Tag: russia

  • ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ

    ಯುದ್ಧ ನಿಲ್ಲಿಸಲು 2 ಷರತ್ತುಗಳನ್ನು ಉಕ್ರೇನ್ ಮುಂದಿಟ್ಟ ರಷ್ಯಾ

    ಮಾಸ್ಕೋ: ಯುದ್ಧ ನಿಲ್ಲಿಸಲು ರಷ್ಯಾ ಎರಡು ಷರತ್ತುಗಳನ್ನು ಉಕ್ರೇನ್ ಮುಂದಿಟ್ಟಿದೆ. ಕ್ರಿಮಿಯಾವನ್ನು ರಷ್ಯಾದ ಭೂಭಾಗವೆಂದು, ಡೋನ್ಯಸ್ಕ್, ಲುಹಾನ್ಸ್‍ಕ್ ಪ್ರಾಂತ್ಯಗಳನ್ನು ಸ್ವಾತಂತ್ರ್ಯ ದೇಶಗಳೆಂದು ಉಕ್ರೇನ್ ಪರಿಗಣಿಸಬೇಕು ಎಂಬ ಷರತ್ತು ಒಡ್ಡಿದೆ.

    ಈ ಮಧ್ಯೆ ರಷ್ಯಾ ಮೇಲೆ ವಿಶ್ವದ ದಿಗ್ಬಂಧನ ಮತ್ತಷ್ಟು ಹೆಚ್ಚುತ್ತಿದೆ. ಐಬಿಎಂ ಸಂಸ್ಥೆ ರಷ್ಯಾದಲ್ಲಿ ಚಟುವಟಿಕೆ ನಿಲ್ಲಿಸುವುದಾಗಿ ಘೋಷಿಸಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಧಿಕ ದಿಗ್ಬಂಧನಗಳಿಗೆ ಒಳಗಾಗಿರುವ ದೇಶ ಎಂಬ ಕೆಟ್ಟ ದಾಖಲೆಗೆ ರಷ್ಯಾ ಪಾತ್ರವಾಗಿದೆ. ಈ ಬೆಳವಣಿಗೆ ಜಾಗತಿಕ ಮಹಾ ಪಲ್ಲಟಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿದೆ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ರಷ್ಯಾ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಈಗ ಚೀನಾ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ. ಅಲ್ಲದೇ ವಿಶ್ವದ ದೊಡ್ಡಣ್ಣ ಅಮೆರಿಕಾ ಅಲ್ಲ, ಚೀನಾ ಎಂದು ರಷ್ಯಾ ಬಿಂಬಿಸತೊಡಗಿದೆ. ಜೊತೆಗೆ ದೇಶಿಯ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ. ಇಷ್ಟಕ್ಕೆ ಸುಮ್ಮನಾಗಿಲ್ಲ ರಷ್ಯಾ, ಉಕ್ರೇನ್‍ಗೆ ಬೆಂಬಲ ನೀಡೋದನ್ನು ಮುಂದುವರೆಸಿದರೆ, ಇನ್ನಷ್ಟು ದಿಗ್ಬಂಧನ ವಿಧಿಸಿದ್ರೇ ಯುರೋಪ್‍ಗೆ ಅನಿಲ ಪೂರೈಕೆ ನಿಲ್ಲಿಸೋದಾಗಿ ಬೆದರಿಕೆ ಹಾಕಿದೆ.

    ರಷ್ಯಾದ ಕಚ್ಚಾ ತೈಲ ಪೂರೈಕೆ ನಿಂತ್ರೆ, ಒಂದು ಬ್ಯಾರಲ್ ಬೆಲೆ 300 ಡಾಲರ್ ಗಡಿ ದಾಟಲಿದೆ. ನೀವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕನಿಷ್ಠ 1ವರ್ಷ ಹಿಡಿಯುತ್ತೆ.. ಯೋಚಿಸಿ ಎಂದು ವಾರ್ನಿಂಗ್ ನೀಡಿದೆ. ಇನ್ನು, ನ್ಯಾಟೋ ರಾಷ್ಟ್ರಗಳು ನೇರವಾಗಿ ಬೆಂಬಲ ನೀಡದಿರೋದು ಝೆಲೆನ್‍ಸ್ಕಿ ಸಿಟ್ಟಿಗೆ ಕಾರಣವಾಗಿದೆ. ರಷ್ಯಾಕ್ಕೆ ನ್ಯಾಟೋ ರಾಷ್ಟ್ರಗಳು ಭಯಬಿದ್ದಿದೆ ಎಂದು ಕಿಡಿಕಾರಿದ್ದಾರೆ. ತಾವು ಕ್ರಿಮಿಯಾ, ಡಾನ್ ಬಾಸ್ ಬಗ್ಗೆ ಚರ್ಚೆಗೆ ರೆಡಿ ಎಂದಿದ್ದಾರೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ರಷ್ಯಾ ಪರ್ಯಾಯ ಮಂತ್ರ
    * ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಿಗೆ SWIFT  ಬದಲು SPSF ಬಳಕೆ (ದೇಶಿಯವಾಗಿ ತಯಾರಿಸಲಾದ ಸಿಸ್ಟಮ್ ಫಾರ್ ‘ಟ್ರಾನ್ಸ್ ಫರ್ ಆಫ್ ಫೈನಾನ್ಶಿಯಲ್ ಮೆಸೇಜೆಸ್’ ವ್ಯವಸ್ಥೆ ಸದ್ಯ 5 ದೇಶಗಳ 400 ಬ್ಯಾಂಕ್‍ಗಳು ಇದರ ವ್ಯಾಪ್ತಿಯಲ್ಲಿವೆ)
    * ಎಸ್‍ಪಿಎಸ್‍ಎಫ್ ಜೊತೆಗೆ ಚೀನಾದ ಅPIS ಬಳಕೆಗೂ ಚಿಂತನೆ (2015ರಿಂದ ಷಾಂಘೈ ಕೇಂದ್ರವಾಗಿ ಕಾರ್ಯ, ಇದರ ವ್ಯಾಪ್ತಿಯಲ್ಲಿ 103 ದೇಶಗಳ 1280 ಬ್ಯಾಂಕ್ ಸ್ವಿಫ್ಟ್ ಗೆ ಹೋಲಿಸಿದ್ರೆ 10 ಪಟ್ಟು ಚಿಕ್ಕದು)
    * ವೀಸಾ, ಮಾಸ್ಟರ್ ಕಾರ್ಡ್ ಬದಲು ಚೀನಾದ `ಯೂನಿಯನ್ ಪೇ’ ಬಳಕೆ ಪ್ಲಾನ್ (180 ದೇಶಗಳಲ್ಲಿ ಬಳಕೆಯಲ್ಲಿದೆ)

    ದಿಗ್ಬಂಧನ ದೇಶಗಳ ಲೆಕ್ಕ
    * ರಷ್ಯಾ – 5552 (ಫೆ.22ಕ್ಕೆ ಮೊದಲು 2754 ಇತ್ತು)
    * ಇರಾನ್ – 3616
    * ಸಿರಿಯಾ – 3608
    * ಉತ್ತರ ಕೊರೀಯಾ -2077
    * ವೆನಿಜುಯೆಲಾ – 651
    * ಮಯನ್ಮಾರ್ – 510
    * ಕ್ಯೂಬಾ – 208

  • ಉಕ್ರೇನ್‍ನ ಸುಮಿ ಮೇಲೆ ಬಾಂಬ್ ಸುರಿಮಳೆ- ಚೆರ್ನಿಹೀವ್ ಮೇಲೆ 500 ಕೆಜಿ ಬಾಂಬ್, ಸ್ಫೋಟ ಇಲ್ಲ

    ಉಕ್ರೇನ್‍ನ ಸುಮಿ ಮೇಲೆ ಬಾಂಬ್ ಸುರಿಮಳೆ- ಚೆರ್ನಿಹೀವ್ ಮೇಲೆ 500 ಕೆಜಿ ಬಾಂಬ್, ಸ್ಫೋಟ ಇಲ್ಲ

    ಕೀವ್: ಉಕ್ರೇನ್-ರಷ್ಯಾ ನಡುವಿನ ಯುದ್ಧ 13ನೇ ದಿನ ಪೂರೈಸಿದೆ. ರಷ್ಯಾ ಪಡೆಗಳು ಮಾರಣಹೋಮವನ್ನೇ ಸೃಷ್ಟಿಸ್ತಿವೆ. ಯುದ್ಧದ ನಿಯಮಗಳನ್ನು ಉಲ್ಲಂಘಿಸಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್‍ಗಳ ಸುರಿಮಳೆಗೈಯ್ಯುತ್ತಿದೆ.

    ಖಾರ್ಕೀವ್, ಸುಮಿ ನಗರಗಳ ಮೇಲೆ ಭೂಮಿ, ಆಕಾಶಗಳಿಂದ ಗುಂಡಿನ ಮಳೆಗರೆದಿದೆ. ಈ ನಗರಗಳು ಸ್ಮಶಾನ ಸದೃಶವಾಗಿ ಮಾರ್ಪಟ್ಟಿವೆ. ಸಾವು ನೋವಿನ ಖಚಿತ ಅಂಕಿ-ಅಂಶಗಳು ಸಿಗುತ್ತಿಲ್ಲ. ಇದೇ ವೇಳೆ ಕೀವ್, ಚೆರ್ನಿಹೀವ್, ಮೈಕೋಲೈವ್, ಓಲ್ವಿಯಾ ನಗರಗಳ ಮೇಲೆ ಹಿಡಿತ ಸಾಧಿಸಲು ಇನ್ನಿಲ್ಲದ ಪ್ರಯತ್ನವನ್ನು ಮಾಡ್ತಿದೆ. ಚೆರ್ನಿಹೀವ್ ನಗರದ ಮೇಲೆ 500 ಕೆಜಿ ತೂಕದ ಬಾಂಬ್ ಹಾಕಿದೆ. ಅದೃಷ್ಟವಶಾತ್ ಅದು ಸ್ಫೋಟಿಸಿಲ್ಲ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಈಗಾಗಲೇ ಖೇರ್ಸಾನ್, ಬುಚಾ, ವೋರ್ಡಲ್, ಹೋಸ್ಟಾಮೆಲ್, ಜಪೋರಿಜಿಯಾ ಪ್ರಾಂತ್ಯದ ಆರು ನಗರಗಳನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ. ಬ್ರಿಟನ್ ಪ್ರಕಾರ, ರಷ್ಯಾ ಈಗಾಗಲೇ ಉಕ್ರೇನ್‍ನ ಅರ್ಧ ಭಾಗವನ್ನು ವಶಕ್ಕೆ ತೆಗೆದುಕೊಂಡಿದೆ. ಕೀವ್ ಹೊರವಲಯದಲ್ಲಿ 65 ಕಿಲೋಮೀಟರ್ ಉದ್ದದಷ್ಟು ರಷ್ಯಾ ಪಡೆಗಳು ನಿಂತಿವೆ. ಜೊತೆಗೆ ಗಡಿಯಲ್ಲಿ ಬೀಡುಬಿಟ್ಟಿದ್ದ ರಷ್ಯಾದ 95 ಸಾವಿರ ಸೈನಿಕರು ಇದೀಗ ಉಕ್ರೇನ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಉಕ್ರೇನ್ ಕೂಡ ವಿರೋಚಿತ ಹೋರಾಟ ಮುಂದುವರಿಸಿದೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ಕೀವ್, ಖಾರ್ಕೀವ್, ಚೆರ್ನಿಹೀವ್, ಸುಮಿಯಂತಹ ನಗರಗಳನ್ನು ತನ್ನ ನಿಯಂತ್ರಣದಲ್ಲೇ ಉಳಿಸಿಕೊಂಡಿದೆ. ರಷ್ಯಾದ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸುತ್ತಿದೆ. ಖಾರ್ಕೀವ್ ಬಳಿ ಏರ್‍ಫೀಲ್ಡ್‍ನಲ್ಲಿದ್ದ ರಷ್ಯಾದ 30ಕ್ಕೂ ಹೆಚ್ಚು ಹೆಲಿಕಾಪ್ಟರ್‍ಗಳನ್ನು ಧ್ವಂಸ ಮಾಡಿದೆ. 12 ಸಾವಿರ ಯೋಧರನ್ನು ಕೊಂದಿರೋದಾಗಿ ಘೋಷಿಸಿದೆ. ಇದು ರಷ್ಯಾ ಸೇನೆಯ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಇಂದು ಕೂಡ ಕೀವ್, ಸುಮಿ ಸೇರಿ ಐದು ನಗರಗಳಲ್ಲಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿತ್ತು. ಆದ್ರೇ, ಮಾನವೀಯ ಕಾರಿಡಾರ್‍ಗಳು ರಷ್ಯಾ-ಬೆಲಾರಸ್ ಕಡೆಗೆ ಸಾಗಿರುವುದನ್ನು ಉಕ್ರೇನ್ ವಿರೋಧಿಸ್ತಿದೆ. ಜೊತೆಗೆ ಲಕ್ಷಾಂತರ ನಾಗರಿಕರನ್ನು ರಷ್ಯಾ ನಿರ್ಬಂಧಿಸಿದೆ ಎಂದು ಉಕ್ರೇನ್ ಆರೋಪಿಸಿದೆ. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

  • ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್‌ʼ ಹೀರೋ

    ಕೀವ್: ʻಟೈಟಾನಿಕ್‌ʼ ಸಿನಿಮಾ ಖ್ಯಾತಿಯ ಹೀರೋ, ಹಾಲಿವುಡ್‌ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ತನ್ನ ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ (10 ಮಿಲಿಯನ್‌ ಡಾಲರ್‌) ನೆರವು ನೀಡಿದ್ದಾರೆ.

    ಲಿಯೊನಾರ್ಡೊ ಅಜ್ಜಿ ಹೆಲೆನ್ ಇಂಡೆನ್‌ಬಿರ್ಕೆನ್ ಅವರು ಉಕ್ರೇನ್‌ ಮೂಲದವರು. ಉಕ್ರೇನ್‌ನ ಒಡೆಸ್ಸಾದಲ್ಲಿ ಜನಿಸಿದ್ದ ಅವರು 1917ರಲ್ಲಿ ತನ್ನ ಪೋಷಕರೊಂದಿಗೆ ಜರ್ಮನಿಗೆ ವಲಸೆ ಹೋಗಿದ್ದರು.  ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ಹೆಲೆನ್‌ 1943ರಲ್ಲಿ ಜರ್ಮನಿಯಲ್ಲಿ ಲಿಯೊನಾರ್ಡೊ ತಾಯಿ ಇರ್ಮೆಲಿನ್‌ಗೆ ಜನ್ಮ ನೀಡಿದರು. ಇರ್ಮೆಲಿನ್‌ ಅವರು ಲಿಯೊನಾರ್ಡೊ ತಂದೆ ಜಾರ್ಜ್‌ ಡಿಕ್ಯಾಪ್ರಿಯೊ ಅವರಿಂದ ವಿಚ್ಛೇದನ ಪಡೆದರು. ನಂತರ ಲಿಯೊನಾರ್ಡೊ ತನ್ನ ಅಜ್ಜಿ ಹೆಲೆನ್‌ ಅವರೊಟ್ಟಿಗೆ ಬೆಳೆದರು. ಲಿಯೊನಾರ್ಡೊ ಅವರ ನಟನಾ ಪ್ರತಿಭೆಯನ್ನು ಅಜ್ಜಿ ಪೋಷಿಸಿದರಲ್ಲದೇ, ಅವರ ನಟನಾ ವೃತ್ತಿಯನ್ನು ಬೆಂಬಲಿಸಿದರು. 2008ರಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ಹೆಲೆನ್‌ ಅವರು ನಿಧನರಾದರು.

    ಲಿಯೊನಾರ್ಡೊ ಅವರ ತವರು ಉಕ್ರೇನ್‌ಗೆ ಇಂಟರ್‌ನ್ಯಾಷನಲ್‌ ವಿಸೆಗ್ರಾಡ್‌ ಫಂಡ್‌ ಮೂಲಕ ಘೋಷಿಸಲಾಗಿದೆ. ಪೂರ್ವ ಯೂರೋಪ್‌ ಅಭಿವೃದ್ಧಿಯನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಉಪಕ್ರಮಗಳಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ವಿಸೆಗ್ರಾಡ್‌ ಗ್ರೂಪ್‌ ಯೋಜನೆ ಹೊಂದಿದೆ. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

    ಲಿಯೊನಾರ್ಡೊ ಬೆನ್ನಲ್ಲೇ ಅನೇಕ ನಟ-ನಟಿಯರು, ನಿರ್ದೇಶಕರು ಸಹ ಉಕ್ರೇನ್‌ಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ರಿಯಾನ್ ರೆನಾಲ್ಡ್ಸ್ ಮತ್ತು ಬ್ಲೇಕ್ ಲೈವ್ಲಿ ಅವರು ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದ್ದಾರೆ. ಮಿಲಾ ಕುನಿಸ್‌ ಮತ್ತು ಆಷ್ಟನ್‌ ಕಚ್ಚರ್‌ ಅವರು ಉಕ್ರೇನ್‌ನಲ್ಲಿ ಮಾನವೀಯ ಚಟುವಟಿಕೆಗಳು ಹಾಗೂ ಉಕ್ರೇನಿಯನ್‌ ನಿರಾಶ್ರಿತರ ಪುನರ್ವಸತಿಗಾಗಿ 23.09 ಕೋಟಿ (3 ಮಿಲಿಯನ್‌ ಡಾಲರ್) ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

  • ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರ: ಪೆಟ್ರೋಲಿಯಂ ಸಚಿವ

    ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಇಂಧನ ಬೆಲೆ ನಿರ್ಧಾರ: ಪೆಟ್ರೋಲಿಯಂ ಸಚಿವ

    ನವದೆಹಲಿ: ಉಕ್ರೇನ್‌ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಪರಿಣಾಮ ಭಾರತದ ಮೇಲೂ ಬೀರಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಲಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಪ್ರತಿಕ್ರಿಯಿಸಿದ್ದಾರೆ.

    ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಂಧನ ಬೆಲೆಗಳ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ 33% ಸರ್ಕಾರಿ ಉದ್ಯೋಗ, 200 ಕೋಟಿ ವೆಚ್ಚದಲ್ಲಿ ವಿಶ್ವವಿದ್ಯಾಲಯ ನಿರ್ಮಾಣ: ಅಮಿತ್ ಶಾ

    ತೈಲ ಬೆಲೆಗಳನ್ನು ಜಾಗತಿಕ ಬೆಲೆಗಳಿಂದ ನಿರ್ಧರಿಸಲಾಗುತ್ತದೆ. ದೇಶದ ಒಂದು ಭಾಗದಲ್ಲಿ ಯುದ್ಧದಂತಹ ಪರಿಸ್ಥಿತಿ ಇದೆ. ತೈಲ ಕಂಪನಿಗಳು ಇದಕ್ಕೆ ಕಾರಣವಾಗುತ್ತವೆ. ನಮ್ಮ ನಾಗರಿಕರ ಹಿತದೃಷ್ಟಿಯಿಂದ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ರಾಜಕೀಯವಾಗಿ ನಿರ್ಣಾಯಕ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಮತ್ತು ಗೋವಾ ಹಾಗೂ ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಕಾರಣಕ್ಕೆ ಇಂಧನ ಬೆಲೆ ನಿಯಂತ್ರಿಸಿಲ್ಲ. ಚುನಾವಣೆಗಳ ಕಾರಣದಿಂದಾಗಿ ಸರ್ಕಾರವು ತೈಲ ಬೆಲೆಗಳನ್ನು ನಿಯಂತ್ರಿಸಿದೆ ಎಂದು ಹೇಳುವುದು ಸರಿಯಲ್ಲ. ನಮ್ಮ ಸಾಮರ್ಥ್ಯದ ಅವಶ್ಯಕತೆಗಳನ್ನು ಪೂರೈಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೈಲಾದಷ್ಟು ಹೋರಾಡಿದ್ದೇವೆ, ಫಲಿತಾಂಶವನ್ನು ಕಾದು ನೋಡುತ್ತೇವೆ: ಪ್ರಿಯಾಂಕಾ ಗಾಂಧಿ

    ದೇಶದಲ್ಲಿ ಕಚ್ಚಾ ತೈಲದ ಕೊರತೆಯಾಗುವುದಿಲ್ಲ. ಕಚ್ಚಾ ತೈಲದ ಕೊರತೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಅವಶ್ಯಕತೆಗಳಲ್ಲಿ 85 ಪ್ರತಿಶತದಷ್ಟು ಕಚ್ಚಾ ತೈಲದ ಆಮದು ಮತ್ತು 50-55 ಪ್ರತಿಶತ ಅನಿಲದ ಮೇಲೆ ಅವಲಂಬಿತವಾಗಿದ್ದರೂ, ನಮ್ಮ ಶಕ್ತಿಯ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಬ್ರೆಂಟ್‌ ಕಚ್ಚಾ ತೈಲವು ಬ್ಯಾರೆಲ್‌ಗೆ 126 ಡಾಲರ್‌ ತಲುಪಿದೆ. ಇದನ್ನೂ ಓದಿ: ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

  • ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1

    ನವದೆಹಲಿ: ಜಾಗತಿಕವಾಗಿ ನಿರ್ಬಂಧಗಳಿಗೆ ಒಳಗಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಹೆಚ್ಚಿನ ನಿರ್ಬಂಧಕ್ಕೊಳಗಾದ ರಾಷ್ಟ್ರವಾಗಿ ರಷ್ಯಾ ಹೊರಹೊಮ್ಮಿದೆ. ಉಕ್ರೇನ್‌ ಮೇಲೆ ಯುದ್ಧ ಸಾರಿದ ನಂತರ ಜಾಗತಿಕವಾಗಿ ನಿರ್ಬಂಧಕ್ಕೊಳಗಾದ ರಾಷ್ಟ್ರಗಳಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ.

    ಕ್ಯಾಸ್ಟಲಮ್‌.ಎಐ (Castellum.ai) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಮೆರಿಕ ಮತ್ತು ಯೂರೋಪ್‌ ಒಕ್ಕೂಟ ರಾಷ್ಟ್ರಗಳು ರಷ್ಯಾ ವಿರುದ್ಧ ಹಲವಾರು ನಿರ್ಬಂಧಗಳನ್ನು ವಿಧಿಸಿವೆ. ಇದನ್ನೂ ಓದಿ: ನಾನು ಅಡಗಿಕೊಂಡಿಲ್ಲ, ಯಾರಿಗೂ ಹೆದರುವುದಿಲ್ಲ, ನಮ್ಮ ದೇಶಭಕ್ತಿ ಗೆಲ್ಲುತ್ತೆ: ಝೆಲೆನ್ಸ್ಕಿ

    ದಿನ ಕಳೆದಂತೆ ರಷ್ಯಾ ಮೇಲಿನ ನಿರ್ಬಂಧಗಳ ಒತ್ತಡ ಮತ್ತಷ್ಟು ಹೆಚ್ಚಾಗುತ್ತಿದೆ. ರಷ್ಯಾ ಮೇಲೆ ಹೊಸದಾಗಿ 2,778 ನಿರ್ಬಂಧಗಳನ್ನು ವಿಧಿಸಲಾಗಿದ್ದು, ಈ ಸಂಖ್ಯೆ 5,530ಕ್ಕೆ ಏರಿಕೆಯಾಗಿದೆ. ನೆಟ್‌ಫ್ಲಿಕ್ಸ್‌ ಮತ್ತು ಅಮೆರಿಕ ಎಕ್ಸ್‌ಪ್ರೆಸ್‌ ಸೇರಿದಂತೆ ಅಮೆರಿಕದ ಅನೇಕ ಕಂಪನಿಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿವೆ.

    ಜಾಗತಿಕ ನಿರ್ಬಂಧಕ್ಕೆ ಒಳಗಾಗಿರುವ ದೇಶಗಳ ಪಟ್ಟಿ ಹೀಗಿದೆ
    ರಷ್ಯಾ
    Castellum.ai ಪ್ರಕಾರ ಫೆ.22ಕ್ಕೂ ಮುಂಚೆ ರಷ್ಯಾ ಮೇಲೆ 2,754 ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿದ ನಂತರ ದೇಶದ ಮೇಲೆ ಹೊಸದಾಗಿ 2,778 ನಿರ್ಬಂಧಗಳನ್ನು ಜಾಗತಿಕ ಮಟ್ಟದಲ್ಲಿ ವಿಧಿಸಲಾಗಿದೆ.

    ಇರಾನ್
    ಕ್ಯಾಸ್ಟಲಮ್‌.ಎಐ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಜಾಗತಿಕ ನಿರ್ಬಂಧಗಳಲ್ಲಿ ಇರಾನ್‌ ಎರಡನೇ ಸ್ಥಾನದಲ್ಲಿದೆ. ಈ ದೇಶದ ವಿರುದ್ಧ 3,616 ನಿರ್ಬಂಧಗಳನ್ನು ಹೇರಲಾಗಿದೆ. ಪರಮಾಣು ಕಾರ್ಯಚಟುವಟಿಕೆ ಹಾಗೂ ಭಯೋತ್ಪಾದನೆಗೆ ಸಹಕಾರ ನೀಡಿದ ಆರೋಪದ ಮೇಲೆ ಈ ನಿರ್ಬಂಧಗಳನ್ನು ಹಾಕಲಾಗಿದೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

    ಸಿರಿಯಾ
    ಅಂತರ್ಯುದ್ಧದ ಕಾರಣಕ್ಕಾಗಿ ಯೂರೋಪ್‌ ಒಕ್ಕೂಟ, ಯುನೈಟೆಡ್‌ ಸ್ಟೇಟ್ಸ್‌, ಕೆನಡಾ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್‌ ದೇಶಗಳು ಸಿರಿಯಾ ವಿರುದ್ಧ ಹಲವು ನಿರ್ಬಂಧಗಳನ್ನು ಹಾಕಿವೆ. 2011ರ ನಂತರ ಈ ನಿರ್ಬಂಧಗಳನ್ನು ವಿಧಿಸಲಾಗಿದೆ. ಸಿರಿಯಾ ವಿರುದ್ಧ 2,608 ನಿರ್ಬಂಧಗಳಿವೆ.

    ಉತ್ತರ ಕೊರಿಯಾ
    ಪರಮಾಣು ಮತ್ತು ಬ್ಯಾಲಿಸ್ಟಿಕ್‌ ಕ್ಷಿಪಣಿ ಕಾರ್ಯಾಚರಣೆಗಳಿಗಾಗಿ ಉತ್ತರ ಕೊರಿಯಾ ಮೇಲೆ 2006ರಿಂದ ಯೂರೋಪ್‌ ಒಕ್ಕೂಟ ಅನೇಕ ನಿರ್ಬಂಧಗಳನ್ನು ವಿಧಿಸಿದೆ. 2,077 ನಿರ್ಬಂಧಗಳು ಈ ದೇಶದ ಮೇಲಿದೆ.

    ವೆನಿಜುವೆಲಾ
    ಕ್ಯಾಸ್ಟಲಮ್‌.ಎಐ ಪ್ರಕಾರ, ದಕ್ಷಿಣ ಅಮೆರಿಕ ದೇಶವಾದ ವೆನಿಜುವೆಲಾ ವಿರುದ್ಧ 651 ನಿರ್ಬಂಧಗಳನ್ನು ವಿಧಿಸಲಾಗಿದೆ. ಮಡುರೊ ಆಡಳಿತಕ್ಕೆ ಸಂಬಂಧಿಸಿದ ವ್ಯವಹಾರಗಳು ಮತ್ತು ತೈಲ ಘಟಕಗಳ ಮೇಲೆ 2017ರಿಂದ ಈವರೆಗೂ ಅಮೆರಿಕ ಈ ನಿರ್ಬಂಧಗಳನ್ನು ಹೇರಿದೆ.

    ಮ್ಯಾನ್ಮಾರ್
    ಈ ದೇಶ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಿಲಿಟರಿ ದಂಗೆಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಮತ್ತು ಇತರ ದೇಶಗಳಿಂದ ನಿರ್ಬಂಧಗಳನ್ನು ಎದುರಿಸಿದೆ. ಮ್ಯಾನ್ಮಾರ್ ವಿರುದ್ಧ 510 ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    ಕ್ಯೂಬಾ
    208 ನಿರ್ಬಂಧಗಳನ್ನು ಹೊಂದಿರುವ ಕ್ಯೂಬಾ, ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕ್ಯೂಬಾ 60 ವರ್ಷಗಳಿಗೂ ಹೆಚ್ಚು ಕಾಲ ಅಮೆರಿಕ ನಿರ್ಬಂಧಗಳ ಅಡಿಯಲ್ಲಿದೆ. ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರು ಕ್ಯೂಬಾವನ್ನು ಪ್ರಜಾಪ್ರಭುತ್ವೀಕರಣದ ಕಡೆಗೆ ಮತ್ತು ಮಾನವ ಹಕ್ಕುಗಳಿಗೆ ಹೆಚ್ಚಿನ ಗೌರವವನ್ನು ನೀಡುವವರೆಗೆ ನಿರ್ಬಂಧ ಹಾಕುತ್ತೇವೆ ಎಂದಿದ್ದರು. ಇದನ್ನೂ ಓದಿ: 24 ಗಂಟೆಯೊಳಗೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ: ಇಮ್ರಾನ್‌ ಖಾನ್‌ಗೆ ಗಡುವು

  • ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಎಲ್ಲೆಂದರಲ್ಲಿ ಕಾಣಿಸುತ್ತಿದೆ Z ಸಿಂಬಲ್ – ಇದು ರಷ್ಯಾದ ಯುದ್ಧದ ಸಂಕೇತ!

    ಕೀವ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದಾಗಿನಿಂದ ಅಲ್ಲಿನ ಹಲವು ಕಟ್ಟಡಗಳಲ್ಲಿ, ವಾಹನಗಳಲ್ಲಿ ಕೆಲವು ನಿಗೂಢ ಸಂಕೇತಗಳು ಮೂಡುತ್ತಿವೆ. ಇದೀಗ ಉಕ್ರೇನ್ ಗಡಿ ಬಳಿಯಲ್ಲಿರುವ ರಷ್ಯಾದ ಟ್ಯಾಂಕ್, ಮಿಲಿಟರಿ ಟ್ರಕ್‌ಗಳಲ್ಲಿ Z ಗುರುತು ಕಾಣಿಸುತ್ತಿವೆ.

    ಇಲ್ಲಿಯವರೆಗೆ ವಾಹನ ಹಾಗೂ ಮಿಲಿಟರಿ ಯಂತ್ರಗಳಲ್ಲಿ ಕೇವಲ Z ಚಿನ್ಹೆ ಮಾತ್ರ ಇರದೇ O, X, A, V ಚಿನ್ಹೆಗಳೂ ಕಾಣಿಸಿಕೊಂಡಿದ್ದವು. ಆದರೆ ಈ ಚಿನ್ಹೆಗಳ ಹಿನ್ನೆಲೆ ಏನು, ಇದನ್ನು ಏಕೆ ಬರೆಯಲಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

    ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್‌ಗಳಲ್ಲಿ ಹಲವರು ಈ ನಿಗೂಢ ಸಂಕೇತಗಳ ಬಗೆಗೆ ವಿವರಿಸಿದ್ದಾರೆ. ಹಲವರು ತಮ್ಮ ತಮ್ಮ ಅಭಿಪ್ರಾಯ ಹಾಗೂ ವ್ಯಾಖ್ಯಾನ ನೀಡಿದ್ದಾರೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?

    Z ಎಂದರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹಾಗೂ V ಎಂದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ತಮ್ಮ ಪಡೆಗಳನ್ನು ಗುರುತಿಸಲು ಈ ರೀತಿಯಾಗಿ ಸಂಕೇತಗಳನ್ನು ಬರೆಯಲಾಗಿದೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆoದರೆ  ಸಿರಿಲಿಕ್ ರಷ್ಯನ್ ವರ್ಣಮಾಲೆಯಲ್ಲಿ Z ಹಾಗೂ V ಅಕ್ಷರಗಳೇ ಅಸ್ಥಿತ್ವದಲ್ಲಿ ಇಲ್ಲ.

    ಇನ್ನೂ ಕೆಲವರು ರಷ್ಯಾದ ಪಡೆಗಳು ಪರಸ್ಪರ ದಾಳಿಯಿಂದ ರಕ್ಷಿಸಿಕೊಳ್ಳಲು ತಮ್ಮ ಟ್ಯಾಂಕ್‌ಗಳಲ್ಲಿ ಈ ರೀತಿಯ ಅಕ್ಷರಗಳನ್ನು ಬರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ- ಕಟ್ಟಡ ತೊರೆಯುವಂತೆ ಅಧಿಕಾರಿಗಳ ಸೂಚನೆ

    ರಷ್ಯಾದ ರಕ್ಷಣಾ ಸಚಿವಾಲಯ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ Z ಹಾಗೂ V ಅಕ್ಷರಗಳ ವಿನ್ಯಾಸದ ಗ್ರಾಫಿಕ್ಸ್ಒಂದನ್ನು ಹಂಚಿಕೊಂಡಿದೆ. ಆದರೆ ಈ ಎರಡು ಅಕ್ಷರಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ವಿವರಣೆಗಳನ್ನು ನೀಡಿಲ್ಲ.

    ಒಟ್ಟಿನಲ್ಲಿ Z ಅಕ್ಷರ ರಷ್ಯಾ ಸೈನ್ಯದ ಸಂಕೇತ ಎನ್ನಲಾಗುತ್ತಿದೆ. ದೇಶಾದ್ಯಂತ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಈ ಗುರುತನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಕೇವಲ ಯುದ್ಧದ ಟ್ಯಾಂಕ್‌ಗಳಲ್ಲಿ ಮಾತ್ರವಲ್ಲದೇ ನಾಗರಿಕರೂ ತಮ್ಮ ವಾಹನಗಳಲ್ಲಿ ಈ ಸಂಕೇತವನ್ನು ಬಳಸುತ್ತಿರುವುದು ಗಮನಾರ್ಹವಾಗಿದೆ.

  • ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ನಮಗೆ ತಾರತಮ್ಯ ಮಾಡಿದ್ದಾರೆ – ತಮಿಳುನಾಡು ವಿದ್ಯಾರ್ಥಿಗಳು

    ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ನಮಗೆ ತಾರತಮ್ಯ ಮಾಡಿದ್ದಾರೆ – ತಮಿಳುನಾಡು ವಿದ್ಯಾರ್ಥಿಗಳು

    ಚೆನ್ನೈ: ಉಕ್ರೇನ್‌ನಿಂದ ಭಾರತಕ್ಕೆ ಮರಳಿರುವ ತಮಿಳುನಾಡು ವಿದ್ಯಾರ್ಥಿಗಳ ಗುಂಪೊಂದು ಸ್ಥಳಾಂತರಕ್ಕೆ ನೇಮಿಸಿದ್ದ ಅಧಿಕಾರಿಗಳು ನಮ್ಮನ್ನು ಉತ್ತರ ಭಾರತದ ವಿದ್ಯಾರ್ಥಿಗಳೊಂದಿಗೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒಲವು ತೋರಿದ್ದಾರೆ. ಸ್ಥಳಾಂತರದ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಕೆಲವು ದಕ್ಷಿಣ ಭಾರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳು ಉತ್ತರ ಭಾರತದ ವಿದ್ಯಾರ್ಥಿಗಳ ಪರವಾಗಿದ್ದು, ನಮ್ಮ ಹೆಸರನ್ನು ಸ್ಥಳಾಂತರದ ಪಟ್ಟಿಯಿಂದ ಅಳಿಸಿದ್ದಾರೆ. ಹಾಗೂ ಕೇರಳದ ವಿದ್ಯಾರ್ಥಿಗಳಿಗಾಗಿ ಏರ್ಪಾಡು ಮಾಡಲಾಗಿದ್ದ ವಿಮಾನವನ್ನೂ ರದ್ದು ಮಾಡಿ, ಬದಲಾಯಿಸಿದ್ದಾರೆ ಎಂದು ಕೆಲವು ವಿದ್ಯಾರ್ಥಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ತಮಿಳು ಮೂಲದ ವಿದ್ಯಾರ್ಥಿಯೊಬ್ಬ ನಾವು ವಿಮಾನಕ್ಕಾಗಿ 24-48 ಗಂಟೆಗಳ ಕಾಲ ಕಾದಿದ್ದೇವೆ. ಆದರೂ ಅಂದು ಬೆಳಗ್ಗೆ ಬಂದಿದ್ದ ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಿದ್ದಾರೆ. ನಮ್ಮ ಹೆಸರನ್ನು ಅಳಿಸಿ ಆ ವಿದ್ಯಾರ್ಥಿಗಳ ಹೆಸರನ್ನು ನಮೂದಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇನ್ನೊಬ್ಬ ವಿದ್ಯಾರ್ಥಿ ನಮ್ಮನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದರು. ನಾವು ಮಾರ್ಚ್ 1 ರಂದು ಗಡಿ ತಲುಪಿದ್ದೆವು. ಮಾರ್ಚ್ 2 ರಂದು ವಿಮಾನವನ್ನು ನಿಗದಿಪಡಿಸಬೇಕಿತ್ತು. ಆದರೆ ಅದು ಆಗಿರಲಿಲ್ಲ ಎಂದರು. ಇದನ್ನೂ ಓದಿ: ಮನ್ ಕಿ ಬಾತ್ ನಾರಿ ಶಕ್ತಿ ಸಂಭ್ರಮದ ವೀಡಿಯೋ ಶೇರ್ ಮಾಡಿದ ಮೋದಿ

    ಪೋಲೆಂಡ್‌ನಲ್ಲಿ ಕೇರಳದ 15 ವಿದ್ಯಾರ್ಥಿಗಳಿಗಾಗಿ ಒಂದು ವಿಮಾನ ನಿಗದಿಪಡಿಸಲಾಗಿತ್ತು. ಆದರೆ ಅವರು ಕೇರಳದ ವಿದ್ಯಾರ್ಥಿಗಳಿಗೆ ತಿಳಿಸದೇ ಆ ವಿಮಾನವನ್ನು ರದ್ದುಗೊಳಿಸಿದ್ದರು. ಬದಲಿಗೆ ಉತ್ತರ ಭಾರತದ ವಿದ್ಯಾರ್ಥಿಗಳನ್ನು ಆ ವಿಮಾನದಲ್ಲಿ ಕೂರಿಸಿದ್ದರು. ಇದರಿಂದ ಕೇರಳ ಮೂಲದ ವಿದ್ಯಾರ್ಥಿಗಳೂ ಆಕ್ರೋಶಗೊಂಡಿದ್ದರು ಎಂದಿದ್ದಾರೆ.

  • ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

    ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ 11 ವರ್ಷದ ಬಾಲಕ

    ಕೀವ್: 11 ವರ್ಷದ ಬಾಲಕನೊಬ್ಬ ರಷ್ಯಾದ ಆಕ್ರಮಣದ ನಡುವೇಯು ಏಕಾಂಗಿಯಾಗಿ ಉಕ್ರೇನ್ ಗಡಿಗೆ ಪ್ರಯಾಣಿಸಿದ್ದಾನೆ.

    ಆಗ್ನೇಯ ಉಕ್ರೇನ್‍ನ ಝಪೊರೊಝೈಯಿಂದ ಏಕಾಂಗಿಯಾಗಿ 11 ವರ್ಷದ ಉಕ್ರೇನಿಯನ್ ಬಾಲಕನೊಬ್ಬನು ತನ್ನ ಪಶ್ಚಿಮ ನೆರೆಯ ರಾಷ್ಟ್ರವಾದ ಸ್ಲೋವಾಕಿಯಾ ತಲುಪಿದ್ದಾನೆ. ಬಾಲಕನು ಸ್ಲೋವಾಕಿಯಾಕ್ಕೆ ವಯಸ್ಕರ ಸಹಾಯವಿಲ್ಲದೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿ, ತಲುಪಿದ್ದಾನೆ ಎಂದು ಉಕ್ರೇನ್‍ನ ಆಂತರಿಕ ವ್ಯವಹಾರಗಳ ಸಚಿವಾಲಯವು ಮಂಗಳವಾರ ತಿಳಿಸಿದೆ. ಇದನ್ನೂ ಓದಿ: ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ಬಾಲಕನು ತನ್ನ ನಗು ಮುಖ, ನಿಜವಾದ ನಾಯಕನಂತಹ ದೃಢಸಂಕಲ್ಪದಿಂದ ಎಲ್ಲರ ಗಮನಸೆಳೆದಿದ್ದು, ಅವನು ಸುರಕ್ಷಿತವಾಗಿದ್ದಾಗಿ ತಲುಪಿದ್ದಾನೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    ಕೆಲ ಅನಿವಾರ್ಯತೆಗಳ ಕಾರಣ ಬಾಲಕನ ಪೋಷಕರು ಉಕ್ರೇನ್‍ನಲ್ಲಿಯೇ ಉಳಿಯಬೇಕಾಗಿತ್ತು. ಹೀಗಾಗಿ ಅವನು ಒಬ್ಬಂಟಿಗನಾಗಿಯೇ ಗಡಿ ದಾಟಬೇಕಾಯಿತು ಎಂದು ಸಚಿವಾಲಯವೂ ತಿಳಿಸಿದೆ.

    ಬಾಲಕನು ಪ್ಲಾಸ್ಟಿಕ್ ಚೀಲ, ಪಾಸ್‍ಪೋರ್ಟ್ ಮತ್ತು ಫೋನ್ ಸಂಖ್ಯೆಯನ್ನು ಕೈಯಲ್ಲಿ ಬರೆದುಕೊಂಡು ಸ್ಲೋವಾಕಿಯಾಕ್ಕೆ ಬಂದಿರುವುದಾಗಿ ಸ್ಲೋವಾಕಿಯಾ ಸಚಿವಾಲಯವು ಬಾಲಕನ ಸುರಕ್ಷಿತ ಆಗಮನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

    ಸ್ಲೋವಾಕಿಯಾದ ಸ್ವಯಂಸೇವಕರು ಅವನನ್ನು ಆದರದಿಂದ ಸ್ವಾಗತಿಸಿ ಆಹಾರ ಮತ್ತು ಪಾನೀಯಗಳನ್ನು ನೀಡಿ ಉಪಚರಿಸಿದ್ದಾರೆ. ಬಾಲಕನ ತಾಯಿಯೂ ಅವನ ಕೈಯಲ್ಲಿ ಅವರ ಸಂಬಂಧಿಕರೊಬ್ಬರ ಮೊಬೈಲ್ ಸಂಖ್ಯೆ ಬರೆದಿದ್ದರು. ಇದರ ಸಹಾಯದಿಂದ ಅವನನ್ನು ಸೇರಿಸಬೇಕಾಗಿದ್ದ ಜಾಗಕ್ಕೆ ಸೇರಿಸಿದ್ದೇವೆ ಎಂದು ಸಚಿವಾಲಯವೂ ತಿಳಿಸಿದೆ.

    ಮಾರ್ಚ್ 6 ರಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ 10 ದಿನಗಳ ಅಂತರದಲ್ಲಿ 1.5 ಮಿಲಿಯನ್ ಜನರು ಉಕ್ರೇನ್‍ನಲ್ಲಿ ನಡೆಯುತ್ತಿರುವ ಯುದ್ಧದಿಂದ ಪಲಾಯನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಫೆಬ್ರವರಿ 24 ರಿಂದ ಸಂಘರ್ಷ ಪ್ರಾರಂಭವಾದಾಗಿನಿಂದಲೂ ಅತಿ ಹೆಚ್ಚು ನಿರಾಶ್ರಿತರನ್ನು ಪೋಲೆಂಡ್ ದೇಶವು ಉಕ್ರೇನ್‍ನಿಂದ ಸ್ವೀಕರಿಸಿದೆ. ಇದುವರೆಗೆ ಒಟ್ಟು 1,735,068 ಉಕ್ರೇನ್ ನಾಗರಿಕರು ಮಧ್ಯ ಯುರೋಪ್‍ನ ಗಡಿ ದಾಟಿದ್ದಾರೆ ಎಂದು ಯುಎನ್‍ಹೆಚ್‍ಸಿಆರ್ ವರದಿ ನೀಡಿದೆ.

     

  • ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ಉಕ್ರೇನ್‍ನ 202 ಶಾಲೆ, 34 ಆಸ್ಪತ್ರೆಯನ್ನು ಧ್ವಂಸಗೊಳಿಸಿದ ರಷ್ಯಾ ಸೇನೆ

    ಕೀವ್: ರಷ್ಯಾ-ಉಕ್ರೇನ್ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಸೇನೆ ಉಕ್ರೇನ್‍ನ 202 ಶಾಲೆ ಮತ್ತು 34 ಆಸ್ಪತ್ರೆಯನ್ನು ಧ್ವಂಸ ಮಾಡಿರುವ ಬಗ್ಗೆ ವರದಿಯಾಗಿದೆ.

    ಕೀವ್ ನಗರದ 202 ಶಾಲೆ, 34 ಆಸ್ಪತ್ರೆ ಮತ್ತು 1,500ಕ್ಕೂ ಹೆಚ್ಚು ವಸತಿ ಕಟ್ಟಡಗಳನ್ನು ರಷ್ಯಾ ಸೇನೆ ಕ್ಷಿಪಣಿ, ರಾಕೆಟ್ ದಾಳಿಯ ಮೂಲಕ ಧ್ವಂಸ ಮಾಡಿದೆ. ಅಲ್ಲದೇ ಉಕ್ರೇನ್‍ನಲ್ಲಿರುವ 900ಕ್ಕೂ ಅಧಿಕ ವಸತಿ ಕಟ್ಟಡಗಳಲ್ಲಿ ನೀರು, ಕರೆಂಟ್ ಇಲ್ಲದೆ ಜನ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಲೊಕೇಶನ್ ಶೇರ್ ಮಾಡಿದ ಝೆಲೆನ್ಸ್ಕಿ

    ರಷ್ಯಾ ದಾಳಿಗೆ ಖಾರ್ಕೀವ್ ಸಂಪೂರ್ಣ ಸ್ಮಶಾನದಂತಾಗಿದ್ದು, ಇಂದು ಕೂಡ ಪೆಟ್ರೋಲ್ ಪ್ಲಾಂಟ್‍ಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದೆ. ಇತ್ತ ಪ್ರತಿರೋಧ ಒಡ್ಡುತ್ತಿರುವ ಉಕ್ರೇನ್, ರಷ್ಯಾ ಸೇನಾ ವಾಹನಗಳ ಮೇಲೆ ಡ್ರೋಣ್ ದಾಳಿ ನಡೆಸುತ್ತಿದೆ. ಇತ್ತ ಉಕ್ರೇನ್‍ನ 26ಕ್ಕೂ ಹೆಚ್ಚು ಯುದ್ಧ ವಾಹನಗಳು ಸಂಪೂರ್ಣ ನೆಲಕಚ್ಚಿದೆ. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಮತ್ತೊಮ್ಮೆ ಗುಡುಗಿದ್ದಾರೆ. ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಝೆಲೆನ್ಸ್ಕಿ, ನಾನು ಕೀವ್‍ನಲ್ಲಿ ಇದ್ದು, ಇಲ್ಲಿಂದ ಓಡಿಹೋಗುವ ಪ್ರಶ್ನೆಯೇ ಇಲ್ಲ. ಯುದ್ಧವನ್ನು ಗೆಲ್ಲಲು ನಾವು ಯಾವ ರೀತಿಯ ಕ್ರಮವನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ನನ್ನ ಕೊನೆ ಉಸಿರುರುವರೆಗೂ ಯುದ್ಧ ಮಾಡುತ್ತೇನೆ ಎಂದು ರಷ್ಯಾಗೆ ಎಚ್ಚರಿಕೆ ರವಾನಿಸಿದ್ದಾರೆ.

  • ನವೀನ್ ಮೃತದೇಹ ಸಿಕ್ಕಿದೆ: ಬೊಮ್ಮಾಯಿ

    ನವೀನ್ ಮೃತದೇಹ ಸಿಕ್ಕಿದೆ: ಬೊಮ್ಮಾಯಿ

    ಬೆಂಗಳೂರು: ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ ಶವಾಗಾರದಲ್ಲಿ ನವೀನ್‍ನ ಮೃತ ದೇಹ ಇಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನವೀನ್ ಮೃತ ದೇಹವನ್ನು ತರುವ ಬಗ್ಗೆ ಕೇಂದ್ರ ಸಚಿವ ಜೈಶಂಕರ್ ಅವರ ಜತೆ ಮಾತಾಡಿದ್ದೇನೆ. ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು.

    ರಷ್ಯಾ ಉಕ್ರೇನ್ ಮೇಲೆ ಇನ್ನೂ ದಾಳಿ ನಡೆಸುತ್ತಿದೆ. ಜೊತೆಗೆ ಉಕ್ರೇನ್‍ನಲ್ಲಿ ಶೆಲ್ ದಾಳಿ ಇನ್ನೂ ನಡೀತಿದೆ. ಅದು ನಿಂತ ಮೇಲೆ ಮೃತ ದೇಹ ತರುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಪಡೆಗೆ ಸೇರಿದ ತಮಿಳುನಾಡಿನ ಯುವಕ

    ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುವುದು ಚುನಾವಣೆ ವೇಳೆಯೇ ನಿರೀಕ್ಷೆ ಇತ್ತು. ಯುಪಿ, ಉತ್ತರಾಖಂಡ್, ಗೋವಾ, ಮಣಿಪುರಗಳಲ್ಲಿ ಜಯ ಸಾಧಿಸುವುದು ಗೊತ್ತಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆ ಚುನಾವಣಾ ಸಮಿಕ್ಷೆಗಳು ಸಹ ಬಂದಿದೆ. ಇನ್ನೂ ಎರಡು ದಿನ ಕಾದು ನೋಡೋಣ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿಶ್ವ ಯುದ್ಧ ನಂತ್ರ ಫಸ್ಟ್ ಟೈಂ ಏಸುಕ್ರಿಸ್ತನ ಶಿಲ್ಪ ಸ್ಥಳಾಂತರ