Tag: Ritesh

  • ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ‘ಡಾನ್ 3’ ಸಿನಿಮಾದಿಂದ ಹೊರಬಂದ ಶಾರುಖ್ ಖಾನ್

    ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ ವೃತ್ತಿ ಬದುಕಿಗೆ ಸಾಥ್ ನೀಡಿದ ಚಿತ್ರದ ಸರಣಿಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಈ ಹಿಂದೆ ಡಾನ್, ಡಾನ್ 2 ಸರಣಿಯಲ್ಲಿ ನಟಿಸಿದ್ದರು. ಇದೀಗ ಡಾನ್ 3 ಸಿನಿಮಾ ಮಾಡಲು ನಿರ್ದೇಶಕ ಫರ್ಹಾನ್ ಅಖ್ತರ್ ಸಿದ್ಧತೆ ಮಾಡಿಕೊಂಡಿದ್ದು, ಈ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುತ್ತಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.

    ಇತ್ತೀಚೆಗಷ್ಟೇ ರಿತೇಶ್ ಮಾತನಾಡುತ್ತಾ ತಮ್ಮ ಎಕ್ಸೆಲ್ ಎಂಟರ್ ಟೇನ್ಮೆಂಟ್ ನಿರ್ಮಾಣ ಸಂಸ್ಥೆಯಿಂದ ಡಾನ್ 3 ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಫರ್ಹಾನ್ ಈಗಾಗಲೇ ಆ ಸಿನಿಮಾದ ತಯಾರಿ ಕೆಲಸದಲ್ಲಿ ಬ್ಯುಸಿಯಾಗಿರುವುದಾಗಿಯೂ ತಿಳಿಸಿದ್ದರು. ಸದ್ಯ ಸಿಗುತ್ತಿರುವ ಮಾಹಿತಿಯ ಪ್ರಕಾರ ಶಾರುಖ್ ಖಾನ್ ಈ ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಡಾನ್ 3 ಸಿನಿಮಾದ ಕಥೆಯು ಶಾರುಖ್ ಖಾನ್ ಗೆ ಇಷ್ಟವಾಗಿಲ್ಲವಂತೆ. ಅಲ್ಲದೇ, ಮತ್ತದೆ ಗಿಮಿಕ್ ಮಾಡುವಂತಹ ಸಿನಿಮಾದಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರಂತೆ. ಜೊತೆಗೆ ಸಂಭಾವನೆ ವಿಚಾರದಲ್ಲೂ ಕಿರಿಕ್ ಆಗಿದೆ ಎಂದು ಹೇಳಲಾಗುತ್ತಿದೆ. ಡಾನ್ 3 ಸಿನಿಮಾ ಮಾಡಿದರೆ ಲಾಭದಲ್ಲಿ ಪರ್ಸಂಟೇಜ್ ಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  • ಕಾರಿಗಾಗಿ ಗಂಡನನ್ನೇ ಬಿಟ್ಟರಾ ರಾಖಿ ಸಾವಂತ್?:  ಸೇಡು ತೀರಿಸಿಕೊಳ್ತೀನಿ ಅಂದ ಮಾಜಿಪತಿ

    ಕಾರಿಗಾಗಿ ಗಂಡನನ್ನೇ ಬಿಟ್ಟರಾ ರಾಖಿ ಸಾವಂತ್?: ಸೇಡು ತೀರಿಸಿಕೊಳ್ತೀನಿ ಅಂದ ಮಾಜಿಪತಿ

    ಮೈಸೂರು ಹುಡುಗ ಆದಿಲ್ ತಮಗೊಂದು ಕಾರು ಕೊಟ್ಟರು ಎಂದು ಹೇಳುವ ಮೂಲಕ ಹೊಸ ಬಾಯ್ ಫ್ರೆಂಡ್ ನನ್ನು ಪರಿಚಯಿಸಿದ್ದರು ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್. ಕಾರು ಕೊಡುವ ಮೂಲಕವೇ ತನಗೆ ಆದಿಲ್ ಪ್ರಪೋಸ್ ಮಾಡಿದರು ಎಂದೂ ಹೇಳಿಕೆ ನೀಡಿದ್ದರು. ಆದರೆ, ಇದೀಗ ರಾಖಿ ಮಾಜಿಪತಿ ರಿತೇಶ್, ಇದೇ ಕಾರಿನ ವಿಚಾರವನ್ನು ಹೊರಗೆಡವಿದ್ದಾರೆ. ತಾವು ರಾಖಿಗೆ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ ತನ್ನನ್ನು ಬಿಟ್ಟು ಹೋದಳು ಎಂದು ಆರೋಪಿಸಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ರಾಖಿ ಸಾವಂತ್ ಮಾಜಿ ಪತಿಯ ವಿರುದ್ಧ ಮುಂಬೈನಲ್ಲಿ ದೂರು ನೀಡಿದ್ದರು. ತಮ್ಮ ಮಾಜಿಪತಿಯಿಂದಾಗಿ ತಮಗೆ ಕಿರುಕುಳ ಆಗುತ್ತಿದೆ ಎಂದು ಮತ್ತು ತಮ್ಮ ಸೋಷಿಯಲ್ ಮೀಡಿಯಾಗಳನ್ನು ಅವರೇ ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ರಿತೇಶ್ ಕಿರುಕುಳವನ್ನು ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಗಳಗಳನೆ ಅತ್ತಿದ್ದರು. ಇದೀಗ ರಿತೀಶ್ ಮಾಜಿ ಪತ್ನಿಯ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಗಾಗಿ ಚಿತ್ರ ಮಾಡಲಿದೆ ಹೊಂಬಾಳೆ ಫಿಲ್ಮ್ಸ್: ನಿರ್ದೇಶಕರು ಯಾರು?

    ರಾಖಿ ತುಂಬಾ ದುಬಾರಿ ಕಾರು ಕೊಡಿಸುವಂತೆ ಪೀಡಿಸುತ್ತಿದ್ದರು. ಹಣದಾಹ ಹೆಚ್ಚಾಗಿತ್ತು. ನಾನು ಅವಳು ಕೇಳಿದ ಕಾರನ್ನು ಕೊಡಿಸಲಿಲ್ಲ. ಹಾಗಾಗಿ ಅವರು ನನ್ನ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಇದೀಗ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಮತ್ತು ಸೇಡು ತೀರಿಸಿಕೊಳ್ಳುವೆ ಎಂದು ರಿತೇಶ್ ಹೇಳಿದ್ದಾರೆ. ರಾಖಿ  ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ರಿತೀಶ್, “ಈಗಲೂ ರಾಕಿ ನನ್ನ ಹಣದಲ್ಲೇ ಬದುಕುತ್ತಿದ್ದಾಳೆ. ಸಾಕಷ್ಟು ದುಬಾರಿ ವಸ್ತುಗಳನ್ನು ಕೊಡಿಸಿಕೊಂಡಿದ್ದಾಳೆ. ಕಾರು ಯಾರು ಕೊಡಿಸುತ್ತಾರೋ ಅವರ ಹಿಂದೆ ಆಕೆ ಹೋಗುತ್ತಾಳೆ. ಈಗ ಆದಿಲ್ ಎನ್ನುವವನು ಕೊಡಿಸಿರುವ ಕಾರು ಅದು ಹೊಸದಲ್ಲ, ಸೆಕೆಂಡ್ ಹ್ಯಾಂಡ್’ ಎಂದು ಟಾಂಗ್ ಕೊಟ್ಟಿದ್ದಾರೆ ರಿತೀಶ್.