Tag: S. L.Dharmegowda

  • ರಾಜಕೀಯ ಗುರುಗಳ ಸಾವಿನಿಂದ ತುಂಬಾ ನೋವಾಗಿದೆ: ಬೆಳ್ಳಿಪ್ರಕಾಶ್

    ರಾಜಕೀಯ ಗುರುಗಳ ಸಾವಿನಿಂದ ತುಂಬಾ ನೋವಾಗಿದೆ: ಬೆಳ್ಳಿಪ್ರಕಾಶ್

    ಚಿಕ್ಕಮಗಳೂರು: ನನ್ನ ರಾಜಕೀಯ ಗುರುಗಳ ಸಾವಿನಿಂದ ನನಗೆ ತುಂಬಾ ನೋವಾಗಿದೆ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರು ನನ್ನ ರಾಜಕೀಯ ಗುರುಗಳು. ಅವರ ಸಾವಿನಿಂದ ನನಗೆ ತುಂಬಾ ನೋವಾಗಿದೆ. 13 ವರ್ಷಗಳಿಂದ ಅವರ ಜೊತೆ ಒಡನಾಟವಿತ್ತು ಎಂದು ತಿಳಿಸಿದರು.

    ರಾಜಕೀಯ ವಿಚಾರವಾಗಿ ಬೆಂಬಲಿಸುತ್ತಿದ್ದರು. ನನ್ನ ರಾಜಕೀಯಕ್ಕೆ ತರಲು ಪ್ರಯತ್ನ ಮಾಡಿದ್ರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ. ಇವರ ಸಾವಿನಿಂದ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಉಪಸಭಾಪತಿ ಎಸ್. ಎಲ್ ಧರ್ಮೇಗೌಡರ ರಾಜಕೀಯ ಪಯಣ ಹೀಗಿತ್ತು

    ಧರ್ಮೇಗೌಡರು ಮಧ್ಯರಾತ್ರಿ 12 ಗಂಟೆಯ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯಿಂದ ಧರ್ಮೇಗೌಡರ ದೇಹ ಛಿದ್ರಛಿದ್ರವಾಗಿದ್ದು, 100 ಮೀಟರ್ ದೂರದಲ್ಲಿ ಕೈ ಪತ್ತೆಯಾಗಿದೆ. ಪರಿಷತ್ ನಲ್ಲಿ ನಡೆದ ಗಲಾಟೆಯಿಂದ ನೊಂದಿದ್ದಾರೆ ಎಂದು ಹೇಳಲಾಗಿದೆ. ಮನೆಯ ಆಸ್ತಿ, ಹಣಕಾಸು ವಿಚಾರವಾಗಿ ಡೆತ್ ನೋಟಿನಲ್ಲಿ ಬರೆದಿರುವ ಧರ್ಮೇಗೌಡರು ಪತ್ನಿ, ಮಗ ಹಾಗೂ ಮಗಳಲ್ಲಿ ಕ್ಷಮೆ ಕೇಳಿದ್ದಾರೆ. ಅಲ್ಲದೆ ಅರ್ಧಕ್ಕೆ ನಿಲ್ಲಿಸಿದ್ದ ಮನೆಯನ್ನು ಪೂರ್ಣಗೊಳಿಸುವಂತೆ ಡೆತ್‍ನೋಟ್ ನಲ್ಲಿ ಸೂಚಿಸಿದ್ದಾರೆ. ಇದನ್ನೂ ಓದಿ: ರೈಲ್ವೇ ಟ್ರ್ಯಾಕ್ ಬಳಿ ಕಾರು ನಿಲ್ಲಿಸಲು ಹೇಳಿ ಡ್ರೈವರ್ ವಾಪಸ್ ಕಳಿಸಿದ್ರು ಧರ್ಮೇಗೌಡ!

    ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸ್ವಗ್ರಾಮ ಸರ್ಪನಹಳ್ಳಿಯಲ್ಲಿ ತಂದೆಯ ಸಮಾಧಿ ಪಕ್ಕದಲ್ಲೇ ಸಂಜೆ ಉಪಸಭಾಪತಿಗಳ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ತೋಟದ ಮನೆ ಆವರಣದಲ್ಲಿ ಅಂತಿಮದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಕುಟುಂಬದ ಸದಸ್ಯರು ತೋಟದ ಮನೆ ಆವರಣದಲ್ಲಿ ಎರಡು ಜೆಸಿಬಿಗಳಿಂದ ಸ್ಥಳ ಸಿದ್ಧತೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಮಧ್ಯಾಹ್ನದ ವೇಳೆಗೆ ಮೃತದೇಹ ಸರಪನಹಳ್ಳಿಗೆ ಬರೋ ನಿರೀಕ್ಷೆ ಇದ್ದು, ಆ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ರೆಡಿ ಮಾಡಲಾಗುತ್ತಿದೆ.

    https://www.youtube.com/watch?v=jETdpSkvaGM&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ಪರಿಷತ್‍ನಲ್ಲಿ ಮಹಾಭಾರತ ಪಾತ್ರಗಳ ಬಗ್ಗೆ ಚರ್ಚೆ

    ಪರಿಷತ್‍ನಲ್ಲಿ ಮಹಾಭಾರತ ಪಾತ್ರಗಳ ಬಗ್ಗೆ ಚರ್ಚೆ

    – ಉಪಸಭಾಪತಿಯಾಗಿ ಧರ್ಮೇಗೌಡ ಆಯ್ಕೆ
    – ಹಳೆಯದನ್ನು ನೆನೆದು ಭಾವುಕರಾದ ಸಿಎಂ ಇಬ್ರಾಹಿಂ

    ಬೆಳಗಾವಿ: ವಿಧಾನ ಪರಿಷತ್ ಉಪಸಭಾಪತಿಯಾಗಿ ಎಸ್.ಎಲ್.ಧರ್ಮೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಈ ವೇಳೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರು, ಧರ್ಮೇಗೌಡರ ಹೆಸರಲ್ಲಿ ಧರ್ಮ ಇದೆ. ಧರ್ಮರಾಯರ ರೀತಿ ಕೆಲಸ ನಿರ್ವಹಣೆ ಮಾಡಬೇಕು. ಸಭಾಪತಿ, ಉಪಸಭಾಪತಿ, ಸ್ಪೀಕರ್ ಹುದ್ದೆಯನ್ನು ಧರ್ಮರಾಯನ ರೀತಿ ನಿರ್ವಹಿಸಿ ಧರ್ಮ ಪಾಲನೆ ಮಾಡುವ ಕೆಲಸವಾಗಬೇಕು. ಧರ್ಮರಾಯನ ಮಾತನ್ನು ಸಭೆಯ ಎಲ್ಲರೂ ಕೇಳಬೇಕು ಎಂದು ಹೇಳಿದರು.

    ಜಯಮಾಲಾ ಅವರು ಮಾತು ಮುಗಿಸುತ್ತಿದ್ದಂತೆ ಧ್ವನಿಗೂಡಿಸಿದ ಸದಸ್ಯ ಶರಣಪ್ಪ ಮಟ್ಟೂರು ಅವರು, ಪರಿಷತ್‍ನ ವಿಪಕ್ಷ ನಾಯಕ, ಸಭಾನಾಯಕಿ, ಉಪಸಭಾಪತಿ, ಸಭಾಪತಿ ಸ್ಥಾನ ಮಲೆನಾಡಿಗೆ ಹೋಗಿದೆ. ನಾವು ಈಗ ಏನೇ ಕೇಳಬೇಕಾದರೂ ಇವರನ್ನು ಕೇಳಬೇಕು ಎಂದು ನಗೆಬೀರಿದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ನಾನು ಹುಟ್ಟಿದ್ದು ಮಂಗಳೂರು, ಬೆಳೆದಿದ್ದು ಚಿಕ್ಕಮಗಳೂರು. ಕೆಲಸ ಮಾಡಿದ್ದು ಬೆಂಗಳೂರು. ನಾನು ಬಾಲ್ಯದ ದಿನಗಳನ್ನು ಕಳೆದಿದ್ದು ಚಿಕ್ಕಮಗಳೂರಿನಲ್ಲಿ. ನಾವು ಕಲಾವಿದರು. ಎಲ್ಲರೂ ನಮ್ಮವರು ಅಂತ ನೋಡುತ್ತೇವೆ. ಆದರೆ ಕರ್ನಾಟಕ ಒಂದೇ ಎಂಬ ಆಸೆ ನಮ್ಮದು ಎಂದು ಹೇಳಿದರು.

    ಈ ಚರ್ಚೆಯ ನಡುವೆ ಪ್ರವೇಶ ಮಾಡಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಭೋಜೇಗೌಡ ಇಲ್ಲೇ ಇದ್ದಾರೆ, ಅರ್ಜುನನ ರೀತಿ. ಅವರು ಧರ್ಮರಾಯನ ಮಾತು ಕೇಳೊಲ್ಲ. ಭೋಜೇಗೌಡ ಅವರನ್ನು ಕಟ್ಟಿ ಹಾಕಬೇಕು ಅಂತ ಹಾಸ್ಯ ಮಾಡಿದರು. ಇದಕ್ಕೆ ಮತ್ತಷ್ಟು ನಗೆ ಸೇರಿಸಿದ ಜಯಮಾಲ ಅವರು, ಮಹಾಭಾರತದಲ್ಲಿ ಅರ್ಜುನ ಧರ್ಮರಾಯನ ಮಾತು ಕೇಳುತ್ತಿರಲಿಲ್ಲ. ಆದರೆ ಇಲ್ಲಿ ಧರ್ಮರಾಯನ ಮಾತು ಕೇಳಬೇಕು ಅಂತ ಭೋಜೇಗೌಡರಿಗೆ ಹೇಳಿದರು.

    ಲೆಹರ್ ಸಿಂಗ್ ಮಾತನಾಡಿ, ಧರ್ಮರಾಯನ ಮಾತು ಎಲ್ಲರೂ ಕೇಳುತ್ತಾರೆ. ಆದರೆ ದುರ್ಯೋಧನ ಕೇಳುವುದಿಲ್ಲ. ಈ ಸದನದಲ್ಲಿ ದುರ್ಯೋಧನ ಯಾರು ಮೊದಲು ಹುಡುಕಿ ಅಂತ ಹಾಸ್ಯ ಮಾಡಿದರು. ತಕ್ಷಣವೇ ಭಾವನಾತ್ಮಕರಾದ ಸಿಎಂ ಇಬ್ರಾಹಿಂ, 22 ವರ್ಷದ ಬಳಿಕ ನನಗೆ ಸಮಾಧಾನ ಆಗಿದೆ. ನಾನು ಜನತಾದಳದಲ್ಲಿ ಇದ್ದಾಗ ಧರ್ಮೇಗೌಡ ಅವರ ತಂದೆಯನ್ನು ಮಂತ್ರಿ ಮಾಡಲು ನಾನು ತುಂಬ ಪ್ರಯತ್ನ ಪಟ್ಟಿದ್ದೆ. ಆದರೆ ಅದು ಆಗಿರಲಿಲ್ಲ. ಇಂದು ನೀವು ಉಪ ಸಭಾಪತಿ ಆಗಿರುವುದು ನನಗೆ ನೆಮ್ಮದಿ. ಈ ವಿಚಾರವಾಗಿ ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರ ಪರವಾದ ಕೆಲಸ ಮಾಡಲಿ ಎಂದು ಹಳೇ ನೆನಪು ನೆನಪಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv