Tag: Rs 100

  • ಕೊರೊನಾ ಭೀತಿ- ರಸ್ತೆಯಲ್ಲಿ 100ರೂ. ನೋಟು ಬಿದ್ದರೂ ಎತ್ತಿಕೊಳ್ಳುತ್ತಿಲ್ಲ

    ಕೊರೊನಾ ಭೀತಿ- ರಸ್ತೆಯಲ್ಲಿ 100ರೂ. ನೋಟು ಬಿದ್ದರೂ ಎತ್ತಿಕೊಳ್ಳುತ್ತಿಲ್ಲ

    – ನೋಟಿಗಾಗಿ ಬಂದರು ಪುರಸಭೆಯ ಅಧಿಕಾರಿಗಳು

    ಚಿಕ್ಕೋಡಿ: ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ಕೊಂಡು ಜೇಬಿಗೆ ಹಾಕ್ತಿದ್ರು. ಆದರೆ ಕೊರೊನಾ ಹುಟ್ಟಿಸಿರುವ ಭೀತಿಗೆ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಎತ್ತಿಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಡಿ ಕರೆಸಿ ನೂರು ರೂಪಾಯಿಯನ್ನು ಅವರ ವಶಕ್ಕೆ ನೀಡಿದ್ದಾರೆ.

    ಕೊರೊನಾ ಭೀತಿ ಹುಟ್ಟಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯಾರೋ ಅಪರಿಚಿತರು ಸಾರ್ವಜನಿಕರಲ್ಲಿ ಭೀತಿ ಮೂಡಿಸಲು 100 ರೂ. ನೋಟನ್ನು ರಸ್ತೆಯಲ್ಲಿ ಎಸೆದಿದ್ದರು. ಇದನ್ನು ಕಂಡ ಸಂಕೇಶ್ವರ ಪಟ್ಟಣದ ನಿಡಸೋಸಿ ರಸ್ತೆಯ ನಲವಡೆ ಪ್ಲಾಟ್ ದಲ್ಲಿರುವ ಜನ ನೋಟು ಎತ್ತಿಕೊಳ್ಳದೆ, ಗಾಬರಿಯಿಂದ ಪುರಸಭೆಗೆ ಕರೆ ಮಾಡಿ ತಿಳಿಸಿದ್ದಾರೆ.

    ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆಯ ಮುಖ್ಯಾಧಿಕಾರಿಗಳಾದ ಜಗದೀಶ್ ಈಟಿ, ಪರಿಸರ ಅಭಿಯಂತರಾದ ನಾರಾಯಣ್ ನಾಯಕ್, ಕಿರಿಯ ಅಭಿಯಂತರಾದ ರವೀಂದ್ರ ಗಡಾದ, ಆರೋಗ್ಯ ವಿಭಾಗದ ವಿಶ್ವನಾಥ್ ಸೊಗಲದ ಹಾಗೂ ಶ್ರೀಧರ ಬೆಳವಿ ಪೋಲೀಸ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು 100 ರೂ. ನೋಟನ್ನು ಪರಿಶೀಲಿಸಿ ನೋಟಿಗೆ ಸ್ಯಾನಿಟೈಸರ್ ಸಿಂಪಡಿಸಿ ಪುರಸಭೆಗೆ ತೆಗೆದುಕೊಂಡು ಹೋಗಿದ್ದಾರೆ.

  • ಈ ಇಬ್ಬರು ಗಣ್ಯರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಶೀಘ್ರದಲ್ಲೇ 100 ರೂ. ನಾಣ್ಯ ಬಿಡುಗಡೆ

    ಈ ಇಬ್ಬರು ಗಣ್ಯರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಶೀಘ್ರದಲ್ಲೇ 100 ರೂ. ನಾಣ್ಯ ಬಿಡುಗಡೆ

    ನವದೆಹಲಿ: 2 ಸಾವಿರ ರೂ. ನೋಟು ತಂದ ಮೋದಿ ಸರ್ಕಾರ ಮೊನ್ನೆ ಮೊನ್ನೆಯಷ್ಟೇ 200 ರುಪಾಯಿ ನೋಟು ರಿಲೀಸ್ ಮಾಡಿತ್ತು. ಇದೀಗ 100 ರುಪಾಯಿ ಕಾಯಿನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

    ಶೀಘ್ರದಲ್ಲೇ ಈ 100 ರುಪಾಯಿ ಕಾಯಿನ್ ಹೊರತರಲು ಕೇಂದ್ರ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ಹಾಗೂ ತಮಿಳುನಾಡಿನ ಮಾಜಿ ಸಿಎಂ ಡಾ. ಎಂಜಿ ರಾಮಚಂದ್ರನ್ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಜನ್ಮ ಶತಮಾನೋತ್ಸವದ ಸ್ಮರಣೆಗಾಗಿ 100 ರೂ. ಕಾಯಿನ್ ಬಿಡುಗಡೆ ಮಾಡಲಾಗ್ತಿದೆ. ಇದರ ಜೊತೆಗೆ ಈ ಇಬ್ಬರು ಗಣ್ಯ ವ್ಯಕ್ತಿಗಳ ಗೌರವಾರ್ಥವಾಗಿ ಹೊಸ 5 ರೂ. ಹಾಗೂ 10 ರೂ. ನಾಣ್ಯಗಳನ್ನು ಆರ್‍ಬಿಐ ವಿತರಿಸಲಿದೆ.

    ಮೊದಲನೇ ವಿನ್ಯಾಸದಲ್ಲಿ ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭ ಹಾಗೂ ಅದರ ಕೆಳಗೆ ಸತ್ಯಮೇವ ಜಯತೇ ಎಂಬ ಬರಹ ಇರಲಿದೆ. ಎಡ ಬದಿಯಲ್ಲಿ ದೇನಾಗರಿ ಲಿಪಿಯಲ್ಲಿ ಭಾರತ್ ಎಂಬ ಮುದ್ರಣ ಹಾಗೂ ಬಲ ಬದಿಯಲ್ಲಿ ಇಂಡಿಯಾ ಎಂದು ಇಂಗ್ಲಿಷ್‍ನಲ್ಲಿ ಮುದ್ರಣ ಇರಲಿದೆ. ರೂಪಾಯಿ ಚಿಹ್ನೆ ಹಾಗೂ 100 ಮುಖಬೆಲೆಯ ಮುದ್ರಣವಿರಲಿದೆ.

    ನಾಣ್ಯದ ಮತ್ತೊಂದು ಬದಿಯಲ್ಲಿ ಮಧ್ಯಭಾಗದಲ್ಲಿ ಎಂಎಸ್ ಸುಬ್ಬಲಕ್ಷ್ಮೀ ಅವರ ಭಾವಚಿತ್ರವಿರಲಿದ್ದು, ಮೆಲ್ಭಾಗದಲ್ಲಿ ಡಾ ಎಂಎಸ್ ಸುಬ್ಬಲಕ್ಷ್ಮೀ ಎಂದು ದೇವನಾಗರಿ ಲಿಪಿಯಲ್ಲಿ ಮುದ್ರಿಸಲಾಗಿರುತ್ತದೆ. ಹಾಗೇ ಕೆಳಭಾಗದಲ್ಲಿ ಬರ್ತ್ ಸೆಂಟಿನರಿ ಆಫ್ ಸುಬ್ಬಲಕ್ಷ್ಮೀ ಎಂದು ಇಂಗ್ಲಿಷ್‍ನಲ್ಲಿ ಮುದ್ರಣವಿರಲಿದೆ. ಜೊತೆಗೆ 1916-2016 ಎಂದು ನಾಣ್ಯದ ಬಲಭಾಗದಲ್ಲಿ ಮುದ್ರಿಸಲಾಗಿರುತ್ತದೆ.

    ಎರಡನೇ ವಿನ್ಯಾಸದ ನಾಣ್ಯದಲ್ಲಿ ಮಧ್ಯಭಾಗದಲ್ಲಿ ಡಾ ಎಂಜಿ ರಾಮಚಂದ್ರನ್ ಅವರ ಭಾವಚಿತ್ರ, ಮೆಲ್ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಅವರ ಹೆಸರು ಹಾಗೂ ಕೆಳಭಾಗದಲ್ಲಿ ಇಂಗ್ಲಿಷ್‍ನಲ್ಲಿ ಡಾ. ಎಂಜಿ ರಾಮಚಂದ್ರನ್ ಬರ್ತ್ ಸೆಂಟಿನರಿ ಎಂಬ ಮುದ್ರಣ ಇರಲಿದೆ. ಜೊತೆಗೆ 1917-2017 ಎಂದು ಕೆಳಗೆ ಮುದ್ರಣವಾಗಿರಲಿದೆ.

    ನಾಣ್ಯದ ವ್ಯಾಸ(ಡಯಾಮೀಟರ್) 44 ಮಿಮೀ ಇರಲಿದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಹಾಗೂ 5% ಜಿಂಕ್‍ನಿಂದ ನಾಣ್ಯವನ್ನ ತಯಾರಿಸಲಾಗಿದೆ.