Tag: rowdy sheater

  • ರೌಡಿಶೀಟರ್ ಕೊಲೆ – ಸ್ಯಾಂಡಲ್‍ವುಡ್ ನಟಿ, ತಾಯಿ ಅರೆಸ್ಟ್

    ರೌಡಿಶೀಟರ್ ಕೊಲೆ – ಸ್ಯಾಂಡಲ್‍ವುಡ್ ನಟಿ, ತಾಯಿ ಅರೆಸ್ಟ್

    ರಾಮನಗರ: ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟಿ ಹಾಗೂ ಆಕೆಯ ತಾಯಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಚಿತ್ರನಟಿ ಪ್ರಿಯಾಂಕಾ (ಸವಿತಾ) ಹಾಗೂ ಆಕೆಯ ತಾಯಿ ನಾಗಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

    ಏನಿದು ಪ್ರಕರಣ: ಚನ್ನಪಟ್ಟಣ ತಾಲೂಕಿನ ರಾಂಪುರದ ತೋಟದ ಮನೆಯೊಂದರಲ್ಲಿ ಜನವರಿ 29 ರಂದು ರೌಡಿ ಶೀಟರ್ ಸುನಿಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಗ್ರಾಮಾಂತರ ಪೋಲೀಸರು ತೀವ್ರ ತನಿಖೆ ನಡೆಸಿದ್ದರು. ಹಳೆ ಮನೆ ವಿಚಾರವಾಗಿಯೇ ಸುನೀಲ್ ನನ್ನು ಕೊಲೆ ಮಾಡಲಾಗಿದೆ ಎಂದು ಆತನ ಪೋಷಕರು ಆರೋಪಿಸಿದ್ದರು. ಅಲ್ಲದೆ ಕೊಲೆಯಲ್ಲಿ ನಟಿ ಪ್ರಿಯಾಂಕ ಮತ್ತು ಅವರ ತಾಯಿ ನಾಗಮ್ಮ ಕೈವಾಡವಿದೆ ಎಂದೂ ದೂರಿದ್ದರು.

    ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಸುನಿಲ್ ನನ್ನು ಕೊಲೆ ಮಾಡಿದ್ದ ಮನು ಅಲಿಯಾಸ್ ಮಾದೇಗೌಡ, ಶಿವರಾಜ್ ಉರುಫ್ ಕುದುರೆ ಎಂಬವರನ್ನ ಬಂಧಿಸಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ನಟಿ ಪ್ರಿಯಾಂಕ ಮತ್ತು ನಾಗಮ್ಮರ ಹೆಸರು ಸಹ ಕೇಳಿಬಂದಿತ್ತು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರನ್ನು ಇದೀಗ ಪೋಲೀಸರು ಬಂಧಿಸಿದ್ದಾರೆ.

    ಕೊಲೆಗೆ ಕಾರಣವೇನು?
    ನಟಿ ಪ್ರಿಯಾಂಕ ಅವರ ಕಾರಿನ ಚಾಲಕನಾಗಿ ಸುನಿಲ್ ಕೆಲಸ ಮಾಡುತ್ತಿದ್ದನು. ಸಂಬಂಧದಲ್ಲಿ ಸುನಿಲ್ ನಟಿಯ ಅತ್ತೆಯ ಮಗನಾಗಿದ್ದಾನೆ. ಆದರೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಸುನೀಲ್ ನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸುನೀಲ್ ಪದೇ ಪದೇ ಫೋನ್ ಮಾಡಿ ಬೆದರಿಸಿ ನಟಿಯಿಂದ ಹಣ ವಸೂಲಿ ಮಾಡುತ್ತಿದ್ದನು. ಸುನಿಲ್‍ಗೆ ಹಣ ನೀಡಿ ಬೇಸತ್ತ ಪ್ರಿಯಾಂಕ ತನ್ನ ಸಂಬಂಧಿಕರಿಗೆ ಹೇಳಿ ಕೊಲೆ ಮಾಡಿಸಿದ್ದಳು. ಪ್ರಕರಣವನ್ನ ಭೇದಿಸಿದ ಪೊಲೀಸರು ಇದೀಗ ತಾಯಿ, ಮಗಳನ್ನು ಬಂಧಿಸಿದ್ದಾರೆ.

    ನಟಿ ಪ್ರಿಯಾಂಕ ಕನ್ನಡದ ‘ಐಪಿಸಿ ಸೆಕ್ಷನ್ 300’ ಎಂಬ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಹಾಗೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಚಿತ್ರದಲ್ಲಿ ಹಾಸ್ಯ ನಟಿಯಾಗಿ ಅಭಿನಯಿಸಿದ್ದರು. ತೆಲುಗಿನ ಚಿತ್ರವೊಂದರಲ್ಲಿಯೂ ನಟಿಸಿದ್ದಾರೆ.

  • ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡೇಟು

    ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರು: ಕುಖ್ಯಾತ ರೌಡಿಶೀಟರ್‍ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ತಬ್ರೇಜ್ ಗುಂಡೇಟು ತಿಂದ ರೌಡಿಶೀಟರ್. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಉಪಟಳ ಮಿತಿ ಮೀರಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನ್ಯಾಯಾಲಯದ ವಾರೆಂಟ್ ಇದ್ದರು ಕೂಡ ಪೊಲೀಸರ ಕೈಗೆ ಸಿಕ್ಕದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ತಬ್ರೇಜ್ ಬಂಧನಕ್ಕೆ ಪೊಲೀಸರು ಬಲೆ ಪ್ರಯತ್ನಿಸಿದ್ದರು. ಆದರೆ ಭಾನುರಾತ್ರಿ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ. ಬಳಿಕ ಇಂದು ಬೆಳಗ್ಗೆ ತಬ್ರೇಜ್ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್‍ಐ ಪ್ರದೀಪ್ ಅವರು ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಇನ್ಸ್ ಪೆಕ್ಟರ್ ಎಡ್ವಿನ್ ಪ್ರದೀಪ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ಪೊಲೀಸ್ ಗುಂಡು ಹಾರಿಸಿದ ಪರಿಣಾಮ ತಬ್ರೇಜ್ ಬಲಗೈ ಮತ್ತು ಬಲಗಾಲಿಗೆ ಗುಂಡು ತಾಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಕಾಲಿಗೆ ಗುಂಡು ಹಾರಿಸುವ ಮುನ್ನ ಶರಣಾಗುವಂತೆ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಪೊಲೀಸರ ಎಚ್ಚರಿಕೆಗೆ ಬಗ್ಗದ ಕಾರಣ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾನೇ ಸೀನಿಯರ್ ರೌಡಿ, ನನಗೆ ಟಿಕೆಟ್ ಕೊಡಿ: ಕಾಂಗ್ರೆಸ್ ಮುಖಂಡ – ವಿಡಿಯೋ ವೈರಲ್

    ನಾನೇ ಸೀನಿಯರ್ ರೌಡಿ, ನನಗೆ ಟಿಕೆಟ್ ಕೊಡಿ: ಕಾಂಗ್ರೆಸ್ ಮುಖಂಡ – ವಿಡಿಯೋ ವೈರಲ್

    ಹೈದರಾಬಾದ್: ನಾನು ಸೀನಿಯರ್ ರೌಡಿಯಾಗಿದ್ದು, ನನಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ತೆಲಂಗಾಣ ಕಾಂಗ್ರೆಸ್ ಮುಖಂಡ ಪಕ್ಷದ ನಾಯಕರಿಗೆ ಬೇಡಿಕೆ ಇಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತೆಲಂಗಾಣ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್ ಗಾಗಿ ಪೈಟೋಟಿ ಆರಂಭಿಸಿದ್ದಾರೆ. ಇದರ ಪರಿಣಾಮ ಮುಖಂಡರು ಪಕ್ಷದ ನಾಯಕರ ಗಮನ ತಮ್ಮತ್ತ ಸೆಳೆಯಲು, ಟಿಕೆಟ್ ಪಡೆಯುಲು ಒತ್ತಡ ಹಾಕುವ ಕಾರ್ಯತಂತ್ರ ನಡೆಸಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲೂ ಮೈತ್ರಿ ರಾಜಕೀಯ ಮಾಡುತ್ತಿದ್ದು, ಪಕ್ಷದ ಮುಖಂಡರೊಬ್ಬರು ತಾವು ಕ್ಷೇತ್ರದಲ್ಲಿ ಸೀನಿಯರ್ ರೌಡಿ ಶೀಟರ್ ಆಗಿದ್ದು, ನನಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಮಾಧ್ಯಮಗಳ ಮುಂದೆಯೇ ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಸುಧೀರ್ ರೆಡ್ಡಿ ಎಂಬಾತ, ನಾನು ಪಕ್ಷಕ್ಕಾಗಿ ದುಡಿದ್ದೇನೆ. ಪಕ್ಷಕ್ಕಾಗಿಯೇ ರೌಡಿ ಶೀಟರ್ ಆಗಿದ್ದೇನೆ. ವಾರಂಗಲ್ ಕ್ಷೇತ್ರದಲ್ಲಿ ನಾನೇ ಸೀನಿಯರ್ ಕೂಡ ನಾನೇ ಎಂದು ಹೇಳಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.

    ನಾನು ಯಾವುದೇ ಕಾನೂನು ಬಹಿರ ಕೃತ್ಯಗಳಲ್ಲಿ ತೊಡಗಿಲ್ಲ. ಯಾರ ಭೂಮಿಯನ್ನು ಬಲವಂತವಾಗಿ ವಶಕ್ಕೆ ಪಡೆದಿಲ್ಲ. ಅಲ್ಲದೇ ಆರ್ಥಿಕ ಅವ್ಯವಹಾರದಲ್ಲಿ ತೊಡಗಿಲ್ಲ. ಪಕ್ಷದ ಕಾರ್ಯಗಳನ್ನು ಮಾಡುವುದರಿಂದಲೇ ನನ್ನ ಮೇಲಿನ ದ್ವೇಷದಿಂದ ರೌಡಿ ಶೀಟರ್ ಪಟ್ಟಿಗೆ ನನ್ನ ಹೆಸರನ್ನು ಸೇರ್ಪಡೆ ಮಾಡಲಾಗಿದೆ ಎಂದು ರೆಡ್ಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊಸವರ್ಷದಂದು ರೌಡಿಶೀಟರ್‍ಗಳಿಗೆ ಪೊಲೀಸರಿಂದ ಬುಲಾವ್- ಅಳುಕಿನಿಂದ್ಲೇ ಠಾಣೆಗೆ ಬಂದವ್ರಿಗೆ ಆಶ್ಚರ್ಯ

    ಹೊಸವರ್ಷದಂದು ರೌಡಿಶೀಟರ್‍ಗಳಿಗೆ ಪೊಲೀಸರಿಂದ ಬುಲಾವ್- ಅಳುಕಿನಿಂದ್ಲೇ ಠಾಣೆಗೆ ಬಂದವ್ರಿಗೆ ಆಶ್ಚರ್ಯ

    ಬೆಂಗಳೂರು: ಇಂದು ಬೆಳಗ್ಗೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗಳಿಗೆ ಠಾಣೆಗೆ ಬರಲು ಪೊಲೀಸರು ಸೂಚಿಸಿದ್ದರು. ಹೊಸ ವರ್ಷದ ದಿನದಂದೇ ಬುಲಾವ್ ಬಂದಿದ್ದಕ್ಕೆ ಅಳುಕಿನಿಂದಲೇ ಠಾಣೆಗೆ ಬಂದವರಿಗೆ ಆಶ್ಚರ್ಯ ಕಾದಿತ್ತು.

    ಠಾಣೆಗೆ ಬಂದವರಿಗೆ ಅತ್ತಿಬೆಲೆ ಠಾಣೆಯ ಪೊಲೀಸರು ಒಂದೊಂದು ಪುಸ್ತಕ ಹಾಗು ಗಿಡಗಳನ್ನು ಕೊಟ್ಟು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅತ್ತಿಬೆಲೆ ವೃತ್ತ ನಿರೀಕ್ಷಕರಾದ ಎಲ್.ವೈ.ರಾಜೇಶ್, ಪಿಎಸ್‍ಐ ನವೀನ್ ಗಜೇಂದ್ರ ಹಾಗು ಠಾಣಾ ಸಿಬ್ಬಂದಿ ಇಂದು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿದರು. ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ರೌಡಿಶೀಟರ್ ಪಟ್ಟ ಕಟ್ಟಿಕೊಂಡವರನ್ನು ಹೊಸ ವರ್ಷದ ಮೊದಲ ದಿನ ಠಾಣೆಗೆ ಕರೆಯಿಸಿ ಶುಭಾಶಯ ಕೋರಿ ಎಲ್ಲರಿಗೂ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿ ಒಬ್ಬಒಬ್ಬರಿಗೂ ‘ಕರುಣಾಳು ಬಾ ಬೆಳಕೇ’ ಎಂಬ ಪುಸ್ತಕ ಹಾಗು ಗಿಡಗಳನ್ನು ನೀಡಿದ್ರು.

    ಈ ಸಂದರ್ಭದಲ್ಲಿ ಸಿಪಿಐ ರಾಜೇಶ್ ಮಾತನಾಡಿ, ಈ ಹಿಂದೆ ಕಾನೂನು ಭಂಗ ಹಾಗು ಕೆಲವು ಅಪಾರಾಧ ಕೃತ್ಯಗಳಿಂದ ರೌಡಿಶೀಟರ್ ಗಳಾಗಿದ್ದು ಇವರ ಬಾಳಲ್ಲಿ ಪರಿವರ್ತನೆಯಾಗಲಿ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮರಾಗಿ ಬಾಳಲಿ ಎಂಬ ಉದ್ದೇಶದಿಂದ ಹೊಸ ವರ್ಷದ ಮೊದಲ ದಿನ ಈ ಕೆಲಸ ಮಾಡಲಾಗಿದೆ. ಅವರಿಗೆ ಕೊಟ್ಟಿರುವ ಪ್ರತಿಯೊಂದು ಗಿಡವನ್ನು ನೋಡಿದಾಗ ಅವರು ಪರಿವರ್ತನೆಯಾಗುವುದರ ಜೊತೆಗೆ ಕೊಟ್ಟಿರುವ ಪುಸ್ತಕ ಓದಿ ಅವರ ಬಾಳಲ್ಲಿ ಬಡಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಉತ್ತಮವಾಗಿ ಜೀವನ ನಡೆಸಲು ಇನ್ನೂ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿ ಅವರಿಗೆ ಹೊಸ ವರ್ಷದ ಶುಭಾಶಯ ತಿಳಿಸಲಾಯಿತು ಎಂದರು.

  • ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

    ನೆಲಮಂಗಲದಲ್ಲಿ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್

    ನೆಲಮಂಗಲ: ಕಾನೂನು ಸುವ್ಯವಸ್ತೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ 20ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವಣ್ಣ ನೇತೃತ್ವದಲ್ಲಿ ರೌಡಿಗಳ ಪೆರೇಡ್ ನಡೆಸಲಾಯಿತು.

    ಇನ್ನೂ ಈ ಒಂದು ಪೆರೇಡ್ ನಲ್ಲಿ ಬಂಡೆ ಮಂಜ, ಬಂಡೆ ಮಂಜನ ಸಹೋದರ ಉಮೇಶ್, ಗಣೇಶನ ಗುಡಿ ರಂಗ, ಜಯನಗರದ ಕಾಸೀಮ್, ವಂದಲ್ ರವಿ, ನಾಗರಾಜು, ಕಾಲೋನಿ ಪ್ರವೀಣ್, ಸೇರಿದಂತೆ ಅನೇಕ ರೌಡಿಗಳು ಭಾಗಿಯಾಗಿದ್ದು, ರೌಡಿಗಳಿಗೆ ವೃತ್ತ ನಿರೀಕ್ಷಕ ಶಿವಣ್ಣ ಖಡಕ್ ವಾರ್ನಿಂಗ್ ನೀಡಿದರು.