Tag: Rishikumara Swamy

  • ಸಿನಿಮಾದಲ್ಲಿ ಹಿಂದೂ `ಮಠ’ಗಳ ಅವಹೇಳನ – ಚೀಪ್ ಪಬ್ಲಿಸಿಟಿ ನನಗೆ ಬೇಡ ಎಂದ ನಿರ್ದೇಶಕ

    ಸಿನಿಮಾದಲ್ಲಿ ಹಿಂದೂ `ಮಠ’ಗಳ ಅವಹೇಳನ – ಚೀಪ್ ಪಬ್ಲಿಸಿಟಿ ನನಗೆ ಬೇಡ ಎಂದ ನಿರ್ದೇಶಕ

    ಬೆಂಗಳೂರು: ಕನ್ನಡ ಸಿನಿಮಾ (Kannada Cinema) ರಂಗದಲ್ಲಿ `ಮಠ’ದ (Math) ಹೆಸರಿನಲ್ಲಿ ಮತ್ತೊಂದು ಸಿನಿಮಾ ಮೂಡಿ ಬಂದಿದೆ. ರವೀಂದ್ರ ವಂಶಿ (Ravindra Vamshi) ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್ (Guruprasad), ತಬಲಾ ನಾಣಿ, ಮಂಡ್ಯ ರಮೇಶ್ (Mandya Ramesh) ಸೇರಿದಂತೆ ಹಲವರು ನಟಿಸಿದ್ದಾರೆ.

    ಸಿನಿಮಾ ಬಗ್ಗೆ ಈಗ ಹಲವು ವಿವಾದಗಳು ಭುಗಿಲೆದ್ದಿದೆ. ಇತ್ತೀಚೆಗೆ ಮಠದ ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎಂದು ಹೇಳಿದ್ದ ಕಾಳಿಮಠದ ರಿಷಿಕುಮಾರ್ ಸ್ವಾಮೀಜಿ ಇದೀಗ, ಹಿಂದೂ ಮಠಗಳ ಬಗ್ಗೆ ಸಿನಿಮಾದಲ್ಲಿ ಕೀಳಾಗಿ ತೋರಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರಿಷಬ್‌ಗೆ ಕಾಲಿಗೆ ಬಿದ್ದು ಬನ್ನಿ- ‘ಮಠ’ ನಿರ್ದೇಶಕನಿಗೆ ರಿಷಿ ಕುಮಾರ ಸ್ವಾಮಿ ಕ್ಲಾಸ್

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber Of Commerce) ಚಿತ್ರತಂಡದ (Film Team) ವಿರುದ್ಧ ದೂರು ನೀಡಿರುವ ರಿಷಿಕುಮಾರ ಸ್ವಾಮೀಜಿ (Rishikumara Swamy), `ಮಠ’ ಟ್ರೇಲರ್ ಸಂಭಾಷಣೆಗಳಿಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಿತ್ರತಂಡದೊಂದಿಗೆ ಮುಖಾಮುಖಿಯಾಗಿ ಚರ್ಚಿಸಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಲೆಜೆಂಡ್‌ ಬಾಲಯ್ಯ ಮುಂದೆ ಅಬ್ಬರಿಸಲಿದ್ದಾರೆ `ಕೆಜಿಎಫ್ 2′ ನಟ

    ಇದಕ್ಕೆ ಖಡಕ್ಕಾಗಿ ಕ್ಲ್ಯಾರಿಟಿ ಕೊಟ್ಟಿರೋ ನಿರ್ದೇಶಕ ರವೀಂದ್ರ ವಂಶಿ (Ravindra Vamshi), ನಾನು ಸುಮ್ಮನೆ ಸಿನಿಮಾ ಮಾಡಿಲ್ಲ, ನಾನು 149 ದಿನ, 70ಕ್ಕೂ ಹೆಚ್ಚು ಮಠಗಳಲ್ಲಿ ಶೂಟ್ ಮಾಡಿದ್ದೀನಿ. ನನಗೆ ಎಲ್ಲ ಧರ್ಮ, ಪರಂಪರೆಗಳ ಬಗ್ಗೆ ಗೌರವವಿದೆ. ನೀವು ಮೊದಲು ಸಿನಿಮಾ ನೋಡಿ ಮಾತನಾಡಿ. ನಾನು ಸಾಕಷ್ಟು ಅಧ್ಯಯನ ಮಾಡಿಯೇ ಸಿನಿಮಾ ಮಾಡಿದ್ದೀನಿ. ನನ್ನ ಸಿನಿಮಾಗೆ ಚೀಪ್ ಪಬ್ಲಿಸಿಟಿ ಅಗತ್ಯವಿಲ್ಲ. ನನ್ನ ಮಠ ಚಿತ್ರಕ್ಕೆ ಸುಳ್ಳು ಪ್ರಚಾರ ಬೇಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜಟ್ಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಿ: ಕಾಳಿ ಸ್ವಾಮಿ

    ಜಟ್ಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಿ: ಕಾಳಿ ಸ್ವಾಮಿ

    ತುಮಕೂರು: ಹಿಂದೂ ಧರ್ಮದ ಯುವಕರು ಜಟ್ಕಾ ಮೀಟ್ ಅಂಗಡಿಗಳನ್ನು ತೆರೆಯುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಿ ತಮ್ಮ ಕುಟುಂಬ ಹಾಗೂ ಹಿಂದೂ ಧರ್ಮವನ್ನು ಬಲಿಷ್ಠಗೊಳಿಸಬೇಕು ಎಂದು ಕಾಳಿ ಸ್ವಾಮೀಜಿ ಕರೆ ನೀಡಿದರು.

    ತುಮಕೂರಿನ ಟೌನ್‍ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಏಕತೆಯ ಹಿಂದುತ್ವ ಎಲ್ಲರನ್ನು ಒಟ್ಟುಗೂಡಿಸಬೇಕು ಈ ಮೂಲಕ ಆರ್ಥಿಕವಾಗಿ ಹಿಂದೂ ಧರ್ಮದವರು ಬಲಿಷ್ಠರಾಗಬೇಕು. ಹಿಂದೂ ಧರ್ಮದ ಯುವಕರು ಜಿಲ್ಲೆಯಾದ್ಯಂತ ಹಿಂದೂ ಜಟ್ಕಾ ಮೀಟ್ ಅಂಗಡಿಯನ್ನು ತೆರೆಯಬೇಕು ಎಂದರು. ಇದನ್ನೂ ಓದಿ: ಮಸೀದಿ ಸಮೀಪ ಹನುಮಾನ್ ಚಾಲೀಸಾ ಹಾಕಿದ ಎಂಎನ್‌ಎಸ್

    ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಿಂದೂ ಜಟ್ಕಾ ಮೀಟ್ ಅಂಗಡಿಗಳನ್ನು ತೆರೆದು ಹಿಂದೂ ಧರ್ಮವನ್ನು ಜಾಗೃತಗೊಳಿಸಬೇಕಾಗಿದೆ. ಹಿಂದೂ ಧರ್ಮದ ಯುವಕರು ಅಂಗಡಿಗಳನ್ನು ತೆರೆಯಲು ಮುಂದಾದರೆ ಅಂತಹ ಯುವಕರನ್ನು ಗುರುತಿಸಿ ತರಬೇತಿಗಳನ್ನು ನೀಡಿ ಅಂಗಡಿಗಳನ್ನು ತೆರೆಯಲು ಬೇಕಾದ ಸಹಕಾರವನ್ನು ತುಮಕೂರಿನ ಹಿಂದೂಪರ ಸಂಘಟನೆಗಳು ಮಾಡಲಿವೆ. ಈ ಮೂಲಕ ಹಿಂದೂ ಧರ್ಮದ ಯುವಕರ ಉದ್ಯೋಗವನ್ನು ತಾವೇ ಸೃಷ್ಟಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತರನ್ನು ಇನ್ನು ಯಾರಿಂದಲೂ ಓಡಿಸಲು ಸಾಧ್ಯವಿಲ್ಲ: ಮೋಹನ್ ಭಾಗವತ್