Tag: retire soldier

  • 5,499 ರೂ. ಸ್ಪೀಕರ್‌ ಬುಕ್‌ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ

    5,499 ರೂ. ಸ್ಪೀಕರ್‌ ಬುಕ್‌ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ

    ಬೆಂಗಳೂರು: ನಿವೃತ್ತ ಯೋಧರೊಬ್ಬರಿಂದ (Retire Soldier) ಹಂತ ಹಂತವಾಗಿ 1 ಲಕ್ಷ ರೂ. ಹಣ ಹಾಕಿಸಿಕೊಂಡು ಯಾಮಾರಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಮಹೇಶ್‌ ವಂಚನೆಗೊಳಗಾದ ನಿವೃತ್ತ ಯೋಧ. ಮೋಸ ಮಾಡಲೆಂದೇ ವಂಚಕ MOSA1122@SBI ಯುಪಿಐ ಐಡಿ ಮಾಡಿದ್ದ. ಫೋನ್ ಮಾಡಿ ಅಕೌಂಟ್ ಚೆಕ್ ಮಾಡು ಅಂತ ಹೇಳಿದ್ದ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯವಾಗಿದೆ. ಇದನ್ನೂ ಓದಿ: ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ

    ನಿವೃತ್ತ ಯೋಧ 5,499 ರೂ. ಮೌಲ್ಯದ ಸ್ಪೀಕರ್ ಬುಕ್ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಮೂರು ದಿನದಲ್ಲಿ ನಿಮ್ಮ ಖಾತೆಗೆ ಹಣೆ ಜಮೆ ಆಗುತ್ತೆ ಅನ್ನೋ ಸಂದೇಶ ಕೂಡ ಬಂದಿತ್ತು. ಹಣ ಜಮೆ ಆಗದಿದ್ದಾಗ ಮಹೇಶ್‌ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕಿದ್ದರು.

    ಕರೆ ಮಾಡಿದ ಬಳಿಕ ಮತ್ತೊಂದು ನಂಬರ್‌ನಿಂದ ವಂಚಕ ಕರೆ ಮಾಡಿದ್ದ. RUSKDESK ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಓಕೆ ಬಟನ್ ಪ್ರೆಸ್ ಮಾಡುವಂತೆ ಹೇಳಿದ್ದ. ತಕ್ಷಣಕ್ಕೆ ಅಕೌಂಟ್‌ನಿಂದ 81 ಸಾವಿರ ಹಣ ಕಡಿತಗೊಂಡಿದೆ. ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದಿದ್ದ ವಂಚಕ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ

    ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೆ ಅಕೌಂಟ್ ಪರೀಕ್ಷಿಸಲು ಹೇಳುತ್ತಿದ್ದ. ಹಂತ ಹಂತವಾಗಿ 1 ಲಕ್ಷ ರೂ. ಹಣ ಅಕೌಂಟ್‌ನಿಂದ ಮಾಯವಾಗಿದೆ. ನಿವೃತ್ತ ಯೋಧ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

    ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

    ಕೊಪ್ಪಳ: ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಬಹುವರ್ಷಗಳ ಬಳಿಕ ಗ್ರಾಮಕ್ಕೆ ಬಂದ ಯೋಧರೊಬ್ಬರಿಗೆ ಗ್ರಾಮಸ್ಥರು ಭರ್ಜರಿ ಮೆರೆವಣಿಗೆ ಮಾಡಿ ಸ್ವಾಗತಿಸಿದ್ದಾರೆ.

    ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿಯಲ್ಲಿ ನಿವೃತ್ತ ಯೋಧ ಗವಿಸಿದಪ್ಪ ದೊಡ್ಡಮನಿಗೆ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತ ಕೋರಿದ್ದಾರೆ.

    ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿರುವ ಗವಿಸಿದಪ್ಪ ಅವರು ಸದ್ಯ ನಿವೃತ್ತಿ ಪಡೆದಿದ್ದಾರೆ. ಸಿಕಂದರಾಬಾದ್‍ನಲ್ಲಿ ಯೋಧನಾಗಿ ಇವರು ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಬಹುವರ್ಷಗಳ ಬಳಿಕ ಗ್ರಾಮಕ್ಕೆ ಆಗಮಿಸಿರುವ ಹೆಮ್ಮೆಯ ವೀರ ಯೋಧ ಗವಿಸಿದಪ್ಪ ಅವರನ್ನು ಸನ್ಮಾನ ಹಾಗೂ ಮೆರವಣಿಗೆ ಮೂಲಕ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ಮಾಡಿದರು.

    ಶುಕ್ರವಾರದಂದು ಗ್ರಾಮಕ್ಕೆ ಬಂದ ಯೋಧರಿಗೆ ಗ್ರಾಮಸ್ಥರು ತೆರೆದ ವಾಹನದಲ್ಲಿ ಒಂದು ಕಿಲೋಮೀಟರ್ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ತ್ರಿವರ್ಣ ಧ್ವಜ ಹಿಡಿದು, ಜೈಹಿಂದ್ ಘೋಷಣೆಯನ್ನೂ ಕೂಗಿದ ಗ್ರಾಮಸ್ಥರ ಪ್ರೀತಿಗೆ ಯೋಧ ಧನ್ಯವಾದ ಹೇಳಿದರು.