Tag: Rules

  • ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ – ಪ್ರಸಾದಕ್ಕೂ ಎಕ್ಸ್ ಪೈರಿ ಡೇಟ್

    ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ – ಪ್ರಸಾದಕ್ಕೂ ಎಕ್ಸ್ ಪೈರಿ ಡೇಟ್

    ಬೆಂಗಳೂರು: ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಘಟನೆ ನಂತರ ಎಚ್ಚೆತ್ತ ಸರ್ಕಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

    ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ತಯಾರಿಸಿದ ದಿನ ಹಾಗೂ ಎಷ್ಟು ದಿನಗಳವರೆಗೆ ಮಾತ್ರ ಸೇವಿಸಬಹುದು ಎಂಬ ಮಾಹಿತಿ ನಮೂದಿಸುವುದು ಕಡ್ಡಾಯವಾಗಲಿದೆ. ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಯಮ ಪ್ರಕಾರ ‘ಎಕ್ಸ್ ಪೈರಿ ಡೇಟ್’ ನಮೂದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದನ್ನೂ ಓದಿ: ಸುಳ್ವಾಡಿ ದುರಂತದ ಬಳಿಕ ಎಚ್ಚೆತ್ತ ಮುಜರಾಯಿ ಇಲಾಖೆ! – ಆದೇಶದಲ್ಲಿ ಏನಿದೆ?

    ಮುಜರಾಯಿ ಇಲಾಖೆ ದೇವಾಲಯಗಳು ಸೇರಿದಂತೆ ಎಲ್ಲಾ ಖಾಸಗಿ ದೇವಾಲಯಗಳು ಹಾಗೂ ಮಠಗಳಿಗೂ ಈ ನಿಯಮ ಅನ್ವಯವಾಗಲಿದೆ. ಪ್ರಸಾದದ ಮೇಲೆ ಏನೆಲ್ಲಾ ನಮೂದಾಗಬೇಕು ಅನ್ನೋದನ್ನು ನೋಡೋದಾದರೆ,

    * ಪ್ರಸಾದದ ಪ್ಯಾಕೆಟ್‍ನಲ್ಲಿ ದೇವಾಲಯ ಹೆಸರು
    * ತಯಾರಾದ ದಿನಾಂಕ
    * ಬ್ಯಾಚ್ ನಂಬರ್
    * ತೂಕ
    * ಬಳಕೆಯ ಅವಧಿ(ಎಕ್ಸ್ ಪೈರಿ ಡೇಟ್, ಯೂಸ್ ಬಿಫೋರ್, ಬೆಸ್ಟ್ ಬಿಫೋರ್)
    * ಪ್ರಸಾದಕ್ಕೆ ಬಳಸಿರುವ ಪದಾರ್ಥ

    ಇದು ಕೇವಲ ದೇವಾಲಯ ಪ್ರಸಾದಕ್ಕೆ ಮಾತ್ರವಲ್ಲದೇ ತೀರ್ಥದ ಬಾಟಲ್‍ಗೂ ಈ ನಿಯಮ ಅನ್ವಯವಾಗಲಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ತಿಂದು 17 ಮಂದಿ ಮೃತಪಟ್ಟಿದ್ದಾರೆ. ಇನ್ನೂ 60ಕ್ಕೂ ಮಂದಿಗೂ ಹೆಚ್ಚಿನ ಭಕ್ತರು ಅಸ್ವಸ್ಥರಾಗಿದ್ದು, ಮೈಸೂರು ಮತ್ತು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ರೀತಿಯ ನಿಯಮವನ್ನು ಜಾರಿಗೆ ತಂದಿದೆ.

    ಈ ಹಿಂದೆಯೇ ಮುಜರಾಯಿ ಇಲಾಖೆ, ದೇವರ ನೈವೇದ್ಯ ಮತ್ತು ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಬೇಕು. ಪ್ರಮುಖವಾಗಿ ದೇವಾಲಯದ ಅಡುಗೆ ಕೋಣೆಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ ಮೇಲೆ ಕಟ್ಟುನಿಟ್ಟಿನ ನಿಗಾವಹಿಸುವುದು. ತಯಾರಿಸಿದ ನೈವೇದ್ಯ/ ಅಡುಗೆಗೆ ಸ್ವೀಕರಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು ನಂತರ ವಿತರಣೆ ಮಾಡಬೇಕು ಮತ್ತು ದೇವಾಲಯಗಳಲ್ಲಿ ತಯಾರಿಸುವ ಪ್ರಸಾದವನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಬೇಕು. ಈ ರೀತಿಯ ಅನೇಕ ನಿಯಮಗಳನ್ನು ಕಡ್ಡಾಯ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕಿಂಗ್‌ನಲ್ಲೇ ಬೈಕ್ ಪಾರ್ಕ್ ಮಾಡಿದ್ರೂ ಟೋಯಿಂಗ್ ಕಾಟ- ಫೈನ್ ಕಟ್ಟದೆ ಮಹಿಳೆ ಅವಾಜ್

    ಪಾರ್ಕಿಂಗ್‌ನಲ್ಲೇ ಬೈಕ್ ಪಾರ್ಕ್ ಮಾಡಿದ್ರೂ ಟೋಯಿಂಗ್ ಕಾಟ- ಫೈನ್ ಕಟ್ಟದೆ ಮಹಿಳೆ ಅವಾಜ್

    ಬೆಂಗಳೂರು: ನಗರದ ಸೇಂಟ್ ಮಾರ್ಥಸ್ ರಸ್ತೆಯಲ್ಲಿ ವಾಹನ ಟೋಯಿಂಗ್ ಮಾಡಿದಾಗ ಫೈನ್ ಕಟ್ಟದೆ ರೂಲ್ಸ್ ಪ್ರಶ್ನಿಸಿ ಮಹಿಳೆಯೊಬ್ಬರು ಎಲ್ಲರಿಗೂ ಬೆವರಿಳಿಸಿದ್ದಾರೆ. ಪಾರ್ಕಿಂಗ್ ಪ್ಲೇಸ್ ನಲ್ಲಿ ದ್ವಿಚಕ್ರ ವಾಹನ ಪಾರ್ಕ್ ಮಾಡಿದರೂ ಟೋಯಿಂಗ್ ಮಾಡಿ ಕಾಟ ಕೊಡ್ತಿದ್ದ ಸಿಬ್ಬಂದಿಗೆ ಮಹಿಳೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಹಿಳೆ ಅವಾಜ್ ಹಾಕಿದ್ದಕ್ಕೆ ಟೋಯಿಂಗ್ ಮಾಡುವ ಸಿಬ್ಬಂದಿ ವಾಹನದೊಳಗೆ ಇರುವ ಗಾಡಿಯನ್ನು ಬಿಟ್ಟು ಹೋಗಿದ್ದಾರೆ. ಟ್ರಾಫಿಕ್ ಪೊಲೀಸ್ ಇಲ್ಲದೆ ಅನೌನ್ಸ್ ಮೆಂಟ್ ಮಾಡದೇ ಸಿಬ್ಬಂದಿ ಏಕಾಏಕಿ ವಾಹನವನ್ನು ಟೋಯಿಂಗ್ ಮಾಡಿ ಗಾಡಿಯಲ್ಲಿ ಎತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಮಹಿಳೆ ಗಾಡಿಗೆ ಅಡ್ಡಲಾಗಿ ನಿಂತು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದು ಪಾರ್ಕಿಂಗ್ ಪ್ಲೇಸ್, ಅದ್ಯಾಗೆ ಗಾಡಿಗಳನ್ನು ತಗೊಂಡು ಹೋಗುತ್ತೀರಾ?. ಅನೌನ್ಸ್ ಮಾಡಿದ್ದೀರಾ? ಟ್ರಾಫಿಕ್ ಪೊಲೀಸ್ ಎಲ್ಲಿ ಅಂತಾ ದ್ವಿಚಕ್ರ ವಾಹನ ಸವಾರರಾಗಿರುವ ಮಹಿಳೆಯಿಂದ ಟೋಯಿಂಗ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇದು ಸುಲಿಗೆ ಮಾಡುವ ತಂತ್ರ ಅಂತಾ ಜಗಳ ಕೂಡ ಮಾಡಿದ್ದಾರೆ.

    ಮಹಿಳೆ ಆವಾಜ್ ಹಾಕುತ್ತಿದ್ದಂತೆಯೇ ಚೈನ್ ಹಿಡಿದು ಮಹಿಳೆಗೆ ರೌಂಡಪ್ ಮಾಡಿ ಸಿಬ್ಬಂದಿ ಮತ್ತೆ ವಾಹನವನ್ನು ಟೋಯಿಂಗ್ ಮಾಡಲು ಸಿದ್ಧರಾದರು. ಕೊನೆಗೆ ಎಲ್ಲಾ ಮಹಿಳಾ ವಾಹನ ಸವಾರರು ಗಲಾಟೆ ಮಾಡಲು ಶುರು ಮಾಡಿದರು. ಮಹಿಳೆಯರ ಗಲಾಟೆಗೆ ಟೋಯಿಂಗ್ ಸಿಬ್ಬಂದಿ ವಾಹನ ಕೆಳಗಿಳಿಸಿದ್ದಾರೆ.

    ನಂತರ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಕೂಡ ಟೋಯಿಂಗ್ ಸಿಬ್ಬಂದಿಯನ್ನು ನಿಮ್ಮ ಲಿಮಿಟ್ಸ್ ಅಲ್ಲ ಇದು. ಯಾಕೆ ಬಂದ್ರಿ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂದು ಟೋಯಿಂಗ್ ಸಿಬ್ಬಂದಿ ತೆರೆಳಿದ್ದಾರೆ.

    https://www.youtube.com/watch?v=nlmg_vZJpZs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯತಮೆ ಹಾಕಿದ 22 ರೂಲ್ಸ್ ನೋಡಿ ದಂಗಾದ ಪ್ರೇಮಿ

    ಪ್ರಿಯತಮೆ ಹಾಕಿದ 22 ರೂಲ್ಸ್ ನೋಡಿ ದಂಗಾದ ಪ್ರೇಮಿ

    ಯುವತಿಯೊಬ್ಬಳು ತಾನು ಪ್ರೀತಿಸುವ ಗೆಳಯನಿಗಾಗಿ ಬರೋಬ್ಬರಿ 22 ನಿಯಮಗಳನ್ನು ಹಾಕಿ ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದಳು. ಈಗ 22 ನಿಯಮಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಯೊವತಿಯೊಬ್ಬಳು ತನ್ನ ಪ್ರಿಯತಮನನ್ನು ಸಂಪೂರ್ಣ ಹತೋಟಿಗೆ ತಗೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ 22 ನಿಯಮಗಳನ್ನು ಟೈಪ್ ಮಾಡಿ ಅದರ ಫೋಟೋ ತೆಗೆದುಕೊಂಡು ಟ್ವೀಟ್ ಮಾಡಿದ್ದಾಳೆ. ಆದರೆ ಆ ಫೋಟೋ ವೈರಲ್ ಆಗುತ್ತಿದ್ದಂತೆ ಯುವತಿ ಖಾತೆಯಿಂದ ಟ್ವೀಟ್ ಡಿಲೀಟ್ ಮಾಡಿದ್ದಾಳೆ. ಆದರೆ ಬೇರೆಯವರು ಆ ಫೋಟೋವನ್ನು ಡೌನ್ ಲೋಡ್ ಮಾಡಿಕೊಂಡು ಅವರ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    @kkeyes96 ಎಂಬ ಹೆಸರಿನ ಟ್ವೀಟ್ ಖಾತೆಯಿಂದ ಈ ಫೋಟೋ ಅಪ್ಲೋಡ್ ಆಗಿದೆ. ಸದ್ಯಕ್ಕೆ ಯುವತಿಯ ರೂಲ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನಿಯಮದ ಪಟ್ಟಿ
    1. ಬೇರೆ ಹುಡುಗಿಯ ಫೋನ್ ನಂಬರ್ ಇಟ್ಟುಕೊಳ್ಳವಂತಿಲ್ಲ.
    2. ಯಾವುದೇ ಸಾಮಾಜಿಕ ಜಾಲತಾಣದಲ್ಲಿ(ಇನ್ ಸ್ಟಾಗ್ರಾಂ, ಟ್ವಿಟರ್, ಇತ್ಯಾದಿ..)ಸಕ್ರಿಯವಾಗಿರುವಂತಿಲ್ಲ
    3. ನನ್ನ ಬಿಟ್ಟು ನೀನು ಹೋಂಡಾ ಬೈಕಿನಲ್ಲಿ ಹೋಗುವಂತಿಲ್ಲ.
    4. ಬೇರೆ ಹುಡುಗಿಯನ್ನು ನೋಡುವಂತಿಲ್ಲ.
    5. ವಾರಕ್ಕೆ ಎರಡು ದಿನಕ್ಕಿಂತ ಅಧಿಕವಾಗಿ ಸ್ನೇಹಿತರೊಂದಿಗೆ ಹೊರ ಹೋಗುವಂತಿಲ್ಲ.
    6. ನಾನು ಜೊತೆ ಇದ್ದಾಗ ಕುಡಿಯುವಂತಿಲ್ಲ.
    7. ನೀನಿದ್ದ ಸ್ಥಳಕ್ಕೆ ಹುಡುಗಿಯರು ಬರುತ್ತಿದ್ದರೆ ನೀನು ಹೋಗಬೇಕು.
    9. ಬೇರೆ ಹುಡುಗಿಯ ಜೊತೆ ಮಾತನಾಡುವಂತಿಲ್ಲ.

    ಈ ರೀತಿಯಾಗಿ ಅನೇಕ ನಿಯಮಗಳನ್ನು ಯುವತಿ ಹಾಕಿದ್ದಾಳೆ. ಈ ಪೋಸ್ಟ್ ನೋಡಿ ನೆಟ್ಟಿಗರು ಹುಡುಗನಿಗೆ ಇನ್ನೊಬ್ಬ ಹುಡುಗಿಯನ್ನು ಹುಡುಕು ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಕ್ರೇಜಿಯಾಗಿ ರಿಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲಾ-ಕಾಲೇಜು ಆವರಣದಲ್ಲಿ ಮಾರಾಟ- ಒಂದು ಪ್ಯಾಕ್ ಕೊಂಡರೆ 6 ಸಿಗರೇಟ್ ಫ್ರೀ

    ಶಾಲಾ-ಕಾಲೇಜು ಆವರಣದಲ್ಲಿ ಮಾರಾಟ- ಒಂದು ಪ್ಯಾಕ್ ಕೊಂಡರೆ 6 ಸಿಗರೇಟ್ ಫ್ರೀ

    ಬೆಂಗಳೂರು: ಶಾಲಾ-ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಲ್‍ಬೋರೋ ಸಿಗರೇಟ್ ಮಾರಾಟ ಮಾಡುತ್ತಿದ್ದು, ವಿದ್ಯಾರ್ಥಿಗಳು ಒಂದು ಪ್ಯಾಕ್ ಕೊಂಡರೆ 6 ಸಿಗರೇಟ್ ಫ್ರೀ ಕೊಡುತ್ತಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಸದ್ಯ ಮಾರಾಟಗಾರರ ಮೇಲೆ ಪೊಲೀಸರ ಕಣ್ಣು ಬಿದ್ದಿದೆ.

    ಧೂಮಪಾನ ಸೇವಿಸಿದರೆ ಸಾವು ಸಂಭವಿಸುತ್ತದೆ. ಧೂಮಪಾನ ಮಾಡುವವರು ಎಚ್ಚರಿಕೆಯಿಂದ ಇರಿ. ಇದೆಲ್ಲ ಸಿಗರೇಟ್ ಮೇಲಿನ ಎಚ್ಚರಿಕೆ ಗಂಟೆಗಳು. ಆದರೆ ವಿದೇಶಿ ಕಂಪನಿ ಮಾಲ್‍ಬೋರೋ ಸಿಗರೇಟ್ ಕಂಪನಿಗೆ ಇದು ಯಾವುದೂ ಅನ್ವಯ ಆಗೋಲ್ಲ ಎನಿಸುತ್ತದೆ. ಈ ಎಲ್ಲ ನಿಯಮ ಗಾಳಿಗೆ ತೂರಿ ಶಾಲಾ-ಕಾಲೇಜು ಆವರಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಲ್‍ಬೋರೋ ಸಿಗರೇಟ್ ಮಾರಾಟ ಮಾಡುತ್ತಿದ್ದವರ ಮೇಲೆ ಖಾಕಿ ಕೆಂಗಣ್ಣು ಬೀರಿದೆ.

    ಕಳೆದ ಒಂದು ವಾರದ ಹಿಂದೆ ಏಕಕಾಲದಲ್ಲಿ ಸೆಂಟ್ರಲ್, ದಕ್ಷಿಣ ಮತ್ತು ಆಗ್ನೇಯ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸಿಕ್ಕ ಲಕ್ಷಾಂತರ ರೂ. ಮೌಲ್ಯದ ಸಿಗರೇಟು ಸೀಜ್ ಮಾಡಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಸ್ಥಳೀಯ ಪೊಲೀಸರು ಕೂಡ ಎಫ್‍ಐಆರ್ ದಾಖಲು ಮಾಡಿದ್ದು, 25ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

    ಸದ್ಯ ಬಂಧನದ ಬಳಿಕ ಹೆಚ್ಚು ಕಮೀಷನ್ ಕೊಟ್ಟು ಈ ಸಿಗರೇಟ್ ಮಾರಾಟ ಮಾಡಿಸುತ್ತಿದ್ದಾರೆ ಎನ್ನುವ ಅಂಶ ಬಯಲಾಗಿದೆ. ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಈ ಸಿಗರೇಟ್ ಸ್ಯಾಂಪಲ್ ಕೊಡುತ್ತಿದ್ದಾರೆ. ಒಂದು ಪ್ಯಾಕ್ ಸಿಗರೇಟಿಗೆ 6 ಸಿಗರೇಟು ಫ್ರೀ ಕೊಡುತ್ತಾರೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸಿಗರೇಟು ಕಂಪನಿ ವಿರುದ್ಧ ದೊಡ್ಡ ಆರೋಪ ಕೇಳಿ ಬಂದಿದ್ದು ಈಗ ಸಂಕಷ್ಟ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಚಾರಿ ಪೊಲೀಸರು!

    ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿರುವ ಸಂಚಾರಿ ಪೊಲೀಸರು!

    ಬೆಂಗಳೂರು: ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ಬೆಳ್ಳಂಬೆಳ್ಳಗ್ಗೆ ವಿದ್ಯಾರ್ಥಿಗಳು ಹಾಗೂ ಮ್ಯಾಜಿಕ್ ಮ್ಯಾನ್‍ಗಳ ಜೊತೆ ರಸ್ತೆಗಿಳಿದ್ರು. ದಿನವಿಡೀ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದವರನ್ನು ಅಡ್ಡಗಟ್ಟಿ ಕ್ರಮಗೈಗೊಳ್ಳುತ್ತಿದ್ದ ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ಕಡಿಮೆ ಮಾಡುವುದರ ವಿಭಿನ್ನವಾಗಿ ವಾಹನ ಸವಾರರ ಮನಗೆಲ್ಲುವ ಪ್ರಯತ್ನ ಮಾಡಿದರು.

    ನಗರದ ಹೆಬ್ಬಾಳ ಹಾಗೂ ಆರ್.ಟಿ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸವಾರರು ಸಂಚಾರಿ ರೂಲ್ಸ್ ಸರಿಯಾಗಿ ಪಾಲಿಸುದಿಲ್ಲ. ಯುವಕರು ರಸ್ತೆಯಲ್ಲಿ ವಿಲೀಂಗ್ ಮಾಡುವುದರಿಂದ ಸಾವು ನೋವುಗಳು ಹೆಚ್ಚಾಗುತ್ತಿದೆ. ಆ ಕಾರಣಕ್ಕೆ ಸಂಚಾರಿ ಪೊಲೀಸರು ಇಂದು ಮ್ಯಾಜಿಕ್ ಹಾಗೂ ವಿದ್ಯಾರ್ಥಿಗಳ ಮೂಲಕ ಜಾಥಾ ಮಾಡಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

    ಸಂಚಾರ ನಿರ್ವಾಹಣೆ ಮತ್ತು ರಸ್ತೆ ಸುರಕ್ಷತಾ ತಿಂಗಳಾಗಿರುವುದರಿಂದ ಸಂಚಾರಿ ಪೊಲೀಸರು ವಾಹನ ಸವಾರರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸರು ಮಾಡಿದರು. ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಂದ ಜಾತಾ ಮಾಡಿಸುವುದರ ಮೂಲಕ ವಾಹನ ಸವಾರರ ಮನಗೆಲ್ಲುವ ಪ್ರಯತ್ನವನ್ನು ಮಾಡಿದರು.

  • ಡೆಡ್ಲಿ ಬಿಎಂಟಿಸಿ, ಇವರಿಗೆ ನೋ ರೂಲ್ಸ್ – ಸೆಸ್ ವಿಧಿಸೋ ಸಚಿವರೇ ಒಮ್ಮೆ ಇಲ್ನೋಡಿ

    ಡೆಡ್ಲಿ ಬಿಎಂಟಿಸಿ, ಇವರಿಗೆ ನೋ ರೂಲ್ಸ್ – ಸೆಸ್ ವಿಧಿಸೋ ಸಚಿವರೇ ಒಮ್ಮೆ ಇಲ್ನೋಡಿ

    ಬೆಂಗಳೂರು: ನಗರದಲ್ಲಿ ಸಂಚರಿಸುತ್ತಿರೋ ಬಿಎಂಟಿಸಿ ಬಸ್ ಗಳಿಗೆ ಇನ್ಶೂರೆನ್ಸ್ ಇಲ್ಲ. ಡ್ರೈವರ್‍ಗೆ ಡಿಎಲ್ ಕೂಡ ಇಲ್ಲ ಅನ್ನೋ ಸ್ಫೋಟಕ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ.

    ಈ ಕುರಿತು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಈ ವೇಳೆ ರಾಷ್ಟ್ರೀಯ ಮಟ್ಟದಲ್ಲಿ ಸೇಫ್ಟಿ ಅವಾರ್ಡ್ ಪಡೆದ ಬಿಎಂಟಿಸಿಯ ಕರಾಳತನ ಬಯಲಾಗಿದೆ. ಹೌದು. ಬಿಎಂಟಿಸಿ ಬಸ್ ಡ್ರೈವರ್ಸ್ ಬಳಿ ಆರ್ ಸಿ ಬುಕ್, ಡಿಎಲ್ ಏನೂ ಇರಲ್ಲ. ಅಧಿಕಾರಿಗಳು ಲೂಟಿ ಹೊಡೆಯೋಕೆ ಗಾಡಿ ಇನ್ಶೂರೆನ್ಸ್ ಮಾಡಿಕೊಂಡಿಲ್ವಾ ಅನ್ನೋ ಪ್ರಶ್ನೆಯೊಂದು ಮೂಡಿದೆ.

    ಈ ನಷ್ಟ ಕಣ್ಣಿಗೆ ಕಾಣದೆ ನಮ್ಮ ಮಿನಿಸ್ಟರ್ ಸಾಹೇಬ್ರು ಸೆಸ್ ವಿಧಿಸೋಕೆ ಹೋಗಿದ್ದಾರೆ. ನಮ್ಮದು ಸರ್ಕಾರಿ ಬಸ್, ಇದೆಲ್ಲ ಯಾಕ್ ಸ್ವಾಮಿ ಅಂತ ಕೆಲ ಡ್ರೈವರ್ ಗಳು ಹೇಳುತ್ತಾರೆ. ಇನ್ನು ಕೆಲವರು ಅದೆಲ್ಲ ಇಟ್ಕೊಳ್ಳೋಕೆ ಜಾಗ ಇಲ್ಲ ಬಿಡ್ರೀ ಅಂತಾ ಕಳ್ಳ ನೆಪ ಹೇಳಿ ತಪ್ಪಿಸಿಕೊಂಡಿದ್ದಾರೆ.

    ನಿತ್ಯ ಸಾವಿರಾರು ಜನ ಪ್ರಯಾಣಿಸೋ ಬಿಎಂಟಿಸಿಗಿಲ್ಲ ಸಾರಿಗೆ ಕಾಯ್ದೆ. ಡಿಎಲ್ ಇಲ್ಲದೇ ಇದ್ರೆ, ವಾಹನ ವಿಮೆ ಕಟ್ಟದಿದ್ರೆ ಜನಸಾಮಾನ್ಯರಿಗೆ ಫೈನ್ ಹಾಕ್ತಾರೆ. ಆದ್ರೆ ಸರ್ಕಾರಿ ಸಾರಿಗೆ ವ್ಯವಸ್ಥೆಗೆ ಮಾತ್ರ ಈ ಕಾನೂನು ಅನ್ವಯವಾಗೋದೆ ಇಲ್ವಾ ಅನ್ನೋ ಪ್ರಶ್ನೆಯೊಂದು ವಾಹನ ಸವಾರರನ್ನು ಕಾಡಿದೆ.

  • ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮತ್ತಷ್ಟು ರಂಜನೆ ನೀಡಲು ಐಪಿಎಲ್ 11ನೇ ಅವೃತ್ತಿಯಲ್ಲಿ ಬದಲಾಯ್ತು ನಿಯಮಗಳು!

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ ಆರಂಭದೊಂದಿಗೆ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ಮನೋರಂಜನೆ ದೊರೆಯುತ್ತಿದ್ದು. ಟೀಂ ಫ್ರಾಂಚೈಸಿಗಳು ಟೂರ್ನಿಯಲ್ಲಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದರೊಂದಿಗೆ 11 ನೇ ಆವೃತ್ತಿಯ ಟೂರ್ನಿ ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

    ಮಿಡ್ ಸೀಸನ್ ಟ್ರಾನ್ಸ್ ಫಾರ್: ಟೂರ್ನಿಯಲ್ಲಿ ಪ್ರಮುಖವಾಗಿ `ಮಿಡ್ ಸೀಸನ್ ಟ್ರಾನ್ಸ್ ಫಾರ್’ ಎಂಬ ಹೊಸ ನಿಯಮ ಜಾರಿಗೆಯಾಗಿದೆ. ಈ ನಿಯಮದ ಪ್ರಕಾರ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನು ಆಡದ ಆಟಗಾರರು ಹರಾಜದ ತಂಡದ ಬದಲಾಗಿ ಬೇರೆಂದು ತಂಡ ಸೇರಲು ಅವಕಾಶ ನೀಡಲಾಗಿದೆ. ಅಲ್ಲದೇ ಈ ವೇಳೆ ಎರಡು ಪಂದ್ಯ ಮತ್ತು ಅದಕ್ಕಿಂತ ಕಡಿಮೆ ಪಂದ್ಯಗಳನ್ನು ಆಡಿದ್ದರೂ, ತಂಡದ ಬದಲಾವಣೆಗೆ ಅವಕಾಶವಿದೆ.

     

    ಮಿಡ್ ಸೀಸನ್ ಟ್ರಾನ್ಸ್ ಫಾರ್ ನಿಯಮ ಟೂರ್ನಿಯ ಮಧ್ಯದಲ್ಲಿ ಕೇವಲ 5 ದಿನಗಳು ಮಾತ್ರ ಅವಕಾಶ ನೀಡಲಾಗಿದೆ. 2016 ರ ಈ ನಿಯಮ ಜಾರಿಯಲ್ಲಿ ಇಲ್ಲದ ಕಾರಣ ಬೌಲರ್ ಡೇಲ್ ಸ್ಟೇನ್ನ್ ಸ್ಟೈನ್ ಗುಜರಾತ್ ಲಯನ್ಸ್ ಪರ ಆಡಲು ಸಾಧ್ಯವಾಗಿರಲ್ಲ. ಹಲವು ಆಟಗಾರರು ಇಂತಹ ಸಮಸ್ಯೆಯನ್ನು ಎದುರಿಸಿದ್ದರು.

    ಡಿಆರ್ ಎಸ್: ಐಸಿಸಿ ಹಾಗೂ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಜಾರಿ ಇದ್ದ ತೀರ್ಪು ಪುನರ್ ಪರಿಶೀಲನೆ ನೀಡುವ ನಿಯಮವನ್ನು ಜಾರಿ ಮಾಡಲಾಗಿದೆ. ಪಂದ್ಯದ ವೇಳೆ ಪ್ರತಿ ತಂಡಕ್ಕೂ ಒಂದು ಮನವಿಯನ್ನು ಸಲ್ಲಿಸುವ ಅವಕಾಶ ನೀಡಲಾಗಿದೆ.

    ಡಿಆರ್ ಎಸ್ ನಿಯಮವನ್ನು ಐಪಿಎಲ್ ಟೂರ್ನಿಯಲ್ಲಿ ಜಾರಿಗೆ ತರಲು ಹಲವು ವರ್ಷಗಳಿಂದ ಚಿಂತನೆ ನಡೆಸಲಾಗಿತ್ತು. ಇದರ ಭಾಗವಾಗಿ 11 ನೇ ಆವೃತ್ತಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.

    ದೂರದರ್ಶನದಲ್ಲಿ ಐಪಿಎಲ್: ದೇಶದ ಗ್ರಾಮೀಣ ಭಾಗದ ಜನರಿಗೂ ಐಪಿಎಲ್ ತಲುಪಿಸುವ ಭಾಗವಾಗಿ ದೂದರ್ಶನದಲ್ಲೂ ಐಪಿಎಲ್ ಪಂದ್ಯಗಳ ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ. ಈ ಕುರಿತು ನೇರ ಪ್ರಸಾರದ ಹಕ್ಕುಗಳನ್ನು ಖರೀದಿಸಿರುವ ಸ್ಟಾರ್ ವಾಹಿಯೂ ಅನುಮತಿ ನೀಡಿದೆ. ಆದರೆ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾದ ಒಂದು ಗಂಟೆ ತಡವಾಗಿ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

    ವರ್ಚುವಲ್ ರಿಯಾಲಿಟಿ: ಅಂತರ್ಜಾಲದಲ್ಲಿ ಕ್ರಿಕೆಟ್ ನೇರ ಪ್ರಸಾರ ಮಾಡುತ್ತಿದ್ದ ಹಾಟ್ ಸ್ಟಾರ್ ಆ್ಯಪ್ ವರ್ಚುವಲ್ ರಿಯಾಲಿಟಿ ಸೇವೆಯನ್ನು ನೀಡುತ್ತಿದೆ. ಈ ಮಾದರಿಯಲ್ಲಿ ಪಂದ್ಯವನ್ನು ನೋಡಲು ಗ್ರಾಹಕರು ಮಾರುಕಟ್ಟೆಯಲ್ಲಿ ಹೊಸ ವಿಆರ್ ಗ್ಲಾಸ್ ಗಳನ್ನು ಖರೀದಿಸಬೇಕಿದೆ. ಅಲ್ಲದೇ ವಿಆರ್ ಸೇವೆ ತಂತ್ರಜ್ಞಾನವನ್ನು ಹೊಂದಿರುವ ಮೊಬೈಲ್ ನಲ್ಲಿ ಮಾತ್ರ ಈ ಸೇವೆ ಪಡೆಯಲು ಸಾಧ್ಯವಿದೆ.

    ವಿಆರ್ ವಿಶೇಷತೆ: ಆ್ಯಪ್ ನಲ್ಲಿ ಗ್ರಾಹಕರು ಲೈವ್ ಪ್ರಸಾರವನ್ನು ಅರ್ಧ ಗಂಟೆಗಳ ಕಾಲ ನಿಲ್ಲಿಸಿ ಮತ್ತೆ ನೋಡಲು ಅವಕಾಶ ನೀಡಲಾಗಿದೆ. ವಿಆರ್ ಬಳಕೆ ಮಾಡುವುದರಿಂದ ಕ್ರೀಡಾಂಗಣದ 360 ಡಿಗ್ರಿ ಕೋನದಲ್ಲಿಯೂ ವಿಕ್ಷೀಸಬಹುದಾಗಿದೆ. ಇದರಿಂದ ಮೈದಾನದಲ್ಲೇ ಕುಳಿತು ನೋಡುತ್ತಿರುವ ಅನುಭವ ಪಡೆಯಬಹುದು ಎಂದು ಸ್ಟಾರ್ ಇಂಡಿಯಾ ವಾಹಿನಿಯ ನಿರ್ದೇಶಕ ಸಂಜಾಯ್ ಗುಪ್ತಾ ತಿಳಿಸಿದ್ದಾರೆ.