Tag: Revanth Reddy

  • ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್‌ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ

    ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್‌ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ

    – ಸೋದರ ಸಂಬಂಧಿಗಳಿಂದ ಕುಟಂಬ ನಾಶಕ್ಕೆ ಯತ್ನ ಅಂತ ಕವಿತಾ ಆರೋಪ

    ಹೈದರಾಬಾದ್‌: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಅಮಾನತುಗೊಂಡ ಮಾಜಿ ಸಿಎಂ ಕೆಸಿಆರ್‌ ಪುತ್ರಿ ಕೆ. ಕವಿತಾ (K Kavitha) ಮರುದಿನವೇ ಬಿಆರ್‌ಎಸ್‌ ಪಕ್ಷ (BRS Party) ತೊರೆದಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ನ ಸದಸ್ಯತ್ವಕ್ಕೆ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.

    ಕೆಸಿಆರ್ ವಿರುದ್ಧದ ಫೆಡರಲ್ ತನಿಖೆಗೆ ತಮ್ಮ ಸೋದರಸಂಬಂಧಿ, ಹಿರಿಯ ಬಿಆರ್‌ಎಸ್ ನಾಯಕ ಟಿ.ಹರೀಶ್ ರಾವ್ ಅವರನ್ನು ಕವಿತಾ ಸಾರ್ವಜನಿಕವಾಗಿ ದೂಷಿಸಿದ್ದರು. ತೆಲಂಗಾಣದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕಾಲೇಶ್ವರಂ ಯೋಜನೆಗೆ ಸಂಬಂಧಿಸಿದ ಅಕ್ರಮಗಳ ತನಿಖೆಯನ್ನು ಸಿಬಿಐಗೆ (CBI) ವಹಿಸಿದ ಬೆನ್ನಲ್ಲೇ ಈ ಆರೋಪ ಮಾಡಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಅವರನ್ನ ಮಂಗಳವಾರ (ಸೆ.2) ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: 2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್‌, ಅಫ್ಘಾನ್‌, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ

    ಬಹಳ ನೋವಾಗಿದೆ
    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ. ಕವಿತಾ ಅವರು, ಬಿಆರ್‌ಎಸ್‌ ಪಕ್ಷದಿಂದ ನನ್ನನ್ನ ಇದ್ದಕ್ಕಿದ್ದಂತೆ ಅಮಾನತುಗೊಳಿಸಿರುವುದು ಬಹಳ ನೋವಿನ ಸಂಗತಿ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದ ಜೊತೆಗೆ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಕೆ. ಚಂದ್ರಶೇಖರ್‌ ರಾವ್‌ ಅವರಿಗೆ ಕಳುಸುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕ ಒತ್ತಡದ ನಡುವೆ ಭಾರತಕ್ಕೆ ರಷ್ಯಾ ಗಿಫ್ಟ್‌; ಇನ್ನಷ್ಟು S-400 ವಾಯು ರಕ್ಷಣಾ ವ್ಯವಸ್ಥೆ ಪೂರೈಕೆಗೆ ನಿರ್ಧಾರ

    ಮುಂದುವರಿದು.. ನಾನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಕೆಲಸ ಮಾಡಿದೆ ಜೊತೆಗೆ ಬಿಆರ್‌ಎಸ್ ಧ್ವಜ ಧರಿಸಿ ಕಾಂಗ್ರೆಸ್ ವಿರುದ್ಧ ಹೋರಾಟದಲ್ಲೂ ಕೆಲಸ ಮಾಡಿದೆ. ಇದು ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತೆ ಅಂತ ನನಗೆ ಅರ್ಥವಾಗುತ್ತಿಲ್ಲ. ನನಗೆ ಯಾವುದೇ ಯಾವುದೇ ಹುದ್ದೆ ಮೇಲೆ ದುರಾಸೆ ಇಲ್ಲ, ಬೇರೆ ಯಾವುದೇ ಪಕ್ಷದ ಜೊತೆಗೂ ಹೋಗುತ್ತಿಲ್ಲ. ತೆಲಂಗಾಣ ಜಾಗೃತಿ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಇದೇ ವೇಳೆ ಸೋದರಸಂಬಂಧಿಯೂ ಆಗಿರುವ ಬಿಆರ್‌ಎಸ್‌ನ ಹಿರಿಯ ನಾಯಕ ಟಿ ಹರೀಶ್ ರಾವ್ ಅವರ ಮೇಲೆ ಇನ್ನಷ್ಟು ಆರೋಪ ಮಾಡಿದರು. ಕಾಂಗ್ರೆಸ್‌ ಸಿಎಂ ರೇವಂತ್‌ ರೆಡ್ಡಿ (Revanth Reddy) ಹಾಗೂ ಹರೀಶ್‌ ರಾವ್‌ರಿಂದ ಕೆಎಸ್‌ಆರ್‌ ಕುಟುಂಬ ನಾಶಪಡಿಸಲು ಯತ್ನಿಸಿದ್ದಾರೆ. ಅದಕ್ಕಾಗಿ ನನ್ನ ತಂದೆ ಕೆಸಿಆರ್ ಮತ್ತು ಅವರ ಸಹೋದರ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರನ್ನ ಗುರಿಯಾಗಿಸಲು ಸಂಚು ರೂಪಿಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ರೇವಂತ್‌ ರೆಡ್ಡಿ ಅವರು ನನ್ನ ಕುಟುಂಬದ ಕೆಟಿಆರ್ ಮತ್ತು ಕೆಸಿಆರ್ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದ್ರು. ಆದರೆ ಹರೀಶ್ ರಾವ್ ವಿರುದ್ಧ ದಾಖಲಿಸಲಿಲ್ಲ. ಕಾಲೇಶ್ವರಂ (ನೀರಾವರಿ) ಯೋಜನೆ ಶುರುವಾದಾಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದರು. ಆದ್ರೂ ರೇವಂತ್ ರೆಡ್ಡಿ ಅವರ ವಿರುದ್ಧ ಮಾತನಾಡಲಿಲ್ಲ, ಇದು ಸಂಚು ಅನ್ನೋದು ಸ್ಪಷ್ಟವಾಗಿ ತಿಳಿಯುತ್ತದೆ. ಹರೀಶ್ ರಾವ್ ಮತ್ತು ಸಂತೋಷ್ ರಾವ್ ನಮ್ಮ ಕುಟುಂಬ ಮತ್ತು ಪಕ್ಷವನ್ನ ನಾಶಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

  • ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

    ಸಿಎಂ ರೇವಂತ್ ರೆಡ್ಡಿ ಕೈಯಿಂದ ಉತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಅಲ್ಲು ಅರ್ಜುನ್‌

    – ಅರೆಸ್ಟ್ ಮಾಡಿಸಿದ ವ್ಯಕ್ತಿಯಿಂದಲೇ ಪ್ರಶಸ್ತಿ ಸ್ವೀಕಾರ ಅಂತ ಚರ್ಚೆ!

    ಪುಷ್ಪ -2 (Pushpa-2) ಚಿತ್ರದ ಉತ್ತಮ ಅಭಿನಯಕ್ಕೆ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸಿಎಂ ರೇವಂತ್‌ ರೆಡ್ಡಿಯವರು ಅಲ್ಲು ಅರ್ಜುನ್‌ ಅವರಿಗೆ ಈ ಪ್ರಶಸ್ತಿಯನ್ನು ನೀಡಿದ್ದಾರೆ.

    ಪುಷ್ಪ -2 ಪ್ರಪಂಚದಾದ್ಯಂತ ಭರ್ಜರಿ ಯಶಸ್ಸು ಖಂಡಿದೆ. ಆದರೆ ಈ ಸಿನಿಮಾ ರಿಲೀಸ್ ಆರಂಭದಲ್ಲಿ ನಟ ಅಲ್ಲು ಅರ್ಜುನ್ ಜೈಲುವಾಸ ಅನುಭವಿಸಬೇಕಾದ ಪರಿಸ್ಥಿತಿ ಕೂಡ ನಿರ್ಮಾಣ ಆಗಿತ್ತು.‌ ಕಾರಣ ತೆಲಂಗಾಣದ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ಕೊಟ್ಟಾಗ ಕಾಲ್ತುಳಿತದಿಂದಾಗಿ ಸಾವಾಗಿತ್ತು. ಈ ವೇಳೆ, ತೆಲಂಗಾಣ ಸರ್ಕಾರ ಅಲ್ಲು ಅರ್ಜುನ್ ಅವರನ್ನ ಬಂಧಿಸಿ ಚಂಚಲಗುಡ್ಡ ಜೈಲಿನಲ್ಲಿ ಇರಿಸಿತ್ತು. ಈಗ ನಟ ಅಲ್ಲು ಅರ್ಜುನ್‌ಗೆ ಉತ್ತಮ ನಟ ಪ್ರಶಸ್ತಿಯನ್ನು ತೆಲಂಗಾಣ ಸರ್ಕಾರವೇ ನೀಡಿದೆ.‌

    2024 – 25ನೇ ಸಾಲಿನ ಗದ್ದರ್ ಅವಾರ್ಡ್‌ಗಳನ್ನು ತೆಲಂಗಾಣ ಸರ್ಕಾರ ಪ್ರಕಟ ಮಾಡಿದ್ದು, ಉತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್ ಪಾಲಾಗಿದೆ. ಪುಷ್ಪ 2 ಚಿತ್ರದ ನಟನೆಗಾಗಿ ಉತ್ತಮ ನಟ ಪ್ರಶಸ್ತಿ ಲಭಿಸಿದೆ. ಅರೆಸ್ಟ್ ಮಾಡಿಸಿದ್ದ ತೆಲಂಗಾಣ ಸರ್ಕಾರವೇ ಅಲ್ಲು ಅರ್ಜುನ್‌ಗೆ ಉತ್ತಮ ಪ್ರಶಸ್ತಿ ನೀಡಿದೆ ಅಂತ ಈಗ ಚರ್ಚೆ ಆರಂಭವಾಗಿದೆ.

    ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಂದಲೇ (Revanth Reddy) ಪ್ರಶಸ್ತಿ ಸ್ವೀಕಾರ ಆಗಿರೋದಕ್ಕೆ ಅಭಿಮಾನಿಗಳು ಟ್ರೋಲ್ ಮಾಡ್ತಾ ಇದ್ದಾರೆ. ಪುಷ್ಪ-2 ಚಿತ್ರದ ಆಡಿಯೋ ರಿಲೀಸ್ ವೇಳೆ ರೇವಂತ್ ರೆಡ್ಡಿ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ ರೇವಂತ್ ರೆಡ್ಡಿ ಅರೆಸ್ಟ್ ಮಾಡಿಸಿದ್ದರು. ಅದೇ ರೇವಂತ್ ರೆಡ್ಡಿ ಇಂದು ಉತ್ತಮ ಪ್ರಶಸ್ತಿಯನ್ನು ಅಲ್ಲು ಅರ್ಜುನ್ ಗೆ ವಿತರಿಸಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ ಆಗ್ತಿದೆ‌.

  • PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    PublicTV Explainer: ‘ಕೆಜಿಎಫ್‌’ಗೆ ಕಂಟಕ – ಸರ್ಕಾರ V/S ವಿದ್ಯಾರ್ಥಿಗಳು; ಏನಿದು ವಿವಾದ?

    ದೇಶದಲ್ಲಿ ಈಗ ‘ಕೆಜಿಎಫ್‌’ದೇ ಸುದ್ದಿ. ಕೆಜಿಎಫ್‌ (KGF) ಎಂದರೆ ಕೋಲಾರದ ಚಿನ್ನದ ಗಣಿಯಲ್ಲ. ಅಥವಾ ಭಾರತ ಸಿನಿಮಾರಂಗದಲ್ಲಿ ಭಾರಿ ಸಂಚಲನ ಮೂಡಿಸಿದ ಯಶ್‌ ನಟನೆಯ ಸಿನಿಮಾವೂ ಅಲ್ಲ. ಇಲ್ಲಿ ತಿಳಿಸಲು ಹೊರಟಿರುವ ಕೆಜಿಎಫ್‌ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಕೆಜಿಎಫ್‌ ಅಂದ್ರೆ ಬೇರೇನು ಅಲ್ಲ. ಹೈದರಾಬಾದ್‌ನಲ್ಲಿರುವ ಕಾಂಚಾ ಗಚ್ಚಿಬೌಲಿ ಫಾರೆಸ್ಟ್‌ (Kancha Gachibowli Forest). ನೂರಾರು ಎಕರೆ ಹಸಿರು ಹೊದ್ದು ನಳನಳಿಸುತ್ತಿರುವ ಈ ಕಾಡಿನ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ.

    ಗ್ರಾಮೀಣ ಭಾಗದ ಬಡವರು ಮತ್ತು ಬುಡಕಟ್ಟು ಜನಾಂಗದ ಜೀವನೋಪಾಯಕ್ಕೆ ಪೂರಕವಾದ, ಜಾಗತಿಕ ತಾಪಮಾನ ಏರಿಕೆ ತಗ್ಗಿಸುವುದು, ಫಲವತ್ತಾದ ಮಣ್ಣನ್ನು ಸಂರಕ್ಷಿಸುವುದು, ಅಳಿವಿನಂಚಿನ ವನ್ಯಜೀವಿಗಳನ್ನು ಸಂರಕ್ಷಿಸುವಲ್ಲಿ ಕಾಡುಗಳು ಪ್ರಮುಖ ಪಾತ್ರವಹಿಸುತ್ತವೆ. ಹಸಿರು ಜೀವಸಂಕುಲದ ಉಸಿರು. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಎಗ್ಗಿಲ್ಲದೇ ನಡೆಯುತ್ತಿದೆ. ಈಗ ಅಂಥದ್ದೇ ಸನ್ನಿವೇಶವೊಂದಕ್ಕೆ ಹೈದರಾಬಾದ್‌ ಸಾಕ್ಷಿಯಾಗಿದೆ. ನೂರಾರು ಎಕರೆ ಅರಣ್ಯ ಪ್ರದೇಶ ಸರ್ಕಾರದ ಕಣ್ಣಿಗೆ ಬಿದ್ದಿದೆ. ಆದರೆ, ಅರಣ್ಯ ಸಂರಕ್ಷಣೆಗೆ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿರುವುದು ಭರವಸೆ ಮೂಡಿಸಿದೆ. ತೆಲಂಗಾಣದ ಅರಣ್ಯ ಪ್ರದೇಶವು 27,292 ಚದರ ಕಿ.ಮೀ.. ಒಟ್ಟು ಭೌಗೋಳಿಕ ಪ್ರದೇಶದ ಸರಿಸುಮಾರು ಶೇ.24.35 ರಷ್ಟಿದೆ.

    ಏನಿದು ಕಾಂಚಾ ಗಚ್ಚಿಬೌಲಿ ಅರಣ್ಯ ಪ್ರದೇಶ ವಿವಾದ? ಸರ್ಕಾರದ ಕಣ್ಣು ಬಿದ್ದಿರೋದ್ಯಾಕೆ? ವಿದ್ಯಾರ್ಥಿಗಳ ವಿರೋಧವೇಕೆ? ಹೋರಾಟದ ಹಿನ್ನೆಲೆ ಏನು? ಸುಪ್ರೀಂ ಕೋರ್ಟ್‌ ತೀರ್ಪೇನು? ಮೊದಲಾದ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಹೈದರಾಬಾದ್‌ ‘ನಗರ ಕಾಡು’ ಕಾಂಚಾ ಗಚ್ಚಿಬೌಲಿ
    ಕಾಂಚಾ ಗಚ್ಚಿಬೌಲಿ ಒಂದು ವಿಶೇಷ ಕಾಡು. ಹೈದರಾಬಾದ್‌ನ ನಗರ ಕಾಡು ಎಂದೇ ಇದು ಪ್ರಸಿದ್ಧಿ. ಗಿಜಿಗುಡುವ ನಗರದ ಹೃದಯಭಾಗದಲ್ಲಿದೆ. ಈ ಅರಣ್ಯದಲ್ಲಿ ಹಕ್ಕಿಗಳ ನಿನಾದ, ಪ್ರಶಾಂತ ಕಾಡು ನಿಜಕ್ಕೂ ಎಂಥವರಿಗೂ ಇಷ್ಟವಾಗುತ್ತದೆ. ಹೈದರಾಬಾದ್ ವಿಶ್ವವಿದ್ಯಾನಿಲಯದ (Hyderabad University) ಪಕ್ಕದಲ್ಲೇ ಇರುವ ಕಾಂಚಾ ಗಚ್ಚಿಬೌಲಿ ಅರಣ್ಯವು ಶ್ರೀಮಂತ ಜೀವವೈವಿಧ್ಯತೆ, ಶತಮಾನಗಳ ಹಳೆಯ ಮರಗಳು ಮತ್ತು ಸ್ತಬ್ಧ ಹಾದಿಗಳಿಗೆ ಹೆಸರುವಾಸಿಯಾದ ಪ್ರಶಾಂತ ಹಸಿರು ವಿಸ್ತಾರವನ್ನು ಹೊಂದಿದೆ. ದಶಕಗಳಿಂದ ಈ ಅರಣ್ಯವು ವನ್ಯಜೀವಿಗಳಿಗೆ ಅಭಯಾರಣ್ಯ ಮಾತ್ರವಲ್ಲದೆ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಬದುಕಿನ ಪಾಠದ ತಾಣ. ಹೈದರಾಬಾದ್‌ ವಿವಿ ಕ್ಯಾಂಪಸ್‌ನ ಪಕ್ಕದ ದೊಡ್ಡ ಪ್ರದೇಶದಲ್ಲಿ ಹರಡಿರುವ ಈ ಅರಣ್ಯ ಪ್ರದೇಶವು ರೋಮಾಂಚಕ ಪರಿಸರ ವ್ಯವಸ್ಥೆಯಾಗಿದೆ. ಕಾಂಕ್ರಿಟ್‌ ಕಾಡಾಗಿ ಬೆಳೆಯುತ್ತಿರುವ ಹೈದರಾಬಾದ್‌ನ ಮಧ್ಯೆ ಸಿಲುಕಿ ಕಾಂಚಾ ಗಚ್ಚಿಬೌಲಿ ಅರಣ್ಯ ವ್ಯತಿರಿಕ್ತ ಪರಿಣಾಮ ಎದುರಿಸುತ್ತಿದೆ. ಶತಮಾನದ ಹಳೆಯ ಮರಗಳು, ನೈಸರ್ಗಿಕ ಹುಲ್ಲುಗಾವಲು ಅಸ್ತವ್ಯಸ್ತವಾಗಿದೆ.

    ಜೀವವೈವಿಧ್ಯತೆಯ ಸಮೃದ್ಧಿ
    700 ಕ್ಕೂ ಹೆಚ್ಚು ಜಾತಿಯ ಹೂಬಿಡುವ ಸಸ್ಯಗಳು ಇಲ್ಲಿವೆ. ಸೂಕ್ಷ್ಮ ಆರ್ಕಿಡ್‌ಗಳಿಂದ ಹಿಡಿದು ನಳನಳಿಸುವ ಬಗೆಬಗೆಯ ಹೂವುಗಳ ವರೆಗೆ ಪ್ರತಿ ಋತುವಿನಲ್ಲಿ ಕಾಡು ಬಣ್ಣದೊಂದಿಗೆ ಜೀವಂತವಾಗಿದೆ. ನೀಲಕಂಠ, ತೆಲಂಗಾಣದ ನೀಲಿ ರಾಜ್ಯ ಪಕ್ಷಿ ಮತ್ತು ಇಂಪಾಗಿ ಕೂಗುವ ಓರಿಯಂಟಲ್ ಸ್ಕೈಲಾರ್ಕ್ ಸೇರಿದಂತೆ ಸುಮಾರು 220 ಪ್ರಭೇದದ ಪಕ್ಷಿಗಳಿವೆ. ವಲಸೆ ಪಕ್ಷಿಗಳು ಇಲ್ಲಿ ಬಂದು ನೆಲಸುತ್ತವೆ. ಜಿಂಕೆಗಳು, ಕಾಡುಹಂದಿಗಳು ಅಥವಾ ಮುಳ್ಳುಹಂದಿಗಳಿಗೂ ಈ ಕಾಡು ಆವಾಸ ಸ್ಥಾನವಾಗಿದೆ. ವಿವಿಧ ಪ್ರಭೇದದ ಹಲ್ಲಿಗಳು, ಹಾವುಗಳು ಮತ್ತು ಉಭಯಚರಗಳಿಗೂ ಕಾಡು ನೆಲೆಯಾಗಿದೆ. ಎಲ್ಲಕ್ಕಿಂತ ವಿಶೇಷವಾಗಿ, ಹೈದರಾಬಾದ್‌ ಟ್ರೀ ಟ್ರಂಕ್‌ ಸ್ಪೈಡರ್‌ಗೆ (ಜೇಡ) ಈ ಕಾಡು ಆವಾಸ ಸ್ಥಾನ.

    ಹೈದರಾಬಾದ್‌ ‘ರಕ್ಷಾ ಕವಚ’
    ಹಲವು ವಿಶೇಷತೆ ಹೊಂದಿರುವ ಈ ಕಾಡು ಹೈದರಾಬಾದ್‌ ನಗರವನ್ನೂ ರಕ್ಷಣೆ ಮಾಡುತ್ತಿದೆ. ಇಲ್ಲಿನ ಪರಿಸರ ವ್ಯವಸ್ಥೆ ನಗರ ಪ್ರದೇಶದ ಜನತೆಗೆ ಅನುಕೂಲಕರವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ತಾಪಮಾನ ಉಂಟಾಗುವುದನ್ನು ತಡೆಗಟ್ಟುತ್ತಿದೆ. ಒಂದು ವೇಳೆ ಈ ಅರಣ್ಯ ಪ್ರದೇಶವನ್ನು ಕಳೆದುಕೊಂಡರೆ, 1.4 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಏರಿಕೆಯಾಗಬಹುದು ಎಂದು ಪರಿಸರ ತಜ್ಞರು ಅಂದಾಜಿಸಿದ್ದಾರೆ. ಹಸಿರು ಹೊದಿಕೆಯು ಗಾಳಿಯ ಗುಣಮಟ್ಟವನ್ನು ಸುಧಾರಿಸಲು, ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

    ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಾಂಚಾ ಗಚ್ಚಿಬೌಲಿಯನ್ನು ತೆರೆದ ಗಾಳಿಯ ತರಗತಿಯಾಗಿ ಬಳಸುತ್ತಾರೆ, ಕ್ಷೇತ್ರ ಸಂಶೋಧನೆ, ಜೀವವೈವಿಧ್ಯ ಮ್ಯಾಪಿಂಗ್ ಮತ್ತು ಪಕ್ಷಿ ವೀಕ್ಷಣೆ ನಡಿಗೆಗಳನ್ನು ನಡೆಸುತ್ತಾರೆ. ಸ್ಥಳೀಯ ಮರಗಳು ಮತ್ತು ಕೀಟಗಳ ಬಗ್ಗೆ ಕಲಿಯಲು ಈ ಪ್ರದೇಶದ ಶಾಲೆಗಳು ಮಕ್ಕಳನ್ನು ಹುದುಗಿಸುತ್ತವೆ. ಸ್ಥಳೀಯ ನಿವಾಸಿಗಳು ಸ್ತಬ್ಧ ಬೆಳಿಗ್ಗೆ ನಡಿಗೆ, ಪ್ರಕೃತಿ ography ಛಾಯಾಗ್ರಹಣ ಮತ್ತು ಸಮುದಾಯ ಸ್ವಚ್ -ಗೊಳಿಸುವ ಡ್ರೈವ್‌ಗಳಿಗಾಗಿ ಭೇಟಿ ನೀಡುತ್ತಾರೆ, ಅದು ಜಾಗವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ.

    ವಿವಾದ ಏನು?
    ಸುಮಾರು 400 ಎಕರೆ ಕಾಂಚಾ ಗಚಿಬೌಲಿ ಪ್ರದೇಶದ ಅರಣ್ಯದಲ್ಲಿ ಬಹು-ಮೂಲಸೌಕರ್ಯ ಮತ್ತು ಐಟಿ-ಪಾರ್ಕ್‌ಗಳ ಅಭಿವೃದ್ಧಿಗಾಗಿ ಹರಾಜು ಹಾಕಲು ತೆಲಂಗಾಣ ಸರ್ಕಾರ ಯೋಜಿಸಿದೆ. ಅದಕ್ಕಾಗಿ ಅರಣ್ಯ ಭೂಮಿ ತೆರವು ಮಾಡಲು ಮುಂದಾಗಿದೆ. ಇದಕ್ಕೆ ಹೈದರಾಬಾದ್‌ ವಿವಿ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ತೆಲಂಗಾಣ ಸರ್ಕಾರದ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೆಲಂಗಾಣದಲ್ಲಿ ಕಾಡುಗಳು ಮತ್ತು ಜೀವವೈವಿಧ್ಯತೆಯು ನೀರಾವರಿ, ರಸ್ತೆ ನಿರ್ಮಾಣ ಕಾರ್ಯಗಳು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಂದಾಗಿ ಕುಗ್ಗುತ್ತಿದೆ. ಇದನ್ನು 2014 ರಲ್ಲಿ ರಾಜ್ಯ ರಚನೆಯ ನಂತರ ಈ ಕಾರ್ಯಗಳು ನಡೆಯುತ್ತಿವೆ. ತೆಲಂಗಾಣವು ಶ್ರೀಮಂತ ಜೀವವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಇದನ್ನು ಒಂಬತ್ತು ಕೃಷಿ-ಹವಾಮಾನ ಪ್ರದೇಶಗಳಲ್ಲಿ ವಿತರಿಸಲಾಯಿತು. ರಾಜ್ಯವು ಗೋದಾವರಿ ಜಲಾನಯನ ಪ್ರದೇಶದೊಳಗೆ ದಟ್ಟವಾದ ತೇಗದ ಕಾಡುಗಳನ್ನು ಹೊಂದಿತ್ತು. ಕಾಡುಗಳನ್ನು ರಕ್ಷಿಸಲು ಮತ್ತು ಕಾಡುಗಳನ್ನು ಪುನರುತ್ಥಾನಗೊಳಿಸುವ ಇಚ್ಛಾಶಕ್ತಿಯ ಕೊರತೆಯಿಂದಾಗಿ, ತೆಲಂಗಾಣವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದೆಡೆ ಧಾರಾಕಾರ ಮಳೆಯ ಹೊಡೆದ, ಮತ್ತೊಂದು ಕಡೆ ನೀರಿನ ಕೊರತೆಯನ್ನೂ ಎದುರಿಸುತ್ತಿದೆ.

    ಕಾಂಚ ಗಚ್ಚಿಬೌಲಿ ಭೂಮಿ ಹರಾಜಿಗೆ ಮುಂದಾದ ಸರ್ಕಾರ
    ತೆಲಂಗಾಣ ಸರ್ಕಾರದಿಂದ ಹರಾಜಿಗೆ ಗುರುತಿಸಲ್ಪಟ್ಟ ಕಾಂಚ ಗಚ್ಚಿಬೌಲಿ ಭೂಮಿಯು ವಿವಿಧ ಕಾನೂನುಬದ್ಧ ಮಾಲೀಕರು ಮತ್ತು ಹಕ್ಕುದಾರರನ್ನು ಹೊಂದಿದೆ. ಆದಾಗ್ಯೂ, ಈ ಭೂಮಿಯು ಹಲವು ವರ್ಷಗಳ ಹೋರಾಟದ ಫಲವಾಗಿ ರಕ್ಷಿಸಲ್ಪಟ್ಟಿದೆ. ಜೀವವೈವಿಧ್ಯತೆ ಮತ್ತು ಹಸಿರು ಇಲ್ಲಿ ಸಮೃದ್ಧವಾಗಿದೆ. ಸರ್ವೆ ಸಂಖ್ಯೆ 25 ರೊಳಗೆ ರೇಖೆಗಳು, ಕಣಿವೆಗಳು ಮತ್ತು ಜಲಮೂಲಗಳನ್ನು ರಕ್ಷಿಸಿದ್ದರೆ, ಇದು ಪ್ರಮುಖ ಅರಣ್ಯವೂ ಆಗಬಹುದಿತ್ತು. ಇದು ಮುಸಿ ನದಿ ಜಲಾನಯನ ಪ್ರದೇಶದ ಭಾಗವಾಗಿದೆ. ನದಿ ಜಲಾನಯನ ಪ್ರದೇಶದ ಹರಿವಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತಿದೆ. ಸರ್ವೆ ಸಂಖ್ಯೆ 25 ರ 2,700 ಎಕರೆ ವಿಸ್ತೀರ್ಣದ ಈ ಭೂಮಿಯಲ್ಲಿ ಹರಾಜಿಗೆ ಗುರುತಿಸಲಾದ 400 ಎಕರೆ ಪ್ರದೇಶವೂ ಸೇರಿದೆ. ಇದು ಅಂತರ್ಜಲ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹರಾಜಾಗಲಿರುವ ಭೂಮಿಯ ಶೇ.14 ಭಾಗವು ಕಾಂಕ್ರಿಟ್ ಆಗಿ ಪರಿವರ್ತನೆಗೊಂಡರೆ, ಅಂತರ್ಜಲ ಮರುಪೂರಣ ಕಷ್ಟವಾಗುತ್ತದೆ. ಪರಿಣಾಮವಾಗಿ ಪ್ರವಾಹದ ಸಾಧ್ಯತೆಗಳು ಹೆಚ್ಚಾಗುತ್ತವೆ. ಜಲಮೂಲಗಳು, ಅಲೆಗಳ ಮಾದರಿಯ ಭೂಪ್ರದೇಶ ಮತ್ತು ನೈಸರ್ಗಿಕ ನೀರಿನ ಹರಿವಿನೊಂದಿಗೆ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವುದು ಅನುಕೂಲಕರ ಸೂಕ್ಷ್ಮ ಹವಾಮಾನವನ್ನು ಖಚಿತಪಡಿಸುತ್ತದೆ. ಒಂದು ವೇಳೆ, ಹಸಿರು ಹೊದಿಕೆ ಮತ್ತು ಜೀವವೈವಿಧ್ಯವನ್ನು ಬುಲ್ಡೋಜರ್ ಮಾಡಿದರೆ ಅದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತದೆ.

    ಅರಣ್ಯ ರಕ್ಷಣೆಗೆ 25 ವರ್ಷಗಳಿಂದ ಹೋರಾಟ
    ಸುಮಾರು ಮೂರು ದಶಕಗಳ ಹಿಂದಿನಿಂದಲೂ ಹೈದರಾಬಾದ್ ವಿಶ್ವವಿದ್ಯಾಲಯದ (UoH) ಭೂಮಿಯನ್ನು ವಿವಿಧ ಉದ್ದೇಶಗಳಿಗಾಗಿ ಪರಭಾರೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಇದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಮಿ ಸುಮಾರು 25 ವರ್ಷಗಳಿಂದ ಸುದೀರ್ಘ ಕಾನೂನು ಹೋರಾಟದ ಕೇಂದ್ರವಾಗಿದೆ. ಆದರೂ, ಈ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿವೆ. ವಿಶ್ವವಿದ್ಯಾಲಯದ ಅಧಿಕಾರಿಗಳು ಪರ್ಯಾಯವಾಗಿ ಇದಕ್ಕೆ ಸಹಕರಿಸುತ್ತಿದ್ದಾರೆ ಎಂಬ ಆರೋಪಗಳಿವೆ.

    400 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಈ ಭೂಮಿಯನ್ನು ಡೀಮ್ಡ್ ಅರಣ್ಯವೆಂದು ಪರಿಗಣಿಸಬಹುದು. ಟಿಎನ್ ಗೋದವರ್ಮನ್ ತಿರುಮುಲ್ಪಾಡ್ vs ಯೂನಿಯನ್ ಆಫ್ ಇಂಡಿಯಾ (1996) ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಅರಣ್ಯದಲ್ಲಿರುವ ಎಲ್ಲಾ ಕಂದಾಯ ಅಥವಾ ಖಾಸಗಿ ಭೂಮಿಯನ್ನು ‘ಡೀಮ್ಡ್ ಅರಣ್ಯಗಳು’ ಎಂದು ಪರಿಗಣಿಸಲಾಗುತ್ತದೆ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆ, 1980 ರಲ್ಲಿ ವ್ಯಾಖ್ಯಾನಿಸಲಾದ ಅರಣ್ಯಗಳಂತೆಯೇ ಪರಿಗಣಿಸಲಾಗುತ್ತದೆ. 2025 ರ ಮಾರ್ಚ್ 15 ರಂದು ತೆಲಂಗಾಣ ಸರ್ಕಾರವು ಅರಣ್ಯ ಭೂಮಿಯನ್ನು ಗುರುತಿಸಲು ಮತ್ತು ಏಕೀಕೃತ ಭೂ ದಾಖಲೆಯನ್ನು ತಯಾರಿಸಲು ಸಮಿತಿಯನ್ನು ರಚಿಸುವ ಆದೇಶವನ್ನು ಹೊರಡಿಸಿತು. ಸರಿಯಾದ ಭೂ ಸಮೀಕ್ಷೆಯ ನಂತರ ಈ ಸಮಿತಿಯು, ‘ಸರ್ವೆ ಸಂಖ್ಯೆ 25 ರಲ್ಲಿರುವ ಕಾಂಚ ಗಚ್ಚಿಬೌಲಿ ಭೂಮಿಯನ್ನು ಅರಣ್ಯವೆಂದು ಘೋಷಿಸಬೇಕು. ಈ ಅರಣ್ಯವು ರಾಜ್ಯದ ಜಿಡಿಪಿಗೆ ಅಸಂಖ್ಯಾತ ರೀತಿಯಲ್ಲಿ ಕೊಡುಗೆ ನೀಡಬಹುದು’ ಎಂದು ಮನವರಿಕೆ ಮಾಡಿತು.

    ವಿವಾದಕ್ಕೆ ‘ಸುಪ್ರೀಂ’ ಎಂಟ್ರಿ
    ಐಟಿ ಪಾರ್ಕ್‌ ಸ್ಥಾಪನೆಗೆ ಅರಣ್ಯ ನಾಶ ವಿರೋಧಿಸಿ ಈಚೆಗೆ ಹೈದರಾಬಾದ್‌ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರಕರಣದ ವಿವಾದಕ್ಕೆ ಎಂಟ್ರಿ ಕೊಟ್ಟ ಸುಪ್ರೀಂ ಕೋರ್ಟ್‌, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಆವರಣದ ಬಳಿಯ ತೆಲಂಗಾಣದ ಕಾಂಚ ಗಚ್ಚಿಬೌಲಿ ಅರಣ್ಯ ಪ್ರದೇಶದಲ್ಲಿ ಮರ ಕಡಿಯುವುದನ್ನು ತಡೆಹಿಡಿದು ಮಧ್ಯಂತರ ಆದೇಶ ಹೊರಡಿಸಿದೆ.

  • ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ

    – ಇನ್ನೂ ಪತ್ತೆಯಾಗಬೇಕಿವೆ 6 ಮೃತದೇಹಗಳು
    – 700 ಸಿಬ್ಬಂದಿಯಿಂದ ಕಾರ್ಯಾಚರಣೆ

    ಹೈದರಾಬಾದ್: ಫೆ.22 ರಂದು ಕುಸಿದಿದ್ದ ನಾಗರ್ಕರ್ನೂಲ್‌ನ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದಲ್ಲಿ (Srisailam Left Bank Canal) ರಕ್ಷಣಾ ತಂಡಗಳು ಮತ್ತೊಬ್ಬ ಕಾರ್ಮಿಕನ ಶವವನ್ನು ಪತ್ತೆಹಚ್ಚಿದ್ದಾರೆ. ಈ ದುರಂತದಲ್ಲಿ 8 ಕಾರ್ಮಿಕರು ಸಿಲುಕಿಕೊಂಡಿದ್ದರು.

    ಮಂಗಳವಾರ ಮುಂಜಾನೆ ರಕ್ಷಣಾ ತಂಡಗಳು ಮತ್ತೊಂದು ಮೃತದೇಹ ಸಿಲುಕಿಕೊಂಡಿರುವುದನ್ನು ಪತ್ತೆಹಚ್ಚಿವೆ. ಅದನ್ನು ಹೊರತೆಗೆಯಲು ಕೆಲಸ ನಡೆಯುತ್ತಿದೆ. ಇನ್ನೂ 6 ಮೃತದೇಹಗಳು ಪತ್ತೆಯಾಗಬೇಕಿವೆ. ಗುರುಪ್ರೀತ್ ಸಿಂಗ್‌ ಎಂಬ ಕಾರ್ಮಿಕನ ಮೃತದೇಹವನ್ನು ಮಾ.9 ರಂದು ಹೊರತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – 16 ದಿನಗಳ ಬಳಿಕ ಓರ್ವ ಕಾರ್ಮಿಕನ ಶವ ಪತ್ತೆ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಿಭಾಗಗಳು ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ 25 ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ರಕ್ಷಣಾ ತಂಡಗಳು ಕುಸಿದ ಬಂಡೆಗಳ ಅವಶೇಷಗಳು, ಸುರಂಗದ ಒಳಗಿನಿಂದ ಮಣ್ಣು, ಹೂಳು ಮತ್ತು ನೀರನ್ನು ತೆಗೆಯುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 700 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

    ಸುರಂಗದ 14 ಕಿಲೋಮೀಟರ್ ದೂರದಲ್ಲಿ ಅವಘಡ ಸಂಭವಿಸಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಅವಘಡ ನಡೆದ ಪ್ರದೇಶದ 30 ಮೀಟರ್‌ಗಳನ್ನು ಅತ್ಯಂತ ಅಪಾಯಕಾರಿ ವಲಯವೆಂದು ಗುರುತಿಸಲಾಗಿದೆ.

    ಎಸ್‌ಎಲ್‌ಬಿಸಿ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಪ್ರಗತಿಯ ಬಗ್ಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy ) ಸೋಮವಾರ ಸಭೆ ನಡೆಸಿ ಪರಿಶೀಲಿಸಿದರು. ಮೃತರ ಸಂಬಂಧಿಕರಿಗೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಇದನ್ನೂ ಓದಿ: ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ

  • ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ

    ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಟ್ಟ ತೆಲಂಗಾಣ ಸರ್ಕಾರ

    ಹೈದರಾಬಾದ್: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ತೆಲಂಗಾಣ (Telangana) ಸರ್ಕಾರವೂ ಸಹ 6 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತ್ತು.

    ತೆಲಂಗಾಣದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದರು. ಈ ವರ್ಷದ ಬಜೆಟ್ ಗಾತ್ರ ಮೊದಲ ಬಾರಿಗೆ 3 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ಇದನ್ನೂ ಓದಿ: ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್

    ಇದೀಗ ತೆಲಂಗಾಣ ಸರ್ಕಾರ ರಾಜ್ಯ ಬಜೆಟ್‌ನಲ್ಲಿ 6 ಗ್ಯಾರಂಟಿ ಯೋಜನೆಗಳಿಗೆ ಒಟ್ಟು 56,984 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದನ್ನೂ ಓದಿ: ಮಸ್ಕ್‌ ಆಫರ್‌ ತಿರಸ್ಕರಿಸಿದ್ದ ಬೈಡನ್‌ – ಬಾಹ್ಯಾಕಾಶದಲ್ಲೇ 9 ತಿಂಗಳು ಕಳೆದ ಸುನಿತಾ

    ಮಹಾಲಕ್ಷ್ಮಿ ಯೋಜನೆಗೆ 4,305 ಕೋಟಿ ರೂ., ಗೃಹ ಜ್ಯೋತಿಗೆ 2,080 ಕೋಟಿ ರೂ., ಸನ್ನಾ ಅಕ್ಕಿ ಬೋನಸ್‌ಗೆ 1,800 ಕೋಟಿ ರೂ., ರಾಜೀವ್ ಆರೋಗ್ಯ ಶ್ರೀ ಯೋಜನೆಗೆ 1,143 ಕೋಟಿ ರೂ., ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ 723 ಕೋಟಿ ರೂ. ಮತ್ತು ಇಂದಿರಮ್ಮ ಆತ್ಮ ಭರೋಸಾ ಯೋಜನೆಗೆ 600 ಕೋಟಿ ರೂ.ಹಣವನ್ನು ಮೀಸಲಿಟ್ಟಿದೆ. ಇದನ್ನೂ ಓದಿ: PUBLiC TV Impact| ತೋಟದ ವಸತಿ ಪ್ರದೇಶಗಳಲ್ಲಿ ಮೊಬೈಲ್ ಟಾರ್ಚ್ ಬಳಸಿ ಓದುತ್ತಿದ್ದ ಮಕ್ಕಳಿಗೆ ವಿದ್ಯುತ್ ಪೂರೈಕೆ

  • ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ: ತೆಲಂಗಾಣ ಸಿಎಂ

    ಗ್ಯಾರಂಟಿಯಿಂದ ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ: ತೆಲಂಗಾಣ ಸಿಎಂ

    – ಹಿಮಾಚಲದ ಬಳಿಕ ತೆಲಂಗಾಣ ಸರ್ಕಾರಕ್ಕೆ ಸಂಕಷ್ಟ
    – ಆರ್‌ಬಿಐನಿಂದ 4 ಸಾವಿರ ಕೋಟಿ ಕೈ ಸಾಲ

    ಹೈದರಾಬಾದ್‌: ಗ್ಯಾರಂಟಿ ಯೋಜನೆ ಜಾರಿ ಮಾಡಿ ಈಗಾಗಲೇ ಹಿಮಾಚಲ ಪ್ರದೇಶದಲ್ಲಿರುವ (Himachal Pradesh) ಕಾಂಗ್ರೆಸ್‌ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ತೆಲಂಗಾಣದಲ್ಲಿರುವ (Telangana) ರೇವಂತ್‌ ರೆಡ್ಡಿ (Revanth Reddy) ಸರ್ಕಾರವೂ ಸಂಕಷ್ಟಕ್ಕೆ ತುತ್ತಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ನೀಡಲು ದುಡ್ಡಿಲ್ಲ ಎಂದು ಹೇಳಿದೆ.

    ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಈಗ ಸರ್ಕಾರದ ಬಳಿ ಸಂಬಳ ಕೊಡುವುದಕ್ಕೂ ಹಣ ಇಲ್ಲ. ನಮ್ಮ ಸರ್ಕಾರ ಸಾಲದ ಹೊರೆ ಮತ್ತು ಇತರ ಕಾರಣಗಳಿಂದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆರ್‌ಬಿಐಯಿಂದ 4 ಸಾವಿರ ಕೋಟಿ ರೂ. ಕೈ ಸಾಲ ಪಡೆದಿದ್ದೇವೆ ಎಂದು ಸಿಎಂ ರೇವಂತ್‌ ರೆಡ್ಡಿ ಅವರೇ ಅಧಿಕೃತವಾಗಿ ತಿಳಿಸಿದ್ದಾರೆ.

     

     

     

    ವಿಧಾನ ಪರಿಷತ್‌ನಲ್ಲಿ ಮಾತನಾಡಿದ ಅವರು, ಹಣ ಇಲ್ಲದ ಕಾರಣ ರಾಜ್ಯ ನೌಕರರಿಗೆ ಪ್ರತೀ ತಿಂಗಳ ಆರಂಭದಲ್ಲಿ ವೇತನ (Salary) ನೀಡಲು ಕಷ್ಟವಾಗುತ್ತಿದೆ. ನೌಕರರ ತುಟ್ಟಿ ಭತ್ಯೆ (ಡಿಎ) ಬೇಡಿಕೆ ನ್ಯಾಯಯುತವಾದದ್ದೇ. ಆದರೆ ಪ್ರಸ್ತುತ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಾಗಿ ಒತ್ತಾಯಿಸಬೇಡಿ. ಮುಂದೆ ಸರ್ಕಾರದ ಹಣಕಾಸು ಪರಿಸ್ಥಿತಿಯ ಸಂಪೂರ್ಣ ವಿವರವನ್ನು ನೀಡುತ್ತೇನೆ. ಸರ್ಕಾರಿ ನೌಕರರು ಮುಂದಿನ ದಿನಗಳಲ್ಲಿ ತಮ್ಮ ಕೆಲಸಗಳನ್ನು ಸೇವೆಯಂತೆ ಮಾಡಬೇಕು. ನೌಕರರು ದಯವಿಟ್ಟು ಸರ್ಕಾರದ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಹೊಡೆತಕ್ಕೆ ತತ್ತರ – ದೇವಸ್ಥಾನದ ಹಣಕ್ಕೆ ಕೈ ಹಾಕಿತಾ ಹಿಮಾಚಲ ಸರ್ಕಾರ?

     

     

    ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ರೇವಂತ್‌ ರೆಡ್ಡಿ ರಾಜ್ಯದ ಕರಾಳ ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದರು. ರಾಜ್ಯದ ಸಾಲದ ಮೊತ್ತ ಈಗ 7 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ರಾಜ್ಯದ ಮಾಸಿಕ ಆದಾಯ 18,500 ಕೋಟಿ ರೂ. ಇದೆ. ಅದರಲ್ಲಿ 6,500 ಕೋಟಿ ರೂ. ವೇತನ ಮತ್ತು ಪಿಂಚಣಿ ಪಾವತಿಗೆ ಹೋಗುತ್ತಿದೆ. 6,500 ಕೋಟಿ ರೂ. ಸಾಲ ಮತ್ತು ಬಡ್ಡಿ ಮರುಪಾವತಿಗೆ ಬೇಕು. ಉಳಿದ ಕೇವಲ 5,000 ಕೋಟಿ ರೂ. ಮೊತ್ತವನ್ನು ವಿವಿಧ ಯೋಜನೆಗಳಿಗೆ ಬಳಸಲಾಗುತ್ತಿದೆ. ಹೀಗಾಗಿ ಉಳಿದ ವೆಚ್ಚಗಳಿಗೆ ಸರ್ಕಾರದ ಬಳಿ ದುಡ್ಡೇ ಇಲ್ಲ ಎಂದಿದ್ದರು.

    2023ರ ಮೇ ತಿಂಗಳಿನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 5 ಗ್ಯಾರಂಟಿಗಳನ್ನು ಪ್ರಕಟಿಸಿ ಅಧಿಕಾರಕ್ಕೆ ಏರಿತ್ತು. ಇದರಿಂದ ಉತ್ತೇಜನಗೊಂಡ ಕಾಂಗ್ರೆಸ್‌ ತೆಲಂಗಾಣ ಚುನಾವಣೆಯಲ್ಲೂ ಗ್ಯಾರಂಟಿ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಏರಿತ್ತು. ಇದನ್ನೂ ಓದಿ: ಗ್ಯಾರಂಟಿ ಹೊಡೆತಕ್ಕೆ ಹಿಮಾಚಲ ತತ್ತರ – ಮಂತ್ರಿಗಳು, ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳ ಸಂಬಳ ಕಟ್‌

    ಕೆಲ ತಿಂಗಳ ಹಿಂದೆ ಕಾಂಗ್ರೆಸ್‌ ಆಡಳಿತದ ಮತ್ತೊಂದು ರಾಜ್ಯವಾದ ಹಿಮಾಚಲಪ್ರದೇಶದಲ್ಲೇ ಇದೇ ಪರಿಸ್ಥಿತಿ ನಿರ್ಮಾಣವಾಗಿ, ಇತಿಹಾಸದಲ್ಲೇ ಮೊದಲ ಬಾರಿಗೆ ವೇತನ, ಪಿಂಚಣಿ ಪಾವತಿ ವಿಳಂಬವಾಗಿತ್ತು. ಸಿಎಂ, ಶಾಸಕರ ವೇತನ ಪಾವತಿ ಮುಂದೂಡಲಾಗಿತ್ತು.

     

  • ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – ಕಾರ್ಮಿಕರ ರಕ್ಷಣೆಗೆ ಹರಸಾಹಸ

    ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – ಕಾರ್ಮಿಕರ ರಕ್ಷಣೆಗೆ ಹರಸಾಹಸ

    ಹೈದರಾಬಾದ್: ತೆಲಂಗಾಣದ ನಾಗರ್‌ಕರ್ನೂಲ್ (Nagarkurnool) ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

    ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ ಕುಸಿತದಲ್ಲಿ 8 ಮಂದಿ ಕಾರ್ಮಿಕರು ಸಿಲುಕಿದ್ದು, ಈಗಾಗಲೇ 48 ಕಾರ್ಮಿಕರನ್ನು ರಕ್ಷಿಸಲಾಗಿದೆ.ಇದನ್ನೂ ಓದಿ: ತಲೆ ಬುರುಡೆ ಛಿದ್ರ, ಕಿವಿ ಕಟ್ – 56 ಕಡೆ ಕೊಚ್ಚಿ ಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ

    ಈ ಕುರಿತು ಎನ್‌ಡಿಆರ್‌ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಕುಸಿತದಿಂದಾಗಿ ಸುರಂಗದ ಪ್ರವೇಶದ್ವಾರ ಮುಚ್ಚಿಕೊಂಡಿದ್ದು, ಪರ್ಯಾಯ ಸುರಂಗ ಮಾರ್ಗದ ಮೂಲಕ ಕಾರ್ಮಿಕರನ್ನು ರಕ್ಷಿಸಲು ಚಿಂತಿಸಲಾಗಿದೆ. ಸದ್ಯ ಸ್ಥಳಕ್ಕೆ ಸುರಂಗ ಕೊರೆಯುವ ಯಂತ್ರಗಳನ್ನು ಕರೆತರಲಾಗಿದ್ದು, ಇನ್ನಷ್ಟು ಯಂತ್ರಗಳನ್ನು ತರಲು ಸಿದ್ಧತೆ ನಡೆಸಿದೆ ಅಧಿಕಾರಿಯೊಬ್ಬರು ಮಾಹಿತಿ ನಿಡಿದ್ದಾರೆ.

    ರಕ್ಷಣಾ ತಂಡವು ಭಾನುವಾರ ರಾತ್ರಿ ಲೋಕೋಮೋಟಿವ್‌ನ ಸಹಾಯದಿಂದ 11 ಕಿ.ಮೀ ಹಾಗೂ ಕನ್ವೇಯರ್ ಬೆಲ್ಟ್ನ ನೆರವಿನಿಂದ 2 ಕಿ.ಮೀ ಕ್ರಮಿಸಿದ್ದೇವೆ. ಈ ವೇಳೆ ಕಾರ್ಮಿಕರ ಹೆಸರಿನಿಂದ ಕೂಗಿದ್ದು, ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಸುರಂಗದ ಕೊನೆಯ 2 ಕಿ.ಮೀ ಪ್ರದೇಶವು ನೀರಿನಿಂದ ತುಂಬಿದ್ದು, ಅದನ್ನು ಸ್ವಚ್ಛಗೊಳಿಸಿದ ಬಳಿಕ ಮುಂದೆ ಸಾಗಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

    ಸದ್ಯ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರುವ ಉದ್ದೇಶದೊಂದಿಗೆ ವಿಪತ್ತು ನಿರ್ವಹಣಾ ಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಸುರಂಗದೊಳಗೆ ಸಿಲುಕಿರುವವರನ್ನು ಹೊರತರುವುದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳಿಗೆ ಸವಾಲಾಗಿ ಪರಿಣಮಿಸಿದೆ.

    ಸುರಂಗದ ಒಳಗಿನ ಸ್ಥಳಕ್ಕೆ ಹೋಗಲು ಯಾವುದೇ ಅವಕಾಶವಿಲ್ಲ. ಅದು ಸಂಪೂರ್ಣವಾಗಿ ಕುಸಿದಿದ್ದು, ಮಣ್ಣು ತುಂಬಿಕೊಂಡಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮತ್ತು ಇತರ ರಕ್ಷಣಾ ತಂಡಗಳು, ಸಿಂಗರೇಣಿ ಕಾಲಿಯರೀಸ್‌ನ ಅಧಿಕಾರಿಗಳು ಕುಸಿದು ಬಿದ್ದ ಭಾಗದ ಸುರಂಗವನ್ನು ಪರಿಶೀಲಿಸಿದ್ದು, ಮುಂದಿನ ಕಾರ್ಯಾಚರಣೆಗೆ ಯೋಜನೆ ರೂಪಿಸುವತ್ತ ಗಮನ ಹರಿಸಿದ್ದಾರೆ.

    ಘಟನೆ ಏನು?
    ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು 8 ಮಂದಿ ಕಾರ್ಮಿಕರು ಸಿಲುಕಿದ್ದು, ಘಟನೆಯಲ್ಲಿ 48 ಕಾರ್ಮಿಕರನ್ನು ರಕ್ಷಿಸಿದ್ದಾರೆ. ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿತ್ತು.ಇದನ್ನೂ ಓದಿ: ಕಲಬುರಗಿ | ಜಿಮ್ಸ್ ಆಸ್ಪತ್ರೆಯ ವೈದ್ಯರ ಎಡವಟ್ಟು – ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ

  • ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ

    ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆ ಮೇಲ್ಛಾವಣಿ ಕುಸಿತ – 8 ಮಂದಿ ಸಿಲುಕಿರುವ ಶಂಕೆ, 48 ಕಾರ್ಮಿಕರ ರಕ್ಷಣೆ

    ಹೈದರಾಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (SLBC) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದು (Tunnel Collapses) ಕನಿಷ್ಠ 8 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ 48 ಕಾರ್ಮಿಕರನ್ನು ರಕ್ಷಿಸಲಾಗಿದೆ.

    ನಾಗರ್‌ಕರ್ನೂಲ್ (Nagarkurnool) ಜಿಲ್ಲೆಯ ಅಮ್ರಾಬಾದ್‌ನಿಂದ ಸುರಂಗ ನಿರ್ಮಾಣವಾಗುತ್ತಿದೆ. ದೋಮಲಪೆಂಟಾ ಬಳಿಯ ಶ್ರೀಶೈಲಂ ಅಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿದೆ. ಈ ಪೈಕಿ ಮೂವರು ತಪ್ಪಿಸಿಕೊಂಡಿದ್ದು, ಕನಿಷ್ಠ 8 ಮಂದಿ ಸುರಂಗದಲ್ಲಿ ಸಿಲುಕಿರುವ ಶಂಕೆಯಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಗಳು ತಿಳಿಸಿವೆ.

    ಸದ್ಯ ಸುರಂಗ ನಿರ್ಮಾಣ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಸುರಂಗದಲ್ಲಿ 12-13 ಕಿಮೀ ಒಳಗೆ ಸೋರಿಕೆ ಉಂಟಾಗಿತ್ತು. ಅದನ್ನು ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಎಡಭಾಗದಲ್ಲಿರುವ ಸುರಂಗದ ಮೇಲ್ಛಾವಣಿ ಮೂರು ಮೀಟರ್‌ಗಳಷ್ಟು ಕುಸಿದಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

    ಘಟನೆ ಕುರಿತು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ (Revanth Reddy) ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಆದ್ರೆ ಈಗಲೇ ನಿಖರವಾದ ಅಂಕಿ-ಅಂಶ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳ ಅಂತ್ಯಕ್ಕೆ 4 ದಿನ ಬಾಕಿ – ಮಹಾಶಿವರಾತ್ರಿ ಹಿನ್ನೆಲೆ ಪುಣ್ಯಸ್ನಾನಕ್ಕೆ ಆಗಮಿಸುತ್ತಿರುವ ಭಕ್ತಕೋಟಿ

    ಜೊತೆಗೆ ಜಿಲ್ಲಾಧಿಕಾರಿ, ಎಸ್ಪಿ, ಅಗ್ನಿಶಾಮಕ ದಳ, ಜಲಮಂಡಳಿ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಿಎಂ ಸೂಚನೆ ಬೆನ್ನಲ್ಲೇ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ಹಾಗೂ ನೀರಾವರಿ ಇಲಾಖೆಯ ಇತರ ಅಧಿಕಾರಿಗಳು ವಿಶೇಷ ಹೆಲಿಕಾಪ್ಟರ್‌ನಲ್ಲಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಕಿಡಿಗೇಡಿಗಳು ಒಣಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಚಾಮುಂಡಿಬೆಟ್ಟದಲ್ಲಿ 35 ಎಕ್ರೆ ಅರಣ್ಯ ನಾಶವಾಗಿದೆ: ಡಿಸಿಎಫ್

  • ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅವಕಾಶ

    ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅವಕಾಶ

    – ತೆಲಂಗಾಣ ಸರ್ಕಾರದ ಆದೇಶಕ್ಕೆ ಬಿಜೆಪಿ ಟೀಕೆ

    ಹೈದರಾಬಾದ್: ಪವಿತ್ರ ರಂಜಾನ್‌ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡುವುದಕ್ಕೆ ಅವಕಾಶ ನೀಡಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

    ಈ ಆದೇಶವನ್ನು ತುಷ್ಟೀಕರಣ ರಾಜಕೀಯದ ಪರಮಾವಧಿ ಎಂದು ಬಿಜೆಪಿ ಟೀಕಿಸಿದೆ.

    ತೆಲಂಗಾಣ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರು, ಮಾ.2 ರಿಂದ 31 ರ ವರೆಗೆ ರಂಜಾನ್ ಸಮಯದಲ್ಲಿ ಅಗತ್ಯ ಪ್ರಾರ್ಥನೆ ಸಲ್ಲಿಸಲು ಸರ್ಕಾರಿ ಮುಸ್ಲಿಂ ನೌಕರರಿಗೆ ಒಂದು ಗಂಟೆ ಮೊದಲು ಸಂಜೆ 4 ಗಂಟೆಗೆ ಕಚೇರಿಯಿಂದ ಹೊರಡಲು ಅವಕಾಶ ನೀಡಿ ಆದೇಶ ಹೊರಡಿಸಿದ್ದರು.

    ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಸರ್ಕಾರಿ ಮುಸ್ಲಿಂ ನೌಕರರು/ಶಿಕ್ಷಕರು/ಗುತ್ತಿಗೆದಾರರು/ಹೊರಗುತ್ತಿಗೆ/ಮಂಡಳಿಗಳು/ನಿಗಮಗಳು ಮತ್ತು ಸಾರ್ವಜನಿಕ ವಲಯದ ನೌಕರರು ರಂಜಾನ್ ಪವಿತ್ರ ಮಾಸದಲ್ಲಿ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು/ಶಾಲೆಗಳಿಂದ ಹೊರಡಲು ಸರ್ಕಾರವು ಅನುಮತಿ ನೀಡಿದೆ. ಮಾ.2 ರಿಂದ 31 ರ ವರೆಗೆ (ಸೇವೆಗಳ ತುರ್ತು ಪರಿಸ್ಥಿತಿಯಲ್ಲಿ ಅವರ ಉಪಸ್ಥಿತಿಯು ಅಗತ್ಯವಿರುವುದನ್ನು ಹೊರತುಪಡಿಸಿ) ಅಗತ್ಯ ಪ್ರಾರ್ಥನೆಗಳನ್ನು ಸಲ್ಲಿಸಲು ಕಚೇರಿಯಿಂದ ಬೇಗ ಹೊರಡಲು ಅನುಮತಿಸಲಾಗಿದೆ ಎಂದು ಶಾಂತಿ ಕುಮಾರಿ ಫೆ.15 ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ತೆಲಂಗಾಣ ರಾಜ್ಯ ಅಲ್ಪಸಂಖ್ಯಾತ ನೌಕರರ ಸೇವಾ ಸಂಘದ ರಾಜ್ಯ ಅಧ್ಯಕ್ಷರ ಕೋರಿಕೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಈ ಜ್ಞಾಪಕ ಪತ್ರವನ್ನು ಹೊರಡಿಸಿದ್ದಾರೆ.

    ತುಷ್ಟೀಕರಣ ರಾಜಕೀಯವು ಅದರ ಉತ್ತುಂಗದಲ್ಲಿದೆ. ತೆಲಂಗಾಣ ಸರ್ಕಾರ ರಂಜಾನ್‌ಗೆ ಮುಂಚಿತವಾಗಿ ರಜೆ ನೀಡುತ್ತದೆ. ಆದರೆ ಹಿಂದೂ ಹಬ್ಬಗಳನ್ನು ನಿರ್ಲಕ್ಷಿಸುತ್ತದೆ ಎಂದು ಗೋಶಮಹಲ್‌ನ ಬಿಜೆಪಿಯ ಶಾಸಕ ಠಾಕೂರ್ ರಾಜಾ ಸಿಂಗ್ ಟೀಕಿಸಿದ್ದಾರೆ.

  • ಅಲ್ಲು ಅರ್ಜುನ್ ಮನೆ ಮುಂಭಾಗ ದಾಂಧಲೆ ನಡೆಸಿದ್ದ 6 ಆರೋಪಿಗಳಿಗೆ ಜಾಮೀನು

    ಅಲ್ಲು ಅರ್ಜುನ್ ಮನೆ ಮುಂಭಾಗ ದಾಂಧಲೆ ನಡೆಸಿದ್ದ 6 ಆರೋಪಿಗಳಿಗೆ ಜಾಮೀನು

    ಪುಷ್ಪ-2 ಸ್ಟಾರ್ ಅಲ್ಲು ಅರ್ಜುನ್ (Allu Arjun) ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ದಾಳಿ ಮಾಡಿದ್ದ 6 ಆರೋಪಿಗಳಿಗೆ ಹೈದರಾಬಾದ್ ನ್ಯಾಯಾಲಯ (Hyderabad court) ಜಾಮೀನು ಮಂಜೂರು ಮಾಡಿದೆ.

    ನಿನ್ನೆ (ಡಿ.22) ಆರು ದಾಳಿಕೋರರನ್ನು ಬಂಧಿಸಿದ್ದ ಜ್ಯುಬ್ಲಿ ಹಿಲ್ಸ್ ಪೊಲೀಸರು ಇಂದು ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದು, 6 ಆರೋಪಿಗಳಿಗೆ ತಲಾ 10,000 ರೂ. ವೈಯಕ್ತಿಕ ಬಾಂಡ್‌ ಮೇಲೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ಹಿರಿಯ ವಕೀಲ ವಕೀಲ ರಾಮದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರೇ ಜೈಲಿಗೆ ಹೋಗ್ಬೇಕಾಗುತ್ತೆ – ಸ್ಫೀಕರ್‌ ವಾರ್ನಿಂಗ್‌ ಬೆನ್ನಲ್ಲೇ ಕೋರ್ಟ್ ಅಂಗಳಕ್ಕೆ ಹೋಗುತ್ತಾ ಸಂವಿಧಾನಿಕ ಸಂಘರ್ಷ?’

    ಇನ್ನೂ ಠಾಣೆಯಲ್ಲಿ ಆರೋಪಿಗಳೆಲ್ಲಾ ಬೆಂಚ್ ಮೇಲೆ ಕುಳಿತು ಮೊಬೈಲ್‌ನಲ್ಲಿ ಮುಳುಗಿದ್ದ ದೃಶ್ಯಗಳು ವೈರಲ್ ಆಗಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗ್ತಿದೆ. ಇದ್ರ ಮಧ್ಯೆ, ಆರೋಪಿಗಳು ನಿಮ್ಮವರೆಂದು ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಪರಸ್ಪರ ಕೆಸರರೆಚಾಟದಲ್ಲಿ ತೊಡಗಿವೆ. ಇದನ್ನೂ ಓದಿ: ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸ್ಸುಗೊಳ್ಳದ ಶೂಟರ್ ಮನು ಭಾಕರ್ ಹೆಸರು; ತಂದೆ ಆಕ್ಷೇಪ

    ಆರೋಪಿಗಳಿಗೆ ಸಿಎಂ ಜೊತೆ ಇರುವ ಫೋಟೋಗಳನ್ನು ಬಿಆರ್‌ಎಸ್ ರಿಲೀಸ್ ಮಾಡಿದೆ. ಇಲ್ಲ ಇವರು ಬಿಆರ್‌ಎಸ್ ಬೆಂಬಲಿಗರು ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಇನ್ನೂ ಪುಷ್ಪ ಶೋ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಶೀಘ್ರವೇ ಮುಖ್ಯಮಂತ್ರಿ ರೇವಂತ್ ರೆಡ್ಡಿಯನ್ನು ಭೇಟಿ ಮಾಡಲು ಟಾಲಿವುಡ್ ಗಣ್ಯರು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು?

    ಈ ನಡುವೆ ಅಲ್ಲು ಅರ್ಜುನ್‌ ಮನೆ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳ ಪೈಕಿ ಒಬ್ಬರಾದ ಶ್ರೀನಿವಾಸ್ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸಹಾಯಕ ಎಂದು ಬಿಆರ್‌ಎಸ್ ಮುಖಂಡರೊಬ್ಬರು ಆರೋಪಿಸಿದ್ದಾರೆ.