Tag: Rs.10 Coin

  • 10 ರೂ. ನಾಣ್ಯ ಪಡೆಯದ್ದಕ್ಕೆ ಅಂಗಡಿ ಮಾಲೀಕನಿಗೆ ದಂಡ!

    10 ರೂ. ನಾಣ್ಯ ಪಡೆಯದ್ದಕ್ಕೆ ಅಂಗಡಿ ಮಾಲೀಕನಿಗೆ ದಂಡ!

    ಭೋಪಾಲ್: ಮಧ್ಯಪ್ರದೇಶದ ಮೊರೆನಾ ಜಿಲ್ಲಾ ನ್ಯಾಯಾಲಯವು 10 ರೂಪಾಯಿ ನಾಣ್ಯ ಸ್ವೀಕರಿಸದ್ದಕ್ಕೆ ಅಂಗಡಿ ಮಾಲೀಕನಿಗೆ 200 ರೂ. ದಂಡ ವಿಧಿಸಿದೆ.

    10 ರೂ. ನಾಣ್ಯ ಸ್ವೀಕರಿಸದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಪಿ. ಚಿದಲ್ ರವರು ಮಂಗಳವಾರ ನಾಣ್ಯವನ್ನು ಸ್ವೀಕರಿಸದ್ದಕ್ಕೆ 200 ರೂ. ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೇ ನಾಣ್ಯ ನಿಷೇಧವಾಗಿದೆ ಎಂದು ಸುಳ್ಳು ಹೇಳಿದ್ದಕ್ಕೆ ಮಂಗಳವಾರದ ಕಲಾಪ ಮುಗಿಯುವವರೆಗೂ ಕೋರ್ಟ್ ನಲ್ಲೇ ಇರಬೇಕೆಂಬ ಶಿಕ್ಷೆಯನ್ನು ವಿಧಿಸಿದ್ದಾರೆ.

    ಏನಿದು ಪ್ರಕರಣ?
    2017ರ ಅಕ್ಟೋಬರ್ 17ರಂದು ಗ್ರಾಹಕ ಆಕಾಶ್ ಪರಾಸ ಎಂಪೋರಿಯಂ ನಲ್ಲಿ 10 ರೂ. ಮೌಲ್ಯದ ಎರಡು ಕರವಸ್ತ್ರಗಳನ್ನು ಖರೀದಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕನಿಗೆ 10 ರೂ. ಮೌಲ್ಯದ ಎರಡು ನಾಣ್ಯಗಳನ್ನು ನೀಡಿದ್ದರು. ಆದರೆ ಅಂಗಡಿ ಮಾಲೀಕ ಆಕಾಶ್ 10. ರೂ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಅಲ್ಲದೇ ಅವುಗಳು ಚಲಾವಣೆಯಲಿಲ್ಲ ಎಂದು ಹೇಳಿದ್ದ.

    10 ರೂ. ನಾಣ್ಯ ಚಲಾವಣೆಯಲ್ಲಿದೆ ಎಂದು ಸರ್ಕಾರವೇ ತಿಳಿಸಿದ್ದು, ನಾಣ್ಯವನ್ನು ಪಡೆಯಲು ನಿರಾಕರಿಸಿದ ಅಂಗಡಿ ಮಾಲೀಕನ ವಿರುದ್ಧ ಆಕಾಶ್ ಜುವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಐಪಿಸಿ ಸೆಕ್ಷನ್ 188ರ(ಸರ್ಕಾರದ ಆದೇಶದ ಉಲ್ಲಂಘನೆ) ಅಡಿ ಗ್ರಾಹಕರೊಂದಿಗೆ ಅನುಚಿತ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದರು.

    ಆರ್ ಬಿಐ ಆದೇಶದಲ್ಲಿ ಏನಿದೆ?
    10 ರೂಪಾಯಿ ಕಾಯಿನ್ ಬ್ಯಾನ್ ಆಗಿಲ್ಲ, ಸ್ಚೀಕರಿಸಬಹುದು ಅಂತ ಆರ್ ಬಿಐ 2016 ನವೆಂಬರ್ 20ರಂದೇ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟವಾಗಿ ತಿಳಿಸಿದೆ. ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಚಾಲ್ತಿಯಲ್ಲಿರುವ ನಾಣ್ಯ ಅಥವಾ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಅಂತವರ ವಿರುದ್ಧ ದೂರು ಸಲ್ಲಿಸಬಹುದಾಗಿದೆ.

  • ಉತ್ತರ ಕರ್ನಾಟಕದಲ್ಲಿ 10 ರೂ. ಕಾಯಿನ್ ತಗೊಳ್ಳೋಕ್ಕೆ ಹೆದರ್ತಾರೆ ಜನ!

    ಹುಬ್ಬಳ್ಳಿ: ನೋಟ್ ಬ್ಯಾನ್‍ನಿಂದ ಕಂಗೆಟ್ಟಿದ್ದ ಜನಕ್ಕೆ ಮತ್ತೊಂದು ಶಾಕ್ ಎದುರಾಗಿದೆ. 10 ರೂಪಾಯಿ ಕಾಯಿನ್ ಬ್ಯಾನ್ ಆಗಿದೆ ಎಂಬ ಸುಳ್ಳು ಸುದ್ದಿ ಹರಿದಾಡ್ತಿದ್ದು, ಇದ್ರಿಂದ ಉತ್ತರ ಕರ್ನಾಟಕದ ಜನ 10 ರೂ, ಕಾಯಿನ್ ಸ್ವೀಕರಿಸೋಕೆ ಹಿಂಜರಿಯುತ್ತಿದ್ದಾರೆ.

    ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 10 ರೂಪಾಯಿ ನಾಣ್ಯವನ್ನ ಯಾರೂ ಸ್ವೀಕರಿಸ್ತಿಲ್ಲ. ಕೇಂದ್ರವಾಗಲೀ ಅಥವಾ ಆರ್‍ಬಿಐ ಆಗಲೀ ಕಾಯಿನ್ ಬ್ಯಾನ್ ಬಗ್ಗೆ ಆದೇಶ ಹೊರಡಿಸಿಲ್ಲ. ಆದಾಗ್ಯೂ, ಜನ 10 ರೂಪಾಯಿ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕ್ತಿದ್ದಾರೆ.

    ಹುಬ್ಬಳ್ಳಿ ನಗರದ ಕೆಲ ಬ್ಯಾಂಕ್‍ಗಳಲ್ಲಿಯೂ 10 ರೂಪಾಯಿ ಕಾಯಿನ್‍ಗಳನ್ನ ತೆಗೆದುಕೊಳ್ಳುತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಚಿಲ್ಲರೆ ವ್ಯಾಪಾರಿಗಳು, ಬಸ್ ಕಂಡಕ್ಟರ್‍ಗಳು ಈ ಸುಳ್ಳು ಸುದ್ದಿಯಿಂದ ಪರದಾಡ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೋಲಾರ ಮತ್ತು ಆನೇಕಲ್‍ನಲ್ಲೂ ಇಂಥದ್ದೇ ಸುದ್ದಿ ಹರಿದಾಡಿತ್ತು.