Tag: sai baba

  • ಬೆಂಗಳೂರು | ಶಿರಡಿ ಸಾಯಿಬಾಬಾರ ಮೂಲ ಪಾದುಕೆ ದರ್ಶನಕ್ಕೆ ಮುಗಿಬಿದ್ದ ಭಕ್ತಸಾಗರ – ಇಂದು ಕೊನೇ ದಿನ

    ಬೆಂಗಳೂರು | ಶಿರಡಿ ಸಾಯಿಬಾಬಾರ ಮೂಲ ಪಾದುಕೆ ದರ್ಶನಕ್ಕೆ ಮುಗಿಬಿದ್ದ ಭಕ್ತಸಾಗರ – ಇಂದು ಕೊನೇ ದಿನ

    ಬೆಂಗಳೂರು: ಇದೇ ಮೊದಲ ಬಾರಿಗೆ ಸಾಯಿಬಾಬಾರ ಮೂಲ ಪಾದುಕೆಗಳು ಬೆಂಗಳೂರಿನ (Bengaluru) ಸಾಯಿ ಮಂದಿರಕ್ಕೆ ಬಂದಿವೆ. ಈ ಪಾದುಕೆಯ ಆಶೀರ್ವಾದಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದು, ಇಂದು ದರ್ಶನಕ್ಕೆ ಕೊನೆಯ ದಿನವಾಗಿದೆ. ಈ ಪಾದುಕೆಯ ಮಹತ್ವ, ವಿಶೇಷದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

    ಶಿರಡಿ (Shiradi) ಸಂಸ್ಥಾನದ ಮೂಲ ಪಾದುಕೆಯನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಭಕ್ತರಿಗಾಗಿ ದರ್ಶನಕ್ಕೆ ಇಡಲಾಗಿದೆ. ಮಲ್ಲೇಶ್ವರಂನ (Malleshwaram) ಸಾಯಿ ಮಂದಿರದಲ್ಲಿ ಮೂಲ ಪಾದುಕೆಯನ್ನು ಇಟ್ಟಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದರ್ಶನ ಪಡೆದಿದ್ದಾರೆ.ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ CET ಪರೀಕ್ಷೆಗೆ ಅವಕಾಶ ಕೊಡದ ಸಿಬ್ಬಂದಿ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

    ಶಿರಡಿ ಸಾಯಿ ಬಾಬಾರ ಮೂಲ ಪಾದುಕೆ ಕೇವಲ ಮೂರು ಕಡೆಗಳಲ್ಲಿ ಮಾತ್ರ ಇದೆ. ಒಂದು ಸಂಸ್ಥಾನದಲ್ಲಿ, ಒಂದು ಮ್ಯೂಸಿಯಂನಲ್ಲಿ ಹಾಗೂ ಮೂರನೇಯದು ಬೆಂಗಳೂರಿನ ಸಾಯಿ ಮಂದಿರಲ್ಲಿದೆ. ಅಪರೂಪದಲ್ಲಿ ಅಪರೂಪಕ್ಕೆ ಸಿಗುವ ಈ ಮೂಲ ಪಾದುಕೆಯ ದರ್ಶನಕ್ಕೆ ಜನ ಮುಗಿಬಿದ್ದಿದ್ದಾರೆ. ಶಿರಡಿಯಿಂದ ಬಂದಿರುವ ಅರ್ಚಕರ ತಂಡವೇ ಮಧ್ಯಾಹ್ನ 12 ಗಂಟೆಗೆ ಶಿರಡಿ ಆರತಿ, ಸಂಜೆ ಆರೂವರೆಗೆ ದೂಪಾರ್ಥಿ ಪೂಜೆ ಮಾಡುತ್ತಾರೆ. ಗುರುವಾರದಿಂದ ಭಕ್ತರಿಗೆ ಅವಕಾಶ ಕಲ್ಪಿಸಿದ್ದು, ಇಂದು ಕೊನೆಯ ದಿನವಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇರಲಿದೆ.

    ಏ.16ನೇ ತಾರೀಖಿಗೆ ಮೂಲ ಪಾದುಕೆ ಬೆಂಗಳೂರಿಗೆ ಬಂದಿದೆ. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಸಾಯಿ ಮಂದಿರಕ್ಕೆ ಮೆರವಣಿಗೆ ಮೂಲಕ ಪಾದುಕೆಯನ್ನು ಸಾಯಿ ಸನ್ನಿದಿಗೆ ತಂದು ಇಡಲಾಗಿದೆ. ಈ ಪಾದುಕೆಯನ್ನು ಕೆಲವೇ ಕೆಲವು ಸಾಯಿ ಮಂದಿರಗಳಲ್ಲಿ ಭಕ್ತರ ದರ್ಶನಕ್ಕೆ ಕಳುಹಿಸಿ ಕೊಡುವ ಧಾರ್ಮಿಕ ಪದ್ಧತಿ ಇದೆ. ಅದರಂತೆ ಈ ಬಾರಿ ಮಲ್ಲೇಶ್ವರಂನ ಸಾಯಿ ಮಂದಿರಕ್ಕೆ ಪಾದುಕೆ ಬಂದಿದ್ದು, ಭಕ್ತರು ಸಾಯಿ ಬಾಬಾರ ಕೃಪೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ

  • ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ವೈಭವದ ಗುರುಪೂರ್ಣಿಮೆ ಆಚರಣೆ – ಹೂವು, ಹಣ್ಣುಗಳಿಂದ ಅದ್ಧೂರಿ ಅಲಂಕಾರ!

    ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ವೈಭವದ ಗುರುಪೂರ್ಣಿಮೆ ಆಚರಣೆ – ಹೂವು, ಹಣ್ಣುಗಳಿಂದ ಅದ್ಧೂರಿ ಅಲಂಕಾರ!

    ಬೆಂಗಳೂರು: ವಿಶೇಷ ಅಲಂಕಾರಕ್ಕೆ ಹಾಗೂ ಪೂಜೆಗೆ ಪ್ರಸಿದ್ಧಿಯಾಗಿರುವ ಬೆಂಗಳೂರು ಜೆ.ಪಿ ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ (Satya Ganapathi Shiradi Sai Trust) ವಿಶೇಷವಾಗಿ ಗುರುಪೂರ್ಣಿಮೆ ಆಚರಿಸಲಾಯಿತು.

    ಸಾಯಿ ಬಾಬಾರ (Sai Baba) ಮೂರ್ತಿಯನ್ನು ಹೂವು ಹಾಗೂ ಹಣ್ಣಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಜೊತೆಗೆ ಬೆಳಿಗ್ಗೆ 7 ಗಂಟೆಯಿಂದ ವಿಶೇಷ ಪೂಜೆ ಮತ್ತು ಹೋಮಗಳನ್ನು ನಡೆಸಲಾಯಿತು. ಇದನ್ನೂಓದಿ: ಜೀವನದ ರಿಯಲ್ ಹೀರೋಯಿನ್ ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾದ ‘ಕಾಟೇರ’ ಡೈರೆಕ್ಟರ್

    ಪ್ರತಿವರ್ಷದಂತೆ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಯಿತು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಬಾರ ʻಸಬ್ ಕಾ ಮಾಲೀಕ್ ಏಕ್ ಹೇʼ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಹಣ್ಣುಗಳು, ವಿಶೇಷ ಹೂವುಗಳಿಂದ ದೇವಸ್ಥಾನವನ್ನು ಆಲಂಕರಿಸಲಾಗಿದೆ ಎಂದು ಟ್ರಸ್ಟ್‌ ತಿಳಿಸಿದೆ.

    ಅಭಿಷೇಕ, ಅಲಂಕಾರ, ಸಾಯಿ ಮಂತ್ರ ಹೋಮ, ಸುದರ್ಶನ ಹೋಮ, ದತ್ತಾತ್ರೇಯ ಹೋಮ ಸೇರಿದಂತೆ ಇನ್ನಿತರ ಪೂಜೆಗಳನ್ನು ಆಯೋಜಿಸಲಾಗಿತ್ತು, ಸಾವಿರಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಇದನ್ನೂಓದಿ: ಹೆಚ್ಚಿದ ತುಂಗಭದ್ರಾ ನೀರಿನ ಮಟ್ಟ – ಜಾನುವಾರು ಮೈತೊಳೆಯಲು ತೆರಳಿದ್ದ ಯುವಕ ನೀರುಪಾಲು

    ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಕಳೆದ ವರ್ಷವೂ ಶಿರಡಿ ಬಾಬಾರಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ಗುರುಪೂರ್ಣಿಮೆ ಆಚರಿಸಲಾಗಿತ್ತು. 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5 ಸಾವಿರ ಬೆಲ್ಲ, 25 ಸಾವಿರಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಲ್ಲದೇ ಕಳೆದ ವರ್ಷ ಗಣೇಶ ಚುತುರ್ಥಿಯಲ್ಲಿ ನೋಟುಗಳ ಮೂಲಕ ದೇವಸ್ಥಾನ ಅಲಂಕರಿಸಿ ಗಮನ ಸೆಳೆದಿತ್ತು. ಇದನ್ನೂಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ

  • ಜೆಪಿ ನಗರದಲ್ಲಿ ಸಾಯಿ ಟ್ರಸ್ಟ್‌ನಿಂದ ಗುರುಪೂರ್ಣಿಮೆ – 20 ಸಾವಿರ ತೆಂಗಿನಕಾಯಿಯಿಂದ ವಿಶೇಷ ಅಲಂಕಾರ

    ಜೆಪಿ ನಗರದಲ್ಲಿ ಸಾಯಿ ಟ್ರಸ್ಟ್‌ನಿಂದ ಗುರುಪೂರ್ಣಿಮೆ – 20 ಸಾವಿರ ತೆಂಗಿನಕಾಯಿಯಿಂದ ವಿಶೇಷ ಅಲಂಕಾರ

    ಬೆಂಗಳೂರು: ಜೆಪಿ ನಗರದ ಶ್ರೀ ಸತ್ಯಗಣಪತಿ (Satya Ganapathi Temple) ಶಿರಡಿ ಸಾಯಿ ಟ್ರಸ್ಟ್ ನಿಂದ ವಿಶೇಷವಾಗಿ ಗುರುಪೂರ್ಣಿಮೆ (Guru Purnima) ಆಚರಿಸಲಾಗಿದ್ದು, ಶಿರಡಿ ಸಾಯಿ ಬಾಬಾರಿಗೆ ವಿಶೇಷ ಅಲಂಕಾರ, ವೈಭವದ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು.

    ‍ಶಿರಡಿ ಬಾಬಾರನ್ನು 20 ಸಾವಿರ ತೆಂಗಿನಕಾಯಿ, 2,500 ಪರಂಗಿ, ಹಲಸಿನ ಹಣ್ಣು, 5 ಸಾವಿರ ಬೆಲ್ಲ, 25 ಸಾವಿರಕ್ಕೂ ಹೆಚ್ಚು ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಒಣ ಹಣ್ಣುಗಳು, ಅಸಂಖ್ಯಾತ ನವಧಾನ್ಯಗಳ ಮೂಲಕ ವಿಶೇಷ ಅಲಂಕಾರ ಮಾಡಲಾಗಿದ್ದು, ಗುರುಪೂರ್ಣಿಗೆ ಬಾಬಾ ಹಿಂದೆಂದಿಗಿಂತಲೂ ಈ ಬಾರಿ ವಿಶೇಷವಾಗಿ ಕಂಗೊಳಿಸುತ್ತಿದ್ದಾರೆ. ಕೆಂದು ಬಣ್ಣದ ಎಳನೀರಿನಿಂದಲೂ ವಿಶೇಷ ಅಲಂಕಾರ ಮಾಡಲಾಗಿದೆ ಎಂದು ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್‌ ರಾಜ್‌ ತಿಳಿಸಿದ್ದಾರೆ.

    ಸಾಯಿ ಬಾಬಾ (Sai Baba) ಅವರಿಗೆ ಅಲಂಕಾರ ಮಾಡಿದ ಎಲ್ಲಾ ವಸ್ತುಗಳನ್ನು ಮರಳಿ ಭಕ್ತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಹಣ್ಣಾದ ಪರಂಗಿ, ಹಲಸು ಮತ್ತಿತರ ಆಹಾರ ವಸ್ತುಗಳನ್ನು ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಸಮರ್ಪಿಸಲಾಗುತ್ತಿದೆ. ಕಳೆದ ವರ್ಷ ಕ್ರೀಡಾ ಪರಿಕರಗಳಿಂದ ಬಾಬಾ ಅವರನ್ನು ಸಿಂಗರಿಸಲಾಗಿತ್ತು. ನಂತರ 500 ಶಾಲೆಗಳಿಗೆ ಈ ವಸ್ತುಗಳನ್ನು ವಿತರಣೆ ಮಾಡಲಾಗಿತ್ತು ಎಂದು ರಾಮಮೋಹನ್‌ ರಾಜ್‌ ತಿಳಿಸಿದರು. ಇದನ್ನೂ ಓದಿ: ಲವರ್ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ಳು – ಪತ್ನಿ ಸೇರಿ ಐವರು ಅರೆಸ್ಟ್

    ಗುರು ಪೂರ್ಣಿಮೆ ಅಂಗವಾಗಿ ಗುರು ಶಿರಡಿ ಬಾಬಾರಿಗೆ ಅಭಿಷೇಕ, ಹೋಮ, ಪ್ರಸಾದ ಸೇವೆ, ಅಲಂಕಾರ ಸೇವೆ, ಸರ್ವ ಸೇವೆ ಒಳಗೊಂಡಂತೆ ಎಲ್ಲಾ ರೀತಿಯ ಪೂಜಾ ವಿಧಿ ವಿಧಾನಗಳನ್ನು ಏರ್ಪಡಿಸಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಭಕ್ತರಿಗೆ ನಿರಂತರವಾಗಿ ಪ್ರಸಾದ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.

     

    ಪ್ರತಿವರ್ಷ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸುತ್ತಿದ್ದು, ಈ ಬಾರಿ ಮತ್ತಷ್ಟು ಸಂಭ್ರಮ ಮತ್ತು ವಿಶೇಷತೆಗಳೊಂದಿಗೆ ಸಾಯಿ ಬಾಬಾರ ಸ್ಮರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬಾಬಾರ ‘’ಸಬ್ ಕಾ ಮಾಲೀಕ್ ಏಕ್ ಹೇ’’ ಎಂಬ ಪರಿಕಲ್ಪನೆಯಡಿ ಬಡವ, ಬಲ್ಲಿದ ಬೇಧ-ಭಾವವಿಲ್ಲದೇ ಎಲ್ಲಾ ಸಮುದಾಯದವರಿಗೆ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಪುಟ್ಟಪರ್ತಿ ಸಾಯಿಬಾಬಾ’ ಸಿನಿಮಾ ಮಾಡುವುದಾಗಿ ಘೋಷಿಸಿದ ಸಾಯಿ ಪ್ರಕಾಶ್ : ನಿರ್ದೇಶಕರ 100ನೇ ಸಿನಿಮಾವಿದು

    ‘ಪುಟ್ಟಪರ್ತಿ ಸಾಯಿಬಾಬಾ’ ಸಿನಿಮಾ ಮಾಡುವುದಾಗಿ ಘೋಷಿಸಿದ ಸಾಯಿ ಪ್ರಕಾಶ್ : ನಿರ್ದೇಶಕರ 100ನೇ ಸಿನಿಮಾವಿದು

    ನ್ನಡ ಚಿತ್ರರಂಗದಲ್ಲಿ ಓಂ ಸಾಯಿಪ್ರಕಾಶ್ ತಾಯಿ ಸೆಂಟಿಮೆಂಟ್, ಅಣ್ಣ ತಂಗಿ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ಎಂದೇ ಹೆಸರಾದವರು. ಅವರೀಗ ತಮ್ಮ ನೂರನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ದೇವಮಾನವ  ಪುಟ್ಟಪರ್ತಿ ಸಾಯಿಬಾಬಾ ಅವರ ಮಹಿಮೆಗಳನ್ನು ಹೇಳುವ  ಕಥಾಹಂದರ ಇಟ್ಟುಕೊಂಡು ಶ್ರೀ ಸತ್ಯಸಾಯಿ ಅವತಾರ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.   ಸಾಯಿವೇದಿಕ್ ಫಿಲಂಸ್ ಮೂಲಕ ಡಾ.ದಾಮೋದರ್ ಅವರು‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದನ್ನೂ ಓದಿ:ಡಾ.ಪುನೀತ್ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ : ಅಪ್ಪು ಕುಟುಂಬಕ್ಕೆ ಆಹ್ವಾನ

    ಕಳೆದ ಸೋಮವಾರ ಸಂಜೆ ಕಲಾವಿದರ ಸಂಘದ ಆವರಣದಲ್ಲಿ  ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನೆರವೇರಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಮಹರ್ಷಿ ಆನಂದ ಗುರೂಜಿ ಚಿತ್ರದ ಶೀರ್ಷಿಕೆ  ಅನಾವರಣಗೊಳಿಸಿದರು. ಸಾಯಿಗೋಲ್ಡ್ ಸರವಣ , ನಿರ್ಮಾಪಕ  ಡಾ.ದಾಮೋದರ್, ಹಿರಿಯ ಸಾಹಿತಿ ದೊಡ್ಡರಂಗೇಗೌಡರು, ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್ ಮುಂತಾದವರು ಸಮಾರಂಭದ ಮುಖ್ಯ ಆತಿಥಿಗಳಾಗಿ ಪಾಲ್ಗೊಂಡಿದ್ದರು.       ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಂ. ಕೃಷ್ಣ, ಈಗಾಗಲೇ  ಸಾಯಿಪ್ರಕಾಶ್ ಅವರು ಶಿರಡಿ ಸಾಯಿಬಾಬಾರ ಮೇಲೆ ಸಿನಿಮಾ ಮಾಡಿದ್ದಾರೆ. ಜೊತೆಗೆ ಅವರೇ ಬಾಬಾನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಸಾಯಿಬಾಬಾರ ಆಶೀರ್ವಾದ ವಿದೆ. ನಾನು ಕೂಡ ಹತ್ತಾರುಬಾರಿ ಪುಟ್ಟಪರ್ತಿ ಗೆ ಹೋಗಿ ಸತ್ಯಸಾಯಿಬಾಬಾರ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ. ಎಂಥವರನ್ನಾದರೂ ಮಂತ್ರಮುಗ್ಧಗೊಳಿಸುವ ಶಕ್ತಿ ಅವರಲ್ಲಿತ್ತು. ಯಾವ ಸಿಎಂ ಎದುರಿಸದಂಥ ಕಷ್ಟಕಾರ್ಪಣ್ಯಗಳು ನನ್ನ ಕಾಲದಲ್ಲಿ  ಎದುರಾಗಿದ್ದವು. ರಾಜ್ ಕುಮಾರ್ ಅಪಹರಣ, ವೀರಪ್ಪನ್ ಪ್ರಕರಣ, ಕಾವೇರಿ ವಿವಾದ ಹೀಗೆ ಎಲ್ಲವೂ ನನಗೇ ಎದುರಾಗಿತ್ತು. ಅಂಥಾ ಸಂದರ್ಭದಲ್ಲಿ ನೀನು ಹೆದರಬೇಡ ಧೈರ್ಯದಿಂದ ಮುನ್ನಡೆ ಎಂದು ಅಭಯ ನೀಡಿದವರು ಈ ಸತ್ಯ ಸಾಯಿಬಾಬಾ. ಅವರಲ್ಲಿದ್ದ ಮ್ಯಾಗ್ನಟಿಕ್ ಪರ್ಸನಾಲಿಟಿ ಯಾರಿಗೂ ಬರುವುದಿಲ್ಕ. ಕೆಲವೇ ದೈವಾಂಶ ಸಂಭೂತರಿಗೆ ಮಾತ್ರ ಆ ಪವರ್ ಇರುತ್ತದೆ. ಅವರೊಬ್ಬ ಪ್ರವಾದಿಗಳು, ಅವರನ್ನು ನೋಡಿದ ಕೂಡಲೇ ನಮಗೊಂದು ಎನರ್ಜಿ ಬರುತ್ತದೆ. ಅಂಥಾ ಮಹಾತ್ಮರ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಹೊರಟಿದ್ದಾರೆ. ಅವರಿಗೆ ಯಶಸ್ಸಾಗಲಿದೆ ಎಂದರು.

    ನಂತರ ಮಾತನಾಡಿದ ಮಹರ್ಷಿ ಆನಂದ ಗುರೂಜಿ ಸತ್ಯ ಸಾಯಿಬಾಬಾ ಅವರು  ದೈವಾಂಶ ಸಂಭೂತರು. ಒಬ್ಬ  ಸಿಎಂ ಮಾಡುವುದಕ್ಕಿಂತಲೂ ಹೆಚ್ಚಿನ  ಜನಸೇವಾ ಕಾರ್ಯಗಳನ್ನು ಅವರು  ಮಾಡಿದ್ದಾರೆ. ಜನರಿಗಾಗಿ ಅವರು ಕಟ್ಟಿಸಿರುವ ಆಸ್ಪತ್ರೆ, ವೈದ್ಯಕೀಯ ಸೇವೆ, ಹಸಿದು ಬಂದಂಥವರಿಗೆ ಅನ್ನ ನೀಡುವ ಕಾಯಕ ತುಂಬಾ ದೊಡ್ಡದು. ಬಾಬಾರವರು ಬೆಳೆದುಬಂದಂಥ ಹಾದಿಯನ್ನು ಬೆಳ್ಳಿ ತೆರೆಯ ಮೇಲೆ ತರಲು ಹೊರಟಿರುವ ಈ ನಿರ್ಮಾಪಕರಿಗೆ ಬಾಬಾನ ಆಶೀರ್ವಾದವಿದೆ. ನಾನು ೨೧ ವರ್ಷದವನಿದ್ದಾಗ ಅವರನ್ನು ನೋಡಲು ಹೋಗಿದ್ದೆ, ನನ್ನನ್ನು ನೋಡಿದಾಗ ನಮ್ಮಜೊತೆ ಬಂದುಬಿಡು ಎಂದು ಆಗಲೇ  ಹೇಳಿದ್ದರು. ಅವರ ಮಾತಿನ ಮಹಿಮೆ ಎಂಥಾದ್ದೆಂದು ನನಗೀಗ ಅರ್ಥವಾಗಿದೆ ಎಂದು ಹೇಳಿದರು. ಸಾಯಿಪ್ರಕಾಶ್ ನನಗೆ ಬಹಳ ಆತ್ಮೀಯರು, ಅವರಲ್ಲಿ ಒಳ್ಳೆಯ ಕವಿಯೂ ಇದ್ದಾರೆ. ಭಕ್ತಿ ಪ್ರದಾನ ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆಯುವ ಕಲೆ ಅವರಲಗಲಿದೆ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಹೇಳಿದರು. ಜೆಜಿ ಕೃಷ್ಣ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಗಣೇಶ್ ನಾರಾಯಣ್ ಸಂಗೀತ ಸಂಗೀತ ನಿರ್ದೇಶನ‌ ಮಾಡುತ್ತಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದ್ದು,  ಕಲಾವಿದರ ಆಯ್ಕೆಪ್ರಕ್ರಿಯೆ ಮುಗಿದ ನಂತರ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಚಿತ್ರ ತಂಡಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?

    ಮಂಸೋರೆ ನಿರ್ದೇಶನದ ಹೊಸ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಸಾಯಿ ಪಲ್ಲವಿ ಕೂಡ ಕಥೆಯನ್ನು ಕೇಳುತ್ತಿದ್ದಾರೆ, ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಎನ್ನುವಲ್ಲಿಗೆ ಸುದ್ದಿ ಹರಡಿತ್ತು. ಆನಂತರ ಮಂಸೋರೆ ಬೇರೆ ಚಿತ್ರದತ್ತ ಹೊರಳಿದರು. ಇದನ್ನೂ ಓದಿ : 12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ

    ದಕ್ಷಿಣದ ಹೆಸರಾಂತ ಈ ತಾರೆ ಅನೇಕ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಮೂಲತಃ ಡಾನ್ಸರ್ ಆಗಿದ್ದ ಸಾಯಿ ಪಲ್ಲವಿ 2005ರಲ್ಲಿ ತೆರೆಕಂಡ ತಮಿಳಿನ ಕಸ್ತೂರಿ ಮಾನ್ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟವರು. ಮಾಡಿದ್ದು ಕಡಿಮೆ ಸಂಖ್ಯೆಯ ಚಿತ್ರಗಳಾದರೂ, ಅಪರೂಪದ ನಟಿಯರ ಸಾಲಿನಲ್ಲಿ ಇವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

    ಸದ್ಯ ರಾಣಾ ದುಗ್ಗುಬಾಟಿ ಸಿನಿಮಾದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿಯ ನಿಜವಾದ ಹೆಸರು ಪಲ್ಲವಿ ಸೆಂತಮಾರೈ. ಮೂಲತಃ ಇವರು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೊಟಗಿರಿಯವರು. ತಂದೆ ಸೆಂತಮಾರೈ ಕಣ್ಣನ್ ತಾಯಿ ರಾಧಾ. ಈ ದಂಪತಿ ಸಾಯಿ ಬಾಬಾ ಅವರ ದೊಡ್ಡ ಭಕ್ತರು. ಹಲವು ವರ್ಷಗಳಿಂದ ಸಾಯಿಬಾಬಾ ಟ್ರಸ್ಟ್ ನಲ್ಲಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಪಲ್ಲವಿ ಕೂಡ ಅಪ್ಪನೊಂದಿಗೆ ಸಾಯಿಬಾಬಾ ಆಶ್ರಮಕ್ಕೆ ಈಗಲೂ ಹೋಗುತ್ತಾರೆ. ಸಾಯಿಬಾಬಾ ಅವರ ಕಾರಣದಿಂದಾಗಿ ಪಲ್ಲವಿ ಅವರ ಹೆಸರಿನ ಹಿಂದೆ ‘ಸಾಯಿ’ ಪಲ್ಲವಿ ಎಂದು ಹೆಸರು ಸೇರಿಕೊಂಡಿದೆ. ಇದನ್ನೂ ಓದಿ : ಬೆಳಗಾವಿ ಭಾಗದ ದಿಟ್ಟ ಅಧಿಕಾರಿಯ ಪಾತ್ರದಲ್ಲಿ ಧನಂಜಯ್

    ಈವತ್ತಿಗೂ ಅಪ್ಪ ಅಮ್ಮನೊಂದಿಗೆ ಸಾಯಿ ಬಾಬಾ ದೇವಸ್ಥಾನಕ್ಕೆ ಪಲ್ಲವಿ ತಪ್ಪದೇ ಹೋಗುತ್ತಾರೆ. ಅಲ್ಲಿನ ಆಶ್ರಮಗಳಲ್ಲಿ ಸೇವೆ ಮಾಡುತ್ತಾರೆ. ನಿತ್ಯವೂ ಸಾಯಿಯನ್ನು ನೆನೆಯುತ್ತಾರಂತೆ ಸಾಯಿ ಪಲ್ಲವಿ.

  • ದೇವಸ್ಥಾನದ ಪ್ರಸಾದ ಸೇವಿಸಿ 30 ಮಂದಿ ಅಸ್ವಸ್ಥ

    ದೇವಸ್ಥಾನದ ಪ್ರಸಾದ ಸೇವಿಸಿ 30 ಮಂದಿ ಅಸ್ವಸ್ಥ

    ಶಿವಮೊಗ್ಗ: ನಗರದ ಸಾಯಿಬಾಬಾ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪ್ರಸಾದ ಸೇವನೆ ಮಾಡಿದ 25 ರಿಂದ 30 ಮಂದಿ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಸಾಗರದಲ್ಲಿ ನಡೆದಿದೆ.

    ಸಾಗರ ನಗರಸಭೆ ವ್ಯಾಪ್ತಿಯ ವಿನೋಬನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರು ಪ್ರಸಾದ ಸೇವಿಸಿದ್ದರು. ಆದರೆ ಪ್ರಸಾದ ಸೇವಿಸಿದ ಹಲವು ಮಂದಿಗೆ ಶನಿವಾರ ಸಂಜೆ ಸುಮಾರಿಗೆ ವಾಂತಿ ಭೇದಿ ಆಗಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಅಸ್ವಸ್ಥಗೊಂಡಿದ್ದರು. ಅಸ್ವಸ್ಥರಾದವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕುತೂಹಲ ಮೂಡಿಸಿದ ರಮೇಶ್ ಜಾರಕಿಹೊಳಿ, ಯತ್ನಾಳ್ ರಹಸ್ಯ ಸಮಾಲೋಚನೆ!

    ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂದು ತಿಳಿದು ಬಂದಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಸಾಗರ ಶಾಸಕ ಹರತಾಳು ಹಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಆರೋಗ್ಯ ವಿಚಾರಿಸಿದರು. ಅಲ್ಲದೇ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ: ಕುಟುಕಿದ ಬಿಜೆಪಿ

  • ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಮೋದಿ

    ಸಮಾಧಿಸ್ಥರಾಗಿ 100 ವರ್ಷ: ಶಿರಡಿಗೆ ತೆರಳಿ ಬಾಬಾ ದರ್ಶನ ಪಡೆದ ಮೋದಿ

    ಮುಂಬೈ: ಸಾಯಿಬಾಬಾರು ಸಮಾಧಿಸ್ಥರಾಗಿ ಇಂದಿಗೆ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿರಡಿಗೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶುಕ್ರವಾರಕ್ಕೆ ಶಿರಡಿ ಸಾಯಿಬಾಬಾರ ಸಮಾಧಿಸ್ಥರಾಗಿ ನೂರು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯವರು ವಿಶೇಷ ಪೂಜೆ ನೆರವೇರಿಸಿದರು.

    ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದ ಬಳಿಕ, ಸಾಯಿಬಾಬಾ ಸಮಾಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಈ ‌ವೇಳೆ ಸಾಯಿಬಾಬಾರವರ ಬೆಳ್ಳಿಯ ನಾಣ್ಯಗಳನ್ನು ಸಹ ಬಿಡುಗಡೆಗೊಳಿಸಿದರು.

    ದೇವಾಲಯದ ಭೇಟಿಗೂ ಮುನ್ನ ಪ್ರಧಾನಿ ಆವಾಸ್ ಗ್ರಾಮೀಣ ಯೋಜನೆಯ ಫಲಾನುಭವಿಗಳಿಗೆ ಸಾರ್ವಜನಿಕ ಸಮಾರಂಭದಲ್ಲಿ ಮನೆಯ ಕೀಲಿ ಕೈಗಳನ್ನು ವಿತರಿಸಿದ್ದರು. ಇದಲ್ಲದೇ 29 ಜಿಲ್ಲೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದವನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ- ಪಂಥದ ಮುಖ್ಯಸ್ಥೆ ನೀಡಿದ ಉಪವಾಸದ ಸವಾಲು ಪೂರೈಸಲು ಹೋಗಿ ಸಾವು

    ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ- ಪಂಥದ ಮುಖ್ಯಸ್ಥೆ ನೀಡಿದ ಉಪವಾಸದ ಸವಾಲು ಪೂರೈಸಲು ಹೋಗಿ ಸಾವು

    ಮಾಸ್ಕೋ: ಸಾಯಿ ಬಾಬಾ ಪಂಥದ ಭಕ್ತೆಯಾಗಿದ್ದ ರಷ್ಯಾ ಮಹಿಳೆಯೊಬ್ಬರು ಉಪವಾಸದ ಸವಾಲು ಪೂರೈಸಲು ಹೋಗಿ ಸಾವನ್ನಪ್ಪಿದ್ದಾರೆ.

    ಒಳಾಂಗಣ ವಿನ್ಯಾಸಕಿ ಎಲೆನಾ ಸ್ಮೊರೊಡಿನೋವಾ(35) ತನ್ನ ಪತಿಯೊಂದಿಗೆ ವಿಚ್ಛೇದನವಾದ ಬಳಿಕ ಸಾಯಿ ಬಾಬಾ ಭಕ್ತೆಯಾಗಿದ್ದರು. ದಕ್ಷಿಣ ಕೇಂದ್ರ ರಷ್ಯಾದ ನೋವೋಸಿಬಿಸ್ರ್ಕ್ ನಗರದಲ್ಲಿ 2 ವರ್ಷಗಳ ಹಿಂದೆ ಎಲೆನಾ ಸಾಯಿ ಬಾಬಾ ಅನುಯಾಯಿಯಾದ ನಂತರ ಆಕೆ ನಮ್ಮೆಲ್ಲರಿಂದ ದೂರವಿದ್ದಳು ಎಂದು ಸಂಬಂಧಿಕರು ಹಾಗೂ ಸ್ನೇಹಿತರು ಹೇಳಿದ್ದಾರೆ.

    ಸೈಬೀರಿಯಾದವರಾದ ಎಲೆನಾ ತುಂಬಾ ಉತ್ಸಾಹ ಹಾಗೂ ಸಂತೋಷದಿಂದ ಇರುತ್ತಿದ್ದ ವ್ಯಕ್ತಿಯಾಗಿದ್ದರು. ಆದ್ರೆ ಪಂಥ ಸೇರಿದ ನಂತರ ಸಂಪೂರ್ಣ ಬದಲಾಗಿದ್ದರು. ಈ ಪಂಥವನ್ನ ಮಾಜಿ ಫ್ಯಾಶನ್ ಡಿಸೈನರ್ ಹಾಗೂ ಮನಶಾಸ್ತ್ರಜ್ಞೆ ಲೋಲಾ ಮುನ್ನಡೆಸುತ್ತಿದ್ದಳು. ಲೋಲಾ ತಾನು 2011 ರಲ್ಲಿ ವಿಧಿವಶರಾದ ಸತ್ಯ ಸಾಯಿ ಬಾಬಾ ಪ್ರತಿನಿಧಿ ಎಂದು ಹೇಳಿಕೊಂಡಿದ್ದಳು.

    ಲೋಲಾ ಎಲೆನಾಗೆ ದೀರ್ಘ ಉಪವಾಸ ಮಾಡುವ ಸವಾಲು ನೀಡುತ್ತಿದ್ದಳು. ಹಾಗೂ ತನ್ನ ಸ್ನೇಹಿತರ ಸಂಪರ್ಕದಿಂದ ದೂರವಿರಲು ಹೇಳುತ್ತಿದ್ದಳು ಎಂದು ಎಲೆನಾ ಸ್ನೇಹಿತರೊಬ್ಬರು ಹೇಳಿದ್ದಾರೆ.

    ಲೋಲಾ ನೀಡಿದ್ದ ಹಲವಾರು ಉಪವಾಸದ ಸವಾಲುಗಳನ್ನ ಎಲೆನಾ ಪೂರೈಸಿದ್ದರು. ಆದ್ರೆ ಕೊನೆಯ ಹಾಗೂ ಕಠಿಣ ಸವಾಲಾಗಿ ಮೂರು ವಾರಗಳ ಉಪವಾಸ ಮಾಡಲು ಹೇಳಿ ಮೊದಲೆರಡು ವಾರ ನೀರು ಕೂಡ ಸೇವಿಸದಂತೆ ಹೇಳಿದ್ದಳು. ಎಲೆನಾ ತಾನು ಈ ಸವಾಲನ್ನ ಕೈಬಿಡುತ್ತೇನೆ ಎಂದು ಲೋಲಾ ಗೆ ಹೇಳಿದ್ದರು. ಆದ್ರೆ ಅಪೌಷ್ಟಿಕತೆ ಹಾಗೂ ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಲೋಲಾ ಬೇಕೆಂತಲೇ ಎಲೆನಾಗೆ ತೊಂದರೆ ಮಾಡಲು ಹೀಗೆ ಮಾಡಿದ್ದಾಳೆ ಎಂದು ಎಲೆನಾ ಸ್ನೇಹಿತರು ಹೇಳಿದ್ದಾರೆ. ಸಂಪರ್ಕದ ಮೇಲೆ ನಿಷೇಧವಿದ್ದರೂ ಎಲೆನಾ ಬಾಯ್‍ಫ್ರೆಂಡ್ ಆಕೆಗೆ ಮೆಸೇಜ್ ಮಾಡಲು ಇಷ್ಟಪಡುತ್ತಿದ್ದ. ಇದರಿಂದ ಲೋಲಾಗೆ ಹೊಟ್ಟೆಉರಿ ಇತ್ತು ಎಂದು ಎಲೆನಾ ಸ್ನೇಹಿತರು ಅನುಮಾನಿಸಿದ್ದಾರೆ.

     

    ಎಲೆನಾ ಸಾವಿನ ನಂತರ ಲೋಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ಎದುರಿಸುವ ಸಾಧ್ಯತೆಯಿರೋದ್ರಿಂದ ಸದ್ಯ ತಲೆಮರೆಸಿಕೊಂಡಿದ್ದಾಳೆ.

  • ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

    ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

    ಬೆಂಗಳೂರು: ಶಿರಡಿ ಸಾಯಿಬಾಬಾನನ್ನು ನಂಬದ ಜೀವಗಳಿಲ್ಲ. ಬಾಬಾ ದರ್ಶನಕ್ಕೆ, ಅಲ್ಲಿನ ಪ್ರಸಾದ ತಿಂದರೆ ಬದುಕು ಪಾವನ ಅನ್ನೋ ನಂಬಿಕೆ ಕೋಟಿ ಭಕ್ತರದ್ದು. ಆದ್ರೇ ಈಗ ನಂಬಿಕೆಯ ಬುಡವೊಂದು ಅಲ್ಲಾಡುತ್ತಿದೆ. ಕೋಟಿ ಭಕ್ತರು ಬಾಬಾ ಪ್ರಸಾದ ಕಂಡ್ರೆ ಮಾರು ದೂರು ಓಡೋ ಪ್ರಮಾದವೊಂದು ನಡೆದು ಹೋಗಿದೆ.

    ಬಾಬಾ ಭಕ್ತರಾಗಿರುವ ಬೆಂಗಳೂರಿನ ಸದಾಶಿವನಗರದ ನಿವಾಸಿ ಪರಶುರಾಮ್ ಶಿರಡಿಗೆ ತೆರಳಿ ಅಲ್ಲಿಂದ ಮೂವತ್ತು ಪ್ಯಾಕೆಟ್ ಪ್ರಸಾದದ ಪೇಡಾವನ್ನು ಸನ್ನಿಧಿಯಿಂದ ಕಳೆದ ತಿಂಗಳು ತಂದಿದ್ದಾರೆ. ಬಾಬಾ ಪ್ರಸಾದ ತಿಂದ ತಕ್ಷಣ ಅವ್ರಿಗೆ ವಾಂತಿ, ಭೇದಿ, ಹೊಟ್ಟೆನೋವು ಶುರುವಾಗಿದೆ. ಕೂಡಲೇ ಪ್ರಸಾದವನ್ನ ಪರಿಶೀಲಿಸಿ ನೋಡಿದಾಗ ಪೇಡಾದಲ್ಲಿ ಕಪ್ಪು ಮೆಟಲ್‍ನಂತಹ ವಸ್ತು ಪತ್ತೆಯಾಗಿದೆ. ಸುಟ್ಟಾಗ ವಿಚಿತ್ರ ಪ್ಲಾಸ್ಟಿಕ್ ವಾಸನೆ ಬಂದಿದೆ. ಕೂಡಲೇ ಇದನ್ನು ರಾಮಯ್ಯ ಆಸ್ಪತ್ರೆಯ ಲ್ಯಾಬ್‍ಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೆ ನೀಡಿದ್ದಾರೆ. ಈಗ ಲ್ಯಾಬ್‍ನಿಂದ ಊಹಿಸಲಾರದ ಬಾಬಾ ಪ್ರಸಾದದ ಅಸಲಿಯತ್ತು ಬಯಲಾಗಿದೆ.

    ಏನೇನಿದೆ ಪ್ರಸಾದದಲ್ಲಿ?: ಬಾಬಾ ಪ್ರಸಾದದಲ್ಲಿ ರಾಶಿರಾಶಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿಯಾದ ಸ್ಟೆಪಿಲೋಕಾಕಯ್ ಹಾಗೂ ಸೂಡಾಮೋನಸ್ ಅನ್ನುವ ಬ್ಯಾಡ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸಾಮಾನ್ಯವಾಗಿ ಸೂಡಾಮೋನಸ್ ಗಾಯವಾಗಿರುವ, ಕೀವಾಗಿರುವ ಅಥವಾ ಹುಣ್ಣಾಗಿದ್ರೆ ಈ ಬ್ಯಾಕ್ಟೀರಿಯಾ ಇರುತ್ತೆ. ಇದು ಪ್ರಸಾದದಲ್ಲಿ ಕಂಡುಬಂದಿದೆ ಅಂದ್ರೆ ಪ್ರಸಾದ ತಯಾರಿಸುವ ವ್ಯಕ್ತಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ. ಅದ್ರಿಂದ ಪ್ರಸಾದವೇ ವಿಷವಾಗಿ ಮಾರ್ಪಾಡಾಗಿದೆ ಅನ್ನೋ ಶಾಕಿಂಗ್ ಸುದ್ದಿ ಲ್ಯಾಬ್ ರಿಪೋರ್ಟ್‍ನಲ್ಲಿ ಬಯಲಾಗಿದೆ. ಇದರ ಜೊತೆಗೆ ಪಾಲ್ಮೇಟಿಕ್ ಆ್ಯಸಿಡ್ ಅಂಶವೂ ಇದೆ. ಪೇಡಾಗೆ ಹಾಲು ಮಿಕ್ಸ್ ಮಾಡೋ ಬದಲು ವನಸ್ಪತಿ ಎಣ್ಣೆ ಬಳಕೆ ಮಾಡಿದ್ದು ಇನ್ನೊಂದು ಅನಾಹುತಕ್ಕೆ ಕಾರಣವಾಗಿದೆ.

    ಈ ಪ್ರಸಾದ ತಿಂದ್ರೆ ಏನಾಗುತ್ತೆ?: ಈ ವಿಷಯುಕ್ತ, ಕಲಬೆರೆಕೆ ಪ್ರಸಾದ ತಿಂದ್ರೆ ಹೊಟ್ಟೆನೋವು, ವಾಂತಿ-ಬೇಧಿ, ಜ್ವರ ಬಾಯಿಯ ಹುಣ್ಣು ಸೇರಿದಂತೆ ಟೈಫಾಯ್ಡ್, ಜಾಂಡೀಸ್‍ನಂತಹ ಕಾಯಿಲೆ ಬರಲಿದೆ. ಇಲ್ಲಿ ಸಂಪೂರ್ಣವಾಗಿ ಆಹಾರ ಸುರಕ್ಷತೆ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದೆ ಅಂತಾ ವೈದ್ಯರು ಹೇಳ್ತಾರೆ. ಇನ್ನು ಲ್ಯಾಬ್ ಟೆಸ್ಟ್‍ಗೆ ಕೊಟ್ಟ ಸಾಯಿ ಭಕ್ತರಂತೂ ಈ ರಿಪೋರ್ಟ್‍ನಿಂದ ಕಂಗಾಲಾಗಿದ್ದಾರೆ.