Tag: reality check

  • ಬೆಂಗ್ಳೂರಲ್ಲಿ ಅಸ್ಥಿಪಂಜರಗಳಾದ ಬಸ್ ನಿಲ್ದಾಣಗಳು – ಕಿತ್ತೋದ ಚೇರ್‌ಗಳು, ಸೋರುವ ಮೇಲ್ಛಾವಣಿಗಳು

    ಬೆಂಗ್ಳೂರಲ್ಲಿ ಅಸ್ಥಿಪಂಜರಗಳಾದ ಬಸ್ ನಿಲ್ದಾಣಗಳು – ಕಿತ್ತೋದ ಚೇರ್‌ಗಳು, ಸೋರುವ ಮೇಲ್ಛಾವಣಿಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಬಂದರೆ ಸಾಕು ತಗ್ಗು ಪ್ರದೇಶಗಳಿಗೆ ನೀರು ನುಗ್ಗೋದು, ಮನೆಗಳಿಗೆ ಮಳೆ ನೀರಿನೊಂದಿಗೆ ಕೊಳಚೆ ನೀರು ಸೇರಿಕೊಳ್ಳೋದು ಮಾತ್ರವಲ್ಲ ರಸ್ತೆಗಳೆಲ್ಲ ಮಿನಿ ಲೇಕ್ ಗಳಾಗಿ ಬಿಡುತ್ತವೆ. ಮಳೆ ಬಂದಾಗ ವಾಹನ ಸವಾರರು ಮಾತ್ರವಲ್ಲ ಬಸ್ ಪ್ರಯಾಣಿಕರು ಆಶ್ರಯ ಪಡೆಯೋದು ಬಸ್ ತಂಗುದಾಣಗಳಲ್ಲಿ. ಆದರೆ ಆ ತಂಗುದಾಣಗಳು ತೂತುಬಿದ್ದ ಮಡಿಕೆಯಂತಾಗಿದೆ. ನಿಮ್ಮ ಪಬ್ಲಿಕ್ ಟಿವಿ ಇತಂಹ ಬಸ್ ತಂಗುದಾಣಗಳ ರಿಯಾಲಿಟಿ ಚೆಕ್ ಮಾಡಿದೆ.

    ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಸಂಚಾರ ಮಾಡುತ್ತೆ. ಬೆಂಗಳೂರಿನ ಮೂಲೆಮೂಲೆಗೂ ಬಿಎಂಟಿಸಿ ಸೇವೆ ನೀಡ್ತಿದೆ. ಹಾಗೆಯೇ ಬಿಬಿಎಂಪಿ ಅವರು ಬಸ್ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಶೆಲ್ಟರ್ಸ್ ಗಳನ್ನು ನಿರ್ಮಾಣ ಮಾಡಿದೆ. ಇದಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಸಹ ಮಾಡಿದೆ. ಬೆಂಗಳೂರಿನಲ್ಲಿ ಸರಿಸುಮಾರು 6 ಸಾವಿರಕ್ಕೂ ಹೆಚ್ಚು ಬಸ್ ಶೇಲ್ಟರ್ಸ್ ಗಳಿವೆ. ಈ ಬಸ್ ತಂಗುದಾಣಗಳನ್ನ ಖಾಸಗಿಯವರ ಸಹಭಾಗಿತ್ವದಲ್ಲೂ ಸಹ ಬಿಬಿಎಂಪಿ ನಿರ್ಮಾಣ ಮಾಡಿದೆ.

    ಜನರ ಟ್ಯಾಕ್ಸ್ ದುಡ್ಡಿನಲ್ಲಿ ಹೀಗೆ ಬಿಬಿಎಂಪಿ ಬಸ್ ಶೆಲ್ಟರ್ ಗಳ ನಿರ್ಮಾಣವೇನೋ ಮಾಡಿದೆ. ಅದನ್ನ ನಿರ್ವಹಣೆ ಮಾಡದೇ ಈಗ ಬಸ್ ನಿಲ್ದಾಣಗಳು ಪಳೆಯುಳಿಕೆಗಳಂತೆ ಕಾಣುತ್ತಿದೆ. ಬೆಂಗಳೂರಿನ ಅದೆಷ್ಟೋ ಬಸ್ ತಂಗುದಾಣಗಳು ಪಾಳುಬಿದ್ದ ಸ್ಥಿತಿಯಲ್ಲಿದೆ. ಮಳೆ ಬಂದರೆ ಜನ ಕೂತುಕೊಳ್ಳೋದು ಇರಲಿ ನಿಂತುಕೊಳ್ಳೋದಕ್ಕೂ ಆಗೋಲ್ಲ. ಮೇಲ್ಛಾವಣಿಗಳು ತೂತು ಬಿದ್ದಿದ್ದರೆ ಕೆಲ ಕಡೆ ಮೇಲ್ಛಾವಣಿಯೇ ಇಲ್ಲ. ಇನ್ನೂ ಬಸ್ ಗಾಗಿ ಕಾಯೋ ಜನ ಕೂತುಕೊಳ್ಳೋಕೆ ಇರೋ ಚೇರ್ ಗಳು ಸಹ ಶೆಲ್ಟರ್ ಗಳಲ್ಲಿ ಇಲ್ಲ. ಆದರೆ ಬಿಬಿಎಂಪಿ ಗುತ್ತಿಗೆ ನೀಡಿರೋ ಜಾಹೀರಾತು ಫಲಕಗಳು ಮಾತ್ರ ಸೂಪರ್ ಆಗಿ ಕಾಣುತ್ತೆ.

    ರಿಯಾಲಿಟಿ ಚೆಕ್- 1
    ಒಂದಲ್ಲ ಎರಡಲ್ಲ ಮೂರಲ್ಲ, ಒಟ್ಟು 6 ಬಸ್ ಶೆಲ್ಟರ್ ಇರೋ ಸ್ಟಾಪ್ ಇದು. ಒಂದು ಕಡೆ ಶೆಲ್ಟರ್ ನ ಚೇರ್ ತುಕ್ಕು ಹಿಡಿಯುತ್ತಿದ್ದರೆ ನೆಲಹಸಿಗೆ ಕಿತ್ತು ಬಂದಿದೆ. ಬಸ್ ಬಂತು ಅಂತಾ ಹತ್ತೊಕೆ ಓಡಿದ್ರೇ ಬೀಳೋದು ಪಕ್ಕಾ. ಮುಂದೆ ಆಪೊಸಿಟ್ ಟ್ರಾಕ್‍ನಲ್ಲೂ ಮೂರು ಶೆಲ್ಟರ್ ಇದೆ ಜಾಹೀರಾತು ಫಲಕಗಳು ಸಹ ಡಿಸೈನ್ ಡಿಸೈನ್ ಆಗಿದೆ. ಜೊತೆಗೆ ಕಸದ ರಾಶಿನೂ ಸಹ ಇದೆ.

    ರಿಯಾಲಿಟಿ ಚೆಕ್-2
    ಅಶೋಕ ಪಿಲ್ಲರ್‍ನಿಂದ ಲಾಲ್ ಬಾಗ್ ಕಡೆ ಬರೋ ರಸ್ತೆಯಲ್ಲಿ ಒಂದೇ ಕಡೆ ಎರಡು ಬಸ್ ತಂಗುದಾಣ ಮಾಡಿದ್ದಾರೆ. ಒಂದರಲ್ಲಿ ಮೇಲ್ಛಾವಣಿ ಕಿತ್ತು ಹೋಗಿದ್ದರೆ, ಮತ್ತೊಂದರಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ. ಮಳೆ ಬಂದು ಬಂದು ಪಾಚಿಕಟ್ಟಿದೆ ಇಲ್ಲಿನ ನಿಲ್ದಾಣ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    ರಿಯಾಲಿಟಿ ಚೆಕ್-3
    ಸ್ಥಳ: ಬಾಳೆಮಂಡಿ ಸ್ಟಾಪ್
    ಇಲ್ಲೂ ಸಹ ಇದೇ ಪರಿಸ್ಥಿತಿ ಶಾಸಕರ ಫೋಟೋ ಮಾತ್ರ ಸೂಪರ್ ಆಗಿ ಕಾಣುತ್ತೆ. ಆದರೆ ಅಲ್ಲಿ ಕೂತುಕೊಳ್ಳೋ ಚೇರ್ ಅನ್ನ ಯಾವ ಕಳ್ಳ ಯಾವಾಗ ಕದ್ದು ಹೋಗಿದ್ದಾನೋ ಗೊತ್ತಿಲ್ಲ. ಪಕ್ಕದ ಶೆಲ್ಟರ್ ನಲ್ಲಿ ಕರೆಂಟ್ ಕಟ್ ಆಗಿದ್ದು, ಅದನ್ನ ಸರಿ ಮಾಡೋ ಕೆಲಸಕ್ಕೆ ಬೆಸ್ಕಾಂ ಮುಂದಾಗಿದೆ. ಆದರೆ ನಿರ್ವಹಣೆ ಮಾತ್ರ ಶೂನ್ಯ.

    ರಿಯಾಲಿಟಿ ಚೆಕ್-4
    ಸ್ಥಳ: ಇಟಾ ಮಾಲ್
    ಇಲ್ಲಿರೋ ಬಸ್ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣದಂತೆ ಕಾಣುತ್ತೆ. ಬಸ್ ನಿಲ್ದಾಣವಿದ್ದರೂ ಜನ ರಸ್ತೆಯಲ್ಲೇ ಬಸ್‍ಗೆ ಕಾಯುತ್ತಾರೆ. ಅಲ್ಲಿನ ಸ್ಥಿತಿ ಆ ರೀತಿ ಇದೆ. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

    ರಿಯಾಲಿಟಿ ಚೆಕ್-5
    ಸ್ಥಳ: ಹೆಬ್ಬಾಳ ಕೆಂಪಾಪುರ
    ಇಲ್ಲಿ ಬಸ್ ಬರೋದೇ ಅಪರೂಪ. ಯಾಕಂದರೆ ಬಸ್ ಶೆಲ್ಟರ್ ಇರೋದು ಸರ್ವಿಸ್ ರೋಡ್ ನಲ್ಲಿ, ಅದರೂ ಬಿಬಿಎಂಪಿ ಎರಡೆರಡು ಶೆಲ್ಟರ್ ನಿರ್ಮಾಣ ಮಾಡಿದೆ. ಒಂದು ಶೆಲ್ಟರ್ ಅಂತೂ ಪಕ್ಕಾ ಪುರಾತನ ಕಾಲದ ಪಳೆಯುಳಿಕೆಯಂತೆಯೇ ಇದೆ.

    ರಿಯಾಲಿಟಿ ಚೆಕ್-6
    ಸ್ಥಳ: ಚಾಮರಾಜಪೇಟೆ ರಾಯನ್ ಸರ್ಕಲ್
    ಇದು ಬಸ್ ನಿಲ್ದಾಣವೋ ಕೊಳಚೆ ಗುಂಡಿಯೋ ಗೊತ್ತಿಲ್ಲ. ಅಲ್ಲಿ ಕೂರಲು ಚೇರ್ ಇದೆ. ಆದರೆ ಟಾಪ್ ಮಾತ್ರ ಮಾಯವಾಗಿದೆ. ಮೂಗು ಮುಚ್ಚಿಕೊಂಡೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲ ಜೆಸ್ಟ್ ಸ್ಯಾಂಪಲ್ಸ್ ಅಷ್ಟೇ, ಕೋಟ್ಯಂತರ ರೂಪಾಯಿ ಜನರ ದುಡ್ಡು ಹೇಗೆ ಬಸ್ ನಿಲ್ದಾಣ ಹಸಿರಿನಲ್ಲಿ ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ.

  • ಪಡಿತರಕ್ಕಾಗಿ ಹಣ ವಸೂಲಿ – ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಯ್ತು ಸತ್ಯ

    ಪಡಿತರಕ್ಕಾಗಿ ಹಣ ವಸೂಲಿ – ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಯ್ತು ಸತ್ಯ

    ಚಿಕ್ಕಬಳ್ಳಾಪುರ: ಸರ್ಕಾರ ಕೊರೊನಾ ಎಫೆಕ್ಟ್ ನಡುವೆ ಬಡವರಿಗೆ ಉಚಿತ ಅಕ್ಕಿ ಗೋಧಿ ವಿತರಣೆ ಮಾಡಲು ಹೇಳಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.

    ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದ ನಿಮ್ಮ ಪಬ್ಲಿಕ್ ಟಿವಿಗೆ ನಗರದ ಎಂಜಿ ರಸ್ತೆಯ ನ್ಯಾಯಬೆಲೆ ಅಂಗಡಿ 95ರಲ್ಲಿ ವಿತರಕ ರಮೇಶ್ ಎಂಬಾತ 20 ರೂಪಾಯಿ ಪಡೆಯುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಕೇಳಿದರೆ ಹೆಚ್ಚುವರಿಯಾಗಿ ಸಕ್ಕರೆ ನೀಡುತ್ತಿದ್ದು ಅದಕ್ಕಾಗಿ 20 ರೂಪಾಯಿ ಪಡೆಯುತ್ತಿದ್ದೇನೆ ಎಂದು ರಮೇಶ್ ಹೇಳಿದ್ದಾನೆ.

    ಸಕ್ಕರೆ ವಿತರಣೆ ಮಾತ್ರ ಮಾಡುತ್ತಿರಲಿಲ್ಲ. ಇನ್ನೂ 1 ಕೆಜಿ ಸಕ್ಕರೆಗೆ 37 ರೂಪಾಯಿ ಇದ್ದು 20 ರೂಪಾಯಿ ಯಾಕೆ ಪಡೆಯುತ್ತೀರಿ ಎಂದರೆ, ಸಕ್ಕರೆ ಈಗ ಕೊಡಲ್ಲ, ಅಮೇಲೆ ತಂದು ಕೊಟ್ಟು ಉಳಿದ ಹಣ ಅಮೇಲೆ ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆದರೆ ಬಹುತೇಕರಿಂದ 20 ರೂಪಾಯಿ ಹಣ ಪಡೆಯಲಾಗುತ್ತಿದೆ.

    ನಿಮ್ಮಾಕಲಕುಂಟೆಯ ನ್ಯಾಯಬೆಲೆ ಅಂಗಡಿಯಲ್ಲೂ ಸಹ ಜನರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದಾಗ ಹಣ ವಸೂಲಿ ಮಾಡುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇವರು ಕೂಡ ತಾವು ಸಹ ಸಕ್ಕರೆ, ಸೋಪು ಕೊಡುತ್ತಿದ್ದು ಅದಕ್ಕೆ ಹಣ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

    ಮತ್ತೊಂದೆಡೆ ಥಂಬ್ ಪಡೆಯೋಕೆ 5 ರೂಪಾಯಿ ಪಡೀತಿವಿ ಎಂದು ಪಡಿತರ ಅಂಗಡಿ ಮಾಲೀಕಿ ಅಶ್ವತ್ಥಮ್ಮ ಸಬೂಬು ಹೇಳಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

    ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದಲ್ಲೂ ಸಹ 20 ರೂಪಾಯಿ ಹಣ ವಸೂಲಿ ಪಡೆಯುತ್ತಿರುವುದನ್ನು ಯುವಕನೋರ್ವ ವಿಡಿಯೋ ಮಾಡಿ ಮಾಲೀಕನನ್ನು ಪ್ರಶ್ನೆ ಮಾಡಿದ್ದು, ಸಾಗಾಟದ ಖರ್ಚು ವೆಚ್ಚಕ್ಕಾಗಿ ಹಣ ವಸೂಲಿ ಮಾಡುತ್ತಿದ್ದೇವೆ ಎಂದು ಅಂಗಡಿ ಮಾಲೀಕ ಹೇಳಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

  • ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಎಟಿಎಂಗಳಲ್ಲಿ ಸಿಗ್ತಿಲ್ಲ 2 ಸಾವಿರ ರೂ. ನೋಟು- ಮೂರ್ನಾಲ್ಕು ತಿಂಗಳಿಂದ ಪಿಂಕ್ ನೋಟ್ ಮಾಯ

    ಬೆಂಗಳೂರು: ಇಷ್ಟು ದಿನ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬ್ಯಾನ್ ಆಗುತ್ತೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಈಗ ಅದಕ್ಕೆ ಪುಷ್ಠಿ ಎಂಬಂತೆ ಮಾರ್ಚ್ 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಸಿಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂಬುದು ಜನರ ಮಾತಾಗಿದ್ದು, ಸಿಲಿಕಾನ್ ಸಿಟಿಯ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ? ಎಂದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಆತಂಕಕಾರಿ ವಿಚಾರ ಬಯಲಾಗಿದೆ.

    ಇಂಡಿಯನ್ ಬ್ಯಾಂಕ್ ಹೇಳಿದ್ದೇನು?
    ಫೆ. 17ರಂದು ಇಂಡಿಯನ್ ಬ್ಯಾಂಕಿನ ಲೆಂಡರ್ಸ್ ಡಿಜಿಟಲ್ ಬ್ಯಾಂಕಿಂಗ್ ವಿಭಾಗ ಸುತ್ತೋಲೆ ಹೊರಡಿಸಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಭಾರಿ ಮೊತ್ತದ್ದಾಗಿದ್ದು, ಇದರಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಚೇಂಜ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ನೋಟುಗಳ ವ್ಯವಹಾರವನ್ನು ನಮ್ಮ ಬಾಂಕಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ನಮ್ಮ ಎಟಿಎಂಗಳಲ್ಲಿ ಲಭ್ಯವಿರುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 1ರಿಂದ 2000 ರೂಪಾಯಿ ನೋಟು ನಮ್ಮಲ್ಲಿ ಸಿಗಲ್ಲ ಎಂದು ಹೇಳಿತ್ತು.

    ಕಳೆದ ನಾಲ್ಕೈದು ತಿಂಗಳಿನಿಂದ ಎಟಿಎಂಗಳಲ್ಲಿ 2 ಸಾವಿರ ನೋಟು ಹೆಚ್ಚಾಗಿ ಸಿಗುತ್ತಿಲ್ಲ. 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಗ್ರಾಹಕರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಠಿ ಎಂಬಂತೆ ಇಂಡಿಯಾನ್ ಬ್ಯಾಂಕ್ ಆತಂಕಕಾರಿ ಮಾಹಿತಿ ನೀಡಿದೆ. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ? ಇಲ್ವ ಎಂದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಎರಡು ಸಾವಿರ ನೋಟ್ ನಾಪತ್ತೆಯಾಗಿರೋದು ಪತ್ತೆಯಾಗಿದೆ.

    ಸ್ಥಳ- ಮತ್ತಿಕೆರೆ
    ಮತ್ತಿಕೆರೆ ಸರ್ಕಲ್‍ನಲ್ಲಿ ಇರುವ ಎಸ್‍ಬಿಐ ಎಟಿಎಂನಲ್ಲಿ 2 ಸಾವಿರ ನೋಟ್ ಸಿಗುತ್ತಿದೆಯಾ? ಇಲ್ವಾ ಎಂದು ಪಬ್ಲಿಕ್ ಟಿವಿ ತಂಡ ರಿಯಾಲಿಟಿ ಚೆಕ್ ಮಾಡೋದಕ್ಕೆ ಮುಂದಾಯಿತು. ಎಟಿಎಂನಲ್ಲಿ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಕೂಡ ಮಾತಾಡಿಸಿದೇವು. ಈ ಎಟಿಎಂನಲ್ಲಿ 2 ಸಾವಿರ ರೂಪಾಯಿ ಡ್ರಾ ಮಾಡಿದಾಗ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರಲಿಲ್ಲ. ಬದಲಿಗೆ ಬರೀ 500 ರೂಪಾಯಿ ನೋಟುಗಳು ಮಾತ್ರ ಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಕಳೆದ 20 ದಿನಗಳಿಂದಲೂ 2 ಸಾವಿರ ರೂಪಾಯಿ ನೋಟು ಸಿಗುತ್ತಿಲ್ಲ ಎಂದರು.

    ಸ್ಥಳ- ಯಲಹಂಕ
    ಇತ್ತ ಯಲಹಂಕ ಸರ್ಕಲ್‍ನಲ್ಲಿ ಕೂಡ ಕೊಟಕ್ ಮಹಿಂದ್ರಾ ಬ್ಯಾಂಕ್ ಎಟಿಎಂನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಬರುತ್ತಾ ಅಂತಾ ಚೆಕ್ ಮಾಡಿದ್ದೆವು. ಆದರೆ ಅಲ್ಲಿ ಕೂಡ ಬರೀ 500 ರೂಪಾಯಿ ನೋಟು ಬಂದವು. ಯಾಕೆ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಸೆಕ್ಯೂರಿಟಿನಾ ಕೇಳುದರೆ, ಇಲ್ಲಿ ನಾಲ್ಕೈದು ತಿಂಗಳಿಂದ 2 ಸಾವಿರ ನೋಟು ಬರುತ್ತಿಲ್ಲ. ಮತ್ತೆ ಡೆಪಾಸಿಟ್ ಕೂಡ ಮಾಡ್ತಿಲ್ಲ ಎಂದು ತಿಳಿಸಿದರು.

    ಸ್ಥಳ- ಹೆಬ್ಬಾಳ
    ಮತ್ತಿಕೆರೆ ,ಯಲಹಂಕ ಎರಡು ಕಡೆ ಎಟಿಎಂನಲ್ಲೂ ಕೂಡ 2 ಸಾವಿರ ರೂಪಾಯಿ ನೋಟ್ ಬರಲಿಲ್ಲ. ಬಳಿಕ ಹೆಬ್ಬಾಳದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಅಲ್ಲಿ ಕೂಡ 2 ಸಾವಿರ ರೂಪಾಯಿ ನೋಟು ಸಿಗಲಿಲ್ಲ.

    ಸ್ಥಳ-ಮಲ್ಲೇಶ್ವರಂ
    ಬಳಿಕ ಅಲ್ಲಿಂದ ಮಲ್ಲೇಶ್ವರ ಕಡೆ ಹೋಗಿ ಒಂದು ಎಟಿಎಂನಲ್ಲಿ ಎರಡು ಸಾವಿರ ನೋಟು ಡ್ರಾ ಮಾಡಿಕೊಳ್ಳಲು ಮುಂದಾದೆವು. ಆದರೆ ಇಲ್ಲಿಯೂ ಅದೇ ಪರಸ್ಥಿತಿ, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳೇ ಎಂಟಿಎಂನಲ್ಲಿ ಸಿಕ್ಕಿತು.

    ಹೀಗೆ ಬೆಂಗಳೂರಿನ ಬಹುತೇಕ ಎಟಿಎಂಗಳಲ್ಲಿ 2 ಸಾವಿರ ನೋಟು ಸಿಗಲಿಲ್ಲ. ಬರೀ 500, 200, 100 ರೂಪಾಯಿ ಮುಖಬೆಲೆಯ ನೋಟುಗಳು ಸಿಗುತ್ತಿವೆ. ಈ ಪರಿಸ್ಥಿತಿ ನಾಲ್ಕೈದು ತಿಂಗಳಿಂದನೂ ಇದೆ. ನೋಟು ಸಿಗುತ್ತಿಲ್ಲ ಎಂಬ ಮಾಹಿತಿ ಸದ್ಯ ಗ್ರಾಹಕರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ 2 ಸಾವಿರ ನೋಟ್ ಬ್ಯಾನ್ ಆಗುತ್ತಾ ಎಂಬ ಅನುಮಾನಗಳು ಕೂಡ ಗ್ರಾಹಕರಲ್ಲಿ ಕಾಡುತ್ತಿದೆ.

  • ಲೋಕಲ್‍ನಲ್ಲಿ ಫಾರಿನ್ ಕಿಕ್- ಗೂಡಂಗಡಿ, ಪಾನ್ ಬೀಡಾ ಶಾಪ್‍ನಲ್ಲಿ ಡೀಲರ್ಸ್!

    ಲೋಕಲ್‍ನಲ್ಲಿ ಫಾರಿನ್ ಕಿಕ್- ಗೂಡಂಗಡಿ, ಪಾನ್ ಬೀಡಾ ಶಾಪ್‍ನಲ್ಲಿ ಡೀಲರ್ಸ್!

    – ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಬಯಲು

    ಬೆಂಗಳೂರು: ಲೋಕಲ್ ಅಂಗಡಿಯಲ್ಲಿ ಫಾರಿನ್ ಕಿಕ್. ನಿಮ್ಮನೆ ಹುಡ್ಗರನ್ನು ನಶೆಯ ಲೋಕದಲ್ಲಿ ಬೀಳಿಸೋಕೆ ರೆಡಿ ಇದ್ದಾರೆ ಕಿರಾತಕರು. ಬೆಂಗಳೂರಿನಲ್ಲಿ ಫಾರಿನ್ ಕಿಕ್ ಮಜಾ ತೋರಿಸಿ ಅಮಲಿನ ಲೋಕಕ್ಕೆ ಬೀಳಿಸಿ ಖೆಡ್ಡಾ ತೋಡುವ ದಿ ಮೋಸ್ಟ್ ಡೇಂಜರಸ್ ಗ್ಯಾಂಗ್ ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ನಿಮ್ಮನೆ ಮಕ್ಕಳಿಗೆ ಲೋಕಲ್ ಸಿಗರೇಟ್ ಮಾತ್ರವಲ್ಲ ಕಿಕ್ ಕೊಡುವ, ನಶೆಯ ಲೋಕದಲ್ಲಿ ತೇಲಿಸುವ ಒಂದು ಬಾರಿ ಧಮ್ ಹೊಡೆದ್ರೆ ರುಚಿ ಹತ್ತಿಸಿಕೊಳ್ಳುವ ಅಮಲಿನ ಫಾರಿನ್ ಬ್ರಾಂಡ್ ಸಿಗರೇಟ್ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಬಿಕರಿಯಾಗ್ತಿದೆ. ಅಚ್ಚರಿಯಂದ್ರೆ ಇವರ್ಯಾರು ಹೊರಗಡೆ ಮಾರಾಟ ಮಾಡಲ್ಲ. ಯಾಕೆಂದ್ರೆ ಇದು ನಿಷೇಧಿತ ಸಿಗರೇಟು ಆಗಿದ್ದು, ಹೀಗಾಗಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಹೊರಗಡೆ ವೀಳ್ಯದೆಲೆ, ಅಡಿಕೆ ಇಟ್ಕೊಂಡು ಕುಟ್ಟುವ ಪಾನ್ ಬೀಡಾ ಅಂಗಡಿಯವನು ಇಲ್ಲಿ ಕೋಟಿ ಗಟ್ಲೆ ಲೆಕ್ಕದಲ್ಲಿ ಇಂಟರ್ ನ್ಯಾಷನಲ್ ಬ್ರಾಂಡ್ ನ ಫಾರಿನ್ ಕಿಕ್ ಸಿಗರೇಟಿನ ಡೀಲ್‍ದಾರರಾಗಿದ್ದಾರೆ. ಮೆಜೆಸ್ಟಿಕ್ ಗಾಂಧಿನಗರದ ಗಲ್ಲಿಲಿ ಒಂದ್ ರೌಂಡ್ ಹೊಡ್ದಾಗ ಈ ಕಿಕ್ ಕಿರಾತಕರು ಪಬ್ಲಿಕ್ ಟಿವಿಯ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದಾರೆ.

    ಪ್ರತಿನಿಧಿ: ಮಾಂಡ್ ಸಿಗರೇಟ್ ಇದ್ಯಾ
    ಪಾನ್ ಶಾಪ್‍ನವನು: ಎಷ್ಟ್ ಬೇಕು
    ಪ್ರತಿನಿಧಿ: ಒಂದು ಪ್ಯಾಕ್
    ಪಾನ್ ಶಾಪ್‍ನವನು: ಫುಲ್ ಬಾಕ್ಸ್ ಆದ್ರೇ ತಂದುಕೊಡ್ತೀನಿ
    ಪ್ರತಿನಿಧಿ: ಯಾವುದೆಲ್ಲ ಸಿಗುತ್ತೆ?
    ಪಾನ್ ಶಾಪ್‍ನವನು: ನಿಮ್ಗೆ ಯಾವುದು ಬೇಕು..?
    ಪ್ರತಿನಿಧಿ: ಮಾಂಡ್ ಸಿಗುತ್ತಾ?
    ಪಾನ್ ಶಾಪ್‍ನವನು: ಅದು ಬಿಟ್ಟು ಬೆಂಝನ್, ಎಸ್ಸೆ ಇದೆಲ್ಲ ಸಿಗುತ್ತೆ.
    ಪ್ರತಿನಿಧಿ: ತಗೊಂಡು ಹೋಗಬಹುದಾ
    ಪಾನ್ ಶಾಪ್‍ನವನು: ಹಾ
    ಪ್ರತಿನಿಧಿ: ಕಾಲೇಜ್ ಹತ್ರ ಮಾರಾಬಹುದಾ

    ಪಾನ್ ಶಾಪ್‍ನವನು: ಅದು ನಿಮ್ಗೆ ಬಿಟ್ಟಿದ್ದು ಎಲ್ಲಿ ಮಾರಬೇಕು ಅಂತ. ನಾನು ಹೇಗೆ ಹೇಳಲಿ, ಎಲ್ಲಿ ಮಾರ್ತೀರಾ..?
    ಪ್ರತಿನಿಧಿ: ನಾಗರಬಾವಿಯಲ್ಲಿ ಅಂಗಡಿ ಇಡೋಣ ಅಂತ
    ಪಾನ್ ಶಾಪ್‍ನವನು: ಹಾ ಮಾರಬಹುದು
    ಪ್ರತಿನಿಧಿ: ಇಂಪೋರ್ಟ್ ಮಾಡೋ ಸಿಗರೇಟ್ ಎಲ್ಲಾ ಮಾರೋದು ಅಂತ ವಿದ್ಯಾರ್ಥಿಗಳು ಹೆಚ್ಚು ಅದನ್ನು ಕೇಳ್ತಾರಲ್ಲ, ಎಷ್ಟು ಟೈಂ ಬೇಕು? ನೀವೇ ಕೊಡ್ತೀರಾ?
    ಪಾನ್ ಶಾಪ್‍ನವನು: ಕೊಡೋಣ
    ಪ್ರತಿನಿಧಿ: ನಿಮ್ದೇನಾ ಗೋಡೌನ್? ಹೋಲ್ ಸೇಲ್ ಕೊಡ್ತೀರಾ
    ಪಾನ್ ಶಾಪ್‍ನವನು: ಹೋಲ್ ಸೇಲ್
    ಪ್ರತಿನಿಧಿ: ಯಾವುದ್ದೆಲ್ಲ ಕೊಡ್ತಿಲ್ಲ
    ಪಾನ್ ಶಾಪ್‍ನವನು: ಬೆಂಝನ್, ಡೆವಿಲ್ ಡಾನ್
    ಪ್ರತಿನಿಧಿ: ಕಿಕ್ ಬರೋದು ಯಾವುದಿದೆ?
    ಪಾನ್ ಶಾಪ್‍ನವನು: ಕಿಂಗ್ ಎಡ್ವರ್ಡ್ ಇದೆ

    ಪ್ರತಿನಿಧಿ: ನಿಮ್ಮ ನಂಬರ್ ಕೊಡಿ, ಅದು ಕಿಕ್ ಬರುತ್ತೆ.. ಅಲ್ವಾ
    ಪಾನ್ ಶಾಪ್ ನವನು: ಹಾ ಬರುತ್ತೆ.
    ಪ್ರತಿನಿಧಿ: ವಿದ್ಯಾರ್ಥಿಗಳು ಕೇಳ್ತಾರಲ್ಲ ಕಿಕ್ ಬರೊದು ಅಂದ್ರೆ ಖುಷಿಯಾಗ್ತಾರೆ, ಮಿಕ್ಸ್ ಮಾಡಿದ್ರೆ ಕಿಕ್ ಬರೋ ಸಿಗರೇಟ್ ಇರುತ್ತಲ್ಲ.
    ಪಾನ್ ಶಾಪ್‍ನವನು: ಕಿಕ್ ಬರೋಕೆ ಮಿಕ್ಸ್ ಮಾಡಿ ಮಾರಬೇಕಾಗಿಲ್ಲ.. ಕೆಲವು ಸಿಗರೇಟ್‍ನ್ನೇ ಮಾರಿದ್ರೆ ಸಾಕು, ಮಿಕ್ಸ್ ಬೇಕಾಗಿಲ್ಲ.

    ಗಾಂಜಾದ ಕಿಕ್‍ಗಿಂತ ಡಬಲ್ ಕಿಕ್ ಇರುವ ಈ ಸಿಗರೇಟುಗಳನ್ನು ಕಾಸಿನ ಆಸೆಗೆ ಬಿದ್ದು ಸೇಲ್ ಮಾಡುತ್ತಾರೆ. ಇನ್ನೊಂದು ಟ್ರಿಕ್ಸ್ ಇದೆ. ಕೆಲವು ವ್ಯಾಪಾರಿಗಳು ಸುಖಾಸುಮ್ಮನೆ ಬಂದವರಿಗೆಲ್ಲ ಫಾರಿನ್ ಬ್ಯಾನ್ಡ್ ಸಿಗರೇಟ್ ಮಾರಲ್ಲ. ರೆಗ್ಯೂಲರ್ ಕಸ್ಟಮರ್ ಬಂದಾಗ ಥಟ್ ಅಂತ ಎತ್ತಿಕೊಡ್ತಾರೆ. ಅದನ್ನೇ ಒಬ್ಬ ಬೀಡಂಗಡಿಯವನು ಬಾಯಿ ಬಿಟ್ಟಿದ್ದಾನೆ.

    ಪ್ರತಿನಿಧಿ: ಫಾರಿನ್ ಸಿಗರೇಟ್ ಇದ್ಯಯಣ್ಣ
    ಬೀಡ ಅಂಗಡಿಯವನು: ಇಲ್ಲಣ್ಣ ಈಗ ಮಾರಲ್ಲ
    ಪ್ರತಿನಿಧಿ: ಹಾ ಹೌದಾ
    ಬೀಡ ಅಂಗಡಿಯವನು: ಅಯ್ಯೋ ರೇಡ್ ಮಾಡಿದ್ದಾರೆ. ನಾವು ರೆಗ್ಯೂಲರ್ ಕಸ್ಟಮರ್‍ಗೆ ಕೊಡ್ತೀವಿ ಅಷ್ಟೇ.

    ಪ್ರತಿನಿಧಿ: ಈಗ ಕೊಡಲ್ವಾ
    ಬೀಡ ಅಂಗಡಿಯವನು: ಪರಿಚಯದ ರೆಗ್ಯೂಲರ್ ಕಸ್ಟಮರ್‍ಗೆ ಸೇಲ್ ಮಾಡ್ತೀವಿ ಅಷ್ಟೇ. ನಿಮ್ಗೆ ಕೊಡಲ್ಲ

    ಕಿಕ್‍ನ ರುಚಿ ತೋರಿಸಿ ಅವರನ್ನು ಧಮ್ ಲೋಕದೊಳಗೆ ಕರೆದುಕೊಂಡು ಹೋಗಿ ಮತ್ತೆ ಅವರಿಗಷ್ಟೇ ಸಪ್ಲೈ ಮಾಡ್ತಾರಂತೆ. ಇದೇ ವೇಳೆ ಮೇನ್ ಡೀಲರ್ ಅವ್ನ ಕುಟುಂಬಸ್ಥನೊಬ್ಬ ಎಂಟ್ರಿ ಕೊಟ್ಟ. ಆಗ ಆತ ಸತ್ಯ ಬಾಯಿಬಿಟ್ಟಿದ್ದಾನೆ.

    ಪಾನ್ ಶಾಪ್‍ನವನು: ನಿಮ್ಗೆ ಸಿಗರೇಟ್ ಬೇಕಾ..?
    ಪ್ರತಿನಿಧಿ: ಗೂಗಲ್‍ನಲ್ಲಿ ಹುಡ್ಕಿ ನಾನು ಹೇಳ್ತೀನಿ
    ಪಾನ್ ಶಾಪ್‍ನವನು: ಎಸ್ಸೆಲೇಟ್, ಮರ್ಲ್‍ಬೋರ್, ವೈಟ್ ಟೈಗರ್, ಮಾಂಡ್
    ಪ್ರತಿನಿಧಿ: ಅದಲ್ಲಣ್ಣ ಕಾಲೇಜ್ ಹುಡುಗ್ರು ಕೇಳೋದು
    ಪಾನ್ ಶಾಪ್‍ನವನು: ಏಳೆಂಟು ಐಟಂ ರೆಗ್ಯೂಲರ್ ಕೇಳ್ತಾರೆ. ಎಸ್ಸೆ ಗೋಲ್ಡ್, ಎಸ್ಸೆಲೈಟ್, ಬೆನ್ಶನ್ ರೆಗ್ಯೂಲರ್, ಡೆವಿಡ್, ಸಿಗಾರ್
    ಪ್ರತಿನಿಧಿ: ಸಿಗಾರ್ ಸಿಗುತ್ತಾ
    ಪಾನ್ ಶಾಪ್‍ನವನು: ಸಿಗಾರ್ ಸಿಗುತ್ತೆ, ತಗೊಂಡು ಹೋಗಿ ಎಲ್ಲಾ ಹೊರಗಡೆ ಅಷ್ಟೇ. 150 ಸಿಂಗಲ್, ಎಂಟುಸಾವಿರ ಫುಲ್. ಸ್ವಲ್ಪ ಕಡಿಮೆ ಮಾಡೋಣ

    ಪ್ರತಿನಿಧಿ: ಸಿಗರೇಟ್ ಡಿಸ್ ಪ್ಲೇ ಇಲ್ವಾ
    ಪಾನ್ ಶಾಪ್‍ನವನು: ಹೇ ಅದೆಲ್ಲ ಇಡೋಕೆ ಆಗಲ್ಲ, ಇಡೋ ಹಾಗಿಲ್ಲ.
    ಪ್ರತಿನಿಧಿ: ತೋರಿಸಬಹುದಾ..
    ಪಾನ್ ಶಾಪ್‍ನವನು: ಅದನ್ನು ತೋರಿಸೋಕೆ ಆಗಲ್ಲ ಗೋಡೌನ್ ಇರುತ್ತೆ, ದುಡ್ಡು ಕೊಟ್ಟರಷ್ಟೇ ನಿಮ್ಗೆ ಮಾಲ್
    ಪ್ರತಿನಿಧಿ: ಎಲ್ಲಿರುತ್ತೆ
    ಪಾನ್ ಶಾಪ್‍ನವನು: ಚಿಕ್ಕಪೇಟೆನಲ್ಲಿ. ಅವರೆದೆಲ್ಲ ದೊಡ್ಡ ದೊಡ್ಡ ಬ್ಯುಸಿನೆಸ್ ನೀವು ಹೋದ್ರೆ ಕೊಡಲ್ಲ, ನಾನೇ ತಂದು ಕೊಡ್ತೇನೆ
    ಪ್ರತಿನಿಧಿ: ಈಗ ಇಷ್ಟು ಐಟಂ ಹೇಳಿದ್ವಲ್ಲ ಅದಕ್ಕೆ ಎಷ್ಟಾಗುತ್ತೆ?
    ಪಾನ್ ಶಾಪ್ ನವನು: ಬಿಲ್ ಟೈಂನಲ್ಲಿ ಹೇಳ್ತೀವಿ. ಬಂಡಲ್‍ಗೆ ಒಂದೊಂದು ರೇಟ್ ಇರುತ್ತೆ. ಎಂಟು ಸಾವಿರ ಇರುತ್ತೆ. ಹತ್ತು ಆಗುತ್ತೆ.
    ಪ್ರತಿನಿಧಿ: ಕಿಕ್ ಬರುತ್ತಾ..?
    ಪಾನ್ ಶಾಪ್ ನವನು: ಹಂಡ್ರೆಡ್ ಪರ್ಸೆಂಟ್ ಕಿಕ್ ಬರುತ್ತೆ. ಒಂದ್ಸಲ ಕಸ್ಟಮರ್ ಇದನ್ನು ಶುರುಮಾಡಿದ್ರೆ ಮತ್ತೆ ಬಿಡಲ್ಲ.

    ನಿಜ ಒಂದ್ಸಲ ಸೇದಿದ್ರೇ ಮತ್ತೆ ಮತ್ತೆ ಸೇದುವ ಚಟ ಹತ್ತಿಸೋ ಡೆಡ್ಲಿ ಸಿಗರೇಟು ಇದು. ನಶೆಯ ಅಫೀಮು ಇದ್ದಂತೆ. ಅದೇ ಕಾರಣಕ್ಕೆ ಕೆಲ ಫಾರಿನ್ ಸಿಗರೇಟ್‍ನ್ನು ಬ್ಯಾನ್ ಮಾಡಿದ್ದಾರೆ. ಜೊತೆಗೆ ಮಲೆಶಿಯಾ ಬಾಂಗ್ಲಾ ಸೌದಿ ಸೇರಿದಂತೆ ನಾನಾ ದೇಶದಿಂದ ಕಿಕ್ ಹತ್ತಿಸೋ ಸಿಗರೇಟು ಟ್ಯಾಕ್ಸ್ ಕಟ್ಟದೇ ಭಾರತಕ್ಕೆ ನುಸುಳುತ್ತೆ. ಅದರಲ್ಲೂ ಮಹಾನಗರಿ ಬೆಂಗಳೂರು ಇವರ ಟಾರ್ಗೆಟ್. ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ಬ್ಯುಸಿನೆಸ್‍ಮ್ಯಾನ್‍ಗಳು ಎಲ್ಲರಿಗೂ ಈ ಖಯಾಲಿ ಹುಟ್ಟಿಸಿಬಿಡ್ತಾರೆ.

    ಒಟ್ಟಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು, ಆಹಾರ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಂಡು ಕಿಕ್ ಕಿರಾತಕರಿಗೆ ಪಾಠ ಕಲಿಸಬೇಕಾಗಿದೆ.

  • ಒಂದೇ ವಾರದಲ್ಲಿ 2 ಬಾರಿ ಬ್ರೇಕ್ ಫೇಲ್ – ಬಿಎಂಟಿಸಿ ಅಸಲಿ ಸತ್ಯ ಬಯಲು

    ಒಂದೇ ವಾರದಲ್ಲಿ 2 ಬಾರಿ ಬ್ರೇಕ್ ಫೇಲ್ – ಬಿಎಂಟಿಸಿ ಅಸಲಿ ಸತ್ಯ ಬಯಲು

    ಬೆಂಗಳೂರು: ಪ್ರಯಾಣಿಕರೇ ಬಿಎಂಟಿಸಿ ಬಸ್ ಹತ್ತೋ ಮುನ್ನ ಹುಷಾರಾಗಿರಿ. ಯಾಕೆಂದರೆ ಇಷ್ಟು ದಿನ ಪ್ರಯಾಣಿಕರ ಸುರಕ್ಷಾ ಕವಚದಂತಿದ್ದ ಬಿಎಂಟಿಸಿ ಬಸ್ಸುಗಳು ಈಗ ಜೀವ ತೆಗೆಯುವ ಬಸ್ ಗಳಾಗುತ್ತಿವೆ. ಎಲ್ಲೆಂದರಲ್ಲೇ ಬ್ರೇಕ್ ಫೆಲ್ಯೂರ್ ಆಗಿ ದೊಡ್ಡ ಅವಾಂತರಗಳೇ ಸೃಷ್ಟಿಯಾಗುತ್ತಿವೆ. ಹೀಗಾಗಿ ಬಿಎಂಟಿಸಿ ಬಸ್ ಗಳು ಪ್ರಯಾಣಿಕರಿಗೆ ಎಷ್ಟು ಸೇಫ್ ಅನ್ನೋದರ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.

    ಹೌದು. ರಾಜ್ಯ ರಾಜಧಾನಿಯಲ್ಲಿ ಬಿಎಂಟಿಸಿ ಬಸ್ ಗಳ ಆರ್ಭಟಕ್ಕೆ ಪ್ರಯಾಣಿಕರು ಬೆಚ್ಚಿ ಬೀಳುತ್ತಿದ್ದಾರೆ. ಇತ್ತೀಚೆಗೆ ನಡೆದ ಸಾಲು ಸಾಲು ಬಿಎಂಟಿಸಿ ಬಸ್ ಅಪಘಾತಗಳೇ ಪ್ರಯಾಣಿಕರ ಈ ಆತಂಕಕ್ಕೆ ಕಾರಣವಾಗಿದೆ.

    ಬಿಎಂಟಿಸಿ ಬಸ್ ಗಳು ಪ್ರಯಾಣಿಕರಿಗೆ ಎಷ್ಟು ಸೇಫ್ ಅಂತ ಪಬ್ಲಿಕ್ ಟಿವಿ ತಂಡ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಿಂದ ರಿಯಾಲಿಟಿ ಚೆಕ್ ಗೆ ಇಳಿದಿತ್ತು. ಈ ವೇಳೆ ಸತ್ಯ ಬಯಲಾಗಿದೆ. ಬಸ್ ಡ್ರೈವರ್ ತುಂಬಾನೇ ಕಷ್ಟದಿಂದ ಗೇರ್ ಚೇಂಜ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಕುಳಿತುಕೊಳ್ಳಲು ಸರಿಯಾದ ಸೀಟ್ ವ್ಯವಸ್ಥೆ ಕೂಡ ಇಲ್ಲ. ಇಂತಹ ಬಸ್ಸಿನಲ್ಲಿಯೇ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.

    ಜಯನಗರದಲ್ಲಿ ಶನಿವಾರ ನಡೆದ ಬಿಎಂಟಿಸಿ ಬಸ್ ಅಪಘಾತದಿಂದ ಜನ ಬಿಎಂಟಿಸಿ ಬಸ್ ಗಳ ಸುರಕ್ಷತೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಡಿಪೋ ಸಿಬ್ಬಂದಿಯ ನಿರ್ಲಕ್ಷ್ಯವೇ ಬಸ್ ಅಪಘಾತಗಳಿಗೆ ಕಾರಣ ಅಂತ ಕಿಡಿಕಾರುತ್ತಿದ್ದಾರೆ. ಅಲ್ಲದೆ ಕಳಪೆ ಕಂಡಿಷನ್ ಇರೋ ಬಸ್ ಗಳನ್ನ ಡಿಪೋ ವರ್ಕ್ ಶಾಪ್ ನಲ್ಲಿ ರೆಡಿ ಮಾಡಲಾಗುತ್ತದೆ. ಅಲ್ಲಿ ಬಸ್ ಗಳ ರಿಪೇರಿ ಕೆಲಸ ನಡೆಯುತ್ತಿರುವುದು ಕೂಡ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.

    ನಂತರ ತಂಡ ಮಾರ್ಕೆಟ್ ನಿಂದ ಮಾಗಡಿ ರೋಡ್ ಬಸ್ ಹತ್ತಿ ರಿಯಾಲಿಟಿ ಚೆಕ್ ನಡೆಸಿತ್ತು. ಅದು ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಬಿನ್ನಿಮಿಲ್ ವರೆಗೆ, ಆ ಬಸ್ಸಿನ ಎಲ್ಲಾ ಪಾರ್ಟ್ ಗಳು ಆಗಲೋ ಈಗಲೋ ಬಿಳೋ ಸ್ಥಿತಿಯಲ್ಲಿತ್ತು. ಅಷ್ಟರಮಟ್ಟಿಗೆ ಎಲ್ಲಾ ಪಾರ್ಟ್ ಗಳು ಡ್ಯಾಮೇಜ್ ಆಗಿದ್ದವು. ಒಟ್ಟಿನಲ್ಲಿ ಇಂತಹ ಬಸ್ ಗಳಲ್ಲಿ ಸಂಚಾರ ಮಾಡಿದ್ರೆ ಅಪಾಯ ಗ್ಯಾರಂಟಿ. ಹೀಗಾಗಿ ಸೇಫ್ಟಿ ಬಿಎಂಟಿಸಿ ಬಸ್ ಹತ್ತುವ ಮುನ್ನ ಹುಷಾರಾಗಿರಿ.

  • ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಯಲು

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಬಯಲು

    ಬೆಂಗಳೂರು: ಸಿಲಿಕಾಕ್ ಸಿಟಿಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಳಗೆ ಹೋಗಬೇಕಾದರೆ ಜೇಬು ತುಂಬ ಹಣವಿರಬೇಕು. ಅಷ್ಟೇ ಅಲ್ಲ ಮೆಡಿಸಿನ್ ರಾಶಿ ಬಿದ್ದಿದ್ದರೂ ಔಷಧ ಬೇಕಾದರೆ ಖಾಸಗಿ ಆಸ್ಪತ್ರೆಗೆ ನೀವು ಹೋಗಬೇಕು. ಆ ಔಷಧ ಎಲ್ಲಿ ತೆಗೆದುಕೊಳ್ಳಬೇಕು ಅನ್ನೋದನ್ನು ಕೂಡ ಲಿಸ್ಟ್ ಸಮೇತ ಹಣ ಮಾಡುವ ಈ ವೈದ್ಯರು ನಿಮ್ಮ ಮುಂದೆ ಇಡುತ್ತಾರೆ. ಬೆಂಗಳೂರಿನ ಈ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದೆ.

    ಪ್ರ್ರಾಥಮಿಕ ಆರೋಗ್ಯ ಕೇಂದ್ರವು ಬಡವರ ಚಿಕಿತ್ಸೆಗಾಗಿಯೇ ಇರುವ ಆಸ್ಪತ್ರೆಯಾಗಿದೆ. ಆದರೆ ಇಲ್ಲಿ ಬಡವರು ಫ್ರೀ ಚಿಕಿತ್ಸೆ ಅಂತೇನಾದರೂ ಹೋದರೆ ಅಷ್ಟೇ. ಖಾಸಗಿ ಆಸ್ಪತ್ರೆ ರೀತಿಯೇ ಜೇಬು ತುಂಬ ಹಣ ಇಟ್ಟುಕೊಂಡು ಹೋಗಲೇಬೇಕು. ಯಾಕೆಂದರೆ ಈ ಬಹುತೇಕ ಬೆಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರೋದು ಬಡವರ ರಕ್ತಹೀರೋ ವೈದ್ಯರ ಮುಖವಾಡ ತೊಟ್ಟ ಕರುಣೆಯಿಲ್ಲದವರು. ಈ ಸರ್ಕಾರಿ ಆಸ್ಪತ್ರೆಗಳ ಹಣೆಬರಹ ಬಟಾಬಯಲು ಮಾಡಲು, ಆರೋಗ್ಯ ಸಚಿವರ ಕಣ್ತೆರೆಸಲು ಪಬ್ಲಿಕ್ ಟಿವಿ ತಂಡ ರಹಸ್ಯ ಕಾರ್ಯಾಚರಣೆಗಿಳೀದಿತ್ತು. ಈ ವೇಳೆ ಅದ್ಯಾವ ರೀತಿಯಲ್ಲಿ ಬಡರೋಗಿಗಳ ಜೀವ ತಿನ್ನುತ್ತಾರೆ ಅಂದರೆ ಊಹೆ ಮಾಡೋದಕ್ಕೂ ಸಾಧ್ಯವಿಲ್ಲದಂತಾಗಿತ್ತು.

    ಚಿಕಿತ್ಸೆ ಫ್ರೀ ಆದರೂ ಇಲ್ಲಿ ಟ್ರೀಟ್ ಮೆಂಟ್‍ಗೆ ದುಡ್ಡು ಕೊಡಬೇಕು. ಈ ಮಧ್ಯೆ ಜ್ವರ, ತಲೆನೋವು, ಹೊಟ್ಟೆನೋವು ಹುಷಾರಿಲ್ಲ ಅಂತ ಏನೇ ಕಾಯಿಲೆ ಹೇಳ್ಕೊಂಡು ಈ ಆಸ್ಪತ್ರೆಗೆ ಹೋದರೆ ಸಾಕು, ಇಲ್ಲಿನ ವೈದ್ಯೆ ಮೆಲ್ಲನೆ ಮೇಜಿನಡಿಯಲ್ಲಿ ಖಾಸಗಿ ಡಯಾಗ್ನಾಸ್ಟಿಕ್ ಸೆಂಟರ್‍ನ ಲೆಟರ್ ಹೆಡ್ ತೆಗೆದು ಇಲ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ ಅಂತಾರೆ.

    ಸ್ಥಳ – ಎಂ.ಎಸ್ ಪಾಳ್ಯ
    ಸರ್ಕಾರಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರ
    ಪ್ರತಿನಿಧಿ : ಮೇಡಂ ಯಾಕೋ ಮೂರು ದಿನದಿಂದ ಹೊಟ್ಟೆ ನೋವುತ್ತಿದೆ
    ಡಾಕ್ಟರ್ : ಎಲ್ಲಿ ಯಾವ ಭಾಗ
    ಪ್ರತಿನಿಧಿ: ಬಲ ಭಾಗದ ಕೆಳಗಡೆ ಮೇಡಂ
    ಡಾಕ್ಟರ್ : ಎಷ್ಟು ದಿನದಿಂದ ಈ ಸಮಸ್ಯೆ ಇದೆ
    ಪ್ರತಿನಿಧಿ: ಮೂರು ದಿನದಿಂದ ಈ ಸಮಸ್ಯೆ ಇದೆ
    ಡಾಕ್ಟರ್ : ಡ್ರೀಂಕ್ಸ್ ಮಾಡ್ತೀರಾ
    ಪ್ರತಿನಿಧಿ : ಎಂಥದ್ದು ಮಾಡಲ್ಲ ಮೇಡಂ
    ಡಾಕ್ಟರ್ : ಗ್ಯಾಸ್ಟಿಕ್ ಆಗಿರುತ್ತೆ
    ಪ್ರತಿನಿಧಿ : ರಾತ್ರಿ ನೋವು ತುಂಬಾ ಇರುತ್ತೆ ಮೇಡಂ
    ಡಾಕ್ಟರ್ :
    ಮಾತ್ರೆ ಬರೆದು ಕೊಡ್ತೀನಿ ತಗೋಳಿ
    ಪ್ರತಿನಿಧಿ : ಹುಷಾರಾಗುತ್ತಾ
    ಡಾಕ್ಟರ್ : ಈ ಮಾತ್ರೆ ನಾಳೆ ನಾಡಿದ್ದು ತಗೋಳಿ
    ಪ್ರತಿನಿಧಿ : ಆಯ್ತು ಮೇಡಂ
    ಡಾಕ್ಟರ್ : ಎರಡು ದಿನ ಬಿಟ್ಟು ನೋವು ಇದ್ರೆ ಸ್ಕ್ಯಾನಿಂಗ್ ಮಾಡಿಸಿ

    ಪ್ರತಿನಿಧಿ : ಇದು ಅಪೆಂಡಿಕ್ಸ್ ಅಂತ
    ಡಾಕ್ಟರ್ : ಅಪೆಂಡಿಕ್ಸ್ ಈಗ ವಯಸ್ಸು ಎಷ್ಟು
    ಪ್ರತಿನಿಧಿ : 29 ಮೇಡಂ
    ಡಾಕ್ಟರ್ : ಬರೋದಕ್ಕೆ ಸಾಧ್ಯವಿಲ್ಲ
    ಪ್ರತಿನಿಧಿ : ಹುಂ ಮೇಡಂ
    ಡಾಕ್ಟರ್ :
    ಹುಷರಾಗಲಿಲ್ಲ ಅಂದರೆ 2 ದಿನ ಬಿಟ್ಟು ಬನ್ನಿ
    ಪ್ರತಿನಿಧಿ : ಆಯ್ತು ಮೇಡಂ
    ಡಾಕ್ಟರ್ : ಜಂತು ಹುಳುವಿಂದು ಒಂದು ಮಾತ್ರೆ ಕೊಡ್ತೀನಿ ಅದನ್ನ ತಗೋಳಿ
    ಪ್ರತಿನಿಧಿ : ಓಕೆ ಮೇಡಂ
    ಡಾಕ್ಟರ್ : ಮೂರು ಗಂಟೆವರೆಗೂ ನೋಡಿ ನೋವಿದ್ರೆ ಸ್ಕ್ಯಾನಿಂಗ್ ಮಾಡಿಸಿ
    ಪ್ರತಿನಿಧಿ : ಓಕೆ ಮೇಡಂ. ಚಾರ್ಜ್ ಕೊಡಬೇಕಾ ಮೇಡಂ
    ಡಾಕ್ಟರ್ : ಕೊಟ್ರೆ ಓಕೆ ಕೊಡಲಿಲ್ಲ ಅಂದರೆ
    ಪ್ರತಿನಿಧಿ : ತಗೋಳಿ ಮೇಡಂ
    ಡಾಕ್ಟರ್ : ಚೇಂಜ್ ಇಲ್ವ
    ಪ್ರತಿನಿಧಿ : ಇಲ್ಲ ಮೇಡಂ

    ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳಲ್ಲಿ ಸೌಲಭ್ಯ ಇಲ್ಲ ಅಂದರೆ ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡ ಸರ್ಕಾರಿ ಆಸ್ಪತ್ರೆಗಳಿಗೆ ರೆಫರ್ ಮಾಡಬೇಕು. ಸರ್ಕಾರಿ ಆಸ್ಪತ್ರೆ ಬಿಟ್ಟು ಖಾಸಗಿ ಆಸ್ಪತ್ರೆಗೆ ಚೀಟಿ ಬರೆದು ಕೊಟ್ಟರೆ ಅದು ದೊಡ್ಡ ಅಪರಾಧ. ಆದರೆ ಇವರು ಎಂಎಸ್ ಪಾಳ್ಯದಲ್ಲೇ ಇರುವ ಖಾಸಗಿ ಆಸ್ಪತ್ರೆಯ ಬುಕ್‍ಲೆಟ್ ಅನ್ನು ಸರ್ಕಾರಿ ಆಸ್ಪತ್ರೆಯ ಒಳಗಡೆಯೇ ಬರೆದು ಕೊಡುತ್ತಾರೆ.

    ಡಾಕ್ಟರ್ : ನಿಮ್ಮದು ಯಾವ ಏರಿಯಾ
    ಪ್ರತಿನಿಧಿ : ಇದೇ ಏರಿಯಾ ಮೇಡಂ
    ಡಾಕ್ಟರ್ : ಹಾಗಿದ್ರೆ ಇಲ್ಲೆ ಸ್ಕ್ಯಾನಿಂಗ್ ಮಾಡಿಸಿ ಬರೆದು ಕೊಡ್ತೀನಿ
    ಪ್ರತಿನಿಧಿ : ಎಲ್ಲಿ ಮೇಡಂ
    ಡಾಕ್ಟರ್ : ನಿರ್ಣಯ ಡಯಾಗ್ನಾಸ್ಟಿಕ್ ಸೆಂಟರ್ ಅಂತಾ ಇದೆ
    ಪ್ರತಿನಿಧಿ : ಎಷ್ಟು ಆಗುತ್ತೆ ಮೇಡಂ
    ಡಾಕ್ಟರ್ : 800 ರೂಪಾಯಿ ಆಗಬಹುದು
    ಪ್ರತಿನಿಧಿ : ಅಷ್ಟೋಂದ
    ಡಾಕ್ಟರ್ : ಹೇಳಿ ಕಡಿಮೆಗೆ ಮಾಡಿಕೊಡ್ತಾರೆ
    ಪ್ರತಿನಿಧಿ :
    ನಿಮಗೆ ಕಾಲ್ ಮಾಡೋದ
    ಡಾಕ್ಟರ್ : ನನ್ನ ಹೆಸರು ಬರೆದಿದ್ದೀನಿ ನೋಡಿ
    ಪ್ರತಿನಿಧಿ : ಓಕೆ ಮೇಡಂ
    ಡಾಕ್ಟರ್ : ಕಡಿಮೆಗೆ ಮಡ್ತಾರೆ, ಒಂದು ಕಡೆ ಪ್ರಾಬ್ಲಂ ಆಗಿರೋದು ಅಂತ ಹೇಳಿ
    ಪ್ರತಿನಿಧಿ : ಓಕೆ ಮೇಡಂ
    ಡಾಕ್ಟರ್ : ನಾನು ನಿಮಗೆ ಚೇಂಜ್ ಕೊಟ್ನಾ
    ಪ್ರತಿನಿಧಿ : ಇಲ್ಲ ಮೇಡಂ
    ಡಾಕ್ಟರ್ : ತಗೋಳಿ

    ಸ್ಥಳ: ಅಟ್ಟೂರು
    ಸರ್ಕಾರಿ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರ
    ಬೆಂಗಳೂರಿನ ಎಂಎಸ್ ಪಾಳ್ಯ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದ ಬಳಿಕ ಬೆಂಗಳೂರಿನ ಅಟ್ಟೂರು ನಲ್ಲಿರೋ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ಕೊಟ್ಟೆವು. ಅಲ್ಲಿ ಕೂಡ ವೈದ್ಯೆ ಹೇಮಾ ಚಿಕಿತ್ಸೆ ಕೊಟ್ಟರು. ಚಿಕಿತ್ಸೆ ಕೊಟ್ಟ ಬಳಿಕ ಚಾರ್ಜ್ ಎಷ್ಟು ಅಂದರೆ 10 ರೂ. ಕೊಡಿ ಸಾಕು ಅಂತಾರೆ. 10 ರೂಪಾಯಿ ಫಿಕ್ಸ್ ಅಂತ ಕೇಳಿದರೆ ವೈದ್ಯೆ ಮಾತಾಡದೇ ತಲೆ ಬಗ್ಗಿಸ್ತಾರೆ.

    ಪ್ರತಿನಿಧಿ : ಮೇಡಂಹೊಟ್ಟೆ ನೋವಿದೆ
    ಡಾಕ್ಟರ್ : ಯಾವಾಗಿಂದ
    ಪ್ರತಿನಿಧಿ : ಮೂರು ದಿನದಿಂದ
    ಡಾಕ್ಟರ್ : ಅಲ್ಲಿ ನೋವಿದ್ರೆ ಸ್ಕ್ಯಾನಿಂಗ್ ಮಾಡಿಸಿ
    ಪ್ರತಿನಿಧಿ : ಎಲ್ಲಿ ಮಾಡಿಸಬೇಕು ಮೇಡಂ
    ಡಾಕ್ಟರ್ : ಕೆಸಿ ಜನರಲ್ ಅಥವಾ ಯಲಹಂಕ ಮಾಡಿಸಿ
    ಪ್ರತಿನಿಧಿ : ಅಲ್ಲಿ ಇದೆಯಾ
    ಡಾಕ್ಟರ್ : ಅಲ್ಲಿ ಇದೆ ಮಾಡಿಸಿ. ಈ ಮಾತ್ರೆ ತಗೋಳಿ
    ಪ್ರತಿನಿಧಿ : ಓಕೆ ಮೇಡಂ ತಗೋಳ್ತಿನಿ

    ಡಾಕ್ಟರ್ : ಸ್ಕ್ಯಾನಿಂಗ್ ಮಾಡಿಸಿ ಚೆಕ್ ಮಾಡಿಸಿ
    ಪ್ರತಿನಿಧಿ : ಓಕೆ ಮೇಡಂ ಅಮೌಂಟ್ ಎಷ್ಟು ಕೊಡಬೇಕು ಮೇಡಂ
    ಡಾಕ್ಟರ್ : ಹತ್ತು ರೂಪಾಯಿ ಕೊಡಿ ಸಾಕು
    ಪ್ರತಿನಿಧಿ : ಹತ್ತು ರೂಪಾಯಿ ಅಷ್ಟೇನಾ ಮೇಡಂ
    ಡಾಕ್ಟರ್ : ಹು ಅಷ್ಟೇ
    ಪ್ರತಿನಿಧಿ : ಫಿಕ್ಸಾ ಮೇಡಂ ಹತ್ತು ರೂಪಾಯಿ

    ಒಟ್ಟಿನಲ್ಲಿ ಅನಾರೋಗ್ಯದಿಂದ ಬಳಲ್ತಾ ಇರುವ, ಹಣದ ಹಿಂದೆ ಬಿದ್ದಿರುವ ಕೆಲ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಅರ್ಜರಿ ಮಾಡಬೇಕಾದ ಅನಿವಾರ್ಯತೆ ಇದೆ.

  • 5 ರೂ. ಕುಡಿಯೋ ನೀರು ಡೇಂಜರ್- ಇದು ಶುದ್ಧೀಕರಣದ ನೀರಲ್ಲ, ಕೊಳಚೆ ನೀರು

    5 ರೂ. ಕುಡಿಯೋ ನೀರು ಡೇಂಜರ್- ಇದು ಶುದ್ಧೀಕರಣದ ನೀರಲ್ಲ, ಕೊಳಚೆ ನೀರು

    – ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲು

    ಬೆಂಗಳೂರು: ಸಿಲಿಕಾನ್ ಸಿಟಿಯ ಜನರ ಅನುಕೂಲಕ್ಕಾಗಿ ಬಿಬಿಎಂಪಿ ಹಾಗೂ ಸರ್ಕಾರ ಒಂದಿಲ್ಲೊಂದು ಯೋಜನೆಗಳನ್ನ ಮಾಡುತ್ತಾನೆ ಇರುತ್ತದೆ. ಅದೇ ರೀತಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭ ಮಾಡಿ ಹಲವು ವರ್ಷಗಳೇ ಕಳೆದಿದೆ. ಈ ಶುದ್ಧ ಕುಡಿಯುವ ನೀರಿನ ಶುದ್ಧತೆ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.

    ಹೌದು. ಜನರಿಗಾಗಿ, ಅದರಲ್ಲೂ ಬಡ ಜನರಿಗೆ ಅಂತಾನೇ ಜನನಾಯಕರು ಸರ್ಕಾರದ ಹಣದಿಂದ ವಾಟರ್ ಆರ್.ಓ ಪ್ಲಾಂಟ್‍ಗಳನ್ನ ನಿರ್ಮಾಣ ಮಾಡಿಸಿ ತಮ್ಮ ಫೋಟೋಗಳನ್ನ ಹಾಕಿಸಿ ಈ ಶುದ್ಧ ನೀರಿನ ಘಟಕವನ್ನು ನಾನೇ ಮಾಡಿಸಿದ್ದು ಎಂದು ತೊರಿಸಿಕೊಳ್ಳುತ್ತಿದ್ದಾರೆ. ಆದರೆ ಆ ನೀರು ಕುಡಿಯೋದಕ್ಕೆ ಯೋಗ್ಯವಾ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಮುಂದಾದ ಪಬ್ಲಿಕ್ ಟಿವಿ ತಂಡಕ್ಕೆ ಫುಲ್ ಶಾಕ್ ಕಾದಿತ್ತು. ನೀರಿನ ಗುಣಮಟ್ಟ ಅಳೆಯುವ ಟಿಡಿಎಸ್ ಮಾಪಕದಲ್ಲಿ ಬಿಬಿಎಂಪಿಯ ಶುದ್ಧ ನೀರಿನ ಘಟಕದ ನೀರನ್ನು ಪರೀಕ್ಷೆ ಮಾಡಿದಾಗ ಸತ್ಯ ಬಯಲಾಗಿದೆ.

    ಸ್ಥಳ: ರಾಜಾಜಿನಗರ
    ಇಲ್ಲಿ ಟಿಡಿಎಸ್ ಮೀಟರ್‍ನಲ್ಲಿ ನೀರಿನ ಟಿಡಿಎಸ್ ಕೇವಲ 13 ಇರುವುದು ಕಂಡುಬಂತು. ಮಾಜಿ ಮೇಯರ್ ಪದ್ಮಾವತಿ ಅವರು ಮಾಡಿಸಿರೋ ಶುದ್ಧ ನೀರು ಕುಡಿಯುವ ಘಟಕದ ಈ ನೀರನ್ನ ಕುಡಿಯೋ ಜನರ ಪಾಡು ಆ ದೇವರ ಬಲ್ಲ ಎಂಬಂತಾಗಿದೆ.

    ಸ್ಥಳ: ಮಹಾಲಕ್ಷ್ಮಿಲೇಔಟ್
    ಮಹಾಲಕ್ಷ್ಮಿ ಲೇಔಟ್‍ನಲ್ಲಿ ಶುದ್ಧ ನೀರಿನ ಘಟಕಕ್ಕೆ ಬರವೇ ಇಲ್ಲ. ಆದರೆ ಆ ನೀರಿಗೆ ಕ್ವಾಲಿಟಿ ಮಾತ್ರ ಇಲ್ಲ. ಯಾಕಂದರೆ ಇಲ್ಲಿನ ನೀರಿನ ಟಿಡಿಎಸ್ ಪ್ರಮಾಣ 22 ಮಾತ್ರ ಇದೆ.

    ಸ್ಥಳ: ಮಲ್ಲೇಶ್ವರಂ
    ರಾಜ್ಯ ಬಿಜೆಪಿಯ ಕೇಂದ್ರ ಕಚೇರಿಯ ಕೂಗಳತೆಯ ದೂರದಲ್ಲಿರೋ ಶುದ್ಧ ನೀರಿನ ಘಟಕವಿದು. ಇಲ್ಲಿ ಸುತ್ತಮುತ್ತ ಬರಿ ದೇವಾಲಯಗಳೇ ಇವೆ. ಇಲ್ಲಿನ ನೀರಿನ ಕ್ವಾಲಿಟಿ ಕೇವಲ 17 ಮಾತ್ರ ಇದೆ.

    ಹೀಗೆ ಪಬ್ಲಿಕ್ ಟಿವಿ ಎಲ್ಲೆಲ್ಲಿ ರಿಯಾಲಿಟಿ ಚೆಕ್ ನಡೆಸಿದೆಯೋ ಅಲ್ಲೆಲ್ಲ ನೀರು ಶುದ್ಧವಾಗಿಯೇ ಇಲ್ಲ. ಇದು ಬರೀ ಸ್ಯಾಂಪಲ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಈ ರೀತಿಯ ಶುದ್ಧ ನೀರಿನ ಘಟಕಗಳು ಇವೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಇಲ್ಲಿ ನೀರು ಶುದ್ಧೀಕರಣವಾಗುತ್ತಿಲ್ಲ. ಬಹುತೇಕ ಬೆಂಗಳೂರಿನ ಜನರು ಕುಡಿಯೋಕೆ ಈ ನೀರನ್ನೇ ಬಳಸುತ್ತಾರೆ.

    ಟಿಡಿಎಸ್ ಪ್ರಮಾಣ 0 ಇದ್ರೇ ಅದನ್ನ ಡಿಸ್ಟಿಲ್ ವಾಟರ್ ಅಂತಾರೇ. ಅಂದರೆ ಆ ನೀರನ್ನ ಬ್ಯಾಟರಿಗಳಿಗೆ ಬಳಸುತ್ತಾರೆ ಎನ್ನಲಾಗುತ್ತಿದೆ. ಇನ್ನೂ 50ಕ್ಕಿಂತ ಕಡಿಮೆ ಇರೋ ನೀರನ್ನ ಕುಡಿಯೋದರಿಂದ ಕೆಮ್ಮು, ನೆಗಡಿ, ಅಸಿಡಿಟಿ, ಬೋನ್ಸ್ ವೀಕ್, ವೀಪರೀತ ತಲೆನೋವು, ಜ್ವರ, ಸುಸ್ತು, ನಿಶಕ್ತಿ, ವಾಂತಿಯಾಗುತ್ತದೆ. ಹೀಗೆ ಈ ನೀರನ್ನ ಕುಡಿಯೋದ್ರಿಂದ ಅನೇಕ ರೋಗಗಳಿಗೆ ನಾವೇ ಆಹ್ವಾನ ನೀಡಿದಂತಾಗುತ್ತದೆ.

    ಟಿಡಿಎಸ್ ಎಂದರೇನು?
    ಕುಡಿಯುವ ನೀರಿನ ಗುಣಮಟ್ಟವನ್ನ ಅಳತೆ ಮಾಡಲು ಟಿಡಿಎಸ್(ಟೋಟಲ್ ಡಿಸ್ಲಾಡ್ ಸಾಲಿಡ್) ಉಪಕರಣವನ್ನ ಬಳಕೆ ಮಾಡಲಾಗುತ್ತದೆ. ನಾವು ಕುಡಿಯುವ ನೀರಿನ ಗುಣಮಟ್ಟದಲ್ಲಿ ಟಿಡಿಎಸ್ ಪ್ರಮಾಣ ಕನಿಷ್ಠ 50 ಗರಿಷ್ಠ 100 ಇರಬೇಕು. ಈ ಪ್ರಮಾಣ ಟಿಡಿಎಸ್ ಇರುವ ನೀರು ಕುಡಿಯಲು ಯೋಗ್ಯವಾದ ನೀರಾಗಿದೆ.

    ಸರಿಯಾದ ನಿರ್ವಹಣೆಯಾಗ್ತಿಲ್ಲ:
    ಬಿಬಿಎಂಪಿ ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಕೇವಲ 500 ರೂ. ನಲ್ಲಿ ಟಿಡಿಎಸ್ ಪ್ರಮಾಣವನ್ನ ಸರಿಯಾಗಿ ಮಾಡುವ ಶುದ್ಧೀಕರಣ ಉಪಕರಣವನ್ನ ಆಳವಡಿಸಬಹುದು. ಆದರೆ ಬಿಬಿಎಂಪಿಯವರು ಆ ಕೆಲಸ ಮಾಡುತ್ತಿಲ್ಲ. ಟಿಡಿಎಸ್ ಪ್ರಮಾಣ 10 ಕ್ಕಿಂತ ಕಡಿಮೆ ಇರೋ ಆರ್‍ಓ ಪ್ಲಾಂಟ್ ಗಳು ತುಂಬಾ ಇದೆ. ತಮ್ಮ ಫೋಟೋ ಹಾಕಿಸಿಕೊಂಡು ಪ್ರಚಾರ ಪಡೆಯೋ ನಾಯಕರು ನೀರಿನ ಗುಣಮಟ್ಟವನ್ನ ಉನ್ನತಿ ಮಾಡೋ ಕೆಲಸ ಮಾಡಬೇಕು. ಕೋಟ್ಯಂತ ರೂ. ವೆಚ್ಚದಲ್ಲಿ ಶುದ್ಧ ನೀರಿನ ಘಟಕಗಳನ್ನ ತೆರೆಯಲಾಗಿದೆ. ಆದರೆ ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂದು ವಾಟರ್ ಎಕ್ಸ್ ಪರ್ಟ್ ಲೋಕೇಶ್ ಹಾಗೂ ಖಾಸಗಿ ವಾಟರ್ ಪ್ಲಾಂಟ್‍ನ ಜಯರಾಜ್ ನಾಯ್ಡು ಹೇಳುತ್ತಾರೆ.

    ಒಟ್ಟಿನಲ್ಲಿ ಇನ್ನು ಮುಂದಾದರೂ ಬಿಬಿಎಂಪಿಯ ನೂತನ ಮೇಯರ್ ಹಾಗೂ ಕಮಿಷನರ್ ಸೂಕ್ತ ಕ್ರಮ ಕೈಗೊಂಡು ಜನರ ಹಿತ ಕಾಪಡುತ್ತಾರಾ ಎಂಬುದನ್ನು ಕಾದು ನೋಡಬೇಕು.

    https://www.youtube.com/watch?v=HGSERFF2lSI

  • ಬಹುಮಹಡಿ ಕಟ್ಟಡ ಕುಸಿತ ಅಸಲಿ ಕಾರಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲು

    ಬಹುಮಹಡಿ ಕಟ್ಟಡ ಕುಸಿತ ಅಸಲಿ ಕಾರಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲು

    ಕೊಪ್ಪಳ: ಎರಡು ದಿನಗಳ ಹಿಂದೆ ಧಾರವಾಡದಲ್ಲಿ ಬಹು ಅಂತಸ್ತಿನ ಕಟ್ಟಡ ಕುಸಿದಿತ್ತು. ಈಗ ಈ ಬಹುಮಹಡಿಯ ಕಟ್ಟಡ ಕುಸಿತದ ಹಿಂದಿನ ಅಸಲಿ ಕಾರಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಗಿದೆ.

    ಕುಸಿದ ಕಟ್ಟಡ ನಿರ್ಮಾಣಕ್ಕೆ ಫಿಲ್ಟರ್ ಮರಳನ್ನು ಬಳಸಲಾಗಿತ್ತು. ಹಾಗಾಗಿ ಕಟ್ಟಡ ಕುಸಿದು ಬಿದ್ದಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದಾಗ ಕೆರೆಯ ಮಣ್ಣನ್ನು ತಂದು ಫಿಲ್ಟರ್ ಮಾಡುವ ದಂಧೆ ಬಯಲಾಗಿದೆ. ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ಎಗ್ಗಿಲ್ಲದೆ ಅಕ್ರಮ ಮರಳು ಫಿಲ್ಟರ್ ದಂಧೆ ಸಾಗುತ್ತಿದೆ.

    ಗಂಗಾವತಿ ತಾಲೂಕಿನ ಚಿಕಬೆಣಕಲ್ ಮತ್ತು ದೇವಗಾಟ ಸೇರಿದಂತೆ 10ಕ್ಕೂ ಹೆಚ್ಚು ಕಡೆ ಮರಳು ಫಿಲ್ಟರ್ ಗಳು ನಡೆಯುತ್ತಿರುವುದು ತಿಳಿದು ಬಂದಿದೆ. ಮಣ್ಣನ್ನು ಫಿಲ್ಟರ್ ಮಾಡಿ ದೂರದ ಪ್ರದೇಶಗಳಿಗೆ ಮಾರಾಟ ಮಾಡುವ ಜಾಲ ಪತ್ತೆಯಾಗಿದ್ದು, ರಾತ್ರೋರಾತ್ರಿ ಟ್ರ್ಯಾಕ್ಟರ್, ಟಿಪ್ಪರ್ ಮೂಲಕ ಅಕ್ರಮ ಫಿಲ್ಟರ್ ಮರಳು ಮಾರಾಟ ಮಾಡಲಾಗುತ್ತಿದೆ.

    ಗಂಗಾವತಿಯ ಫಿಲ್ಟರ್ ಮರಳು ಗದಗ, ಹುಬ್ಬಳ್ಳಿ, ಧಾರವಾಡಕ್ಕೂ ಸರಬರಾಜು ಆಗುತ್ತೆ. ಫಿಲ್ಟರ್ ಮರಳು ಬಹುಮಹಡಿ ಕಟ್ಟಡಕ್ಕೆ ಹಾನಿಕಾರಕವಾಗಿದ್ದು, ಬಹುತೇಕ ರಾಜ್ಯಾದ್ಯಂತ ಫಿಲ್ಟರ್ ಮರಳು ಉಪಯೋಗಿಸಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶನವಾಗುತ್ತಿದೆ.

    ಫಿಲ್ಟರ್ ಮರಳು ಉಪಯೋಗಿಸಿ ಕೋಟ್ಯಂತರ ರೂ. ಖರ್ಚು ಮಾಡಿ ಕಟ್ಟಡ ಕಟ್ಟಿದರೂ ವ್ಯರ್ಥ. ಏಕೆಂದರೆ ಫಿಲ್ಟರ್ ಮರಳು ಉಪಯೋಗಿಸಿದರೆ ಯಾವಾಗ ಬೇಕಾದರೂ ಕಟ್ಟಡ ಕುಸಿಯಬಹುದು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಮರಳು ಫಿಲ್ಟರ್ ದಂಧೆಗೆ ಬ್ರೇಕ್ ಹಾಕಬೇಕಿದೆ. ಫಿಲ್ಟರ್ ದಂಧೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪ್ರಭಾವಿ ವ್ಯಕ್ತಿಗಳು ಶಾಮೀಲು ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

  • ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಇಂದಿರಾ ಕ್ಯಾಂಟೀನ್ ನ ಮತ್ತೊಂದು ಕರ್ಮಕಾಂಡ ಬಯಲು

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಇಂದಿರಾ ಕ್ಯಾಂಟೀನ್ ನ ಮತ್ತೊಂದು ಕರ್ಮಕಾಂಡ ಬಯಲು

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ನ ಮತ್ತೊಂದು ಮಹಾ ಕರ್ಮಕಾಂಡ ಬಟಾ ಬಯಲಾಗಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಿಬಿಎಂಪಿ ಬಂಡವಾಳ ಬಯಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗರರಿಗೆ ಕೆಲಸ ಕೊಡದೇ ಹೊರರಾಜ್ಯದವರಿಗೆ ಸರ್ಕಾರ ಮಣೆ ಹಾಕಿದೆ.

    ಆಂಧ್ರ ಹಾಗೂ ದೆಹಲಿ ಮೂಲದ ಕಂಪನಿಗಳಿಗೆ ಅಡುಗೆ ಟೆಂಡರ್ ನೀಡಲಾಗಿದೆ. ಈಗ ಟೆಂಡರ್ ಪಡೆದ ಕಂಪೆನಿಗಳೆಲ್ಲಾ ನೇಮಿಸಿರೋದು ಅನ್ಯಭಾಷಿಕರನ್ನ. ಅಡುಗೆ ಪೂರೈಕೆ ಮಾಡೋರು, ಬಡಿಸೋರೆಲ್ಲಾ ಹೈದ್ರಾಬಾದ್ ಹಾಗೂ ಕೊಲ್ಕತ್ತಾದವರು. ಈ ಎಲ್ಲಾ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಹಿರಂಗವಾಗಿದೆ.

    ಇಂದಿರಾ ಕ್ಯಾಂಟಿನ್ ಗಾಗಿ ಅರಮನೆ ಮೈದಾನದಲ್ಲಿ ಅಡುಗೆ ಮಾಡುತ್ತಿರುವ ವಿಚಾರದ ಬಗ್ಗೆ ಬಿಬಿಎಂಪಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಪಬ್ಲಿಕ್ ಟಿವಿ ಇಂದಿರಾ ಕ್ಯಾಂಟಿನ್ ಅಸಲಿ ಸುದ್ದಿ ಪ್ರಸಾರ ಮಾಡಿದ ಬಳಿಕ ಶುಕ್ರವಾರ ಮಧ್ಯಾಹ್ನ ಬಿಬಿಎಂಪಿ ಮೇಯರ್ ಪದ್ಮಾವತಿ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

    ನಮ್ಮ ಕಡೆಯಿಂದ ತಪ್ಪಾಗಿದೆ. ನಾವು ಮೊದಲೇ ಹೇಳಬೇಕಿತ್ತು. ಆಡುಗೆ ಮನೆಗಳು ಇನ್ನೂ ತಯಾರಾಗಿಲ್ಲ. ಹದಿನೈದು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ನಾವು ಯಶಸ್ಸು ಕಂಡಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕಾದರೆ ಸ್ವಲ್ಪ ಕಾಲಾವಲಾಶ ಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಜನರು ಬರುತ್ತಿದ್ದಾರೆ. ಆದರೆ ನಾವು ಮೊದಲೇ ನಿಗದಿ ಪಡಿಸಿದ ಸಂಖ್ಯೆ ಅನುಗುಣವಾಗಿ ಆಹಾರವನ್ನು ವಿತರಣೆ ಮಾಡುತ್ತೇವೆ ಎಂದು ಮೇಯರ್ ಪದ್ಮಾವತಿ ಹೇಳಿದರು.

    ರಾಜ್ಯ ಸರ್ಕಾರದಿಂದ 200 ಕೋಟಿ ಹಣ ನೀಡಲಾಗಿದೆ. ಟೆಂಡರ್ ನಲ್ಲಿ 7 ಜನ ಭಾಗಿಯಾಗಿದ್ದರು. ಇದರಲ್ಲಿ ಅತ್ಯಂತ ಕಡಿಮೆ ಕೋಟ್ ಮಾಡಿದ್ದವರಿಗೆ ನಾವು ಟೆಂಡರ್ ನೀಡಿದ್ದೇವೆ. ಕೇಟರಿಂಗ್ ಸರ್ವೀಸ್ ಗಳ ಕುರಿತಂತೆ ವೆಬ್‍ಸೈಟ್ ಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.