Tag: sachin tendulkar

  • ಸಚಿನ್ ವಿಶ್ವ ದಾಖಲೆ ಮುರಿಯೋ ಸನಿಹದಲ್ಲಿ ಕಿಂಗ್ ಕೊಹ್ಲಿ

    ಸಚಿನ್ ವಿಶ್ವ ದಾಖಲೆ ಮುರಿಯೋ ಸನಿಹದಲ್ಲಿ ಕಿಂಗ್ ಕೊಹ್ಲಿ

    – ಗಂಗೂಲಿ, ದ್ರಾವಿಡ್‍ರನ್ನ ಹಿಂದಿಕ್ಕಲಿದ್ದಾರೆ ವಿರಾಟ್

    ಧರ್ಮಶಾಲ: ರನ್ ಮೆಷಿನ್ ಖ್ಯಾತಿಯ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈಗ ಸಚಿನ್ ಹೆಸರಿನಲ್ಲಿರುವ ಮತ್ತೊಂದು ದಾಖಲೆಯನ್ನು ತಮ್ಮ ಮುಡಿಗೇರಿಸಿಕೊಳ್ಳುವ ಸನಿಹದಲ್ಲಿ ವಿರಾಟ್ ಇದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಗುರುವಾರದಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ 133 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

    ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ಈವರೆಗೂ 239 ಇನ್ನಿಂಗ್ಸ್ ಆಡಿದ್ದು, 43 ಶತಕ, 58 ಅರ್ಧಶತಕ ಸೇರಿ 11,867 ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 12,000 ರನ್‍ಗಳ ಮೈಲುಗಲ್ಲು ತಲುಪಲು ವಿರಾಟ್‍ಗೆ 133 ರನ್‍ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್ 133 ರನ್ ಗಳಿಸಿದರೆ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 12,000 ರನ್ ದಾಖಲಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಹಾಗೂ ವಿಶ್ವದ ಆರನೇ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

    ಜೊತೆಗೆ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆಗೂ ವಿರಾಟ್ ಭಾಜನವಾಗಲಿದ್ದಾರೆ. ಕೊಹ್ಲಿ ಇದುವರೆಗೆ ಆಡಿರುವ 239 ಇನ್ನಿಂಗ್ಸ್ ಗಳಲ್ಲಿ 11,867 ರನ್ ಪೇರಿಸಿದ್ದಾರೆ. ಪ್ರಸ್ತುತ ಏಕದಿನ ಕ್ರಿಕೆಟ್‍ನಲ್ಲಿ ಅತಿ ವೇಗದಲ್ಲಿ 12,000 ರನ್ ಗಳಿಸಿದ ದಾಖಲೆ ಭಾರತದ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ ತೆಂಡೂಲ್ಕರ್ 300ನೇ ಇನ್ನಿಂಗ್ಸ್ ನಲ್ಲಿ 12,000 ರನ್‍ಗಳ ದಾಖಲೆ ಬರೆದಿದ್ದರು.

    ಅತಿ ವೇಗದಲ್ಲಿ 12,000 ರನ್ ಸಾಧನೆ:
    ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ 300 ಇನ್ನಿಂಗ್ಸ್ ಗಳಲ್ಲಿ ವೇಗವಾಗಿ 12,000 ರನ್ ದಾಖಲಿಸಿ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್ ರಿಕಿ ಪಾಂಟಿಂಗ್ 314 ಇನ್ನಿಂಗ್ಸ್, ಶ್ರೀಲಂಕಾದ ಮಾಜಿ ಆಟಗಾರರಾದ ಕುಮಾರ ಸಂಗಕ್ಕರ 336 ಇನ್ನಿಂಗ್ಸ್, ಸನತ್ ಜಯಸೂರ್ಯ 379 ಇನ್ನಿಂಗ್ಸ್ ಹಾಗೂ ಮಹೇಲಾ ಜಯವರ್ಧನೆ 399 ಇನ್ನಿಂಗ್ಸ್ ಗಳಲ್ಲಿ 12,000 ರನ್‍ಗಳ ಸಾಧನೆ ಮಾಡಿದ್ದಾರೆ.

    ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು 452 ಇನ್ನಿಂಗ್ಸ್ ಗಳಲ್ಲಿ 18,426 ರನ್ ದಾಖಲಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶ್ರೀಲಂಕಾದ ಕುಮಾರ ಸಂಗಕ್ಕರ 14,234 ರನ್ ಹಾಗೂ ಮೂರನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 13,704 ರನ್ ಗಳಿಸಿದ್ದಾರೆ. ಉಳಿದಂತೆ ಸನತ್ ಜಯಸೂರ್ಯ 13,430 ರನ್ ಹಾಗೂ ಮಹೇಲಾ ಜಯವರ್ಧನೆ 12,650 ರನ್ ಗಳಿಸಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ. ನಂತರ ಅಂದ್ರೆ ಆರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 11,867 ರನ್ ಗಳಿಸಿದ್ದಾರೆ.

    ಗಂಗೂಲಿ, ದ್ರಾವಿಡ್ ಸಾಧನೆ:
    ದಕ್ಷಿಣ ಆಫ್ರಿಕಾ ವಿರುದ್ಧ ಈವರೆಗೂ 27 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ 64.35 ಸರಾಸರಿಯಲ್ಲಿ 1,287 ರನ್ ಚಚ್ಚಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗರರಾದ ಸೌರವ್ ಗಂಗೂಲಿ ಹರಿಣರ ವಿರುದ್ಧ 29 ಪಂದ್ಯ ಆಡಿ 1,313 ರನ್ ಹಾಗೂ ರಾಹುಲ್ ದ್ರಾವಿಡ್ 36 ಪಂದ್ಯಗಳನ್ನಾಡಿ 1,309 ರನ್ ಗಳಿಸಿದ್ದಾರೆ. ಈ ಇಬ್ಬರು ಆಟಗಾರರನ್ನು ಹಿಂದಿಕ್ಕಲು ವಿರಾಟ್‍ಗೆ 27 ರನ್‍ಗಳ ಅಗತ್ಯವಿದೆ. ಆದರೆ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 57 ಏಕದಿನ ಪಂದ್ಯವಾಡಿ 2001 ರನ್ ಗಳಿಸಿದ್ದಾರೆ.

  • ಸಚಿನ್‍ರನ್ನ ದೂರಿ, ವಿಶೇಷ ಮನವಿ ಸಲ್ಲಿಸಿದ ಇಂಜಮಾಮ್-ಉಲ್-ಹಕ್

    ಸಚಿನ್‍ರನ್ನ ದೂರಿ, ವಿಶೇಷ ಮನವಿ ಸಲ್ಲಿಸಿದ ಇಂಜಮಾಮ್-ಉಲ್-ಹಕ್

    – ತೆಂಡೂಲ್ಕರ್ ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ

    ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ಅಪಾಯಕಾರಿ ಬೌಲರ್ ಕೂಡ ಹೌದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.

    ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಪೂರ್ಣ ಸಂಚಿಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ಅವರನ್ನು ಹೊಗಳಿದ್ದಾರೆ. ಜೊತೆಗೆ ಸಚಿನ್ ಅವರು ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ ಎಂದು ದೂರಿದ್ದಾರೆ.

    ನಾನು ವಿಶ್ವದ ಎಲ್ಲಾ ಲೆಗ್ ಸ್ಪಿನ್ನರ್‌ಗಳನ್ನು ಎದುರಿಸಿದ್ದೇನೆ. ಯಾರೇ ಗೂಗ್ಲಿ ಎಸೆದರೂ ನನಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸಚಿನ್ ಅವರ ಗೂಗ್ಲಿ ಎಸೆತಗಳನ್ನು ಎದುರಿಸುವಲ್ಲಿ ಪರದಾಡುತ್ತಿದ್ದೆ. ಇದೇ ಕಾರಣಕ್ಕೆ ಸಚಿನ್ ಅನೇಕ ಬಾರಿ ನನ್ನ ವಿಕೆಟ್ ಕಿತ್ತು, ಪೆವಿಲಿಯನ್‍ಗೆ ಅಟ್ಟಿದ್ದರು ಎಂದು ಇಂಜಮಾಮ್ ಹೇಳಿದ್ದಾರೆ.

    ಅತ್ಯಂತ ಶ್ರೇಷ್ಠ ಪದವಿ ಇದ್ದರೆ, ಅದನ್ನು ಸಚಿನ್ ಅವರಿಗೆ ನೀಡಲು ಬಯಸುತ್ತೇನೆ. 16ನೇ ವಯಸ್ಸಿನಲ್ಲಿ ಅವರು ಇಮ್ರಾನ್ ಖಾನ್, ವಾಕರ್ ಯೂನಿಸ್ ಮತ್ತು ವಾಸಿಮ್ ಅಕ್ರಮ್ ಅವರಂತಹ ಬೌಲರ್‍ಗಳನ್ನು ಎದುರಿಸಿದ್ದರು. ಸಚಿನ್ ಚೊಚ್ಚಲ ಸರಣಿಯ ಪಂದ್ಯವೊಂದರಲ್ಲಿ ಪೇಶಾವರದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಮುಷ್ತಾಕ್ ಅಹ್ಮದ್ ಅವರ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ನಂತರ ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಅಬ್ದುಲ್ ಖಾದಿರ್ ಅವರನ್ನು ಎದುರಿಸಿದ್ದರು. ಪಂದ್ಯದ ವೇಳೆ ಖಾದಿರ್ ಅವರು, ಸಚಿನ್ ಅವರನ್ನು ಕೆಣಕಿದ್ದರು. ಆಗ ಪ್ರತ್ಯುತ್ತರವಾಗಿ ಸಚಿನ್ ಕದೀರ್ ಅವರು ಎಸೆದ ಓವರಿನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ್ದರು ಎಂದು ಇಂಜಮಾಮ್ ನೆನೆದಿದ್ದಾರೆ.

    ಸಚಿನ್ ಯುಗವನ್ನು ಬದಲಾಯಿಸಿದ್ರು:
    ‘ಯಾವುದೇ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳು 8 ಸಾವಿರಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಗದ ಅವಧಿಯಲ್ಲಿ ಸಚಿನ್ ಆಡಿದ್ದರು. ಈ ವೇಳೆ ಭಾರತದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರು 10 ಸಾವಿರ ರನ್ ಗಳಿಸಿದ್ದರು. ಆದರೆ ಸಚಿನ್ ಅವರಿಂದ ಸ್ಫೂರ್ತಿ ಪಡೆದು 35 ಸಾವಿರ ರನ್ ಗಳಿಸಿದ್ದಾರೆ. ಅವರ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದನ್ನು ಈಗ ನೋಡಬೇಕಿದೆ. ಜಗತ್ತಿನಲ್ಲಿ ಸಚಿನ್ ಅವಗಿರುವಷ್ಟು ಯಾವ ಕ್ರಿಕಟ್ ಆಟಗಾರರಿಗೂ ಅಭಿಮಾನಿಗಳಿಲ್ಲ. ಸಚಿನ್ ಬೌಲರ್ ಆಗಿರಲಿಲ್ಲ. ಆದರೆ ಅವರು ಮಧ್ಯಮ ವೇಗಿ ಹಾಗೂ ಲೆಗ್ ಸ್ಪಿನ್ನರ್ ಆಗಿ ಮಿಂಚಿದ್ದಾರೆ’ ಎಂದು ಹೇಳಿದರು.

    ಕೊನೆಗೆ ಇಂಜಮಾಮ್ ಸಚಿನ್‍ಗೆ ಒಂದು ಸಂದೇಶ ನೀಡಿದರು. ‘ಈ ಮಹಾನ್ ಆಟಗಾರನಿಂದ ನನಗೆ ದೂರು ಇದೆ. ತಾವು ಹೊಂದಿದ್ದ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳಲಿಲ್ಲ. ಅವರು ತಮ್ಮ ಅನುಭವವನ್ನು ಬೇರೆಯವರೊಂದಿಗೆ, ವಿಶೇಷವಾಗಿ ಯುವಕರೊಂದಿಗೆ ಹಂಚಿಕೊಳ್ಳದೆ ಕ್ರಿಕೆಟ್‍ನಿಂದ ದೂರವಿರುವುದು ಸರಿಯಲ್ಲ. ಸಚಿನ್ ಇದರ ಬಗ್ಗೆ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕೇಳಿಕೊಂಡಿದರು.

  • 2011ರ ವಿಶ್ವಕಪ್ ಗೆಲುವಿನಲ್ಲಿ ಕ್ರೀಡೆಯ ಶಕ್ತಿಯನ್ನು ಅನುಭವಿಸಿದ್ದೇನೆ: ಸಚಿನ್

    2011ರ ವಿಶ್ವಕಪ್ ಗೆಲುವಿನಲ್ಲಿ ಕ್ರೀಡೆಯ ಶಕ್ತಿಯನ್ನು ಅನುಭವಿಸಿದ್ದೇನೆ: ಸಚಿನ್

    – ಸಚಿನ್‍ಗೆ ಲಾರೆಸ್ ಸ್ಪೋರ್ಟಿಂಗ್ ಪ್ರಶಸ್ತಿ
    – ಮೆಸ್ಸಿ, ಹ್ಯಾಮಿಲ್ಟನ್ ವರ್ಷದ ಕ್ರೀಡಾಪಟು

    ಬರ್ಲಿನ್: ಜರ್ಮನಿಯ ರಾಜಧಾನಿ ಬರ್ಲಿನ್‍ನಲ್ಲಿ ಮಂಗಳವಾರ ನಡೆದ 2011ರ ವಿಶ್ವಕಪ್ ವಿಜೇತ ಕ್ಷಣಕ್ಕಾಗಿ ಲಾರೆಸ್ ಸ್ಪೋರ್ಟಿಂಗ್ ಮೊಮೆಂಟ್ ಪ್ರಶಸ್ತಿಗೆ ಸಚಿನ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.

    ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿನ್, ಈ ಟ್ರೋಫಿಯನ್ನು ಎತ್ತಿ ಹಿಡಿಯಲು ಹಾಗೂ ಪ್ರಶಸ್ತಿಯನ್ನು ನೀಡಿರುವುದಕ್ಕಾಗಿ ಲಾರೆಸ್ ಪ್ರಶಸ್ತಿ ಅಕಾಡೆಮಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸಂದರ್ಭ ನನ್ನ ಪಾಲಿಗೆ ತುಂಬಾನೇ ವಿಶೇಷವಾಗಿದೆ. ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು ಎಂದು ಭಾವುಕರಾಗಿ ನುಡಿದರು.

    ವಿಶ್ವಕಪ್ ಗೆಲುವಿನ ಸಂಭ್ರಮ:
    2011ರಲ್ಲಿ ತವರು ನೆಲದಲ್ಲಿ ವಿಶ್ವಕಪ್ ಗೆದ್ದಿದ್ದು ನಿಜಕ್ಕೂ ಅದ್ಭುತವಾಗಿತ್ತು. ಎಲ್ಲರೂ ಜೊತೆಯಾಗಿ ಸೇರಿಕೊಂಡು ವಿಜಯೋತ್ಸವನ್ನು ಆಚರಿಸಿದರು. ಇದು ಕ್ರೀಡೆ ಎಷ್ಟೊಂದು ಶಕ್ತಿಶಾಲಿಯಾಗಿದೆ ಎನ್ನುವುದನ್ನು ನೆನಪಿಸುತ್ತದೆ. ನಾನು ಕ್ರೀಡೆಯ ಶಕ್ತಿಯನ್ನು ಅನುಭವಿಸಿದ್ದೇನೆ. ವಿಶ್ವಕಪ್ ಗೆಲುವಿನ ಕ್ಷಣವು ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಆ ಕ್ಷಣ ನಿಸ್ಸಂಶವಾಗಿಯೂ ನನ್ನ ಜೀವನದ ಹೆಮ್ಮೆಯ ಕ್ಷಣ ಇದಾಗಿದೆ ಎಂದು ನೆನೆದರು.

    22 ವರ್ಷಗಳವರೆಗೆ ವಿಶ್ವಕಪ್ ಕನಸನ್ನು ಬೆನ್ನಟ್ಟಿ ಟ್ರೋಫಿ ಎತ್ತಿ ಹಿಡಿದಿದ್ದೇನೆ. ಈ ಪ್ರಯಾಣದಲ್ಲಿ ನಾನು ಯಾವತ್ತೂ ಕನಸನ್ನು ಕೈಚೆಲ್ಲಲಿಲ್ಲ, ಸೋಲನ್ನು ಒಪ್ಪಿಕೊಳ್ಳಲಿಲ್ಲ. 24 ವರ್ಷಗಳ ಕಾಲ ಭಾರತಕ್ಕಾಗಿ ಕ್ರಿಕೆಟ್ ಆಡಿದ್ದೇನೆ. ನನ್ನ ಪಾಲಿಗಿದು ಕನಸು ನನಸಾದ ಕ್ಷಣವಾಗಿತ್ತು ಎಂದು ಹೆಮ್ಮೆ ವ್ಯಕ್ತಪಡಿಸಿದರು.

    ಮಂಡೇಲಾರನ್ನ ನೆನೆದ ಸಚಿನ್:
    ಈ ಸಂದರ್ಭದ ಕ್ಷಣದಲ್ಲಿ ವಿಚಾರವೊಂದನ್ನು ಪ್ರಸ್ತಾಪಿಸುತ್ತಿರುವೆ. 19ನೇ ವಯಸ್ಸಿನಲ್ಲೇ ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ಭೇಟಿ ಮಾಡುವ ಅದೃಷ್ಟ ನನಗೆ ಸಿಕ್ಕಿತ್ತು. ಅವರ ವಿಚಾರಗಳು ನಾಯಕತ್ವದ ಮೇಲೆ ಪರಿಣಾಮ ಬೀರಲಿಲ್ಲ. ಅವರ ಸಂದೇಶಗಳಲ್ಲಿ ನನ್ನ ಪ್ರಕಾರ ಅತಿ ಮುಖ್ಯವಾದುದು ಏನೆಂದರೆ, ಕ್ರೀಡೆ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿಯನ್ನು ಹೊಂದಿದೆ ಎಂಬುದು ಎಂದು ಹೇಳಿದರು.

    ಈ ಕಾರ್ಯಕ್ರದಲ್ಲಿ ಇಂದು ಅನೇಕ ಶ್ರೇಷ್ಠ ಅಥ್ಲೀಟ್‍ಗಳೊಂದಿಗೆ ಕುಳಿತುಕೊಳ್ಳುವಾಗ ಕೆಲವರು ಶ್ರೇಷ್ಠವಾದ ಅವಕಾಶವೊಂದನ್ನು ಪಡೆಯದೇ ಇರಬಹುದು. ಆದರೆ ತಮಗೆ ಸಿಕ್ಕಿರುವ ಅವಕಾಶವನ್ನು ಅತ್ಯುತ್ತಮವಾಗಿ ಪರಿವರ್ತಿಸಿಕೊಂಡು ಬೆಳೆದಿದ್ದಾರೆ. ಹೀಗೆ ಯುವ ಜನಾಂಗ ಕ್ರೀಡಾ ಸ್ಫೂರ್ತಿಯೊಂದಿಗೆ ಬೆಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಸಚಿನ್ ತೆಂಡೂಲ್ಕರ್ ಅವರು ‘ದೇಶವನ್ನು ಹೆಗಲ ಮೇಲೆ ಹೊತ್ತುಕೊಂಡಿರುವ ಕ್ಷಣ’ಕ್ಕಾಗಿ ಪ್ರತಿಷ್ಠಿತ ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತವು 2011ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು 6 ವಿಕೆಟ್‍ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದಿತು. ಆಗ ಸಚಿನ್ ಅವರನ್ನು ಟೀಂ ಇಂಡಿಯಾ ಆಟಗಾರರು ತಮ್ಮ ಭುಜದ ಹೊತ್ತು ಕ್ರೀಡಾಂಗಣದಲ್ಲಿ ಹೆಜ್ಜೆ ಹಾಕಿದ್ದರು. ಈ ಮೂಲಕ 22 ವರ್ಷಗಳಿಂದ ಕಾಯುತ್ತ ಬಂದಿದ್ದ ಸಚಿನ್ ಅವರ ಕನಸು ಈಡೇರಿತ್ತು.

    ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯು 20ನೇ ವರ್ಷಕ್ಕೆ ಕಾಲಿರಿಸಿದ ಸಂಭ್ರಮಾಚರಣೆಯ ಭಾಗವಾಗಿ ಸ್ಫೂರ್ತಿದಾಯಕ ಕ್ರೀಡಾ ಕ್ಷಣವನ್ನು ಆಯ್ಕೆ ಮಾಡಲು ಸಾರ್ವಜನಿಕರಿಗೆ ಅವಕಾಶ ನೀಡಿ ಮತದಾನಕ್ಕೆ ಅವಕಾಶ ಕೊಡಲಾಗಿತ್ತು. ಈ ಮತದಾನ ಪ್ರಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್ ಅವರು ಅತಿ ಹೆಚ್ಚು ಮತಗಳನ್ನು ಪಡೆದುಕೊಂಡು ಪ್ರತಿಷ್ಠಿತ ಲಾರೆಸ್ ಕ್ರೀಡಾ ಕ್ಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    6 ಬಾರಿಯ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್ ಮತ್ತು 6 ಬಾರಿ ಫಿಫಾ ವಲ್ರ್ಡ್ ಪ್ಲೇಯರ್ ಆಫ್ ದಿ ಇಯರ್ ಮೆಸ್ಸಿ ಇಬ್ಬರು ಸಮಾನಾಗಿ ಮತ ಪಡೆದರು. ಹೀಗಾಗಿ ಲಾರೆಸ್ ಪ್ರಶಸ್ತಿಯ 20 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಆಟಗಾರರನ್ನು ವರ್ಷದ ಕ್ರೀಡಾಪಟುಗಳಾಗಿ ಆಯ್ಕೆ ಮಾಡಲಾಗಿದೆ. ಜೊತೆಗೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಫುಟ್ಬಾಲ್ ಆಟಗಾರ ಎಂಬ ಹಿರಿಮೆಗೆ ಮೆಸ್ಸಿ ಪಾತ್ರರಾಗಿದ್ದಾರೆ.

    ಲಾರೆಸ್ ಪ್ರಶಸ್ತಿ ಎಂದರೇನು?
    ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ. ಇದನ್ನು 1999ರಲ್ಲಿ ಲಾರೆಸ್ ಸ್ಪೋರ್ಟ್ ಫಾರ್ ಗುಡ್ ಫೌಂಡೇಶನ್‍ನ ಡೈಮ್ಲರ್ ಮತ್ತು ರಿಚ್ಮಾಂಟ್ ಪ್ರಾರಂಭಿಸಿದರು. ಮೊದಲ ಪ್ರಶಸ್ತಿಗಳನ್ನು 2000ರ ಮೇ 25ರಂದು ನೀಡಲಾಯಿತು. ಇದರಲ್ಲಿ 13 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಶಸ್ತಿಯ ಪ್ರಮುಖ ವಿಭಾಗಗಳು ವರ್ಷದ ಲಾರೆಸ್ ವಿಶ್ವ ಕ್ರೀಡಾಪಟು, ವರ್ಷದ ಲಾರೆಸ್ ವಿಶ್ವ ಕ್ರೀಡಾಪಟು, ವರ್ಷದ ಲಾರೆಸ್ ವಿಶ್ವ ತಂಡ, ವರ್ಷದ ಲಾರೆಸ್ ವಿಶ್ವ ಪುನರಾಗಮನ ಮತ್ತು ವರ್ಷದ ಲಾರೆಸ್ ವಿಶ್ವ ಪ್ರಗತಿ ಆಗಿವೆ.

  • ಐದೂವರೆ ವರ್ಷದ ಬಳಿಕ ಬ್ಯಾಟ್ ಹಿಡಿದು ಮಹಿಳಾ ಬೌಲರ್‌ನನ್ನು ಎದುರಿಸಿದ ಸಚಿನ್- ವಿಡಿಯೋ

    ಐದೂವರೆ ವರ್ಷದ ಬಳಿಕ ಬ್ಯಾಟ್ ಹಿಡಿದು ಮಹಿಳಾ ಬೌಲರ್‌ನನ್ನು ಎದುರಿಸಿದ ಸಚಿನ್- ವಿಡಿಯೋ

    ಮೆಲ್ಬರ್ನ್: ಇಲ್ಲಿನ ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾದ ಬುಷ್‍ಫೈರ್ ಪರಿಹಾರಕ್ಕೆ ನೆರವಾಗಲು ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿಯಿಂದ ಹೊರಬಂದು ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

    ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರು ಆಸ್ಟ್ರೇಲಿಯಾದ ಮಹಿಳಾ ವೇಗದ ಬೌಲರ್ ಎಲಿಸ್ ಪೆರ್ರಿ ಎಸೆದ ವಿಶೇಷ ಓವರ್‌ನಲ್ಲಿ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಐದೂವರಿ ವರ್ಷಗಳ ಬಳಿಕ ಸಚಿನ್ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.

    ಸಚಿನ್ ತೆಂಡೂಲ್ಕರ್ ಅವರು ಎಲಿಸ್ ಪೆರ್ರಿ ಎಸೆದ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಬಳಿಕ ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಎಲಿಸ್ ಪೆರ್ರಿ ಬಳಿಕ ಆಸ್ಟ್ರೇಲಿಯಾ ಮಹಿಳಾ ತಂಡದ ಮತ್ತೋರ್ವ ಮಹಿಳಾ ಬೌಲರ್ ಎಸೆತಗಳನ್ನು ಸಚಿನ್ ಎದುರಿಸಿದರು.

    ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿತ್ತು. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

    https://www.facebook.com/cricketcomau/videos/2552024751723036/?t=157&v=2552024751723036

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಸಚಿನ್, ಉತ್ತಮ ಮನವಿ ಎಲಿಸ್. ನಾನು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದರು.

    ಅಷ್ಟೇ ಅಲ್ಲದೆ ಸಚಿನ್ ಎಲಿಸ್ ಪೆರ್ರಿ ಅವರಿಗೆ ಸವಾಲೊಂದನ್ನು ಹಾಕಿದ್ದರು. ಭಾನುವಾರ ನಡೆಯುವ ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಸಾಕಷ್ಟು ಹಣ ಬರುತ್ತದೆ. ಆ ಒಂದು ಓವರಿನಲ್ಲಿ ನನ್ನನ್ನು ಔಟ್ ಮಾಡಿ ಎಂದು ಎಲಿಸ್ ಪೆರ್ರಿ ಅವರಿಗೆ ಹೇಳಿದ್ದರು.

    ಜಂಕ್ಷನ್ ಓವಲ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಪಾಂಟಿಂಗ್ ನಾಯಕತ್ವದ ತಂಡ ಬ್ರಿಯಾನ್ ಲಾರಾ 30 ರನ್ (11 ಎಸೆತ), ರಿಕ್ಕಿ ಪಾಂಟಿಂಗ್ 26 ರನ್ (14 ಎಸೆತ), ಮ್ಯಾಥ್ಯೂ ಹೇಡನ್ 16 ರನ್ (14 ಎಸೆತ), ಲ್ಯೂಕ್ ಹಾಡ್ಜ್ ಔಟಾಗದೆ 11 ರನ್ (4 ಎಸೆತ) ಸೇರಿ ನಿಗದಿತ 10 ಓವರಿಗೆ 5 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿತ್ತು. ಇದೇ ಸಮಯದಲ್ಲಿ ಗಿಲ್‍ಕ್ರಿಸ್ಟ್ ತಂಡದ ಯುವರಾಜ್ ಸಿಂಗ್, ಆ್ಯಡ್ರ್ಯೂ ಸೈಮಂಡ್ಸ್ ಹಾಗೂ ಕಟ್ರ್ನಿ ವಾಲ್ಷ್ ತಲಾ ಒಂದು ವಿಕೆಟ್ ಪಡೆದರು. ಆದರೆ ಪಾಂಟಿಂಗ್ ತಂಡ ನೀಡಿದ್ದ 105 ರನ್‍ಗಳ ಗುರಿ ಬೆನ್ನಟ್ಟಿದ ಆ್ಯಡಮ್ ಗಿಲ್‍ಕ್ರಿಸ್ಟ್ ತಂಡವು ಒಂದು ರನ್‍ನಿಂದ ಸೋಲು ಒಪ್ಪಿಕೊಂಡಿತು.

  • 1 ಓವರ್ ಆಡಲು ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಸಚಿನ್

    1 ಓವರ್ ಆಡಲು ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಸಚಿನ್

    ಮೆಲ್ಬರ್ನ್: ಒಂದು ಓವರ್ ಆಡಲು ನಿವೃತ್ತಿಯಿಂದ ಹೊರಬನ್ನಿ ಎಂಬ ಆಸ್ಟ್ರೇಲಿಯಾ ಮಹಿಳಾ ತಂಡ ಕ್ರಿಕೆಟರ್ ಮನವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಒಪ್ಪಿಕೊಂಡಿದ್ದಾರೆ.

    ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ಆಲ್‍ರೌಂಡರ್ ಎಲಿಸ್ ಪೆರ್ರಿ ಅವರ ವಿಡಿಯೋವನ್ನು ಟ್ವೀಟ್ ಮಾಡಿದೆ. ಈ ವಿಡಿಯೋದಲ್ಲಿ ಎಲಿಸ್ ಪೆರ್ರಿ, ಹಾಯ್ ಸಚಿನ್. ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದಗಳು. ನೀವು ರಿಕ್ಕಿ ಪಾಂಟಿಂಗ್ ತಂಡಕ್ಕೆ ಕೋಚ್ ಆಗಿರುವುದು ನನಗೆ ಗೊತ್ತಿದೆ. ಪಂದ್ಯದ ವಿಶ್ರಾಂತಿ ವೇಳೆ ಒಂದು ಓವರ್ ಆಡಲು ನೀವು ನಿವೃತ್ತಿಯಿಂದ ಹೊರಬಂದರೆ ನಾವು ಹೆಚ್ಚು ಖುಷಿ ಪಡುತ್ತೇವೆ ಎಂದು ಕೇಳಿಕೊಡಿದ್ದರು.

    ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿನ್, ಉತ್ತಮ ಮನವಿ ಎಲಿಸ್. ನಾನು ಅಲ್ಲಿಗೆ ಹೋಗಲು ಮತ್ತು ಒಂದು ಓವರ್ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ನನ್ನ ಭುಜದ ಗಾಯದಿಂದಾಗಿ ವೈದ್ಯರು ಆಡದಂತೆ ಸಲಹೆ ನೀಡಿದ್ದಾರೆ. ಈಗ ನಾನು ಆಡುವುದು ಅವರ ಸಲಹೆಗೆ ವಿರುದ್ಧವಾಗಿರುತ್ತದೆ. ಆದರೂ ಮೈದಾಕ್ಕಿಳಿಯುತ್ತೇನೆ ಎಂದು ತಿಳಿಸಿದ್ದಾರೆ.

    ಅಷ್ಟೇ ಅಲ್ಲದೆ ಸಚಿನ್ ಎಲಿಸ್ ಪೆರ್ರಿ ಅವರಿಗೆ ಸವಾಲೊಂದನ್ನು ಹಾಕಿದ್ದಾರೆ. ಭಾನುವಾರ ನಡೆಯುವ ಬುಷ್‍ಫೈರ್ ಕ್ರಿಕೆಟ್ ಪಂದ್ಯಕ್ಕೆ ಸಾಕಷ್ಟು ಹಣ ಬರುತ್ತದೆ. ಆ ಒಂದು ಓವರಿನಲ್ಲಿ ನನ್ನನ್ನು ಔಟ್ ಮಾಡಿ ಎಂದು ಎಲಿಸ್ ಪೆರ್ರಿ ಅವರಿಗೆ ಹೇಳಿದ್ದಾರೆ.

    ಮೆಲ್ಬರ್ನ್ ನ ಜಂಕ್ಷನ್ ಓವಲ್ ಮೈದಾನದಲ್ಲಿ ಭಾನುವಾರ ಬುಷ್ ಪೈರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಗಳಾದ ಆಡಂ ಗಿಲ್‍ಕ್ರಿಸ್ಟ್ ಹಾಗೂ ರಿಕ್ಕಿ ಪಾಂಟಿಂಗ್ ನೇತೃತ್ವದ ತಂಡಗಳು ಆಡಲಿವೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ರಿಕ್ಕಿ ಪಾಂಟಿಂಗ್ ತಂಡದ ಕೋಚ್ ಆಗಿದ್ದಾರೆ.

  • 2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

    2020ಕ್ಕೆ ಸ್ಫೂರ್ತಿದಾಯಕ ವಿಡಿಯೋ ಟ್ವೀಟ್ ಮಾಡಿದ ಸಚಿನ್ – ಧನ್ಯವಾದ ತಿಳಿಸಿದ ಬಾಲಕ

    ರಾಂಚಿ: 2020ಕ್ಕೆ ಸ್ವಾಗತ ಕೋರಿರುವ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್, ಮುಂದಿನ ದಶಕವನ್ನು ಮಕ್ಕಳ ಭವಿಷ್ಯಕ್ಕಾಗಿ ಮೀಸಲಿರುಸವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕನೊಬ್ಬನ ವಿಡಿಯೋ ಟ್ವೀಟ್ ಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.

    ಸಚಿನ್ ಟ್ವೀಟ್ ಮಾಡಿರುವ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಈ ವಿಡಿಯೋದಲ್ಲಿರುವ ಬಾಲಕ ಮದ್ದ ರಾಮ್ ಸಚಿನ್ ಅವರಿಗೆ ಧನ್ಯವಾದ ತಿಳಿಸಿದ್ದಾನೆ.

    ಸಚಿನ್ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ 13 ವರ್ಷದ ಮದ್ದ ರಾಮ್ ಎಂಬ ಬಾಲಕ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಾ ರನ್ ಪಡೆಯುತ್ತಿರುವುದನ್ನು ಕಾಣಬಹುದು. ಆದರೆ ಬಾಲಕ ಮದ್ದ ರಾಮ್ ವಿಕಲ ಚೇತನ ಬಾಲಕನಾಗಿದ್ದು, ಆತನ ಜೀವನೋತ್ಸಾಹಕ್ಕೆ ಫಿದಾ ಆಗಿದ್ದ ಸಚಿನ್ ವಿಡಿಯೋ ಟ್ವೀಟ್ ಮಾಡಿದ್ದರು.

    ಬಾಲಕ ಮದ್ದ ರಾಮ್ ಚತ್ತೀಸ್‍ಗಢದ ದಂತೇವಾಡ ಜಿಲ್ಲೆಯ ಕಾಂಟೆಕಲ್ಯಾಣ್ ಎಂಬ ಸಣ್ಣ ಗ್ರಾಮದ ನಿವಾಸಿಯಾಗಿದ್ದು, ಕ್ರಿಕೆಟ್ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾನೆ. ರಾಮ್ ಮಂಡಿಯ ಸಹಾಯದಿಂದಲೇ ತೆವಳುತ್ತಾ ರನ್ ಪಡೆಯುತ್ತಿದ್ದ. ಆ ಬಳಿಕ ಸ್ಟ್ರೈಕ್ ನಲ್ಲಿದ್ದ ಬಾಲಕನಿಗೆ ಮುಂದೇ ಸಾಗಿ ಬ್ಯಾಟ್ ಕೂಡ ನೀಡುತ್ತಿದ್ದ. ಈ ವಿಡಿಯೋ ಹಲವರಿಗೆ ಸ್ಫೂರ್ತಿದಾಯಕವಾಗಿತ್ತು.

    ‘ಈ ಸ್ಫೂರ್ತಿದಾಯಕ ವಿಡಿಯೋದೊಂದಿಗೆ ಹೊಸ ವರ್ಷವನ್ನು ಆರಂಭಿಸಿ. ವಿಡಿಯೋ ನನ್ನ ಮನಸ್ಸನ್ನು ಮಿಡಿಯುವಂತೆ ಮಾಡಿತು. ನಿಮಗೂ ಇದೇ ಅನುಭವವಾಗುತ್ತದೆ’ ಎಂದು ಸಚಿನ್ ತಮ್ಮ ಟ್ವೀಟ್‍ನಲ್ಲಿ ತಿಳಿಸಿದ್ದರು. ಸಚಿನ್ ಅವರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಾಲಕ ಮದ್ದ ರಾಮ್, ನನ್ನ ಕ್ರಿಕೆಟ್ ದೇವರು ಸಚಿನ್ ಅವರಿಗೆ ಧನ್ಯವಾದ. ಸಚಿನ್ ಎಂದರೇ ನನಗೆ ತುಂಬಾ ಇಷ್ಟ. ನನ್ನ ವಿಡಿಯೋವನ್ನು ಅವರು ಸ್ವತಃ ಹಂಚಿಕೊಂಡಿದ್ದು ಮತ್ತಷ್ಟು ಖುಷಿ ತಂದಿದೆ. ಅವರು ತಮ್ಮ ಗ್ರಾಮಕ್ಕೆ ಬರಬೇಕೆಂದು ಇಚ್ಛಿಸುತ್ತೇನೆ. ನಾನು ಹೆಚ್ಚಿನ ಶಿಕ್ಷಣ ಪಡೆದು ಡಾಕ್ಟರ್ ಆಗಬೇಕೆಂಬ ಆಸೆ ಇದೆ ಎಂದು ತಿಳಿಸಿದ್ದಾನೆ. ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯ ಶಿಕ್ಷಣ ಇಲಾಖೆಯ ಬ್ಲಾಕ್ ಅಧಿಕಾರಿ ಬಾಲಕನನ್ನು ಭೇಟಿ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

  • ಲಿಫ್ಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ನೀಡಿದ್ದ ಸಲಹೆಯಿಂದ ಸಚಿನ್ ಕ್ರಿಕೆಟ್ ಲೈಫ್ ಬದಲಾಯ್ತು

    ಲಿಫ್ಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ನೀಡಿದ್ದ ಸಲಹೆಯಿಂದ ಸಚಿನ್ ಕ್ರಿಕೆಟ್ ಲೈಫ್ ಬದಲಾಯ್ತು

    ಚೆನ್ನೈ: ಸಚಿನ್ ಅಭಿಮಾನಿಗಳಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುವುದಕ್ಕೆ, ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದ ವಿಡಿಯೋ ಸಾಕ್ಷಿಯಾಗಿತ್ತು. ಬಹುವರ್ಷಗಳ ಹಿಂದೆ ಅಚನಾಕ್ ಆಗಿ ಭೇಟಿಯಾಗಿದ್ದ ಅಭಿಮಾನಿಯನ್ನು ಮತ್ತೆ ಭೇಟಿ ಮಾಡಲು ಸಹಾಯ ಮಾಡುವಂತೆ ಸಚಿನ್ ಟ್ವೀಟ್‍ನಲ್ಲಿ ಮನವಿ ಮಾಡಿದ್ದರು. ಅವರ ಆಸೆಯಂತೆ ಸದ್ಯ ಅಭಿಮಾನಿಯ ವಿವರ ಲಭಿಸಿದ್ದು, ತಮ್ಮ ಮನೆಗೆ ಬರುವಂತೆ ಸಚಿನ್ ಅವರಿಗೆ ಅಭಿಮಾನಿ ಅಹ್ವಾನ ನೀಡಿದ್ದಾರೆ.

    ‘ಬಹಳ ಸಮಯದ ಹಿಂದೆ ಚೆನ್ನೈ ತಾಜ್ ಹೋಟೆಲ್‍ನಲ್ಲಿ ಒಬ್ಬರನ್ನು ಭೇಟಿ ಮಾಡಿದ್ದೆ. ಅಂದು ನಾನು ಬಳಕೆ ಮಾಡುತ್ತಿದ್ದ ಎಲ್ಬೋ ಗಾರ್ಡ್ ಬಗ್ಗೆ ಆತ ಸಲಹೆ ನೀಡಿದ್ದ. ಆತನ ಸಲಹೆ ಮೇರೆಗೆ ನಾನು ಎಲ್ಬೋ ಗಾರ್ಡ್ ನಲ್ಲಿ ಬದಲಾವಣೆ ಮಾಡಿದ್ದೆ. ಇದರಿಂದಾಗಿ ನಾನು ಉತ್ತಮ ಪ್ರದರ್ಶನ ನೀಡಲು ಆರಂಭಿಸಿದೆ. ಆತ ಈಗ ಎಲ್ಲಿದ್ದಾನೆ ನನಗೆ ತಿಳಿದಿಲ್ಲ. ನಿಮಗೆ ಮಾಹಿತಿ ಇದ್ದರೆ ಹೇಳಿ’ ಎಂದು ಸಚಿನ್ ಟ್ವೀಟ್ ಮಾಡಿದ್ದರು.

    ಸಚಿನ್ ಈ ವಿಡಿಯೋ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಇದರೊಂದಿಗೆ ಮಾಧ್ಯಮಗಳು ಸಚಿನ್ ಹೇಳಿದ ವ್ಯಕ್ತಿಯ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿತ್ತು. ಸದ್ಯ ಆತನ ಮಾಹಿತಿ ದೊರೆತಿದ್ದು, 46 ವರ್ಷದ ಅಸಿಸ್ಟೆಂಟ್ ಪ್ರೊಫೆಸರ್ ಈ ಹಿಂದೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಆ ವೇಳೆಯೇ ಅವರು ಸಚಿನ್ ರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದರು. ಸದ್ಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಭಿಮಾನಿ ಸಚಿನ್ ಅವರಿಗೆ ಧನ್ಯವಾದ ಹೇಳಿ ತಮ್ಮ ಕುಟುಂಬವನ್ನು ಭೇಟಿ ಮಾಡಲು ಮನೆಗೆ ಆಹ್ವಾನ ನೀಡಿದ್ದಾರೆ.

    ಸಚಿನ್ ಆ ವೇಳೆಗೆ ಅವರು ಧರಿಸುತ್ತಿದ್ದ ಎಲ್ಬೋ ಗಾರ್ಡ್ ಅವರ ಕೈನ ಅಳತೆಗಿಂತ ದೊಡ್ಡದಾಗಿತ್ತು. ಬ್ಯಾಟಿಂಗ್ ವೇಳೆ ವೇಗದ ಬೌಲರ್ ಗಳನ್ನು ಎದುರಿಸಲು ಮುಂದಾದ ವೇಳೆ ಎಲ್ಬೋ ಗಾರ್ಡ್ ನಿಂದ ಅವರು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಅಭಿಮಾನಿ ಗ್ರಹಿಸಿ ಅಂದು ಸಲಹೆ ನೀಡಿದ್ದರು. ಸಚಿನ್ ಎಲ್ಬೋ ಬದಲಿಸಿಕೊಂಡ ಬಳಿಕ ಮತ್ತಷ್ಟು ಉತ್ತಮವಾಗಿ ಬ್ಯಾಟಿಂಗ್ ಮಾಡಲು ಸಹಕಾರಿಯಾಗಿತ್ತು. ಬರೋಬ್ಬರಿ 18 ವರ್ಷಗಳ ಬಳಿಕ ಸಚಿನ್ ಇದನ್ನು ನೆನಪು ಮಾಡಿಕೊಂಡು ಅಭಿಮಾನಿಯ ಭೇಟಿಗೆ ಆಸೆ ಪಟ್ಟಿದ್ದರು.

    ಈ ಬಗ್ಗೆ ಗುರುಪ್ರಸಾದ್ ಮಾತನಾಡಿದ್ದು, ತಾಜ್ ಹೋಟೆಲಿನಲ್ಲಿ ನಾನು ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದೆ. ಲಿಫ್ಟಿನಲ್ಲಿ ಹತ್ತುವ ವೇಳೆ ಸಚಿನ್ ಅವರನ್ನು ಆಟೋಗ್ರಾಫ್ ಸಿಗಬಹುದಾ ಎಂದು ಕೇಳಿದೆ. ಆದರೆ ನನ್ನ ಬಳಿ ಪೇಪರ್ ಇರಲಿಲ್ಲ. ನಂತರ ಸೆಕ್ಯೂರಿಟಿ ಬೀಟ್ ಪುಸ್ತಕದ ಹಾಳೆಯನ್ನೇ ಆಟೋಗ್ರಾಫ್ ಹಾಕಿಸಿಕೊಂಡೆ. ಆ ನೋಟ್ ಬುಕ್ ಇದೀಗ ನನಗೆ ಅಮೂಲ್ಯವಾದ ಆಸ್ತಿಯಾಗಿದೆ ಎಂದು ವಿವರಿಸಿದರು.

    ತೆಂಡೂಲ್ಕರ್ ಅವರು ಆಟೋಗ್ರಾಫ್ ನೀಡಿದ ನಂತರ ಕ್ರಿಕೆಟ್ ಬಗ್ಗೆ ಮಾತನಾಡಲು ಕೆಲ ಸಮಯವನ್ನು ನೀಡುತ್ತಿರಾ ಎಂದು ಕೇಳಿಕೊಂಡೆ. ಅವರು ಸ್ನೇಹಪರವಾಗಿದ್ದರು ಹೀಗಾಗಿ ನಾನು ಕೇಳಲು ಹಿಂಜರಿಯಲಿಲ್ಲ. ಬ್ಯಾಟ್ ಸ್ವಿಂಗ್, ಟ್ವಿಸ್ಟ್ ಮಾಡುವಾಗ ಕೈ ಎಲ್ಬೋ ಗಾರ್ಡ್ ಗೆ ಹೊಡೆತ ಬೀಳುವುದಿಲ್ಲವೇ ಎಂದು ನಾನು ಕೇಳಿದ್ದೆ ಎಂಬುದನ್ನು ಹಂಚಿಕೊಂಡರು.

  • ಮಹತ್ವದ ಸಲಹೆ ನೀಡಿದ್ದ ಮಾಣಿ ಹುಡುಕಾಟದಲ್ಲಿದ್ದಾರೆ ತೆಂಡಲ್ಕೂರ್

    ಮಹತ್ವದ ಸಲಹೆ ನೀಡಿದ್ದ ಮಾಣಿ ಹುಡುಕಾಟದಲ್ಲಿದ್ದಾರೆ ತೆಂಡಲ್ಕೂರ್

    – ನೆಟ್ಟಿಗರ ಸಹಾಯ ಕೋರಿದ ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ತಮಗೆ ವಿಶೇಷ ಸಲಹೆ ನೀಡಿದ್ದ ಮಾಣಿಯ ಹುಡುಕಾಟದಲ್ಲಿದ್ದಾರೆ. ಜೊತೆಗೆ ಆತನ ಹುಡುಕಿ ಕೊಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ಟ್ವೀಟ್ ಖಾತೆಯಲ್ಲಿ ವಿಡಿಯೋವೊಂದನ್ನು ಟ್ವೀಟ್ ಮಾಡಿರುವ ಅವರು, ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಹೋಟೆಲ್ ಮಾಣಿಯೊಬ್ಬರೊಂದಿಗೆ ನಡೆದ ಸ್ಮರಣೀಯ ಮಾತುಕತೆಯನ್ನು ವಿವರಿಸಿದ್ದಾರೆ. ಮಾಣಿಯ ಸಲಹೆಯ ಮೇರೆಗೆ ಸಚಿನ್ ತಮ್ಮ ಆರ್ಮ್ ಗಾರ್ಡ್ ಮರುವಿನ್ಯಾಸಗೊಳಿಸಿದ್ದರು.

    ನಾನು ಕೆಲವು ವರ್ಷಗಳ ಹಿಂದೆ ಟೆಸ್ಟ್ ಸರಣಿಯ ಸಮಯದಲ್ಲಿ ಚೆನ್ನೈನ ಹೋಟೆಲ್‍ನಲ್ಲಿದ್ದೆ. ಆಗ ಒಬ್ಬ ಮಾಣಿಯೊಬ್ಬರು ಕಾಫಿ ಹಿಡಿದು ರೂಮ್‍ಗೆ ಬಂದಿದ್ದರು. ನೀವು ಅನುಮತಿ ನೀಡಿದರೆ, ನಾನು ನಿಮ್ಮೊಂದಿಗೆ ಕ್ರಿಕೆಟ್ ಬಗ್ಗೆ ಮಾತನಾಡಲು ಬಯಸುತ್ತೇನೆ ಎಂದು ಕೇಳಿದ್ದರು. ಆಗ ನಾನು ಕೇಳಿ ಎಂದು ಹೇಳಿದೆ. ಮಾತು ಮುಂದುವರಿಸಿದ ಅವರು, ನಾನು ನಿಮ್ಮ ದೊಡ್ಡ ಅಭಿಮಾನಿ. ನಾನು ನಿಮ್ಮ ಬ್ಯಾಟಿಂಗ್ ಅನ್ನು ಬಹಳ ಎಚ್ಚರಿಕೆಯಿಂದ ನೋಡುತ್ತೇನೆ. ನಾನು ಪ್ರತಿ ಚೆಂಡನ್ನು 5-7 ಬಾರಿ ರಿವೈಂಡ್ ಮಾಡುತ್ತೇನೆ. ಆದ್ದರಿಂದ ನೀವು ಆರ್ಮ್ ಗಾರ್ಡ್ ಧರಿಸಿದಾಗಲೆಲ್ಲಾ, ನಿಮ್ಮ ಬ್ಯಾಟ್ ಸ್ವಲ್ಪ ವಿಭಿನ್ನವಾಗಿ ಸ್ವಿಂಗ್ ಮಾಡಲು ಪ್ರಾರಂಭಿಸುತ್ತದೆ ಎಂದು ನಾನು ಭಾವಿಸಿದೆ ಎಂದಿದ್ದರು.

    ಮಾಣಿಯ ಮಾತು ಕೇಳಿದ ನಾನು, ಹೌದು. ಇಷ್ಟು ಒಳ್ಳೆಯದನ್ನು ಗಮನಿಸಿದ ವಿಶ್ವದ ಏಕೈಕ ವ್ಯಕ್ತಿ ನೀನು ಎಂದಿದ್ದೆ. ಆ ಘಟನೆಯ ನಂತರ ನನ್ನ ಆರ್ಮ್ ಗಾರ್ಡ್ ಅನ್ನು ಸರಿಯಾದ ಗಾತ್ರ ಮತ್ತು ಸರಿಯಾದ ಪ್ರಮಾಣದ ಪ್ಯಾಡಿಂಗ್‍ನೊಂದಿಗೆ ಮರುವಿನ್ಯಾಸಗೊಳಿಸಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.

    ನಾನು ಈವರೆಗೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರ ಹುಡುಕಾಟದಲ್ಲಿದ್ದೇನೆ. ನೀವು ಅವರನ್ನು ಹುಡುಕಲು ಸಹಾಯ ಮಾಡಿ ಪ್ಲೀಸ್ ಎಂದು ಸಚಿನ್ ತೆಂಡೂಲ್ಕರ್, ನೆಟ್ಟಿಗರಿಗೆ ಮನವಿ ಮಾಡಿಕೊಂಡಿದ್ದಾರೆ.

  • ಹೊಸದಾಗಿ ಪತ್ತೆಯಾದ ಜೇಡ ಪ್ರಭೇದಕ್ಕೆ ಸಚಿನ್ ಹೆಸರು

    ಹೊಸದಾಗಿ ಪತ್ತೆಯಾದ ಜೇಡ ಪ್ರಭೇದಕ್ಕೆ ಸಚಿನ್ ಹೆಸರು

    ನವದೆಹಲಿ: ಭಾರತೀಯ ಕ್ರಿಕೆಟ್‍ನ ದಂತೆ ಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಅಭಿಮಾನಿಗಳು ಗೌರವ ಸಲ್ಲಿಸಲು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗೆ ಜೇಡ ಜೀವಿವರ್ಗೀಕರಣ ಶಾಸ್ತ್ರದಲ್ಲಿ ಪಿಎಚ್‍ಡಿ ವ್ಯಾಸಂಗ ಮಾಡುತ್ತಿರುವ ಸಂಶೋಧನಾ ವಿಜ್ಞಾನಿಗಳು ಮಾಸ್ಟರ್ ಬ್ಲಾಸ್ಟರ್ ಅವರ ಮೇಲಿನ ಪ್ರೀತಿಯನ್ನು ತೋರಿಸಲು ಅತ್ಯಂತ ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ.

    ಗುಜರಾತ್ ಪರಿಸರ ಶಿಕ್ಷಣ ಮತ್ತು ಸಂಶೋಧನೆ (ಜಿಇಇಆರ್) ಪ್ರತಿಷ್ಠಾನದ ಕಿರಿಯ ಸಂಶೋಧಕ ಧ್ರುವ್ ಪ್ರಜಾಪತಿ ಅವರು ಎರಡು ಹೊಸ ಪ್ರಭೇದದ ಜೇಡಗಳನ್ನು ಕಂಡುಹಿಡಿದ್ದಾರೆ. ಅವುಗಳಲ್ಲಿ ಒಂದಕ್ಕೆ ಸಚಿನ್ ತೆಂಡೂಲ್ಕರ್ ಮತ್ತು ಇನ್ನೊಂದಕ್ಕೆ ಕೇರಳದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಂತ ಕುರಿಯೊಕ್ಕೋಸ್ ಎಲಿಯಾಸ್ ಚವರ ಅವರ ಹೆಸರನ್ನು ಇಡಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧ್ರುವ್ ಪ್ರಜಾಪತಿ ಅವರು, ಒಂದು ಜೇಡಕ್ಕೆ ಮಾರೆಂಗೊ ಸಚಿನ್ ತೆಂಡೂಲ್ಕರ್ ಎಂದು ಹೆಸರಿಸಿದ್ದೇನೆ. ಏಕೆಂದರೆ ಸಚಿನ್ ನನ್ನ ನೆಚ್ಚಿನ ಕ್ರಿಕೆಟಿಗ. ಕೇರಳದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದ ಸಂತ ಕುರಿಯಾಕೋಸ್ ಎಲಿಯಾಸ್ ಚವಾರ ಅವರಿಂದ ಮತ್ತೊಂದು ಹೆಸರು ಸ್ಫೂರ್ತಿ ಪಡೆದಿದೆ ಎಂದು ಹೇಳಿದ್ದಾರೆ.

    ಎರಡು ಹೊಸ ಪ್ರಭೇದಗಳು ಏಷ್ಯನ್ ಜಂಪಿಂಗ್ ಜೇಡಗಳ ಇಂಡೊಮರೆಂಗೊ ಮತ್ತು ಮಾರೆಂಗೊ ಜಾತಿಯ ಒಂದು ಭಾಗವಾಗಿದೆ ಎಂದು ಧ್ರುವ ಪ್ರಜಾಪತಿ ತಿಳಿಸಿದ್ದಾರೆ.

    ಧ್ರುವ ಅವರ ಅಧ್ಯಯನದ ಆವಿಷ್ಕಾರಗಳು ರಷ್ಯಾದ ಜರ್ನಲ್‍ನ ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ‘ಆತ್ರ್ರೋಪೋಡಾ ಸೆಲೆಕ್ಟಾ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿವೆ.

  • ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ

    ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರರಾಗಿದ್ದು, ಇಬ್ಬರ ನಡೆಗಳು ಅದೆಷ್ಟೋ ಅಭಿಮಾನಿಗಳನ್ನು ಸೆಳೆದಿದೆ. ಈ ಇಬ್ಬರ ಕುರಿತು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಆದರೆ ಇವರ ಕುರಿತ ಮಾಹಿತಿಗಾಗಿ ಸರ್ಚ್ ಮಾಡಿದ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ದೊರೆಯುತ್ತಿದೆ ಎಂದು ಪ್ರಮುಖ ಆ್ಯಂಟಿ ವೈರಸ್ ಮೆಕಾಫೆ ಸಂಸ್ಥೆ ತಿಳಿಸಿದೆ.

    ಹೌದು, ಸಚಿನ್ ಹಾಗೂ ಧೋನಿ ಅವರ ಬಗ್ಗೆ ಇಂಟರ್ ನೆಟ್‍ನಲ್ಲಿ ಮಾಹಿತಿ ಹುಡುಕಾಟ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ಪತ್ತೆಯಾಗುತ್ತಿದ್ದು, ಇದನ್ನು ತಿಳಿಯದ ಅಭಿಮಾನಿಗಳು ಲಿಂಕ್ ಗಳನ್ನು ಕ್ಲಿಕ್ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮೆಕಾಫೆ ಸಂಸ್ಥೆ ತಿಳಿಸಿದೆ.

    ಸಾಮಾನ್ಯವಾಗಿ ಜನರು ಕ್ರೀಡಾಪಟುಗಳು, ಸಿನಿಮಾ ಸ್ಟಾರ್, ಟಿವಿ ಶೋಗಳ ಹೆಚ್ಚು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಯ ಕುರಿತು ಅಭಿಮಾನಿಗಳು ಹೆಚ್ಚು ಸರ್ಚ್ ಮಾಡುತ್ತಾರೆ. ದಿನ್ನೇ ತಮ್ಮ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕ್ರೈಂ ಆರೋಪಿಗಳು, ನಕಲಿ ಲಿಂಕ್ ಗಳನ್ನು ಸೃಷ್ಟಿ ಮಾಡಿ ಹರಿಬಿಡುತ್ತಿದ್ದಾರೆ. ಆ ಮೂಲಕ ವ್ಯಕ್ತಿಗಳ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೇ ಬಳಕೆದಾರರ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್ ಗಳು ವೈರಸ್ ಗಳಿಗೂ ಒಳಗಾಗುತ್ತಿದೆ. ಪರಿಣಾಮ ನೆಟಿಜನ್ಸ್ ಎಚ್ಚರಿಕೆಯಿಂದ ಇರಬೇಕು ಎಂದು ಸಂಸ್ಥೆ ಹೇಳಿದೆ.

    ಸಂಸ್ಥೆ ನೀಡಿರುವ ಪ್ರಮಾದಕರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಧೋನಿ, ಸಚಿನ್ ಮೊದಲ ಸ್ಥಾನ ಪಡೆದಿದ್ದು, ಆ ಬಳಿಕವೇ ಬಿಗ್ ಬಾಸ್-8ರ ವಿನ್ನರ್ ಗೌತಮ್, ಬಾಲಿವುಡ್ ನಟಿ ಸನ್ನಿ ಲಿಯೋನ್, ರಾಧಿಕಾ ಅಪ್ಟೆ, ಪಿವಿ ಸಿಂಧು, ಅವರು ಸ್ಥಾನ ಪಡೆದಿದ್ದಾರೆ.