Tag: rocket attack

  • 5ನೇ ದಿನಕ್ಕೆ ಇಸ್ರೇಲ್, ಪ್ಯಾಲೇಸ್ಟೈನ್‌ಗಳ ಸಮರ – ಹಮಾಸ್, ಹಿಜ್ಬುಲ್ಲಾದಿಂದ ಏಕಕಾಲಕ್ಕೆ ರಾಕೆಟ್ ದಾಳಿ

    5ನೇ ದಿನಕ್ಕೆ ಇಸ್ರೇಲ್, ಪ್ಯಾಲೇಸ್ಟೈನ್‌ಗಳ ಸಮರ – ಹಮಾಸ್, ಹಿಜ್ಬುಲ್ಲಾದಿಂದ ಏಕಕಾಲಕ್ಕೆ ರಾಕೆಟ್ ದಾಳಿ

    – ಇಸ್ರೇಲ್‍ನಿಂದಲೂ ಪ್ರತಿದಾಳಿ

    ಜೆರುಸಲೆಂ: ಇಸ್ರೇಲ್- ಪ್ಯಾಲೇಸ್ಟೈನ್ (Isreal- Palestine ನಡುವೆ ನಡೆಯುತ್ತಿರುವ ಕಾಳಗ ಸದ್ಯ ತಣ್ಣಗಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇಷ್ಟು ದಿನ ಇಸ್ರೇಲ್ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡುತ್ತಿದ್ದ ಹಮಾಸ್ ಮತ್ತು ಲೆಬನಾನ್‍ನ ಹಿಜ್ಬುಲ್ಲಾ ಈಗ ಏಕ ಕಾಲದಲ್ಲಿ ರಾಕೆಟ್ ಹಾರಿಸಲು ಶುರು ಮಾಡಿವೆ. ಇದಕ್ಕೆ ಪ್ರತಿದಾಳಿ ಆರಂಭಿಸಿರುವ ಇಸ್ರೇಲ್ ಗಾಜಾ (Gaza) ಪಟ್ಟಿಯಲ್ಲಿ ಬಿಳಿರಂಜಕದ ಬಳಕೆ ಮಾಡಿದೆ ಎನ್ನಲಾಗಿದೆ.

    ಪ್ಯಾಲೇಸ್ಟೈನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿ ಐದು ದಿನಗಳಾಗಿದೆ. ಆದರೂ ಎರಡು ದೇಶಗಳ ನಡುವೆ ನಡೆಯುತ್ತಿರುವ ಸಮರ ಅಂತ್ಯ ಕಾಣುತ್ತಿಲ್ಲ. ಈ ನಡುವೆ ಹಮಾಸ್ ದಾಳಿಯಿಂದ ದೇಶದಲ್ಲಿ ಸತ್ತವರ ಸಂಖ್ಯೆ 1,000ಕ್ಕಿಂತ ಹೆಚ್ಚಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಇತ್ತ ಪ್ಯಾಲೇಸ್ಟೈನ್ ನಲ್ಲೂ ಸರಿ ಸುಮಾರು ಐದು ಸಾವಿರ ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇದನ್ನೂ ಓದಿ: ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು

    ರಾಕೆಟ್ ಹಾರಿಸಿ ಯುದ್ಧ ಸಾರಿದ ಹಮಾಸ್‍ನ ಯುದ್ಧದಾಹಿ ಮನಸ್ಥಿತಿ ಇನ್ನೂ ಕಡಿಮೆಯಾಗಿಲ್ಲ. ಇಸ್ರೇಲ್ ಮೇಲೆ ನಿರಂತರ ದಾಳಿ ಮಾಡುತ್ತಲೇ ಇದೆ. ಇಷ್ಟು ದಿನ ಇಸ್ರೇಲ್ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡುತ್ತಿದ್ದ ಹಮಾಸ್ ಮತ್ತು ಲೆಬನಾನ್‍ನ ಹಿಜ್ಬುಲ್ಲಾ ಈಗ ಏಕ ಕಾಲದಲ್ಲಿ ರಾಕೆಟ್ ಹಾರಿಸಲು ಶುರು ಮಾಡಿವೆ. ಹಮಾಸ್ ಅಶ್ಕೆಲೋನ್, ಬೀರ್ ಗನಿಮ್ ಮತ್ತು ಜಿಕಿಮ್‍ನಲ್ಲಿ ಹೊಸ ದಾಳಿ ಮಾಡಿದೆ. ಹಿಜ್ಬುಲ್ಲಾ ತನ್ನ ಇಸ್ರೇಲ್ ಗಡಿಯಲ್ಲಿ 15 ರಾಕೆಟ್ ದಾಳಿ ಮಾಡಿದೆ. ಇದನ್ನೂ ಓದಿ: ಉಗ್ರರಿದ್ದ ಕಾರನ್ನು ಬೆನ್ನಟ್ಟಿ ಬೈಕ್‌ ಓಡಿಸುತ್ತಲೇ ಗುಂಡು ಹಾರಿಸಿದ ಇಸ್ರೇಲ್‌ ಪೊಲೀಸ್‌ – ರೋಚಕ ದೃಶ್ಯದ ವೀಡಿಯೋ ವೈರಲ್‌

    ಇದಕ್ಕೆ ಪ್ರತಿ ದಾಳಿ ನಡೆಸಿರುವ ಇಸ್ರೇಲ್ ಸೇನೆ ದಕ್ಷೀಣ ಲೆಬನಾನ್‍ನಲ್ಲಿರುವ ಹಿಜ್ಬುಲ್ಲಾ ವೀಕ್ಷಣಾ ಸ್ಥಳಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಗಾಜಾ ಪಟ್ಟಿಯಲ್ಲಿ ಏರ್ ಸ್ಟೈಕ್ ಮುಂದುವರಿದಿದ್ದು, ಜೊತೆಗೆ ನಿಷೇಧಿತ ಬಿಳಿ ರಂಜಕ ಬಾಂಬ್‍ಗಳನ್ನು ಬಳಸುತ್ತಿದೆ ಎಂದು ವರದಿಯಾಗಿದೆ. ಅಷ್ಟಕ್ಕೂ ಏನಿದು ಬಿಳಿ ರಂಜಕದ ಬಾಂಬ್ ಅಂತಾ ನೋಡುವುದಾದ್ರೆ.

    ಬಿಳಿ ರಂಜಕದ ಬಾಂಬ್ ದಾಳಿ ಯಾಕೆ?: ಇದು ಹೆಚ್ಚು ಸುಡುವ ರಾಸಾಯನಿಕವಾಗಿದ್ದು, ಗಾಳಿಯ ಸಂಪರ್ಕಕ್ಕೆ ಬಂದಾಗ ವೇಗವಾಗಿ ಸುಡುತ್ತದೆ. ಇದರ ರಾಸಾಯನಿಕ ಕ್ರಿಯೆಯು ತೀವ್ರವಾದ ಶಾಖವನ್ನು ಹೊರಸೂಸುತ್ತದೆ. ಬಿಳಿ ರಂಜಕವು ನೆಲದ ಮೇಲೆ ವೇಗವಾಗಿ ಹರಡುತ್ತದೆ, ಬೆಂಕಿಯನ್ನು ಉಂಟು ಮಾಡುತ್ತದೆ. ಚರ್ಮ ಮತ್ತು ಬಟ್ಟೆ ಸೇರಿದಂತೆ ಹಲವು ಮೇಲ್ಮೈಗಳಿಗೆ ವೇಗವಾಗಿ ಅಂಟಿಕೊಳ್ಳುತ್ತದೆ, ಉರಿ ಸೃಷ್ಟಿಸುತ್ತದೆ. ಅನೇಕ ರಾಷ್ಟ್ರಗಳು ತಮ್ಮ ಯುದ್ಧಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಿಕೊಂಡಿವೆ.

    ಫೆನಿಯನ್ ಫೈರ್ ಎಂದು ಕರೆಯುವ ಇದನ್ನು ಮೊದಲ ಮತ್ತು 2ನೆಯ ಮಹಾಯುದ್ಧಗಳಲ್ಲಿ ಬ್ರಿಟಿಷ್ ಸೇನೆಯು ಬಳಸಿತು. 2006ರಲ್ಲಿ ಇಸ್ರೇಲ್ ಲೆಬನಾನ್ ಯುದ್ಧದ ಸಮಯದಲ್ಲಿ ಹೆಜ್ಬೊಲ್ಲಾ ವಿರುದ್ಧದ ಹೋರಾಟದಲ್ಲಿ ಬಳಸಿತು. ಇದೇ ತಂತ್ರವನ್ನೇ ಈಗ ಹಮಾಸ್ ವಿರುದ್ಧವೂ ಇಸ್ರೇಲ್ ಬಳಕೆ ಮಾಡುತ್ತಿದೆ. ಪ್ಯಾಲೇಸ್ಟೈನ್ ವಶಕ್ಕೆ ಹೊರಟಿರುವ ಇಸ್ರೇಲ್ ಎಲ್ಲ ಪ್ರಯತ್ನಗಳನ್ನು ಮಾಡುತ್ತಿರವುದಕ್ಕೆ ಇದೇ ಉದಾಹರಣೆ ಎನ್ನಲಾಗುತ್ತಿದೆ.

    ಶನಿವಾರ ಹೋರಾಟ ಆರಂಭವಾದಾಗಿನಿಂದ ಗಾಜಾದಲ್ಲಿ ಕನಿಷ್ಠ 2,00,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಇಸ್ರೇಲ್ ಪ್ರಧಾನಿ ಜೊತೆಗೆ ಮಾತನಾಡಿರುವ ಮೋದಿ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ. ಈ ನಡುವೆ ಆರ್ಥಿಕ ಸಹಾಯ ಮಾಡಿದೆ. ಈ ನಡುವೆ ಕ್ಯಾಬಿನೆಟ್ ಸಭೆ ನಡೆಸಿರುವ ಇಸ್ರೇಲ್ ಪ್ರಧಾನಿ ಯುದ್ಧ ತೀವ್ರಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಇಸ್ರೇಲ್ ಒಳಗೆ ನುಗ್ಗಿದ ಉಗ್ರರು – ಸಾರ್ವಜನಿಕರ ಮೇಲೆ ಗುಂಡಿನ ಮಳೆ

    ಟೆಲ್ ಅವಿವ್: ಇಸ್ರೇಲ್ (Israel) ಮೇಲೆ ದಾಳಿ ನಡೆಸಿರುವ ಹಮಾಸ್ ಉಗ್ರರು (Hamas Militants) ದೇಶದೊಳಗೆ ನುಗ್ಗಿ ಜನರತ್ತ ಗುಂಡು ಹಾರಿಸುತ್ತಿದ್ದಾರೆ. ಇದನ್ನು ಕಟ್ಟಡದ ಮೇಲಿಂದ ವ್ಯಕ್ತಿಯೊಬ್ಬರೂ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರ ಆರ್ಸೆನ್ ಒಸ್ಟ್ರೋವ್ಸ್ಕಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಉಗ್ರಗಾಮಿ ಸಂಘಟನೆ ಹಮಾಸ್ ಉಡಾವಣೆ ಮಾಡಿದ ಸಾವಿರಾರು ರಾಕೆಟ್‍ಗಳು ಇಸ್ರೇಲ್‍ನ ಪಟ್ಟಣಗಳು ಹೊತ್ತಿ ಉರಿಯುವಂತೆ ಮಾಡಿವೆ. ಉಗ್ರರ ದಾಳಿಯ ಬೆನ್ನಲ್ಲೇ ಯುದ್ಧವನ್ನು ಇಸ್ರೇಲ್ ಘೋಷಿಸಿದೆ. ಇದರ ನಡುವೆಯೇ ಉಗ್ರಗಾಮಿಗಳು ದೇಶದ ಕೆಲವು ಪ್ರಮುಖ ನಗರಗಳಿಗೆ ನುಗ್ಗಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರು ಎಚ್ಚರದಲ್ಲಿರಿ – ರಾಯಭಾರ ಕಚೇರಿ ಸೂಚನೆ

    ಈ ವೇಳೆ ಸಾರ್ವಜನಿಕರ ಮೇಲೆ ಮನಬಂದಂತೆ ಗುಂಡು ಹಾರಿಸುತ್ತಿದ್ದಾರೆ. ಇದನ್ನು ವ್ಯಕ್ತಿಯೋರ್ವ ವೀಡಿಯೋ ಮಾಡಿದ್ದಾನೆ. ಅಲ್ಲದೇ ಅವನೆಡೆಗೆ ಉಗ್ರರು ನೋಡಿದಾಗ ಆತ ಅಡಗಿಕೊಳ್ಳಲು ಓಡಿರುವುದು ಸಹ ವೀಡಿಯೋದಲ್ಲಿ ಕಾಣುತ್ತದೆ.

    ಗಾಜಾದಲ್ಲಿ ಉಗ್ರರು ಇಸ್ರೇಲ್ ಸೈನಿಕರ ಮೃತದೇಹಗಳನ್ನು ರಸ್ತೆಯಲ್ಲಿ ಎಳೆದಾಡಿ ಸಂಭ್ರಮಿಸುತ್ತಿರುವ ವೀಡಿಯೋ ಸಹ ವೈರಲ್ ಆಗುತ್ತಿದೆ. ಇದಕ್ಕೂ ಮೊದಲು ಉಗ್ರರು ಕೇವಲ 20 ನಿಮಿಷಗಳಲ್ಲಿ 5000 ರಾಕೆಟ್‍ಗಳಿಂದ (Rocket Attack) ದಾಳಿ ನಡೆಸಿದ್ದರು. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‌ನಲ್ಲಿರುವ ಭಾರತೀಯರು ಎಚ್ಚರದಲ್ಲಿರಿ – ರಾಯಭಾರ ಕಚೇರಿ ಸೂಚನೆ

    ಇಸ್ರೇಲ್‌ನಲ್ಲಿರುವ ಭಾರತೀಯರು ಎಚ್ಚರದಲ್ಲಿರಿ – ರಾಯಭಾರ ಕಚೇರಿ ಸೂಚನೆ

    ನವದೆಹಲಿ: ಇಸ್ರೇಲ್‌ನಲ್ಲಿರುವ (Israel) ಭಾರತೀಯರು ಎಚ್ಚರಿಕೆಯಿಂದಿರಿ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಗಮನ ಹರಿಸಲು ಭಾರತೀಯ ರಾಯಭಾರ ಕಚೇರಿ (Indian Embassy) ಸೂಚನೆ ನೀಡಿದೆ. ಇಸ್ರೇಲ್‌ ಮತ್ತು ಹಮಾಸ್ ಬಂಡುಕೋರರ‌ ನಡುವೆ ಯುದ್ಧ ಘೋಷಣೆಯಾದ ಮೇಲೆ ಈ ಸಲಹೆ ನೀಡಲಾಗಿದೆ.

    ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು (Indians) ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು, ಅನಗತ್ಯ ಓಡಾಟ ತಪ್ಪಿಸಬೇಕು ಮತ್ತು ಸುರಕ್ಷತಾ ಆಶ್ರಯಕ್ಕೆ ಹತ್ತಿರದಲ್ಲಿರಿ ಎಂದು ರಾಯಭಾರ ಕಚೇರಿ ಸಲಹೆ ನೀಡಿದೆ. ತುರ್ತು ಸಂದರ್ಭದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: Asian Games 2023: ಚಿನ್ನದ ಮಳೆ – ಚೊಚ್ಚಲ ಚಾಂಪಿಯನ್‌ ಕಿರೀಟ ಧರಿಸಿದ ಭಾರತ

    ಘಾಜಾಪಟ್ಟಿಯಿಂದ ಹಮಾಸ್ ಬಂಡುಕೋರರು 5,000 ರಾಕೆಟ್‌ಗಳನ್ನು (Rocket Attack) ಇಸ್ರೇಲ್ ನತ್ತ ಉಡಾಯಿಸಿದ ಬಳಿಕ ಇಸ್ರೇಲ್ ಯುದ್ಧ ಘೋಷಣೆ ಮಾಡಿದೆ. ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ. ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವೀಡಿಯೊ ಹೇಳಿಕೆ ಬಿಡುಗಡೆ ಮಾಡಿ ನಾವು ಯುದ್ಧದಲ್ಲಿದ್ದೇವೆ, ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಶತ್ರುಗಳು ಸೂಕ್ತ ಬೆಲೆ ತೆರಲಿದ್ದಾರೆ ಎಂದು ತಮ್ಮ ನಾಗರಿಕರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯನವ್ರು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಸುರೇಶ್ ಗೌಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    ಟೆಲ್‌ ಅವಿವ್: ಹಮಾಸ್ ಉಗ್ರರ (Hamas Militants) ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ (Gaza Strip) ಇಸ್ರೇಲ್ (Israel) ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ (Rocket Attack) ಮಾಡಲಾಗಿದ್ದು, ಇದೀಗ ಇಸ್ರೇಲ್ ಯುದ್ಧದ (War) ಘೋಷಣೆ ಮಾಡಿದೆ.

    ಶನಿವಾರ ಮುಂಜಾನೆ ಗಾಜಾಪಟ್ಟಿಯಿಂದ 5,000 ರಾಕೆಟ್‌ಗಳ ದಾಳಿ ನಡೆಸಲಾಗಿದ್ದು, ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿದ್ದಾರೆ. ಈ ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧ ಘೋಷಿಸಿದ್ದಾರೆ.

    ಹಮಾಸ್ ಬಂಡುಕೋರರ ದಾಳಿ ಬೆನ್ನಲ್ಲೇ ಗಾಜಾಪಟ್ಟಿಯಲ್ಲಿನ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಪ್ರತಿ ದಾಳಿ ನಡೆಸಿದೆ. ಜೆರುಸಲೆಂನಲ್ಲಿ ವಾಯು ದಾಳಿ ಸೈರನ್ ಮೊಳಗಿಸಲಾಗಿದೆ. ಇದನ್ನೂ ಓದಿ: ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ನಮ್ಮ ಬಲವನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು: ಹೆಚ್.ಆರ್ ರಂಗನಾಥ್

    ಪ್ರಧಾನಿ ಬೆಂಜಮಿನ್ ನೆತನ್ಯಾಹು ಶೀಘ್ರದಲ್ಲಿಯೇ ಭದ್ರತಾ ಮುಖ್ಯಸ್ಥರ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ತನ್ನ ಕೃತ್ಯಗಳಿಗಾಗಿ ಹಮಾಸ್ ಭಾರೀ ಬೆಲೆ ತೆರಬೇಕಾಗಲಿದೆ ಎಂದು ನೆತನ್ಯಾಹು ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲು ನಿಲ್ದಾಣದಲ್ಲಿ ರಾಕೆಟ್ ದಾಳಿ – 35 ಸಾವು

    ರೈಲು ನಿಲ್ದಾಣದಲ್ಲಿ ರಾಕೆಟ್ ದಾಳಿ – 35 ಸಾವು

    ಕೀವ್: ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ ಬಹುತೇಕ ಉಕ್ರೇನ್ ಅನ್ನು ಸರ್ವನಾಶ ಮಾಡಿರುವ ರಷ್ಯಾ ಶುಕ್ರವಾರ ಇನ್ನೊಂದು ಭೀಕರ ದಾಳಿ ನಡೆಸಿದೆ. ಉಕ್ರೇನ್‌ನ ಕ್ರಾಮಾಟೋರ್ಸ್ಕ್ ರೈಲು ನಿಲ್ದಾಣಕ್ಕೆ ರಾಕೆಟ್ ದಾಳಿ ನಡೆಸಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ.

    ನಾಗರಿಕರನ್ನು ಸ್ಥಳಾಂತರಿಲು ಬಳಸಲಾಗುತ್ತಿದ್ದ ರೈಲು ನಿಲ್ದಾಣದ ಮೇಲೆ ಶುಕ್ರವಾರ ರಾಕೆಟ್ ದಾಳಿ ನಡೆದಿದ್ದು, 35 ಜನರು ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಜನರು ಗಾಯಗೊಂಡಿದ್ದಾರೆ. ಆದರೆ ರಷ್ಯಾ ತಾನು ದಾಳಿ ನಡೆಸಿರುವುದನ್ನು ಅಲ್ಲೆಗಳೆದಿದೆ. ಇದನ್ನೂ ಓದಿ: ತುರ್ತು ಭೂಸ್ಪರ್ಶ ವೇಳೆ ಕಾರ್ಗೋ ವಿಮಾನ ಇಬ್ಬಾಗ

    ರಾಕೆಟ್ ದಾಳಿಯ ಬಳಿಕ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾವನ್ನು ಮಿತಿಯೇ ಇಲ್ಲದ ಕ್ರೂರಿ ಎಂದು ಟೀಕಿಸಿದ್ದಾರೆ. ಉಕ್ರೇನ್ ನಾಗರಿಕರನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲುತ್ತಿರುವ ರಷ್ಯಾವನ್ನು ಶಿಕ್ಷಿಸದಿದ್ದರೆ ಈ ಕ್ರೂರತನಕ್ಕೆ ಕೊನೆಯೇ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಸಸ್ಪೆಂಡ್‌

    ಇತ್ತೀಚೆಗೆ ಉಕ್ರೇನ್‌ನ ಬುಚಾ ನಗರದಲ್ಲಿ ರಷ್ಯಾ ಪಡೆಗಳು ಉಕ್ರೇನಿಯನ್ನರ ಭೀಕರ ಹತ್ಯೆಗೈದಿದ್ದು, ಇದನ್ನು ಭಾರತ ಸೇರಿದಂತೆ ಹಲವು ದೇಶಗಳು ಬಲವಾಗಿ ಖಂಡಿಸಿದೆ. ಬುಚಾ ನಗರದ ರಸ್ತೆಗಳಲ್ಲಿ ಉಕ್ರೇನಿಯನ್ನರ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಇತ್ತೀಚೆಗೆ ವರದಿ ಮಾಡಲಾಗಿತ್ತು.

  • ಬಾಗ್ದಾದ್ ವಿಮಾನ ನಿಲ್ದಾಣದ ಬಳಿ 3 ರಾಕೆಟ್‍ಗಳ ದಾಳಿ

    ಬಾಗ್ದಾದ್: ಬಾಗ್ದಾದ್‍ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಾಗೂ ಸೇನಾ ನೆಲೆಯ ಬಳಿ 3 ರಾಕೆಟ್‍ಗಳು ದಾಳಿ ನಡೆಸಿರುವುದಾಗಿ ಇರಾಕಿನ ಅಧಿಕಾರಿಗಳು ತಿಳಿಸಿದ್ದಾರೆ.

    ಬಾಗ್ದಾದ್ ವಿಮಾನ ನಿಲ್ದಾಣದ ಬಳಿ ಶುಕ್ರವಾರ ನಡೆದ ರಾಕೆಟ್ ದಾಳಿಯಿಂದಾಗಿ ಕೆಲವು ವಾಣಿಜ್ಯ ವಿಮಾನಗಳಿಗೆ ಹಾನಿಯಾಗಿದೆ. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.

    ಇರಾಕ್‍ನಲ್ಲಿ ಪತ್ರಿಕಾ ಮಾಹಿತಿಗೆ ಅಧಿಕಾರವಿಲ್ಲದಿರುವ ಕಾರಣ ಇಬ್ಬರು ಅನಾಮಧೇಯ ಭದ್ರತಾ ಅಧಿಕಾರಿಗಳು ಶುಕ್ರವಾರ ಮುಂಜಾನೆ ವಿಮಾನ ನಿಲ್ದಾಣ ಹಾಗೂ ಮಿಲಿಟರಿ ಪ್ರದೇಶಗಳ ನಡುವೆ ರಾಕೆಟ್‍ಗಳು ದಾಳಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪಬ್‌ಜಿ ವ್ಯಸನ – ತಾಯಿ, ಒಡಹುಟ್ಟಿದವರನ್ನೇ ಗುಂಡಿಕ್ಕಿ ಕೊಂದ ಬಾಲಕ!

    ವಿಮಾನ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಒಂದು ವಿಮಾನಕ್ಕೆ ರಾಕೆಟ್ ದಾಳಿಯಿಂದಾಗಿ ಹಾನಿಯಾಗಿದೆ. ಆದರೂ ಯಾವುದೇ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 74 ವರ್ಷಗಳ ನಂತ್ರ ಸೋದರನ ಭೇಟಿಗೆ ಬಂದ ಭಾರತೀಯನಿಗೆ ಪಾಕಿಸ್ತಾನ ವೀಸಾ!

    ಇರಾನಿ ಜನರಲ್ ಖಾಸಿಮ್ ಸೊಲೈಮಾನಿ ಹಾಗೂ ಇರಾಕಿ ಮಿಲಿಟರಿ ಕಮಾಂಡರ್ ಅಬು ಮಹದಿ ಅವರ ಹತ್ಯೆಯ ಬಳಿಕ ವರ್ಷದ ಪ್ರಾರಂಭದಿಂದಲೂ ಇರಾಕ್‍ನಲ್ಲಿ ಅಮೆರಿಕದ ಉಪಸ್ಥಿತಿಯನ್ನು ರಾಕೆಟ್ ಹಾಗೂ ಡ್ರೋನ್ ದಾಳಿಗಳು ಗುರಿಯಾಗಿಸಿಕೊಂಡಿವೆ. ಇರಾಕ್‍ನಲ್ಲಿರುವ ಇರಾನ್ ಪರ ಶಿಯಾ ಬಣಗಳು ಸೊಲೈಮಾನಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿವೆ. ದೇಶದಿಂದ ಅಮೆರಿಕ ಪಡೆಗಳ ಸಂಪೂರ್ಣ ನಿರ್ಗಮನದವರೆಗೂ ಈ ರೀತಿಯ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಇರಾನ್, ಅಮೆರಿಕ ಸಂಘರ್ಷ- ಬಾಗ್ದಾದ್ ಮೇಲೆ ಮತ್ತೆ 2 ಕ್ಷಿಪಣಿ ದಾಳಿ

    ಬಾಗ್ದಾದ್: ಇರಾಕ್‍ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್‍ಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಮತ್ತೆ ಇರಾಕ್ ಮೇಲೆ 2 ಕ್ಷಿಪಣಿ ದಾಳಿ ನಡೆದಿದೆ.

    ಇರಾಕ್ ರಾಜಧಾನಿ ಬಾಗ್ದಾದ್‍ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ 2 ಕ್ಷಿಪಣಿ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಇರಾನ್ ಕ್ಷಿಪಣಿ ದಾಳಿ ನಡೆದ ಕೇವಲ 24 ಗಂಟೆಗಳ ಒಳಗೆ ಮತ್ತೆರಡು ಕ್ಷಿಪಣಿಗಳ ದಾಳಿಯಿಂದ ಇರಾಕ್‍ನಲ್ಲಿ ಭಯಯ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ಇರಾನ್ ಮೇಲೆ‌ ಯುದ್ಧವಿಲ್ಲ, ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡಲ್ಲ: ಟ್ರಂಪ್

    ಬಾಗ್ದಾದ್‍ನ ಹಸಿರು ವಲಯವನ್ನು ಇರಾಕ್‍ನ ಸುರಕ್ಷಿತ ಸ್ಥಳವಾಗಿದ್ದು, ಇಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ. ಹೀಗಾಗಿ ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‍ಗೆ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ದಾಳಿ ನಡೆದಿದ್ದು, ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ತೈಲ ಬೆಲೆ ಏರಿಕೆ ಎಚ್ಚರಿಕೆ!

    ಇರಾನ್ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಬುಧವಾರ ಟ್ರಂಪ್ ಪ್ರತಿಕ್ರಿಯೆ ನೀಡಿದ್ದರು. ಕಳೆದ ರಾತ್ರಿ ಇರಾಕ್ ನಲ್ಲಿರುವ ನಮ್ಮ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಯಾವುದೇ ಸೈನಿಕ ಹಾಗೂ ಅಧಿಕಾರಿಗಳಿಗೆ ತೊಂದರೆಯಾಗಿಲ್ಲ. ಯಾವುದೇ ಸಾವು, ನೋವುಗಳನ್ನು ಸಂಭವಿಸಿಲ್ಲ. ನಮ್ಮ ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ. ಅಮೆರಿಕದ ಮಿಲಿಟರಿ ನೆಲೆಗಳಲ್ಲಿ ಕನಿಷ್ಠ ಹಾನಿಯಾಗಿದೆ ಎಂದು ತಿಳಿಸಿದ್ದರು.

    ಮೊದಲಿಗಿಂತಲೂ ಅಮೆರಿಕ ಸೈನ್ಯವೂ ಎಲ್ಲದಕ್ಕೂ ಸಿದ್ಧವಾಗಿದೆ. ಸುಧಾರಿತ ಕ್ಷಿಪಣಿಗಳನ್ನು ಹೊಂದಿದ್ದೇವೆ. ಆದರೆ ಅವುಗಳನ್ನು ನಾವು ಬಳಸಲು ಇಚ್ಛಿಸುವುದಿಲ್ಲ. ಯಾಕೆಂದರೆ ನಾವು ಶಾಂತಿಯನ್ನು ಬಯಸುತ್ತೇವೆ. ಇರಾನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಹಾಗೂ ವಿಶ್ವ ಶಾಂತಿಯನ್ನು ಕಾಪಾಡಲು ಇಚ್ಛಿಸುತ್ತೇವೆ ಎಂದು ಟ್ರಂಪ್ ಹೇಳಿದ್ದರು. ಇದನ್ನೂ ಓದಿ: ಇರಾನ್ ಕ್ಷಿಪಣಿ ದಾಳಿಗೆ 80 ಅಮೆರಿಕ ಸೈನಿಕರು ಹತ 

    ಇರಾನ್ ದೇಶದ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿ ಉಗ್ರರಿಗೆ ತರಬೇತಿ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅಮೆರಿಕದ ಭದ್ರತೆಗೆ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಆತನನ್ನು ಹತ್ಯೆಗೈಯುವುದು ಅನಿವಾರ್ಯವಾಗಿತ್ತು ಎಂದು ಖಾಸಿಂ ಸೊಲೈಮನಿ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು.

    ಇಂಧನ ಹಾಗೂ ಅನಿಲ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ನಾವು ನಂಬರ್ 1. ಸ್ಥಾನದಲ್ಲಿದ್ದೇವೆ. ಹೀಗಾಗಿ ತೈಲ ವಿಚಾರದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿಸಿಲ್ಲ ಎಂದಿದ್ದರು. ಇರಾನ್ ಉಗ್ರರ ತವರೂರು ಆಗಿದ್ದು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದೆ. ನಮ್ಮ ಅವಧಿಯಲ್ಲಿ ಆಲ್ ಖೈದಾ ಉಗ್ರ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ. ಆರ್ಥಿಕವಾಗಿ ನಾವು ಪ್ರಬಲವಾಗಿದ್ದೇವೆ. ಸೇನೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದರು.