Tag: River Link

  • ಕಾವೇರಿ-ಗೋದಾವರಿ ಸೇರಿ ಐದು ನದಿಗಳ ಜೋಡಣೆಗೆ ಮುಂದಾದ ಕೇಂದ್ರ ಸರ್ಕಾರ!

    ಕಾವೇರಿ-ಗೋದಾವರಿ ಸೇರಿ ಐದು ನದಿಗಳ ಜೋಡಣೆಗೆ ಮುಂದಾದ ಕೇಂದ್ರ ಸರ್ಕಾರ!

    ನವದೆಹಲಿ: 2019ರ ವೇಳೆಗೆ ಐದು ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವರಾದ ನಿತಿತ್ ಗಡ್ಕರಿ ತಿಳಿಸಿದ್ದಾರೆ.

    ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುವ ಬದಲು, ಅದರ ಹರಿವಿನ ಪಥವನ್ನು ಮತ್ತೊಂದು ನದಿಗೆ ಜೋಡಣೆ ಮಾಡುವ ಮೂಲಕ ನೀರಾವರಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯುಂಟು ಮಾಡುವ ನಿರೀಕ್ಷೆಯೊಂದಿಗೆ ಕೇಂದ್ರ ಸರ್ಕಾರ ಐದು ನದಿಗಳ ಜೋಡಣೆಗೆ ಯೋಜನೆ ರೂಪಿಸಿದೆ. ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಸಾಲದ ನೆರವಿನಿಂದ ಸುಮಾರು 2 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಈ ನದಿ ಜೋಡಣೆಯ ಬೃಹತ್ ಕಾಮಗಾರಿ ಯೋಜನೆಯು ವೇಗ ಪಡೆಯಲಿದೆ ಎಂದು ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿಯವರು ತಿಳಿಸಿದ್ದಾರೆ.

    ರಾಜ್ಯಸಭೆಯಲ್ಲಿ ಸೋಮವಾರ ನದಿ ಜೋಡಣೆ ವಿಚಾರ ಕುರಿತು ಮಾಹಿತಿ ಹಂಚಿಕೊಳ್ಳುವ ಮೂಲಕ ಪ್ರತಿಪಕ್ಷ ಸದಸ್ಯರು ನದಿ ಜೋಡಣೆ ಕುರಿತು ಎದ್ದಿದ್ದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.

    ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಗೆ ಮೊದಲ ಹಂತದ ಐದು ನದಿಗಳ ಜೋಡಣೆಯಿಂದ ಲಾಭವಾಗಲಿದೆ. ಗೋದಾವರಿ-ಕಾವೇರಿ, ಪಾರ್-ತಾಪಿ-ನರ್ಮದಾ, ಕ್ವೆನ್-ಬೆಟ್ವಾ, ದಮನ್‍ಗಂಗಾ-ಪಿಂಜಾಲ್, ಪಾರ್‍ಬತಿ-ಕಾಳಿಸಿಂಧ್-ಚಂಬಲ್ ನದಿ ಜೋಡಣೆ ಯೋಜನೆಗಳ ಕುರಿತು ಯೋಜನಾ ಕಾರ್ಯಸಾಧ್ಯತೆ ವರದಿ ಸಿದ್ಧಗೊಂಡಿದ್ದು ಸದ್ಯದಲ್ಲೇ ರಾಜ್ಯಗಳ ನಡುವೆ ಒಪ್ಪಂದ ಏರ್ಪಡಲಿದೆ. ಯೋಜನೆ ಸಾಕಾರಕ್ಕೆ ಕೇಂದ್ರವು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುವುದರ ಜತೆಗೆ ಖಾಸಗಿ ಹೂಡಿಕೆದಾರರನ್ನೂ ಸೆಳೆಯಲಿವೆ ಎಂದು ಸಚಿವರು ಹೇಳಿದರು.

    ಅಲ್ಲದೇ ಗೋದಾವರಿ ನೀರನ್ನು ಕೃಷ್ಣ ನದಿಯ ಮೂಲಕ ಪೆನ್ನಾರ್ ನದಿಗೆ ಸಂಪರ್ಕಿಸಿ, ನಂತರ ಪೆನ್ನಾರ್ ನದಿಯಿಂದ ಕಾವೇರಿ ನದಿಗೆ ಜೋಡಣೆ ಮಾಡುವುದರಿಂದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಡೆಯುತ್ತಿರುವ ನೀರಿನ ಸಮಸ್ಯೆ ನೀಗುತ್ತದೆ. ಈ ಎರಡು ರಾಜ್ಯಗಳು ಕೇವಲ 40 ಟಿಎಂಸಿ ನೀರಿಗಾಗಿ ಜಗಳ ಮಾಡುತ್ತಿದ್ದರೆ, ಸುಮಾರು 3,000 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತದೆ. ಯೋಜನೆಯಿಂದ ಎರಡು ರಾಜ್ಯಗಳ ನಡುವಿನ ನೀರಿನ ಕಿತ್ತಾಟ ನಿವಾರಣೆಯಾಗಲಿದೆ ಎಂದು ಗಡ್ಕರಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕರ್ನಾಟಕಕ್ಕೆ ಮಹಾಮೋಸ – ನದಿ ಜೋಡಣೆ ನೆಪದಲ್ಲಿ ಆಂಧ್ರ-ತಮಿಳುನಾಡಿನಲ್ಲಿ ‘ಕಮಲ’ದ ಬೀಜ ಬಿತ್ತಲು ತಯಾರಿ..?!

    ಕರ್ನಾಟಕಕ್ಕೆ ಮಹಾಮೋಸ – ನದಿ ಜೋಡಣೆ ನೆಪದಲ್ಲಿ ಆಂಧ್ರ-ತಮಿಳುನಾಡಿನಲ್ಲಿ ‘ಕಮಲ’ದ ಬೀಜ ಬಿತ್ತಲು ತಯಾರಿ..?!

    ಬೆಂಗಳೂರು: ಪದೇ ಪದೇ ಕರ್ನಾಟಕ ರಾಜ್ಯಕ್ಕೆ ತಾರತಮ್ಯ ಮಾಡಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗ ಮತ್ತೊಂದು ಮಹಾಮೋಸ ಮಾಡಲು ರೆಡಿಯಾಗ್ತಿದೆ. ರಾಜ್ಯಕ್ಕೆ ಅನ್ಯಾಯ ಆಗ್ತಿದ್ದರೂ ಮಹದಾಯಿ ವಿಚಾರದಲ್ಲಿ ಮೂಗು ತೂರಿಸದ ಕೇಂದ್ರ ಸರ್ಕಾರ ಇದೀಗ ಕಾವೇರಿ ವಿಚಾರವನ್ನು ಕೆದಕಿದೆ. ಕಾವೇರಿ ಕೊಳ್ಳದ ಜಲಾಶಯಗಳು ರಾಜ್ಯದ ಕೈತಪ್ಪುವ ಭೀತಿಯ ಬೆನ್ನಲ್ಲೇ ಮತ್ತೊಂದು ಹೊಡೆತಕ್ಕೂ ರಾಜ್ಯ ಸಿದ್ಧವಾಗಬೇಕಿದೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ವಿವಾದ ಬಗೆಹರಿಸಲು ಕೃಷ್ಣಾ-ಪಿನಾಕಿನಿ-ಕಾವೇರಿ ನದಿಗಳ ಜೋಡಣೆ ಪ್ಲಾನ್ ಮಾಡಿದೆ.

    ಕೃಷ್ಣಾ-ಗೋದಾವರಿ ನದಿ ಜೋಡಣೆ ಮಾಡಿದ ಆಂಧ್ರ ಸರ್ಕಾರದಿಂದ ಉತ್ತೇಜಿತಗೊಂಡಿರುವ ಕೇಂದ್ರ ಸರ್ಕಾರ ಹೊಸ ನದಿ ಜೋಡಣೆ ಯೋಜನೆ ಕುರಿತು ಡಿಪಿಆರ್ ತಯಾರಿಸುವ ಹೊಣೆಯನ್ನು ಆಂಧ್ರ ಸರ್ಕಾರಕ್ಕೆ ವಹಿಸಿದೆ. ಈ ಯೋಜನೆಯಿಂದ ಕಾವೇರಿ ವಿವಾದ ಬಗೆಹರಿಯುವ ಆಶಾಕಿರಣ ಮೂಡಿದ್ರೂ ಕರ್ನಾಟಕಕ್ಕೆ ಮಾತ್ರ ಯಾವುದೇ ಉಪಯೋಗವಿಲ್ಲ. ಮಹಾನದಿ ಗೋದಾವರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಕೊರತೆ ಎದುರಿಸುತ್ತಿರುವ ಕೃಷ್ಣಾ, ಪಿನಾಕಿನ ಕಾವೇರಿ, ವೈಗೈ ಹಾಗೂ ಗುಂಡಾರ್ ವಲಯಗಳಿಗೆ ಹರಿಸುವುದು ಕೇಂದ್ರದ ಉದ್ದೇಶ. ಈ ಮೂಲಕ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕಮಲ ಅರಳಿಸಲು ನರೇಂದ್ರ ಮೋದಿ ಸರ್ಕಾರ ಪ್ಲಾನ್ ಮಾಡಿದೆಯಾ ಅನ್ನೋ ಅನುಮಾನ ಕಾಡ್ತಿದೆ. ಇನ್ನು ವಿಜಯಪುರದ ಆಲಮಟ್ಟಿಯಿಂದ ಕೃಷ್ಣಾ ನದಿಯನ್ನು ತಿರುಗಿಸಿ ಆಂಧ್ರದ ಬರಪೀಡಿತ ಅನಂತಪುರ ಜಿಲ್ಲೆಗೆ ನೀರು ನೀಡುವ ಆಲೋಚನೆಯನ್ನು ಹೊಂದಲಾಗಿದೆ.

    ಕರ್ನಾಟಕದಲ್ಲೂ ಸಾಕಷ್ಟು ಬರಪೀಡಿತ ಪ್ರದೇಶಗಳು ಇವೆ. ಆದ್ರೆ ಕೃಷ್ಣಾ ನದಿ ಮೂಲಕ ಆ ಭಾಗಗಳಿಗೆ ನೀರು ಕೊಡಿಸುವ ಪ್ರಯತ್ನವನ್ನೇ ಮಾಡಿಲ್ಲದಿರುವುದು ಬೇಸರದ ಸಂಗತಿಯಾಗಿದೆ. ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಮಾತ್ರ ಹನಿ ನೀರು ಸಿಗದಿದ್ದರೂ ಕೇಂದ್ರದ ಮಹಾ ಮೋಸ ರಾಜ್ಯ ಸರ್ಕಾರಕ್ಕೆ ಗೊತ್ತಿದೆಯಾ ಎಂಬ ಪ್ರಶ್ನೆಯೂ ಮೂಡುತ್ತಿದೆ. ಈ ಎಲ್ಲದರ ಮಧ್ಯೆ ರಾಜ್ಯದ ಬಿಜೆಪಿ ಸಂಸದರು ಹಾಗೂ ಜನಪ್ರತಿನಿಧಿಗಳು ಏನು ಮಾಡುತ್ತಾರೆ. ರಾಜ್ಯದ ಪರ ದನಿ ಎತ್ತುತ್ತಾರಾ ಅಥವಾ ಕೇಂದ್ರದ ಮೋದಿ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ಮೌನಕ್ಕೆ ಶರಣಾಗುತ್ತಾರಾ ಎನ್ನುವುದಷ್ಟೇ ಈಗ ಎಲ್ಲರಲ್ಲಿರುವ ಕುತೂಹಲ.