Tag: road repaire

  • ರಸ್ತೆ ದುರಸ್ತಿಗಾಗಿ ಡಿಸಿಗೆ ಮನವಿ ಸಲ್ಲಿಸಲು ಬಂದ ಸ್ವಾಮೀಜಿಗೆ ಹೃದಯಾಘಾತ

    ರಸ್ತೆ ದುರಸ್ತಿಗಾಗಿ ಡಿಸಿಗೆ ಮನವಿ ಸಲ್ಲಿಸಲು ಬಂದ ಸ್ವಾಮೀಜಿಗೆ ಹೃದಯಾಘಾತ

    ಬಾಗಲಕೋಟೆ: ರಸ್ತೆ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲು ಬಂದಿದ್ದ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲಾಡಳಿತ ಭವನದಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಇನಾಮ್ ಹಂಚಿನಾಳ ಗ್ರಾಮದ ಜ್ಞಾನಸಿದ್ಧಾಶ್ರಮದ 74 ವರ್ಷದ ಸೋಮಲಿಂಗೇಶ್ವರ ಶ್ರೀ ಮೃತಪಟ್ಟ ಸ್ವಾಮೀಜಿಯಾಗಿದ್ದಾರೆ. ಇವರು ತಮ್ಮ ಜ್ಞಾನಾಶ್ರಮಕ್ಕೆ ಹೋಗುವ ಕಚ್ಚಾ ರಸ್ತೆಯನ್ನು ದುರಸ್ತಿಗೊಳಿಸಿ, ಸರಿ ಮಾಡುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನ ಕೊಡಲು ಬಂದಿದ್ದರು. ಜಿಲ್ಲಾಡಳಿತ ಭವನದ ಚುನಾವಣಾ ಕೊಠಡಿಯ ಬಳಿ ತೆರಳುವಾಗ, ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದರು.

    ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪ್ರಥಮ ಚಿಕಿತ್ಸೆ ನೀಡಲು ಮುಂದಾದ್ರು. ಆದ್ರೆ ಅಷ್ಟರಲ್ಲೇ ಸ್ವಾಮೀಜಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಸ್ವಾಮೀಜಿ ಮೃತದೇಹವನ್ನ ಸರ್ಕಾರಿ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸವಾರರು ಬಿದ್ದು ಗಾಯಗೊಳ್ಳುವುದನ್ನು ನೋಡಲಾಗದೇ ಗ್ರಾಮಸ್ಥರಿಬ್ಬರೇ ರಸ್ತೆ ಗುಂಡಿ ಮುಚ್ಚಿದ್ರು!

    ಸವಾರರು ಬಿದ್ದು ಗಾಯಗೊಳ್ಳುವುದನ್ನು ನೋಡಲಾಗದೇ ಗ್ರಾಮಸ್ಥರಿಬ್ಬರೇ ರಸ್ತೆ ಗುಂಡಿ ಮುಚ್ಚಿದ್ರು!

    ಮಂಡ್ಯ: ರಸ್ತೆಯ ಮಧ್ಯದಲ್ಲಿದ್ದ ಗುಂಡಿಯಿಂದಾಗಿ ವಾಹನ ಸವಾರರು ಬಿದ್ದು ಗಾಯಗೊಳ್ಳುವುದನ್ನು ನೋಡಲಾಗದೇ, ಗ್ರಾಮಸ್ಥರಿಬ್ಬರು ಗುಂಡಿ ಮುಚ್ಚಿ ಮಾನವೀಯತೆ ಮೆರೆದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ ಕೃಷ್ಣ ಎಂಬವರ ಮನೆ, ಮಂಡ್ಯದಿಂದ ಕೆಎಂದೊಡ್ಡಿಗೆ ಸಂಚರಿಸುವ ರಸ್ತೆಯ ಪಕ್ಕದಲ್ಲಿಯೇ ಇದೆ. ಕೃಷ್ಣ ಅವರ ಮನೆಯ ಮುಂದೆ ರಸ್ತೆಯಲ್ಲಿ ಎರಡು ದೊಡ್ಡ ಗುಂಡಿಗಳಾಗಿದ್ದವು. ಬೈಕ್ ಸವಾರರು ಆ ಗುಂಡಿಗಳ ಅರಿವಿಲ್ಲದೇ ಬಿದ್ದು ಗಾಯಗೊಳ್ಳುತ್ತಿದ್ದರು. ಬೈಕ್ ಸವಾರರು ಮನೆಯ ಮುಂದೆಯೇ ಬೀಳುತ್ತಿದ್ದರಿಂದ ಅವರನ್ನು ಉಪಚರಿಸುವ ಕೆಲಸವನ್ನೂ ಕೃಷ್ಣ ಅವರ ಮನೆಯವರೇ ಮಾಡುತ್ತಿದ್ದರು.

    ಸುಮಾರು ಏಳೆಂಟು ಜನ ಕೃಷ್ಣ ಅವರ ಮನೆಯ ಮುಂದಿದ್ದ ರಸ್ತೆಯಲ್ಲಿನ ಗುಂಡಿಗೆ ಬಿದ್ದು ಗಾಯಗೊಂಡಿದ್ರು. ಇದೆಲ್ಲವನ್ನು ನೋಡಿದ ಕೃಷ್ಣ ತಮ್ಮದೇ ಗ್ರಾಮದ ಸುರೇಶ್ ಎಂಬವರ ಸಹಾಯ ಪಡೆದು ಮಣ್ಣು ಹಾಕಿ ತಾತ್ಕಾಲಿಕವಾಗಿ ರಸ್ತೆ ಗುಂಡಿಯನ್ನು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ. ಇದನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ತಾತ್ಕಾಲಿಕವಾಗಿ ಹಳ್ಳಿಯ ಜನ ಮಾಡಿರುವ ಕೆಲಸಕ್ಕೆ ಒಂದು ಶಾಶ್ವತ ಪರಿಹಾರ ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ.