Tag: Representative

  • EXCLUSIVE: ಬಿಬಿಎಂಪಿ ಕಸ ದಂಧೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆ

    EXCLUSIVE: ಬಿಬಿಎಂಪಿ ಕಸ ದಂಧೆ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆ

    ಬೆಂಗಳೂರು: ಬಿಬಿಎಂಪಿ ವತಿಯು ಕಸದ ಮೂಲಕ ಕಾಸು ಸಂಗ್ರಹಣೆ ಮಾಡುತ್ತಿರುವ ವಿಚಾರ ಪಬ್ಲಿಕ್ ಟಿವಿ ಕ್ಯಾಮೆರಾ ಮುಂದೆ ಬೆಳಕಿಗೆ ಬಂದಿದೆ.

    ಬಿಬಿಎಂಪಿ ಅಪಾರ್ಟ್ ಮೆಂಟ್ ಕಸ ತೆಗೆದುಕೊಂಡು ಹೋಗಲು ಒಬ್ಬೊಬ್ಬರಿಗೆ ಒಂದೊಂದು ರೇಟ್ ಫಿಕ್ಸ್ ಮಾಡುವ ಮೂಲಕ ಕಸದ ದಂಧೆ ನಡೆಸುತ್ತಿದೆ. ಕಸ ಹಾಕಲು ಹೋದವರಿಗೆ ಹಸಿ ,ಒಣ ಕಸ ಬೇರ್ಪಡಿಸಿ ಎಂದು ಹೇಳುತ್ತಾರೆ. ಆದರೆ ಹಣ ನೀಡುವವರಿಗೆ ಮಾತ್ರ ಕಸವನ್ನು ಮಿಕ್ಸ್ ಮಾಡಿ ಕೊಟ್ಟರು ಕೂಡ ಪರವಾಗಿಲ್ಲ ಎಂದು ಹೇಳುವ ಮೂಲಕ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

    ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಕಾಯ್ದೆ ಪ್ರಕಾರ ಬಲ್ಕ್ ಜನರೇಟರ್ ಕಸ ಸಂಗ್ರಹಿಸುವಂತಿಲ್ಲ. 100 ಕೆಜಿ ಗಿಂತ ಹೆಚ್ಚು ಕಸ ಬಿದ್ದರೆ ಅದು ವಾಣಿಜ್ಯ ಕಸ ಆಗುತ್ತದೆ. ಬಿಬಿಎಂಪಿ ವಸತಿ ಕಸಗಳನ್ನು ಮಾತ್ರ ಸಂಗ್ರಹ ಮಾಡಲಿದ್ದು, ಒಂದು ಮನೆಯ ಕಸ 10 ಕೆಜಿಗಿಂತ ಮೀರಬಾರದು. ಆದರೆ ಬೊಮ್ಮನಹಳ್ಳಿ, ಬೆಳ್ಳಂದೂರು ಸಮೀಪದ ಅಪಾರ್ಟ್ ಮೆಂಟ್‍ಗಳಲ್ಲಿ ನಿತ್ಯ 100 ಕೆಜಿಗೂ ಹೆಚ್ಚು ಕಸ ಸಂಗ್ರಹ ಮಾಡುವ ಮೂಲಕ ಕಸದ ದಂಧೆ ನಡೆಯುತ್ತಿದೆ. ಅಲ್ಲದೆ ಈ ಕಸವನ್ನು ನಗರದ ಹೊರವಲಯಗಳಿಗೆ ವಾಣಿಜ್ಯ ಕಸ ಸಂಗ್ರಹಣೆ ಮಾಡಲಾಗುತ್ತದೆ.

    ನಗರದ ಹೊರವಲಯ ಬೆಳ್ಳಂದೂರಿನ ಖಾಸಗಿ ಅಪಾರ್ಟ್‍ಮೆಂಟ್ ಹಿಂಬಾಗಿಲಿನಿಂದ ಕಸ ತೆಗೆದುಕೊಳ್ಳುತ್ತಾರೆ. ಅಲ್ಲದೆ ಬಿನ್ನಿಮಿಲ್ ಅಪಾರ್ಟ್‍ಮೆಂಟ್ ಕಸ ತೆಗೆದುಕೊಂಡು ಹೋಗಲು ಬಿಬಿಎಂಪಿ ಸಿಬ್ಬಂದಿ , ಪಬ್ಲಿಕ್ ಟಿವಿ ಪ್ರತಿನಿಧಿಯೊಂದಿಗೆ ರೇಟ್ ಫಿಕ್ಸ್ ಮಾಡುವ ಅಸಲಿ ಸತ್ಯ ಬಯಲಾಗಿದೆ.

    ಪ್ರತಿನಿಧಿ – ನಮ್ ಅಪಾರ್ಟ್ ಮೆಂಟ್ ಕಸ ತಗೊಳ್ಳಿ
    ಸಿಬ್ಬಂದಿ – ಯಾವ್ ಏರಿಯಾ
    ಪ್ರತಿನಿಧಿ – ಇಲ್ಲಿ 12 ನೇ ಕ್ರಾಸ್ ಸ್ಟಾರ್ ಬಿಲ್ಡಿಂಗ್
    ಸಿಬ್ಬಂದಿ – ಹೌದಾ , ಎಷ್ಟ್ ಅಪಾರ್ಟ್ ಮೆಂಟ್ ಇದೇ ಹೇಳಿ ರೇಟ್ ಫಿಕ್ಸ್ ಮಾಡ್ತಿವಿ
    ಪ್ರತಿನಿಧಿ – 120 ಪ್ಲಾರ್ಟ್ ಇದೆ ,100 ಕೆಜಿಗಿಂತ ಜಾಸ್ತಿ ಕಸ .. 4 ಆಟೋ ಬೇಕೆ ಬೇಕು
    ಸಿಬ್ಬಂದಿ – ಆಗಲಿ ತಿಂಗಳಿಗೆ 100 ರೂ ಒಂದೊಂದು ಮನೆಗೆ ಕೊಡಿಸಿ
    ಪ್ರತಿನಿಧಿ – 50 ಮಾಡಿಕೊಳ್ಳಿ
    ಸಿಬ್ಬಂದಿ – ಆಗಲಿ ಓಕೆ,ಇವತ್ತೆ ಕಸ ತೆಗೆಯಬೇಕಾ
    ಪ್ರತಿನಿಧಿ – ಸೋಮವಾರದಿಂದ ಕಸ ತೆಗೆಯಿರಿ
    ಸಿಬ್ಬಂದಿ – ಹಂಗ ಆಗಲಿ , ಹಸಿ ,ಒಣ ಕಸ ಬೇರೆ ಮಾಡಿ . ಪೊಲೀಸವ್ರೇ ಮಾಡ್ತಾರೆ
    ಪ್ರತಿನಿಧಿ – ಅಯ್ಯೊ ಮಾಡಲ್ಲ ಅಂತಾರೆ
    ಸಿಬ್ಬಂದಿ – ಹೋಗಲಿ ಒಂದೊಂದು ಕವರ್ ನಲ್ಲಂತೂ ಕಟ್ಟಿ ಹಾಕಿರಬೇಕು
    ಪ್ರತಿನಿಧಿ – ಸರಿ ,ಡ್ರಮ್ ಗೆ ತುಂಬಿಸಿ ಇಡ್ತಿವಿ

    ಗುತ್ತಿಗೆದಾರ ಕೆಲಸದವರ ಮೇಲೆ ಹೆಲ್ತ್ ಇನ್ಸ್ ಪೆಕ್ಟರ್ ಇದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸಿಬ್ಬಂದಿ ಪುಡಿಗಾಸಿನ ಆಸೆಗಾಗಿ ಬಿಬಿಎಂಪಿ ನಿಯಮಗಳನ್ನು ಗಾಳಿಗೆ ತೂರಿ ಕಸದ ದಂಧೆಯ ಮೂಲಕ ಹಣ ಸಂಗ್ರಹಣೆ ಮಾಡುತ್ತಿದ್ದಾರೆ.

  • ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು

    ವಿಮಾನಗಳ ಮುಖಾಮುಖಿ ಡಿಕ್ಕಿ – ಓರ್ವ ಜನಪ್ರತಿನಿಧಿ ಸೇರಿ 7 ಜನ ಸಾವು

    ಅಲಾಸ್ಕಾ: ಅಮೆರಿಕದ ಆಂಕಾರೋಜ್‍ನಲ್ಲಿ ಶುಕ್ರವಾರ ಹಾರಾಡುತ್ತಿದ್ದಾಗ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ವಿಮಾನಗಳಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬರು ಜನಪ್ರತಿನಿಧಿಯೊಂದಿಗೆ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲಾಸ್ಕಾ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮೃತರನ್ನು ಒಂದು ವಿಮಾನದ ಪೈಲಟ್ ಗ್ರೆಗೊರಿ ಬೆಲ್ (67), ಮಾರ್ಗದರ್ಶಿ ಡೇವಿಡ್ ರೋಜರ್ಸ್ (40) ಮತ್ತು ದಕ್ಷಿಣ ಕೆರೊಲಿನಾ ಸಂದರ್ಶಕರಾದ ಕ್ಯಾಲೆಬ್ ಹಲ್ಸಿ (26), ಹೀದರ್ ಹಲ್ಸಿ (25) ಮ್ಯಾಕೆ ಹಲ್ಸಿ (24) ಮತ್ತು ಕಸ್ರ್ಟಿನ್ ರೈಟ್ (23) ಎಂದು ಗುರುತಿಸಲಾಗಿದೆ. ಇನ್ನೊಂದು ವಿಮಾನದಲ್ಲಿ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ (67) ಒಬ್ಬರೇ ಇದ್ದರು ಎಂದು ತಿಳಿದು ಬಂದಿದೆ.

    ಕೆನಾಯ್ ಪೆನಿನ್ಸುಲಾದ ನಗರದ ಸೋಲ್ಡೊಟ್ನಾ ವಿಮಾನ ನಿಲ್ದಾಣದ ಬಳಿ ಈ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಎರಡು ವಿಮಾನಗಳಲ್ಲಿದ್ದ ಏಳು ಮಂದಿ ಮೃತಪಟ್ಟಿದ್ದಾರೆ. ಇದೇ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಅವರು ಒಂದು ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಇನ್ನೊಂದು ವಿಮಾನದಲ್ಲಿ ದಕ್ಷಿಣ ಕೆರೊಲಿನಾ ನಾಲ್ಕು ಪ್ರವಾಸಿಗರು, ಕಾನ್ಸಾಸ್‍ನ ಮಾರ್ಗದರ್ಶಿ ಮತ್ತು ಸೋಲ್ಡೊಟ್ನಾದ ಪೈಲಟ್ ಇದ್ದರು ಎಂದು ಸೈನಿಕರು ತಿಳಿಸಿದ್ದಾರೆ.

    ಡಿಕ್ಕಿಯಾದ ಎರಡು ವಿಮಾನಗಳು ಅವಶೇಷ ಬಂದು ಕೆನಾಯ್ ಪೆನಿನ್ಸುಲಾದ ನಗರದ ಹೆದ್ದಾರಿಯಲ್ಲಿ ಬಿದ್ದವೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಅಪಘಾತವಾದ ವಿಮಾನಗಳಲ್ಲಿ ಒಂದನ್ನು ಡಿ ಹ್ಯಾವಿಲ್ಯಾಂಡ್ ಡಿಹೆಚ್‍ಸಿ-2 ಬೀವರ್ ಎಂದು ಗುರುತಿಸಿದೆ. ಅಪಘಾತದ ಬಗ್ಗೆ ಎಫ್‍ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸುತ್ತಿದೆ. ರಾಜ್ಯ ಪ್ರತಿನಿಧಿ ಗ್ಯಾರಿ ನಾಪ್ ಅವರ ಸಾವಿಗೆ ಅವರ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

    ಅಲಾಸ್ಕಾದಲ್ಲಿ 2019ರ ಮೇ ತಿಂಗಳಿನಲ್ಲಿ ಎರಡು ವಿಮಾನಗಳ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದರು.

  • ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

    ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

    ವಿಜಯಪುರ: ಸಾಮಾನ್ಯವಾಗಿ ಯೋಗವನ್ನು ಇಚ್ಛೆ ಉಳ್ಳವರು ಮಾಡುತ್ತಾರೆ. ಮನೆಗೆ ಒಬ್ಬರು, ಇಬ್ಬರು ಯೋಗ ಮಾಡೋದು ಸರ್ವೇ ಸಾಮಾನ್ಯ. ಆದರೆ ವಿಜಯಪುರದಲ್ಲಿರುವ ಕುಟುಂಬವೊಂದರ ಎಲ್ಲ ಸದಸ್ಯರು ಪ್ರತಿನಿತ್ಯ ಯೋಗ ಮಾಡುತ್ತಾರೆ. ಜೊತೆಗೆ ಯಾರಾದರೂ ಯೋಗ ಮಾಡುತ್ತೇವೆ ಅಂದರೆ ಅವರಿಗೂ ಉಚಿತವಾಗಿ ಹೇಳಿಕೊಡುತ್ತಾರೆ.

    ವಿಜಯಪುರದ ನಗರ ನಿವಾಸಿ ದತ್ತಾತ್ರೇಯ ಹಿಪ್ಪರಗಿ ಮತ್ತು ಅವರ ಮಂಜುಳಾ ಮತ್ತು ಮಕ್ಕಳಾದ ಶ್ರೀಗಿರಿ ಹಾಗೂ ರಾಘವೇಂದ್ರ ಎಂಬ ನಾಲ್ಕು ಜನರ ಈ ಕುಟುಂಬ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡಿದೆ. ಇದರ ಜೊತೆ ದತ್ತಾತ್ರೇಯ ಅವರು ಓರ್ವ ಫೋಟೋಗ್ರಾಫರ್ ಕೂಡ ಆಗಿದ್ದು ವಿಜಯಪುರ ನಗರದಲ್ಲೇ ಒಂದು ಸ್ಟುಡಿಯೋ ತೆರೆದು ಜೀವನ ನಡೆಸುತ್ತಿದ್ದಾರೆ. ಇದರ ಜೊತೆಗೆ ಆಸಕ್ತಿ ಇರುವವರಿಗೆ ಯೋಗವನ್ನೂ ಹೇಳಿಕೊಡುತ್ತಿದ್ದಾರೆ.

    ದತ್ತಾತ್ರೆಯ ಅವರ ಬಲ ಭುಜಕ್ಕೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಲಿಲ್ಲ. ಇದರ ಜೊತೆಗೆ ದತ್ತಾತ್ರೇಯ ಅವರಿಗೆ ವೈದ್ಯರು ಸಕ್ಕರೆ ಕಾಯಿಲೆ ಬರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಯೋಗಿ ರಾಮದೇವ್ ಬಾಬಾರ ಯೋಗ ನೋಡಿ ಆಕರ್ಷಿತರಾಗಿ ಯೋಗ ಮಾಡಲು 10 ವರ್ಷದ ಹಿಂದೆ ಪ್ರಾರಂಭ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಸಕ್ಕರೆ ಕಾಯಿಲೆ ಆಗಲಿ, ಅಂಗಾಂಗಳ ನೋವಾಗಲಿ ಸುಳಿದಿಲ್ಲ ಎಂದು ಅವರು ಹೇಳುತ್ತಾರೆ.

    ಈ ಕಾರಣದಿಂದಲೇ ಅವರು ತಮ್ಮ ಮಕ್ಕಳಿಗೆ 6 ವರ್ಷದ ಮಕ್ಕಳಿಂದಲೇ ಯೋಗ ಅಭ್ಯಾಸ ಹೇಳಿಕೊಟ್ಟು ಪ್ರತಿನಿತ್ಯ ಇಡೀ ಕುಟುಂಬವೇ ಬೆಳಗ್ಗೆ ಎದ್ದು ಯೋಗ ಮಾಡುತ್ತದೆ. ಇದರಿಂದ ನಮ್ಮ ಕುಟುಂಬ ಆರೋಗ್ಯಕರ ಕುಟುಂಬ ಆಗಿದೆ ಎಂದು ದತ್ತಾತ್ರೇಯ ಅವರ ಪತ್ನಿ ಮಂಜುಳಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಮಕ್ಕಳು ಶ್ರೀಗಿರಿ ಮತ್ತು ರಾಘವೇಂದ್ರ ಕೂಡ ತಂದೆ-ತಾಯಿಯನ್ನು ಮೀರಿಸುವ ಮಟ್ಟಿಗೆ ಚಕ್ರಾಸನ, ಪ್ರಾಣಾಯಾಮ, ವೃಚ್ಚಿಕಾಸನ, ಕೌಂಡಿನ್ಯಾಸನ ಸೇರಿದಂತೆ ಕಷ್ಟಕರ ಯೋಗದ ಆಸನಗಳನ್ನು ಮಾಡುತ್ತಾರೆ.

    ಯೋಗದಿಂದ ದತ್ತಾತ್ರೇಯ ಅವರ ಇಬ್ಬರು ಮಕ್ಕಳು ಜಿಲ್ಲೆ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಕುಟುಂಬದಂತೆ ಎಲ್ಲರು ಆರೋಗ್ಯಕರವಾಗಿರಬೇಕು ಅನ್ನೋದೇ ಇವರ ಮೂಲ ಉದ್ದೇಶ ಎಂದು ಅವರು ಹೇಳುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]