Tag: rental

  • ಹೆಚ್ಚು ಬಾಡಿಗೆಗೆ ಒತ್ತಾಯಿಸಿದ 35 ಆಟೋಗಳು ಮೇಲೆ ಕೇಸ್

    ಹೆಚ್ಚು ಬಾಡಿಗೆಗೆ ಒತ್ತಾಯಿಸಿದ 35 ಆಟೋಗಳು ಮೇಲೆ ಕೇಸ್

    ಮೈಸೂರು: ಮೈಸೂರಿನಲ್ಲಿ ಹೆಚ್ಚು ಬಾಡಿಗೆಗೆ ಒತ್ತಾಯಿಸಿದ 35 ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಎನ್.ಆರ್ ಸಂಚಾರ ಪೊಲೀಸರು ಮಾರುವೇಷದಲ್ಲಿ ಸಾರ್ವಜನಿಕರಂತೆ ಹೋಗಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಯಾಣಿಕರ ಹೇಳಿದ ಸ್ಥಳಕ್ಕೆ ಬಾರದ ಆಟೋಗಳ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ.

    ಎನ್‍ಆರ್ ಸಂಚಾರ ಠಾಣೆ ಇನ್ಸ್ ಪೆಕ್ಟರ್ ದಿವಾಕರ್ ನೇತೃತ್ವದಲ್ಲಿ ರೈಲು ನಿಲ್ದಾಣ, ಕೆ.ಆರ್ ಆಸ್ಪತ್ರೆ, ಮಿಲಾದ್ ಪಾರ್ಕ್ ಮತ್ತು ಆರ್.ಎಂ.ಸಿ ವೃತ್ತ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸಿ ಒಟ್ಟು 13 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

  • ಹುಬ್ಬಳ್ಳಿಯಲ್ಲಿ ಇನ್ಮುಂದೆ  ಬಾಡಿಗೆಗೆ ಸಿಗುತ್ತೆ ಹೆಲಿಕಾಪ್ಟರ್!

    ಹುಬ್ಬಳ್ಳಿಯಲ್ಲಿ ಇನ್ಮುಂದೆ ಬಾಡಿಗೆಗೆ ಸಿಗುತ್ತೆ ಹೆಲಿಕಾಪ್ಟರ್!

    ಹುಬ್ಬಳ್ಳಿ: ಹುಬ್ಬಳ್ಳಿಯಿಂದ ಈಗಾಗಲೇ ದೇಶದ ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಆರಂಭವಾಗಿದೆ. ಈಗ ದೆಹಲಿಯ ಚಿಪನ್ಸ್ ಎವಿಯೇಷನ್ ಹಾಗೂ ಹುಬ್ಬಳ್ಳಿಯ ಬಾಹುಬಲಿ ಟೆಲಿಂ ಟೂರಿಸಂ ವತಿಯಿಂದ ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಹೆಲಿಕಾಪ್ಟರ್ ಸೇವೆ ಆರಂಭವಾಗುತ್ತಿದೆ.

    ಜನವರಿ ಅಂತ್ಯಕ್ಕೆ ಸೇವೆ ಆರಂಭಗೊಳ್ಳಲಿದ್ದು, ಜಾತ್ರೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಹೂ ಮಳೆಗೆರೆಯಲು, ವೈದ್ಯಕೀಯ ನೆರವಿಗೆ, ಮದುವೆ ಸಮಾರಂಭಗಳಿಗೆ, ಚುನಾವಣಾ ಪ್ರಚಾರಕ್ಕೇ ವಿವಿಧ ಉದ್ದೇಶಗಳಿಗೆ ಹೆಲಿಕಾಪ್ಟರ್ ಸೇವೆ ಬಾಡಿಗೆಗೆ ದೊರೆಯಲಿದೆ. ಒಂದು ಗಂಟೆಗೆ 1.10 ಲಕ್ಷ ಬಾಡಿಗೆ ನಿಗದಿ ಮಾಡಲಾಗಿದ್ದು, ಜೊತೆಗೆ ಶೇ.18 ಜಿಎಸ್‍ಟಿ ಸಹ ಭರಿಸಬೇಕಾಗಿದೆ.

    ಹುಬ್ಬಳ್ಳಿಯ ಅದರಗುಂಚಿಯ ಬಳಿಯ ಹೆಲಿಪ್ಯಾಡ್ ನಿಂದ ಹೆಲಿಕಾಪ್ಟರ್ ಸೇವೆ ದೊರೆಯಲಿದ್ದು, ಮಾಹಿತಿ ಹಾಗೂ ಬಾಡಿಗೆಗೆ 97406 68512 ಸಂಪರ್ಕಿಸಬಹುದಾಗಿದೆ ಎಂದು ಹೆಲಿ ಟೂರಿಸಂ ಮಾಲೀಕ ಬಾಹುಬಲಿ ಧರೆಪ್ಪನವರ ತಿಳಿಸಿದ್ದಾರೆ.

  • ಮಾಲೀಕ ಜೆಸಿಬಿ ತಂದಿದ್ದಕ್ಕೆ ಮಗಳ ಕುತ್ತಿಗೆಗೆ ಚಾಕು ಹಾಕಿದ್ಳು

    ಮಾಲೀಕ ಜೆಸಿಬಿ ತಂದಿದ್ದಕ್ಕೆ ಮಗಳ ಕುತ್ತಿಗೆಗೆ ಚಾಕು ಹಾಕಿದ್ಳು

    ಚಿಕ್ಕಮಗಳೂರು: ಜಾಗವನ್ನ ಕ್ಲೀನ್ ಮಾಡಿಸೋಕೆ ಮನೆ ಮಾಲೀಕ ಜೆಸಿಬಿ ತಂದಿದ್ದಕ್ಕೆ ಬಾಡಿಗೆ ಇದ್ದವಳು ನನಗೆ ಅನ್ಯಾಯ ಆಗುತ್ತಿದೆ, ನಾನು ನನ್ನ ಮಗಳು ಸಾಯುತ್ತೇವೆ ಎಂದು 5 ವರ್ಷದ ಮಗುವಿನ ಕುತ್ತಿಗೆಗೆ ತಾಯಿಯೇ ಚಾಕು ಇರಿದಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮುತ್ತಿಕೊಪ್ಪದಲ್ಲಿ ನಡೆದಿದೆ.

    ಅನುಜೋಬಿ ಮಗಳಿಗೆ ಚಾಕು ಇರಿದ ತಾಯಿ. ಗ್ರಾಮದ ಸಯ್ಯದ್ ಶಫೀರ್ ಎಂಬವರ ಮನೆಯಲ್ಲಿ ಕೆಲ ವರ್ಷಗಳಿಂದ ಕೇರಳ ಮೂಲದ ಅನುಜೋಬಿ ವಾಸವಿದ್ದು, ಹೋಟೆಲ್ ನಡೆಸುತ್ತಿದ್ದಳು. ಬಾಡಿಗೆ ಸರಿಯಾಗಿ ನೀಡದ್ದಕ್ಕೆ ಮಾಲೀಕ ಖಾಲಿ ಮಾಡುವಂತೆ ಸೂಚಿಸಿದ್ದರು. ಅದಕ್ಕೆ ಕೋರ್ಟಿನಿಂದ ಇಂಜೆಕ್ಷನ್ ಆರ್ಡರ್ ಕೂಡ ತಂದಿದ್ದಳು. ಇದನ್ನೂ ಓದಿ: ಜ್ಯೋತಿಷಿ ಮಾತು ಕೇಳಿ ಒಂದೂವರೆ ತಿಂಗ್ಳ ಕಂದಮ್ಮನನ್ನ ಕೊಂದ ತಂದೆ

    ಕೋರ್ಟ್ ಅದೊಂದು ಮಳಿಗೆಗೆ ಮಾತ್ರ ಇಂಜೆಕ್ಷನ್ ಆರ್ಡರ್ ನೀಡಿತ್ತು. ಮಾಲೀಕ ಸಯ್ಯದ್ ಶಫೀರ್ ತನ್ನ ಪಕ್ಕದ ಜಾಗದಲ್ಲಿದ್ದ ಗಿಡಗಂಟೆಯನ್ನ ಕ್ಲೀನ್ ಮಾಡಲು ಜೆಸಿಬಿ ತರಿಸಿದ್ದಾರೆ. ಇದನ್ನು ನೋಡಿ ಆಕೆ ಆಕ್ರೋಶಗೊಂಡು ಮಾಡಿಸಬೇಡಿ ಎಂದು ರಂಪಾಟ ಮಾಡಿದ್ದಾಳೆ. ನಂತರ ಸಯ್ಯದ್ ಶಫೀರ್ ಪೊಲೀಸರಿಗೆ ದೂರು ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆಯೇ ಅನುಜೋಬಿ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಐದು ವರ್ಷದ ಮಗುವಿನ ಕುತ್ತಿಗೆಗೆ ಇರಿದಿದ್ದಾಳೆ. ಕೂಡಲೇ ಸ್ಥಳೀಯರು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಮಗುವಿನ ಕುತ್ತಿಗೆಗೆ ವೈದ್ಯರು ಮೂರು ಹೊಲಿಗೆ ಹಾಕಿದ್ದಾರೆ.

    ಬಾಡಿಗೆದಾರಳ ಕೂಗಾಟ, ಹಾರಾಟ, ರಂಪಾಟ ಕಂಡು ಪ್ರತಿ ವರ್ಷ ಕಂದಾಯ ಕಟ್ಟುವ ಮನೆ ಮಾಲೀಕ ಸಯ್ಯದ್ ಶಫೀರ್ ಕಂಗಾಲಾಗಿದ್ದರು. ಸದ್ಯಕ್ಕೆ ಅನುಜೋಬಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನದ ಬಳಿಕ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

  • ನಕಲಿ ದಾಖಲೆ ಸೃಷ್ಟಿಸಿ ಜಮೀನು ನಮ್ಮದು ಎಂದವರು ಪೊಲೀಸರ ಅತಿಥಿಯಾದ್ರು

    ನಕಲಿ ದಾಖಲೆ ಸೃಷ್ಟಿಸಿ ಜಮೀನು ನಮ್ಮದು ಎಂದವರು ಪೊಲೀಸರ ಅತಿಥಿಯಾದ್ರು

    ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ವಡಗೋಲಾ ಗ್ರಾಮದಲ್ಲಿ ನಕಲಿ ದಾಖಲೆ ತಂದು ಉಳುಮೆ ಮಾಡುತ್ತಿರುವ ಜಮೀನು ನಮ್ಮದು ಎಂದುವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ವಡಗೋಲಾ ಗ್ರಾಮದ 7 ಎಕರೆ 10 ಗುಂಟೆ ಜಮೀನನ್ನು ಅಣ್ಣಪ್ಪ ಖೋತ ಎಂಬವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ಏಕಾಏಕಿ ವಿನೋದ್ ರಾವಸಾಬ್ ಹಳಕರ್ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ನಾನು ಖರೀದಿ ಮಾಡಿದ್ದು ಎಂದು ಹೇಳಿ ಗೇಣಿ ಹಣ ಕೊಡಿ ಎಂದು ಅವಾಜ್ ಹಾಕಿದ್ದರು.

    ಈ ಸಂದರ್ಭದಲ್ಲಿ ಅಣ್ಣಪ್ಪ ಮತ್ತು ವಿನೋದ್ ಇಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ಸದಲಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ವಿನೋದ್ ಹಾಗು 10 ಜನರು ಸೇರಿ ಸೃಷ್ಟಿ ಮಾಡಿರುವ ದಾಖಲೆಗಳು ನಕಲಿ ಎಂದು ಪತ್ತೆಯಾಗಿದೆ.

    ಮೂಲತಃ ಜಮೀನು ಬಾಳಾ ಹರಿ ಟೊಣ್ಣೆ ಎಂಬುವುರಿಗೆ ಸೇರಿದ್ದಾಗಿದೆ. ಆದರೆ ಹಲವು ವರ್ಷಗಳಿಂದ ಕಾಣೆಯಾದ ಬಾಳಾ ಅವರ ಜಮೀನಿನಲ್ಲಿ ಅಣ್ಣಪ್ಪ ಕೃಷಿ ಮಾಡಿಕೊಂಡು ಬಂದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಿನೋದ್ ಕಬ್ಜಾ ಪಡೆದುಕೊಳ್ಳುವ ಸಂಚು ರೂಪಿಸಿದ್ದು ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ ನ್ಯಾಯಾಂಗ ಬಂಧನದಲ್ಲಿ ಇದ್ದು 6 ಜನ ತಲೆ ಮರೆಸಿಕೊಂಡಿದ್ದಾರೆ.