Tag: Sabarimala devotees

  • ಶಬರಿಮಲೆ ಭಕ್ತರಿಗೆ ಮಸೀದಿಯಲ್ಲಿ ಆಶ್ರಯ – ಸೌಹಾರ್ದತೆ ಮೆರೆದ ಮುಸ್ಲಿಮರು

    ಶಬರಿಮಲೆ ಭಕ್ತರಿಗೆ ಮಸೀದಿಯಲ್ಲಿ ಆಶ್ರಯ – ಸೌಹಾರ್ದತೆ ಮೆರೆದ ಮುಸ್ಲಿಮರು

    ಮಡಿಕೇರಿ: ಪ್ರಸ್ತುತ ನಡೆಯುತ್ತಿರುವ ರಾಜಕೀಯ ಮತ್ತು ಕೋಮು ಸಂಘರ್ಷ ಪರಿಸ್ಥಿತಿಯ ನಡುವೆಯೂ ಕೊಡಗಿನ (Kodagu) ಮುಸ್ಲಿಂ ಬಾಂಧವರು ಸೌಹಾರ್ದತೆಗೆ ಸಾಕ್ಷಿಯಾದರು.

    ಕೊಡಗಿನ ವಿರಾಜಪೇಟೆ ತಾಲ್ಲೂಕಿನ ತಿತಿಮತಿಯಲ್ಲಿರುವ ಲಿವಾಉಲ್ ಹುದಾ ಜಮ್ಮಾ ಮಸೀದಿಯು (Mosque) ಸಂಕಷ್ಟಕ್ಕೆ ಸಿಲುಕಿದ್ದ ಶಬರಿಮಲೆಯ ಭಕ್ತರಿಗೆ ಆಶ್ರಯ ಹಾಗೂ ಸೌಲಭ್ಯ ಕಲ್ಪಿಸುವ ಮೂಲಕ ಸಹೋದರತ್ವ ಮತ್ತು ಸಾಮರಸ್ಯದ ಸಂದೇಶ ನೀಡಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಘೋಷವಾಕ್ಯ, ಲೋಗೋ ಅನಾವರಣ

    ಬೆಳಗಾವಿ ಮೂಲದ ಐವರು ಭಕ್ತರು (Sabarimala Devotees) ಕೊಡಗು ಮಾರ್ಗವಾಗಿ ಬೈಕ್‌ನಲ್ಲಿ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಹೊರಟಿದ್ದರು. ಆದ್ರೆ ಗುರುವಾರ ರಾತ್ರಿ ವೇಳೆ ಆಗಿದ್ದರಿಂದ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಯಾತ್ರೆಯನ್ನು ತಿತಿಮತಿಯಲ್ಲಿ ಸ್ಥಗಿತಗೊಳಿಸಿದರು. ಇದನ್ನೂ ಓದಿ: ಶ್ರೀರಾಮ ನಮ್ಮ ದೇವರು, ಸೀತಾಮಾತೆ ನಮ್ಮ ತಾಯಿ – ಕಾಂಗ್ರೆಸ್‌ ಸಚಿವ ಸಂತೋಷ್‌ ಲಾಡ್

    ಈ ವೇಳೆ ಕಮಲೇಶ್ ಗೌರಿ, ಭೀಮಪ್ಪ ಸನದಿ, ಎನ್. ಶಿವಾನಂದ್, ಬಿ. ಗಂಗಾಧರ್ ಮತ್ತು ಎಸ್. ಸಿದ್ದ ಐವರು ಭಕ್ತರು, ಜಮ್ಮಾ ಮಸೀದಿ ಬಳಿ ಹೋಗಿ ನೆರವು ಕೇಳಿದರು. ನಂತರ ಮಸೀದಿ ಆಡಳಿತ ಮಂಡಳಿಯವರು ಶಬರಿಮಲೆ ಭಕ್ತರ ನೆರವಿಗೆ ಧಾವಿಸಿ, ರಾತ್ರಿ ಮಸೀದಿಯಲ್ಲೇ ತಂಗಲು ಅನುಮತಿ ನೀಡಿದರು. ಅಲ್ಲದೇ ಭಕ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಮಸೀದಿ ಅಧ್ಯಕ್ಷ ಉಸ್ಮಾನ್ ಹಾಗೂ ಕೆ. ಕತೀಬ್ ಒದಗಿಸಿಕೊಟ್ಟರು.

    ಶುಕ್ರವಾರ ಬೆಳಗ್ಗೆ 6 ಗಂಟೆಗೆ ಐವರು ಭಕ್ತರು ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿ ಶಬರಿಮಲೆಗೆ ತೆರಳಿದರು. ಇದಕ್ಕೂ ಮುನ್ನ ಬೆಳಗ್ಗೆ ಮಸೀದಿ ಸಮೀಪದಲ್ಲೇ ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸಲು ಮಸೀದಿಯವರೇ ಅವಕಾಶ ಮಾಡಿಕೊಟ್ಟಿದ್ದರು. ಸದ್ಯ ಕೊಡಗಿನಲ್ಲಿ ಈ ಸೌಹಾರ್ದತೆಯನ್ನು ಕಂಡು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯನವ್ರೆ ನಿಮ್ದೇನು ಸರ್ಕಾರನಾ? ಸರ್ವಾಧಿಕಾರನಾ: ಪ್ರಹ್ಲಾದ್ ಜೋಶಿ ಪ್ರಶ್ನೆ

  • ತಿರುಪತಿಯಿಂದ ಬರುತ್ತಿದ್ದಾಗ ರಾಮನಗರದಲ್ಲಿ ಅಪಘಾತ- ಕಾಸರಗೋಡಿನ ಮೂವರ ಸಾವು

    ತಿರುಪತಿಯಿಂದ ಬರುತ್ತಿದ್ದಾಗ ರಾಮನಗರದಲ್ಲಿ ಅಪಘಾತ- ಕಾಸರಗೋಡಿನ ಮೂವರ ಸಾವು

    – ಶಬರಿಮಲೆಯಿಂದ ಗ್ರಾಮಕ್ಕೆ ಮರಳಿ ತಿರುಪತಿಗೆ ತೆರಳಿದ್ದ ಯಾತ್ರಾರ್ಥಿಗಳು
    – ಆರು ಜನರಿಗೆ ಗಂಭೀರ ಗಾಯ

    ರಾಮನಗರ: ಯಾತ್ರಾರ್ಥಿಗಳಿದ್ದ ಝೈಲೋ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಸಮೀಪದಲ್ಲಿ ನಡೆದಿದೆ.

    ಮಂಗಳೂರು ಸಮೀಪದ ಕಾಸರಗೋಡು ಹಾಗೂ ಅಂಕಿ ಮೂಲದ ಝೈಲೋ ಕಾರಿನ ಮಾಲೀಕ ಹಾಗೂ ಚಾಲಕ ಕಿಶನ್, ಮೋನಪ್ಪ ಹಾಗೂ ಅಕ್ಷಯ್ ಸಾವನ್ನಪ್ಪಿದ ದುರ್ದೈವಿಗಳು. ಬಾಲಕೃಷ್ಣ ಯಾನೆ ತಮ್ಮು, ರಾಘವೇಂದ್ರ, ಮಹಾಬಲ, ಪುಷ್ಪರಾಜ್, ಜಗದೀಶ್ ಹಾಗೂ ಶೇಖರ್ ಗಂಭೀರ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಬರಿಮಲೆ ಯಾತ್ರೆ ಮುಗಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮನೆಗೆ ವಾಪಸಾಗುತ್ತಿದ್ದ ಘಟನೆ ಸಂಭವಿಸಿದೆ.

    ಅಪಘಾತದಲ್ಲಿ ಸಾವನ್ನಪ್ಪಿದ ಕಿಶನ್, ಮೋನಪ್ಪ ಹಾಗೂ ಶೇಖರ್ ಶಬರಿಮಲೆ ಮಾಲಾಧಾರಿಗಳಾಗಿರಲಿಲ್ಲ. ಮಿಕ್ಕ ಎಲ್ಲರೂ ಶಬರಿಮಲೆಯಿಂದ ಕಾಸರಗೋಡು ಸಮೀಪದ ತಮ್ಮ ಗ್ರಾಮ ಹೊಸಂಗಡಿಗೆ ಮಂಗಳವಾರ ಮರಳಿದ್ದರು. ಅಂದು ಬೆಳಗ್ಗೆ 11 ಗಂಟೆಗೆ ತಮ್ಮ ಮನೆಗೆ ತೆರಳಿ, ಬಳಿಕ ಸಂಜೆ 5.00 ಗಂಟೆಗೆ ಹೊಸಂಗಡಿಯಿಂದ ತಿರುಪತಿಗೆ ಒಂಬತ್ತು ಮಂದಿ ಯಾತ್ರಾರ್ಥಿಗಳು ಹೊರಟಿದ್ದರು.

    ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು ಮತ್ತೆ ವಾಪಸ್ ಆಗುತ್ತಿದ್ದಾಗ ಗುಡೇಮಾರನಹಳ್ಳಿ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಜನರು ಗಂಭೀರಗಾಯಗೊಂಡಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮೃತ ಅಕ್ಷಯ್ ಅವಿವಾಹಿತರಾಗಿದ್ದು, ಕಿಶನ್ ಹಾಗೂ ಮೋನಪ್ಪ ವಿವಾಹಿತರು. ಮೋನಪ್ಪ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ನಿದ್ದೆಯ ಮಂಪರಿನಲ್ಲಿದ್ದ ಕಾರು ಚಾಲಕ ಕಿಶನ್ ಹೆದ್ದಾರಿಯಲ್ಲಿನ ಡಿವೈಡರ್ ಗೆ ಮೊದಲು ಡಿಕ್ಕಿ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದಾನೆ. ಈ ಸಂಬಂಧ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.