Tag: Refugees

  • ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

    ದೇಶ ಬಿಟ್ಟು ತೊಲಗುವಂತೆ ಅಫ್ಘಾನ್‌ ನಿರಾಶ್ರಿತರಿಗೆ ಪಾಕ್ ಸರ್ಕಾರ ವಾರ್ನಿಂಗ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಆಶ್ರಯ ಪಡೆದಿರುವ 17 ಲಕ್ಷ ಅಫ್ಘಾನ್‌ ನಿರಾತ್ರಿತರಿಗೆ ನವೆಂಬರ್ 1ರೊಳಗೆ ದೇಶ ತೊರೆಯಲು ಪಾಕ್ ಸರ್ಕಾರ ಗಡುವು ನೀಡಿದೆ.

    ಅನುಮತಿ ಇಲ್ಲದೇ ಪಾಕಿಸ್ತಾನಕ್ಕೆ ಎಂಟ್ರಿಕೊಟ್ಟಿರುವ ಅಫ್ಘಾನ್‌ (Afghanistan) ಪ್ರಜೆಗಳು ಕೂಡಲೇ ದೇಶ ತೊರೆಯಬೇಕು. ಇಲ್ಲದಿದ್ದರೇ ಹುಡುಕಿ ಹುಡುಕಿ ಹೊಡೆದೋಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ನಿಲ್ಲದ ಸಮರ – ಉಕ್ರೇನ್‌ ದಿನಸಿ ಅಂಗಡಿ ಮೇಲೆ ರಷ್ಯಾ ರಾಕೆಟ್‌ ದಾಳಿಗೆ 49 ಮಂದಿ ಬಲಿ

    ಒಂದುವೇಳೆ ಗುರುತಿನ ಚೀಟಿ ತೋರಿಸದಿದ್ರೆ, ಅವ್ರ ರಾಷ್ಟ್ರೀಯತೆಯನ್ನ ಗುರುತಿಸಲು DNA ಟೆಸ್ಟ್ ಕೂಡ ಮಾಡಿಸ್ತೇವೆ. ಸೇನೆಯನ್ನು ಬಳಸಿಕೊಂಡು ದೇಶದಿಂದಲೇ ಹೊರಹಾಕುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದೆ. 2021ರಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ (Taliban Government) ಆಡಳಿತಕ್ಕೆ ಬಂದ ಬಳಿಕ ಲಕ್ಷಾಂತರ ಮಂದಿ ನೆರೆಯ ದೇಶಗಳಿಗೆ ತೆರಳಿದರು. ಈ ಸಂರ್ಭದಲ್ಲಿ ಅಫ್ಘಾನಿಸ್ತಾನದ ಲಕ್ಷಾಂತರ ಮಂದಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಭಿಕ್ಷುಕರ ರಫ್ತಿನಲ್ಲಿ ಪಾಕಿಸ್ತಾನವೇ ಫಸ್ಟ್ – ಜೇಬುಗಳ್ಳರ ಸಂಖ್ಯೆಯಲ್ಲೂ ಪಾಕಿಸ್ತಾನಿಯರೇ ಹೆಚ್ಚು

    ತಾಲಿಬಾನ್ ಪ್ರತಿಕ್ರಿಯೆ ಏನು?
    ಪಾಕಿಸ್ತಾನ ಸರ್ಕಾರದ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಕಾಬೂಲ್‌ನಲ್ಲಿ ತಾಲಿಬಾನ್ ಆಡಳಿತದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಅಫ್ಘಾನ್ ನಿರಾಶ್ರಿತರು ಪಾಕಿಸ್ತಾನದ ಭದ್ರತಾ ಸಮಸ್ಯೆಗಳಲ್ಲಿ ಭಾಗಿಯಾಗಿಲ್ಲ. ಎಲ್ಲಿಯವರೆಗೆ ಅವರು ಸ್ವಯಂಪ್ರೇರಣೆಯಿಂದ ಪಾಕಿಸ್ತಾನವನ್ನು ತೊರೆಯುತ್ತಾರೆಯೋ ಅಲ್ಲಿಯವರೆಗೆ ದೇಶವು ಅವರನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

    ಅಫ್ಘಾನ್ ನಿರಾಶ್ರಿತರಿಗೆ ಭಾರತದ ಆಶ್ರಯ – ಏನಿದು ವೀಸಾ? ವಿಶೇಷತೆ ಏನು?

    ನವದೆಹಲಿ: ತಾಲಿಬಾನಿಗಳ ಅಟ್ಟಹಾಸಕ್ಕೆ ಹೆದರಿ ದೇಶ ತೊರೆಯುತ್ತಿರುವ ಅಫ್ಘಾನಿಸ್ತಾನದ ಪ್ರಜೆಗಳಿಗೆ ಆಶ್ರಯ ನೀಡಲು ಭಾರತ ಮುಂದಾಗಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ನಿರಾಶ್ರಿತರಿಗೆ 6 ತಿಂಗಳ ಅವಧಿ ಇರುವ ಇ ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾವನ್ನು ಪ್ರಕಟಿಸಿ ಮಾನವೀಯತೆ ತೋರಿದೆ.

    ಈ ವಿಶೇಷ ವೀಸಾದ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದೆ. ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಇಚ್ಛಿಸುವ ನಿರಾಶ್ರಿತರಿಗೆ ಆಶ್ರಯ ನೀಡಲು ಭಾರತ ಹೊಸ ಮಾದರಿಯ ವೀಸಾವನ್ನು ಪರಿಚಯಿಸಲಾಗಿದೆ. ಯಾವುದೇ ಧರ್ಮದವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ 6 ತಿಂಗಳ ವೀಸಾವನ್ನು ನೀಡಲಾಗುತ್ತದೆ. ಈ ಅರ್ಜಿಗಳನ್ನು ದೆಹಲಿ ಕಚೇರಿಯಿಂದ ನಿರ್ವಹಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ – ಭಾರತಕ್ಕೆ ಇರುವ ಸವಾಲುಗಳೇನು?

    ಭಾರತದಲ್ಲಿ ನಿರಾಶ್ರಿತರಿಗೆ ಸಂಬಂಧಿಸಿದಂತೆ ಯಾವುದೇ ನೀತಿ ಇಲ್ಲ. ಆದರೆ ವಿದೇಶಗಳಲ್ಲಿ ಹಿಂಸೆಗೆ ತುತ್ತಾಗುವವರಿಗೆ ಪ್ರಕರಣಗಳನ್ನು ಆಧರಿಸಿ ಆಶ್ರಯ ನೀಡುತ್ತಿದೆ. ಹೀಗಾಗಿ 6 ತಿಂಗಳ ವೀಸಾ ಅವಧಿ ಮುಗಿದ ಬಳಿಕ ಮುಂದೇನು ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.

    ಏನಿದು ಎಕ್ಸ್-ಮಿಸ್ಕ್ ವೀಸಾ?
    ಯಾವುದೇ ದೇಶಕ್ಕೆ ಭೇಟಿ ನೀಡಬೇಕಾದರೂ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ವೇಳೆ ಯಾವ ಕಾರಣಕ್ಕೆ ಭೇಟಿ ನೀಡಲಾಗುತ್ತದೆ ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ. ನೀಡಿದ ಕಾರಣಗಳು ಸಮಪರ್ಕವಾಗಿದ್ದರೆ ಪ್ರವಾಸಿ, ಬಿಸಿನೆಸ್.. ಇತ್ಯಾದಿ ವೀಸಾಗಳನ್ನು ದೇಶಗಳು ನೀಡುತ್ತವೆ. ಇದನ್ನೂ ಓದಿ: ಮಹಿಳೆಯರು ಕೆಲಸ ಮಾಡಬಹುದು, ಮುಸ್ಲಿಂ ಕಾನೂನುಗಳ ವ್ಯಾಪ್ತಿಯಲ್ಲಷ್ಟೇ: ತಾಲಿಬಾನ್

    ಯಾವುದೇ ಉದ್ದೇಶವಿಲ್ಲದೆ ದೇಶಕ್ಕೆ ಬರುವವರಿಗೆ, ತಾತ್ಕಾಲಿಕ ಅವಧಿಗೆ ನೀಡಲಾಗುವ ವೀಸಾವನ್ನು ಎಕ್ಸ್-ಮಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಸದ್ಯ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಂದ್ ಆಗಿರುವುದರಿಂದ ಆನ್‍ಲೈನ್ ಮೂಲಕ ವೀಸಾಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ವೀಸಾ ಸಿಗುವುದು ಅನುಮಾನ. ಭದ್ರತಾ ಸಂಸ್ಥೆಗಳು ಅನುಮೋದನೆ ನೀಡಿದರೆ ಮಾತ್ರ ವೀಸಾವನ್ನು ಮಂಜೂರು ಮಾಡಲಾಗುತ್ತದೆ.

    ಅರ್ಜಿ ಸಲ್ಲಿಸುವ ವ್ಯಕ್ತಿಗಳು ಹೆಸರು, ವಿಳಾಸ, ಫೋನ್ ನಂಬರ್ ಜೊತೆಗೆ ಭಾರತ ಮತ್ತು ಅಫ್ಘಾನಿಸ್ತಾನಲ್ಲಿ ನೆಲೆಸಿರುವ ವ್ಯಕ್ತಿಗಳ ಹೆಸರನ್ನು ರೆಫರೆನ್ಸ್ ಆಗಿ ನೀಡಬೇಕಾಗುತ್ತದೆ.

    ಈ ವೀಸಾಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗೆ ಇಲ್ಲಿ ಭೇಟಿ ನೀಡಬಹುದು: www.indianvisaonline.gov.in

  • ಜನಸಂಖ್ಯಾ ಸ್ಪೋಟದಿಂದ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದೆ: ಡಾ.ಎಚ್.ಕೆ.ಎಸ್.ಸ್ವಾಮಿ

    ಜನಸಂಖ್ಯಾ ಸ್ಪೋಟದಿಂದ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದೆ: ಡಾ.ಎಚ್.ಕೆ.ಎಸ್.ಸ್ವಾಮಿ

    ಚಿತ್ರದುರ್ಗ: ಭೂಮಿಯ ಮೇಲೆ ಜನಸಂಖ್ಯೆ ಹೆಚ್ಚಾಗಿ, ಪ್ರಕೃತಿ ವಿಕೋಪ, ಹಿಂಸಾಚಾರ, ಯುದ್ಧ, ಸಂಘರ್ಷ ಇನ್ನಿತರ ಪ್ರಮುಖ ಕಾರಣಗಳಿಂದ ವಿಶ್ವದಾದ್ಯಂತ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಹೇಳಿದ್ದಾರೆ.

    ನಗರದ ತರಳಬಾಳು ನಗರದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ‘ವಿಶ್ವ ನಿರಾಶ್ರಿತರ ದಿನ’ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರಾಶ್ರಿತ ಜನರು ಬದುಕುವ ದಾರಿ ಹುಡುಕಲು ವಲಸೆ ಹೋಗುತ್ತಾರೆ. ಸಣ್ಣಪುಟ್ಟ ರಾಷ್ಟ್ರಗಳಿಂದ ದೊಡ್ಡ ದೇಶಗಳಿಗೆ ಜನರು ವಲಸೆ ಹೋಗುತ್ತಾರೆ. ಮೂಲಭೂತ ಸೌಕರ್ಯ ವಂಚಿತರಾದ ನಿರಾಶ್ರಿತರ ಸಮಸ್ಯೆಗೆ, ಪುನರ್ವಸತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ, ಪ್ರತಿ ವರ್ಷ ವಿಶ್ವ ನಿರಾಶ್ರಿತರ ದಿನ ಆಚರಿಸಲಾಗುತ್ತಿದೆ ಎಂದರು.

    ಜನರು ವಲಸೆಯಿಂದ ಬದುಕುವ ಮೂಲಭೂತ ಸೌಕರ್ಯ, ಹಕ್ಕುಗಳು ಕಳೆದುಕೊಳ್ಳುತ್ತಾರೆ. ಆಹಾರ, ಬಟ್ಟೆ, ಬರೆ, ಔಷಧಗಳಿಲ್ಲದೇ ನರಳುತ್ತಾರೆ. ಅಲ್ಲದೆ ಅಮಾಯಕ ನಿರಾಶ್ರಿತರನ್ನು ಕಾನೂನುಬಾಹಿರ ಚಟುವಟಿಕೆಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ನಿರಾಶ್ರಿತರನ್ನು ರಕ್ಷಿಸಿ, ಅವರಿಗೆ ಸಕಲ ಸುರಕ್ಷತೆ ಒದಗಿಸಿ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. ನಿರಾಶ್ರಿತರಿಗೂ ಅಗತ್ಯ ಸೌಲಭ್ಯಗಳನ್ನು ನೀಡಿ, ಮಾನವೀಯತೆಯಿಂದ ಅವರಿಗೆ ಆಶ್ರಯ ಸಾಮಗ್ರಿಗಳನ್ನು ಒದಗಿಸಿ, ಸಮಾಜದಲ್ಲಿ ಇತರರಂತೆ ಬದುಕುವ ಹಕ್ಕು ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ನಿರಾಶ್ರಿತರಂತೆ ವೇಷ ಭೂಷಣ ತೊಟ್ಟು, ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಎಲ್ಲೂ ಹೋಗದಿರಿ ಎಂಬ ಗೀತೆಯನ್ನು ಹಾಡಿ ಜನರನ್ನ ಜಾಗೃತಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಅಂಶುಲ್, ಹೆಚ್.ಎಸ್.ರಚನ, ಹೆಚ್.ಎಸ್.ಪ್ರೇರಣ, ವೇನಿಲಾ, ಜಾನವಿ, ಶ್ರೀನಿವಾಸ, ಗೀತ, ಶಶಿ ಹಾಜರಿದ್ದರು.

  • ಡ್ಯಾನ್ಸರ್, ಸ್ಲಂ ನಿವಾಸಿಗಳಿಗೆ ತುಪ್ಪದ ಬೆಡಗಿಯ ಸಹಾಯ ಹಸ್ತ

    ಡ್ಯಾನ್ಸರ್, ಸ್ಲಂ ನಿವಾಸಿಗಳಿಗೆ ತುಪ್ಪದ ಬೆಡಗಿಯ ಸಹಾಯ ಹಸ್ತ

    – ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ವಿತರಣೆ

    ಬೆಂಗಳೂರು: ತುಪ್ಪದ ಬೆಡಗಿ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ನಿರಾಶ್ರಿತರಿಗೆ, ಬಡವರಿಗೆ ಆಹಾರ ಪದಾರ್ಥ, ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ನೀಡುವ ಮೂಲಕ ನೆರವಾಗುತ್ತಿದ್ದಾರೆ.

    ತಮ್ಮ ಆರ್‍ಡಿ(ರಾಗಿಣಿ ದ್ವಿವೇದಿ) ಫೌಂಡೇಶನ್ ವತಿಯಿಂದ ರಾಗಿಣಿ ದ್ವಿವೇದಿ ಸಿನಿಮಾ ರಂಗದ ಕೂಲಿ ಕಾರ್ಮಿಕರಿಗೆ, ತಂತ್ರಜ್ಞರಿಗೆ ನೆರವು ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ನೂರು ಡ್ಯಾನ್ಸರ್ಸ್, 40 ಸ್ಲಮ್ ಏರಿಯಾಗಳಲ್ಲಿರುವ ಬಡವರಿಗೆ ದವಸ-ಧಾನ್ಯ ವಿತರಣೆ ಮಾಡುತ್ತಿದ್ದಾರೆ. ಮಾಜಿ ಮೇಯರ್ ಪದ್ಮಾವತಿ ಜೊತೆ ಸೇರಿ ಅನ್ನದಾಸೋಹ ಮತ್ತು ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ಸಹ ವಿತರಣೆಯನ್ನು ಮಾಡಿದ್ದಾರೆ.

    ಕೆಲ ಮಹಿಳಾ ಹಾಸ್ಟೆಲ್‍ಗಳಿಗಳಲ್ಲಿರುವ ನಿರಾಶ್ರಿತರಿಗೆ ಸ್ಯಾನಿಟರಿ ಪ್ಯಾಡ್ಸ್ ಗಳನ್ನು ವಿತರಿಸುವ ಮೂಲಕ ಮಹಿಳೆಯರ ಸಹಾಯಕ್ಕೂ ರಾಗಿಣಿ ನಿಂತಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಬಡವರಿಗೆ, ನಿರಾಶ್ರಿತರಿಗೆ ರಾಗಿಣಿ ಸಹಾಯ ಮಾಡುತ್ತಿದ್ದು, ಹಲವು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಕೊರೊನಾ ವಾರಿಯರ್ಸ್‍ಯಿಂದ ಹಿಡಿದು ಬಡ ಜನರ ವರೆಗೆ ರಾಗಿಣಿ ಸಹಾಯ ಮಾಡುತ್ತಿದ್ದಾರೆ.

    ಈ ಹಿಂದೆ ಕೊರೊನಾ ವಾರಿಯರ್ಸ್ ಗಳಾದ ವೈದ್ಯರು, ಪೊಲೀಸ್, ಪೌರ ಕಾರ್ಮಿಕರಿಗೆ ಊಟ ವಿತರಿಸಿದ್ದಾರೆ. ಹಲವು ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಸ್ವತಃ ಅವರೇ ಆಹಾರದ ಕಿಟ್ ವಿತರಿಸಿದ್ದಾರೆ. ಈ ಮೂಲಕ ಬಡವರ ಸಹಾಯಕ್ಕೆ ನಿಂತಿದ್ದಾರೆ. ಇಷ್ಟು ಮಾತ್ರವಲ್ಲದೆ ಬೀದಿ ನಾಯಿಗಳು, ಪ್ರಾಣಿಗಳಿಗೂ ರಾಗಿಣಿ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದೀಗ ಮಹಿಳೆಯರಿಗೆ, ಡ್ಯಾನ್ಸರ್ಸ್‍ಗೆ ಹಾಗೂ ಸ್ಲಂ ನಿವಾಸಿಗಳಿಗೆ ನೆರವಾಗುತ್ತಿದ್ದಾರೆ.

    ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ರೀಲ್ ಜೀವನವನ್ನು ನಾವು ತುಂಬಾ ಇಷ್ಟಪಡುತ್ತೇವೆ. ಅಂತೆಯೇ ಇದೀಗ ರಿಯಲ್ ಜೀವನ ತುಂಬಾ ಅಪ್ಯಾಯಮಾನವಾಗಿದ್ದು, ಇದಕ್ಕೆ ಗೌರವ ಸಲ್ಲಿಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ಇದೇ ರೀತಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ರಾಗಿಣಿ ದ್ವಿವೇದಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ಅಡುಗೆ ಮಾಡುವುದು, ಫುಡ್ ಕುರಿತ ಅಪ್‍ಡೇಟ್‍ಗಳನ್ನು ನೀಡುತ್ತಿರುತ್ತಾರೆ. ಅದೇ ರೀತಿ ಮಾನವೀಯ ಗುಣಗಳನ್ನು ತೋರಿಸುವ ಕೆಲಸಗಳ ಕುರಿತು ಸಹ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಶಲೋಪರಿ ವಿಚಾರಿಸಿದ್ದರು. ಇದೀಗ ಸ್ವತಃ ಅವರೇ ಬಡವರ ಸಹಾಯಕ್ಕೆ ನಿಂತಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಿರಾಶ್ರಿತರಿಗೆ 1 ತಿಂಗಳಿಗಾಗುವಷ್ಟು ರೇಷನ್

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನಿರಾಶ್ರಿತರಿಗೆ 1 ತಿಂಗಳಿಗಾಗುವಷ್ಟು ರೇಷನ್

    ಚಿಕ್ಕಮಗಳೂರು: ಲಾಕ್‍ಡೌನ್ ಘೋಷಿಸಿದ ಮೇಲೆ ಮೇಲೆ ಶೆಡ್ ಬಿಟ್ಟು ಹೊರ ಹೋಗದೆ ಯಾರಾದರೂ ಕೊಟ್ಟರೆ ಅದನ್ನೇ ಊಟ ಮಾಡಿಕೊಂಡಿದ್ದ ಚಿಕ್ಕಮಗಳೂರಿನ ಹೆಳವ ಸಮುದಾಯದ ಕುಟುಂಬಗಳಿಗೆ ದಾನಿಗಳಾದ ರೋನಾಲ್ಡೋ ಕುಲಾಸೋ ಸಹೋದರ ಜೋ ಕುಲಾಸೋ ಅವರು ಒಂದು ತಿಂಗಳಿಗೆ ಆಗುವಷ್ಟು ಆಹಾರದ ಸಾಮಾಗ್ರಿಗಳ ಕಿಟ್ ನೀಡಿದ್ದಾರೆ.

    ಕಿಟ್‍ನಲ್ಲಿ ಅಕ್ಕಿ, ತೊಗರಿಬೇಳೆ, ಸಕ್ಕರೆ, ಗೋಧಿ ಹಿಟ್ಟು, ರವೆ, ಉಪ್ಪು, ಈರುಳ್ಳಿ, ಟೀ ಪುಡಿ, ಖಾರದಪುಡಿ, ದನಿಯಾ ಪುಡಿ, ಮೈ ಸೋಪು, ಬಟ್ಟೆ ಸೋಪು, ಅಡುಗೆ ಎಣ್ಣೆ ಒಳಗೊಂಡಿದೆ. ಸುಮಾರು 20 ಮಕ್ಕಳು ಸೇರಿದಂತೆ 14 ಕುಟುಂಬದ 54 ಜನ ಇಲ್ಲಿ ವಾಸವಿದ್ದಾರೆ. ಬೀದಿ ಮೇಲೆ ನಾನಾ ರೀತಿಯ ವ್ಯಾಪಾರ ಮಾಡಿಕೊಂಡು ಬಂದ ದುಡ್ಡಲ್ಲೇ ಊಟ ಮಾಡುತ್ತಿದ್ದ ಇವರು, ಲಾಕ್‍ಡೌನ್ ಹಿನ್ನೆಲೆ ತಿಂಗಳಿಂದ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಯಾರಾದರೂ ತಂದು ಕೊಟ್ಟರೇ ಊಟ ಇಲ್ಲವಾದಲ್ಲಿ ಇಲ್ಲ ಎನ್ನುವ ಸ್ಥಿತಿ ಇತ್ತು.

    ಹಲವು ದಿನಗಳ ಕಾಲ ದಿನಕ್ಕೆ ಒಂದು ಹೊತ್ತು ಊಟ ಮಾಡಿ ಬದುಕಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ಯೂ ಸುದ್ದಿ ಮಾಡಿತ್ತು. ಸುದ್ದಿ ನೋಡಿದ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಹಾರ ಸಾಮಾಗ್ರಿ ವಿತರಿಸಿದ್ದರು. ಇಂದು ಬೆಂಗಳೂರಿನಿಂದ ಬಂದ ದಾನಿಗಳು ನಿರಾಶ್ರಿತ ಹೆಳವ ಕುಟುಂಬಗಳಿಗೆ ತಿಂಗಳ ಸಾಮಾಗ್ರಿ ನೀಡಿದ್ದಾರೆ.

    ಇದೇ ಶೆಡ್‍ನಲ್ಲಿನ ಮಹಿಳೆಯೊಬ್ಬರು ನಾಲ್ಕು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಲಾಕ್ ಡೌನ್ ಆಗಿದ್ದರಿಂದ ಹಣವಿಲ್ಲದೆ, ಹೊಟ್ಟೆ ತುಂಬಾ ಊಟ ಸಿಗದೆ, ತಾಯಿಗೆ ಹಣ್ಣು, ತರಕಾರಿ ಸೇರಿದಂತೆ ಪೌಷ್ಠಿಕ ಆಹಾರವೂ ಸಿಗದೆ ಮಗುವಿಗೆ ಹೊಟ್ಟೆ ತುಂಬ ಹಾಲು ಕುಡಿಸಲೂ ಸಾಧ್ಯವಾಗಿರಲಿಲ್ಲ. ಇದೀಗ ದಾನಿಗಳು ರೇಷನ್ ಕೊಟ್ಟಿರುವುದರಿಂದ ನಿರಾಶ್ರಿತರ ಮೊಗದಲ್ಲಿ ಮಂದಹಾಸ ಮೂಡಿದೆ.

  • ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

    ಚಿತ್ರದುರ್ಗ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ನಿರಾಶ್ರಿತರ ಮನವೊಲಿಸಿದ ಲೇಡಿ ಸಿಂಗಂ

    ಚಿತ್ರದುರ್ಗ: ಕೊರೊನಾ ಹರಡದಂತೆ ತಡೆಗಟ್ಟಲು ಜಾರಿಮಾಡಿರುವ ಲಾಕ್‍ಡೌನ್ ಅವಧಿ ವಿಸ್ತರಣೆಯಿಂದಾಗಿ ಕಳೆದ ಎರಡು ದಿನಗಳಿಂದ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ಯಾದಗಿರಿಯ ನಿರಾಶ್ರಿತರ ಮನವೊಲಿಸುವಲ್ಲಿ ಚಿತ್ರದುರ್ಗ ಎಸ್‍ಪಿ ಜಿ. ರಾಧಿಕಾ ಕೊನೆಗೂ ಯಶಸ್ವಿಯಾಗಿದ್ದಾರೆ.

    ಭಾರತ ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ತಮ್ಮ ಸ್ವಗ್ರಾಮಗಳಿಗೆ ನಮ್ಮನ್ನು ಕಳುಹಿಸಿ ಇಲ್ಲವಾದರೆ ನಮಗೆ ನೀವು ಕೊಡುವ ಅನ್ನ-ನೀರು ಬೇಡವೆಂದು ಹಠಹಿಡಿದು, ಚಿಕ್ಕ ಹಸುಗೂಸುಗಳಿಗೂ ಹಾಲುಣಿಸದಂತೆ ನಿರಾಶ್ರಿತರು ಉಪವಾಸ ಮಾಡುತ್ತಾ ಪಟ್ಟು ಹಿಡಿದಿದ್ದರು.

    ಹೀಗಾಗಿ ಅವರನ್ನು ಬುಧವಾರ ಮೊಳಕಾಲ್ಮೂರಿನ ಯರ್ರೇನಹಳ್ಳಿಯಿಂದ ಬೇರೆಡೆಗೆ ಎರಡು ಗುಂಪುಗಳಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಆಗ ಮೊಳಕಾಲ್ಮೂರಿನ ಅಕ್ಕಪಕ್ಕದ ಹಳ್ಳಿಗಳ ಗ್ರಾಮಸ್ಥರು ಮಾಹಿತಿಯ ಕೊರತೆಯಿಂದಾಗಿ ನಿರಾಶ್ರಿತರನ್ನೇ ಕೊರೊನಾ ಸೊಂಕಿತರೆಂದು ಭಾವಿಸಿ, ಅವರನ್ನು ನಮ್ಮ ಊರೊಳಗೆ ಕರೆತರಬೇಡಿ ಎಂದು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದರು. ರಾತ್ರಿಯಿಡಿ ಹೋರಾಟ ನಡೆಸಿದ್ದರು.

    ಚಿತ್ರದುರ್ಗಕ್ಕೆ ಕರೆ ತರೋಣವೆಂದರೆ ಅಲ್ಲಿನ ಹಾಸ್ಟಲ್‍ಗಳೆಲ್ಲಾ ಭರ್ತಿಯಾಗಿದ್ದವು. ಹೀಗಾಗಿ ಬುಧವಾರ ತಡರಾತ್ರಿ ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಹಾಸ್ಟಲ್‍ಗಳಲ್ಲಿ ಎರಡು ಕಡೆ ಈ ನಿರಾಶ್ರಿತರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಈ ಎಲ್ಲಾ ವಿಷಯವನ್ನು ತಿಳಿದಿದ್ದ ಚಿತ್ರದುರ್ಗ ಎಸ್‍ಪಿ ರಾಧಿಕಾ ಅವರು ಕರ್ತವ್ಯದಲ್ಲಿ ಖಡಕ್ ಅಧಿಕಾರಿ ಆಗಿದ್ದರು ಸಹ ಆ ಚಿಕ್ಕ ಚಿಕ್ಕ ಮಕ್ಕಳ ಪರಿಸ್ಥಿತಿ ಹಾಗೂ ನಿರಾಶ್ರಿತರ ಅಸಹಯಕತೆ ಕಂಡು ಮನದಲ್ಲೆ ಮರುಗಿದ್ದರು.

    ಸುಮಾರು 30 ಜನ ಮಕ್ಕಳು ಸೇರಿದಂತೆ 126 ಜನ ನಿರಾಶ್ರಿತರಿರುವ ಕೇಂದ್ರಕ್ಕೆ ಗುರುವಾರ ದಿಡೀರ್ ಧಾವಿಸಿ ಎಸ್‍ಪಿ ಆ ನಿರಾಶ್ರಿತರ ಸಂಕಷ್ಟ ಆಲಿಸಿದರು. ಕರುಣೆ ಹಾಗೂ ಮಾನವೀಯತೆ ಅನ್ನೋದು ಅಧಿಕಾರಿಗಳಲ್ಲೂ ಅಡಗಿರುತ್ತದೆ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಮೊದಲು ಅಧಿಕಾರಿಯಾಗಿ ಕಾನೂನು ಹಾಗೂ ಸದ್ಯದ ವಾತಾವರಣದ ಬಗ್ಗೆ ನಿರಾಶ್ರಿತರಿಗೆ ಅರಿವು ಮೂಡಿಸಿದರು. ಬಳಿಕ ಹಸುಗೂಸುಗಳಿಗೆ ದಯವಿಟ್ಟು ಉಪವಾಸವಿಡಬೇಡಿ ಎಂದು ನಿರಾಶ್ರಿತರಲ್ಲಿ ಮನವಿ ಮಾಡಿದರು. ಅಲ್ಲದೇ ಇಂತಹ ಸಮಸ್ಯೆಗಳು ಸಹಜವಾಗಿದ್ದು, ಕೊರೊಮಾ ಸೋಂಕು ಹರಡದಂತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ಜಾರಿಮಾಡಿದ್ದಾರೆ ಹೊರೆತು ಯಾರ ಮೇಲಿನ ದ್ವೇಷವೇನಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಈಗ ನಾವು ನಿಮ್ಮನ್ನು ನಿಮ್ಮ ಗ್ರಾಮಗಳಿಗೆ ಕಳುಹಿಸಿದರು ಸಹ ನೀವುಗಳು ನಿಮ್ಮ ಊರೊಳಗೆ ಪ್ರವೇಶಿಸೋದು ಸುಲಭವಲ್ಲ ಎಂದು ತಿಳಿ ಹೇಳಿದರು. ನಿರಾಶ್ರಿತರ ಸ್ವಗ್ರಾಮಗಳು ಹಾಗೂ ಅವರ ಜಿಲ್ಲೆಯಲ್ಲಿರುವ ಜನರ ಮನಸ್ಥಿತಿಯ ವಾಸ್ತವವನ್ನು ಅರ್ಥವಾಗುವಂತೆ ಹೇಳಿದರು. ಇದರಿಂದಾಗಿ ಸ್ವಲ್ಪ ಸಮಾಧಾನಗೊಂಡ ನಿರಾಶ್ರಿತರು ರಾಧಿಕಾ ಅವರ ಮಾತಿನಲ್ಲಿದ್ದ ಸತ್ಯವನ್ನು ಯೋಚಿಸಿದ್ದು, ಅವರ ಮನದಲ್ಲಿದ್ದ ಊರಿಗೆ ಹೋಗುವ ಆಸೆಯನ್ನು ತಾತ್ಕಾಲಿಕವಾಗಿ ಬದಿಗಿಟ್ಟಿದ್ದಾರೆ.

    ಹಾಗೆಯೇ ನಿರಾಶ್ರಿತರಿಗಾಗಿ ರಾಧಿಕಾ ಅವರು ಪ್ರೀತಿಯಿಂದ ತಂದಿದ್ದ ಹಣ್ಣು ಸೇರಿದಂತೆ ದಿನ ಬಳಕೆಯ ಅಗತ್ಯ ವಸ್ತುಗಳನ್ನು ನೀಡಲಾಗಿದ್ದು, ಅವನ್ನೆಲ್ಲಾ ಪಡೆದು ಸದ್ಯ ನಿರಾಶ್ರಿತರು ಶಾಂತವಾಗಿದ್ದಾರೆ. ಹೀಗಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಎನಿಸಿದ್ದ ನಿರಾಶ್ರಿತರ ಹಠವಾದಿತನವನ್ನು ಲೇಡಿ ಸಿಂಗಂ ಅವರ ಮನಗೆಲ್ಲುವ ಮೂಲಕ ಲಾಠಿ ಹಿಡಿಯುವ ಕೈಯಲ್ಲಿ ಜನರ ಮನಗೆಲ್ಲುವ ಶಕ್ತಿ ಕೂಡ ಇರುತ್ತದೆ ಅನ್ನೋದನ್ನು ಸಾಬೀತು ಮಾಡಿದ್ದಾರೆ.

  • ‘ಮನೆಗೆ ಹೋಗಲು ಬಿಡಿ’ – ಚಿತ್ರದುರ್ಗದಲ್ಲಿ ಕುಟುಂಬಸ್ಥರನ್ನು ನೆನೆದು ಕೂಲಿ ಕಾರ್ಮಿಕರ ಕಣ್ಣೀರು

    ‘ಮನೆಗೆ ಹೋಗಲು ಬಿಡಿ’ – ಚಿತ್ರದುರ್ಗದಲ್ಲಿ ಕುಟುಂಬಸ್ಥರನ್ನು ನೆನೆದು ಕೂಲಿ ಕಾರ್ಮಿಕರ ಕಣ್ಣೀರು

    ಚಿತ್ರದುರ್ಗ: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಜಾರಿಮಾಡಿದ ಲಾಕ್‍ಡೌನ್‍ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಚಿತ್ರದುರ್ಗ ಕ್ವಾರಂಟೈನಲ್ಲಿರುವ ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರು ಕುಟುಂಬವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

    ಯಾದಗಿರಿಯಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದ 17 ಮಂದಿ ಹಾಗೂ ವಿವಿಧ ಕೆಲಸಗಳಿಗೆ ರಾಜಸ್ಥಾನದಿಂದ ಆಂಧ್ರಪ್ರದೇಶಕ್ಕೆ ಹೋಗಿದ್ದ 10 ಜನ ನಿರಾಶ್ರಿತರನ್ನು ಚಿತ್ರದುರ್ಗ ಜಿಲ್ಲಾಡಳಿತ ಹಿರೇಯೂರಿನ ಟೋಲ್ ಗೇಟ್ ಬಳಿ ತಡೆದು, ಅವರನ್ನು ಹಾಸ್ಟಲ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

    ಈ ಹಿಂದೆ ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯಲಿದೆ ಆ ಬಳಿಕ ನಿಮ್ಮನ್ನು ನಿಮ್ ಊರುಗಳಿಗೆ ಕಳುಹಿಸುತ್ತೇವೆಂದು ಅಧಿಕಾರಿಗಳು ಕಾರ್ಮಿಕರಿಗೆ, ನಿರಾಶ್ರಿತರಿಗೆ ಭರವಸೆ ಸಹ ನೀಡಿದ್ದರು. ಆದರೆ ಇಂದು ಮತ್ತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಈ ವಿಷಯ ತಿಳಿದ ಕಾರ್ಮಿಕರು ಆತಂಕಗೊಂಡಿದ್ದು, ಸ್ವಗ್ರಾಮಗಳಲ್ಲಿರುವ ಅವರ ಗರ್ಭಿಣಿ ಪತ್ನಿ ಹಾಗೂ ತಂದೆ ತಾಯಿಯರನ್ನು ನೆನೆದು ಕಣ್ಣೀರಿಡ್ತಿದ್ದಾರೆ.

    ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿರುವ ಸರ್ಕಾರಿ ಹಾಸ್ಟಲ್‍ನಲ್ಲಿ ತಂಗಿರುವ ನಿರಾಶ್ರಿತರಾದ ಯಾದಗಿರಿಯ ಚಿತ್ತೂರು ಗ್ರಾಮದ ಕಮಲಮ್ಮ, ಮಗನಾದ ಆಕಾಶ್ ಅವರ ಸಾವಿನಂಚಿನಲ್ಲಿರುವ ಅಜ್ಜಿಯನ್ನು ನೆನೆದು ಬೆಳಿಗ್ಗೆಯಿಂದಲೇ ಉಪಹಾರ ಸೇವಿಸದೇ ಕಣ್ಣೀರುಡುತ್ತಿದ್ದಾರೆ.

    ಇತ್ತ ರಾಜಸ್ಥಾನ ಮೂಲದ ಐಸ್ ಕ್ರೀಂ ವ್ಯಾಪಾರಿ ಪಪ್ಪುಲಾಲ್ ತಮ್ಮ ಗರ್ಭಿಣಿ ಪತ್ನಿಯನ್ನು ನೆನೆದು ಅತ್ತಿದ್ದಾರೆ. ನನ್ನ ಪತ್ನಿಗೆ ಹೆರಿಗೆ ಸಮಯ ಸಮೀಪಿಸಿದೆ. ನಾನು ಮನೆಯಲ್ಲಿರುವ ನನ್ನ ಗರ್ಭಿಣಿ ಪತ್ನಿಯೊಂದಿಗೆ ಇರಬೇಕಾದ ಸಮಯದಲ್ಲಿ ಇಲ್ಲಿ ಬಂದಿಯಾಗಿದ್ದೇನೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ಜವಬ್ದಾರಿ ಹೊರುವವರು ಸಹ ಯಾರಿಲ್ಲ ಅಂತ ಕಣ್ಣೀರಿಡುತ್ತಾ, ದಯವಿಟ್ಟು ನನ್ನ ಊರಿಗೆ ನನ್ನನ್ನು ಕಳುಹಿಸಿ ಅಂತ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಅಂಗಲಾಚಿ ಬೇಡಿಕೊಂಡಿದ್ದಾರೆ.

    ರಾಜಸ್ಥಾನದ ಮತ್ತೋರ್ವ ಮಹಾವೀರ್ ಎಂಬ ಯುವಕ ತನ್ನ ಸಹೋದರನೊಂದಿಗೆ ಕಬ್ಬಿನ ಜ್ಯೂಸ್ ವ್ಯಾಪಾರಕ್ಕಾಗಿ ಆಂಧ್ರ ಪ್ರದೇಶಕ್ಕೆ ತೆರಳಿದ್ದನು. ಇದೇ ವೇಳೆ ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ತನ್ನ ಊರಿಗೆ ವಾಪಾಸ್ ಹೋಗುವಾಗ ಅಧಿಕಾರಿಗಳ ಕೈಗೆ ಯುವಕ ಹಾಗೂ ಆತನ ಸಹೋದರ ಸಿಕ್ಕಿದ್ದಾರೆ. ತನ್ನ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ವಯಸ್ಸಾದ ತಂದೆ ತಾಯಿ ಮನೆಯಲ್ಲಿದ್ದಾರೆ. ನನ್ನ ತಂದೆಗೆ ಕೈ ಇಲ್ಲ. ವಿಕಲಚೇತನರಾಗಿರುವ ಅವರಿಗೆ ನಾವಿಬ್ಬರೇ ಆಸರೆಯಾಗಿದ್ದೇವೆ. ಆದ್ದರಿಂದ ಇನ್ನು 20 ದಿನಗಳ ಕಾಲ ಇಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಊರಿಗೆ ಇಂದು ಕಳುಹಿಸಿ ಎಂದು ಯುವಕ ಮನವಿ ಮಾಡಿಕೊಂಡಿದ್ದಾನೆ.

  • 1 ವಾರದಿಂದ ಕಾರ್ಮಿಕರ ಮನೆ-ಮನೆಗೆ ತೆರಳಿ ಆಹಾರ ನೀಡ್ತಿದ್ದಾರೆ ಪೊಲೀಸರು

    1 ವಾರದಿಂದ ಕಾರ್ಮಿಕರ ಮನೆ-ಮನೆಗೆ ತೆರಳಿ ಆಹಾರ ನೀಡ್ತಿದ್ದಾರೆ ಪೊಲೀಸರು

    ಚಿಕ್ಕಮಗಳೂರು: ಲಾಕ್‍ಡೌನ್ ಹಿನ್ನೆಲೆ ಕಳೆದೊಂದು ವಾರದಿಂದ ಒಂದೆಡೆ ಕೆಲಸವಿಲ್ಲದೆ, ಮತ್ತೊಂದೆಡೆ ಊಟವೂ ಇಲ್ಲದೆ ಕೂಲಿ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸರೇ ಸೂರು ನಿರ್ಮಿಸಿಕೊಟ್ಟು, ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ವೈರಸ್ ಹರಡುವ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರು ಹೊತ್ತಿನ ತುತ್ತಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಅಂದೇ ದುಡಿದು ಅಂದೇ ತಿನ್ನುವ ವಲಸೆ ಕೂಲಿ ಕಾರ್ಮಿಕರ ಸ್ಥಿತಿ ಮತ್ತಷ್ಟು ಶೋಚನಿಯವಾಗಿದೆ. ಹೀಗಾಗಿ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ, ಕಲ್ಲತ್ತಿಪುರ, ಕೃಷ್ಣಾಪುರ, ತಣಿಗೆಬೈಲು, ಕೆಮ್ಮಣ್ಣುಗುಂಡಿ ಭಾಗದ ಏಸ್ಟೇಟ್‍ಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕೂಲಿ ಕಾರ್ಮಿಕರು ಕೂಡ ಅತಂತ್ರರಾಗಿದ್ದಾರೆ.

    ಕಾರ್ಮಿಕರ ನೋವನ್ನ ಅರಿತ ಲಿಂಗದಹಳ್ಳಿ ಪೊಲೀಸರು ಕಾರ್ಮಿಕರಿಗೆ ವಸತಿ ಹಾಗೂ ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಹಾಕಿ ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರಿಗೆ ಕಳೆದ ಒಂದು ವಾರದಿಂದ ಆಹಾರವನ್ನು ತಾವೇ ತಯಾರಿಸಿ, ಕಾರ್ಮಿಕರಿರುವ ಜಾಗಕ್ಕೆ ಹೋಗಿ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಕೊಡುತ್ತಿದ್ದಾರೆ. ಪೊಲೀಸರ ಈ ಕೆಲಸವನ್ನ ನೋಡಿದ ಸ್ಥಳೀಯರು ಕೂಡ ಇದೀಗ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.

  • ಕೊಡಗು ಸಂತ್ರಸ್ತರಿಗೆ ನೆರವಾಗಲು 1 ಎಕ್ರೆ ಕಾಫಿ ತೋಟ ದಾನ ನೀಡಿದ್ರು ಜಿ.ಪಂ ಸದಸ್ಯ!

    ಕೊಡಗು ಸಂತ್ರಸ್ತರಿಗೆ ನೆರವಾಗಲು 1 ಎಕ್ರೆ ಕಾಫಿ ತೋಟ ದಾನ ನೀಡಿದ್ರು ಜಿ.ಪಂ ಸದಸ್ಯ!

    ಮಡಿಕೇರಿ: ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೀಕರ ಭೂಕುಸಿತಕ್ಕೆ ಸಿಲುಕಿದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಅವರೆಲ್ಲರಿಗೂ ಮಾದರಿ ಎಂಬಂತೆ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಮ್ಮ 1 ಎಕರೆ ಕಾಫಿ ತೋಟವನ್ನು ನಿರಾಶ್ರಿತರ ಮನೆಗಳ ನಿರ್ಮಾಣಕ್ಕೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

    ಕೊಡಗಿನ ಕುಡಿಯರ ದಂಪತಿ ತಮ್ಮ 1 ಎಕರೆ ಜಾಗವನ್ನು ದಾನ ಮಾಡೋದಾಗಿ ಘೋಷಿಸಿದ್ದಾರೆ. ಇದೀಗ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್ ಅವರು ತಮ್ಮ 5 ಎಕರೆ ಕಾಫಿ ತೋಟದಲ್ಲಿ 1 ಎಕರೆಯನ್ನು ನಿರಾಶ್ರಿತರ ಮನೆ ನಿರ್ಮಾಣಕ್ಕೆ ನೀಡಲು ಮುಂದಾಗಿದ್ದಾರೆ.

    ಮಡಿಕೇರಿ ಮೈಸೂರು ಹೆದ್ದಾರಿ ಸಮೀಪದ ಸುಂಟಿಕೊಪ್ಪ ನಿವಾಸಿಯಾಗಿರೋ ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್, ಸುಂಟಿಕೊಪ್ಪ ವ್ಯಾಪ್ತಿಯ ತಮ್ಮ 1 ಎಕರೆ ತೋಟವನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಸುಂಟಿಕೊಪ್ಪ ಪಟ್ಟಣದಿಂದ 1 ಕಿಲೋ ಮೀಟರ್ ದೂರದಲ್ಲಿ ಈ ಜಾಗದಲ್ಲಿ ಲತೀಫ್ ಕಾಫಿ ಮತ್ತು ಕಾಳು ಮೆಣಸನ್ನು ಬೆಳೆಯುತ್ತಿದ್ದರು. ಈಗ ಈ ಜಾಗದಲ್ಲಿ 30 ಮನೆಗಳು ನಿರ್ಮಾಣವಾಗಲಿದೆ.

    ಎಸ್‍ಎಸ್‍ಎಫ್ ಹಾಗೂ ಪಿಎಫ್‍ಐ ಸಂಘಟನೆ ವತಿಯಿಂದ ಈ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಹಿಂದೂ,ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ನಿರಾಶ್ರಿತರನ್ನು ಗುರುತಿಸಿ ಮನೆ ನೀಡಲು ಮುಂದಾಗಿರೋ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಕೊಡಗು ನಿರಾಶ್ರಿತರಿಗೆ ಕುದುರೆಮುಖದಲ್ಲಿ ವಸತಿ ಸೌಲಭ್ಯ ನೀಡಿ: ಕಳಸಾ ಜನರಿಂದ ಒತ್ತಾಯ

    ಚಿಕ್ಕಮಗಳೂರು: ಕೊಡಗು ನಿರಾಶ್ರಿತ ನೂರಾರು ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖದಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಎಲ್ಲಾ ಸೌಕರ್ಯಗಳು ನೀಡುವಂತೆ ಕಳಸಾದ ಜನರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಕೊಡಗಿನಲ್ಲಿ ಸುರಿದ ಮಹಾಮಳೆಗೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ನೆಲೆ ನಿಲ್ಲೋಕೆ ಒಂದು ಸೂರಿಲ್ಲದೆ ನಿರಾಶ್ರಿತರಾಗಿರೋ ನೂರಾರು ಕುಟುಂಬಗಳಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸರ್ಕಾರ ಏನೇ ಆಶ್ವಾಸನೆ, ಭರವಸೆ ನೀಡಿದರೂ ಅವರಿಗೆ ಎಲ್ಲಾ ಸೌಕರ್ಯ ಒದಗಿಸಲು ವರ್ಷಗಳೇ ಬೇಕು. ಪುನರ್ವಸತಿ ಕೆಲಸ ಆರಂಭಿಸಲು ಕನಿಷ್ಟ ಮಳೆಗಾಲವಂತೂ ಮುಗಿಯಲೇಬೇಕು. ಮಳೆಗಾಲ ಮುಗಿಯೋದು ಯಾವಾಗ, ಏನೋ ಅನ್ನೋ ಭಯ ಜನ ಹಾಗೂ ಸರ್ಕಾರ ಇಬ್ಬರಿಗೂ ಇದೆ.

    ಕುದುರೆಮುಖದಲ್ಲಿ ಐರನ್ ಅಂಡ್ ಓರ್ ಕಂಪನಿ ಲಿಮಿಟೆಡ್‍ಗೆ ಸೇರಿದ 1800 ಕ್ಕೂ ಅಧಿಕ ಮನೆಗಳಿದ್ದು, ರಸ್ತೆ ಸಂಚಾರ, ವಿದ್ಯುತ್ ಸೌಲಭ್ಯ, ನೀರಿನ ಸೌಲಭ್ಯ, ಮತ್ತು ಸಾಧಾರಣವಾಗಿ ವಿಕೋಪಕ್ಕೆ ಸಿಲುಕುವಂತಹ ಸ್ಥಳವಲ್ಲ ಅಷ್ಟೇ ಅಲ್ಲದೇ ಸದ್ಯಕ್ಕೆ ಅವೆಲ್ಲಾ ಪಾಳು ಬಿದ್ದಿವೆ. 15 ವರ್ಷದ ಹಿಂದೆಯೇ ಕೆಐಓಸಿಎಲ್ ಕಂಪನಿ ಸ್ಥಗಿತಗೊಂಡಿದೆ. ಹಾಗಾಗಿ ಆ ಮನೆಗಳನ್ನ ದುರಸ್ತಿ ಮಾಡಿ ಕೊಡಗಿನ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನೀಡಬೇಕೆಂದು ಕಳಸಾದ ಜನರು  ಒತ್ತಾಯಿಸಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv