Tag: roof

  • ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

    ಕೆಜಿಎಫ್‍ನಲ್ಲಿ ಕುಡುಕನ ಅವಾಂತರ- 5 ಮನೆಗಳ ಮೇಲ್ಛಾವಣಿ ಧ್ವಂಸ!

    ಕೋಲಾರ: ಕುಡಿದ ನಶೆಯಲ್ಲಿ ಕುಡುಕನೊಬ್ಬ ಮನೆಗಳ ಮೇಲ್ಛಾವಣಿ ಹಾಗೂ ಗೃಹಪಯೋಗಿ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ಇರುದಯಂ ಕಾಲೋನಿಯಲ್ಲಿ ಸೋಮವಾರ ನಡೆದಿದೆ.

    ಕುಡಿದ ಮತ್ತಿನಲ್ಲಿದ್ದ ಅದೇ ಕಾಲೋನಿಯ ನಿವಾಸಿ ಮಂಜುನಾಥ್ ಎಂಬಾತ 5 ಮನೆಗಳಲ್ಲಿ ಪಿಠೋಪಕರಣ, ಮೇಲ್ಛಾವಣಿಯನ್ನು ಕುಡುಕ ಧ್ವಂಸ ಮಾಡಿದ್ದಾನೆ. ಮಂಜುನಾಥ್ ಅಂದರೆ ಕಾಲೋನಿಯ ಜನರಿಗೆ ಒಂಥರಾ ಭಯ. ಕುಡಿದ ಮತ್ತಿನಲ್ಲಿ ಏನೇನು ಮಾಡ್ತಾನೋ ಎನ್ನುವ ಹೆದರಿಕೆ ಸ್ಥಳೀಯರಲ್ಲಿದೆ. ಹೀಗೆ ಕುಡಿದು ಕಾಲೋನಿ ತುಂಬಾ ಓಡಾಡೋ ಮಂಜುನಾಥ್ ಇಂದು ಸ್ಥಳೀಯರಿಗೆ ವಿಪರೀತ ತಲೆನೋವು ಕೊಟ್ಟಿದ್ದಾನೆ.

    ಕುಡಿದ ನಶೆಯಲ್ಲಿ ಕಾಲೋನಿಯಲ್ಲಿದ್ದ ಸುಮಾರು 5 ಮನೆಗಳ ಮೇಲೆ ಹತ್ತಿ ಮೇಲ್ಛಾವಣಿಗೆ ಕಲ್ಲು ಹಾಗೂ ಹಂಚು ಎಸೆದು ಪುಡಿ ಪುಡಿ ಮಾಡಿದ್ದಾನೆ. ಅಲ್ಲದೆ ಮನೆಗಳಲ್ಲಿದ್ದ ಪೀಠೋಪಕರಣವನ್ನು ಕೂಡ ಹಾಳು ಮಾಡಿದ್ದಾನೆ. ಈ ಕುಡುಕನ ಅವತಾರಕ್ಕೆ ಕಾಲೋನಿಯ ಮಹಿಳೆಯರು ಹಾಗೂ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ಕೆಲವರು ಈತನ ಅವಾಂತರವನ್ನು ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.

    ಈ ಘಟನೆ ಕುರಿತು ಅಂಡರ್ ಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕುಡುಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    https://youtu.be/VpJxEcj9F_w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯ ಮೇಲೆ ಹರಿದು ಛಾವಣಿ ಮೇಲೆ ನಿಂತ ಕಾರ್!- ಮದ್ವೆ ಸಡಗರದಲ್ಲಿದ್ದ ಮಹಿಳೆಯ ತಲೆ ಛಿದ್ರ

    ಮಹಿಳೆಯ ಮೇಲೆ ಹರಿದು ಛಾವಣಿ ಮೇಲೆ ನಿಂತ ಕಾರ್!- ಮದ್ವೆ ಸಡಗರದಲ್ಲಿದ್ದ ಮಹಿಳೆಯ ತಲೆ ಛಿದ್ರ

    ಚಾಮರಾಜನಗರ: ಮಗನ ಮದುವೆ ಸಡಗರದಲ್ಲಿದ್ದ ಮನೆಯೊಂದಕ್ಕೆ ಕಾರು ಡಿಕ್ಕಿ ಹೊಡೆದು ಜಗಲಿಯಲ್ಲಿ ಕುಳೀತಿದ್ದ ಮಹಿಳೆ ಸಾವನ್ನಪ್ಪಿ ಆಕೆಯ ಸಹೋದರಿಯರಿಬ್ಬರು ಗಾಯಗೊಂಡಿರುವ ಘಟನೆ ಚಾಮರಾಜನಗರ ಸಮೀಪ ಜಾಲಹಳ್ಳಿಹುಂಡಿಯಲ್ಲಿ ನಡೆದಿದೆ.

    ಲಕ್ಷ್ಮಮ್ಮ (55) ಮೃತ ದುರ್ದೈವಿ. ಆರೋಪಿಯನ್ನು ರಾಜಪ್ಪ ಎಂದು ಗುರುತಿಸಲಾಗಿದೆ. ಲಕ್ಷ್ಮಮ್ಮ ತನ್ನ ಮಗನ ಮದುವೆ ಸಂಭ್ರಮದಲ್ಲಿ ಗ್ರಾಮದೇವರ ಹಬ್ಬ ಮಾಡಿ ಊರಿನವರಿಗೆಲ್ಲ ಊಟ ಹಾಕಿ ಬಳಿಕೆ ಜಗಲಿ ಮೇಲೆ ತನ್ನ ಅಕ್ಕತಂಗಿಯರೊಡನೆ ಕುಳಿತು ಎಲೆ ಅಡಿಕೆ ಹಾಕಿಕೊಳ್ಳುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಕಾರ್ ಹರಿದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯಿಂದಾಗಿ ಲಕ್ಷ್ಮಮ್ಮನ ಸಹೋದರಿಯರಾದ ಸಾಕಮ್ಮ ಹಾಗು ದುಂಡಮ್ಮ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ತಡರಾತ್ರಿ ವಾಹನ ಚಾಲನೆ ಬಾರದ ರಾಜಪ್ಪ ಹಿಂಬದಿ ಗೇರ್‍ನಲ್ಲಿದ್ದ ಕಾರನ್ನು ಚಲಾಯಿಸಿದ್ದಾನೆ. ಈ ವೇಳೆ ಕಾರು ಹಿಂದಕ್ಕೆ ಹೋಗಿ ಲಕ್ಷ್ಮಮ್ಮನ ಮೇಲೆ ಹರಿದಿದೆ. ಕಾರ್ ಹರಿದ ಪರಿಣಾಮ ಮಹಿಳೆಯ ತಲೆ ಛಿದ್ರವಾಗಿ ಮನೆ ಮೇಲೆ ಹಾರಿಹೋಗಿದೆ. ಅಷ್ಟೆ ಅಲ್ಲದೆ ದುರ್ಘಟನೆ ಬಳಿಕ ವೇಗದಲ್ಲಿ ಚಲಿಸುತ್ತಿದ್ದ ಕಾರು ಮನೆಯ ಮೇಲ್ಛಾವಣಿ ಮೇಲೆ ಹೋಗಿ ನಿಂತಿದೆ. ಸದ್ಯ ಸ್ಥಳೀಯರು ಮೇಲ್ಛಾವಣಿಯಿಂದ ಕಾರನ್ನು ಕೆಳಕ್ಕಿಳಿಸಿದ್ದಾರೆ.

    ಆರೊಪಿಯು ಘಟನೆ ಬಳಿಕ ಪರಾರಿಯಾಗಿದ್ದು, ಈ ಕುರಿತು ಚಾಮರಾಜನಗರ ಪಟ್ಟಣ  ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಮೈಸೂರು: ಭಾರೀ ಗಾಳಿಯಿಂದಾಗಿ ಶಾಲೆಯ ಹೊಸ ಕಟ್ಟಡದ ಮೇಲ್ಛಾವಣಿ ಹಾರಿ ಬಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಾಪುರಿ ಗ್ರಾಮದಲ್ಲಿ ಸಂಭವಿಸಿದೆ.

    ಗ್ರಾಮದ ವಿಶ್ವ ಶಾಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರು ಜನರು ಸೇರಿದ್ದರು. ಈ ವೇಳೆ ಗಾಳಿಯ ಬೀಸಿದ ಪರಿಣಾಮ, ಶಾಲೆಯ ಹೊಸ ಕಟ್ಟಡದ ಎಲ್ಲ ಕೊಠಡಿಗಳ ಶೀಟ್‍ಗಳು (ಮೇಲ್ಛಾವಣಿ) ಹಾರಿ ಬಿದ್ದಿದ್ದು, ಕೆಳಗೆ ಸಿಲುಕಿದ ಕೆಲವರಿಗೆ ಗಾಯವಾಗಿದೆ.

    ಕಾರ್ಯಕ್ರಮದಲ್ಲಿ ಬಿಐಓ ರೇವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳುಗಳನ್ನು ಹುಣಸೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮನೆಯ ಮೇಲ್ಛಾವಣೆ ಕುಸಿದು ಮಹಿಳೆಯರಿಬ್ಬರ ದುರ್ಮರಣ!

    ಮನೆಯ ಮೇಲ್ಛಾವಣೆ ಕುಸಿದು ಮಹಿಳೆಯರಿಬ್ಬರ ದುರ್ಮರಣ!

    ದಾವಣಗೆರೆ: ಮೇಲ್ಛಾವಣೆ ಕುಸಿದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಇನ್ನೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಗರದ ನಿಟ್ಟುವಳ್ಳಿ ಪ್ರದೇಶದಲ್ಲಿ ನಡೆದಿದೆ.

    ವೃದ್ಧೆ ದ್ಯಾಮಕ್ಕ ಹಾಗೂ ಸುಧಾ (35) ಮೃತ ದುರ್ದೈವಿಗಳಾಗಿದ್ದಾರೆ. ಇವರು ನಗರದ ನಿಟ್ಟುವಳ್ಳಿಯ ನಿವಾಸಿಗಳಾಗಿದ್ದು, ಮನೆಯ ಮೇಲ್ಛಾವಣೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ಮಹಿಳೆಯರು ಮನೆ ಮುಂಭಾಗ ಮಾತನಾಡುತ್ತಾ ಕುಳಿತಿದ್ದಾಗ ಏಕಾಏಕಿ ಮನೆಯ ಮೇಲ್ಛಾವಣೆ ಕುಸಿದು ಬಿದ್ದಿದೆ. ಈ ವೇಳೆ ವೃದ್ಧೆ ದ್ಯಾಮಕ್ಕ ಸ್ಥಳದಲ್ಲೇ ಮೃತಪಟ್ಟು, ಸುಧಾ ಎಂಬವರು ಗಂಭೀರ ಗಾಯಗೊಂಡಿದ್ದರು.

    ಮನೆಯವರು ಕೂಡಲೇ ಸುಧಾರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೇ ತಡರಾತ್ರಿ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ.

    ಘಟನೆ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಪಾರ್ಕ್ ಮಾಡಲಾಗಿದ್ದ ಕಾರ್ ಗೆ ಈ ಗತಿಯಾಯ್ತು

    ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಪಾರ್ಕ್ ಮಾಡಲಾಗಿದ್ದ ಕಾರ್ ಗೆ ಈ ಗತಿಯಾಯ್ತು

    ಬೀಜಿಂಗ್: ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕ್ ಮಾಡಿ ಹೋಗಿದ್ದ ಚಾಲಕನಿಗೆ ಇಲ್ಲಿನ ಸಿಬ್ಬಂದಿ ಪಾಠ ಕಲಿಸಿದ್ದಾರೆ.

    ಫೆಬ್ರವರಿ 17ರಂದು ಚೀನಾದ ಹೂಬೇ ಪ್ರಾಂತ್ಯದ ಕ್ಸಿಶೂ ಕೌಂಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕಿಂಗ್ ಮಾಡಿದ್ದನ್ನು ನೋಡಿ ಬೇಸತ್ತ ಸಿಬ್ಬಂದಿ ಕ್ರೇನ್ ಮೂಲಕ ಕಾರ್ ಮೇಲೆತ್ತಿ ಹತ್ತಿರದ ಕಟ್ಟಡವೊಂದರ ಛಾವಣಿಯ ಮೇಲೆ ಇರಿಸಿದ್ದಾರೆ.

    ಇದರ ವಿಡಿಯೋವನ್ನ ಇಲ್ಲಿನ ಮಾಧ್ಯಮವೊಂದು ಹಂಚಿಕೊಂಡಿದ್ದು, ಕಾರನ್ನ ಕ್ರೇನ್ ಮೂಲಕ ಮೇಲೆತ್ತಿ ಛಾವಣಿ ಮೇಲೆ ಇಡುತ್ತಿರೋದನ್ನ ಕಾಣಬಹುದು. ಅನಂತರ ಕಾರ್ ಚಾಲಕ ತನ್ನ ಕಾರನ್ನ ಹೇಗೆ ಕೆಳಗಿಳಿಸಿಕೊಂಡ ಎನ್ನುವ ಬಗ್ಗೆ ವರದಿಯಾಗಿಲ್ಲ.

    ಆದ್ರೆ ಚೀನಾದಲ್ಲಿ ಈ ರೀತಿ ಕಾರ್ ಮಾಲೀಕರಿಗೆ ಪಾಠ ಕಲಿಸಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಇಲ್ಲಿನ ಜನನಿವಾಸಿ ಕಟ್ಟಡದಲ್ಲಿ ಮಹಿಳೆಯೊಬ್ಬಳ ಕಾರ್ ತೆರವುಗೊಳಿಸಲು ಭದ್ರತಾ ಸಿಬ್ಬಂದಿ ಕ್ರೇನ್ ಬಳಸಿ, ಹತ್ತಿರದ ಕಟ್ಟಡವೊಂದರ ಮೇಲೆ ಕಾರು ಇರಿಸಿದ್ದರು.

    ಚೀನಾದ ಬಿಂಕ್ಸಿ ಸಿಟಿಯಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ಕಾರ್ ಪಾರ್ಕಿಂಗ್ ಶುಲ್ಕದ ವಿಚಾರವಾಗಿ ಜಗಳ ಮಾಡಿಕೊಂಡ ನಂತರ ಭದ್ರತಾ ಠಾಣೆಯ ಬಳಿಯೇ ಕಾರ್ ಬಿಟ್ಟುಹೋಗಿದ್ದಳು. 38 ಗಂಟೆಗಳ ಬಳಿಕ ಆಕೆ ಕಾರ್ ವಾಪಸ್ ಪಡೆಯಲು ಬಂದಾಗ ಭದ್ರತಾ ಸಿಬ್ಬಂದಿಯ ಠಾಣೆಯ ಮೇಲೆ ಕಾರ್ ಪತ್ತೆಯಾಗಿತ್ತು. ಅನಂತರ ಸಮಸ್ಯೆ ಬಗ್ಗೆ ಚರ್ಚಿಸಿ ಬಗೆಹರಿಸಿಕೊಂಡಿದ್ದು, ಕಾರ್ ಕೆಳಗಿಳಿಸಲಾಗಿತ್ತು.

  • ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ಭಾರಿ ಗಾಳಿಗೆ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣೆಗಳು ಹಾರಿಹೋಗಿವೆ.

    ಇಂದು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ಮನೆಯ ತಗಡಿನ ಮೇಲ್ಛಾವಣಿಗಳು ಹಾರಿಹೋಗಿವೆ. ವಾಸವಿದ್ದ ಮನೆಗಳ ಮೇಲ್ಛಾವಣೆಯ ತಗಡುಗಳು ಹಾರಿದ್ದರಿಂದ ಗ್ರಾಮದ ಜನರು ಬಯಲಲ್ಲಿ ಕೂರುವಂತಾಗಿದೆ. ಗ್ರಾಮದ ಕೆಲ ಮನೆಗಳ ಹೆಂಚುಗಳು ಸಹ ಭಾರೀ ಗಾಳಿಗೆ ಹಾರಿವೆ.

    ಇನ್ನು ಧಾರವಾಡ ನಗರದ ಮಂಗಳವಾರಪೇಟೆಯಲ್ಲಿ ಯಂಡಿಗೇರಿ ಎಂಬವರ ಮನೆಯ ಆವರಣದಲ್ಲಿಯ ತೆಂಗಿನ ಮರಕ್ಕೆ ಸಿಡಲು ತಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.

     

  • ಮನೆಯ ಮೆಲ್ಛಾವಣಿ ಕುಸಿದು 2 ವರ್ಷದ ಕಂದಮ್ಮ ಸಾವು

    ಮನೆಯ ಮೆಲ್ಛಾವಣಿ ಕುಸಿದು 2 ವರ್ಷದ ಕಂದಮ್ಮ ಸಾವು

    ಯಾದಗಿರಿ: ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಮೇಲ್ಛಾವಣಿ ಕುಸಿದ ಪರಿಣಾಮ ಮಗು ಸಾವನ್ನಪ್ಪಿರೋ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಡಾ.ವೆಂಕಟೇಶ ಶಿರವಾಳಕರ್ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿರುವ ಉತ್ತರಾಖಂಡ್ ಮೂಲದ ವಿಜಯಪ್ರಕಾಶ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 30 ವರ್ಷ ಹಳೆಯದಾದ ಮನೆಯ ಮೇಲ್ಛಾವಣಿ ಸ್ಪಲ್ಪ ಭಾಗ ಮಗುವಿನ ತಲೆ ಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಬಾಲಕ ಪ್ರಿಯಾನಸೂ ಮೃತಪಟ್ಟಿದ್ದಾನೆ.

    ಘಟನೆ ನಡೆದ ವೇಳೆ ತಂದೆ ವಿಜಯಪ್ರಕಾಶ್ ಹೊರಗಡೆ ಕೆಲಸಕ್ಕೆ ತೆರಳಿದ್ದರು. ತಾಯಿ ಇಂದುಮತಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮೇಲ್ಛಾವಣಿ ಮಗುವಿನ ಮೇಲೆ ಕುಸಿದ ಬಳಿಕ ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದ್ರೆ ಚಿಕಿತ್ಸೆ ಫಲಿಸದೇ ತಾಲೂಕು ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ.

    ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 30ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ದೇವಪ್ಪ, ಶಂಕ್ರಪ್ಪ ಹೊರಪೇಟೆ ಸೇರಿದಂತೆ ಇತರರ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ತಗಡಿನ ಮೇಲ್ಛಾವಣಿಯುಳ್ಳ ಮನೆಯವರು ಪಕ್ಕದ ಮನೆಗಳಲ್ಲಿ ಮಲಗಿದ್ದರು.

    ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ಘಟನೆ ನಡೆದು ಕೆಲವು ಗಂಟೆಗಳು ಕಳೆದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಬಳ್ಳಾರಿಯಲ್ಲಿ ತಂಪೆರದ ವರುಣ ದೇವ: ಬಿರುಬಿಸಿಲ ನಾಡು ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮಳೆಯಾಗಿದೆ. ಮಳೆಯ ಆಗಮನದಿಂದ ಬಿಸಿಲಿನಿಂದ ಕಂಗಾಲಾಗಿದ್ದ ಜನರು ಸಂತೋಷಗೊಂಡಿದ್ದಾರೆ.