Tag: Ravi Bilgare

  • ಸಿಸಿಬಿ ಪೊಲೀಸರ ಮೊದಲ ಪ್ರಶ್ನೆ ಕೇಳಿ ಮಧ್ಯರಾತ್ರಿ ಬೆಚ್ಚಿಬಿದ್ದ ರವಿ ಬೆಳಗೆರೆ

    ಸಿಸಿಬಿ ಪೊಲೀಸರ ಮೊದಲ ಪ್ರಶ್ನೆ ಕೇಳಿ ಮಧ್ಯರಾತ್ರಿ ಬೆಚ್ಚಿಬಿದ್ದ ರವಿ ಬೆಳಗೆರೆ

    ಬೆಂಗಳೂರು: ಪತ್ರಕರ್ತ ಸನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರವಿ ಬೆಳಗೆರೆಗೆ ಸಿಸಿಬಿ ಪೊಲೀಸರು ವಿಚಾರಣೆ ವೇಳೆ ಸುಪಾರಿ ಬಗ್ಗೆ ಮೊದಲು ಪ್ರಶ್ನೆ ಕೇಳದೆ ಗೌರಿ ಹತ್ಯೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೆಗ್ಗರವಳ್ಳಿ ಸುಪಾರಿ ಪ್ರಕರಣ ಬಿಟ್ಟು ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಸಿಸಿಬಿ ಪೊಲೀಸರು ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ. ನಿಮಗೂ ಗೌರಿ ಲಂಕೇಶ್‍ಗೂ ಸಂಪರ್ಕ ಇತ್ತೇ? ಅದು ಯಾವ ರೀತಿಯ ಸಂಪರ್ಕ? ನಿಮ್ಮಿಬ್ಬರ ನಡುವೆ ಯಾವುದಾದರೂ ವಿಚಾರದಲ್ಲಿ ವೈಮನಸ್ಸು, ಅಸಮಾಧಾನ ಇತ್ತಾ? ಗೌರಿ ಲಂಕೇಶ್ ಬಳಿ ಯಾವ ವಿಚಾರಕ್ಕಾದ್ರೂ ನೀವು ಜಗಳ ಆಡಿದ್ರಾ? ಎಂದು ಸಿಸಿಬಿ ಪೊಲೀಸರು ಕೇಳಿದ ಸರಣಿ ಪ್ರಶ್ನೆಗಳಿಗೆ ಮಧ್ಯರಾತ್ರಿ ರವಿ ಬೆಳಗೆರೆ ಬೆಚ್ಚಿಬಿದ್ದಿದ್ದಾರೆ.

    ರವಿ ಬೆಳಗೆರೆ ಜೊತೆಗಿನ ಗುದ್ದಾಟದ ಬಳಿಕ ಸುನೀಲ್ ಹೆಗ್ಗರವಳ್ಳಿಗೆ ಗೌರಿ ಲಂಕೇಶ್ ಆಶ್ರಯ ನೀಡಿದ್ದರು. ರವಿ ಎರಡನೇ ಪತ್ನಿ ಯಶೋಮತಿ ಜೊತೆಯೂ ಗೌರಿ ಲಂಕೇಶ್ ನಿಕಟ ಸಂಪರ್ಕ ಹೊಂದಿದ್ದರು. ಈ ವಿಚಾರ ತಿಳಿದು ರವಿ ಬೆಳಗೆರೆ ಗೌರಿ ಬಗ್ಗೆ ಸಿಟ್ಟಾಗಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆ ಬಗ್ಗೆ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಪ್ರಶ್ನಿಸಿದ್ದು, ಹಲವು ದೃಷ್ಟಿಕೋನಗಳಲ್ಲಿ ರವಿ ಬೆಳಗೆರೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    https://www.youtube.com/watch?v=tvAkOpM6ZZo

    https://www.youtube.com/watch?v=86k-IW3-boE

    https://www.youtube.com/watch?v=kJ5uYUEgVeM

    https://www.youtube.com/watch?v=bwXnj2XMWag

  • ಸಿಸಿಬಿ ಕಸ್ಟಡಿಯಲ್ಲಿ ನಿದ್ದೆ ಬಾರದೇ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ಪೇಪರ್ ನಲ್ಲಿ ಏನೇನೋ ಗೀಚಿದ್ರು

    ಸಿಸಿಬಿ ಕಸ್ಟಡಿಯಲ್ಲಿ ನಿದ್ದೆ ಬಾರದೇ ಮೊದಲ ರಾತ್ರಿ ಕಳೆದ ರವಿ ಬೆಳಗೆರೆ- ಪೇಪರ್ ನಲ್ಲಿ ಏನೇನೋ ಗೀಚಿದ್ರು

    ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಶುಕ್ರವಾರದಂದು ಬಂಧಿತರಾದ ಪತ್ರಕರ್ತ ರವಿ ಬೆಳಗೆರೆ ಇಂದು ಬೆಳಗಿನ ಜಾವದವರೆಗೂ ನಿದ್ದೆಯಿಲ್ಲದೆ ರಾತ್ರಿ ಕಳೆದಿದ್ದಾರೆ.

    ಕಾಲು ನೋವಿನಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಕಾಲು ಒತ್ತುವವರಿಲ್ಲದೇ ತಳಮಳ ಅನುಭವಿಸಿದ್ರು. ರಾತ್ರಿ ಮನೆಯಿಂದ ಊಟ, ಔಷಧಿ ಮತ್ತು ನೈಟ್ ಡ್ರೆಸ್ ತರಿಸಿಕೊಂಡಿದ್ದರು. ಮಧ್ಯರಾತ್ರಿ ಸಿಸಿಬಿ ಕಚೇರಿಗೆ ಆಗಮಿಸಿದ ಡಿಸಿಪಿ ಜಿನೇಂದ್ರರಿಂದ ರವಿ ಬೆಳಗೆರೆ ಅವರ ವಿಚಾರಣೆ ನಡೆಯಿತು. ರಾತ್ರಿಯಿಡೀ ರವಿ ಬೆಳಗೆರೆ ಮಕ್ಕಳು ಕಚೇರಿ ಮುಂದೆಯೇ ಠಿಕಾಣಿ ಹೂಡಿದ್ದರು. ವೈದ್ಯರಿಂದ ಪ್ರತಿ ನಾಲ್ಕು ಗಂಟೆಗೆ ಒಮ್ಮೆ ರವಿ ಬೆಳಗೆರೆ ಆರೋಗ್ಯ ಪರಿಶೀಲನೆ ನಡೆಯಿತು.

    ರಾತ್ರಿ 11.00: ಸಿಸಿಬಿ ವಶಕ್ಕೆ ಒಪ್ಪಿಸಿದ ಜಡ್ಜ್.
    ರಾತ್ರಿ 11.20: ಸಿಸಿಬಿ ಕಚೇರಿಗೆ ರವಿ ಬೆಳಗೆರೆ ಆಗಮನ.
    ರಾತ್ರಿ 11.30: ಮಗ ಕರ್ಣ ಜೊತೆ ಮಾತುಕತೆ. ನೈಟ್ ಡ್ರೆಸ್, ಊಟ ತರಲು ಸೂಚನೆ.
    ರಾತ್ರಿ 11.45: ಸಿಸಿಬಿ ಕಚೇರಿಯಲ್ಲಿ ಧಮ್ ಹೊಡೆದ ಬೆಳಗೆರೆ.
    ರಾತ್ರಿ 11.50: ಕಾಲು ನೋವು…ನೋವು ಎಂದ ರವಿ.
    ರಾತ್ರಿ 12.00: ಕಾಲು ಒತ್ರೋ…ಒತ್ರೋ ಎಂದ ರವಿ
    ರಾತ್ರಿ 12.10: ನನ್ನ ಮಕ್ಕಳನಾದ್ರೂ ಕರೀರಿ ಅಂತ ಕೇಳಿದ ರವಿ
    ರಾತ್ರಿ 12.15: ಮತ್ತೆ ಮತ್ತೆ ಸಿಗರೇಟು ಸೇದಿದ ಬೆಳಗೆರೆ
    ರಾತ್ರಿ 12.20: ನಾನು ತಪ್ಪೇ ಮಾಡಿಲ್ಲ ಅಂತ ಪೊಲೀಸರಿಗೆ ಸಮಜಾಯಿಷಿ
    ರಾತ್ರಿ 12.30: ಪೊಲೀಸರಿಂದ ಪೇಪರ್ ಪಡೆದು ಏನೇನೋ ಬರೆದ್ರು
    ರಾತ್ರಿ 1.00: ಡಿಸಿಪಿ ಜಿನೇಂದ್ರ ಸಿಸಿಬಿ ಕಚೇರಿಗೆ ಆಗಮನ
    ರಾತ್ರಿ 1.45: 45 ನಿಮಿಷಗಳ ಮೊದಲ ವಿಚಾರಣೆ
    ಮಧ್ಯರಾತ್ರಿ 2.00: ನಿದ್ರೆಗೆ ಜಾರಿದ ರವಿ ಬೆಳಗೆರೆ. ಮಧ್ಯೆ ಮಧ್ಯೆ ಎದ್ದು ಸಿಗರೇಟು ಸೇವನೆ
    ಬೆಳಗಿನ ಜಾವ 4.00 ಗಂಟೆ: ನಿದ್ರೆಯಿಂದ ಎದ್ದ ರವಿ ಬೆಳಗೆರೆ
    ಬೆಳಗಿನ ಜಾವ 4.30 ಗಂಟೆ: ಏನೇನೋ ಕನವರಿಸಿದ ರವಿ ಬೆಳಗೆರೆ