Tag: rishi

  • ಸಂಭಾಷಣೆಗಾರ ಪ್ರಶಾಂತ್ ರಾಜಪ್ಪ ಇದೀಗ ರಿಷಿ ಸಿನಿಮಾದ ನಿರ್ದೇಶಕ

    ಸಂಭಾಷಣೆಗಾರ ಪ್ರಶಾಂತ್ ರಾಜಪ್ಪ ಇದೀಗ ರಿಷಿ ಸಿನಿಮಾದ ನಿರ್ದೇಶಕ

    ಚಂದನವನದಲ್ಲಿ ಡೈಲಾಗ್ ರೈಟರ್ ಆಗಿ ಗುರುತಿಸಿಕೊಂಡಿರುವ ಪ್ರಶಾಂತ್ ರಾಜಪ್ಪ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಪೊಗರು’, ‘ಹೊಂದಿಸಿ ಬರೆಯಿರಿ’ ಸೇರಿದಂತೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದಾರೆ ಪ್ರಶಾಂತ್ ರಾಜಪ್ಪ. ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಇದೀಗ ಅವೆಲ್ಲ ಅನುಭವವನ್ನು ಇಟ್ಟುಕೊಂಡು ನಿರ್ದೇಶಕನಾಗಿ ಚಂದನವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

    ನಿರ್ದೇಶಕನಾಗಬೇಕು ಎಂಬುದು ಪ್ರಶಾಂತ್ ರಾಜಪ್ಪ ಅವರ ಬಹಳ ವರ್ಷದ ಕನಸು. ಆ ಕನಸೀಗ ನನಸಾಗುವ ಹಂತಕ್ಕೆ ಬಂದಿದೆ. ಸಿನಿಮಾ ಬರಹಗಾರನಾಗಿ, ನಿರ್ದೇಶಕರಾದ ಗುರು ಪ್ರಸಾದ್, ಪಿ.ಸಿ. ಶೇಖರ್, ಹೆಚ್. ಪಿ. ದಾಸ್ ಜೊತೆ ಸಹ ನಿರ್ದೇಶಕನಾಗಿ ಚಿತ್ರರಂಗದಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರಕ್ಕೆ ಧಾರೆ ಎರೆಯುತ್ತಿದ್ದಾರೆ. ಕಥೆ, ಚಿತ್ರಕಥೆ, ಡೈಲಾಗ್ ಬರೆದು ನಿರ್ದೇಶನ ಮಾಡುವುದರ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ‘ಆಪರೇಷನ್ ಅಲಮೇಲಮ್ಮ’, ‘ಕವಲು ದಾರಿ’ ಸಿನಿಮಾ ಖ್ಯಾತಿಯ ನಟ ರಿಷಿ ಪ್ರಶಾಂತ್ ರಾಜಪ್ಪ ಮೊದಲ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ ನಲ್ಲಿ ಸಿನಿಮಾ ಸೆಟ್ಟೇರಲಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸದ್ಯದಲ್ಲೇ ಸಿನಿಮಾ ಟೈಟಲ್, ತಾರಾಬಳಗ ಎಲ್ಲವನ್ನೂ ರಿವೀಲ್ ಮಾಡೋದಾಗಿ ಪ್ರಶಾಂತ್ ರಾಜಪ್ಪ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಅಂತಿದ್ದಾರೆ ನಟ ರಿಷಿ

    ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಅಂತಿದ್ದಾರೆ ನಟ ರಿಷಿ

    ಪರೇಷನ್ ಅಲಮೇಲಮ್ಮ, ಕವಲು ದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಅಭಿನಯದ ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’ ಸಿನಿಮಾ ZEE5ನಲ್ಲಿ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ. ಸದಾ ವಿಭಿನ್ನ ಪಾತ್ರ ಹಾಗೂ ಕಥೆ ಮೂಲಕ ಎದುರುಗೊಳ್ಳುವ ರಿಷಿ ಸಿನಿಮಾ ಆಯ್ಕೆ ವಿಚಾರದಲ್ಲೂ ಸಖತ್ ಚ್ಯುಸಿ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿಕೊಂಡ ಸಿನಿಮಾಗಳಲ್ಲೊಂದು ‘ನೋಡಿ ಸ್ವಾಮಿ ಇವನು ಇರೋದೆ ಹೀಗೆ’. ಸದ್ಯ ಈ ಚಿತ್ರದ ಟ್ರೇಲರ್ ಎಲ್ಲರ ಗಮನ ಸೆಳೆಯುತ್ತಿದೆ. ರಿಷಿ ಚಿತ್ರಕ್ಕೆ  ಕ್ರೇಜಿ ಸ್ಟಾರ್ ಸಾಥ್ ಕೂಡ ಸಿಕ್ಕಿದ್ದು, ಚಿತ್ರದ ಕಚಗುಳಿ ಇಡೋ ಟ್ರೇಲರ್ ರನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

    ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿದ್ದ ಈ ಚಿತ್ರ ಪ್ರಯೋಗಾತ್ಮಕ ಸಬ್ಜೆಕ್ಟ್ ಒಳಗೊಂಡಿದೆ. ಡಿಪ್ರೆಷನ್ ಮತ್ತು ಆತ್ಮಹತ್ಯೆ ಕುರಿತ ಕಥಾಹಂದರ ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಡಿಪ್ರೆಷನ್, ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿದೆ. ಈ ಎರಡು ಗಂಭೀರ ವಿಚಾರಗಳನ್ನಿಟ್ಟುಕೊಂಡು ಹಾಸ್ಯದೊಂದಿಗೆ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಕಥೆ ಸೀರಿಯಸ್ ಆಗಿ ಸಾಗುತ್ತಿದ್ರು ನೋಡುಗರಿಗೆ ನಾಯಕನ ಕಷ್ಟ ಕಂಡಾಗ ನಗು ತರಿಸುತ್ತದೆ ಎನ್ನುತ್ತಾರೆ ನಟ ರಿಷಿ.  ಒಟ್ಟಿನಲ್ಲಿ ಯುವಜನತೆಯ ಸಮಸ್ಯೆಗಳ  ಕುರಿತು ಈ ಸಿನಿಮಾ ಬೆಳಕು ಚೆಲ್ಲಲಿದೆ ಎನ್ನುವುದು ಚಿತ್ರತಂಡದ ಮಾತು. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

    ಚಿತ್ರದಲ್ಲಿ ಧನ್ಯ ಬಾಲಕೃಷ್ಣ, ಗ್ರೀಷ್ಮಾ  ಶ್ರೀಧರ್, ಅಪೂರ್ವ ಎಸ್ ಭಾರಧ್ವಜ್, ಭಾವನಿ ಪ್ರಕಾಶ್, ನಾಗಭೂಷಣ, ಮಹದೇವ್ ಪ್ರಸಾಧ್ ಒಳಗೊಂಡ ತಾರಾಬಳಗವಿದೆ. ಚಿತ್ರಕ್ಕೆ ಇಸ್ಲಾಹುದ್ದೀನ್ ಎನ್ ಎಸ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮ್ರೇಜ್ ಸೂರ್ಯವಂಶಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾಧ್ ಪಿ, ದುಲೀಪ್ ಕುಮಾರ್ ಎಂ.ಎಸ್ ಕ್ಯಾಮೆರಾ ವರ್ಕ್, ಪ್ರಸನ್ನ ಸಿವರಾಮನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

    ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬಿಚ್ಚಿಟ್ಟ ರಿಷಿ

    ಬೆಂಗಳೂರು: ಚಂದನವನದ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧರಾಗಿದ್ದರೂ ಅವರ ನೆನಪುಗಳು ಮಾತ್ರ ಇನ್ನೂ ಮಾಸಿಲ್ಲ. ಸದ್ಯ ಸ್ಯಾಂಡಲ್‍ವುಡ್ ನಟ ರಿಷಿ ತಮ್ಮ ಗೆಳೆಯ ವಿಜಯ್ ಜೊತೆ ಕಳೆದ ಒಂದು ಸುಂದರ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

    ಬಾಲ್ಯದಿಂದಲೂ ರಂಗಭೂಮಿ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದ ವಿಜಯ್ ಕುಮಾರ್‍ರವರು 10 ವರ್ಷಗಳ ಕಾಲ ಸಂಚಾರಿ ಥಿಯೇಟರ್‍ನಲ್ಲಿ ನಾಟಕಗಳನ್ನು ಮಾಡಿದ್ದರು. ಈ ಸಮಯದಲ್ಲಿ ನಟ ರಿಷಿ ಕೂಡ ಸಂಚಾರಿ ಥಿಯೇಟರ್ ನಲ್ಲಿ ನಟನಾಭ್ಯಾಸ ಮಾಡುತ್ತಿದ್ದರು. ಹೀಗೆ ರಿಷಿ ಹಾಗೂ ವಿಜಯ್ ನಾಟಕವೊಂದರಲ್ಲಿ ಅಭಿನಯಿಸುತ್ತಿದ್ದ ವೇಳೆ ವೇದಿಕೆ ಮೇಲೆ ಸಂಚಾರಿ ವಿಜಯ್ ಡೈಲಾಂಗ್‍ವೊಂದನ್ನು ಮರೆತಾಗ ಅದನ್ನು ಎಷ್ಟು ಚಾಣಕ್ಷತನದಿಂದ ನಿಭಾಯಿಸಿದರು ಎಂಬುವುದನ್ನು ರಿಷಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವಿಜಯ್ ಒಬ್ಬ ಪ್ರತಿಭಾವಂತ ನಟ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ನಾವು 13 ಮಾರ್ಗೋಸಾ ಮಹಲ್ ನಾಟಕವನ್ನು ಒಟ್ಟಿಗೆ ವೇದಿಕೆ ಮೇಲೆ ನಟಿಸಿದ್ದೆವು. ಈ ವೇಳೆ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇದನ್ನೂ ಓದಿ: ಲಾಕ್‍ಡೌನ್ ಮೊದಲು ಮಾತನಾಡಿದ್ದೆ, ಈಗ ಆಘಾತಗೊಂಡಿದ್ದೇನೆ: ಸುದೀಪ್

    ವಿಜಯ್ ಒಮ್ಮೆ ವೇದಿಕೆ ಮೇಲೆ ಅಭಿನಯಿಸುವಾಗ ಡೈಲಾಗ್‍ನ ಸಾಲೊಂದನ್ನು ಮರೆತು ಹೋಗಿದ್ದರು. ಒಂದು ವೇದಿಕೆ ಮೇಲೆ ಡೈಲಾಗ್ ಮೆರೆತಾಗ ಅದರಿಂದ ಆಗುವ ಆಂತರಿಕ ಭಯ ಒಬ್ಬ ಕಲಾವಿದನಿಗೆ ಮಾತ್ರ ತಿಳಿದಿರುತ್ತದೆ. ಆದರೆ ವಿಜಯ್ ಭಯಗೊಳ್ಳವ ಬದಲಿಗೆ, ತಕ್ಷಣವೇ ದೈಹಿಕವಾಗಿ ಪ್ರತಿಕ್ರಿಯಿಸುವ ಮೂಲಕ ಪಾತ್ರವನ್ನು ನಿಭಾಯಿಸಿದರು. ಅವರ ಆ್ಯಕ್ಟಿಂಗ್ ಎಷ್ಟು ಅದ್ಭುತವಾಗಿತ್ತು ಅಂದರೆ ಒಂದು ನಿಮಿಷದವರೆಗೂ ಒಂದು ಪದವನ್ನು ಹೇಳದೇ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅವರು ಹೇಳಿದ ಒಂದೇ ಒಂದು ಮಾತಿಗೆ ಪ್ರೇಕ್ಷಕರೇ ಅಚ್ಚರಿಗೊಂಡು ಚಪ್ಪಾಳೆ ತಟ್ಟಿದ್ದರು. ಅವರು ಡೈಲಾಗ್‍ನನ್ನು ಮರೆತಿರುವುದರ ಬಗ್ಗೆ ನಮಗೂ ಸುಳಿವು ನೀಡದೇ, ಡೈಲಾಗ್‍ನನ್ನು ಹೆಚ್ಚಾಗಿ ವೈಭವಿಕರಿಸದೇ ತಮ್ಮ ನಟನಕೌಶಲ್ಯದಿಂದ ಅಭಿನಯಿಸುವ ಮೂಲಕ ಚಪ್ಪಾಳೆಗಿಟ್ಟಿಕೊಂಡಿದ್ದರು. ಡೈಲಾಗ್ ಮರೆತ ವೇಳೆ ಅವರು ಆ ಪಾತ್ರವನ್ನು ಸುಧಾರಿಸಿದ ರೀತಿ ನನಗೆ ಇನ್ನೂ ಕೂಡ ನೆನಪಿದೆ. ಇದು ವೇದಿಕೆಯಲ್ಲಿ ನಡೆದ ಒಂದು ಅದ್ಭುತ ಕ್ಷಣವಾಗಿದೆ.

    ನಾನು ಅಂದು ವಿಜಯ್‍ರಿಂದ 2 ವಿಷಯಗಳನ್ನು ಕಲಿತುಕೊಂಡೆ. ಒಂದು ಯೋಜಿಸಿದ ಪ್ರಕಾರ ನಾಟಕಗಳು ಅಭಿನಯಿಸಲು ಆಗದೇ ಇದ್ದಾಗ, ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಸುಧಾರಿಸುವ ಮೂಲಕ ಅಭಿನಯಿಸಬೇಕು. ಮತ್ತೊಂದು ಸಹೋದ್ಯೋಗಿಗಳೊಂದಿಗೆ ಹಾಗೂ ಸಹ ನಟರೊಂದಿಗೆ ಪ್ರೀತಿ ಹಾಗೂ ಗೌರವದಿಂದಿ ನಡೆದುಕೊಳ್ಳಬೇಕು. ಬೇರೆಯವರಿಗೆ ನಾವು ಸಹಾಯ ಮಾಡಿದರೆ ನಮಗೆ ಯಾವುದೋ ರೀತಿ ಸಹಾಯ ದೊರೆಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ? 

    ಪ್ರಸ್ತುತ ಯುವ ನಟರಲ್ಲಿ ಸಂಚಾರಿ ವಿಜಯ್ ಒಬ್ಬ ಶ್ರೇಷ್ಠ ಕಲಾವಿದರಾಗಿದ್ದು, ಅವರು ರಾಷ್ಟ್ರಪ್ರಶಸ್ತಿ ವಿಜೇತರಾದಾಗ ಇಡೀ ಕನ್ನಡ ಚಿತ್ರರಂಗ ಮತ್ತು ಫಿಲ್ಮ್ ಸಕ್ರ್ಯೂಟ್ ಭಾರಿ ಹೆಮ್ಮೆ ಪಟ್ಟಿತು. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನಾವು ಯಾವಾಗಲೂ ಹೇಳುತ್ತಿರುತ್ತೇವೆ. ಆದರೆ ಅದು ಅರ್ಧದಲ್ಲಿಯೇ ವ್ಯರ್ಥವಾಗುತ್ತಿರುವುದನ್ನು ಇಂದಿಗೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.

    ಈ ನಷ್ಟವನ್ನು ಭರಿಸಲು ಉತ್ತಮ ಮಾರ್ಗವೆಂದರೆ ಎಲ್ಲರೂ ವ್ಯಕ್ತಿಯನ್ನು ಪ್ರೀತಿಸೋಣ ಮತ್ತು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರನ್ನು ಗೌರವಿಸೋಣ. ಸದ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ದೇವರು ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜನ್ರಿಗೆ ಒಳ್ಳೆದು ಮಾಡೋಕೆ ಕಾರ್ ಮಾರಲು ತಯಾರಾಗಿದ್ರು ವಿಜಯ್: ಜಗ್ಗೇಶ್

     

    View this post on Instagram

     

    A post shared by Rishi (@rishi_actor)

  • ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

    ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದ ಪ್ರತಿಭಾವಂತ ನಟ ರಿಷಿ. ಅದೊಂದೇ ಒಂದು ಚಿತ್ರದ ಪಾತ್ರ ಮತ್ತು ಅದರಲ್ಲಿ ನಟಿಸಿದ ರೀತಿಯಿಂದಲೇ ಆ ನಂತರದಲ್ಲಿ ಓರ್ವ ನಟನಾಗಿ ಸುವರ್ಣಾವಕಾಶಗಳನ್ನೇ ಪಡೆದುಕೊಳ್ಳುತ್ತಾ ಸಾಗಿ ಬಂದಿರುವ ಅವರೀಗ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮುಹೂರ್ತ ಕಂಡ ದಿನದಿಂದಲೇ ಪರಿಚಿತವಾದ, ವಿಶೇಷವಾದ ಈ ಟೈಟಲ್ಲಿನ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

    ಇದು ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಇದನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವರ್ಗಗಳಿಗೆ ಸೀಮಿತವಾದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಏದುಸಿರು ಬಿಡಬೇಕಾಗುತ್ತದೆ. ಪ್ರೇಕ್ಷಕರು ಯಾವ ಕಾರಣಕ್ಕಾಗಿ ಸಿನಿಮಾ ನೋಡಲು ಬರುತ್ತಾರೆಂಬ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇಟ್ಟುಕೊಂಡು ಎಲ್ಲ ವರ್ಗದವರಿಗೂ ಸಲ್ಲುವಂತೆ ನಿರ್ಮಾಣಗೊಂಡ ಚಿತ್ರಗಳ ಪಾಲಿಗೆ ಗೆಲುವೆಂಬುದು ಸಲೀಸಾಗುತ್ತದೆ. ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೂ ಸಹ ಅಂಥಾದ್ದೇ ಬಗೆಯಲ್ಲಿ ರೂಪುಗೊಂಡಿದೆ.

    ಪ್ರತೀ ಪ್ರೇಕ್ಷಕರ ಅಭಿರುಚಿಗಳು ಏನೇ ಇದ್ದರೂ ಅವರೆಲ್ಲರ ಪ್ರಧಾನ ಆಸಕ್ತಿ ಮನೋರಂಜನೆಯೇ ಆಗಿರುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಚಿತ್ರದಲ್ಲಿ ಭರಪೂರವಾದ ಮನೋರಂಜನಾತ್ಮಕ ಅಂಶಗಳಿವೆ. ಇಲ್ಲಿ ಬಹುತೇಕ ಭಾಗವನ್ನು ಕಾಮಿಡಿ ಕಚಗುಳಿ ಇಡುವಂತೆ ರೂಪಿಸಲಾಗಿದೆಯಂತೆ. ಯಾವುದೇ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿಯ ರಿಷಿ ಇಲ್ಲಿ ನಾನಾ ಶೇಡುಗಳ ಪಾತ್ರದ ಮೂಲಕ ಪ್ರೇಕ್ಷಕರನ್ನು ಮೋಡಿಗೀಡು ಮಾಡಲಿದ್ದಾರೆ. ಧನ್ಯಾ ಬಾಲಕೃಷ್ಣ ಕೂಡಾ ನಾಯಕಿಯಾಗಿ ಅಂಥಾದ್ದೇ ವಿಶೇಷತೆ ಹೊಂದಿರುವ ಪಾತ್ರದಲ್ಲಿ ನಟಿಸಿದ್ದಾರಂತೆ. ದತ್ತಣ್ಣ, ರಂಗಾಯಣ ರಘು, ಮಿತ್ರಾ ಮುಂತಾದವರು ಇಷ್ಟೇ ವಿಶೇಷವಾದ ಪಾತ್ರಗಳಲ್ಲಿ ನೋಡುಗರನ್ನು ತಾಕಲು ತಯಾರಾಗಿದ್ದಾರೆ.

  • ಈ ವಾರ ವಿಶಿಷ್ಟ ಪಾತ್ರಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

    ಈ ವಾರ ವಿಶಿಷ್ಟ ಪಾತ್ರಗಳನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ!

    ನ್ನಡ ಚಿತ್ರರಣಂಗದಲ್ಲೀಗ ಯಾವ ಸಿನಿಮಾ ರೂಪುಗೊಂಡರೂ ಅದರ ಮೂಲ ಮಂತ್ರ ಹೊಸತನವೇ ಆಗಿರುತ್ತದೆಯೆಂಬಂಥಾ ವಾತಾವರಣವಿದೆ. ಶೀರ್ಷಿಕೆಯಲ್ಲಿಯೇ ಆರಂಭಿಕವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡುವಂಥಾ ಪೈಪೋಟಿಯೂ ಚಾಲ್ತಿಯಲ್ಲಿದೆ. ಇದೇ ಹಾದಿಯಲ್ಲಿ ಹೊಸ ಬಗೆಯ ನಿರೂಪಣೆ, ತೀರಾ ಹೊಸತಾದ ಕಥೆಯೊಂದಿಗೆ ಈ ವಾರ ತೆರೆಗಾಣಲು ರೆಡಿಯಾಗಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ಅನೂಪ್ ರಾಮಸ್ವಾಮಿ ನಿರ್ದೇಶನದ ಈ ಸಿನಿಮಾ ಅದೆಷ್ಟು ಸೊಗಸಾಗಿ ಮೂಡಿ ಬಂದಿದೆಯೆಂಬ ವಿಚಾರ ಈಗಾಗಲೇ ಟ್ರೇಲರ್‌ನೊಂದಿಗೆ ಅನಾವರಣವಾಗಿದೆ. ಅದರಲ್ಲಿ ಈ ಸಿನಿಮಾದಲ್ಲಿರೋ ಪಾತ್ರಗಳ ಪರಿಚಯವಾಗಿದ್ದರಿಂದಲೇ ಪ್ರೇಕ್ಷಕರು ಮತ್ತಷ್ಟು ತೀವ್ರವಾದ ಕುತೂಹಲದೊಂದಿಗೆ ಈ ಚಿತ್ರ ತೆರೆಗಾಣೋದನ್ನು ಎದುರು ನೋಡುವಂತಾಗಿದೆ.

    ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಬಲು ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ನಿರ್ದೇಶಕ ಅನೂಪ್ ರಾಮಸ್ವಾಮಿ ಇಲ್ಲಿ ಪ್ರತಿಯೊಂದು ಪಾತ್ರಗಳನ್ನೂ ಕೂಡಾ ಪ್ರೇಕ್ಷಕರು ಸಿನಿಮಾ ಮಂದಿರಗಳಿದ ಹೊರ ಬಂದಾದ ಮೇಲು ಮನಸಲ್ಲೇ ಕೂತು ಕಾಡುವಂತೆ ರೂಪಿಸಿದ್ದಾರಂತೆ. ನಾಯಕ ರಿಷಿಯಂತೂ ಈವರೆಗಿನ ಎಲ್ಲ ಪಾತ್ರಗಳಿಗಿಂತಲೂ ಬೇರೆಯದ್ದೇ ಸ್ವರೂಪದ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಿಕೊಳ್ಳಲಿದ್ದಾರೆ. ನಾಯಕಿ ಧನ್ಯಾ ಪಾತ್ರವೂ ಅದೇ ಹಾದಿಯಲ್ಲಿದೆ. ಇತರೆ ಪಾತ್ರಗಳೂ ಕೂಡಾ ಅಂಥಾದ್ದೇ ಗುಣ ಲಕ್ಷಣಗಳನ್ನು ಹೊಂದಿವೆಯಂತೆ.

    ಈ ಚಿತ್ರದಲ್ಲಿ ರಿಷಿ ಮತ್ತು ಧನ್ಯಾ ಬಾಲಕೃಷ್ಣಗೆ ಹಿರಿಯ ನಟ ದತ್ತಣ್ಣ, ರಂಗಾಯಣ ರಘು ಮತ್ತು ಮಿತ್ರಾ ಮುಖ್ಯವಾದ ಪಾತ್ರಗಳ ಮೂಲಕ ಸಾಥ್ ನೀಡಿದ್ದಾರೆ. ಅವರ ಪಾತ್ರಗಳ ಸ್ಪಷ್ಟ ಚಹರೆಗಳನ್ನು ಟ್ರೇಲರ್‍ನಲ್ಲಿ ಕಾಣಿಸಿರುವ ಚಿತ್ರತಂಡ ಅವುಗಳ ಮೂಲಕವೇ ಈ ಸಿನಿಮಾ ಬಗ್ಗೆ ನಿರೀಕ್ಷೆಗಳು ಮೂಡಿಕೊಳ್ಳುವಂತೆ ಮಾಡಿದ್ದಾರೆ. ಈ ಮೂವರೂ ನಟರನ್ನು ಪ್ರೇಕ್ಷಕರು ಇದುವರೆಗೂ ಹತ್ತಾರು ಸಿನಿಮಾಗಳಲ್ಲಿ ಬಗೆ ಬಗೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಈ ಹಿಂದೆ ಎಲ್ಲಿಯೂ ನಿರ್ವಹಿಸದಂಥಾ ಪಾತ್ರಗಳು ಅವರಿಗಾಗಿ ಸೃಷ್ಟಿಯಾಗಿವೆಯಂತೆ. ದತ್ತಣ್ಣನ ಪಾತ್ರವಂತೂ ನಗಿಸುತ್ತಲೇ ಪ್ರೇಕ್ಷಕರ ಕಣ್ಣಾಲಿಗಳು ತುಂಬಿ ಬರುವಂತೆಯೂ ಮಾಡಲಿವೆಯಂತೆ. ಇದೆಲ್ಲದರ ಅಸಲಿ ಮೋದ ಈ ವಾರವೇ ನಿಮ್ಮೆದುರು ಅನಾವರಣಗೊಳ್ಳಲಿದೆ.

  • ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಿನ್ನಾತಿ ಭಿನ್ನ ಶೀರ್ಷಿಕೆಗಳ ಜಮಾನವೊಂದು ಶುರುವಾಗಿದೆಯಲ್ಲಾ? ಅದನ್ನು ಮತ್ತಷ್ಟು ಮಿರುಗಿಸುವಂಥಾ ಗುಣ ಲಕ್ಷಣಗಳನ್ನು ಈ ಚಿತ್ರ ದಟ್ಟವಾಗಿಯೇ ಹೊಮ್ಮಿಸುತ್ತಿದೆ. ಈಗಾಗಲೇ ಎಲ್ಲಾ ರೀತಿಯಿಂದಲೂ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ತಂಡ ಇದೀಗ ಟ್ರೇಲರ್ ಲಾಂಚ್ ಮಾಡಿದೆ. ಈ ಮೂಲಕ ಮಜವಾದ ಟ್ರೇಲರ್ ಒಂದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಾರ್ವಜನಿಕರಿಗೆ ಸಿಕ್ಕಂತಾಗಿದೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿರೋ ಈ ಸಿನಿಮಾದ ಟ್ರೇಲರ್ ನಿಜಕ್ಕೂ ಮಜವಾಗಿದೆ. ಅದಕ್ಕೆ ತಕ್ಕುದಾದ ಕಥಾ ಹಂದರದ ಸುಳಿವಿನೊಂದಿಗೆ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಿದೆ. ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಮತ್ತು ಖದರ್ ಹೊಂದಿರುವಂಥಾ ಮಾಸ್ ಸನ್ನಿವೇಶ. ಇಷ್ಟಿದ್ದು ಬಿಟ್ಟರೆ ಯಾವುದೇ ಸಿನಿಮಾವಾದರೂ ಪ್ರೇಕ್ಷಕರಿಗೆ ಇಷ್ಟವಾಗಲು ಮತ್ತೇನು ಬೇಕಿದ್ದೀತು? ಈಗ ಹೊರ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಟ್ರೇಲರಿನಲ್ಲಿ ಅಷ್ಟೆಲ್ಲ ಅಂಶಗಳಿವೆ. ಈ ಕಾರಣದಿಂದಲೇ ಅದು ಪ್ರೇಕ್ಷಕರಿಗೆಲ್ಲ ಇಷ್ಟವಾಗಿದೆ.

    ಈ ಚಿತ್ರವನ್ನು ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿದ್ದಾರೆ. ಇದನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಇದು ಹೊಸ ಅಲೆಯ ಚಿತ್ರಗಳ ಸಾಲಿನಲ್ಲಿಯೇ ಹೊಸಾ ಛಾಪು ಮೂಡಿಸುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ಆರಂಭದಿಂದಲೇ ಸುದ್ದಿ ಮಾಡುತ್ತಾ ಬಂದಿದ್ದ ಈ ಸಿನಿಮಾದತ್ತ ಈಗಂತೂ ಎಲ್ಲರೂ ಆಕರ್ಷಿತರಾಗಿದ್ದಾರೆ. ಈ ಟ್ರೇಲರ್ ನೋಡಿದ ಮೇಲಂತೂ ಯಾರಿಗೇ ಆದರೂ ಆದಷ್ಟು ಬೇಗನೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕಾತರ ಮೂಡಿಕೊಳ್ಳದಿರುವುದಿಲ್ಲ. ಪ್ರೇಕ್ಷಕರಲ್ಲಿಯೂ ಕೂಡಾ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ. ದತ್ತಣ್ಣ, ರಿಷಿ, ರಂಗಾಯಣ ರಘು, ಮಿತ್ರಾ ಸೇರಿದಂತೆ ಹಲವರ ಪಾತ್ರ ಪರಿಚಯ ಮಾಡಿಸುತ್ತಲೇ ಈ ಟ್ರೇಲರ್ ಸಖತ್ ಕ್ರೇಜ್ ಹುಟ್ಟುಹಾಕಿದೆ.

  • ಹೈದರಾಬಾದಿನಲ್ಲಿ ನಿಶ್ಚಿತಾರ್ಥ ಮಾಡ್ಕೊಂಡು ಚೆನ್ನೈನಲ್ಲಿ ಮದ್ವೆಯಾಗ್ತಿರುವ ರಿಷಿ

    ಹೈದರಾಬಾದಿನಲ್ಲಿ ನಿಶ್ಚಿತಾರ್ಥ ಮಾಡ್ಕೊಂಡು ಚೆನ್ನೈನಲ್ಲಿ ಮದ್ವೆಯಾಗ್ತಿರುವ ರಿಷಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಿಷಿ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ರಿಷಿ ಏಪ್ರಿಲ್‍ನಲ್ಲಿ ತಮ್ಮ ಬಹುಕಾಲದ ಗೆಳತಿ ಸ್ವಾತಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸ್ವಾತಿ ವೃತ್ತಿಯಲ್ಲಿ ಬರಹಗಾರ್ತಿಯಾಗಿದ್ದು, ನವೆಂಬರ್ 10ರಂದು ರಿಷಿ ಅವರನ್ನು ಮದುವೆ ಆಗಲಿದ್ದಾರೆ ಹೇಳಲಾಗುತ್ತಿದೆ.

    ಏಪ್ರಿಲ್‍ನಲ್ಲಿ ನಿಶ್ಚಿತಾರ್ತ ಮಾಡಿಕೊಂಡ ರಿಷಿ ಮದುವೆ ದಿನಾಂಕವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈಗ ರಿಷಿ ಮತ್ತು ಸ್ವಾತಿ ಮದುವೆ ದಿನಾಂಕ ರಿವೀಲ್ ಆಗಿದೆ. ನವೆಂಬರ್ 10ರಂದು ಇಬ್ಬರ ವಿವಾಹ ಚೆನ್ನೈನಲ್ಲಿ ನಡೆಯಲಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

    ರಿಷಿ ಅವರ ಮದುವೆಯಲ್ಲಿ ಕುಟುಂಬದವರಿಗೆ ಮತ್ತು ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ. ರಿಷಿ ಮತ್ತು ಸ್ವಾತಿ ಮದುವೆ ಚೆನ್ನೈನಲ್ಲಿ ಮಾಡಿಕೊಂಡರೆ, ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಈಗಾಗಲೇ ರಿಷಿ ಮನೆಯಲ್ಲಿ ಮದುವೆ ತಯಾರಿ ಶುರುವಾಗಿದೆ.

    ನವೆಂಬರ್ 10ಕ್ಕೆ ಇಬ್ಬರು ಮದುವೆಯಾಗುತ್ತಿದ್ದು, ಮದುವೆ ಆದ 10 ದಿನಗಳ ನಂತರ ಚಿತ್ರರಂಗದ ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಆಯೋಜಿಸುತ್ತಾರೆ ಎನ್ನಲಾಗಿದೆ. ಸದ್ಯಕ್ಕೆ ರಿಷಿ `ಸಕಲಕಲಾವಲ್ಲಭ’, `ರಾಮನ ಅವತಾರ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಮತ್ತು `ಸಿಲ್ಕ್ ಸಿದ್ದ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಫಸ್ಟ್ ಲುಕ್‍ನಲ್ಲಿ ಲಕಲಕಿಸಿದ ಸಕಲಕಲಾವಲ್ಲಭ!

    ಫಸ್ಟ್ ಲುಕ್‍ನಲ್ಲಿ ಲಕಲಕಿಸಿದ ಸಕಲಕಲಾವಲ್ಲಭ!

    ಬೆಂಗಳೂರು: ಸತ್ಯಘಟನೆಯಾಧಾರಿತ ಚಿತ್ರಗಳ ಮೂಲಕವೇ ನಿರ್ದೇಶಕರಾಗಿ ಖ್ಯಾತಿ ಪಡೆದಿರುವವರು ಜೇಕಬ್ ವರ್ಗೀಸ್. ಈವರೆಗೂ ಪೃಥ್ವಿ, ಚಂಬಲ್‍ನಂಥಾ ಸತ್ಯ ಘಟನೆಯಾಧಾರಿತ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದವರು ಜೇಕಬ್ ವರ್ಗೀಸ್. ಸವಾರಿಯಂಥಾ ಭಿನ್ನ ಬಗೆಯ ಚಿತ್ರವನ್ನೂ ಸೃಷ್ಟಿಸಿದ್ದ ಜೇಕಬ್ ಒಂದು ಸಿನಿಮಾ ಮಾಡುತ್ತಾರೆಂದರೆ ಇತಿಹಾಸದ ಹುದುಲಲ್ಲಿ ಮುಚ್ಚಿ ಹೋದ ಸತ್ಯವೊಂದು ಬೆಳಕು ಕಾಣಲಿದೆ ಅಂತಲೇ ಅರ್ಥ. ಆದರೆ ಈ ಬಾರಿ ಅವರು ಇಂಥಾ ಗಂಭೀರ ಕಥಾ ವಸ್ತುಗಳ ಹಾದಿಯಿಂದ ಸಂಪೂರ್ಣ ಕಾಮಿಡಿಯತ್ತ ಹೊರಳಿಕೊಂಡಿದ್ದಾರೆ. ಅದರ ಫಲವೆಂಬಂತೆ ‘ಸಕಲ ಕಲಾ ವಲ್ಲಭ’ ಚಿತ್ರ ಜೀವ ಪಡೆದಿದೆ.

    ಸಕಲ ಕಲಾ ವಲ್ಲಭ ಚಿತ್ರದಲ್ಲಿ ಆಪರೇಷನ್ ಆಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಟೈಟಲ್ಲಿನತ್ತಲೇ ಪ್ರಧಾನವಾಗಿ ಫೋಕಸ್ ಮಾಡಿರೋ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಅಷ್ಟಕ್ಕೂ ಜೇಕಬ್ ವರ್ಗೀಸ್ ಚಂಬಲ್ ಗೆಲುವಿನ ನಂತರದಲ್ಲಿ ಈ ಸಿನಿಮಾ ಘೋಷಣೆ ಮಾಡಿದ ಕ್ಷಣದಿಂದಲೇ ಪ್ರೇಕ್ಷಕರು ಅದರತ್ತ ಕಣ್ಣು ನೆಟ್ಟಿದ್ದರು. ಇದ್ಯಾವ ಸತ್ಯ ಘಟನೆ ಬಗೆಯುವ ಪ್ರಯತ್ನ ಎಂಬಂಥಾ ಬೆರಗಿನ ಭಾವವೂ ಬಹುತೇಕರಲ್ಲಿ ಸುಳಿದಾಡಿತ್ತು. ಆದರೆ ಜೇಕಬ್ ವರ್ಗೀಸ್ ಕಡೆಯಿಂದ ತೂರಿ ಬಂದದ್ದು ಅಚ್ಚರಿದಾಯಕ ಸುದ್ದಿ.

    ಯಾಕೆಂದರೆ, ಈ ಬಾರಿ ಅವರು ಪ್ರೇಕ್ಷಕರಿಗೆ ಸಂಪೂರ್ಣ ಮನೋರಂಜನೆ ನೀಡೋದನ್ನೇ ಉದ್ದೇಶವಾಗಿಸಿಕೊಂಡು ಅಖಾಡಕ್ಕಿಳಿದಿದ್ದಾರೆ. ಸಕಲಕಲಾ ವಲ್ಲಭ ಭರಪೂರ ಕಾಮಿಡಿ ಸಬ್ಜೆಕ್ಟ್ ಹೊಂದಿರೋ ಚಿತ್ರ. ನೀನಾಸಂ ಸತೀಶ್ ಅಭಿನಯದ ಚಂಬಲ್ ಚಿತ್ರ ಗೆಲ್ಲುತ್ತಲೇ ಜೇಕಬ್ ಸಕಲಕಲಾವಲ್ಲಭ ಕಥೆಗೆ ಕಾವು ಕೊಡಲಾರಂಭಿಸಿದ್ದರಂತೆ. ಅದರ ನಾಯಕನ ಪಾತ್ರಕ್ಕೆ ಯಾವ ನಟ ಜೀವತುಂಬ ಬಲ್ಲ ಅಂತ ಹುಡುಕಾಟದಲ್ಲಿದ್ದ ಅವರಿಗೆ ಕಂಡಿದ್ದು ರಿಷಿ. ಈತ ಯಾವ ಥರದ ಪಾತ್ರಗಳಿಗಾದರೂ ಒಗ್ಗಿಕೊಂಡು ನಟಸಬಲ್ಲ ಪ್ರತಿಭಾವಂತ ನಟನಾದ ಕಾರಣದಿಂದಲೇ ಸಕಲ ಕಲಾ ವಲ್ಲಭನಾಗೋ ಅವಕಾಶ ಗಿಟ್ಟಿಸಿಕೊಂಡಿದ್ದಾರಂತೆ.

    ಇನ್ನುಳಿದಂತೆ ರೆಬಾ ಮೋನಿಕಾ ರಿಷಿಗೆ ಸಾಥಿಯಾಗಿದ್ದಾರೆ. ಅಚ್ಯುತ್ ಕುಮಾರ್, ಸಾಯಿಕುಮಾರ್ ಮುಂತಾದ ಘಟಾನುಘಟಿ ತಾರೆಯರ ದಂಡೇ ಈ ತಾರಾಗಣದಲ್ಲಿದೆ. ಒಂದು ಸಣ್ಣ ಪಾತ್ರ ಸುಮ್ಮನೆ ಹಾದು ಹೋದರೂ ಅದು ನೋಡುಗರ ಮನದಲ್ಲಿ ಅಚ್ಚೊತ್ತುವಂತೆ ಕಟ್ಟಿ ಕೊಡೋದು ಜೇಕಬ್ ವರ್ಗೀಸ್ ಅವರ ಪ್ರಸಿದ್ಧ ಶೈಲಿ. ಈ ಬಾರಿ ಅವರು ಕಾಮಿಡಿ ಜಾನರಿಗೆ ಶಿಫ್ಟ್ ಆಗಿದ್ದರೂ ಕೂಡಾ ದೃಶ್ಯ ಕಟ್ಟುವ ಕಲಾವಂತಿಕೆಯನ್ನು ಈ ಹಿಂದಿನಂತೆಯೇ ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ಸಕಲ ಕಲಾ ವಲ್ಲಭನ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ನವೆಂಬರ್ ಕಡೇ ಘಳಿಗೆಯಲ್ಲಿ ಸಕ ಕಲಾ ವಲ್ಲಭನ ದರ್ಶನ ಭಾಗ್ಯ ಸಿಗಲಿದೆ.

  • ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

    ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

    ಬೆಂಗಳೂರು: ಕನ್ನಡದಲ್ಲೀಗ ಮಲ್ಟಿ ಸ್ಟಾರ್ ಚಿತ್ರಗಳ ಜಮಾನ ಶುರುವಾಗಿದೆ. ಈ ಹೊತ್ತಿನಲ್ಲಿಯೇ ನಿಧಾನಕ್ಕೆ ತಮ್ಮದೇ ಆದ ಶೈಲಿಯಲ್ಲಿ ಹೆಸರಾಗುತ್ತಿರುವ ನಟರನ್ನು ಒಂದೇ ಚಿತ್ರದಲ್ಲಿ ನಟಿಸುವಂತೆ ಮಾಡೋ ಪ್ರಯತ್ನಕ್ಕೂ ಶ್ರೀಕಾರ ಬಿದ್ದಿದೆ. ಇಂಥಾದ್ದೊಂದು ನವೀನ ಪ್ರಯತ್ನಕ್ಕೆ ರಾಮನ ಅವತಾರ ಚಿತ್ರವೇ ಮೊದಲ ಹೆಜ್ಜೆಯಿಟ್ಟಿದೆ.

    ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇದೀಗ ಕವಲು ದಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಅವರು ರಾಮನ ಅವತಾರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಈ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಏಕಾಏಕಿ ಟೀಸರ್ ಬಿಡುಗಡೆ ಮಾಡಿ ಸರ್ ಪ್ರೈಸ್ ಕೊಟ್ಟಿದೆ. ರಿಷಿ ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಮತ್ತೆರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರ. ಆದರೆ ಇದರಲ್ಲಿ ಮಾಮೂಲಿ ಜಾಡನ್ನು ಮೀರಿದ ಶೈಲಿಯ ಹಾಸ್ಯ ಇರಲಿದೆಯಂತೆ. ಅಂತೂ ದೀಪಾವಳಿಯಂದು ಹೊರ ಬಂದಿರೋ ಈ ಟೀಸರ್ ಮೂಲಕ ರಿಷಿ, ಡ್ಯಾನಿಶ್ ಮತ್ತು ರಾಜ್ ಶೆಟ್ಟಿ ಸೇರಿದಂತೆ ಮೂವರು ಒಂದೇ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮತ್ತೊಬ್ಬ ಸ್ಯಾಂಡಲ್‍ವುಡ್ ನಟನ ಮೇಲೆ ಎಫ್‍ಐಆರ್ ದಾಖಲು

    ಮತ್ತೊಬ್ಬ ಸ್ಯಾಂಡಲ್‍ವುಡ್ ನಟನ ಮೇಲೆ ಎಫ್‍ಐಆರ್ ದಾಖಲು

    ಬೆಂಗಳೂರು: ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇರೆಗೆ ಅಪರೇಷನ್ ಅಲುಮೇಲಮ್ಮ ಖ್ಯಾತಿಯ ನಟ ರಿಷಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಟ ರಿಷಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದೇ ತಿಂಗಳ 11 ರಂದು ಪೊಲೀಸರು ಎನ್‍ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ಎಫ್‍ಐಆರ್ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

    ಏನಿದು ಪ್ರಕರಣ?
    ನಟ ರಿಷಿ ವಿರುದ್ಧ ಅವರ ಚಿಕ್ಕಮ್ಮ ಶಾಲಿನಿ ಆಸ್ತಿಗಾಗಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಟ ರಿಷಿ ಬಸವೇಶ್ವರ ನಗರದಲ್ಲಿರುವ ತಮ್ಮ ತಾತನ ಮನೆಯಲ್ಲಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದಾರೆ. ಅಕ್ಟೋಬರ್ 10ರಂದು ದೂರುದಾರರಾದ ಶಾಲಿನಿ ಗೋಪಿನಾಥ್ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿರುವ ತಮ್ಮ ತಂದೆಯನ್ನು ನೋಡೆಲೆಂದು ಮನೆಗೆ ಹೋಗಿದ್ದರು.

    ಈ ವೇಳೆ  ರಿಷಿ ಮತ್ತು ಅವನ ಪೋಷಕರು, ಆಸ್ತಿ ವಿಚಾರವಾಗಿ ಜಗಳ ಮಾಡಿದ್ದಾರೆ. ಅಷ್ಟೇ ಅಲ್ಲದೇ ಖಾಲಿ ಪೇಪರ್ ಗಳ ಮೇಲೆ ಸಹಿ ಹಾಕು, ಈ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಟ್ಟರೆ ಮಾತ್ರ ಮನೆಯೊಳಗೆ ಪ್ರವೇಶ ನೀಡುವುದಾಗಿ ಬೆದರಿಸಿದ್ದರು ಎಂದು ಚಿಕ್ಕಮ್ಮ ಆರೋಪಿಸಿದ್ದರು.

    ರಿಷಿ ನನ್ನ ಮೇಲೆ ಹಲ್ಲೆ ಮಾಡಲು ಮುಂದದಾಗ ನಾನು ಆತಂಕಗೊಂಡು ಜೋರಾಗಿ ಕೂಗಿಕೊಂಡೆ. ಈ ವೇಳೆ ರಿಷಿ ತಾಯಿ ಅನಲಾ ನನ್ನ ಬಾಯಿಗೆ ಬಟ್ಟೆ ತುರುಕಿದ್ದರು. ಆಗ ರಿಷಿ ಮಾರಕಾಸ್ತ್ರ ತೋರಿಸಿ ಹೆದರಿಸಿ ಖಾಲಿ ಪೇಪರ್ ಗೆ ಸಹಿ ಮಾಡುವಂತೆ ಒತ್ತಾಯಿಸಿದರನು. ಅಷ್ಟೇ ಅಲ್ಲದೇ ಪ್ರಾಣಬೆದರಿಕೆ ಹಾಕಿದ್ದರು ಎಂದು ಶಾಲಿನಿ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಆರೋಪ ಸುಳ್ಳು:
    ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಷಿ, ಚಿಕ್ಕಮ್ಮ ಮಾಡುತ್ತಿರುವ ಆರೋಪವೆಲ್ಲ ಸುಳ್ಳು ಎಂದು ತಳ್ಳಿ ಹಾಕಿದ್ದರು. ಮೊದಲಿನಿಂದಲೂ ಚಿಕ್ಕಮ್ಮ ತಾತನ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದರು. ಆದರೆ ಈಗ ತಾತ ಸ್ಟ್ರೋಕ್ ಆಗಿ ಹಾಸಿಗೆ ಹಿಡಿದಿದ್ದರಿಂದ ಅವರಿಗೆ ಹಣ ಕೊಡಲು ಯಾರು ಇಲ್ಲ. ಆದ್ದರಿಂದ ನಾನು ನಟ, ಹಣ ಚೆನ್ನಾಗಿ ಸಿಗಬಹುದು ಎಂಬ ಕಾರಣಕ್ಕೆ ನನ್ನ ಹಿಂದೆ ಬಿದ್ದಿದ್ದಾರೆ. ನಾನು ಹಣ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ನನ್ನ ವಿರುದ್ಧ ಚಿಕ್ಕಮ್ಮ ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ಏನೂ ಕೆಲಸವಿಲ್ಲ, ಅವರು ಬಹಳ ಕ್ರಿಮಿನಲ್ ಬುದ್ಧಿಯವರು ಎಂದು ರಿಷಿ ದೂರಿದ್ದರು.

    ಸದ್ಯಕ್ಕೆ ನಟ ರಿಷಿ ಪುನಿತ್ ರಾಜ್‍ಕುಮಾರ್ ನಿರ್ಮಿಸುತ್ತಿರುವ “ಕವಲುದಾರಿ’ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತಮಿಳು ನಟ ಧನುಷ್ ನಿರ್ಮಾಣದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv