Tag: RRR

  • RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್

    RRR ಚಿತ್ರದಂತೆ 3 ವರ್ಷ ಕಾಯಿಸಲ್ಲ: ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್

    ಕಾಲಿವುಡ್‌ನ ಸಕ್ಸಸ್‌ಫುಲ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಪ್ರಸ್ತುತ ‘ಕೂಲಿ’ (Coolie) ಸಿನಿಮಾದಲ್ಲಿ ರಜನಿಕಾಂತ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ನಡುವೆ ಅವರು ನೀಡಿರುವ ಹೇಳಿಕೆಯೊಂದು ವೈರಲ್ ಆಗ್ತಿದೆ. ‘ಆರ್‌ಆರ್‌ಆರ್’ (RRR) ಚಿತ್ರದಂತೆ 3 ವರ್ಷ ಕಾಯಿಸಲ್ಲ ಎಂದು ನಿರ್ದೇಶಕ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಡ್ರ್ಯಾಗನ್’ ಹೀರೋಗೆ ಜೊತೆಯಾದ ಕೃತಿ ಶೆಟ್ಟಿ- ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ಅಪ್‌ಡೇಟ್

    ಸಂದರ್ಶನವೊಂದರಲ್ಲಿ ನಿರ್ದೇಶಕ ಮಾತನಾಡಿ, ಕೂಲಿ ಸೇರಿದಂತೆ ಯಾವುದೇ ಸಿನಿಮಾ ಆಗಿದ್ರೂ ನಾನು 6ರಿಂದ 8 ತಿಂಗಳಲ್ಲಿ ಮುಗಿಸುತ್ತೇನೆ. ಕಲಾವಿದರು ನನ್ನ ಸಿನಿಮಾದಲ್ಲಿ ನಟಿಸುವ ಜೊತೆ ಬೇರೆಯೊಂದು ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ರೆ, ನನ್ನ ಚಿತ್ರಕ್ಕೂ ತೊಂದರೆ ಆಗುತ್ತದೆ. ಹೀಗಾಗಿ ಕಲಾವಿದರು ನನ್ನ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಬೇಕು ಎಂದರು. ಇದನ್ನೂ ಓದಿ:‘ಬಿಗ್ ಬಾಸ್’ ಫ್ರೆಂಡ್ಸ್ ಜೊತೆ ಮೋಕ್ಷಿತಾ ಫಾರಿನ್ ಟ್ರಿಪ್

    ‘ಆರ್‌ಆರ್‌ಆರ್’ ಸಂಸ್ಥೆಯ ಚಿತ್ರದ ನಿರ್ಮಾಣ ಸಂಸ್ಥೆಯಂತೆ ನಾನು ಒಂದು ಚಿತ್ರವನ್ನು 3 ವರ್ಷಗಳವರೆಗೆ ಮಾಡಲ್ಲ, ನಟರನ್ನು ಕಾಯಿಸಲ್ಲ. ಕಲಾವಿದರು ಯಾರೇ ಆಗಿರಲಿ ಅವರಿಗೆ 3 ವರ್ಷಗಳು ಒಂದು ಚಿತ್ರಕ್ಕೆ ಸಮಯ ಮೀಸಲಿಡೋದು ಕಷ್ಟವಾಗುತ್ತದೆ. ನನ್ನ ಸಿನಿಮಾದಲ್ಲಿ ನಟಿಸುವ ಕಲಾವಿದರು ಆಯಾ ಸಮಯದಲ್ಲಿ ಅದೇ ಪಾತ್ರಗಳಲ್ಲಿ ಜೀವಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.

    ಸದ್ಯ ಲೋಕೇಶ್ ನೀಡಿರುವ ಈ ಹೇಳಿಕೆ ವೈರಲ್ ಆಗಿದೆ. ಸಂದರ್ಶನದಲ್ಲಿ ರಾಜಮೌಳಿ ಹೆಸರನ್ನು ಹೇಳದೇ ಲೋಕೇಶ್ ಟಾಂಗ್ ಕೊಟ್ರಾ ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಿದೆ.

    ಅಂದಹಾಗೆ, ತಲೈವಾ ನಟನೆಯ ‘ಕೂಲಿ’ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗ್ತಿದೆ. ತಲೈವಾ ಜೊತೆ ರಮ್ಯಾ ಕೃಷ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಚಿತ್ರದಲ್ಲಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಿದ್ದಾರೆ.

  • ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ

    ಲಂಡನ್‌ನಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್- ಜ್ಯೂ.ಎನ್‌ಟಿಆರ್ ಆಕ್ರೋಶ

    ‘ಆರ್‌ಆರ್‌ಆರ್’ (RRR) ಚಿತ್ರದ ಲೈವ್ ಕಾನ್ಸರ್ಟ್ ಕಾರ್ಯಕ್ರಮ ಲಂಡನ್‌ನಲ್ಲಿ ಮೇ 11ರಂದು ಅದ್ಧೂರಿಯಾಗಿ ಜರುಗಿದ್ದು, ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿದ್ದರು. ಈ ವೇಳೆ, ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ಅತೀರೇಕದ ವರ್ತನೆಗೆ ಕಂಡು ನಟ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

    ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ‘ಆರ್‌ಆರ್‌ಆರ್’ ಚಿತ್ರದ ಲೈವ್ ಕಾನ್ಸರ್ಟ್ ನಡೆದಿದೆ. ಜ್ಯೂ.ಎನ್‌ಟಿಆರ್ (Jr.NTR) ಕೂಡ ಭಾಗಿಯಾಗಿ ಎಂಜಾಯ್ ಮಾಡಿದ್ದಾರೆ. ಕಾರ್ಯಕ್ರಮದ ಬಳಿಕ ನಟನ ಜೊತೆಗೆ ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ನಿಮ್ಮೆಲ್ಲರಿಗೂ ಫೋಟೋ ತೆಗೆದುಕೊಳ್ಳಲು ಅವಕಾಶ ಕೊಡುತ್ತೇನೆ ಆತುರಪಡಬೇಡಿ ಎಂದು ತಾಳ್ಮೆಯಿಂದಲೇ ಹೇಳಿದ್ದಾರೆ. ನಟನ ಮಾತಿಗೆ ಕ್ಯಾರೇ ಎನ್ನದೇ ನಟನತ್ತ ಗುಂಪು ಗುಂಪಾಗಿ ಕೆಲ ಅಭಿಮಾನಿಗಳು ಸೇರಿದ್ದಾರೆ. ಹೀಗಾಗಿ ಜ್ಯೂ.ಎನ್‌ಟಿಆರ್ ಕೋಪದಿಂದಲೇ ರಿಯಾಕ್ಟ್ ಮಾಡಿದ್ದಾರೆ. ಬಳಿಕ ಬಾಡಿಗಾರ್ಡ್ ಸಹಾಯದಿಂದ ಸ್ಥಳದಿಂದ ನಟ ತೆರಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ರಾಕೇಶ್ ಸಾವಿನ ಸುದ್ದಿ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ‘ಬಿಗ್ ಬಾಸ್’ ಲೋಕೇಶ್ ಭಾವುಕ

    ‘ಆರ್‌ಆರ್‌ಆರ್’ ಚಿತ್ರ 2022ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್, ಜ್ಯೂ.ಎನ್‌ಟಿಆರ್, ಆಲಿಯಾ ಭಟ್ ನಟಿಸಿದ್ದರು.

    ಪ್ರಸ್ತುತ ಪ್ರಶಾಂತ್ ನೀಲ್ ಜೊತೆಗಿನ ಹೊಸ ಸಿನಿಮಾದಲ್ಲಿ ತಾರಕ್ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರದಲ್ಲಿ ನಟ ಕಾಣಿಸಿಕೊಳ್ತಿದ್ದಾರೆ.

  • ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

    ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಬಿಗ್ ಅಪ್‌ಡೇಟ್

    ಆರ್‌ಆರ್‌ಆರ್ (RRR) ಸಿನಿಮಾ ನಂತರ ಗ್ಲೋಬಲ್‌ಸ್ಟಾರ್ ರಾಮ್‌ಚರಣ್ (Ram Charan )ನಟನೆಯ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ `ಗೇಮ್ ಚೇಂಜರ್’. ಸದ್ಯ ತಮ್ಮ ಅಭಿಮಾನಿಗಳಿಗೆ ರಾಮ್‌ಚರಣ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಗ್ಲೋಬಲ್‌ಸ್ಟಾರ್ ಕೊಟ್ಟ ಸಿಹಿ ಸುದ್ದಿಗೆ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಹೌದು, ಗೇಮ್ ಚೇಂಜರ್ (Game Changer) ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಿ ಫ್ಯಾನ್ಸ್ ರಣಕೇಕೆ ಹಾಕಿಯಾಗಿದೆ. ಇದೀಗ ಸೆಕೆಂಡ್ ಸಿಂಗಲ್ ಸರದಿ.

    ರಾಮ್ ಚರಣ್ ಹಾಗೂ ಕಿಯಾರ ಅಡ್ವಾನಿ ಜೋಡಿ ಫಸ್ಟ್ ಸಿಂಗಲ್ `ಜರಗಂಡಿ’ ಮೂಲಕ ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ಸೆಕೆಂಡ್ ಸಿಂಗಲ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಸೆಪ್ಟಂಬರ್ 28ಕ್ಕೆ ಎರಡನೇ ಹಾಡು ರಿಲೀಸ್ ಆಗ್ತಿದೆ. ಈ ಬಗ್ಗೆ ಚಿತ್ರತಂಡ ಖಚಿತಪಡಿಸಿದೆ. ಡೇಟ್ ಅನೌನ್ಸ್ ಮಾಡಿರುವ ಪೋಸ್ಟರ್‌ನಲ್ಲಿ ಸಾಂಗ್ ನೇಮ್ `ರಾ ಮಚ್ಚಾ ಮಚ್ಚಾ’ ಕೂಡಾ ರಿವೀಲ್ ಮಾಡಿದೆ ಚಿತ್ರತಂಡ. ಇದನ್ನೂ ಓದಿ: `ಮನೆ ಒಳಗೆ ಬಿಟ್ಟುಕೊಳ್ತಿಲ್ಲ ಪತ್ನಿ’ – ಪೊಲೀಸರ ಮೊರೆ ಹೋದ ಜಯಂ ರವಿ

    ಶಂಕರ್.ಎಸ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರ ಅಂದ್ರೆ ಕೇಳ್ಬೇಕಾ? ಸಹಜವಾಗಿಯೇ `ಗೇಮ್ ಚೇಂಜರ್’ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಜಾಸ್ತಿಯಾಗಿದೆ. ಹಬ್ಬಕ್ಕೆ ತಮ್ಮ ಭಕ್ತಗಣಕ್ಕೆ ರಾಮ್ ಚರಣ್ ಮಸ್ತ್ ಸ್ಟೆಪ್ ಹಾಕುವ ಹಾಡೊಂದು ಉಡುಗೊರೆಯಾಗಿ ನೀಡ್ತಿದ್ದಾರೆ ಅಂತಾ ಅವ್ರ ಅಭಿಮಾನಿಗಳು ಕುಣಿಯೋಕೆ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ಸಾಂಗ್ `ರಾ ಮಚ್ಚಾ ಮಚ್ಚಾ’ ಅನ್ನೋ ಸಾಲುಗಳಿಂದ ಸ್ಟಾರ್ಟ್ ಆಗಬಹುದೇನೋ ಆದ್ರೆ, ರಾಮ್‌ಚರಣ್ ಲುಕ್ ಮಾತ್ರ ಡಿಸೆಂಟ್ ಆಗಿ ಆಫೀಸರ್ ಥರ ಕಾಣಿಸಿಕೊಂಡಿದ್ದಾರೆ. `ತ್ರಿಪಲ್ ಆರ್’ ಸಿನಿಮಾದ ನಂತರ ಮತ್ತೊಂದು ವಿಭಿನ್ನ ರೀತಿಯ ಸಿನಿಮಾವನ್ನ ಮಾಡಿದ್ದಾರೆ ರಾಮ್ ಚರಣ್. ಜೊತೆಗೆ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನಿಟ್ಟುಕೊಂಡು ಕುಳಿತಿದೆ ಟೀಮ್. ನಿರ್ದೇಶಕ ಶಂಕರ್.ಎಸ್ ಹಾಗೂ ರಾಮ್ ಚರಣ್ ಫಸ್ಟ್ ಕಾಂಬೋ ಹೇಗೆ ವರ್ಕೌಟ್ ಆಗುತ್ತೆ ಅನ್ನೋ ಮಹಾ ನಿರೀಕ್ಷೆಗಳು, ಲೆಕ್ಕಾಚಾರಗಳು ಸೌತ್‌ನಲ್ಲಿ ಚರ್ಚೆಯಾಗ್ತಿವೆ.

     

  • ಜಪಾನ್ ಭೂಕಂಪದಿಂದ ಪಾರಾದ ರಾಜಮೌಳಿ & ಟೀಮ್

    ಜಪಾನ್ ಭೂಕಂಪದಿಂದ ಪಾರಾದ ರಾಜಮೌಳಿ & ಟೀಮ್

    ಆರ್.ಆರ್.ಆರ್ (RRR) ಸಿನಿಮಾದ ವಿಶೇಷ ಪ್ರದರ್ಶನ ಜಪಾನ್ (Japan) ನಲ್ಲಿ ನಡೆಯುತ್ತಿದೆ. ನಿರ್ದೇಶಕ ರಾಜಮೌಳಿ (Rajamouli), ಅವರ ಪುತ್ರ ಕಾರ್ತಿಕೇನ್ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು ಭೂಕಂಪನದ (Earthquake) ಅನುಭವಕ್ಕೆ ತುತ್ತಾಗಿದ್ದಾರೆ. ಆ ಅನುಭವವನ್ನು ರಾಜಮೌಳಿ ಪುತ್ರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಭೂಕಂಪ ಆದಾಗ ರಾಜಮೌಳಿ ಮತ್ತು ಟೀಮ್ ಖಾಸಗಿ ಹೋಟೆಲ್‍ ನ 28ನೇ ಮಹಡಿಯಲ್ಲಿ ವಾಸ್ತವ್ಯ ಹೂಡಿದ್ದರು. ಭೂಕಂಪವಾದಾಗ ಕಟ್ಟಡ ಅಲುಗಾಡಿದ ಅನುಭವ ಕೂಡ ಆಗಿದೆ. ಅಲ್ಲಿ ಭೂಕಂಪದ ತೀವ್ರತೆ ಮತ್ತು ಅಲರ್ಟ್ ಕುರಿತಾಗಿಯೂ ಅವರು ಬರೆದುಕೊಂಡಿದ್ದಾರೆ. ಭೂಕಂಪ ಆಗುವುದಕ್ಕೂ ಮುನ್ನ ಮೊಬೈಲ್ ಗೆ ಅಲರ್ಟ್ ಬಂದಿರುವ ಮೆಸೇಜ್ ಕೂಡ ಹಾಕಿದ್ದಾರೆ.

     

    ಆರ್.ಆರ್.ಆರ್ ಸಿನಿಮಾದ ವಿಶೇಷ ಪ್ರದರ್ಶನವು ಜಪಾನ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿದೆ. ಸಿನಿಮಾ ಕುರಿತಂತೆ ರಾಜಮೌಳಿ ನೋಡುಗರ ಜೊತೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಒಂದಷ್ಟು ವಿಷಯ ರಿವಿಲ್ ಮಾಡಿದ್ದಾರೆ.

  • RRR ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ರ ಪತ್ನಿ ನಿಧನ

    RRR ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ ರ ಪತ್ನಿ ನಿಧನ

    ಭಾರತಕ್ಕೆ ಆಸ್ಕರ್ ತಂದು ಕೊಟ್ಟ ಹಾಗೂ ವಿಶ್ವ ಮಟ್ಟದಲ್ಲಿ ಸಖತ್ ಸುದ್ದಿ ಮಾಡಿದ್ದ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ (RRR) ಸಿನಿಮಾದ ಸಿನಿಮಾಟೋಗ್ರಾಫರ್ ಸೆಂಥಿಲ್ ಕುಮಾರ್ (Senthil Kumar) ಅವರ ಪತ್ನಿ ನಿಧನರಾಗಿದ್ದಾರೆ. ಯೋಗ ಕೋಚ್ ಕೂಡ ಆಗಿದ್ದ ಅವರ ಪತ್ನಿ ರೂಹಿ (Ruhi) ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.

    ಅನಾರೋಗ್ಯದ ಕಾರಣದಿಂದಾಗಿ ರೂಹಿ ಅವರನ್ನು ಸಿಕಂದರಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರೂಹಿ ನಿಧನರಾಗಿದ್ದಾರೆ (Passed away) ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. 2009ರಲ್ಲಿ ಸೆಂಥಿಲ್ ಮತ್ತು ರೂಹಿ ಹೊಸ ಜೀವನಕ್ಕೆ ಕಾಲಿಟ್ಟದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

     

    ಕೋವಿಡ್ ಗೆ ತುತ್ತಾದ ನಂತರ ರೂಹಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ನಿರಂತರವಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೂ, ಅವರ ಆರೋಗ್ಯ ಸುಧಾರಿಸಲಿಲ್ಲ ಎಂದು ಹೇಳಲಾಗುತ್ತಿದೆ. ಕೊನೆಗೂ ಅಂಗಾಂಗ ವೈಫಲ್ಯದಿಂದಾಗಿ ರೂಹಿ ಸಾವು ಕಂಡಿದ್ದಾರೆ.

  • ದುರಂತದಿಂದ ಪಾರಾದ ಜ್ಯೂ.ಎನ್‌ಟಿಆರ್- ಜಪಾನ್‌ನಿಂದ ಮರಳಿದ ನಟ

    ದುರಂತದಿಂದ ಪಾರಾದ ಜ್ಯೂ.ಎನ್‌ಟಿಆರ್- ಜಪಾನ್‌ನಿಂದ ಮರಳಿದ ನಟ

    ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ (Jr.ntr) ಅವರು ಫ್ಯಾನ್ಸ್‌ಗೆ ಶುಭ ಸುದ್ದಿ ಸಿಕ್ಕಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದರು ತಾರಕ್. ಈ ವೇಳೆ, ಜಪಾನ್‌ನಲ್ಲಿ ಭೂಕಂಪವಾಗಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ಇದೀಗ ಜ್ಯೂ.ಎನ್‌ಟಿಆರ್ ಜಪಾನ್‌ನಿಂದ ಸೇಫ್ ಆಗಿ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಈ ವಿಚಾರ ತಿಳಿಸಿದ್ದಾರೆ.

    ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್‌ನಲ್ಲಿ (Japan) ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್ ಎಂದು ಜ್ಯೂ.ಎನ್‌ಟಿಆರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಕ್ಯಾಪ್ಟನ್‌ ಮಾತು ಕೇಳದ ಮೈಕಲ್‌- ವೀಕೆಂಡ್‌ನಲ್ಲಿದ್ಯಾ ಮಾರಿಹಬ್ಬ?

    ತಾರಕ್ ಕ್ರಿಸ್‌ಮಸ್ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದರು. ಇದೇ ವೇಳೆ, ಜಪಾನ್‌ನಲ್ಲಿ ಭೂಕಂಪ ಕೂಡ ಸಂಭವಿಸಿತ್ತು. ಹಾಗಾಗಿ ಅಲ್ಲಿಯೇ ಲಾಕ್ ಆಗಿದ್ದರು ತಾರಕ್. ಆದರೆ ಈಗ ಸುರಕ್ಷಿತವಾಗಿ ಮರಳುವ ಮೂಲಕ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದ್ದಾರೆ.

    ‘ದೇವರ’ (Devara) ಸಿನಿಮಾದಲ್ಲಿ ಪ್ರಸ್ತುತ ತಾರಕ್ ಬ್ಯುಸಿಯಾಗಿದ್ದಾರೆ. ಅವರ ಮುಂದೆ ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ (Janhvi Kapoor) ನಾಯಕಿಯಾಗಿ ನಟಿಸುತ್ತಿದ್ದಾರೆ.

  • SIIMA 2023 ಸಮಾರಂಭದಲ್ಲಿ ರಿಷಬ್‌ ಜೊತೆ ಕನ್ನಡದಲ್ಲೇ ಮಾತನಾಡಿದ ಜ್ಯೂ.ಎನ್‌ಟಿಆರ್

    SIIMA 2023 ಸಮಾರಂಭದಲ್ಲಿ ರಿಷಬ್‌ ಜೊತೆ ಕನ್ನಡದಲ್ಲೇ ಮಾತನಾಡಿದ ಜ್ಯೂ.ಎನ್‌ಟಿಆರ್

    ಬ್ಬರು ಮಹಾನ್ ಸಾಧಕರು ಮುಖಾಮುಖಿಯಾಗಿರುವ ಅಪರೂಪದ ಘಟನೆ ನಡೆದಿದೆ. ಅಲ್ಲೊಂದು ಆಪ್ತ ಮಾತುಕತೆ ನಡೆದಿದೆ. ಹೀಗೆ ಮುಖಾಮುಖಿಯಾದವರೇ ರಿಷಬ್ ಶೆಟ್ಟಿ (Rishab Shetty) ಹಾಗೂ ಜ್ಯೂ.ಎನ್‌ಟಿಆರ್. ಅದೊಂದು ದೊಡ್ಡ ವೇದಿಕೆಯಲ್ಲಿ ಇಬ್ಬರ ನಡುವೆ ಕನ್ನಡ ಭಾಷೆ ನಲಿದಾಡಿದೆ. ಸುಂದರ ನಗರ ಕುಂದಾಪುರ ನೆನಪಾಗಿದೆ.

    ಕನ್ನಡ ಕರಾವಳಿಯ ಸಂಸ್ಕೃತಿ ಆಚರಣೆಯನ್ನ ದೇಶದಲ್ಲಿ ಮೆರೆಸಿದ ನಟ ರಿಷಬ್ ಶೆಟ್ಟಿ. ಇನ್ನೊಬ್ಬರು ಆಂಧ್ರದ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್. ಪ್ರತಿಷ್ಟಿತ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ(Siima Awards 2023) ಮುಖಾಮುಖಿಯಾದ್ರು. ಬಳಿಕ ನಡೆದಿದ್ದೇ ಬಾಂಧವ್ಯದ ಮಿಲನ. ಇದನ್ನೂ ಓದಿ:ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೃತಧಾರೆ’ ರಿಲೀಸ್ ಆಗಿ ಇಂದಿಗೆ 18 ವರ್ಷ

    ಜ್ಯೂ.ಎನ್‌ಟಿಆರ್ (Jr.Ntr) ಹುಟ್ಟಿದ್ದು ಬೆಳೆದಿದ್ದೆಲ್ಲವೂ ಆಂಧ್ರದಲ್ಲೇ, ಟಾಲಿವುಡ್ ಸಿನಿಮಾ ನಟ. ಆದರೆ ಅವರು ಕನ್ನಡ ಭಾಷೆ ಅದ್ಭುತವಾಗಿ ಮಾತನಾಡುತ್ತಾರೆ. ಕಾರಣ ತಾಯಿ ಊರು ಕರ್ನಾಟಕದ ಕುಂದಾಪುರ. ಅಮ್ಮನ ಮಡಿಲಲ್ಲಿ ಕನ್ನಡ ಕಲಿತ ಜ್ಯೂ.ಎನ್‌ಟಿಆರ್ ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತಾಡ್ತಾರೆ. ಕರ್ನಾಟಕಕ್ಕೆ ಬಂದ್ರೆ ಸಾಕು ಕನ್ನಡವನ್ನೇ ಮಾತಿನಲ್ಲಿ ಬಳಸುತ್ತಾರೆ.

    ಕಾಂತಾರ 2 RISHAB SHETTY

    ರಿಷಬ್- ಜ್ಯೂ.ಎನ್‌ಟಿಆರ್ ನಡುವೆ ಸೈಮಾದಲ್ಲೊಂದು ಅದ್ಭುತ ಸಂಭಾಷಣೆ ನಡೆದಿದೆ. ಅದರ ತುಣುಕುಗಳು ಈಗಾಗ್ಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿಷಬ್ ಶೆಟ್ಟಿ ಕುಂದಾಪುರದ (Kundapura) ಊರಿನವರು. ಅದೇ ಕುಂದಾಪುರ ಜ್ಯೂ.ಎನ್‌ಟಿಆರ್‌ಗೆ ಅಜ್ಜಿಮನೆ ಆಗಬೇಕು. ಅಂದ್ರೆ ತಾಯಿಯ ಊರದು. ಹೀಗಾಗಿ ಇಬ್ಬರೂ ಕುಂದಾಪುರವನ್ನ ನೆನೆದ್ರು.

    ‘ಕಾಂತಾರ’ (Kantara) ಚಿತ್ರಕ್ಕೆ ರಿಷಬ್ ಶೆಟ್ಟಿ, ಜ್ಯೂ.ಎನ್‌ಟಿಆರ್ ಕಡೆಯಿಂದಲೇ ಪ್ರಶಸ್ತಿ ಸ್ವೀಕರಿಸಿದ್ದಾರೆ. ರಿಷಬ್ ಕನ್ನಡದಲ್ಲಿ ವೇದಿಕೆ ಮೇಲೆ ಮಾತನಾಡುತ್ತಿದ್ದಾಗ ಕೆಳಗೆ ಕುಳಿತಿದ್ದ ಜ್ಯೂ.ಎನ್‌ಟಿಆರ್ ತಾವಾಗಿಯೇ ಕನ್ನಡದಲ್ಲಿ ಮಾತನಾಡ್ತಾ ರಿಷಬ್ ಜೊತೆ ಪ್ರೀತಿಯಿಂದ ಮಾತನಾಡಿದ್ದಾರೆ. ಅಲ್ಲೊಂದು ಹಿತವಾದ ಸ್ನೇಹ ಎಲ್ಲರ ಗಮನ ಸೆಳೆಯಿತು.

    ಜ್ಯೂ.ಎನ್‌ಟಿಆರ್, ಅಗಲಿದ ಅಪ್ಪುಗೆ ಆಪ್ತಮಿತ್ರ. ಆರ್‌ಆರ್‌ಆರ್ ಚಿತ್ರದ ಪ್ರಚಾರಕ್ಕೆ ಬಂದಾಗಲೂ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದಾಗಲೂ ಅಪ್ಪುವನ್ನ ನೆನೆದು ಭಾವುಕವಾಗಿದ್ರು. ಕನ್ನಡದಲ್ಲೇ ಮಾತನಾಡಿದ್ರು. ಇದೀಗ ಮತ್ತೊಬ್ಬ ಕನ್ನಡಿಗನ ಜೊತೆ ಸ್ನೇಹದಿಂದ ಮಾತನಾಡಿರುವುದು ಕನ್ನಡಿಗರ ಹೃದಯದಲ್ಲಿ ಜ್ಯೂ.ಎನ್‌ಟಿಆರ್‌ಗೆ ಇನ್ನಷ್ಟು ಭದ್ರಸ್ಥಾನ ಪಡೆಯುವಂತಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ‘ಗೇಮ್ ಚೇಂಜರ್’ ನಿರ್ದೇಶಕನ ಹೊಸ ಚಿತ್ರಕ್ಕೆ ಕೈಜೋಡಿಸಿದ್ರಾ ರಾಮ್ ಚರಣ್?

    ಮತ್ತೆ ‘ಗೇಮ್ ಚೇಂಜರ್’ ನಿರ್ದೇಶಕನ ಹೊಸ ಚಿತ್ರಕ್ಕೆ ಕೈಜೋಡಿಸಿದ್ರಾ ರಾಮ್ ಚರಣ್?

    ಟಾಲಿವುಡ್ (Tollywood) ನಟ ರಾಮ್ ಚರಣ್ ಅವರು ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಗ್ಲೋಬಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಇದರ ನಡುವೆ ಮೆಗಾ ಸ್ಟಾರ್ ಪುತ್ರನ ಗೇಮ್ ಚೇಂಜರ್ ಸಿನಿಮಾ ಅಪ್‌ಡೇಟ್ ಕಾಯ್ತಿದ್ದ ಫ್ಯಾನ್ಸ್‌ಗೆ, ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ‘ಗೇಮ್ ಚೇಂಜರ್’ ಸಿನಿಮಾದ ನಿರ್ದೇಶಕ ಎಸ್.ಶಂಕರ್ ಜೊತೆಗೆನೇ ಹೊಸ ಸಿನಿಮಾಗೆ ಕೈ ಜೋಡಿಸುತ್ತಾರಂತೆ.

    ಮುದ್ದು ಮಗಳ ಆಗಮನದಿಂದ ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮಗಳ ಪಾಲನೆಯಲ್ಲಿ ರಾಮ್ ಚರಣ್ ದಂಪತಿ ಬ್ಯುಸಿಯಿದ್ದಾರೆ. ಜೊತೆಗೆ ಹೊಸ ಪ್ರಾಜೆಕ್ಟ್‌ಗಳ ಕಡೆ ಕೂಡ ಗಮನ ಕೊಡ್ತಿದ್ದಾರೆ. ಆರ್‌ಆರ್‌ಆರ್ ಹೀರೋ ಚರಣ್, ಗೇಮ್ ಚೇಂಜರ್ ಸಿನಿಮಾದ ನಂತರ ಮುಂದೇನು? ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ರಾಮ್ ಚರಣ್ ಗೇಮ್ ಚೇಂಜರ್ ಬಳಿಕ ಯಾವುದೇ ಚಿತ್ರವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿ ‘ಗೇಮ್ ಚೇಂಜರ್’ ನಂತರವೇ ಹೊಸ ಸಿನಿಮಾ ಸೆಟ್ಟೇರಬಹುದು ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಈ ತಿಂಗಳಲ್ಲಿಯೇ ಈ ಕುರಿತು ಬಿಗ್ ಅಪ್ಡೇಟ್ ಹೊರಬೀಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

    ‘ಗೇಮ್ ಚೇಂಜರ್’ ಶೂಟಿಂಗ್ ಸಮಯದಲ್ಲೇ ನಟ ರಾಮ್‌ನ ನಿರ್ದೇಶಕ ಶಂಕರ್ (S.Shankar) ಲಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹೊಸ ಪ್ರಾಜೆಕ್ಟ್‌ಗೆ ಚರಣ್ ಕಾಲ್‌ಶೀಟ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜಾನಾ? ಎಂಬುದನ್ನ ಮುಂದಿನ ದಿನಗಳವರೆಗೂ ಕಾಯಬೇಕಿದೆ. ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ರಾಮ್- ಕಿಯಾರಾ ಅಡ್ವಾಣಿ (Kiara Advani) ಜೋಡಿಯಾಗಿ ನಟಿಸಿದ್ದಾರೆ. ಸಿನಿಮಾದ ಕೊನೆಯ ಹಂತದ ಕೆಲಸಗಳು ಜರುಗುತ್ತಿದೆ. ಸದ್ಯದಲ್ಲೇ ಎಲ್ಲದರ ಅಪ್‌ಡೇಟ್ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ ಡೈರೆಕ್ಷನ್‌ನಲ್ಲಿ ‘ಆರ್‌ಆರ್‌ಆರ್’ (RRR) ಸಿನಿಮಾ ಗೆದ್ದು ಬೀಗಿರೋದು ಗೊತ್ತೆ ಇದೆ. ಚಿತ್ರದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್ ಗೌರವ ಕೂಡ ದಕ್ಕಿದೆ. ಇಷ್ಟೆಲ್ಲಾ ಸಾಧನೆ ಮಾಡಿರೋ ಟೀಮ್ ಕಡೆಯಿಂದ ಆರ್‌ಆರ್‌ಆರ್ ಪಾರ್ಟ್ 2 (Part 2) ಬಗ್ಗೆ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಅಷ್ಟಕ್ಕೂ ‘ಆರ್‌ಆರ್‌ಆರ್’ ಸೀಕ್ವೆಲ್ ಬರುತ್ತಾ ಎಂಬುದನ್ನ ರಾಜಮೌಳಿ (Rajamouli) ತಂದೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

    rrr rajamouli

    ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಜೋಡಿ ಸಿನಿಮಾದಲ್ಲಿ ಕಮಾಲ್ ಮಾಡಿದ್ರು. ಆಲಿಯಾ ಭಟ್ (Alia Bhatt) ಕೂಡ ಸಾಥ್ ನೀಡಿದ್ದರು. ರಾಜಮೌಳಿ ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಟ್ರಯೋ ಜೋಡಿಯನ್ನ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ‘ಆರ್‌ಆರ್‌ಆರ್’ ಸೀಕ್ವೆಲ್‌ನ ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಪ್ರಶ್ನೆಗೆ ಹೌದು, ಇಲ್ಲ ಎಂಬ ಎರಡೂ ಉತ್ತರ ನೀಡಬಹುದು. ಈ ಚಿತ್ರದ ಸೀಕ್ವೆಲ್ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಸಿನಿಮಾದ ಕಥೆ ಆಫ್ರಿಕಾದಲ್ಲಿ ಸಾಗುತ್ತದೆ ಎಂದು ವಿಜಯೇಂದ್ರ ಪ್ರಸಾದ್(Vijendra Prasad) ತಿಳಿಸಿದ್ದಾರೆ.

    ಸದ್ಯ ಮಹೇಶ್ ಬಾಬು (Mahesh Babu) ಅವರು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಮುಗಿದ ಮೇಲೆ ಅವರ ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮುಗಿಯುವವರೆಗೂ ಅವರು ಸೀಕ್ವೆಲ್ ಬಗ್ಗೆ ಆಲೋಚಿಸುವುದಿಲ್ಲ. ಒಂದೊಮ್ಮೆ ಅವರಿಗೆ ಕಥೆ ಇಷ್ಟವಾದರೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ (Ramcharan) ಕಾಲ್‌ಶೀಟ್ ಸಿಗಬೇಕು ಎಂದು ಅವರು ಹೇಳಿದ್ದಾರೆ. ಒಟ್ನಲ್ಲಿ ಆರ್‌ಆರ್‌ಆರ್ ಪಾರ್ಟ್ ಮಾಡಿದ್ದರು ಮಾಡಬಹುದು ಸದ್ಯಕ್ಕೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ರಾಜಮೌಳಿ ತಂದೆ ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • RRR ಸಿನಿಮಾದ ಐರಿಶ್ ನಟ ರೇ ಸ್ಟೀವನ್ಸನ್ ನಿಧನ

    RRR ಸಿನಿಮಾದ ಐರಿಶ್ ನಟ ರೇ ಸ್ಟೀವನ್ಸನ್ ನಿಧನ

    ಭಾರತೀಯ ಸಿನಿಮಾ ರಂಗದ ಹೆಮ್ಮೆಯಾಗಿರುವ ಆರ್.ಆರ್.ಆರ್ (RRR) ಸಿನಿಮಾ ತಂಡದಿಂದ ಶಾಕಿಂಗ್ ನ್ಯೂಸ್ ಬಂದಿದ್ದು, ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ ನಿರ್ದೇಶಕ ರಾಜಮೌಳಿ (Rajamouli). ಈ ಸಿನಿಮಾದಲ್ಲಿ ಬ್ರಿಟಿಷ್ ಅಧಿಕಾರಿಯ ಪಾತ್ರ ಮಾಡಿದ್ದ ಐರಿಶ್ ನಟ ರೇ ಸ್ಟೀವನ್ಸನ್ (Ray Stevenson) ನಿಧನವಾಗಿದ್ದಾರೆ. ಈ ಕುರಿತಂತೆ ರಾಜಮೌಳಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

    ರೇ ನಿಧನದ (passed away) ಸುದ್ದಿಯನ್ನು ರಾಜಮೌಳಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ರೇ ಅವರ ಎನರ್ಜಿ ಹಾಗೂ ಅವರು ಸೆಟ್ ನಲ್ಲಿ ತರುತ್ತಿದ್ದ ವೈಬ್ರೆನ್ಸ್ ಬಗ್ಗೆ ಬರೆದುಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿದ ಖುಷಿ ತಾವತ್ತೂ ನನ್ನೊಂದಿಗೆ ಇರುತ್ತದೆ. ನನ್ನ ಫ್ರಾರ್ಥನೆ ಅವರ ಕುಟುಂಬದ ಜೊತೆ ಇರಲಿದೆ’ ಎಂದು ಅವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ರೆಡ್ ಕಲರ್ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಸಾನ್ಯ ಅಯ್ಯರ್

    ಐರ್ಲೆಂಡ್ ಮೂಲದ ರೇ ಹಾಲಿವುಡ್ ಸಿನಿಮಾಗಳಾದ ದಿ ವಾರ್ ಜೋನ್, ಕಿಂಗ್ ಆಥರ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಫೇಮಸ್ ಶೋಗಳಾದ ರೆಮೋ, ಅಶೋಕಾ ಸೀರಿಸ್ ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಮೇ 21ರಂದು ರೇ ನಿಧನರಾಗಿದ್ದು, ಅವರಿಗೆ 58 ವರ್ಷ ವಯಸ್ಸಾಗಿತ್ತು. ನಿಧನಕ್ಕೆ ನಿಖರವಾದ ಮಾಹಿತಿ ದೊರೆತಿಲ್ಲ. ಆದರೆ, ನಿಧನದ ಸುದ್ದಿಯನ್ನು ಅವರ ಕುಟುಂಬ ಖಚಿತ ಪಡಿಸಿದೆ.