Tag: rishi

  • ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

    ಅಲಮೇಲಮ್ಮನ ‘ರಿಶಿ’ ಈಗ ಭರತ ಬಾಹುಬಲಿ!

    ಬೆಂಗಳೂರು: ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರದ ನಾಯಕನಾಗಿ ನಟಿಸಿದ್ದ ರಿಶಿ ಆ ನಂತರದಲ್ಲಿ ಒಂದಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದರು. ಆದರೆ ಶಶಾಂಕ್ ಬ್ಯಾನರಿನಲ್ಲಿನ ಚಿತ್ರವೂ ಸೇರಿದಂತೆ ರಿಶಿಯ ಸಿನಿ ಕೆರಿಯರ್ ಅದೇಕೋ ಥಂಡಾ ಹೊಡೆದಂತಿತ್ತು. ಹೀಗಿರುವಾಗಲೇ ಆತ ಹೊಸಾ ಚಿತ್ರವೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ!

    ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದ ಮಾಸ್ಟರ್ ಪೀಸ್ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ ಅವರ ಹೊಸಾ ಚಿತ್ರಕ್ಕೆ ರಿಶಿ ನಾಯಕನಾಗಿ ಆಯ್ಕೆಯಾಗಿದ್ದಾನೆ. ಈ ಚಿತ್ರಕ್ಕೆ ಭರತ ಬಾಹುಬಲಿ ಎಂಬ ಟೈಟಲ್ ಅನ್ನೂ ಫೈನಲ್ ಮಾಡಲಾಗಿದೆ. ಇದರ ಜೊತೆಗೇ ಸಾರಾ ಹರೀಶ್ ರಿಶಿಗೆ ನಾಯಕಿಯಾಗಿಯೂ ಆಯ್ಕೆಯಾಗಿದ್ದಾಳೆ!

     

    ಶೀರ್ಷಿಕೆ, ನಾಯಕಿ ಸೇರಿದಂತೆ ಎಲ್ಲ ಆಯ್ಕೆಗಳೂ ಪೂರ್ಣಗೊಂಡಿರೋ ‘ಭರತ ಬಾಹುಬಲಿ’ ಮಂಜು ಮಾಂಡವ್ಯ ಸಾರಥ್ಯದಲ್ಲಿ ಇಷ್ಟರಲ್ಲಿಯೇ ಚಿತ್ರೀಕರಣಕ್ಕೆ ತೆರಳಲಿದ್ದಾನೆ. ಮಾಸ್ಟರ್ ಪೀಸ್ ನಂಥಾ ಹಿಟ್ ಚಿತ್ರ ಕೊಟ್ಟಿದ್ದ ಮಂಜು ಮಾಂಡವ್ಯ ಅವರ ಈ ಹೊಸ ಚಿತ್ರದ ಬಗ್ಗೆ ಪ್ರೇಕ್ಷಕರೂ ಕೂಡಾ ಕಣ್ಣಿಟ್ಟು ಕಾಯುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ ಚಿತ್ರದಲ್ಲಿ ತನ್ನ ವಿಶಿಷ್ಟವಾದ ನಟನೆಯ ಮೂಲಕ ಗಮನ ಸೆಳೆದಿದ್ದ ರಿಶಿ ಈ ಮೂಲಕ ಮತ್ತೊಂದು ಹಿಟ್ ಚಿತ್ರ ಕೊಡುವ ಹುಮ್ಮಸ್ಸಿನಿಂದ ರೆಡಿಯಾಗುತ್ತಿದ್ದಾನೆ.

    ಆದರೆ ಶಶಾಂಕ್ ಬ್ಯಾನರಿನ ಚಿತ್ರದ ಕಥೆ ಏನಾಯಿತೆಂಬ ಪ್ರಶ್ನೆಯೊಂದು ಪ್ರೇಕ್ಷಕರ ಮನಸಲ್ಲಿದೆ. ಹೊಸಬರಿಗೆ ಅವಕಾಶ ಕೊಡುವ ಸದುದ್ದೇಶದಿಂದ ಶಶಾಂಕ್ ಸ್ವಂತ ಬ್ಯಾನರ್ ತೆರೆದಿದ್ದರಲ್ಲಾ? ಅದರಲ್ಲಿ ರಿಶಿ ನಾಯಕನಾಗಿರೋ ಒಂದು ಚಿತ್ರವನ್ನೂ ಘೋಷಣೆ ಮಾಡಲಾಗಿತ್ತು. ಆ ಚಿತ್ರವೂ ಬಂದರೆ ರಿಶಿ ಪಾಲಿಗೆ ಈ ವರ್ಷ ಡಬಲ್ ಧಮಾಕಾ ಎಂಬುದರಲ್ಲಿ ಯಾವುದೇ ಸಂಶಯಗಳಿಲ್ಲ!

  • `ಒಳಿತು ಮಾಡು ಮನುಸ’ ಹಾಡಿನ ಹಿಂದಿದೆ ಕರುಣಾಜನಕ ಕಥೆ- ಹಾಡೇನೋ ಹಿಟ್ ಆಯ್ತು, ಬದುಕು ಬರಡಾಯ್ತು

    `ಒಳಿತು ಮಾಡು ಮನುಸ’ ಹಾಡಿನ ಹಿಂದಿದೆ ಕರುಣಾಜನಕ ಕಥೆ- ಹಾಡೇನೋ ಹಿಟ್ ಆಯ್ತು, ಬದುಕು ಬರಡಾಯ್ತು

    ಬೆಂಗಳೂರು: ಇದು `ಒಳಿತು ಮಾಡು ಮನುಸ’ ಅಂತ ಸಮಾಜಕ್ಕೆ ಸಂದೇಶ ಸಾರಿದವರ ನೋವಿನ ಕಥೆ. ಈ ಹಾಡನ್ನ ಕಂಚಿನ ಕಂಠದಲ್ಲಿ ಅಮೋಘವಾಗಿ ಹಾಡಿದ್ದ ಗಾಯಕ ಸಿ. ಅಶ್ವಥ್ ನಮ್ಮೊಂದಿಗಿಲ್ಲ. ಈ ಹಾಡು ಬರೆದವರು, ಸಂಗೀತ ಸಂಯೋಜನೆ ಮಾಡಿದವರ ಕಥೆ ಮಾತ್ರ ಕರುಣಾಜನಕ.

    `ಒಳಿತು ಮಾಡು ಮನುಸ.. ನೀ ಇರೋದು ಮೂರು ದಿವಸ’… ಯಾವುದೇ ಆರ್ಕೆಸ್ಟ್ರಾ ಆದ್ರೂ ಈ ಹಾಡಿಲ್ಲದೆ ಕಾರ್ಯಕ್ರಮ ಮುಕ್ತಾಯವಾಗಲ್ಲ. ಈ ಹಾಡು ಅದೆಷೋ ಜನರಿಗೆ ಸ್ಫೂರ್ತಿ. ಕೆಲವರಿಗೆ ಬದುಕು ಬದಲಿಸಿ ಒಳಿತನ್ನ ಕಲಿಸಿರುವ ಶಕ್ತಿ ಈ ಹಾಡಿಗಿದೆ. ಆದ್ರೆ ಈ ಹಾಡಿನ ಹಿಂದೆ ಒಂದು ಕರುಣಾಜನಕ ಕಥೆ ಇದೆ.

    ಈ ಹಾಡಿಗೆ ಸಾಹಿತ್ಯ ಬರೆದವರು ನಿರ್ದೇಶಕ ಋಷಿ, ಸಂಗೀತ ಸಂಯೋಜಿಸಿದವರು ಶ್ರೀ ಮಧುರ ನಾಯಿರಿ, ಹಾಡಿದವರು ಸಿ. ಅಶ್ವಥ್. ಅಶ್ವಥ್ ಅಂತೂ ಈಗ ನಮ್ಮೊಂದಿಗಿಲ್ಲ. ಸಾಹಿತ್ಯ ಬರೆದ ಋಷಿ ಜಾಮೀನಿಗಾಗಿ ಕೇವಲ 20 ಸಾವಿರ ರೂಪಾಯಿ ಹೊಂದಿಸಲಾಗದೆ 11 ತಿಂಗಳು ಜೈಲಿನಲ್ಲಿದ್ರು. ಜೈಲಿನಲ್ಲೂ ಇವರನ್ನ ಕೈ ಹಿಡಿದಿದ್ದು ಇದೇ ಒಳಿತು ಮಾಡು ಮನುಸ ಹಾಡು. ಈ ಹಾಡನ್ನ ಋಷಿ ಬರೆದಿದ್ದು ಅನ್ನೋ ಕಾರಣಕ್ಕೆ ಜೈಲಿನಲ್ಲೇ ಇರುವ ಮತ್ತೊಬ್ಬ ಕೈದಿ ಅಜಯ್ ಶಂಕರ್ ಸುಮಾರು 40 ರಿಂದ 50 ಸಾವಿರ ಖರ್ಚು ಮಾಡಿ ಜಾಮೀನು ಕೊಡಿಸಿ ಋಷಿ ಜೈಲಿಂದ ಹೊರಬರುವಂತೆ ಮಾಡಿದ್ದಾರೆ. ಋಷಿ ಇತ್ತೀಚೆಗಷ್ಟೆ ಜೈಲಿಂದ ಹೊರಬಂದಿದ್ದಾರೆ.

    ಮರುಭೂಮಿ ಚಿತ್ರಕ್ಕಾಗಿ ಈ ಹಾಡನ್ನ ಮಾಡಲಾಯ್ತು. ಕಾರಣಾಂತರಗಳಿಂದ ಆ ಚಿತ್ರ ರಿಲೀಸ್ ಕೂಡ ಆಗಲಿಲ್ಲ. ಋಷಿ ಕಥೆ ಇದಾದ್ರೆ, ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಶ್ರೀ ಮಧುರ ನಾಯಿರಿ ಕಳೆದ ಆರು ತಿಂಗಳಿಂದ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಇದ್ದಾರೆ. ತೀವ್ರ ಅನಾರೋಗ್ಯದಿಂದ ಮಧುರ ಬಳಲುತ್ತಿದ್ದು, ಕುಟುಂಬದವರು ಕಂಗಾಲಾಗಿದ್ದಾರೆ. ಕುಟುಂಬದ ಆಧಾರವಾಗಿದ್ದ ಮಧುರ ಹಾಸಿಗೆ ಹಿಡಿದಿರೋದ್ರಿಂದ ಕುಟುಂಬಕ್ಕೂ ನಿತ್ಯ ನೋವಿನ ದಿನವಾಗಿದೆ.

    ಹಾಡಿನ ಸಾಹಿತ್ಯ ಇಷ್ಟಪಟ್ಟಿದ್ದ ಸಿ. ಅಶ್ವಥ್ ಮೂರು ಬಾರಿ ತಮ್ಮದೆ ಖರ್ಚಿನಲ್ಲಿ ಸ್ಟುಡಿಯೋಗೆ ಬಂದು ಹೋಗಿ ಹಾಡಿದ್ರಂತೆ. ಐದು ವರ್ಷದ ಹಿಂದೆ ಗಾಯಕ ನವೀನ್ ಸಜ್ಜುಗೆ ಒರಿಜಿನಲ್ ಕರೋಕೆ ನೀಡಿದ್ರು ನಿರ್ದೇಶಕ ಋಷಿ. ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಎದುರು ನವೀನ್ ಸಜ್ಜು ಹಾಡಿದಾಗ ಹಾಡು ಮತ್ತಷ್ಟು ಫೇಮಸ್ ಆಯ್ತು. ಪರಪ್ಪನ ಅಗ್ರಹಾರದಲ್ಲೂ ಈ ಹಾಡನ್ನ ಪ್ರತಿನಿತ್ಯ ಹಾಡ್ತಾರೆ.

    ಇಷ್ಟೆಲ್ಲಾ ಒಳಿತುಗಳನ್ನ ಮಾಡಿರುವ ಹಾಡು, ಹಾಡಿನ ಸೃಷ್ಟಿಕರ್ತರಿಗೆ ಮಾತ್ರ ಅದ್ಯಾಕೋ ಬದುಕು ಬರಡಾಗುವಂತೆ ಮಾಡಿದೆ. ಕನ್ನಡ ಚಿತ್ರರಂಗ ದೊಡ್ಡದು, ದೊಡ್ಡ ದೊಡ್ಡ ಮನಸ್ಸಿನವರು ಯಾರಾದ್ರೂ ಇವರ ಸಹಾಯಕ್ಕೆ ಬರಲಿ ಅನ್ನೋದು ನಮ್ಮ ಆಶಯ.

     

  • ಸ್ಯಾಂಡಲ್‍ವುಡ್ ನಿರ್ದೇಶಕ ರಿಷಿ ಅರೆಸ್ಟ್

    ಸ್ಯಾಂಡಲ್‍ವುಡ್ ನಿರ್ದೇಶಕ ರಿಷಿ ಅರೆಸ್ಟ್

    ಬೆಂಗಳೂರು: ಸಿನಿಮಾ ಮಾಡೋದಾಗಿ ಹಣ ಪಡೆದು ಮೋಸ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಯಾಂಡಲ್‍ವುಡ್‍ನ ವಿವಾದಿತ ನಿರ್ದೇಶಕ ರಿಷಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಒನ್ ವೇ ಚಿತ್ರದ ನಿರ್ಮಾಪಕ ದೀಪಕ್‍ರಿಂದ ನಿರ್ದೇಶಕ ರಿಷಿ 5 ಲಕ್ಷ ರೂಪಾಯಿ ಪಡೆದಿದ್ರು. ಬಳಿಕ ದೀಪಕ್ ಹಣ ವಾಪಸ್ ಕೇಳಿದಾಗ ಚೆಕ್ ನೀಡಿದ್ರು. ಆದ್ರೆ ಚೆಕ್ ಬೌನ್ಸ್ ಆಗಿದ್ರಿಂದ ರಿಷಿ ವಿರುದ್ಧ ನಿರ್ಮಾಪಕ ದೀಪಕ್ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ದೇಶಕ ರಿಷಿಯವರನ್ನು ಬಂಧಿಸಿದ್ದಾರೆ.

    `ಕೊಟ್ಲಲ್ಲಪ್ಪೋ ಕೈ’ ಚಿತ್ರದ ವಿವಾದದ ಮೂಲಕ ಸದ್ದು ಮಾಡಿದ್ದ ರಿಷಿ ಬಳಿಕ ನಟಿ ಮೈತ್ರೇಯಾ ಗೌಡ ಅವರನ್ನ ಮದುವೆ ಅಗಿದ್ದೀನಿ ಅಂತ ಕಾಂಟ್ರವರ್ಸಿ ಮಾಡಿದ್ದರು. ಇತ್ತೀಚೆಗೆ ಮಾಸ್ತಿಗುಡಿ ಸಿನಿಮಾದಲ್ಲಿ ನನ್ನ ಹಾಡು ಬಳಸಿದ್ದಾರೆ ಅಂತಾ ಫಿಲಂ ಚೇಂಬರ್ ಗೆ ದೂರು ನೀಡಿದ್ದರು.