Tag: restaurent

  • ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

    ಅಸಭ್ಯವಾಗಿ ವರ್ತಿಸಿದ್ದಲ್ಲದೆ 7 ವಾಹನಗಳ ಮೇಲೆ ಕಾರು ಹರಿಸಿದ್ದ ನಟಿ ಅರೆಸ್ಟ್

    ಮುಂಬೈ: ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪಾರ್ಕ್ ಮಾಡಿದ್ದ 7 ವಾಹನಗಳ ಮೇಲೆ ಕಾರು ಹರಿಸಿ ದಾಂಧಲೆ ಎಬ್ಬಿಸಿದ್ದ ಪ್ರಸಿದ್ಧ ನಟಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಏ.2ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿತ್ತು. ಪ್ರಕರಣ ಸಂಬಂಧ ನಟಿ ರೂಹಿ ಹಾಗೂ ಆಕೆಯ ಇಬ್ಬರು ಗೆಳೆಯರಾದ ರಾಹುಲ್ ಹಾಗೂ ಸ್ವಪ್ನಿಲ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

    ಘಟನೆ ವಿವರ:
    ರೂಹಿ, ರಾಹುಲ್ ಹಾಗೂ ಸ್ವಪ್ನಿಲ್ ರಾತ್ರಿ ಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದರು. ಹೀಗೆ ಹಿಂದಿರುಗುತ್ತಿದ್ದಾಗ ಮೂವರಿಗೆ ವಾಶ್ ರೂಮ್ ಹೋಗುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅವರು ತಮ್ಮ ದಾರಿಯಲ್ಲೇ ಸಿಗುವ ಪ್ರಸಿದ್ಧ ರೆಸ್ಟೋರೆಂಟ್ ಬಳಿ ಕಾರು ನಿಲ್ಲಿಸಿದ್ದಾರೆ. ಆದ್ರೆ ಅದಾಗಲೇ ತಡವಾಗಿದ್ದು ಸಿಬ್ಬಂದಿ ರೆಸ್ಟೋರೆಂಟ್ ಮುಚ್ಚಿದ್ದರು. ಈ ವೇಳೆ ಈ ಮೂವರು ತಮಗೆ ವಾಶ್ ರೂಮ್ ಗೆ ಹೋಗಬೇಕು. ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ. ಆದ್ರೆ ರೆಸ್ಟೋರೆಂಟ್ ಸಿಬ್ಬಂದಿ ಇವರ ಮಾತಿಗೆ ಸಮ್ಮತಿ ಸೂಚಿಸಿರಲಿಲ್ಲ. ಅಲ್ಲದೆ ಈಗಾಗಲೇ ನಾವು ರೆಸ್ಟೋರೆಂಟ್ ಕ್ಲೋಸ್ ಮಾಡಿದ್ದು ತೆರೆಯಲ್ಲ ಎಂದು ಹೇಳಿ ನಿರಾಕರಿಸಿದ್ದಾರೆ.

    ಸಿಬ್ಬಂದಿ ನಿರಾಕರಿಸಿದ್ದರಿಂದ ಸಿಟ್ಟುಕೊಂಡ ಮೂವರು ಸಿಬ್ಬಂದಿ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಹಲ್ಲೆ ನಡೆಸಿ ರೆಸ್ಟೋರೆಂಟ್ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಇದರಿಂದ ಬೆದರಿದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರೂ ಕ್ಯಾರೇ ಎನ್ನದ ಈ ಮೂವರು ಕುಡಿದ ಮತ್ತಿನಲ್ಲಿ ತಮ್ಮ ಹುಚ್ಚಾಟವನ್ನು ಮುಂದುವರಿಸಿದ್ದಾರೆ. ಅಲ್ಲದೆ ರೆಸ್ಟೋರೆಂಟ್ ಎದುರು ಪಾರ್ಕ್ ಮಾಡಿದ್ದ 4 ದ್ವಿಚಕ್ರವಾಹನಗಳು ಹಾಗೂ ಮೂರು ಕಾರುಗಳಿಗೆ ತನ್ನ ಕಾರನ್ನು ಡಿಕ್ಕಿ ಹೊಡೆಸುವ ಮೂಲಕ ಹಾನಿ ಮಾಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    https://www.instagram.com/p/BvuVX81nxkJ/?utm_source=ig_embed

  • ಇದೇನು ಅಪಘಾತ ವಲಯನಾ ಇಲ್ಲ ರೆಸ್ಟೋರೆಂಟಾ?

    ಇದೇನು ಅಪಘಾತ ವಲಯನಾ ಇಲ್ಲ ರೆಸ್ಟೋರೆಂಟಾ?

    ವಾಷಿಂಗ್ಟನ್: ಅಮೆರಿಕದ ಡೆನ್ವರ್ ಪ್ರದೇಶದಲ್ಲಿ ರೆಸ್ಟೋರೆಂಟ್‍ವೊಂದಿದೆ, ಸ್ವತಃ ಮಾಲೀಕನಿಗೆ ನಾನು ರೆಸ್ಟೋರೆಂಟ್ ನಡೆಸುತ್ತಿದ್ದೀನಾ ಎಲ್ಲ ಅಪಘಾತ ವಲಯದಲ್ಲಿದ್ದೀನಾ ಅಂತ ಅರ್ಥವಾಗ್ತಿಲ್ಲ.

    `ದಿ ಹಾರ್ನೆಟ್’ ಎಂದು ಡೆನ್ವರ್ ಪ್ರದೇಶದಲ್ಲೊಂದು ರೆಸ್ಟೋರೆಂಟ್ ಇದೆ. ಈ ರೆಸ್ಟೋರೆಂಟ್ ತಿಂಡಿ-ತಿನಿಸುಗಳಿಗಿಂತ ಅಪಘಾತಕ್ಕೆ ಪ್ರಸಿದ್ಧ. ಹೌದು, ಇಲ್ಲಿ ಮಾಲೀಕ ಗ್ರಾಹಕರಿಂದ ಲಾಭ ಪಡೆದಿದ್ದಕ್ಕಿಂತ ನಷ್ಟ ಅನುಭವಿಸಿದ್ದೇ ಜಾಸ್ತಿಯಂತೆ. ಯಾಕೆಂದರೆ 2018 ಅಂದರೆ ಒಂದೇ ವರ್ಷದಲ್ಲಿ `ದಿ ಹಾರ್ನೆಟ್’ ರೆಸ್ಟೋರೆಂಟ್‍ನಲ್ಲಿ ಸತತ ಮೂರು ಬಾರಿ ಹ್ಯಾಟ್ರಿಕ್ ಕಾರು ಅಪಘಾತವಾಗಿದೆ. ಆದ್ದರಿಂದ ಪ್ರೀತಿಯಿಂದ ಜನರು `ದಿ ಹಾರ್ನೆಟ್’ ಅನ್ನು ಪ್ರಪಂಚದ ಅತ್ಯಂತ ನತದೃಷ್ಟ ರೆಸ್ಟೋರೆಂಟ್ ಎಂದೇ ನಾಮಕರಣ ಮಾಡಿಬಿಟ್ಟಿದ್ದಾರೆ.

    ಇಲ್ಲಿ ವರ್ಷವಿಡೀ ಬರೀ ರೆಸ್ಟೋರೆಂಟ್ ರಿಪೇರಿ ಮಾಡ್ಸೋದೆ ಮಾಲೀಕರ ಕೆಲಸವಾಗಿಬಿಟ್ಟಿದೆ. ಆದ ಎರಡು ಅಪಘಾತದಿಂದ ಆಗತಾನೆ ಹೊರಬಂದಿದ್ದ ಮಾಲೀಕನಿಗೆ ಕಳೆದ ಶನಿವಾರದಂದು ಮತ್ತೊಂದು ಶಾಕ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ, ಕುಡಿದ ನಶೆಯಲ್ಲಿ ವ್ಯಕ್ತಿಯೋರ್ವ ಕಾರನ್ನು ರೆಸ್ಟೋರೆಂಟ್ ಗೆ ಗುದ್ದಿರುವ ಪರಿಣಾಮ ಗೋಡೆ ಕುಸಿದು ಅಪಾರ ಹಾನಿಯಾಗಿದೆ.

    ಈ ಕುರಿತು `ದಿ ಹಾರ್ನೆಟ್’ ರೆಸ್ಟೋರೆಂಟ್ ಮಾಲೀಕ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಿಂದ ಅಪಘಾತದಿಂದ ಆದ ನಷ್ಟವನ್ನು ಫೋಟೋ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅಷ್ಟೆ ಅಲ್ಲದೇ ಆದಷ್ಟು ಬೇಗ ರೆಸ್ಟೋರೆಂಟನ್ನು ಸಿದ್ಧಗೊಳಿಸಿ, ಮತ್ತೆ ಗ್ರಾಹಕರ ಸೇವೆಗೆ ಬಹುಬೇಗ ಬರುತ್ತೇವೆ ಎಂದು ಹೇಳಿದ್ದಾರೆ.

    https://www.instagram.com/p/Bq3QyGClUjR/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

    ಹೈವೇ ಪಕ್ಕದಲ್ಲಿರೋ ಕಾಂಗ್ರೆಸ್ ಶಾಸಕರ ಬಾರ್ & ರೆಸ್ಟೋರೆಂಟ್‍ನಲ್ಲಿ ಅಕ್ರಮ ಮದ್ಯ ಪೂರೈಕೆ

    ಬೆಂಗಳೂರು: ಜನರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು. ಹೌದು. ಈ ಪ್ರಕರಣದಲ್ಲಿ ಹಾಗೆ ಅನಿಸುತ್ತೆ. ಯಾಕಂದ್ರೆ ಬೆಂಗಳೂರಿನ ಏರ್‍ಪೋರ್ಟ್ ರಸ್ತೆಯಲ್ಲಿರುವ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಾಲೀಕತ್ವದ ಎಲ್.ಕೆ ರಾಯಲ್ ಗಾರ್ಡೇನಿಯ ರೆಸ್ಟೋರೆಂಟ್‍ನಲ್ಲಿ ಅಕ್ರಮವಾಗಿ ಮದ್ಯ ಪೂರೈಕೆಯಾಗ್ತಿದೆ.

    ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟ ಮಾಡೋ ಹಾಗಿಲ್ಲ ಎಂಬ ನಿಯಮವಿದ್ದರೂ ಮದ್ಯ ಪೂರೈಕೆಯಾಗ್ತಿದೆ. ಈ ರೆಸ್ಟೋರೆಂಟ್ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತೆ. ರೆಸ್ಟೋರೆಂಟ್ ನಡೆಸುವುದಕ್ಕೆ ಗ್ರಾಮ ಪಂಚಾಯ್ತಿಯಿಂದ ಅನುಮತಿಯನ್ನೂ ಪಡೆದಿಲ್ಲ. ಈ ರೆಸ್ಟೋರೆಂಟ್ ಉದ್ಘಾಟನೆಯಾಗಿ ಇದೀಗ ಇಪ್ಪತ್ತೆರೆಡು ದಿನಗಳೇ ಕಳೆದಿದೆ. ಶಾಸಕರ ಮಾಲೀಕತ್ವದ್ದು ಯಾರೂ ಕೇಳೋರಿಲ್ಲ ಅಂತ ನಂಬಿದ್ದಾರೆ.

    ಈ ಕುರಿತು ಅಬಕಾರಿ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಲು ನಿರ್ಧರಿಸಿದ್ದು, ಲೈಸೆನ್ಸ್ ಪಡೆಯದ ಬಗ್ಗೆ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಈ ಸಂಬಂಧ ಗ್ರಾಮ ಪಂಚಾಯ್ತಿ ಕ್ರಮ ಕೈಗೊಳ್ಳೋ ಭರವಸೆ ನೀಡಿದೆ.

  • ಲೈಸೆನ್ಸ್ ಗೆ ಅಲೆದು ಬೇಸತ್ತ ದಂಪತಿ ಪಟ್ಟಣಪಂಚಾಯತ್ ಬಾಗಿಲಲ್ಲೇ ರೆಸ್ಟೊರೆಂಟ್ ತೆರೆದ್ರು

    ಲೈಸೆನ್ಸ್ ಗೆ ಅಲೆದು ಬೇಸತ್ತ ದಂಪತಿ ಪಟ್ಟಣಪಂಚಾಯತ್ ಬಾಗಿಲಲ್ಲೇ ರೆಸ್ಟೊರೆಂಟ್ ತೆರೆದ್ರು

    ತುಮಕೂರು: ರೆಸ್ಟೊರೆಂಟ್ ತೆರೆಯಲು ಲೈಸೆನ್ಸ್ ಗಾಗಿ ಅಲೆದು ಅಲೆದು ಬೇಸತ್ತ ದಂಪತಿ ಕೊನೆಗೆ ಪಟ್ಟಣ ಪಂಚಾಯತ್ ಬಾಗಿಲಲ್ಲೇ ಹೊಟೇಲ್ ತೆರೆದು ವಿನೂತನವಾಗಿ ಪ್ರತಿಭಟಿಸಿದ್ದಾರೆ.

    ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣ ಪಂಚಾಯತ್ ದ್ವಾರದಲ್ಲಿ ಪ್ರಭಾಕರ್-ಇಂದಿರಾ ದಂಪತಿ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಅನ್ನ ಸಾಂಬಾರ್, ಚಪಾತಿ, ಪರೋಟಾ ತಯಾರಿಸಿ ಮುನ್ಸಿಪಲ್ ಪ್ರವೇಶ ದ್ವಾರದಲ್ಲೇ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಭಾಕರ- ಇಂದಿರಾ ದಂಪತಿ 2014 ರಲ್ಲಿ ಮಾಯಸಂದ್ರ ರಸ್ತೆಯಲ್ಲಿ ಶ್ರಿನಿಧಿ ಗ್ರೀನ್ ಲ್ಯಾಂಡ್ ಹೆಸರಿನಲ್ಲಿ ರೆಸ್ಟೊರೆಂಟ್ ತೆರೆದಿದ್ರು. ಅದಕ್ಕೆ ಪಟ್ಟಣ ಪಂಚಾಯತ್ ಅಧಿಕಾರಿಗಳ ಸೂಚನೆಯಂತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿಯಿಂದ ಪರವಾನಗಿ ಪಡೆದಿದ್ರು. ಸುಮಾರು ನಾಲ್ಕು ತಿಂಗಳು ರೆಸ್ಟೊರೆಂಟ್ ತೆರೆದಿತ್ತು. ಆಗ ಕ್ಯಾತೆ ತೆಗೆದ ಪಟ್ಟಣ ಪಂಚಾಯತ್ ಅಧಿಕಾರಿಗಳು, ರೆಸ್ಟೊರೆಂಟ್ ಜಮೀನು ವಿವಾದ ಕೋರ್ಟ್ ನಲ್ಲಿದೆ ಎಂದು ಸಬೂಬು ಹೇಳಿ ಏಕಾಏಕಿ ರೆಸ್ಟೊರೆಂಟ್ ಗೆ ಬೀಗ ಹಾಕಿದ್ದಾರೆ ಎನ್ನುವುದು ಪ್ರಭಾಕರ್ ದಂಪತಿಯ ಆರೋಪ.

    ಅಲ್ಲಿಂದ ಕಳೆದ ಮೂರು ವರ್ಷದಿಂದ ಪರವಾನಗಿ ನೀಡುವಂತೆ ದಂಪತಿ ಪಟ್ಟಣ ಪಂಚಾಯತಿಗೆ ಅಲೆದು ಅಲೆದು ಬೆಸತ್ತು ಈಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಪರವಾನಗಿ ಕೊಡದಿರಲು ಕಾಂಗ್ರೆಸ್ ಮುಖಂಡ ಟಿ.ಎನ್.ಶಿವರಾಜರೇ ಕಾರಣ ಎಂದು ಪ್ರಭಾಕರ್ ಆರೋಪಿಸಿದ್ದಾರೆ.