Tag: rickshaw driver

  • ಕುಂಟ ಅಂತ ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆಗೈದ ರಿಕ್ಷಾ ಚಾಲಕ

    ಕುಂಟ ಅಂತ ರೇಗಿಸಿದ್ದಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆಗೈದ ರಿಕ್ಷಾ ಚಾಲಕ

    ಮುಂಬೈ: ಕುಂಟ ಎಂದು ರೇಗಿಸಿದ್ದಕ್ಕೆ 32 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ರಿಕ್ಷಾ ಚಾಲಕ ಹತ್ಯೆಗೈದಿರುವ ಘಟನೆ ಮುಂಬೈನ (Mumbai) ಗೋರೆಗಾಂವ್‍ನಲ್ಲಿ (Goregaon) ನಡೆದಿದೆ.

    ಗೋರೆಗಾಂವ್ (ಪೂರ್ವ)ದ ಮುಲುಂಡ್ ಲಿಂಕ್ ರಸ್ತೆಯ ಹನುಮಾನ್ ಟೆಕ್ಡಿಯಲ್ಲಿರುವ ಚೈನೀಸ್ ಫುಡ್ ಹೋಟೆಲ್ ಎದುರಿಗೆ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಮುಖೇಶ್ ಝಂಜರೆ (32) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಮುಖೇಶ್ ಝಂಜರೆ ಕುಳಿದ್ದ ವೇಳೆ ಆಹಾರ ತೆಗೆದುಕೊಂಡು ಹೋಗಲು 45 ವರ್ಷದ ಆರೋಪಿ ರಿಕ್ಷಾ ಚಾಲಕ ತೇಜ್ ಬಹದ್ದೂರ್ ಮೋರಿಯಾ ಹೋಟೆಲ್‍ಗೆ ಬಂದಿದ್ದನು. ಅಪಘಾತದಿಂದಾಗಿ ಬಲಗಾಲು ಅಂಗವೈಕಲ್ಯ ಹೊಂದಿದ್ದ ತೇಜ್ ಬಹದ್ದೂರ್ ಕುಂಟುತ್ತಾ ನಡೆಯುತ್ತಿದ್ದರು. ಇದನ್ನು ಕಂಡು ಮುಖೇಶ್ ಝಂಜರೆ ಚುಡಾಯಿಸಿ, ನಿಂದಿಸಲು ಆರಂಭಿಸಿದ್ದಾನೆ. ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ನಂತರ ರೊಚ್ಚಿಗೆದ್ದ ಮೋರಿಯಾ ಜೇಬಿನಿಂದ ಚಾಕುವನ್ನು ತೆಗೆದು, ಮುಖೇಶ್ ಎದೆ, ಹೊಟ್ಟೆ, ಕಿವಿ ಮತ್ತು ಕಣ್ಣಿನ ಮೇಲೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಂತರ ಘಟನೆಯಲ್ಲಿ ಗಾಯಗೊಂಡ ಮುಖೇಶ್ ಅವರನ್ನು ಟ್ರಾಮಾ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಬುಧವಾರ ಮಧ್ಯರಾತ್ರಿ 12.35ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಇದೀಗ ಪೊಲೀಸರು ಆರೋಪಿ ತೇಜ್ ಬಹದ್ದೂರ್ ಮೋರಿಯಾ ಅನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಕಾಶ ಏರ್‌ಗೆ ಬಡಿದ ಹಕ್ಕಿ – ತಪ್ಪಿದ ದುರಂತ, ವಿಮಾನದ ಮೂತಿಗೆ ಹಾನಿ

    Live Tv
    [brid partner=56869869 player=32851 video=960834 autoplay=true]

  • ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಕಾರಿಗೆ ಡಿಕ್ಕಿ ಹೊಡೆದಿದ್ದಕ್ಕೆ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಕಪಾಳಮೋಕ್ಷ ಮಾಡಿದ್ಲು

    ಲಕ್ನೋ: ಇ ರಿಕ್ಷಾ ಚಾಲಕನ ಕಾಲರ್ ಎಳೆದಾಡಿ ಮಹಿಳೆಯೊಬ್ಬಳು ನಡು ರಸ್ತೆಯಲ್ಲಿಯೇ ಕಪಾಳಮೋಕ್ಷ ಮಾಡಿ ರಂಪಾಟ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ನೋಯ್ಡಾದ 2ನೇ ಹಂತದ, ಸೆಕ್ಟರ್ 110 ರ ಮಾರುಕಟ್ಟೆಯಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮಹಿಳೆಯ ಕಾರಿಗೆ ಈ ರಿಕ್ಷಾದ ಢಿಕ್ಕಿ ಹೊಡೆದ ಹಿನ್ನೆಲೆ ಗಲಾಟೆ ಪ್ರಾರಂಭವಾಯಿತು. ಇದರಿಂದ ಕೋಪಗೊಂಡ ಮಹಿಳೆ ಇ-ರಿಕ್ಷಾ ಚಾಲಕನ ಕಾಲರ್ ಅನ್ನು ನಡು ರಸ್ತೆಯಲ್ಲಿ ಎಳೆದಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಪಾಳ ಮೋಕ್ಷ ಮಾಡಿದ್ದಾಳೆ. ಈ ವೇಳೆ ಸ್ಥಳದಲ್ಲಿಯೇ ಸ್ಥಳೀಯರಿದ್ದರೂ, ಜಗಳ ಬಿಡಿಸಲು ಯಾರು ಮಧ್ಯಪ್ರವೇಶಿಸಲಿಲ್ಲ. ಇದನ್ನೂ ಓದಿ: ಕ್ಷಣಾರ್ಧದಲ್ಲಿ ಮಗನನ್ನು ಹಾವಿನಿಂದ ರಕ್ಷಿಸಿದ ತಾಯಿ – ವೀಡಿಯೋ ವೈರಲ್

    ಈ ವೀಡಿಯೋ ವೈರಲ್ ಆದ ನಂತರ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಯ್ಡಾ ಪೊಲೀಸರಿಗೆ ಆಗ್ರಹಿಸಲಾಗಿತ್ತು. ಇದೀಗ ಸಂತ್ರಸ್ತ ಮಿಥುನ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಕಿರಣ್ ಸಿಂಗ್ ಅನ್ನು ಬಂಧಿಸಿದ್ದಾರೆ. ಆರೋಪಿ ಶ್ರಮಿಕ್ ಕುಂಜ್ ನಿವಾಸಿಯಾಗಿದ್ದರೆ, ಮಿಥುನ್ ಅವರು ಸೆಕ್ಟರ್ 82ರ ಪಾಕೆಟ್-2 ನಲ್ಲಿ ವಾಸಿಸುತ್ತಿದ್ದಾರೆ.

    ಸದ್ಯ ಈ ಪ್ರಕರಣ ಸಂಬಂಧ ಟ್ವೀಟ್ ಮೂಲಕ ಮಾಹಿತಿ ನೀಡಿರುವ ನೋಯ್ಡಾ ಪೊಲೀಸರು, ಇ-ರಿಕ್ಷಾ ಚಾಲಕನ ದೂರಿನ ಮೇರೆಗೆ ಮಹಿಳೆಯನ್ನು ಠಾಣೆಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಾಲ್ನಡಿಗೆಯ ಟಿಪ್ಪು ಫ್ಲೆಕ್ಸ್ ಧ್ವಂಸ- ಪುನೀತ್ ಕೆರೆಹಳ್ಳಿ, ಬೆಂಬಲಿಗರಿಂದ ಕೃತ್ಯ

    Live Tv
    [brid partner=56869869 player=32851 video=960834 autoplay=true]