಾರು ವಿಶೇಷತೆಗಳು ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿವೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು, ಜಿ.ಶಾರದ,ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ., ಸಾಯಿಸರ್ವೇಶ್ ಸಾಹಿತ್ಯ, ಶ್ರೀನಿವಾಸ್ ಪಿ. ಬಾಬು ಸಂಕಲನ, ಅರವಿಂದ್ ಡಿಸ್ಕೊ ಡಿಸಿಲ್ವ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್, ಕೌರವ ವೆಂಕಟೇಶ್ ಸಾಹಸವಿದೆ.

    ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಮುಂತಾದವರ ತಾರಾಬಳಗವಿದೆ.

  • ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬೆಂಗಳೂರು: ನಿರ್ದೇಶಕ ಓಂ ಸಾಯಿಪ್ರಕಾಶ್ ಅಂದರೆ ಭಾವನೆಗಳನ್ನು ಮೀಟುವಂಥಾ ಕೌಟುಂಬಿಕ ಚಿತ್ರಗಳು, ಭಕ್ತಿಪ್ರಧಾನ ಚಿತ್ರಗಳೇ ಕಣ್ಮುಂದೆ ಬರುತ್ತವೆ. ಅವರು ನಿರ್ದೇಶನ ಮಾಡಿದ ಚಿತ್ರಗಳನ್ನು ನೋಡುತ್ತಾ ಬಂದವರಿಗೆ ಅವರನ್ನು ಮಾಸ್ ಸಿನಿಮಾ ನಿರ್ದೇಶಕರಾಗಿ ಕಲ್ಪಿಕೊಳ್ಳುವುದೂ ಕಷ್ಟವಾಗಬಹುದು. ಆದರೀಗ ಸಾಕ್ಷಾತ್ತು ಸಾಯಿಪ್ರಕಾಶ್ ಜಗ್ಗಿ ಜಗನ್ನಾಥ ಎಂಬ ಪಕ್ಕಾ ಆಕ್ಷನ್ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಪೂರೈಸಿಕೊಂಡಿರೋ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

    ಈ ಚಿತ್ರದಲ್ಲಿ ಲಿಖಿತ್ ಎಂಬ ಹೊಸ ಹುಡುಗ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ತಮ್ಮ ಬ್ರ್ಯಾಂಡಿನಂತಿರೋ ಖಡಕ್ ಪೊಲೀಸ್ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಈಗ ಹೊರಬಂದಿರೋ ಟ್ರೇಲರ್‍ನಲ್ಲಿ ಅವರ ಪಾತ್ರವೇ ಹೈಲೈಟ್ ಆಗಿದೆ. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರಿನ ಡೈಲಾಗುಗಳೊಂದಿಗೆ ಗಮನ ಸೆಳೆದಿದ್ದಾರೆ. ಇಲ್ಲಿನ ಮೈನವಿರೇಳಿಸೋ ಮಾಸ್ ಸೂಚನೆಗಳು ಇದು ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಾ ಎಂಬಂಥಾ ಸಂಶಯ ಹುಟ್ಟುವಷ್ಟು ಆಕ್ಷನ್ ಅಂಶಗಳನ್ನೊಳಗೊಂಡಿದೆ.

    ಪೆಟ್ರೋಲ್ ಪ್ರಸನ್ನ ಈ ಹಿಂದೆ ದಂಡುಪಾಳ್ಯಂ ಸರಣಿಯಲ್ಲಿ ಒಂದಷ್ಟು ಸದ್ದು ಮಾಡಿದ್ದರು. ಜಗ್ಗಿ ಜಗನ್ನಾಥ ಚಿತ್ರದಲ್ಲಿ ಅವರು ಮತ್ತೆ ವಿಲನ್ ರೋಲ್‍ನಲ್ಲಿ ಅಬ್ಬರಿಸಿದ್ದಾರೆ. ಈ ಕಥಾ ಹಂದರವೂ ವಿಶೇಷವಾಗಿಯೇ ಇದೆಯಂತೆ. ಸಾಮಾನ್ಯರಲ್ಲಿ ಸಾಮಾನ್ಯನಾದ ಹುಡುಗನೊಬ್ಬ ಅಘೋರಿಯ ಅವತಾರವೆತ್ತುವ ಅಪರೂಪದ ಸನ್ನಿವೇಶವೂ ಇಲ್ಲಿದೆಯಂತೆ. ಮಾಫಿಯಾ, ರೌಡಿಸಂ ಮತ್ತು ಅದನ್ನು ಬಗ್ಗುಬಡಿಯಲು ನಿಂತ ಖಡಕ್ ಖಾಕಿಯ ಸುತ್ತಾ ಈ ಕಥೆ ರೋಚಕವಾಗಿ ಚಲಿಸುತ್ತದೆಯಂತೆ. ಇದೆಲ್ಲದರ ಜೊತೆಗೆ ಮನಮಿಡಿಯೋ ಪ್ರೇಮಕಥೆಯನ್ನೂ ಹೊಂದಿರುವ ಈ ಚಿತ್ರವೀಗ ಟ್ರೇಲರ್ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಇಷ್ಟರಲ್ಲಿಯೇ ಇದರ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.

  • ಸುವರ್ಣ ಸುಂದರಿ ಟ್ರೈಲರ್ ಜ.19ಕ್ಕೆ ರಿಲೀಸ್

    ಸುವರ್ಣ ಸುಂದರಿ ಟ್ರೈಲರ್ ಜ.19ಕ್ಕೆ ರಿಲೀಸ್

    ಬೆಂಗಳೂರು: ಬಾಹುಬಲಿ ಚಿತ್ರ ನೋಡಿ ಅದರ ಅದ್ಧೂರಿತನಕ್ಕೆ ಮಾರು ಹೋಗದವರಿಲ್ಲ. ಆದರೀಗ ಅಂಥಾದ್ದೇ ಗುಣಲಕ್ಷಣ ಹೊಂದಿರೋ ಅಪ್ಪಟ ಕನ್ನಡ ಚಿತ್ರವೊಂದನ್ನು ನೋಡೋ ಭಾಗ್ಯ ಕನ್ನಡದ ಪ್ರೇಕ್ಷಕರಿಗೆ ಒದಗಿ ಬಂದಿದೆ. ಅದಕ್ಕೆ ಕಾರಣವಾಗಿರೋದು ಎಸ್ ಟೀಮ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ತಯಾರಾಗಿರುವ ‘ಸುವರ್ಣ ಸುಂದರಿ’ ಚಿತ್ರ. ಇದೀಗ ಈ ಚಿತ್ರದ ಟ್ರೈಲರ್ ಬಿಡುಗಡೆಗೆ ಮಹೂರ್ತ ಫಿಕ್ಸಾಗಿದೆ.

    ಇದೇ 19ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಒಂದು ಟ್ರೈಲರ್ ಮತ್ತು ಪೋಸ್ಟರ್ ಗಳೇ ಜನಮನ ಸೆಳೆದಿದ್ದವು. ಇದೀಗ ಪ್ರೇಕ್ಷಕರಿಗೆ ಎರಡನೇ ಟ್ರೈಲರ್ ನೋಡೋ ಅವಕಾಶ ಸಿಗಲಿದೆ. ಸೂರ್ಯ ನಿರ್ದೇಶನದ ಈ ಚಿತ್ರ ನಾಲ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.

    ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸುತ್ತಾಡಿ ಇಂದಿನ ಕಾಲಮಾನದವರೆಗೆ ಪ್ರಯಾಣ ಬೆಳೆಸೋ ಕಥೆ ಹೊಂದಿರುವ ಈ ಚಿತ್ರ ಸೂಕ್ಷ್ಮವಾಗಿ ಪುನರ್ಜನ್ಮದ ಕಥನವನ್ನೂ ಹೊಂದಿದೆ. ಎಸ್ ಟೀಮ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಗೆಗೀಗ ತೆಲುಗು ಮತ್ತು ಕನ್ನಡದಲ್ಲಿ ಬಾಹುಬಲಿಯಂಥಾದ್ದೇ ಭಾರೀ ನಿರೀಕ್ಷೆ ಮೂಡಿಕೊಳ್ಳಲು ಸಾಕಷ್ಟು ಕಾರಣಗಳಿವೆ!

    ಬಾಹುಬಲಿ ಚಿತ್ರ ಜನಮನ ಸೂರೆಗೊಂಡಿದ್ದಕ್ಕೆ ಅದರಲ್ಲಿನ ಗ್ರಾಫಿಕ್ಸ್ ಕೈಚಳಕವೂ ಮೂಲ ಕಾರಣ. ಆದರೆ ಕನ್ನಡದಂಥಾ ಸೀಮಿತ ಮಾರುಕಟ್ಟೆಯಿರೋ ಚಿತ್ರರಂಗದಲ್ಲಿ ಅಂಥಾ ಅದ್ಧೂರಿ ಚಿತ್ರ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂಬಂಥಾ ವಾತಾವರಣವಿತ್ತು. ಆದರೆ ಸುವರ್ಣ ಸುಂದರಿ ಚಿತ್ರ ಅದನ್ನು ಸುಳ್ಳು ಮಾಡಿದೆ ಎಂಬುದು ಚಿತ್ರತಂಡದ ಖಚಿತ ಅಭಿಪ್ರಾಯ. ಯಾಕೆಂದರೆ ಈ ಚಿತ್ರದಲ್ಲಿಯೂ ಶೇಕಡಾ ನಲವತ್ತರಷ್ಟು ಭಾಗ ಅದ್ಭುತವಾದ ಗ್ರಾಫಿಕ್ಸ್ ನಿಂದ ತುಂಬಿದೆ. ಎಲ್ಲಿಯೂ ಅಸಹಜ ಅನ್ನಿಸದಂತೆ ಇದನ್ನು ಕ್ರಿಯೇಟ್ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗಿದೆ.

    ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ 45 ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗದೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

    https://www.youtube.com/watch?time_continue=18&v=cbbnvnvU00I

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ‘ತ್ರಿ’ ಬ್ರದರ್ಸ್ ಸಂಗಮ

    ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ‘ತ್ರಿ’ ಬ್ರದರ್ಸ್ ಸಂಗಮ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇದೇ ಮೊದಲ ಬಾರಿಗೆ ಮೂವರು ಸಹೋದರರು ಒಂದೇ ಸಿನಿಮಾ ಅಭಿನಯಿಸುತ್ತಿದ್ದು, ಕಮಾಲ್ ಮಾಡಲು ಬರುತ್ತಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಮೂವರು ಸಹೋದರರಿದ್ದು, ಇದುವರೆಗೂ ಒಂದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಆದರೆ ಡೈಲಾಗ್ ಕಿಂಗ್ ಸಾಯಿ ಕುಮಾರ್, ಆರ್ಮುಗಂ ಖ್ಯಾತಿಯ ರವಿ ಶಂಕರ್ ಹಾಗೂ ಡೈರೆಕ್ಟರ್ ಕಮ್ ಆ್ಯಕ್ಟರ್ ಅಯ್ಯಪ್ಪ ಪಿ ಶರ್ಮ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಸಿನಿಮಾದಲ್ಲಿ ಈ ಮೂವರು ಸಹೋದರರು ಅಭಿನಯಿಸುತ್ತಿದ್ದಾರೆ. ಭರಾಟೆ ಸಿನಿಮಾದ ಮುಖ್ಯ ಪಾತ್ರದಲ್ಲಿ ರವಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಾಯಿಕುಮಾರ್ ಹಾಗೂ ಅಯ್ಯಪ್ಪ ಕೂಡ ಇಬ್ಬರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ರವಿ ಶಂಕರ್ ಹಾಗೂ ಅಯ್ಯಪ್ಪ ಇಬ್ಬರ ಶೂಟಿಂಗ್ ಸಿನಿಮಾದಲ್ಲಿ ಸಂಪೂರ್ಣಗೊಂಡಿದೆ. ಇನ್ನೂ ನಟ ಸಾಯಿ ಕುಮಾರ್ ಪಾತ್ರದ ಸಿನಿಮಾ ಚಿತ್ರೀಕರಣ ನಡೆಯಬೇಕಿದೆ.

    ಮೂವರು ಸಹೋದರರು ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬೇರೆ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಅಯ್ಯಪ್ಪ ಅವರು ಇತ್ತೀಚೆಗೆ ಬಿಡುಗಡೆಯಾದ ನಟ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಭರಾಟೆ ಸಿನಿಮಾ ‘ಬಹದ್ದೂರ್’ ಸಿನಿಮಾದ ನಿರ್ದೇಶಕ ಚೇತನ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದಲ್ಲಿ ನಟ ಶ್ರೀಮುರಳಿ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿದ್ದು, ಡೈಲಾಗ್ ಮೂಲಕವೇ ಸಾಕಷ್ಟು ಸದ್ದು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv