Tag: Red Sea

  • ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

    ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು – ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

    ದುಬೈ: ಕೆಂಪು ಸಮುದ್ರದ (Red Sea) ಮೂಲಕ ಹಾದುಹೋಗುವ ಫೈಬರ್‌ ಕೇಬಲ್‌ (Fibre Cable) ತುಂಡಾಗಿದ್ದು ವಿಶ್ವಾದ್ಯಂತ ಇಂಟರ್‌ನೆಟ್‌ (Internet) ಬಳಕೆಯಲ್ಲಿ ಸಮಸ್ಯೆಯಾಗಿದೆ.

    ಕೇಬಲ್ ವ್ಯವಸ್ಥೆಗೆ ಹಾನಿಯಾಗಿರವ ಕಾರಣ ಭಾರತ, ಪಾಕಿಸ್ತಾನ ಮತ್ತು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಬಳಕೆದಾರರು ಅಡಚಣೆಗಳನ್ನು ಎದುರಿಸಿದ್ದಾರೆ ಎಂದು ಇಂಟರ್ನೆಟ್ ಸಂಪರ್ಕದ ಮೇಲೆ ಕಣ್ಣಾ ವಲು ಇಡುವ ನೆಟ್‌ಬ್ಲಾಕ್ಸ್ ಹೇಳಿದೆ.

    ಸಂಸ್ಥೆಯು ಸೌದಿ ಅರೇಬಿಯಾದ (Saudi arabia) ಜೆಡ್ಡಾ ಸಮೀಪ SMW4 ಮತ್ತು IMEWE ಕೇಬಲ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.

    ಭಾರತದ ಟಾಟಾ ಕಮ್ಯುನಿಕೇಷನ್ಸ್ ಆಗ್ನೇಯ ಏಷ್ಯಾ-ಮಧ್ಯಪ್ರಾಚ್ಯ-ಪಶ್ಚಿಮ ಯುರೋಪ್ 4 (SMW4) ನಿರ್ವಹಣೆ ಮಾಡಿದರೆ, ಅಲ್ಕಾಟೆಲ್-ಲ್ಯೂಸೆಂಟ್ ನೇತೃತ್ವದ ಒಕ್ಕೂಟ ಭಾರತ-ಮಧ್ಯಪ್ರಾಚ್ಯ-ಪಶ್ಚಿಮ ಯುರೋಪ್ (IMEWE) ಕೇಬಲ್‌ ನಿರ್ವಹಿಸುತ್ತಿದೆ. ಇದನ್ನೂ ಓದಿ: ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ

    ಫೈಬರ್‌ ಕೇಬಲ್‌ಗಳು ತುಂಡಾಗಿದ್ದು ಹೇಗೆ ಎನ್ನುವುದಕ್ಕೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ನೈಸರ್ಗಿಕ ಘಟನೆಗಳು, ಅಪರೂಪದ ಸಂದರ್ಭಗಳಲ್ಲಿ ಉದ್ದೇಶಕ ಕೃತ್ಯದಿಂದ ಕೇಬಲ್‌ ತುಂಡಾಗುತ್ತದೆ. ಕೆಲವೊಮ್ಮೆ ಆಂಕರ್‌ ಡ್ರ್ಯಾಗ್‌ನಿಂದಲೂ ತುಂಡಾಗುವ ಸಾಧ್ಯತೆ ಇರುತ್ತದೆ. ಹಡಗು ಲಂಗರು ಹಾಕುವಾಗ ಭಾರವಾದ ಲೋಹದ ಸರಪಳಿ ಇರುವ ಆಂಕರ್‌ ಅನ್ನು ಸಮುದ್ರಕ್ಕೆ ಬೀಳಿಸಲಾಗುತ್ತದೆ. ಒಂದು ವೇಳೆ ಸರಿಯಾಗಿ ನೆಲವನ್ನು ಹಿಡಿದಿಟ್ಟುಕೊಳ್ಳದೇ ಇದ್ದರೆ ಹಡಗು ಚಲಿಸಿದಾಗ ಆಂಕರ್‌ ಚಲಿಸುವ ಸಾಧ್ಯತೆ ಇರುತ್ತದೆ. ಚಲಿಸಿದಾಗ ಸಮುದ್ರದ ಆಳದಲ್ಲಿ ಹಾಕಿರುವ ಆಂಕರ್‌ಗೆ ಸಿಕ್ಕಿ ಕೇಬಲ್‌ ತುಂಡಾಗುವ ಸಾಧ್ಯತೆಯಿದೆ.

    ಇಸ್ರೇಲ್‌ ಪ್ಯಾಲೆಸ್ತೀನ್‌ ಮೇಲೆ ಮಾಡುತ್ತಿರುವ ದಾಳಿಯನ್ನು ನಿಲ್ಲಿಸದೇ ಇದ್ದರೆ ಸಮುದ್ರದಲ್ಲಿ ಹೋಗಿರುವ ಕೇಬಲ್‌ ಕತ್ತರಿಸುತ್ತೇವೆ ಎಂದು ಯೆಮನ್‌ನ ಹೌತಿ ಬಂಡುಕೋರರು ಎಚ್ಚರಿಕೆ ನೀಡಿದ್ದರು. ಈ ಬಾರಿಯ ಕೃತ್ಯದಲ್ಲಿ ಹೌತಿ ಬಂಡುಕೋರರ ಕೈವಾಡ ಇರುವ ಶಂಕೆ ಈಗ ವ್ಯಕ್ತವಾಗುತ್ತಿದೆ.

    ಕೆಂಪು ಸಮುದ್ರ ಮಾರ್ಗ ಎಲ್ಲಿದೆ?
    ಯುರೋಪ್‌ ಮತ್ತು ಏಷ್ಯಾದ ವ್ಯಾಪಾರದ ಕೊಂಡಿಯೇ ಕೆಂಪು ಸಮುದ್ರ ಮಾರ್ಗ. ಯುರೋಪ್‌ನಿಂದ ಮೆಡಿಟರೆನಿಯನ್‌ ಸಮುದ್ರದ ಮೂಲಕ ಬರುವ ಹಡಗುಗಳು ಸೂಯೆಜ್‌ ಕಾಲುವೆ ಮೂಲಕ ಕೆಂಪು ಸಮುದ್ರಕ್ಕೆ ಆಗಮಿಸಿ ಯೆಮನ್‌ ಬಳಿ ಬಾಬ್‌ ಎಲ್‌ ಮಂಡೇಬ್‌ ಚೋಕ್‌ ಪಾಯಿಂಟ್‌ ಮೂಲಕ ಅರಬ್ಬಿ ಸಮುದ್ರಕ್ಕೆ ಬಂದು ಏಷ್ಯಾದ ದೇಶಗಳಿಗೆ ಹೋಗುತ್ತದೆ. ಪ್ರತಿ ದಿವಸ ಈ ಮಾರ್ಗದಲ್ಲಿ ಅಂದಾಜು 385 ಕಾರ್ಗೋ ಹಡಗುಗಳು ಸಂಚರಿಸುತ್ತವೆ.

  • Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    Explainer | ಯಾರಿದು ಹೌತಿ ಉಗ್ರರು? ಅಮೆರಿಕ ದಾಳಿ ನಡೆಸಿದ್ದು ಯಾಕೆ? ವಿಶ್ವಕ್ಕೆ ಸಮಸ್ಯೆ ಏನು?

    ಷ್ಯಾ-ಉಕ್ರೇನ್‌, ಹಮಾಸ್‌-ಇಸ್ರೇಲ್‌ ಮಧ್ಯೆ ಕದನ ವಿರಾಮದ ಬಗ್ಗೆ ಮಾತುಕತೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಹೌತಿ ಉಗ್ರರ ಕಿರಿಕ್‌ ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಈ ಉಗ್ರರು ಈಗ ಮತ್ತೆ ನಾವು ವಾಣಿಜ್ಯ ಹಡುಗುಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ (USA) ಈಗ ಹೌತಿ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ (Air Strike) ಮಾಡಿದೆ. ಹೀಗಾಗಿ ಇಲ್ಲಿ ಹೌತಿ ಉಗ್ರರು ಯಾರು? ಕೆಂಪು ಸಮುದ್ರ ಮಾರ್ಗ ಯಾಕೆ ಫೇಮಸ್‌? ಹೌತಿ ಉಗ್ರರು ದಾಳಿ ಮಾಡಿದರೆ ಭಾರತ (India) ಮತ್ತು ವಿಶ್ವದ ಮೇಲೆ ಆಗುವ ಪರಿಣಾಮ ಏನು ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಹೌತಿ ಉಗ್ರರು ಯಾರು?
    1990ರಲ್ಲಿ ಯೆಮೆನ್‌ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ವಿರುದ್ಧ ಭ್ರಷ್ಟಾಚಾರದ ಆರೋಪ ಬರುತ್ತದೆ. ಈ ವೇಳೆ ಧಾರ್ಮಿಕ ನಾಯಕ ಹುಸೇನ್‌ ಅಲಿ ಹೌತಿ ನೇತೃತ್ವದಲ್ಲಿ ಒಂದು ಚಳುವಳಿ ಆರಂಭವಾಗುತ್ತದೆ. ಈ ಚಳುವಳಿ ಈಗ ಹೌತಿ ಉಗ್ರ ಸಂಘಟನೆಯಾಗಿ ಮಾರ್ಪಾಡಾಗಿದೆ.

    ರಷ್ಯಾದ (Russia) ವಿರುದ್ಧ ಹೋರಾಡಲು ಅಮೆರಿಕ ತಾಲಿಬಾನ್‌ ಹೇಗೆ ಬೆಳೆಸಿತೋ ಅದೇ ರೀತಿ ಇರಾನ್‌ ತನ್ನ ವಿರುದ್ಧ ಇರುವ ದೇಶಗಳ ವಿರುದ್ಧ ಹೋರಾಡಲು ಹೌತಿ ಬಂಡುಕೋರರಿಗೆ ಸಹಾಯ ನೀಡುತ್ತದೆ. ಈಗ ಯೆಮೆನ್‌ನ ಒಂದು ಕಡೆ ಸೌದಿ ಅರೇಬಿಯಾ ಮತ್ತು ಅಮೆರಿಕದ ಬೆಂಬಲ ಇರುವ ಒಂದು ಸರ್ಕಾರ ಇದ್ದರೆ ಇನ್ನೊಂದು ಕಡೆ ಇರಾನ್‌ ಬೆಂಬಲಿತ ಹೌತಿ ಉಗ್ರರು ಇದ್ದಾರೆ. ಅಮೆರಿಕ, ಇಸ್ರೇಲ್‌, ಸೌದಿ ಅರೇಬಿಯಾ ಮತ್ತು ಪಾಶ್ಚಿಮಾತ್ಯ ದೇಶಗಳೇ ಹೌತಿ ಉಗ್ರರ ಶತ್ರುಗಳು.

    ಕೆಂಪು ಸಮುದ್ರ ಮಾರ್ಗ ಎಲ್ಲಿದೆ?
    ಯುರೋಪ್‌ ಮತ್ತು ಏಷ್ಯಾದ ವ್ಯಾಪಾರದ ಕೊಂಡಿಯೇ ಕೆಂಪು ಸಮುದ್ರ ಮಾರ್ಗ. ಯುರೋಪ್‌ನಿಂದ ಮೆಡಿಟರೆನಿಯನ್‌ ಸಮುದ್ರದ ಮೂಲಕ ಬರುವ ಹಡಗುಗಳು ಸೂಯೆಜ್‌ ಕಾಲುವೆ ಮೂಲಕ ಕೆಂಪು ಸಮುದ್ರಕ್ಕೆ (Red Sea) ಆಗಮಿಸಿ ಯೆಮನ್‌ ಬಳಿ ಬಾಬ್‌ ಎಲ್‌ ಮಂಡೇಬ್‌ ಚೋಕ್‌ ಪಾಯಿಂಟ್‌ ಮೂಲಕ ಅರಬ್ಬಿ ಸಮುದ್ರಕ್ಕೆ ಬಂದು ಏಷ್ಯಾದ ದೇಶಗಳಿಗೆ ಹೋಗುತ್ತದೆ. ಪ್ರತಿ ದಿವಸ ಈ ಮಾರ್ಗದಲ್ಲಿ ಅಂದಾಜು 385 ಕಾರ್ಗೋ ಹಡಗುಗಳು ಸಂಚರಿಸುತ್ತವೆ.

     

    ಹೌತಿ ಉಗ್ರರು ದಾಳಿ ನಡೆಸುತ್ತಿರುವುದು ಯಾಕೆ?
    ಮೊದಲೇ ಹೇಳಿದಂತೆ ಹೌತಿ ಬಂಡುಕೋರರಿಗೆ ಮೊದಲಿನಿಂದಲೂ ಇಸ್ರೇಲ್‌ ವಿರೋಧಿ. ಅಷ್ಟೇ ಅಲ್ಲದೇ ಹಮಾಸ್‌ ಉಗ್ರರ ಜೊತೆ ಉತ್ತಮ ಸಂಬಂಧವನ್ನು ಹೌತಿ ಇಟ್ಟುಕೊಂಡಿದೆ. ಯಾವಾಗ ಇಸ್ರೇಲ್‌ ಹಮಾಸ್‌ ಉಗ್ರರ ಮೇಲೆ ದಾಳಿ ಮಾಡಿತೋ ಅದಕ್ಕೆ ಪ್ರತಿಯಾಗಿ ಹೌತಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್‌ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿತು.

    ಇಸ್ರೇಲ್‌ ನಡೆಸಿದ ದಾಳಿ ಅಮೆರಿಕ ಮತ್ತು ಯುರೋಪ್‌ ರಾಷ್ಟ್ರಗಳು ಬೆಂಬಲ ನೀಡಿದ್ದವು. ಇಸ್ರೇಲ್‌ಗೆ ನೀಡಿದ ಬೆಂಬಲಕ್ಕೆ ಪ್ರತಿಯಾಗಿ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ಸಂಚರಿಸುವ ಅಮೆರಿಕ ಮತ್ತು ಯುರೋಪ್‌ ಕಾರ್ಗೋ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ದಾಳಿ ನಡೆಸಿದರೆ ಇಸ್ರೇಲ್‌ ಮೇಲೆ ಈ ದೇಶಗಳು ಒತ್ತಡ ಹಾಕಿ ಯುದ್ಧ ನಿಲ್ಲಸಬಹುದು ಎಂಬ ಲೆಕ್ಕಾಚಾರ ಹೌತಿ ಉಗ್ರರದ್ದು.

     

     

    ಈಗ ಅಮೆರಿಕ ದಾಳಿ ನಡೆಸಿದ್ದು ಯಾಕೆ?
    2023 ರ ಅಂತ್ಯದಿಂದ ಹೌತಿಗಳು ಕೆಂಪು ಸಮುದ್ರ, ಅಡೆನ್ ಕೊಲ್ಲಿ ಮತ್ತು ಇತರ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ವಾಣಿಜ್ಯ ಮತ್ತು ಮಿಲಿಟರಿ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈಗ ಗಾಜಾದಲ್ಲಿ ಕದನ ವಿರಾಮದ ಹೊರತಾಗಿಯೂ ಹೌತಿಗಳು ಇತ್ತೀಚೆಗೆ ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಕ್ಕೆ ಅಮೆರಿಕ ಈಗ ಯುದ್ಧ ವಿಮಾನಗಳನ್ನು ಬಳಸಿ ಬಾಂಬ್‌ ದಾಳಿ ನಡೆಸಿದೆ.

    ಪ್ರಸಿದ್ಧ ಮಿಲಿಟರಿ ತಾಣವಾದ ಸನಾ ವಿಮಾನ ನಿಲ್ದಾಣ ಸಂಕೀರ್ಣ, ಸೌದಿ ಗಡಿಯ ಬಳಿ ಹೌತಿಗಳ ಉತ್ತರದ ಭದ್ರಕೋಟೆಯಾದ ಸಾದಾ, ನೈಋತ್ಯ ಪ್ರದೇಶದಲ್ಲಿರುವ ಧಮರ್ ಮತ್ತು ಅಬ್ಸ್, ಹೌತಿ ಮಿಲಿಟರಿ ಸೌಲಭ್ಯಗಳ ನೆಲೆಯಾಗಿರುವ ಗೆರಾಫ್ ಮೇಲೆ ಅಮೆರಿಕ ಏರ್‌ಸ್ಟ್ರೈಕ್‌ ಮಾಡಿದೆ.

    ವಿಶ್ವಕ್ಕೆ ಸಮಸ್ಯೆ ಯಾಕೆ?
    ಯೆಮೆನ್‌ ಪಶ್ಚಿಮ ಭಾಗವನ್ನು ಹೌತಿ ಉಗ್ರರು ವಶಪಡಿಸಿಕೊಂಡಿದ್ದಾರೆ. ಪಶ್ಚಿಮ ಭಾಗವನ್ನು ವಶಪಡಿಸಿಕೊಂಡಿದ್ದರೂ ಯಾವುದೇ ಸಮಸ್ಯೆ ಇಲ್ಲ. ಆದರೆ ಅವರು ಈಗ ಕಿರಿಕ್‌ ಮಾಡುತ್ತಿರುವುದು ಬಾಬ್‌ ಎಲ್‌ ಮಂಡೇಬ್‌ ಎಂಬ ಚೋಕ್‌ ಪಾಯಿಂಟ್‌ನಲ್ಲಿ. ಈ ಚೋಕ್‌ ಪಾಯಿಂಟ್‌ 50 ಕಿ.ಮೀ ಉದ್ದ ಇದ್ದರೆ 26 ಕಿ.ಮೀ ಅಗಲ ಹೊಂದಿದೆ. ಈ ಚೋಕ್‌ಪಾಯಿಂಟ್‌ ಬ್ಲಾಕ್‌ ಮಾಡಿ ಕಿರಿಕ್‌ ಮಾಡುವುದು ಹೌತಿ ಉಗ್ರರ ಉದ್ದೇಶ.

    ಈ ಸಮುದ್ರ ಮಾರ್ಗ ಎಷ್ಟು ಮುಖ್ಯ ಅಂದರೆ ವಿಶ್ವದ ಕಂಟೈನರ್‌ ಟ್ರಾಫಿಕ್‌ ಪೈಕಿ ಶೇ.30 ರಷ್ಟು ಹಡಗುಗಳು ಈ ಮಾರ್ಗದಲ್ಲಿ ಸಂಚರಿಸುತ್ತದೆ. ಶೇ.7 ರಿಂದ ಶೇ.10 ರಷ್ಟು ಕಚ್ಚಾ ತೈಲ ಹಡಗುಗಳು ಈ ರೂಟ್‌ನಲ್ಲಿ ಸಾಗುತ್ತದೆ. ಕೆಂಪು ಸಮುದ್ರದ ಮೂಲಕ ವರ್ಷಕ್ಕೆ 1 ಟ್ರಿಲಿಯನ್‌ ಡಾಲರ್‌ ವ್ಯವಹಾರ ನಡೆಯುತ್ತದೆ. ಇದನ್ನೂ ಓದಿ: ಭಾರತದ ಧ್ವಜವುಳ್ಳ ಕಚ್ಚಾತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರಿಂದ ಡ್ರೋನ್‌ ದಾಳಿ

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ಹಿಂದೆ ಸೂಯೆಜ್‌ ಕಾಲುವೆಯಲ್ಲಿ ಕಂಟೈನರ್‌ ಹಡಗು ಅರ್ಧಕ್ಕೆ ನಿಂತಿತ್ತು. 6 ದಿನ ಕಾಲುವೆಯಲ್ಲೇ ನಿಂತ ಕಾರಣ ವಿಶ್ವಕ್ಕೆ ಅಂದಾಜು 54 ಶತಕೋಟಿ ಡಾಲರ್‌ ವ್ಯಾಪಾರ ನಷ್ಟವಾಗಿತ್ತು. ಒಂದು ವಾರಕ್ಕೆ ಇಷ್ಟು ನಷ್ಟವಾದರೆ ತಿಂಗಳು ಕಾಲ ಈ ಜಲ ಮಾರ್ಗದಲ್ಲಿ ಸಮಸ್ಯೆಯಾದರೆ ವಿಶ್ವಕ್ಕೆ ಸಾಕಷ್ಟು ನಷ್ಟವಾಗಲಿದೆ.

    ಹಾಗೆ ನೋಡಿದರೆ ಹಿಂದೆ ಸೌದಿ ಅರೇಬಿಯಾದ ಮೇಲೂ ಹೌತಿ ಉಗ್ರರು ದಾಳಿ ನಡೆಸಿದ್ದರು. ಯಾಕೆಂದರೆ ಸೌದಿಯಲ್ಲಿ ಸುನ್ನಿ ಮುಸ್ಲಿಮರಿಂದ ಹೌತಿಯಲ್ಲಿ ಶಿಯಾ ಮುಸ್ಲಿಮರಿದ್ದಾರೆ. ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋದ ತೈಲ ಸಂಸ್ಕರಣ ಘಟಕದ ಮೇಲೆ ಡ್ರೋನ್‌ ದಾಳಿ ನಡೆಸಿದ್ದರು. ಈ ಪರಿಣಾಮ ದಿಢೀರ್‌ ವಿಶ್ವದಲ್ಲಿ ತೈಲ ಬೆಲೆ ಏರಿಕೆಯಾಗಿತ್ತು.

    ಭಾರತದ ಮೇಲೆ ಆಗುವ ಪರಿಣಾಮ ಏನು?
    ಹೇಗೆ ವಾಹನಗಳಿಗೆ ವಿಮೆ ಮಾಡಲಾಗುತ್ತದೋ ಅದೇ ರೀತಿ ಹಡಗಗುಗಳಿಗೆ ವಿಮೆ ಇರುತ್ತೆ. ಮೊದಲು ಈ ಮಾರ್ಗದ ಮೂಲಕ ಸಾಗುವ ಕಾರ್ಗೋ ಶಿಪ್‌ಗಳಿಗೆ 2 ಲಕ್ಷ ಡಾಲರ್‌ ವಿಮೆ ಇದ್ದರೆ ಈಗ 5 ಲಕ್ಷ ಡಾಲರ್‌ಗೆ ಏರಿಕೆಯಾಗಿದೆ.

    ಎರಡನೇಯದಾಗಿ ಕೆಂಪು ಸಮುದ್ರದಲ್ಲಿ ಸಮಸ್ಯೆಯಾದರೆ ಹಡಗುಗಳು ಈಗ ಮಾರ್ಗವನ್ನು ಬದಲಾಯಿಸಿ ಆಫ್ರಿಕಾ ಖಂಡಕ್ಕೆ ಸುತ್ತು ಹಾಕಿ ಏಷ್ಯಾ, ಯುರೋಪ್‌ ದೇಶಗಳನ್ನು ತಲುಪಬೇಕಾಗುತ್ತದೆ. ಕೆಂಪು ಸಮುದ್ರದ 2 ಸಾವಿರ ಕಿ.ಮೀ ಮಾಡಬೇಕಾದ ಹಡಗು ಹತ್ತಿರ ಹತ್ತಿರ 9 ಸಾವಿರ ಕಿ.ಮೀ ಕ್ರಮಿಸಿ ದೇಶಗಳನ್ನು ತಲುಪಬೇಕಾಗುತ್ತದೆ. ಯುರೋಪ್‌ನಿಂದ 5 ವಾರದಲ್ಲಿ ಭಾರತಕ್ಕೆ ಬರುತ್ತಿದ್ದ ಹಡಗುಗಳು ಈ ಮಾರ್ಗ ಬಳಸಿದರೆ 7-8 ವಾರ ಬೇಕಾಗುತ್ತದೆ.

    ಕೆಂಪು ಸಮುದ್ರದಲ್ಲಿ ಯುದ್ಧ ನಿಲ್ಲುತ್ತಾ?
    ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾರ ಮೇಲೆ ಬೇಕಾದರೂ ಭೂಮಿ, ವಾಯು, ಸಮುದ್ರದಿಂದ ದಾಳಿ ಮಾಡಬಹುದು. ಈಗಾಗಲೇ ಅಮೆರಿಕ ಮತ್ತು ಯುಕೆ ಯೆಮೆನ್‌ನಲ್ಲಿರುವ ಹೌತಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೇ ಅಮೆರಿಕ ಮತ್ತು ಯುಕೆಯ ಯುದ್ಧ ನೌಕೆ ಹಡಗುಗಳು ಕೆಂಪು ಸಮುದ್ರದದಲ್ಲಿ ಬಿಡು ಬಿಟ್ಟಿವೆ. ಇರಾನ್‌ ಹೌತಿ ಉಗ್ರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ. ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಮಿಲಿಟರಿಯಲ್ಲಿ ಸೂಪರ್‌ ಪವರ್‌ ದೇಶಗಳಾಗಿವೆ. ಹೀಗಾಗಿ ಹೌತಿ ಉಗ್ರರನ್ನು ಸದೆ ಬಡೆಯುವುದು ಕಷ್ಟದ ಕೆಲಸ ಏನಲ್ಲ. ಈ ಕಿತ್ತಾಟದ ಮಧ್ಯೆ ಇರಾನ್‌ ಮಧ್ಯ ಪ್ರವೇಶ ಮಾಡಿದರೆ ಪರಿಸ್ಥಿತಿ ಉಲ್ಭಣವಾಗುವ ಸಾಧ್ಯತೆಯಿದೆ.

  • ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

    ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

    ಹಾಂಕಾಂಗ್‌: ಜಾಗತಿಕ ಇಂಟರ್‌ನೆಟ್‌ (Internet) ಮತ್ತು ಟೆಲಿಕಮ್ಯೂನಿಕೇಶನ್‌ ಸಂಪರ್ಕಕ್ಕೆ ಕೆಂಪು ಸಮುದ್ರದ (Red Sea) ಕೆಳಗಡೆ ಹಾಕಲಾಗಿದ್ದ 3 ಡೇಟಾ ಕೇಬಲ್‌ಗಳನ್ನು (Data Cable) ಕತ್ತರಿಸಲಾಗಿದ್ದು ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯವಾಗುವಾಗಲಿದೆ.

    ಹಾಂಕಾಂಗ್‌ ಮೂಲದ HGC ಗ್ಲೋಬಲ್ ಕಮ್ಯುನಿಕೇಷನ್ಸ್ ಹೇಳಿಕೆ ಬಿಡುಗಡೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ವಿಶ್ವದ ಸುಮಾರು 25 ಪ್ರತಿಶತದಷ್ಟು ಇಂಟರ್‌ನೆಟ್‌ ಟ್ರಾಫಿಕ್‌ (Internet Traffic) ಮೇಲೆ ಪರಿಣಾಮ ಬೀರಲಿದೆ.

    ಜಗತ್ತಿನಾದ್ಯಂತ ಟ್ರಾಫಿಕ್ ಅನ್ನು ಮರುಮಾರ್ಗಗೊಳಿಸುವುದರ ಜೊತೆಗೆ ಕೆಂಪು ಸಮುದ್ರದಲ್ಲಿ ಇನ್ನೂ ಕಾರ್ಯನಿರ್ವಹಿಸಬಹುದಾದ 11 ಕೇಬಲ್‌ಗಳ ಮೂಲಕ ಟ್ರಾಫಿಕ್‌ ಸಮಸ್ಯೆಯನ್ನು ತಗ್ಗಿಸಲು ಕಂಪನಿಗಳು ಈಗ ಕ್ರಮ ಕೈಗೊಳ್ಳುತ್ತಿದೆ. ಇದನ್ನೂ ಓದಿ: ಬೆಂಗ್ಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ – ದೇಶದ 17 ಕಡೆ ಎನ್‌ಐಎ ದಾಳಿ

    ಏಷ್ಯಾ – ಆಫ್ರಿಕಾ-ಯುರೋಪ್‌, ಯುರೋಪ್‌ ಇಂಡಿಯಾ ಗೇಟ್‌ವೇ, ಸೀಕಾಮ್ ಮತ್ತು ಟಿಜಿಎನ್‌ ಗಲ್ಫ್‌ ಕೇಬಲ್‌ಗಳನ್ನು ಕತ್ತರಿಸಲಾಗಿದೆ. ಸಿಯಾಕಾಮ್‌ ಮತ್ತು ಟಿಜಿಎನ್‌ ಗಲ್ಫ್‌ ಕೇಬಲ್‌ನಲ್ಲಿ ಟಾಟಾ ಕಮ್ಯೂನಿಕೇಷನ್‌ (Tata Communication) ಒಂದು ಭಾಗವಾಗಿದೆ. ಇದನ್ನೂ ಓದಿ: ಆಪಲ್‌ ಐಫೋನ್‌ಗೆ ಭರ್ಜರಿ 16,584 ಕೋಟಿ ರೂ. ದಂಡ

    ಈ ವಿಚಾರ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಟಾಟಾ ಕಮ್ಯೂನಿಕೇಷನ್‌, ತಕ್ಷಣ ಮತ್ತು ಸೂಕ್ತ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ನಾವು ವಿವಿಧ ಕೇಬಲ್‌ ಕಂಪನಿಗಳನ್ನು ಹೂಡಿಕೆ ಮಾಡಿದ್ದೇವೆ. ಈ ರೀತಿಯ ಸಮಸ್ಯೆಯಾದಾಗ ನಮ್ಮ ಸೇವೆಗಳನ್ನು ಸ್ವಯಂಚಲಿತವಾಗಿ ಮರುಹೊಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.

    ಡೇಟಾ ಕೇಬಲ್‌ ತುಂಡಾಗಿದ್ದು ಹೇಗೆ ಎಂಬುದಕ್ಕೆ ಯಾವುದೇ ಅಧಿಕೃತ ವಿವರ ಸಿಕ್ಕಿಲ್ಲ. ಮಾಧ್ಯಮಗಳು ಪ್ಯಾಲೆಸ್ತೀನ್‌ (Palestine) ಮೇಲೆ ಇಸ್ರೇಲ್‌ (Israel) ದಾಳಿ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಯೆಮೆನ್‌ ಮೂಲದ ಹೌತಿ ಬಂಡುಕೋರರು (Houthi Rebels) ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಿ ವರದಿ ಮಾಡಿವೆ.

     

    ಯೆಮೆನ್ ಸರ್ಕಾರವು ಬ್ರಿಟಿಷ್ ಮತ್ತು ಯುಎಸ್ ಮಿಲಿಟರಿ ಕಾರ್ಯಾಚರಣೆಯಿಂದ ಈ ಕೇಬಲ್‌ ತುಂಡಾಗಿದೆ ಎಂದು ದೂಷಿಸಿದೆ. ಜಲಾಂತರ್ಗಾಮಿ ಕೇಬಲ್‌ಗಳನ್ನು ದುರಸ್ತಿ ಮಾಡಲು ಮತ್ತು ನಿರ್ವಹಿಸಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ನಾವು ಉತ್ಸುಕವಾಗಿದ್ದೇವೆ ಎಂದು ಯೆಮೆನ್‌ ಹೇಳಿದೆ.

    ಯುದ್ಧ ನಿಲ್ಲಿಸಲು ಇಸ್ರೇಲ್‌ ಮೇಲೆ ಒತ್ತಡ ಹೇರುವ ಸಂಬಂಧ ಹೌತಿ ಬಂಡುಕೋರರು ಆರಂಭದಲ್ಲಿ ಕೆಂಪು ಸಮುದ್ರದಲ್ಲಿ ಸಂಚರಿಸುವ ಇಸ್ರೇಲ್‌ ಸರಕು ಸಾಗಾಣೆ ಹಡುಗಗಳ ಮೇಲೆ ದಾಳಿ ನಡೆಸುತ್ತಿದ್ದರು.  ಈಗ ಆ ಭಾಗದಲ್ಲಿ ಸಂಚರಿಸುತ್ತಿದ್ದ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆರಂಭಿಸಿದ್ದಾರೆ. ಪರಿಣಾಮ ಕೆಂಪು ಸಮುದ್ರದ ಮೂಲಕ ಏಷ್ಯಾ-ಯುರೋಪ್‌ ಮೂಲಕ ಸಾಗುವ ಹಡಗುಗಳು ಈಗ ಆಫ್ರಿಕಾ ಖಂಡವನ್ನು ಸುತ್ತು ಹಾಕಿ ಯುರೋಪ್‌ಗೆ ತೆರಳುತ್ತಿವೆ.

     

  • ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ಕೆಂಪು ಸಮುದ್ರದ ತಳಭಾಗದಲ್ಲೊಂದು ಡೆಡ್ಲಿ ಪೂಲ್ – ಇಲ್ಲಿ ಈಜುವ ಪ್ರತಿ ಜೀವಿಗೂ ಕಾದಿದೆ ಅಪಾಯ

    ನವದೆಹಲಿ: ಮಿಯಾಮಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಕೆಂಪು ಸಮುದ್ರದ ತಳಭಾಗದಲ್ಲಿ ಡೆಡ್ಲಿ ಪೂಲ್ (ಮಾರಣಾಂತಿಕ ಕೊಳ) ಪತ್ತೆಯಾಗಿದ್ದು, ಇದು ಪೂಲ್‌ನಲ್ಲಿ ಈಜುವ ಜೀವಿಯನ್ನು ಕೊಲ್ಲುತ್ತದೆ ಎನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ವಿಜ್ಞಾನಿಗಳು ತಮ್ಮ ರಿಮೋಟ್ ಚಾಲಿತ ವಾಹನ ಬಳಸಿಕೊಂಡು ಕೆಂಪು ಸಮುದ್ರದ ತಳಭಾಗದಲ್ಲಿ 1.7 ಕಿ.ಮೀ ನಷ್ಟು ಉಪ್ಪು ನೀರಿನ ಡೆಡ್ಲಿ ಪೂಲ್ ಅನ್ನು ಕಂಡು ಹಿಡಿದ್ದಾರೆ. 10 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಯ 5 ನಿಮಿಷ ಇರುವಾಗ ಈ ಕೊಳವನ್ನು ಕಂಡುಹಿಡಿದಿದ್ದಾರೆ. ಈ ಪೂಲ್ ಅತಿಹೆಚ್ಚು ಉಪ್ಪು ನೀರಿನ ಕೇಂದ್ರೀಕೃತವಾಗಿದೆ. ಜೊತೆಗೆ ರಾಸಾಯನಿಕ ಅಂಶಗಳಿಂದ ಕೂಡಿದ್ದು, ಸುತ್ತಮುತ್ತಲಿನ ಎಲ್ಲ ಸಾಗರಗಳಿಗಿಂತಲೂ ಹೆಚ್ಚು ಉಪ್ಪು ನೀರನ್ನು ಹೊಂದಿದೆ ಎಂದು ಸಂಶೋಧಕರು ವಿವರಿದ್ದಾರೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು

    ಅಲ್ಲದೇ ಈ ಪೂಲ್ ಜಲಚರ ಜೀವರಾಶಿಗಳನ್ನು ದಿಗ್ಭ್ರಮೆಗೊಳಿಸುತ್ತದೆ, ಜೊತೆಗೆ ಕೊಲ್ಲಲೂಬಹುದು ಎಚ್ಚರಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕ ಸ್ಯಾಮ್ ಪುರ್ಕಿಸ್, ಈ ಪೂಲ್‌ಗಳು ಭೂಮಿಯ ಮೇಲ್ಮೈಗಿಂತಲೂ ಮಾರಣಾಂತಿಕ ಪರಿಸರ ವಾತಾವರಣವನ್ನು ಒಳಗೊಂಡಿರುತ್ತವೆ. ದಾರಿತಪ್ಪಿದ ಯಾವುದೇ ಪ್ರಾಣಿಗಳು ಅಥವಾ ಜಲಚರಗಳು ಈ ಪೂಲ್‌ಗಳನ್ನು ಪ್ರವೇಶಿಸಿದರೆ ಅವುಗಳ ಸಾವು ನಿಶ್ಚಿತ ಎಂದು ಹೇಳಿದ್ದಾರೆ.

    ಮೀನು, ಸೀಗಡಿ ಹಾಗೂ ಈಲ್‌ಗಳು ತಮ್ಮ ಆಹಾರಕ್ಕಾಗಿ ಭೇಟೆಯಾಡಲು ಈ ಡೆಡ್ಲಿಪೂಲ್‌ಗಳ ಸಮೀಪದ ಸ್ಥಳಗಳನ್ನು ಬಳಸಿಕೊಳ್ಳುತ್ತವೆ. ತಮ್ಮ ಆಹಾರಕ್ಕಾಗಿ ಕೊಳದ ಬಳಿ ಅಡಗಿಕೊಳ್ಳುತ್ತವೆ. ಆದರೆ ಕೊಳವನ್ನು ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಡಿಲಲ್ಲಿ ಮಗುವಿಗೆ ಹಾಲುಣಿಸುತ್ತಿರುವಾಗಲೇ ಕೊನೆಯುಸಿರೆಳೆದ ತಾಯಿ

    ಇಂತಹ ಪೂಲ್‌ಗಳು ನಮ್ಮ ಭೂಮಿಯ ಗ್ರಹದಲ್ಲಿ ಮೊದಲು ಸಾಗರಗಳು ಹೇಗೆ ರೂಪು ಗೊಂಡವು? ಎಂಬುದನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಉಪ್ಪು ನೀರಿನ ಪೂಲ್‌ಗಳು ಹೆಚ್ಚಿನ ಸಂಖ್ಯೆಯ ಸೂಕ್ಷ್ಮಜೀವಿಗಳ ನೆಲೆಯಾಗಿದೆ. ವೈವಿಧ್ಯತೆಗಳಿಂದ ಸಮೃದ್ಧವಾಗಿದೆ. ಆದರೆ ಇದೇ ರೀತಿ ಪ್ರತಿಕೂಲ ಪರಿಸ್ಥಿತಿಯನ್ನು ಹೊಂದಿರುವ ಅನ್ಯಗ್ರಹಗಳು ಯಾವುದೇ ಜೀವಿಗಳಿಗೆ ಆತಿಥ್ಯ ನೀಡಬಹುದೇ ಎಂಬುದನ್ನು ನಿರ್ಧರಿಸಲು ಇಂತಹ ಆವಿಷ್ಕಾರಗಳು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.

    ವಿಜ್ಞಾನಿಗಳು ಕಂಡುಹಿಡಿದ ಮೊದಲ ಉಪ್ಪುನೀರಿನ ಪೂಲ್ ಇದಲ್ಲ. ಕಳೆದ 30 ವರ್ಷಗಳಲ್ಲಿ ಸಮುದ್ರಶಾಸ್ತ್ರಜ್ಞರು ಕೆಂಪು ಸಮುದ್ರ, ಮೆಡಿಟರೇನಿಯನ್ ಸಮುದ್ರ ಮತ್ತು ಮೆಕ್ಸಿಕೋ ಕೊಲ್ಲಿಗಳಲ್ಲಿ ಸಾಕಷ್ಟು ಮಾರಣಾಂತಿಕ ಕೊಳಗಳನ್ನು ಕಂಡುಹಿಡಿದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]