Tag: Rishikumara swamiji

  • ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು – ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ

    ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು – ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ

    ಬೆಂಗಳೂರು: ದರ್ಗಾಕ್ಕೆ ಹೋಗುವವರನ್ನು ತಡೆಯಬೇಡಿ. ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು ಎಂದು ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

    karaga

    ಶ್ರೀಭೀಮಲಿಂಗೇಶ್ವರ ದೇವಾಲಯ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಗಾಕ್ಕೆ ಹೋಗುವವರನ್ನು ತಡೆಯಬೇಡಿ. ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು. ಬೆಂಗಳೂರಿನ ಕರಗಕ್ಕೆ 5,000 ವರ್ಷಗಳ ಇತಿಹಾಸವಿದೆ. ಧರ್ಮರಾಯನ ದೇವಸ್ಥಾನವಿದೆ ದ್ರೌಪದಿ ಪಂಚಪತಿಯರನ್ನು ಸುತ್ತು ಹಾಕಿದ್ದರ ಪ್ರತೀಕ ಈ ದೇವಸ್ಥಾನ. ಪಾಂಡವರು ಮತ್ತು ದ್ರೌಪದಿ ಈ ದೇವಸ್ಥಾನಕ್ಕೆ ಸುತ್ತು ಹಾಕಿರುವ ಪ್ರತೀಕವಾಗಿ ಇಲ್ಲಿ ಐದು ದೇವಾಲಯಗಳಿವೆ ಎಂದರು. ಇದನ್ನೂ ಓದಿ: ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ

    ಭೀಮಲಿಂಗೇಶ್ವರ ಇದ್ದ ಜಾಗ ದರ್ಗಾವಾಗಿದೆ. ದರ್ಗಾ ಆಗಿದೆಯೇ, ಅಥವಾ ಮಹಲ್ ಆಗಿದೆಯೋ ಗೊತ್ತಿಲ್ಲ. ಹಿಂದೆ ಕೊಳದ ಮಠದ ಆಶ್ರಯದಲ್ಲಿ ಭೀಮಲಿಂಗೇಶ್ವರ ದೇವಾಲಯವಿತ್ತು. ಕೊಳದ ಮಠದ ಜಾಗ ಇದೀಗ ಲಾಲ್ ಬಾಗ್, ಕಬ್ಬನ್ ಪಾರ್ಕ್ ಆಗಿದೆ. ಇದೀಗ ದರ್ಗಾ ಇರುವ ಜಾಗ ಭೀಮಲಿಂಗೇಶ್ವರ ದೇವಾಲಯದ್ದು ಈಗಿರುವ ದರ್ಗಾ 500 ವರ್ಷ ಇತಿಹಾಸವಿರುವ ಪುರಾತನವಾದ ಭೀಮಲಿಂಗೇಶ್ವರನ ಜಾಗ. ಟಿಪ್ಪು ಸುಲ್ತಾನನ ಮೂರು ಯೋಧರ ಪೈಕಿ ಒಬ್ಬರು ಸತ್ತಾಗ ಅಂತ್ಯಸಂಸ್ಕಾರ ಮಾಡಲು ಸ್ಥಳವಿಲ್ಲದೇ ಒಬ್ಬ ಯೋಧನ ಅಂತ್ಯಸಂಸ್ಕಾರ ಮಾಡಿದ ಜಾಗವಾಗಿತ್ತು. ಈ ಸ್ಥಳಕ್ಕೆ ಕರಗ ತೆರಳಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ

  • ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    ಮಸೀದಿಯನ್ನು ಒಡೆದು ಹಾಕಿ ಎಂದ ಕಾಳಿ ಸ್ವಾಮೀಜಿಗೆ ಷರತ್ತು ಬದ್ಧ ಜಾಮೀನು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿಗೆ ಶ್ರೀರಂಗಪಟ್ಟಣದ JMFC ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

    ಹಲವು ದಿನಗಳ ಹಿಂದೆ ಋಷಿಕುಮಾರ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದ ವೇಳೆ ಜಾಮೀಯಾ ಮಸೀದಿ ಬಳಿ ತೆರಳಿ ವೀಡಿಯೋವನ್ನು ಮಾಡಿದ್ದಾರೆ. ಆ ವೀಡಿಯೋದಲ್ಲಿ ಈ ಮಸೀದಿ ಮೊದಲು ದೇವಸ್ಥಾನವಾಗಿದೆ, ಇಲ್ಲಿನ ಶಿಲ್ಪಕಲೆಗಳನ್ನು ನೋಡಿದರೆ ಇದು ಹಿಂದೂ ದೇವಸ್ಥಾನವೆಂದು ತಿಳಿಯುತ್ತದೆ. ಬಾಬ್ರಿ ಮಸೀದಿ ರೀತಿ ಈ ಮಸೀದಿಯನ್ನು ಒಡೆದು ಹಾಕಿ ಹಿಂದೂ ದೇವಸ್ಥಾನವನ್ನು ಕಟ್ಟಬೇಕೆಂದು ಹೇಳಿ ಆ ವೀಡಿಯೋವನ್ನು ಸಾಮಾಜಿಕ ಜಾಲಣದಲ್ಲಿ ಹಾಕಿದ್ದರು. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯನ್ನು ಒಡೆಯಬೇಕು ಎಂದಿದ್ದ ಕಾಳಿಸ್ವಾಮಿ ಅರೆಸ್ಟ್

    ಈ ಹಿನ್ನೆಲೆ ಶ್ರೀರಂಗಪಟ್ಟಣದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೋಮು ಸೌಹಾರ್ದ ಕದಡುವ ಕೆಲಸ ಎಂದು ಋಷಿಕುಮಾರ ಸ್ವಾಮೀಜಿ ಮೇಲೆ ಪ್ರಕರಣ ದಾಖಲಾಗಿತ್ತು. ಬಳಿಕ ಶ್ರೀರಂಗಪಟ್ಟಣದ ಪೊಲೀಸರು ಕಡೂರಿನ ಕಾಳಿ ಮಠಕ್ಕೆ ತೆರಳಿ ಋಷಿಕುಮಾರ ಸ್ವಾಮೀಜಿಯನ್ನು ಬಂದಿಸಿದ್ದರು. ಬಳಿಕ ಸ್ವಾಮೀಜಿಯನ್ನು ವಿಚಾರಣೆಗೆ ಒಳಪಡಿಸಿ ಪೊಲೀಸರು ಶ್ರೀರಂಗಪಟ್ಟಣದ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದನ್ನೂ ಓದಿ: UP Election- 30 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

    ಈ ವೇಳೆ ಋಷಿಕುಮಾರ ಸ್ವಾಮೀಜಿಯ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದರು. ನಿನ್ನೆ ಜಾಮೀನು ಅರ್ಜಿಯನ್ನು ಪರಿಶೀಲನೆ ಮಾಡಿದ ನ್ಯಾಯಾಧೀಶರು ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಇಂದು ತೀರ್ಪು ನೀಡುವುದಾಗಿ ತಿಳಿಸಿತ್ತು. ಅದರಂತೆ ನಿನ್ನೆ ಋಷಿಕುಮಾರ ಸ್ವಾಮೀಜಿಯನ್ನು ಮಂಡ್ಯ ಕಾರಾಗೃಹದಲ್ಲಿ ಇಡಲಾಗಿತ್ತು. ಇಂದು ಶ್ರೀರಂಗಪಟ್ಟಣ JMFC ನ್ಯಾಯಾಲಯ ಕಾಳಿ ಸ್ವಾಮೀಜಿ ಪ್ರತಿ ಭಾನುವಾರ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಿ ತನಿಖೆಗೆ ಸಹಕಾರ ನೀಡಬೇಕೆಂದು ಷರತ್ತು ವಿಧಿಸಿ ಜಾಮೀನು ನೀಡಿದೆ.