Tag: RT-PCR Test

  • ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ

    ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ

    ಕಾರವಾರ: ಕೊರೊನಾ ರೂಪಾಂತರ ವೈರಸ್ ಡೆಲ್ಟಾ ಪ್ಲಸ್ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಜಿಲ್ಲೆ ಕಾರವಾರದ ಮಾಜಾಳಿ -ಗೋವಾ ಗಡಿಯಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ಟೆಸ್ಟ್ ನೆಗಟಿವ್ ಇಲ್ಲದವರಿಗೆ ಗೋವಾ ಹಾಗೂ ಕರ್ನಾಟಕ ಪ್ರದೇಶಕ್ಕೆ ತೆರಳಲು ಕರ್ನಾಟಕ ಸರ್ಕಾರ ಹಾಗೂ ಗೋವಾ ಸರ್ಕಾರ ನಿರ್ಬಂಧ ವಿಧಿಸಿದೆ.

    ಗೋವಾ ಭಾಗದಿಂದ ಬರುವ ಮಹಾರಾಷ್ಟ್ರ, ಚಂಡೀಗಢ, ಕೇರಳ, ಹರಿಯಾಣ, ದೆಹಲಿ, ಉತ್ತರ ಪ್ರದೇಶದಿಂದ ಬರುವ ವಾಹನಗಳಿಗೆ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ. ಈ ರಾಜ್ಯದ ಪ್ರಯಾಣಿಕರಲ್ಲಿ ಕೊರೊನಾ ನೆಗಟಿವ್ ರಿಪೋರ್ಟ್ ಇಲ್ಲದವರನ್ನು ಮರಳಿ ಕಳುಹಿಸಲಾಗುತ್ತಿದೆ. ಈ ಪ್ರದೇಶದಿಂದ ಬಂದು ಕಾರವಾರದಲ್ಲಿ ತಂಗುವ ಜನರು ಕಡ್ಡಾಯವಾಗಿ 14 ದಿನ ಹೋಮ್ ಐಸೋಲೇಷನ್ ನಲ್ಲಿ ಇರಬೇಕು. ಗಡಿಯಲ್ಲಿ ಹೀಗೆ ಬರುವ ಜನರಿಗೆ ಕೈಗೆ ಸೀಲ್ ಹಾಕಿ ಕಳುಹಿಸಲಾಗುತ್ತಿದೆ.

    ನಿತ್ಯ ಕಾರವಾರದಿಂದ ಗೋವಾಕ್ಕೆ ತೆರಳುವ ಉದ್ಯೋಗಿಗಳಿಗೆ ಸಂಕಷ್ಟ
    ಪ್ರತಿ ದಿನ ಕಾರವಾರದಿಂದ ಗೋವಾಕ್ಕೆ ಸಾವಿರಾರು ಜನರು ಉದ್ಯೋಗಕ್ಕಾಗಿ ತೆರಳುತ್ತಾರೆ. ಆದರೆ ಇಂದಿನಿಂದ ಗೋವಾ ಸರ್ಕಾರ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಇಲ್ಲದವರಿಗೆ ಗೋವಾ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಜೊತೆಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಅವಧಿ ಕೇವಲ ಒಂದು ದಿನ ಮಾತ್ರ ಇರುವುದರಿಂದ ಕಾರವಾರದಿಂದ ಗೋವಾಕ್ಕೆ ತೆರಳುವ ಉದ್ಯೋಗಿಗಳು ಪ್ರತಿ ದಿನ ಟೆಸ್ಟ್ ರಿಪೋರ್ಟ್ ತೆಗೆದುಕೊಂಡು ಹೋಗಬೇಕು. ಇದನ್ನೂ ಓದಿ: ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯ- ಮಹಾರಾಷ್ಟ್ರದ ಗಡಿಯಲ್ಲಿನ ಚೆಕ್ ಪೋಸ್ಟ್‌ಗಳಲ್ಲಿ ಹೇಳೋರಿಲ್ಲ, ಕೇಳೋರಿಲ್ಲ

    ಕರ್ನಾಟಕ ಭಾಗದಲ್ಲಿ ಟೆಸ್ಟ್ ಮಾಡಿಸಿದರೆ ವರದಿ ಬರಲು ಒಂದು ದಿನ ಬೇಕಾಗುತ್ತದೆ. ಇನ್ನು ಗೋವಾ ಭಾಗದಲ್ಲಿ ಟೆಸ್ಟ್ ಮಾಡಿಸಿದರೆ ತಕ್ಷಣದಲ್ಲಿ ಬೇಕಾದಲ್ಲಿ 250 ರೂ. ಶುಲ್ಕ ನೀಡಬೇಕು. ಪ್ರತಿ ದಿನ ಶುಲ್ಕ ನೀಡಿ ಉದ್ಯೋಗಿಗಳು ತೆರಳಲು ಸಾಧ್ಯವಾಗದು. ಹೀಗಾಗಿ ಕಾರವಾರದಿಂದ ಗೋವಾಕ್ಕೆ ತೆರಳುವ ಉದ್ಯೋಗಿಗಳಿಗೆ ಟೆಸ್ಟ್ ಮಾಡಿಸುವುದೇ ದೊಡ್ಡ ತಲೆನೋವಾಗಿದೆ. ಪ್ರತಿ ದಿನ ಟೆಸ್ಟ್ ಮಾಡಿಸಿಕೊಂಡರೂ ತಿಂಗಳಿಗೆ 7,500 ರೂ. ಹಣ ಕರ್ಚಾಗುತ್ತದೆ. ಬರುವ ಸಂಬಳದಲ್ಲಿ ಅರ್ಧ ಭಾಗವನ್ನು ಟೆಸ್ಟ್ ಗಾಗಿ ಇಟ್ಟರೆ ಜೀವನಕ್ಕೆ ಏನು ಮಾಡುವುದು ಎಂಬ ಚಿಂತೆ ಉದ್ಯೋಗಿಗಳದ್ದು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ SSLC ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನಾಪತ್ತೆ!

    ಗೋವಾವನ್ನು ಅಪ್ಪಿಕೊಳ್ಳುವ ಸರ್ಕಾರ ಇತ್ತ ಗಮನಹರಿಸಲಿ
    ಕರ್ನಾಟಕದಿಂದ ಗೋವಾಕ್ಕೆ ತೆರಳಬೇಕು ಎಂದರೆ ಕರ್ನಾಟಕದ ಜನರಿಗೆ ಕೊರೊನಾ ನೆಗಟಿವ್ ರಿಪೋರ್ಟ ಕಡ್ಡಾಯವಾಗಿಬೇಕು. ಆದರೆ ಗೋವಾದಿಂದ ಕರ್ನಾಟಕಕ್ಕೆ ಬರಬೇಕು ಎಂದರೆ ಯಾವುದೇ ಟೆಸ್ಟ್ ಇಲ್ಲದೇ ಗೋವಾ ಜನರು ಕರ್ನಾಟಕ ಪ್ರವೇಶಿಸಲು ಕರ್ನಾಟಕ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಕರ್ನಾಟಕಕ್ಕೆ ಗೋವಾ ವಾಹನಗಳು ಹಾಗೂ ಜನರು ಯಾವುದೇ ಪರೀಕ್ಷೆ ಇಲ್ಲದೇ ಓಡಾಟ ನಡೆಸುತಿದ್ದಾರೆ. ಇದನ್ನೂ ಓದಿ: ಕಾರವಾರದಲ್ಲಿ ನಿರ್ಬಂಧಿತ ಸ್ಯಾಟಲೈಟ್ ಫೋನ್ ಆ್ಯಕ್ಟಿವ್- ಐಎಸ್‍ಡಿಯಿಂದ ಅರಣ್ಯದಲ್ಲಿ ಕೂಮಿಂಗ್ ಕಾರ್ಯಚರಣೆ

    ಇನ್ನು ಮಹಾರಾಷ್ಟ್ರದ ಜನರು ಕೂಡ ಈ ಅವಕಾಶವನ್ನು ಬಳಸಿಕೊಳ್ಳುತಿದ್ದು, ಗೋವಾ ನೋಂದಣಿ ವಾಹನದಲ್ಲಿ ಕರ್ನಾಟಕ ಪ್ರವೇಶಿಸುತಿದ್ದು ಬಿಂದಾಸಾಗಿ ಓಡಾಟ ನಡೆಸುತಿದ್ದಾರೆ. ಹೀಗಾಗಿ ಗೋವಾಕ್ಕೂ ಕೂಡ ನಿರ್ಬಂಧ ಹೇರಬೇಕು. ಅಲ್ಲಿನ ಸರ್ಕಾರ ಹೇಗೆ ಕರ್ನಾಟಕದ ಜನರಿಗೆ ಕೊರೊನಾ ನೆಗಟಿವ್ ವರದಿ ನೀಡಬೇಕು ಹಾಗೆಯೇ ಗೋವಾದ ಜನರಿಗೂ ನೆಗಟಿವ್ ರಿಪೋರ್ಟ ಕಡ್ಡಾಯ ಮಾಡಬೇಕು. ಇಲ್ಲವಾದರೆ ಈ ಅವಕಾಶವನ್ನು ಉಪಯೋಗಿಸಿಕೊಂಡು ಇತರೆ ರಾಜ್ಯದ ಜನರು ಕರ್ನಾಟಕ ಪ್ರವೇಶಿಸುತ್ತಾರೆ. ಇದು ಸರಿಯಲ್ಲಾ ಕ್ರಮ ತೆಗದುಕೊಳ್ಳದಿದ್ದರೆ ಕರ್ನಾಟಕ ಗಡಿಯಲ್ಲಿ ಪ್ರತಿಭಟನೆ ನೆಡೆಸುವ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ. ಇದನ್ನೂ ಓದಿ: 30 ವರ್ಷದ ಹಿಂದೆ ಮುಳುಗಡೆಯಾಗಿದ್ದ ವಿದೇಶಿ ಹಡಗಿನ ಅವಶೇಷ ಪತ್ತೆ

  • ಬ್ರಿಟನ್‍ನಿಂದ ಬೆಂಗ್ಳೂರಿಗೆ ಬಂದ ನಾಲ್ವರಿಗೆ ಕೊರೊನಾ ಶಂಕೆ- ಮತ್ತೆ ಟೆಸ್ಟಿಂಗ್

    ಬ್ರಿಟನ್‍ನಿಂದ ಬೆಂಗ್ಳೂರಿಗೆ ಬಂದ ನಾಲ್ವರಿಗೆ ಕೊರೊನಾ ಶಂಕೆ- ಮತ್ತೆ ಟೆಸ್ಟಿಂಗ್

    – ಯುಕೆಯಿಂದ ಬಂದ 289 ಜನಕ್ಕೂ ಪರೀಕ್ಷೆ

    ಬೆಂಗಳೂರು: ಬ್ರಿಟನ್ ನಿಂದ ಬೆಂಗಳೂರಿಗೆ ಬಂದಿಳಿದ ನಾಲ್ವರು ಪ್ರಯಾಣಿಕರಿಗೆ ಕೊರೊನ ಶಂಕೆ ವ್ಯಕ್ತವಾಗಿದೆ. ಹಾಗಾಗಿ ನಾಲ್ವರನ್ನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ.

    ಕೊರೊನಾ ರೂಪಾಂತರ ವೈರಸ್ ಭೀತಿ ಹಿನ್ನೆಲೆ ಯುಕೆಯಿಂದ ಆಗಮಿಸುವ ವಿಮಾನಗಳನ್ನ ಹಲವು ದಿನಗಳಿಂದ ತಡೆ ಹಿಡಿಯಲಾಗಿತ್ತು. ಇಂದಿನಿಂದ ಯುಕೆ ವಿಮಾನಗಳ ಮರು ಆಗಮನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಲಂಡನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಮೊದಲ ವಿಮಾನ ಆಗಮನವಾಯಿತು. ಲಂಡನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂಜಾನೆ 4.30 ಗಂಟೆಗೆ ಸುಮಾರು 289 ಪ್ರಯಾಣಿಕರು ಕೆಐಎಬಿ ಗೆ ಬಂದಿಳಿದ್ರು.

    ಇನ್ನೂ ಲಂಡನ್ ನಿಂದ ಬಂದ ಪ್ರತಿಯೊಬ್ಬ ಪ್ರಯಾಣಿಕರಿಗೂ ಟರ್ಮಿನಲ್ ನಲ್ಲೆ ಆರ್-ಟಿ-ಪಿಸಿಆರ್ ಟೆಸ್ಟ್ ಮಾಡಿ ರಿಸಲ್ಟ್ ಬರುವವರೆಗೂ ವೈಟಿಂಗ್ ಲೌಂಜ್ ನಲ್ಲಿ ಎಲ್ಲಾ ಪ್ರಯಾಣಿಕರನ್ನ ಇರಿಸಲಾಗಿತ್ತು. ಬೆಳಗ್ಗೆ 4.30 ಕ್ಕೆ ಬಂದ ಯುಕೆ ಪ್ರಯಾಣಿಕರು ಸುಮಾರು ಐದೂವರೆ ಗಂಟೆಗಳ ಕಾಲ ಟೆಸ್ಟ್ ವರದಿ ಬರುವವರೆಗೂ ಯಾರನ್ನು ಹೊರಗಡೆ ಬಿಡದೆ ತಡೆಯಲಾಗಿತ್ತು. ಹೀಗಾಗಿ ಟೆಸ್ಟ್ ವರದಿ ರಿಪೋರ್ಟ್ ವರದಿ ಬರೋದು ತಡವಾಗಿದ್ದರಿಂದ ಒಳಗಡೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

    ಇಂದು ಮೊದಲ ವಿಮಾನ ಯುಕೆಯಿಂದ ಆಗಮಿಸಿದ್ದು ಅದರಲ್ಲಿ 145 ಜನ ಪುರುಷರು, 96 ಜನ ಮಹಿಳೆಯರು, 32 ಮಕ್ಕಳು ಹಾಗೂ 16 ಜನ ವಿಮಾನ ಸಿಬ್ಬಂದಿ ಸೇರಿದಂತೆ 289 ಮಂದಿ ಕೆಐಎಬಿ ಗೆ ಆಗಮಿಸಿದ್ದಾರೆ. ಅದರಲ್ಲಿ ಎಲ್ಲಾ ಪ್ರಯಾಣಿಕರು ಯುಕೆಯಿಂದಲೇ ಕೊರೊನಾ ಟೆಸ್ಟ್ ರಿಪೋರ್ಟ್ ತಂದಿದ್ದರು ಸಹ ಇಲ್ಲಿ ಕೂಡ ಮತ್ತೊಮ್ಮೆ ಟೆಸ್ಟ್ ಗೆ ಒಳಪಡಿಸಲಾಯಿತು. ಇನ್ನೂ ಕೊರೊನಾ ಟೆಸ್ಟ್‍ನಲ್ಲಿ ನಾಲ್ವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು, ಕೊರಾನಾ ಶಂಕೆ ವ್ಯಕ್ತವಾಗಿದೆ. ಇನ್ನುಳಿದ ಎಲ್ಲಾ ಪ್ರಯಾಣಿಕರ ಕೊರೊನಾ ಟೆಸ್ಟ್ ನೆಗಟಿವ್ ಬಂದಿದೆ. ಹೀಗಾಗಿ ನೆಗಟಿವ್ ಬಂದ ಪ್ರಯಾಣಿಕರ ಕೈಗೆ ಸ್ಟ್ಯಾಂಪಿಂಗ್ ಹಾಕಿರುವ ಆರೋಗ್ಯಾಧಿಕಾರಿಗಳು 14 ದಿನ ಸೆಲ್ಫ್ ಹೋಂ ಕ್ವಾರಂಟೈನ್ ಆಗುವಂತೆ ಸೂಚಿಸಿ ಕಳುಹಿಸಿದ್ದಾರೆ.

    ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದಿದ್ದು ನಾಲ್ವರನ್ನ ಮತ್ತೊಮ್ಮೆ ಟೆಸ್ಟ್ ಮಾಡಿಸಲು ಮುಂದಾಗಿದೆ. ಒಟ್ಟಾರೆ ಕೊರೊನಾ ರೂಪಾಂತರ ವೈರಸ್ ಭೀತಿಯಿಂದ ಯುಕೆಯಿಂದ ತಡೆ ಹಿಡಿಯಲಾಗಿದ್ದ ವಿಮಾನಗಳ ಹಾರಾಟ ಇಂದಿನಿಂದ ಮರು ಆರಂಭವಾಗಿದ್ದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಟೆಸ್ಟಿಂಗ್ ನಲ್ಲಿ ಪಾಸಿಟಿವ್ ಬಂದ ಪ್ರಯಾಣಿಕರನ್ನ ಆಸ್ಪತ್ರೆಗಳಿಗೆ ರವಾನಿಸಿದ್ರೆ, ನೆಗೆಟಿವ್ ಬಂದ ಪ್ರಯಾಣಿಕರು ಕೈಗೆ ಸ್ಟಾಂಪಿಂಗ್ ಮಾಡಿ ಸೆಲ್ಪ್ ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗುತ್ತಿದೆ.

  • ಜನವರಿ 8ರಿಂದ ವಿಮಾನ ಸಂಚಾರ ಆರಂಭ – ಯುಕೆ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

    ಜನವರಿ 8ರಿಂದ ವಿಮಾನ ಸಂಚಾರ ಆರಂಭ – ಯುಕೆ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

    ನವದೆಹಲಿ: ಹೊಸ ರೂಪಾಂತರ ಕೊರೊನಾ ವೈರಸ್ ಹಿನ್ನೆಲೆ ರದ್ದುಗೊಂಡಿರುವ ವಿಮಾನಯಾನ ಸಂಚಾರ ಜನವರಿ 8ರಿಂದ ಆರಂಭಗೊಳ್ಳಲಿವೆ. ಹಾಗೆ ಯುಕೆಯಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಿಂದಲೇ ಆರ್.ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು.

    ಮಾರ್ಗಸೂಚಿಗಳು:
    1. ಯುಕೆಯಿಂದ ಬರುವ ಪ್ರಯಾಣಿಕರು ತಮ್ಮ ಸ್ವಂತ ಖಚಿನಿಂದಲೇ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಆರ್.ಟಿ-ಪಿಸಿಆರ್ ಟೆಸ್ಟ್ ಮಾಡಿಕೊಳ್ಳುವುದು.
    2. ಡೈರೋಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಯುಕೆಯ ಎಲಿಜಿಬಲ್ ಏರ್ ಲೈನ್ಸ್ ಕೇವಲ ಕೆಲ ವಿಮಾನಗಳ ಆಗಮನಕ್ಕೆ ಅನುಮತಿ ನೀಡಿದೆ. ಯುಕೆಯಿಂದ ಆಗಮಿಸುವ ವಿಮಾನಗಳ ಸಮಯದ ನಡುವೆ ಅಂತರವಿರಲಿದೆ. ಪ್ರತಿ ಪ್ರಯಾಣಿಕರ ಪರೀಕ್ಷೆ ಮತ್ತು ಜನ ದಟ್ಟಣೆ ತಡೆಯಲಿ ಈ ಪ್ಲಾನ್ ಮಾಡಲಾಗಿದೆ. ಯುಕೆಯಿಂದ ಮತ್ತೊಂದು ದೇಶಕ್ಕೆ ತೆರಳಿ, ಅಲ್ಲಿ ಫ್ಲೈಟ್ ಚೇಂಜ್ ಮಾಡುವ ಪ್ರಯಾಣಿಕರ ಬಗ್ಗೆ ಗಮನದಲ್ಲಿಡಲಾಗುತ್ತದೆ.

    3. ಪ್ರತಿ ಪ್ರಯಾಣಿಕರು ತಮ್ಮ 14 ದಿನದ ಟ್ರಾವೆಲ್ ಹಿಸ್ಟರಿಯನ್ನ ನಿಗಿದಿತ ಫಾರಂನಲ್ಲಿ ದಾಖಲಿಸೋದು ಕಡ್ಡಾಯ.
    4. ಜನವರಿ 8 ರಿಂದ ಜನವರಿ 30ರೊಳಗೆ ಆಗಮಿಸುವ ಪ್ರಯಾಣಿಕರು ಸೆಲ್ಫ್ ಡಿಕ್ಲೇರೇಷನ್ ಫಾರಂ ಮುಂಚಿತವಾಗಿ ಭರ್ತಿ ಮಾಡಬೇಕು.
    5. ಎಲ್ಲ ಪ್ರಯಾಣಿಕರು 72 ಗಂಟೆ ಮುಂಚಿನ ಆರ್.ಟಿ.- ಪಿಸಿಆರ್ ಪರೀಕ್ಷೆಯ ನೆಗೆಟಿವ್ ರಿಪೋಟ್ ತರಬೇಕು.

    6. ಪ್ರಯಾಣಿಕರಿಗೆ ವೇಟಿಂಗ್ ರೂಮಿನಲ್ಲಿ ಎಲ್ಲ ನಿಯಮಗಳನ್ನ ಡಿಸ್ ಪ್ಲೇ ಮೂಲಕ ತೋರಿಸಲಾಗುವುದು. ಹಾಗೆ ವಿಮಾನದಲ್ಲಿಯೂ ಮಾಹಿತಿ ನೀಡಲಾಗುವುದು.
    7. ವಿಮಾನ ನಿಲ್ದಾಣದ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ್ರೆ ಐಸೋಲೇಶನ್ ಗೆ ಒಳಗಾಗೋದು ಕಡ್ಡಾಯ.
    8. ಹಳೆಯ ಕೊರೊನಾ ಸೋಂಕು ಪತ್ತೆಯಾದ್ರೆ ಮಾತ್ರ ಹೋಂ ಐಸೋಲೇಷನ್ ಗೆ ಅವಕಾಶ. ರೂಪಾಂತರಿ ವೈರಸ್ ಕಂಡು ಬಂದ್ರೆ ಪ್ರತ್ಯೇಕ ಐಸೋಲೇಷನ್ ಯುನಿಟ್ ಗೆ ಶಿಫ್ಟ್ ಮಾಡಲಾಗುತ್ತದೆ.