Tag: RRR

  • ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರಕ್ಕೆ 350 ಕೋಟಿ ಆಫರ್!

    ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರಕ್ಕೆ 350 ಕೋಟಿ ಆಫರ್!

    ಹೈದರಾಬಾದ್: ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ಇದೇ ವರ್ಷ ಅಕ್ಟೋಬರ್ 13ಕ್ಕೆ ತೆರೆಕಾಣುವುದಾಗಿ ಈಗಾಗಲೇ ಘೋಷಣೆಯಾಗಿದೆ. ಈ ಮಧ್ಯೆ ಚಿತ್ರದ ಗಳಿಕೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಈ ಚಿತ್ರಕ್ಕೆ ಭರ್ಜರಿ ಆಫರ್ ಬಂದಿರುವ ವಿಚಾರವೊಂದು ಬಯಲಾಗಿದೆ.

    ಹೌದು. ಐತಿಹಾಸಿಕ ಕಥೆ ಹೊಂದಿರುವ ಆರ್‌ಆರ್‌ಆರ್ ಚಿತ್ರಕ್ಕೆ ಬಿಡುಗಡೆ ಮುಂಚೆಯೇ 350 ಕೋಟಿ ಆಫರ್ ಬಂದಿದೆಯಂತೆ. ರಾಜಮೌಳಿ ಸಿನಿಮಾಗೆ ದಕ್ಷಿಣ ಭಾರತದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಮುಂದಾಗಿದ್ದು, 350 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇದು ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡಮಟ್ಟದ ವ್ಯವಹಾರವಾಗಿದೆ ಎಂಬುದಾಗಿ ಬಾಲಿವುಡ್ ವೆಬ್‍ಸೈಟ್ ಒಂದು ವರದಿ ಮಾಡಿದೆ.

    ಆರ್‌ಆರ್‌ಆರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಹಾಗೂ ವಿತರಣೆ ಹಕ್ಕು ಪಡೆಯಲು 100 ಕೋಟಿ ಡೀಲ್ ಆಗಿದೆಯಂತೆ. ಅನಿಲ್ ತಡಾನಿ (ಎಎಫಿಲಂಸ್) ಈಗಾಗಲೇ ಆರ್‌ಆರ್‌ಆರ್ ಚಿತ್ರದ ವಿತರಣೆ ಹಕ್ಕನ್ನು ತೆಕ್ಕೆಗೆ ಹಾಕಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಒಬ್ಬರೇ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಬಾಲಿವುಡ್‍ನಲ್ಲಿ ಅನಿಲ್ ತಡಾನಿ ವಿತರಿಸುವ ಸಾಧ್ಯತೆ ಹೆಚ್ಚಿದೆ. ಹೊರದೇಶಗಳಿಂದಲೂ ಆರ್‌ಆರ್‌ಆರ್ ಚಿತ್ರಕ್ಕೆ ಭಾರೀ ಬೇಡಿಕೆಯಿದ್ದು, ಸುಮಾರು 70 ಕೋಟಿ ಡೀಲ್ ಆಗಿರುವುದಾಗಿ ತಿಳಿದುಬಂದಿದೆ.

    ಈ ಬಹುನಿರೀಕ್ಷಿತ ಚಿತ್ರದಲ್ಲಿ ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್, ಜೂನಿಯರ್ ಎನ್‍ಟಿಆರ್ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ ಅಜಯ್ ದೇವ್‍ಗನ್, ಆಲಿಯಾ ಭಟ್, ಸಾಮುತಿಕಾರಣಿ, ಓಲಿವಿಯಾ ಮೋರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೀವನ್‍ಸನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಸದ್ಯ ಗಳಿಕೆಯಲ್ಲಿ ದಾಖಲೆ ಬರೆದಿದ್ದ ಬಾಹುಬಲಿ ಚಿತ್ರಗಳನ್ನು ಆರ್‌ಆರ್‌ಆರ್ ಸಿನಿಮಾ ಮೀರಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಬಾಹುಬಲಿ-2 1,800 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿತ್ತು.

  • ಅಕ್ಟೋಬರ್ 13ಕ್ಕೆ ಪ್ರೇಕ್ಷಕರ ಮುಂದೆ ಆರ್‌ಆರ್‌ಆರ್‌

    ಅಕ್ಟೋಬರ್ 13ಕ್ಕೆ ಪ್ರೇಕ್ಷಕರ ಮುಂದೆ ಆರ್‌ಆರ್‌ಆರ್‌

    – ಜಲಾಗ್ನಿ ಯುದ್ಧದಲ್ಲಿ ಗೆಲ್ಲೋರಾರು?

    ಹೈದರಾಬಾದ್: ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಕಾಣಲಿದೆ. ರಾಮ್ ಚರಣ್, ಜೂನಿಯರ್ ಎನ್‍ಟಿಆರ್, ಅಜಯ್ ದೇವ್‍ಗನ್, ಆಲಿಯಾ ಭಟ್, ಸಾಮುತಿಕಾರಣಿ, ಓಲಿವಿಯಾ ಮೋರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೀವನ್‍ಸನ್ ಸೇರಿದಂತೆ ದೊಡ್ಡ ತಾರಾಗಣವನ್ನ ಚಿತ್ರತಂಡ ಹೊಂದಿದೆ.

    ರಾಮಚರಣ್ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಮಾಡಿದ್ದು, ಜಲ ಮತ್ತು ಅಗ್ನಿ ಜೊತೆಯಾಗಿ ದೊಡ್ಡ ಫೋರ್ಸ್ ನೊಂದಿಗೆ ಆಗಮಿಸಲಿದೆ. 20121 ಅಕ್ಟೋಬರ್ 13ರಂದು ಹೊಸ ಅವತಾರ ನೋಡಿ ಎಂದು ಬರೆದುಕೊಂಡಿದ್ದಾರೆ.

    2020 ಜುಲೈ 30ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧಗೊಂಡಿತ್ತು. ಕೊರೊನಾದಿಂದ ಚಿತ್ರೀಕರಣ ಸೇರಿದಂತೆ ಇಡೀ ಚಿತ್ರರಂಗ ಸ್ಥಗಿತಗೊಂಡಿತ್ತು. ಹಾಗಾಗಿ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿತ್ತು. ಸದ್ಯ ಚಿತ್ರತಂಡ ಕ್ಲೈಮ್ಯಾಕ್ಸ್ ದೃಶ್ಯಗಳ ಶೂಟಿಂಗ್ ನಲ್ಲಿ ತೊಡಗಿಕೊಂಡಿದೆ.

  • ರಾಮರಾಜು ಫಾರ್ ಭೀಮ್- ‘ಅವನು ಭೂ ತಾಯಿ ಎದೆ ಹಾಲು ಕುಡಿದ ಹೆಮ್ಮೆಯ ಕಂದ’

    ರಾಮರಾಜು ಫಾರ್ ಭೀಮ್- ‘ಅವನು ಭೂ ತಾಯಿ ಎದೆ ಹಾಲು ಕುಡಿದ ಹೆಮ್ಮೆಯ ಕಂದ’

    – ನನ್ನ ತಮ್ಮ, ಗೋಂಡು ಹೆಬ್ಬುಲಿ ಕೋಮರಂ ಭೀಮ್

    ಹೈದರಾಬಾದ್: ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಮಹತ್ವಾಕಾಂಕ್ಷೆಯ ‘ರೌದ್ರ ರಣ ರುಧಿರ’ ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿದ್ದು, ಕನ್ನಡದ ಟೀಸರ್ ಗೆ ದನಿ ನೀಡುವ ಮೂಲಕ ನಟ ರಾಮ್ ಚರಣ್ ಅಭಿಮಾನಿಗಳ ಮನಗೆದ್ದಿದ್ದಾರೆ.

    ‘ಆರ್‍ಆರ್‍ಆರ್’ ಸಿನಿಮಾ ಬಗ್ಗೆ ವಿಶ್ವಾದ್ಯಂತ ಬಹುದೊಡ್ಡ ನಿರೀಕ್ಷೆ ಇದ್ದು, ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮ್‍ಚರಣ್, ಗಿರಿಜನರ ಹೋರಾಟಗಾರ ಕೋಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ನಟಿಸುತ್ತಿದ್ದಾರೆ. ಇಬ್ಬರು ಬೇರೆ ಬೇರೆ ಪ್ರದೇಶಗಳಿಗೆ ಸೇರಿದ್ದರು, ಇಬ್ಬರೂ ವೀರನ್ನು ಒಂದು ಮಾಡಿ ಐತಿಹಾಸಿಕ ಸಿನಿಮಾವಾಗಿ ತೆರೆಗೆ ತರಲು ನಿರ್ದೇಶಕರು ಶ್ರಮಿಸಿದ್ದಾರೆ.

    ಮಾರ್ಚ್ 27 ರಂದು ನಟ ರಾಮ್ ಚರಣ್ ಅವರ ಹುಟ್ಟುಹಬ್ಬದ ವಿಶೇಷತೆಯಾಗಿ ‘ಭೀಮ್ ಫಾರ್ ರಾಮರಾಜು’ ಎಂದು ರಾಮ್ ಚರಣ್ ಅವರ ಟೀಸರ್ ಬಿಡುಗಡೆ ಮಾಡಲಾಗಿತ್ತು. ಕೊರೊನಾ ಲಾಕ್‍ಡೌನ್ ಕಾರಣದಿಂದ ಎನ್‍ಟಿಆರ್ ಟೀಸರ್ ಬಿಡುಗಡೆ ತಡವಾಗಿತ್ತು. ಮೇ 20 ರಂದು ಎನ್‍ಟಿಆರ್ ಟೀಸರ್ ಬಿಡುಗಡೆಯಾಗಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ ಅದು ಸಾಧ್ಯವಾಗರಿಲಿಲ್ಲ. ಸದ್ಯ ಕೋಮರಂ ಭೀಮ್ ಜಯಂತಿ ವಿಶೇಷವಾಗಿ ‘ರಾಮ್‍ರಾಜು ಫಾರ್ ಭೀಮ್’ ಟೀಸರ್ ಬಿಡುಗಡೆ ಮಾಡಲಾಗಿದೆ.

    1 ನಿಮಿಷ 32 ಸೆಕೆಂಡ್‍ಗಳ ಟೀಸರ್ ನಲ್ಲಿ ಎನ್‍ಟಿಆರ್ ಆ್ಯಕ್ಷನ್‍ಗೆ ರಾಮ್‍ಚರಣ್ ವಾಯ್ಸ್ ನೀಡಿದ್ದಾರೆ. ‘ಅವನು ಎದರು ನಿಂತ್ರೆ ಸಮುದ್ರಗಳೇ ಹೆದರಿಕೊಳ್ತವೆ’, ‘ಎದ್ದು ನಿಂತ್ರೆ ಸಾಮ್ರಾಜ್ಯಗಲೇ ತಲೆಬಾಗುತ್ತವೆ’ ಎಂಬ ಡೈಲಾಗ್‍ಗಳು ಕೇಳುತ್ತಿದ್ದರೆ ರೋಮಾಂಚನದ ಅನುಭವವಾಗುತ್ತದೆ. ಸಿನಿಮಾಗೆ ಡಿವಿವಿ ದಾನಯ್ಯ 400 ಕೋಟಿ ರೂ. ಅಧಿಕ ಬಜೆಟ್‍ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವ್‍ಗನ್, ಸಮುದ್ರ ಖಣಿ, ಶ್ರಿಯಾ ಸರಣ್ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂನಿಯರ್ ಎನ್‍ಟಿಆರ್ – ಹೊಸ ಲುಕ್ ವೈರಲ್

    ಹುಟ್ಟುಹಬ್ಬದ ಸಂಭ್ರಮದಲ್ಲಿ ಜೂನಿಯರ್ ಎನ್‍ಟಿಆರ್ – ಹೊಸ ಲುಕ್ ವೈರಲ್

    ಹೈದರಾಬಾದ್: 38ನೇ ವಸಂತಕ್ಕೆ ಕಾಲಿಟ್ಟಿರುವ ಯಂಗ್ ಟೈಗರ್ ಗೆ ಅಭಿಮಾನಿಗಳು, ಸಿನಿ ತಾರೆಯಾರು ಶುಭಾಷಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಮಧ್ಯೆ ಜೂನಿಯರ್ ಎನ್‍ಟಿಆರ್ ಅವರ ಹೊಸ ಲುಕ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

    ಜಿಮ್ ಮಾಡಿ ಕಟ್ಟುಮಸ್ತಾಗಿ ದೇಹ ಮಾಡಿಕೊಂಡಿರುವ ಜೂನಿಯರ್ ಎನ್‍ಟಿಆರ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಆರ್‌ಆರ್‌ಆರ್ ಚಿತ್ರದಲ್ಲಿ ಬ್ಯುಸಿಯಾಗಿರುವ ಯಂಗ್ ಟೈಗರ್ ಗೆ ಅಭಿಮಾನಿಗಳು, ಸಿನಿಮಾರಂಗದ ಅನೇಕರು ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

    https://www.instagram.com/p/CAZcfAsA5CD/

    ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಸ್ಪೇಷಲ್ ಫೋಟೋವೊಂದನ್ನು ಶೇರ್ ಮಾಡಿಕೊಂಡು ಹ್ಯಾಪಿ ಬರ್ತ್‍ಡೇ ತಾರಕ್ ಎಂದು ಪ್ರೀತಿಯಿಂದ ವಿಶ್ ಮಾಡಿದ್ದಾರೆ. ನೀವು ಮೊದಲಿನಿಂದಲೂ ನನ್ನ ಪ್ರಯಾಣದ ಭಾಗವಾಗಿದ್ದೀರಿ ಎನ್ನವುದೇ ನನಗೆ ಖುಷಿ. ಹುಟ್ಟುಹಬ್ಬದ ಶುಭಾಷಯಗಳು ತಾರಕ್. ನಿಮಗಿಂತ ಉತ್ತಮವಾದ ಭೀಮನನ್ನು ನಾನು ಹುಡುಕಲು ಸಾಧ್ಯವಾಗಲ್ಲ ಎಂದು ಬರೆದು, ಜೂನಿಯರ್ ಎನ್‍ಟಿಆರ್ ಅವರನ್ನು ಅಪ್ಪಿಕೊಂಡಿರುವ ವಿಶೇಷ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ರಾಜಮೌಳಿ ಹಂಚಿಕೊಂಡಿದ್ದಾರೆ.

    https://www.instagram.com/p/CAZYaU8n0mB/

    ಅನುಷ್ಕಾ ಶೆಟ್ಟಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿ ಹ್ಯಾಪಿ ಬರ್ತ್‍ಡೇ ಜೂನಿಯರ್ ಎನ್‍ಟಿಆರ್ ಅಂದಿದ್ದಾರೆ. ನಿಮ್ಮ ಆರ್‌ಆರ್‌ಆರ್ ಸಿನಿಮಾಕ್ಕಾಗಿ ಕಾಯುತ್ತಿರುವೆ. ಇಡೀ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ಶುಭಕೋರಿದ್ದಾರೆ. ಹಾಗೆಯೇ ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂ ರತ್ನಾನಿ ಜೂನಿಯರ್ ಎನ್‍ಟಿಆರ್ ಅವರ ಸಿಕ್ಸ್ ಪ್ಯಾಕ್ ಫೋಟೋವನ್ನು ಟ್ವೀಟ್ ಮಾಡಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಅಭಿಮಾನಿಗಳು ಶುಭಾಷಯ ಕೋರುತ್ತಿರುವ ಪರಿಗೆ ಟ್ವಿಟ್ಟರ್ ನಲ್ಲಿ #HappyBirthdayNTR ಹಾಗೂ #HappyBirthdayTarak ಹ್ಯಾಶ್‍ಟ್ಯಾಗ್‍ಗಳು ಟ್ರೆಂಡಿಂಗ್‍ನಲ್ಲಿದೆ.

    ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಆರ್‌ಆರ್‌ಆರ್ ಸಿನಿಮಾ ಮೂಡಿಬರುತ್ತಿದ್ದು, ಈಗಾಗಲೇ ಟಾಲಿವುಡ್‍ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. 400 ರಿಂದ 450 ಕೋಟಿ ರೂ. ಬಜೆಟ್‍ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.

  • ರಾಜಮೌಳಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆ

    ರಾಜಮೌಳಿ ನಿರ್ದೇಶನದಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆ

    ಹೈದರಾಬಾದ್: ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಮಾಡುವುದಾಗಿ ಖ್ಯಾತ ನಿರ್ದೇಶಕ ಎಸ್‍ಎಸ್ ರಾಜಮೌಳಿ ಹೇಳಿದ್ದಾರೆ. ಆ ಮೂಲಕ ಟಾಲಿವುಡ್‍ನಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದ್ದ ಕ್ರೇಜಿ ಕಾಂಬಿನೇಷನ್ ಸುದ್ದಿಗಳಿಗೆ ತೆರೆ ಹೇಳಿದಿದ್ದಾರೆ.

    ಸದ್ಯ ಎನ್‍ಟಿಆರ್, ರಾಮ್ ಚರಣ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಮಹೇಶ್ ಬಾಬು ಅವರೊಂದಿಗೆ ತಮ್ಮ ಮುಂದಿನ ಸಿನಿಮಾ ಎಂದು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಚಿತ್ರದ ಕುರಿತು ಕೆಲ ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ.

    ಟಾಲಿವುಡ್ ಕ್ರೇಜಿ ಕಾಂಬಿನೇಷನ್ ಎಂದೇ ಸುದ್ದಿಯಾಗುತ್ತಿದ್ದ ಮಹೇಶ್ ಬಾಬು ಹಾಗೂ ರಾಜಮೌಳಿ ಅವರ ಸಿನಿಮಾವನ್ನು ದುರ್ಗಾ ಆಟ್ರ್ಸ್ ಬ್ಯಾನರ್ ಅಡಿ ಕೆಎಲ್ ನಾರಾಯಣ ನಿರ್ಮಾಣ ಮಾಡುತ್ತಿದೆ. ನಮ್ಮ ಮೂವರ ಕಾಂಬಿನೇಷನ್‍ನಲ್ಲಿ ಸಿನಿಮಾ ಮಾಡಬೇಕೆಂಬ ಯೋಚನೆ ಬಹಳ ದಿನಗಳಿಂದ ಇತ್ತು ಎಂದು ರಾಜಮೌಳಿ ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಆರ್‌ಆರ್‌ಆರ್ ಸಿನಿಮಾ ಕುರಿತು ಮಾತನಾಡಿರುವ ರಾಜಮೌಳಿ ಅವರು, ಲಾಕ್‍ಡೌನ್ ಮುನ್ನವೇ ಚಿತ್ರದ ಶೇ.80 ಶೂಟಿಂಗ್ ಪೂರ್ಣಗೊಳಿಸಿದ್ದೇವೆ. ಸದ್ಯ ನಮ್ಮ ತಂಡದ ವರ್ಕ್ ಫ್ರಮ್ ಹೋಂ ಮಾಡುತ್ತಿದೆ. ಇತ್ತ ವಿಜ್ಯುವಲ್ ಎಫೆಕ್ಟ್ ಕೆಲಸ ಕೂಡ ನಡೆಯುತ್ತಿದೆ. ನಾವು ಅಂದುಕೊಂಡಿರುವ ಸಮಯಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ. ಆದರೆ ಲಾಕ್‍ಡೌನ್ ವೇಳೆಯಲ್ಲಿ ರಾಮ್ ಚರಣ್ ವಿಡಿಯೋವನ್ನು ಬಿಡುಗಡೆ ಮಾಡುವುದಕ್ಕೆ ತುಂಬಾ ಯೋಚನೆ ಮಾಡಿದ್ದೇವೆ. ಬಳಿಕ ಎಲ್ಲರೂ ಮನೆಯಲ್ಲಿ ಕುಳಿತು ಕೊಂಡು ಈ ಬಗ್ಗೆ ಮಾತನಾಡಿಕೊಳ್ಳುತ್ತಾರೆ ಎಂದು ತೀರ್ಮಾನಿಸಿ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದಾರೆ.

    ಆರ್‌ಆರ್‌ಆರ್ ಸಿನಿಮಾದಲ್ಲಿ ಎನ್‍ಟಿಆರ್, ರಾಮ್ ಚರಣ್ ನಟಿಸುತ್ತಿದ್ದಾರೆ. ಇತ್ತೀಚೆಗೆ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿತ್ತು. ಟೀಸರಿನಲ್ಲಿ ಎನ್‍ಟಿಆರ್ ನೀರಿನ ಪ್ರತಿರೂಪವಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಬೆಂಕಿಯ ರೂಪವಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ಶಕ್ತಿಗಳು ಒಂದಾದರೆ ಏನಾಗಬಹುದು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಇಡೀ ಸಿನಿಮಾ 1920ರ ಕಾಲಘಟ್ಟದಲ್ಲಿ ನಡೆಯಲಿದೆಯಂತೆ.

  • ಆರ್‌ಆರ್‌ಆರ್‌ಗೆ ಒಂದು ದಿನಕ್ಕೆ 50 ಲಕ್ಷ ರೂ. ಸಂಭಾವನೆ ಪಡೆದ ಆಲಿಯಾ

    ಆರ್‌ಆರ್‌ಆರ್‌ಗೆ ಒಂದು ದಿನಕ್ಕೆ 50 ಲಕ್ಷ ರೂ. ಸಂಭಾವನೆ ಪಡೆದ ಆಲಿಯಾ

    ನವದೆಹಲಿ: ಬಾಲಿವುಡ್ ಕ್ಯೂಟ್ ಬೆಡಗಿ ಆಲಿಯಾ ಭಟ್ ಹಿಟ್ ಸಿನಿಮಾಗಳ ಮೂಲಕವೇ ಫೇಮಸ್, ಅವರ ಕ್ಯೂಟ್ ಆಕ್ಟಿಂಗ್ ಬಾಲಿವುಡ್‍ನಲ್ಲಿ ಮೋಡಿ ಮಾಡಿದೆ. ಹೀಗಾಗಿ ಹೆಚ್ಚು ಹೆಚ್ಚು ಅವಕಾಶಗಳು ಬರುತ್ತಿವೆ. ಅದೇ ರೀತಿ ಸ್ಟಾರ್ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ‘ರೌದ್ರ ರಣ ರುಧಿರ’ ಚಿತ್ರದಲ್ಲಿ ನಟಿಸುತ್ತಿದ್ದು, ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರಂತೆ.

    ಇದೇ ಮೊದಲ ಬಾರಿಗೆ ಆಲಿಯಾ ಭಟ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಜೂನಿಯರ್ ಎನ್‍ಟಿಆರ್ ಹಾಗೂ ರಾಮ್ ಚರಣ್‍ತೇಜಾ ನಟನೆಯ ಬಹುಭಾಷಾ ಸಿನಿಮಾ ರೌದ್ರ ರಣ ರುಧಿರ ಚಿತ್ರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಬೆಂಕಿ ಹಾಗೂ ನೀರಿನ ಸಂಗಮದ ಸಂಕೇತವನ್ನು ಪೋಸ್ಟರ್ ನಲ್ಲಿ ತೋರಿಸಲಾಗಿದೆ. ಕನ್ನಡ, ತೆಲುಗು, ಹಿಂದಿ ಸೇರಿ ಒಟ್ಟು ಐದು ಭಾಷೆಗಳಲ್ಲಿ ಫಸ್ಟ್ ಲುಕ್ ರಿಲೀಸ್ ಅಗಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

    ಫಸ್ಟ್ ಲುಕ್ ನೋಡಿದ ಪ್ರೇಕ್ಷಕರು ಆರ್‌ಆರ್‌ಆರ್ ಸಿನಿಮಾದಲ್ಲಿಯೂ ರಾಜಮೌಳಿಯವರು ಮೋಡಿ ಮಾಡುತ್ತಾರೆ ಎಂಬ ಆಶಯವನ್ನಿಟ್ಟುಕೊಂಡಿದ್ದಾರೆ. ಅದೇ ರೀತಿ ಚಿತ್ರ ತಂಡ ಸಹ ಕಾರ್ಯನಿರ್ವಹಿಸುತ್ತಿದ್ದು, ಸ್ಟಾರ್ ನಟ, ನಟಿಯರನ್ನು ಚಿತ್ರ ತಂಡಕ್ಕೆ ಸೇರಿಸಿಕೊಂಡಿದೆ. ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಂದರ್ಭದಲ್ಲೇ ಆರ್‍ಆರ್‍ಆರ್ ವಿಸ್ತೃತ ರೂಪವನ್ನು ರಾಜಮೌಳಿ ಬಹಿರಂಗಪಡಿಸಿದ್ದರು. ಈ ಮೂಲಕ ಆರ್‌ಆರ್‌ಆರ್ ಟೈಟಲ್‍ನ ವಿಸ್ತೃತ ರೂಪದ ಕ್ಯೂರಿಯಾಸಿಟಿ ತಣಿಸಿದ್ದರು.

    ಅಂದಹಾಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಅವರು ಆರ್‌ಆರ್‌ಆರ್ ಸಿನಿಮಾಗೆ 10 ದಿನಗಳ ಡೇಟ್ ನೀಡಿದ್ದು, ಒಟ್ಟು 5 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ಪ್ರತಿ ದಿನಕ್ಕೆ 50 ಲಕ್ಷ ರೂ.ಗಳನ್ನು ಆಲಿಯಾ ಪಡೆಯುತ್ತಿದ್ದಾರೆ. ನಯನತಾರಾ, ಪೂಜಾ ಹೆಗಡೆ, ಕಾಜಲ್ ಅಗರ್‍ವಾಲ್ ಸೇರಿದಂತೆ ಇತರೆ ನಟಿಯರಿಗೆ 2ರಿಂದ 3 ಕೋಟಿ ರೂ.ಸಂಭಾವನೆ ಮಾತ್ರ ನೀಡಲಾಗುತ್ತಿದೆ. ಆದರೆ ಆಲಿಯಾಗೆ ಕೇವಲ 10 ದಿನಗಳ ಚಿತ್ರೀಕರಣಕ್ಕೆ 5 ಕೋಟಿ ನೀಡಲಾಗುತ್ತಿದೆ. ಅಲಿಯಾ ಭಟ್ ಆರ್‌ಆರ್‌ಆರ್ ಸಿನಿಮಾದಲ್ಲಿ ನಟ ರಾಮ್ ಚರಣ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸೀತೆಯ ಪಾತ್ರ ನಿರ್ವಹಿಸುತ್ತಿದ್ದಾರೆ.

  • ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ- ಆರ್‌ಆರ್‌ಆರ್‌ ಗುಟ್ಟು ಬಿಚ್ಚಿಟ್ಟ ರಾಜಮೌಳಿ

    ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ- ಆರ್‌ಆರ್‌ಆರ್‌ ಗುಟ್ಟು ಬಿಚ್ಚಿಟ್ಟ ರಾಜಮೌಳಿ

    ಹೈದರಾಬಾದ್: ಯುಗಾದಿ ಹಬ್ಬಕ್ಕೆ ನಿರ್ದೇಶಕ ರಾಜಮೌಳಿ ಅವರು ಉಡುಗೊರೆ ನೀಡಿದ್ದು, ಅವರ ಬಹುನಿರೀಕ್ಷಿತ ಆರ್‌ಆರ್‌ಆರ್‌ ಚಿತ್ರದ ಕುರಿತು ಸಿಹಿ ಸುದ್ದಿಯನ್ನು ನೀಡಿದ್ದಾರೆ. ಕೊರೊನಾ ಗೊಂದಲದ ನಡುವೆಯು ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.

    ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಆರ್‌ಆರ್‌ಆರ್‌ ಸಿನಿಮಾದ ಮೋಷನ್ ಪೋಸ್ಟರ್ ನ್ನು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಬಿಡುಗಡೆ ಮಾಡಿದ್ದು, ಇದರ ಜೊತೆಗೆ ಆರ್‌ಆರ್‌ಆರ್‌ ಟೈಟಲ್‍ನ ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ. ಸಿನಿಮಾದ ಹೆಸರು ಘೋಷಣೆ ಆದ ದಿನದಿಂದಲೂ ‘ಆರ್‍ಆರ್‍ಆರ್’ ಎಂದು ಹೇಳಿದ್ದು ಬಿಟ್ಟರೆ, ಪೂರ್ಣ ಟೈಟಲ್ ಏನೆಂದು ನಿರ್ದೇಶಕರು ತಿಳಿಸಿರಲಿಲ್ಲ. ಇದೀಗ ಇದನ್ನು ರಿವೀಲ್ ಮಾಡಿದ್ದಾರೆ. ಈ ಮೂಲಕ ಹಲವರ ಊಹೆಯನ್ನು ಸುಳ್ಳಾಗಿಸಿದ್ದಾರೆ.

    ಈ ಚಿತ್ರದಷ್ಟೇ ಕುತೂಹಲ ಟೈಟಲ್ ಕುರಿತು ಸಹ ಮೂಡಿತ್ತು. ಆದರೆ ರಾಜಮೌಳಿ ‘ಆರ್‌ಆರ್‌ಆರ್‌’ ಅಂತಲೇ ಕೆಲಸ ಶುರು ಮಾಡಿದರು. ನಂತರ ಕೆಲವರು ‘ರಘುಪತಿ ರಾಘವ ರಾಜಾರಾಮ್’ ಎಂದರು, ಇನ್ನೂ ಕೆಲವರು ರಾಮುಡು ರುದ್ರುಡು ರಣರಂಗಂ, ರಾಮ ರಾವಣರ ರಣರಂಗ, ರಾಮ ರೌದ್ರ ರುಷಿತಂ ಎಂದು ವ್ಯಾಖ್ಯಾನಿಸಿದ್ದರು. ಇದೀಗ ಈ ಎಲ್ಲ ಊಹಾಪೋಹಗಳಿಗೆ ರಾಜಮೌಳಿಯವರು ತೆರೆ ಎಳೆದಿದ್ದಾರೆ.

    ನಿರ್ದೇಶಕ ರಾಜಮೌಳಿ ಮತ್ತು ತಂಡ ಯುಗಾದಿ ಹಬ್ಬದ ಪ್ರಯುಕ್ತ ‘ಆರ್‌ಆರ್‌ಆರ್‌’ ಟೈಟಲ್ ಲೋಗೋ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಇದೇ ವೇಳೆ ‘ಆರ್‌ಆರ್‌ಆರ್‌’ನ ವಿಸ್ತೃತ ರೂಪ ಏನು ಎಂಬುದನ್ನು ಚಿತ್ರತಂಡ ಘೋಷಣೆ ಮಾಡಿದೆ. ಇನ್ನೂ ಒಂದು ಅಚ್ಚರಿಯ ಮಾಹಿತಿಯನ್ನು ಪ್ರಕಟಿಸಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆಯಂತೆ.

    ಸಿನಿಮಾ ಬಿಡುಗಡೆಯಾಗುವ ಐದೂ ಭಾಷೆಗಳಲ್ಲೂ ಆರ್‌ಆರ್‌ಆರ್‌ ವಿಸ್ತೃತ ರೂಪವನ್ನು ಘೋಷಿಸಿದ್ದಾರೆ. ತೆಲುಗಿನಲ್ಲಿ ‘ರೌದ್ರಂ ರಣಂ ರುಧಿರಂ’ ಎಂದಾಗಿದ್ದು, ಅದೇ ರೀತಿ ಕನ್ನಡದಲ್ಲಿ ‘ರೌದ್ರ ರಣ ರುಧಿರ’ ಎಂಬುದಾಗಿದೆ. ಈ ಮೂಲಕ ಕನ್ನಡದಲ್ಲಿಯೂ ಅದ್ಧೂರಿ ತೆರೆಗೆ ಸಿನಿಮಾ ತಂಡ ಸಿದ್ಧತೆ ನಡೆಸಿದೆ. ಇನ್ನು ಹಿಂದಿಯಲ್ಲಿ ಇದಕ್ಕೆ ‘ರೈಸ್ ರೋರ್ ರಿವೋಲ್ಟ್’ ಎಂದು ಬದಲಾಯಿಸಲಾಗಿದೆ. ಎಲ್ಲ ಭಾಷೆಗಳಲ್ಲಿ ಹೊಂದುವಂತೆ ಆರ್‌ಆರ್‌ಆರ್‌ ಎಂದು ಟೈಟಲ್ ಇಡಲಾಗಿದೆ.

    ಈ ಸಿನಿಮಾದಲ್ಲಿ ಇಬ್ಬರು ತೆಲುಗು ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದು, ಜೂ.ಎನ್‍ಟಿಆರ್ ನೀರಿನ ಪ್ರತಿರೂಪವಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಬೆಂಕಿಯ ರೂಪವಾಗಿ ಕಾಣಿಸಿಕೊಂಡಿದ್ದಾರೆ. ಈ ಎರಡು ಶಕ್ತಿಗಳು ಒಂದಾದರೆ ಏನಾಗಬಹುದು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. ಅಲ್ಲದೆ ಬಾಲಿವುಡ್ ನಟರಾದ ಅಜಯ್ ದೇವ್‍ಗನ್, ಒಲಿವಿಯಾ ಮೊರೀಸ್, ಆಲಿಯಾ ಭಟ್, ಸಮುದ್ರಖಣಿ, ರೇ ಸ್ಟೀವನ್ಸನ್ ಸೇರಿದಂತೆ ಅನೇಕರು ಕಾಣಿಸಿಕೊಳ್ಳುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾಕ್ಕೆ ಡಿವಿವಿ ದಾನಯ್ಯ ಬಂಡವಾಳ ಹೂಡಿದ್ದಾರೆ. ಇಡೀ ಸಿನಿಮಾ 1920ರ ಕಾಲಘಟ್ಟದಲ್ಲಿ ನಡೆಯಲಿದೆಯಂತೆ.

  • ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

    ಕೊರೊನಾ ಎಫೆಕ್ಟ್ – ರಾಜಾಮೌಳಿ ಆರ್‌ಆರ್‌ಆರ್ ಸಿನಿಮಾದಿಂದ ಆಲಿಯಾ ಔಟ್

    ಮುಂಬೈ: ಕೊರೊನಾ ದೇಶದ ಎಲ್ಲಾ ಕ್ಷೇತ್ರಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ, ಹಾಗೆಯೇ ಭಾರತ ಚಿತ್ರರಂಗವನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾದಿಂದ ನಿರ್ದೇಶಕ ರಾಜಾಮೌಳಿಯ ಆರ್‌ಆರ್‌ಆರ್ ಚಿತ್ರದಿಂದ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊರಬಂದಿದ್ದಾರೆ ಎನ್ನಲಾಗಿದೆ.

    ಹೌದು ಸ್ಟಾರ್ ನಿರ್ದೇಶಕ ರಾಜಾಮೌಳಿ ನಿರ್ದೇಶದ ಆರ್‌ಆರ್‌ಆರ್ ಚಿತ್ರ ಬಹುಕೋಟಿ ವೆಚ್ಚದಲ್ಲಿ ತಯಾರಗುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೊರೊನಾ ವೈರಸ್‍ನ ಪರಿಣಾಮದಿಂದ ಅವರು ಈ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಹೇಳಲಾಗಿದೆ.

    ಈ ಚಿತ್ರದ 75% ಚಿತ್ರೀಕರಣ ಮುಗಿಯಲು ಬಂದಿದೆ. ಅಂತಾಯೇ ಅಲಿಯಾ ಭಟ್ ಅವರು ಇರುವ ಚಿತ್ರದ ಭಾಗವನ್ನು ಚಿತ್ರತಂಡ ಇದೇ ತಿಂಗಳು ಚಿತ್ರೀಕರಣ ಮಾಡಲು ಪ್ಲಾನ್ ಕೂಡ ಮಾಡಿತ್ತು. ಇದಕ್ಕಾಗಿ ಆಲಿಯಾ ಕೂಡ ಡೇಟ್ ಕೊಟ್ಟಿದ್ದರು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಸಿನಿಮಾ ಶೂಟಿಂಗ್ ಮಾಡಬೇಡಿ ಎಂದು ಸೂಚಿಸಿದ ಕಾರಣ ಚಿತ್ರೀಕರಣವನ್ನು ಮುಂದೂಡಲಾಗಿದೆ.

    ಆರ್‌ಆರ್‌ಆರ್ ಚಿತ್ರಕ್ಕಾಗಿ ಎಂದೇ ಬ್ಯುಸಿ ವೇಳಾಪಟ್ಟಿಯ ನಡುವೆ ಆಲಿಯಾ ಡೇಟ್ ಕೊಟ್ಟಿದ್ದರು. ಈಗ ಕೊರೊನಾ ವೈರಸ್ ಹಿನ್ನೆಲೆ ಚಿತ್ರೀಕರಣ ಮುಂದೂಡಲಾದ ಪರಿಣಾಮ ಅವರಿಗೆ ಮತ್ತೆ ಸಿನಿಮಾಗೆ ಡೇಟ್ ಕೊಡಲು ಆಗುತ್ತಿಲ್ಲ. ಯಾಕೆಂದರೆ ಅಲಿಯಾ ಈ ಸಿನಿಮಾದ ನಂತರ ಸದಕ್ 2, ಬ್ರಹ್ಮಾಸ್ತ್ರ ಮತ್ತು ಸಂಜಯ್ ಲೀಲಾ ಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿ ಎಂಬ ಸಾಲು ಸಾಲು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ನಡುವೆ ಮತ್ತೆ ಆರ್‌ಆರ್‌ಆರ್ ಚಿತ್ರಕ್ಕೆ ಡೇಟ್ ಕೊಡಲು ಸಾಧ್ಯವಿಲ್ಲ ಎಂದು ಅಲಿಯಾ ಹೇಳಿದ್ದಾರೆ ಎನ್ನಲಾಗಿದೆ.

    ರಾಜಾಮೌಳಿ ಅವರು ಸಿನಿಮಾ ಪಾತ್ರವನ್ನು ಆಯ್ಕೆ ಮಾಡುವಾಗ ಯಾರಲ್ಲಿ ನೈಜ ಪ್ರತಿಭೆ ಇದೆಯೋ ಮತ್ತು ಸಿನಿಮಾಕ್ಕೆ ಯಾರು ದುಡಿಯುತ್ತಾರೋ ಅವರನ್ನು ಮಾತ್ರ ರಾಜಮೌಳಿ ಆಯ್ಕೆ ಮಾಡುತ್ತಾರೆ. ಈ ಕಾರಣದಿಂದಲೇ ಆಲಿಯಾ ಅವರು ಅಪಾರ ಪ್ರಮಾಣ ಹಣ ನೀಡಿ ಚಿತ್ರಕ್ಕಾಗಿ ಕರೆತಂದಿದ್ದರು ಎನ್ನಲಾಗಿತ್ತು. ಆದರೆ ಮೂಲಗಳ ಪ್ರಕಾರ ಮತ್ತೆ ಆಲಿಯಾ ಭಟ್ ಅವರ ಡೇಟ್ ಪಡೆಯಲು ರಾಜಾಮೌಳಿ ಆಲಿಯಾ ಮ್ಯಾನೇಜರ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

    400 ರಿಂದ 450 ಕೋಟಿ ರೂ. ಬಜೆಟ್‍ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪೂರ್ಣಗೊಳಿಸಿ 2021ರ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

  • ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

    ಹಾಲಿವುಡ್ ನಟನಿಗಾಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಮುಂದೂಡಿದ ರಾಜಮೌಳಿ

    ಹೈದರಾಬಾದ್: ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆಯನ್ನು ಹಾಲಿವುಡ್ ನಟನಿಗಾಗಿ ಮುಂದೂಡಲಾಗಿದೆ.

    2018ರ ನವೆಂಬರಿನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದರೆ ಇತ್ತೀಚೆಗಷ್ಟೇ ಚಿತ್ರತಂಡ ಈ ಚಿತ್ರವನ್ನು ಮುಂದಿನ ವರ್ಷ ಜನವರಿ 8ಕ್ಕೆ ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿತ್ತು. ಆದರೆ ಆಕೆ ಎಂಬುದರ ಕಾರಣವನ್ನು ಹೇಳಿರಲಿಲ್ಲ. ಆದರೆ ಚಿತ್ರ ಮುಂದೂಡಿದ್ದೇಕೆ ಎಂಬುದು ಈಗ ರಿವೀಲ್ ಆಗಿದೆ.

    ಆರ್‌ಆರ್‌ಆರ್ ಚಿತ್ರದಲ್ಲಿ ಜೂ. ಎನ್‍ಟಿಆರ್ ಹಾಗೂ ರಾಮ್‍ಚರಣ್ ಅವರ ಜೊತೆ ಹಾಲಿವುಡ್ ನಟ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಹಾಲಿವುಡ್ ನಟ ತೀವ್ರವಾಗಿ ಗಾಯಗೊಂಡಿದ್ದು, ದೀರ್ಘ ಸಮಯದ ವಿಶ್ರಾಂತಿಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಾಲಿವುಡ್ ನಟ, ರಾಮ್‍ಚರಣ್ ಅವರ ಜೊತೆಗೆ ಚಿತ್ರದಲ್ಲಿ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಬ್ಬರ ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ನಟ ವಿಶ್ರಾಂತಿ ಪಡೆದು ಬಂದ ಬಳಿಕವಷ್ಟೇ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧಾರ ಮಾಡಿದೆ.

    ಆರ್‌ಆರ್‌ಆರ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, 1920ರ ಕಾಲಘಟ್ಟದಲ್ಲಿ ನಡೆಯುವ ಕತೆ ಇದಾಗಿದೆ. ಅದಕ್ಕೆ ತಕ್ಕಂತೆ ಅದ್ಧೂರಿಯಾಗಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸುತ್ತಿದ್ದಾರೆ. ಈ ಚಿತ್ರ ಹೈದರಾಬಾದ್‍ನ ನಿಜಾಮರ ಹಾಗೂ ಬ್ರಿಟಿಷರ ಆಡಳಿತದ ವಿರುದ್ಧ ಕೋಮರಾಮ್ ಭೀಮ ಮತ್ತು ಅಲ್ಲುರಿ ಸೀತಾರಾಮ ರಾಜು ಹೋರಾಟ ನಡೆಸುವ ಕತೆ ಆಗಿದ್ದು, ಜೂ. ಎನ್‍ಟಿಆರ್ ಕೋಮರಾಮ್ ಭೀಮನಾಗಿ ಕಾಣಿಸಿಕೊಂಡರೆ, ರಾಮ್ ಚರಣ್ ಸೀತಾರಾಮ ರಾಜನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    300 ಕೋಟಿ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಬಾಲಿವುಡ್ ಕಲಾವಿದರಾದ ಅಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹತ್ತು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಕನ್ನಡದಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ. ಡಿವಿವಿ ದಾನಯ್ಯ ಅವರು ಈ ಚಿತ್ರವನ್ನು ಡಿವಿವಿ ಎಂಟರ್‍ಟೈನ್‍ಮೆಂಟ್ಸ್‍ನಡಿ ನಿರ್ಮಾಣ ಮಾಡುತ್ತಿದ್ದು, ಎಂ.ಎಂ ಕೀರ್ವಾಣಿ ಸಂಗೀತ ನೀಡುತ್ತಿದ್ದಾರೆ.

  • ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ‘RRR’ ಸಿನಿಮಾ ಟೈಟಲ್ ವಿಮರ್ಶೆ- ಈ ಹೆಸರು ಸೂಟ್ ಆಗುತ್ತಾ? ಅಭಿಪ್ರಾಯ ತಿಳಿಸಿ ಎಂದ ರಾಜಮೌಳಿ

    ಹೈದರಾಬಾದ್: ಕೆಲವು ದಿನಗಳ ಹಿಂದೆ ರಾಮ ಯಾರು, ರಾವಣ ಯಾರು ಅನ್ನೊ ಮಾತುಕಥೆ ಸ್ಯಾಂಡಲ್‍ವುಡ್‍ ನಲ್ಲೂ ಜೋರಾಗಿತ್ತು. ಈಗ ಇದೇ ಪ್ರಶ್ನೆ ಟಾಲಿವುಡ್‍ನಲ್ಲಿ ಶುರುವಾಗಿದೆ. ಅದಕ್ಕೆ ಕಾರಣ ರಾಜಮೌಳಿ ಸಾರಥ್ಯದ ಹೊಚ್ಚಹೊಸ ಸಿನಿಮಾವಾಗಿದೆ. ಚಿತ್ರತಂಡ ಆರ್ ಆರ್ ಆರ್ ಅಂತ ವರ್ಕಿಂಗ್ ಟೈಟಲ್ ಫಿಕ್ಸ್ ಮಾಡಿಕೊಂಡಿತ್ತು. ಈಗ ಈ ಸಿನಿಮಾ ಟೈಟಲ್ ಬಗ್ಗೆ ತೆಲುಗು ನಾಡಿನಲ್ಲಿ ಚರ್ಚೆ ಶುರುವಾಗಿದೆ.

    ರಾಜಮೌಳಿ ಅವರು ಸಿನಿಮಾ ಮುಹೂರ್ತ ಆಗುತ್ತಿದ್ದಂತೆ ಟೈಟಲ್ ಅನೌನ್ಸ್ ಮಾಡುತ್ತಿದ್ದರು. ಆದರೆ ಈಗ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ಟೈಟಲ್ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ. ಆದರೆ ಮೂಲಗಳ ಪ್ರಕಾರ ಒಂದಿಷ್ಟು ಹೆಸರುಗಳು ಟಾಲಿವುಡ್‍ನಲ್ಲಿ ಸೌಂಡ್ ಮಾಡುತ್ತಿವೆ. ಅದರಲ್ಲಿ ‘ರಾಮರಾವಣ ರಾಜ್ಯಂ’ ಪ್ರಮುಖವಾದ ಹೆಸರಾಗಿದೆ.

    ಥ್ರಿಬಲ್ ಆರ್ ಅನ್ನೊ ವರ್ಕಿಂಗ್ ಟೈಟಲ್‍ಗೆ ಮ್ಯಾಚ್ ಆಗುವಂತೆ ಹೊಸ ಸಿನಿಮಾದ ಹೆಸರನ್ನು ರಾಜಮೌಳಿ ಹುಡುಕುತ್ತಿದ್ದು,`ರಾಮರಾವಣ ರಾಜ್ಯಂ’ ಟೈಟಲ್ ಸೂಟ್ ಆಗುತ್ತಾ, ಒಮ್ಮೆ ನೋಡಿ ಅಂತ ಚಿತ್ರತಂಡದ ಸದಸ್ಯರಿಗೂ ಹೇಳಿದ್ದಾರಂತೆ. ಈ ಟೈಟಲ್ ಕೇಳಿದ ರಾಮ್‍ಚರಣ್ ಹಾಗೂ ಜೂನಿಯರ್ ಎನ್‍ಟಿಆರ್ ಅಭಿಮಾನಿಗಳು ಹಾಗಾದರೆ ರಾಮ ಯಾರು ರಾವಣ ಯಾರು ಅನ್ನೊದ್ರ ಬಗ್ಗೆ ಚರ್ಚೆ ಶುರು ಮಾಡಿಕೊಂಡಿದ್ದಾರೆ.

    ಇದೇ ಟೈಟಲ್ ಫೈನಲ್ ಆಗುತ್ತಾ ಇಲ್ವಾ ಅನ್ನೊದು ಕನ್ಫರ್ಮ್ ಆಗಬೇಕು ಎಂದರೆ ಸಂಕ್ರಾತಿ ಹಬ್ಬದವರೆಗೂ ಕಾಯಬೇಕು. ಯಾಕೆಂದರೆ ಚಿತ್ರತಂಡ ಸದ್ಯಕ್ಕೆ ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಮಾಡಿದ್ದು, ಹಬ್ಬ ಆದ ಮೇಲೆ ಸೆಕೆಂಡ್ ಶೆಡ್ಯೂಲ್ ಪ್ಲಾನ್ ಮಾಡಿದೆ. ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಕಂಪ್ಲೀಟ್ ಆದ ಮೇಲೆ ರಾಜ್‍ಮೌಳಿ ಅವರು ಟೈಟಲ್ ಅನೌನ್ಸ್ ಮಾಡುತ್ತಾರೆ.

    ಸದ್ಯಕ್ಕೆ ಈ `ರಾಮರಾವಣ ರಾಜ್ಯಂ’ ಜೊತೆ ರಾಜಸಿಂಹ ಅನ್ನೊ ಟೈಟಲ್ ಕೂಡ ಸೌಂಡ್ ಮಾಡುತ್ತಿದೆ. ರಾಜಮೌಳಿ ಅವರು ಯಾವ ಟೈಟಲ್ ಅನ್ನು ಫೈನಲ್ ಮಾಡುತ್ತಾರೋ ಅನ್ನೊದನ್ನ ಕಾದುನೋಡಬೇಕಿದೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv