Tag: RedFort

  • ನಾವು ಸಂಯಮದಲ್ಲಿದ್ದರೂ ನಮ್ಮ ಮೇಲೆ ಕತ್ತಿ, ಲಾಠಿಯಿಂದ  ಥಳಿಸಿದ್ರು:  ಗಾಯಗೊಂಡ ಪೊಲೀಸ್‌

    ನಾವು ಸಂಯಮದಲ್ಲಿದ್ದರೂ ನಮ್ಮ ಮೇಲೆ ಕತ್ತಿ, ಲಾಠಿಯಿಂದ ಥಳಿಸಿದ್ರು: ಗಾಯಗೊಂಡ ಪೊಲೀಸ್‌

    ನವದೆಹಲಿ: ಕೆಂಪುಕೋಟೆ ಪ್ರವೇಶಿಸಿದ್ದ ರೈತರ ಜೊತೆ ಸಾಧ್ಯವಾದಷ್ಟು ನಾವು ಬಹಳ ಸಂಯಮದ ವರ್ತನೆ ತೋರಿದ್ದೆವು ಎಂದು ವಾಜಿರಾಬಾದ್‌ ಎಸ್‌ಎಚ್‌ಒ ಪಿಸಿ ಯಾದವ್‌ ಹೇಳಿದ್ದಾರೆ.

    ಕೆಂಪುಕೋಟೆ ದಾಂಧಲೆಯಲ್ಲಿ ರೈತರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು ನಿನ್ನೆಯ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    ಬಹಳಷ್ಟು ಜನ ಪ್ರವೇಶಿಸಿದ ಸಂದರ್ಭದಲ್ಲಿ ಭದ್ರತೆಗಾಗಿ ನಮ್ಮನ್ನು ಕೆಂಪು ಕೋಟೆಯಲ್ಲಿ ನಿಯೋಜಿಸಲಾಗಿತ್ತು. ನಾವು ಅವರನ್ನು ತಡೆದು ಕೋಟೆಯಿಂದ ಹೊರ ಹಾಕಲು ಪ್ರಯತ್ನಪಟ್ಟೆವು. ಆದರೆ ಪ್ರತಿಭಟನಾಕಾರರು ಬಹಳ ಆಕ್ರಮಣಕಾರಿಯಾಗಿದ್ದರು. ನಾವು ರೈತರ ವಿರುದ್ಧ ಬಲವನ್ನು ಬಳಸಲಿಲ್ಲ. ನಾವು ಸಾಧ್ಯವಾದಷ್ಟು ಸಂಯಮವನ್ನು ಪ್ರದರ್ಶಿಸಿದ್ದೇವೆ ಎಂದು ಅವರು ನಿನ್ನೆ ಘಟನೆಯ ಬಗ್ಗೆ ಮಾತನಾಡಿದರು.

    ಕೆಂಪುಕೋಟೆ ಬಳಿ ಪೊಲೀಸರ ಮೇಲೆ ರೈತರು ನಡೆಸಿದ ದಾಳಿ ಬೆಚ್ಚಿಬೀಳಿಸುವಂತಿದೆ. ಪೊಲೀಸರ ಮೇಲೆಯೇ ದೊಣ್ಣೆ, ಕೋಲುಗಳಿಂದ ಪ್ರತಿಭಟನಾಕಾರರು ಬೀಸಿದ್ದಾರೆ. ಒಟ್ಟಿನಲ್ಲಿ ಉದ್ರಿಕ್ತರು ಪೊಲೀಸರನ್ನೇ ಅಟ್ಟಾಡಿಸಿ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಪೊಲೀಸರು ಎಲ್ಲೂ ತಪ್ಪಿಸಿಕೊಳ್ಳದಂತೆ ಪ್ರತಿಭಟನಾಕಾರರು ಲಾಕ್ ಮಾಡಿದ್ದಾರೆ. ಹೀಗಾಗಿ ಉದ್ರಿಕ್ತರಿಂದ ತಪ್ಪಿಸಿಕೊಳ್ಳಲು ಪೊಲೀಸರು 8-10 ಅಡಿ ಎತ್ತರದ ಗೋಡೆಯಿಂದ ಜಿಗಿದಿರುವ ವಿಡಿಯೋ ವೈರಲ್‌ ಆಗಿದೆ.

    ದೆಹಲಿ ಪೊಲೀಸರು ನಿನ್ನೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 22 ಪ್ರಕರಣಗಳನ್ನು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 395 (ಡಕಾಯಿತಿ) 397( ಮಾರಣಾಂತಿಕ ಹಲ್ಲೆ) 120 ಬಿ (ಕ್ರಿಮಿನಲ್ ಪಿತೂರಿ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿ ಕೇಸ್‌ ದಾಖಲಾಗಿದೆ.

  • ಆಗಸ್ಟ್ 15ರ ಸಂಭ್ರಮಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜು- 2,500 ಲ್ಯಾಂಪ್ಸ್ ಗಳನ್ನು ಬಳಸಿ ದೀಪಾಲಂಕಾರ

    ಆಗಸ್ಟ್ 15ರ ಸಂಭ್ರಮಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜು- 2,500 ಲ್ಯಾಂಪ್ಸ್ ಗಳನ್ನು ಬಳಸಿ ದೀಪಾಲಂಕಾರ

    ನವೆದೆಹಲಿ: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ ದೆಹಲಿಯ ಕೆಂಪುಕೋಟೆ ಸಜ್ಜಾಗಿದ್ದು, ಶುಕ್ರವಾರ ರಾತ್ರಿ ಪ್ರಾಯೋಗಿಕವಾಗಿ ನಡೆದ ಬೆಳಕಿನ ಸಂಭ್ರಮಕ್ಕೆ ಸಾಂಸ್ಕೃತಿಕ ರಾಜ್ಯ ಸಚಿವ ಮಹೇಶ್ ಶರ್ಮಾ ಸಾಕ್ಷಿಯಾದರು.

    17ನೇ ಶತಮಾನದ ಮೊಗಲ್ ಸಾಮ್ರಾಜ್ಯದಲ್ಲಿ ನಿರ್ಮಾಣವಾದ ಕೆಂಪುಕೋಟೆಗೆ 2,500 ಲ್ಯಾಂಪ್ಸ್ ಗಳನ್ನು ಬಳಸಿ ದೀಪಾಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಪುರಾತತ್ವ ಇಲಾಖೆ ನೀಡಿರುವ ಮಾಹಿತಿ ಮೇರೆಗೆ 100ಕ್ಕೂ ಹೆಚ್ಚು ಸ್ಮಾರಕಗಳಿಗೆ ದೀಪಾಲಂಕಾರ ಮಾಡಲು ಉದ್ದೇಶಿಸಲಾಗಿದೆ.

    ಇದೇ ವೇಳೆ ಮಹೇಶ್ ಶರ್ಮಾ ಮಾತನಾಡಿ, ಇದು ಸ್ಥಳೀಯರು ಹೆಮ್ಮೆ ಪಡುವುದಕ್ಕೆ ಮಾತ್ರವಲ್ಲ ರಾತ್ರಿ ಪ್ರವಾಸೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲು ಸಹಾಯ ಮಾಡುತ್ತೇವೆ. ಈ ಎಲ್‍ಇಡಿ ದೀಪಾಲಂಕಾರಕ್ಕೆ 3 ಕೋಟಿ ವೆಚ್ಚದಲ್ಲಿ 2 ತಿಂಗಳ ಸಮಯವಕಾಶ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

    https://www.youtube.com/watch?v=hB-9ylPG44g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews